ಪಾತಪಲ್ಲಿ ಗ್ರಾಮ, ಲಕ್ಷ್ಮೀಸಾಗರ ಕ್ರಾಸ್ ಬಳಿ ಬಿಜೆಪಿ ಪಕ್ಷದ ವತಿಯಿಂದ ಬರ ಅಧ್ಯಯನ ತಂಡದ ನೇತೃತ್ವದೊಂದಿಗೆ ವೀಕ್ಷಣೆ

ಶ್ರೀನಿವಾಸಪುರ 2 : ಭಾನುವಾರ ತಾಲೂಕಿನ ಪಾತಪಲ್ಲಿ ಗ್ರಾಮಕ್ಕೆ ಹಾಗೂ ಲಕ್ಷ್ಮೀಸಾಗರ ಕ್ರಾಸ್ ಬಳಿ ಬಿಜೆಪಿ ಪಕ್ಷದವತಿಯಿಂದ ಬರ ಅಧ್ಯಯನ ತಂಡದ ನೇತೃತ್ವದೊಂದಿಗೆ ವೀಕ್ಷಣೆ ಮಾಡಿ ಮಾತನಾಡಿದರು.
ಮಾಜಿ ಸಚಿವ ಸಿ.ಟಿ ರವಿ ಮಾತನಾಡಿ ಅರಣ್ಯ ರಕ್ಷಾಣಾಧಿಕಾರಿಯನ್ನು ಅತಿ ಶೀಘ್ರವಾಗಿ ವಜಾ ಮಾಡುವಂತೆ ಆಗ್ರಹಿಸಿ, ಮಾನವೀಯತೆ ಇಲ್ಲದೆ, ಮರಗಳನ್ನು ಕಡಿದಿದ್ದು, ಮರಗಳನ್ನು ಕಡಿಯುವ ಅಧಿಕಾರಿ ಯಾರಿಗೂ ಇಲ್ಲ. ಮರಗಳನ್ನು ಕಡಿಯುವ ಅಧಿಕಾರ ಈ ಅರಣ್ಯ ಅಧಿಕಾರಿಗೆ ಯಾರು ಕೊಟ್ಟರು.
ಸರ್ಕಾರವೇ ಸ್ವಾತಂತ್ರ ಪೂರ್ವ, ಸ್ವತಂತ್ರ ನಂತರ ಭೂಮಿಯನ್ನು ಸಾಗವಳಿ ಮಾಡಿರುವುದಕ್ಕಾಗಿ ಕಂದಾಯ ಇಲಾಖೆಯು ದಾಖಲೆಗಳನ್ನು ಕೊಟ್ಟಿದೆ. ಗ್ರಾಂಟ್ ಸಹ ಕೊಟ್ಟಿದೆ. ಗ್ರಾಂಟ್ ಕೊಟ್ಟ ಮೇಲೆ ನನ್ನದು ಎನ್ನುವುದಕ್ಕೆ ಅಧಿಕಾರನೂ ಇಲ್ಲಾ, ಇನ್ನೂ ಮರ ಕಡಿಯುವ ಅಧಿಕಾರ ಇಲ್ಲವೇ ಇಲ್ಲಾ.
ರೈತರು ದಾಖಲೆಗಳನ್ನು ನನಗೆ ತೋರಿಸಿದ್ದಾರೆ. ಕಾನೂನು ರೀತ್ಯ ಬೇಕಾಗಿರುವ ಹೋರಾಟ ಮಾಡುತ್ತೇವೆ. ಪೊಲೀಸ್ ಇಲಾಖೆನೂ ತಪ್ಪು ಮಾಡಿದ್ದಾರೆ. ಯಾರೇ ದೂರುಕೊಟ್ಟರು ಕೇಸು ತೆಗೆದುಕೊಳ್ಳಬೇಕು. ಅರಣ್ಯ ಇಲಾಖೆಯು ಮರಗಳನ್ನ ಕಡಿದಿದೆ. ಅವರ ಮೇಲೆ ದೂರು ಕೊಟ್ಟರು ಪೊಲೀಸರು ತೆಗೆದುಕೊಳ್ಳಬೇಕು. ಪೊಲೀಸ್ ಇಲಾಖೆ ಕೇಸು ತೆಗೆದುಕೊಳ್ಳದೇ ತಪ್ಪು ಮಾಡಿದೆ ಎಂದರು.
ದಾಖಲೆಗಳನ್ನು ಇಟ್ಟುಕೊಂಡು ಪರಿಶೀಲನೆ ಮಾಡಿ ನಂತರ ಕ್ರಮಕೈಗೊಳ್ಳಬೇಕು. ಕೇಸು ತೆಗೆದುಕೊಳ್ಳದೇ ಪೊಲೀಸ್ ಇಲಾಖೆ ತಪ್ಪು ಮಾಡಿದೆ.
ಇದಕ್ಕೆ ಸಂಬಂದಿಸಿದಂತೆ ರೈತರೊಂದಿಗೆ ನಾವೆಲ್ಲರೂ ಇದ್ದು ಹೋರಾಟವನ್ನು ರೂಪಿಸುತ್ತೇವೆ. ಸರ್ಕಾರವು ಸಹಾನುಭೂತಿಯಿಂದ ರೈತರ ಬಳಿ ಇರುವ ದಾಖಲೆಗಳನ್ನು ಪರಿಶೀಲನೆ ಮಾಡಬೇಕು. ಪರಿಶೀಲನೆ ಮಾಡಿ ರೈತರಿಗೆ ನ್ಯಾಯ ಒದಗಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ ಎಂದು ಒತ್ತಾಯಿಸಿದರು.
ಪಾತಪಲ್ಲಿ ಗ್ರಾಮದ ರೈತರ ಹೊಗಳಿಗೆ ಬೇಟಿ ನೀಡಿ ಹೊಲಗಳಲ್ಲಿನ ರಾಗಿ, ಅವರೆ, ತೊಗರಿ, ಬೆಳೆ ಹಾನಿಯಾಗಿರುವದನ್ನು ವಿಕ್ಷೀಸಿದರು. ಮಳೆ ಇಲ್ಲದೆ ಒಣಗಿ ಹೋಗಿರುವ ಬೆಳೆಯ ವೀಕ್ಷಣೆ ರೈತರೊಂದಿಗೆ ಮಾತುಕತೆ ನಡೆಸಿದರು.
ಸಂಸದ ಎಂ.ಮುನಿಸ್ವಾಮಿ , ಎಂಎಲ್‍ಸಿ ಛಲವಾದಿ ನಾರಾಯಣಸ್ವಾಮಿ, ಬಿಜಿಪಿ ಜಿಲ್ಲಾಧ್ಯಕ್ಷ ಕೆ.ಎನ್.ವೇಣುಗೋಪಾಲ್, ಮುಖಂಡರಾದ ಎಸ್.ಬಿ.ಮುನಿವೆಂಕಟಪ್ಪ, ಸೀಸಂದ್ರ ರಾಮಚಂದ್ರ, ರೋಣೂರು ಚಂದ್ರಶೇಖರ್, ರಾಮಾಂಜಿ ಇದ್ದರು.