ಮೇ ಎಂಟರಂದು ಜಗತ್ತಿನಾದ್ಯಂತ ರೆಡ್ ಕ್ರಾಸ್ ದಿನಾಚರಣೆ :ಕುಂದಾಪುರ ರೆಡ್ ಕ್ರಾಸ್ ಸಂಸ್ಥೆಯ ಘಟಕದಿಂದ ವಿವಿಧೆಡೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ರೆಡ್ ಕ್ರಾಸ್ ದಿನಾಚರಣೆಯ ಒಂದನೇ ಕಾರ್ಯಕ್ರಮ

ಮೇ ಎಂಟರಂದು ಜಗತ್ತಿನಾದ್ಯಂತ ರೆಡ್ ಕ್ರಾಸ್ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ದಿನ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕ ದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಎದುರು ಆಯೋಜಿಸಲಾಯಿತು. ಸರ್ಜನ್ ಆಸ್ಪತ್ರೆಯ MD ಡಾ. ವಿಶ್ವೇಶ್ವರಯ್ಯ ಇದನ್ನು ಉದ್ಗಾಟಿಸಿ ಶುಭ ಹಾರಿಸಿದರು. ಸಭಾಪತಿ ಎಸ್. ಜಯಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ ವಂದಿಸಿದರು. 104 ಮಂದಿ ಶಿಬಿರಾರ್ಥಿಗಳು ಇದರ ಪ್ರಯೋಜನ ಪಡೆದರು. ಕಾರ್ಯಕ್ರಮ ದಲ್ಲಿ ಉಪ ಸಭಾಪತಿ ಡಾ. ಉಮೇಶ್ ಪುತ್ರನ್, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಗಣೇಶ್ ಆಚಾರ್ಯ, ಡಾ. ಸೋನಿ, ಎ. ಮುತ್ತಯ್ಯ ಶೆಟ್ಟಿ, ಸತ್ಯನಾರಾಯಣ ಪುರಾಣಿಕ, ಎನ್ ಸದಾನಂದ ಶೆಟ್ಟಿ ಉಪಸ್ಥಿತರಿದ್ದರು.

ವಿಶ್ವ ರೆಡ್ ಕ್ರಾಸ್ ದಿನಾಚರಣೆಯ ಎರಡನೇ ಕಾರ್ಯಕ್ರಮ

ಹಟ್ಟಿಯಂಗಡಿಯ ನಮ್ಮ ಭೂಮಿಗೆ ಉಚಿತ ಸೆನಿಟರಿ ಪೇಡ್, ನೋವಿನ ಸ್ಪ್ರೆ ಮತ್ತು ಕ್ರೀಮ್, ಬೇಂಡೇಜ್, ಓಕ್ಸಿ ಮೀಟರ್ ಇತ್ಯಾದಿ ಸುಮಾರು ಹದಿನೈದು ಸಾವಿರ ರೂಪಾಯಿ ಬೆಲೆಯ ವಸ್ತುಗಳ ಸರಬರಾಜು ಮಾಡಲಾಯಿತು. ರೆಡ್ ಕ್ರಾಸ್ ದಿನಾಚರಣೆಯ ಮೂರನೇ ಕಾರ್ಯಕ್ರಮ:- ರಕ್ತ ನಿಧಿ ಕೇಂದ್ರದಲ್ಲಿ ರಕ್ತ ದಾನ ಶಿಭಿರ ಆಯೋಜಿಸಲಾಯಿತು ಹಾಗೂ ದಾನಿಗಳನ್ನು ಗೌರವಿಸಲಾಯಿತು.

ರೆಡ್ ಕ್ರಾಸ್ ದಿನಾಚರಣೆಯ ಮೂರನೇ ಕಾರ್ಯಕ್ರಮ

ರಕ್ತ ನಿಧಿ ಕೇಂದ್ರದಲ್ಲಿ ರಕ್ತ ದಾನ ಶಿಭಿರ ಆಯೋಜಿಸಲಾಯಿತು ಹಾಗೂ ದಾನಿಗಳನ್ನು ಗೌರವಿಸಲಾಯಿತು.