ಶಿರೂರು ಟೋಲ್ ಗೇಟ್ ನಲ್ಲಿ ಅಂಬ್ಯುಲೆನ್ಸ್ ಅಪಘಾತ ಪ್ರಕರಣ: ರೋಗಿ ಸೇರಿದಂತೆ ನಾಲ್ವರು ದಾರುಣ ಸಾವು

ಬೈಂದೂರು ತಾಲೂಕಿನ ಶಿರೂರು ಟೋಲ್ ಗೇಟ್ ದ್ವಾರದಲ್ಲಿ ವೇಗದಿಂದ ಬರುತಿದ್ದಾಗ ಟೋಲ್ ಗೇಟ್ ಸಿಬಂದಿಯನ್ನು, ಚಾಲಕ ಉಳಿಸು ಪ್ರಯತ್ನದಿಂದ ಅಂಬುಲೆನ್ಸ್ ಟೋಲ್ ಕಂಬಕ್ಕೆ ಢಿಕ್ಕಿ ಹೊಡೆದು ನುಗ್ಗಿ ಅಪ್ಪಳಿಸಿದ ಪ್ರಕರಣದಲ್ಲಿ ಗಾಯಗೊಂಡಿದ್ದ ನಾಲ್ವರು ಸಾವನ್ನಪ್ಪಿದ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಮೃತಪಟ್ಟವರಲ್ಲಿ ಒಬ್ಬರು ಮಹಿಳೆ, ಮೂವರು ಪುರುಷರು ಸೇರಿದ್ದು, ಮೃತರನ್ನು ಗಜಾನನ, ಗೀತಾ, ಲೋಕೇಶ್ ಹಾಗೂ ಮಂಜುನಾಥ ಎಂದು ಗುರುತಿಸಲಾಗಿದೆ.

ಅಂಬುಲೆನ್ಸ್ ನಲ್ಲಿ ಒಟ್ಟು ಏಳು ಜನರು ಪ್ರಯಾಣಿಸುತ್ತಿದ್ದು, ರೋಗಿ, ರೋಗಿಯ ಪತ್ನಿ ಹಾಗೂ ಅಂಬುಲೆನ್ಸ್‌ನಲ್ಲಿದ್ದ ರೋಗಿಯ ಸಂಬಂಧಿಗಳಿಬ್ಬರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಟೋಲ್ ಸಿಬ್ಬಂದಿ ಸೇರಿದಂತೆ ಮೂವರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

,