ಕುಂದಾಪುರ ರೋಜರಿ ಚರ್ಚಿಗೆ ಧರ್ಮಾಧ್ಯಕ್ಷರಾದ ಡಾ|ಜೆರಾಲ್ಡ್ ಲೋಬೊರವರ ಅಧಿಕ್ರತ ಭೇಟಿ – 35 ಯುವಕ ಯುವತಿಯರಿಗೆ ದೃಢೀಕರಣ ಸಂಸ್ಕಾರ

ಕುಂದಾಪುರ, ಜೂ.11: ‘ಹಿತ್ತಲ ಹುಲ್ಲು, ತೋಟದ ಹೂವು, ನೀರಿನ ಗುಳ್ಳೆ ಇವುಗಳಂತೆ ನಾವುಗಳು, ಹಿತ್ತಲ ಹುಲ್ಲು ನೀರಿಲ್ಲದಿದ್ದರೆ ಬಾಡಿ ಹೋಗುತ್ತದೆ, ತೋಟದ ಹೂವು ಬಾಡಿ ಹೋಗುತ್ತದೆ, ನೀರಿನ ಗುಳ್ಳೆ ಕ್ಷಣಿಕವಾಗಿದ್ದು, ಅದು ಒಡೆದು ಹೋಗುತ್ತದೆ. ಈ ಪ್ರಪಂಚದಲ್ಲಿ ಮನುಷ್ಯರು ಕೂಡ ಹಾಗೇ, ಆದರೆ ಯೇಸುವಿನ ದಯೆಯಿಂದ ನಮಗೆ ಪುನರ್ಜೀವಿತ ದೊರಕುತ್ತದೆ, ನಾವು ಇಲ್ಲಿ ಅಳಿದ ಮೇಲೆ ಪರಲೋಕದಲ್ಲಿ ನಮ್ಮ ಇರುವಿಕೆ ಇದೆಯೆಂದು, ಯೇಸು ಅನೇಕ ಭಾರಿ ಹೇಳಿರುವನು, ನನಗೆ ಮರಣದ ಮೇಲೆ ಅಧಿಕಾರ ಇದೆಯೆಂದು ಸತ್ತವರನ್ನು ಜೀವಂತ ಮಾಡಿದ್ದು ನಮಗೆ ತಿಳಿದಿದೆ” ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಸಂದೇಶ ನೀಡಿದರು.

  ಅವರು ಕುಂದಾಪುರದಲ್ಲಿ ರೋಜರಿ ಮಾತಾ ಚರ್ಚಿಗೆ ತಮ್ಮ ಅಧಿಕ್ರತ ಭೇಟಿಯ ಸಂದರ್ಭ ಜೂ. 11 ಭಾನುವಾರದಂದು ದಿವ್ಯ ಬಲಿದಾನವನ್ನು ಅರ್ಪಿಸಿ “ನಮ್ಮ ಮಕ್ಕಳು ಪೋಷಕರನ್ನು ಅನುಸರಿಸುತ್ತಾರೆ ಆದರಿಂದ ನಾವು ಪೋಷಕರು ಮಕ್ಕಳಿಗಾಗಿ ಆದರ್ಶ ಜೀವನವನ್ನು ನಡೆಸಬೇಕು ಯುವ ಯುವತಿಯರು ಸನ್ನಡೆಯಿಂದ ನೆಡೆಯಬೇಕು” ತಿಳಿಸಿದರು ಇದೇ ಸಂದರ್ಭದಲ್ಲಿ 35 ಯುವ – ಯುವತಿಯರಿಗೆ ಅವರು ದೃಢೀಕರಣ ಸಂಸ್ಕಾರ ನೀಡಿದರು

ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ, ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ ಬಸ್ರೂರು ಮೂಲದ ಧರ್ಮಗುರು ವಂ|ಕಿರಣ್ ಕೋತ್ ಬಲಿದಾನದಲ್ಲಿ ಭಾಗವಹಿಸಿದರು.ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಳೆದ ಸಾಲಿನ ಉಪಾಧ್ಯಕ್ಷ ಎಲ್.ಜೆ.ಫೆರ್ನಾಂಡಿಸ್, ಕಾರ್ಯದರ್ಶಿ ಆಶಾ ಕರ್ವಾಲ್ಲೊ, 18 ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ. ಧರ್ಮ ಭಗಿನಿಯರು, ಪಾಲನ ಮಂಡಳಿ ಸದಸ್ಯರು, ಆರ್ಥಿಕ ಮಂಡಳಿ ಸದಸ್ಯರು ಮತ್ತು ಭಕ್ತಾಧಿಗಳು ಭಾಗಿಯಾದರು. ಬಿಶಪರ ಈ ಭೇಟಿ ಮೂರು ದಿನಗಳದಾಗಿದ್ದು, ಶನಿವಾರ ಸಂಜೆ ಆಗಮಿಸಿ, ಚರ್ಚಿನ ಪರವಾಗಿ ಗೌರವಪೂರ್ವಕ ಸ್ವಾಗತ,  ವಿವಿಧ ಪ್ರಾರ್ಥನೆಗಳನ್ನು ನಡೆಸಿ ಸಮಾಧಿ ಭೂಮಿಯನ್ನು ಆಶಿರ್ವದಿಸಿದರು ಭಾನುವಾರ ಮತ್ತು ಸೋಮವಾರ ವಿವಿಧ ಸಂಘಟನೆ, ವಿದ್ಯಾಲಯದ ಭೇಟಿ ಮತ್ತು ಸಮಾಲೋಚನ ಸಭೆಯನ್ನು ನಡೆಸುವರು.

