ಶ್ರೀನಿವಾಸಪುರ ಬೆಸ್ಕಾಂ ಇಲಾಖೆ ಮುಂಭಾಗದಲ್ಲಿ ವಿದ್ಯುತ್‍ನಲ್ಲಿ ಅಡಚಣೆ ಸರಿಪಡಿಸುವಂತೆ ಕಛೇರಿ ಬಳಿ ಪ್ರತಿಭಟನೆ

ಶ್ರೀನಿವಾಸಪುರ 2 : ಪಟ್ಟಣದ ಬೆಸ್ಕಾಂ ಇಲಾಖೆ ಮುಂಭಾಗ ಬುಧವಾರ ಕರ್ನಾಟಕ ರಾಜ್ಯ ಹಸಿರು ಸೇನೆ ಸಂಘದವತಿಯಿಂದ ವಿದ್ಯುತ್‍ನಲ್ಲಿ ಅಡಚಣೆ ಸರಿಪಡಿಸುವಂತೆ ಕಛೇರಿ ಬಳಿ ಪ್ರತಿಭಟನೆ ನಡೆಸಿ ಎಇಇ ಅಧಿಕಾರಿ ರಾಮತೀರ್ಥರವರಿಗೆ ಮನವಿ ಪತ್ರನೀಡಿದರು.
ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ವೀರಭದ್ರಸ್ವಾಮಿ ಮಾತನಾಡಿ ಸರ್ಕಾರ ರೈತರ ಪಂಪುಸೆಟ್‍ಗಳಿಗೆ ಏಳು ತಾಸು ವಿದ್ಯುತ್ ನೀಡುತ್ತವೆಂದು ಹೇಳಿದ್ದರು ಸಹ ಈಗ ಮೂರು ತಾಸು ಸಹ ವಿದ್ಯುತ್ ನೀಡುತ್ತಿಲ್ಲ ಇದರಿಂದ ತೋಟಗಾರಿಕೆ ಬೆಳೆಗಳಿಗೆ ತೊಂದರೆಯಾಗಿದ್ದು ಬೆಳೆಗಳು ಒಣಗುತ್ತಿವೆ.
ಲೋಡ್ ಶೆಡ್ಡಿಂಗ್ ನೆಪದಲ್ಲಿ ಸಾಯಂಕಾಲ ವಿದ್ಯುತ್‍ನ್ನು ಕಡಿತಗೊಳಿಸಿ ವಿದ್ಯಾರ್ಥಿಗಳಿಗೆ ಓದಿಕೊಳ್ಳಲು ತುಂಬಾ ಅನಾನುಕೂಲವಾಗುತ್ತಿದೆ ಮತ್ತು ವಿದ್ಯುತ್‍ನ್ನು ಸರಿಯಾಗಿ ಸಮರ್ಪಕವಾಗಿ ನೀಡುತ್ತಿಲ್ಲ . ಆದ ಕಾರಣ ಶ್ರೀನಿವಾಸಪುರ ತಾಲೂಕಿನ ರೈತರ ಪಂಪುಸೆಟ್‍ಗಳಿಗೆ ಮತ್ತು ಸಾರ್ವಜನಿಕರಿಗೆ ಸಮರ್ಪಕವಾದ ವಿದ್ಯುತ್ ಸರಬರಾಜು ಮಾಡುತ್ತಿಲ್ಲ.
ಶ್ರೀನಿವಾಸಪುರ ಬೆಸ್ಕಾಂ ಇಲಾಖೆ ಲೋಡ್ ಶೆಡ್ಡಿಂಗ್ ನೆಪದಲ್ಲಿ ರೈತರ ಪಂಪು ಸೆಟ್‍ಗಳಿಗೆ ನೀಡುತ್ತಿರುವ ವಿದ್ಯುತ್ ಮತ್ತು ಸಾರ್ವಜನಿಕರಿಗೆ ನೀಡುತ್ತಿರುವ ವಿದ್ಯುತ್‍ನಲ್ಲಿ ತೊಂದರೆ ನೀಡುತ್ತಿದ್ದು , ಸರ್ಕಾರವು ರೈತರ ಪಂಪುಸೆಟ್‍ಗಳಿಗೆ ಸರ್ಮಪಕವಾಗಿ ವಿದ್ಯುತ್ ಸರಬಾರಜು ಮಾಡಿ ಸರಿಪಡಿಸುವಂತೆ ಒತ್ತಾಯಿಸಿದರು .
ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. ತಾಲೂಕು ಅಧ್ಯಕ್ಷ ಎನ್.ಜಿ.ಶ್ರೀರಾಮಿರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಬೈರೆಡ್ಡಿ, ರೈತಮುಖಂಡರಾದ ರಾಮೇಗೌಡ, ನಾರಾಯಣಸ್ವಾಮಿ, ವೀರಪ್ಪರೆಡ್ಡಿ, ಗಂಗಾಧರ್, ಹೆಬ್ಬಟ್ಟ ರಮೇಶ್, ಶ್ರೀಧರ್, ನಾಗದೇನಹಳ್ಳಿ ಚಂದ್ರಶೇಖರ್, ಅಬ್ಬಣಿ ಶ್ರೀನಿವಾಸ್ ಇದ್ದರು.
30 ಎಸ್‍ವಿಪುರ್ 2 : ಪಟ್ಟಣದ ಬೆಸ್ಕಾಂನ ಎಇಇ ಅಧಿಕಾರಿ ರಾಮತೀರ್ಥರವರಿಗೆ ಕರ್ನಾಟಕ ರಾಜ್ಯ ಹಸಿರು ಸೇನೆ ಸಂಘದವತಿಯಿಂದ ಮನವಿ ಪತ್ರ ನೀಡಲಾಯಿತು.