ಕ್ರೈಸ್ತ ಶಿಕ್ಷಣ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ಫಾ|ಸ್ಟ್ಯಾನಿ ತಾವ್ರೊರವರ ಅಮ್ರತ ಮಹೋತ್ಸವ ಆಚರಣೆ


ಕುಂದಾಪುರ, ಆ.20: ಕುಂದಾಪುರ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊರವರ ಜನ್ಮ ದಿನವಾದ ಆಗೋಸ್ತ್ 20 ರಂದು ಭಾನುವಾರ ಎರಡನೇ ಬಲಿದಾನದ ಬಳಿಕ ಕ್ರೈಸ್ತ ಶಿಕ್ಷಣ ಶಿಕ್ಷಕರು ಮತ್ತು ವಿದ್ಯಾರ್ಥಿಗಳು 75 ನೇ ಜನ್ಮದಿನವನ್ನು ಪ್ರೀತಿ ಆಧಾರದಿಂದ ಆಚರಿಸಲಾಯಿತು.
ಕ್ರೈಸ್ತ ಶಿಕ್ಷಣ ಶಿಕ್ಷಕರ ಪರವಾಗಿ ವೀಣಾ ಡಿಸೋಜಾ, ಧರ್ಮಭಗಿನಿಯವರ ಪರವಾಗಿ ಭಗಿನಿ ತೆರೆಜಾ ಶಾಂತಿ, ವಿದ್ಯಾರ್ಥಿಗಳ ಪರವಾಗಿ ವಿಯೋಲಾ ಬರೆಟ್ಟು ಹೂ ಗುಚ್ಚ ನೀಡಿ ಶುಭಕೋರಿದರು. ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ, ಸಂತ ಜೋಸೆಫ್ ಕಾನ್ವೆಂಟಿನ ಧರ್ಮಭಗಿನಿಯರು, ಕ್ರೈಸ್ತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಹೆತ್ತವರು ಹಾಜರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕಿ ಪ್ರೀತಿ ಕ್ರಾಸ್ತಾ ನೆಡೆಸಿಕೊಟ್ಟರು.