ಕುಂದಾಪುರ  ರೋಜರಿ ಚರ್ಚಿಗೆ ಧರ್ಮಾಧ್ಯಕ್ಷ ಡಾ|ಜೆರಾಲ್ಡ್ ಲೋಬೊರವರ ಅಧಿಕ್ರತ ಭೇಟಿ – 35 ಯುವ ಯುವತಿಯರಿಗೆ ಧ್ರಡಿಕರಣ ಸಂಸ್ಕಾರ

ಕುಂದಾಪುರ, ಜೂ.11: ‘ಹಿತ್ತಲ ಹುಲ್ಲು, ತೋಟದ ಹೂವು, ನೀರಿನ ಗುಳ್ಳೆಯಂತೆ ನಾವುಗಳು, ಹಿತ್ತಲ ಹುಲ್ಲು ನೀರಿಲ್ಲದಿದ್ದರೆ ಬಾಡಿ ಹೋಗುತ್ತದೆ, ತೋಟದ ಹೂವು ಬಾಡಿ ಹೋಗುತ್ತದೆ, ನೀರಿನ ಗುಳ್ಳೆ ಕ್ಷಣಿಕವಾಗಿದ್ದು, ಅದು ಒಡೆದು ಹೋಗುತ್ತದೆ. ಈ ಪ್ರಪಂಚದಲ್ಲಿ ಮನುಷ್ಯರು ಕೂಡ ಹಾಗೇ, ಆದರೆ ಯೇಸುವಿನ ದಯೆಯಿಂದ ನಮಗೆ ಪುನರ್ಜೀವಿತ ದೊರಕುತ್ತದೆ, ನಾವು ಇಲ್ಲಿ ಅಳಿದ ಮೇಲೆ ಪರಲೋಕದಲ್ಲಿ ನಮ್ಮ ಇರುವಿಕೆ ಇದೆಯೆಂದು, ಯೇಸು ಅನೇಕ ಭಾರಿ ಹೇಳಿರುವನು, ನನಗೆ ಮರಣದ ಮೇಲೆ ಅಧಿಕಾರ ಇದೆಯೆಂದು ಸತ್ತವರನ್ನು ಜೀವಂತ ಮಾಡಿದ್ದು ನಮಗೆ ತಿಳಿದಿದೆ” |ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಸಂದೇಶ ನೀಡಿದರು.

  ಅವರು ಕುಂದಾಪುರದಲ್ಲಿ ರೋಜರಿ ಮಾತಾ ಚರ್ಚಿಗೆ ತಮ್ಮ ಅಧಿಕ್ರತ ಭೇಟಿಯ ಸಂದರ್ಭ ಜೂ. 11 ಭಾನುವಾರದಂದು ದಿವ್ಯ ಬಲಿದಾನವನ್ನು ಅರ್ಪಿಸಿ “ನಮ್ಮ ಮಕ್ಕಳು ಪೋಷಕರನ್ನು ಅನುಸರಿಸುತ್ತಾರೆ ಆದರಿಂದ ನಾವು ಪೋಷಕರು ಮಕ್ಕಳಿಗಾಗಿ ಆದರ್ಶ ಜೀವನವನ್ನು ನಡೆಸಬೇಕು ಯುವ ಯುವತಿಯರು ಸನ್ನಡೆಯಿಂದ ನೆಡೆಯಬೇಕು” ತಿಳಿಸಿದರು ಇದೇ ಸಂದರ್ಭದಲ್ಲಿ 35 ಯುವ – ಯುವತಿಯರಿಗೆ ಅವರು ಧ್ರಡಿಕರಣ ಸಂಸ್ಕಾರ ನೀಡಿದರು

ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ, ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ ಬಸ್ರೂರು ಮೂಲದ ಧರ್ಮಗುರು ವಂ|ಕಿರಣ್ ಕೋತ್ ಬಲಿದಾನದಲ್ಲಿ ಭಾಗವಹಿಸಿದರು.ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಳೆದ ಸಾಲಿನ ಉಪಾಧ್ಯಕ್ಷ ಎಲ್.ಜೆ.ಫೆರ್ನಾಂಡಿಸ್, ಕಾರ್ಯದರ್ಶಿ ಆಶಾ ಕರ್ವಾಲ್ಲೊ, 18 ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ. ಧರ್ಮ ಭಗಿನಿಯರು, ಪಾಲನ ಮಂಡಳಿ ಸದಸ್ಯರು, ಆರ್ಥಿಕ ಮಂಡಳಿ ಸದಸ್ಯರು ಮತ್ತು ಭಕ್ತಾಧಿಗಳು ಭಾಗಿಯಾದರು. ಬಿಶಪರ ಈ ಭೇಟಿ ಮೂರು ದಿನಗಳದಾಗಿದ್ದು, ಶನಿವಾರ ಸಂಜೆ ಆಗಮಿಸಿ, ಚರ್ಚಿನ ಪರವಾಗಿ ಗೌರವಪೂರ್ವಕ ಸ್ವಾಗತ,  ವಿವಿಧ ಪ್ರಾರ್ಥನೆಗಳನ್ನು ನಡೆಸಿ ಸಮಾಧಿ ಭೂಮಿಯನ್ನು ಆಶಿರ್ವದಿಸಿದರು ಭಾನುವಾರ ಮತ್ತು ಸೋಮವಾರ ವಿವಿಧ ಸಂಘಟನೆ, ವಿದ್ಯಾಲಯದ ಭೇಟಿ ಮತ್ತು ಸಮಾಲೋಚನ ಸಭೆಯನ್ನು ನಡೆಸುವರು.