2023 ರ ರಾಜ್ಯ ಮಟ್ಟದ ‘ಸಂದೇಶ ಪ್ರಶಸ್ತಿ’ಯನ್ನು ಪ್ರದಾನ

ವರದಿ: ಫಾದರ್ ಅನಿಲ್ ಫೆರ್ನಾಂಡಿಸ್, ಚಿತ್ರಗಳು: ಸ್ಟ್ಯಾನ್ಲಿ ಬಂಟ್ವಾಳ್

2023: ಪ್ರಶಸ್ತಿ ಪುರಸ್ಕøತರಲ್ಲಿಆಂಡ್ರ್ಯೂಎಲ್‍ಡಿ’ಕುನ್ಹಾ, ಜಾಯ್ಸ್‍ಒಜಾರಿಯೊ, ಚಿನ್ನಪ್ಪಗೌಡ ಮತ್ತು ಹಲವಾರು; ಪ್ರೇರಣಾ ಸಂಪನ್ಮೂಲ ಕೇಂದ್ರಕ್ಕೆ ಸನ್ಮಾನ ಸಾಹಿತ್ಯ, ಪತ್ರಿಕೋದ್ಯಮ, ಕಲೆ, ಶಿಕ್ಷಣ, ಸಂಗೀತ, ಮಾಧ್ಯಮ ಮತ್ತು ಸಮಾಜ ಸೇವೆಯಂತಹ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಯಿತು.

ಮಂಗಳೂರು; ಫೆ.07: ಮಂಗಳೂರಿನ ಬಜ್ಜೋಡಿಯಲ್ಲಿರುವ ಸಂದೇಶ ಫೌಂಡೇಶನ್ ಫಾರ್‍ಕಲ್ಚರ್‍ಅಂಡ್‍ಎಜುಕೇಶನ್‍ಆವರಣದಲ್ಲಿ ನಡೆದಅದ್ಧೂರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 9 ಮಂದಿ ಸಾಧಕರು ಹಾಗೂ ಸಂಸ್ಥೆಗೆ 2023ನೇ ಸಾಲಿನ ಪ್ರತಿಷ್ಠಿತ ರಾಜ್ಯ ಮಟ್ಟದ ‘ಸಂದೇಶ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು. ಮಂಗಳವಾರ, ಫೆಬ್ರವರಿ 07, 2023 ರ ಸಂಜೆ.

ಈ ಪ್ರಶಸ್ತಿ ಪ್ರದಾನ ಸಮಾರಂಭದಅಧ್ಯಕ್ಷತೆಯನ್ನು ಸಂದೇಶ ಪ್ರತಿಷ್ಠಾನದಅಧ್ಯಕ್ಷರು ಹಾಗೂ ಬಳ್ಳಾರಿ ಧರ್ಮಪ್ರಾಂತ್ಯದಧರ್ಮಾಧ್ಯಕ್ಷರಾದ ಅ| ವಂ| ಹೆನ್ರಿ ಡಿ’ಸೋಜಇವರುಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದರು. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷಡಾ ಎಂ ಮೋಹನ್ ಆಳ್ವ ಮುಖ್ಯಅತಿಥಿಯಾಗಿದ್ದರು. ಪ್ರಶಸ್ತಿ ಪ್ರಧಾನಕಾರ್ಯಕ್ರಮದಲ್ಲಿಇತರ ಅತಿಥಿಗಳಾಗಿ ಮಂಗಳೂರು ಧರ್ಮಪ್ರಾಂತ್ಯದಧರ್ಮಾಧ್ಯಕ್ಷರಾದ ಅ| ವಂ| ಪೀಟರ್ ಪಾವ್ಲ್ ಸಲ್ಡಾನ್ಹ, ಉಡುಪಿ ಧರ್ಮಾಪ್ರಾಂತ್ಯದಧರ್ಮಾಧ್ಯಕ್ಷರಾದ ಅ| ವಂ| ಜೆರಾಲ್ಡ್‍ಐಸಾಕ್ ಲೋಬೊ, ಸಂದೇಶ ಪ್ರತಿಷ್ಠಾನದ ನಿರ್ದೇಶಕರಾದ ವಂ| ಫಾ| ಸುದೀಪ್ ಪೌಲ್, ಸಂದೇಶ ಪ್ರತಿಷ್ಠಾನದ ವಿಶ್ವಸ್ಥರಾದ ಶ್ರೀ ರೊಯ್‍ಕ್ಯಾಸ್ತಲಿನೊ ಹಾಗೂ ವಂ| ಫಾ| ಐವನ್ ಪಿಂಟೊ, ಸಂದೇಶ ಪ್ರಶಸ್ತಿ ಅಯ್ಕೆ ಸಮಿತಿಯಅಧ್ಯಕ್ಷರಾದಡಾ| ವಲೇರಿಯನ್‍ರೋಡ್ರಿಗಸ್‍ರವರು ಉಪಸ್ಥಿತರಿದ್ದರು.

ಸಂದೇಶ ಪ್ರಶಸ್ತಿಗಳು 2023ರ ಪುರಸ್ಕೃತರು

  1. ಸಂದೇಶ ಸಾಹಿತ್ಯ ಪ್ರಶಸ್ತಿ –ಕನ್ನಡ–ರಾಘವೇಂದ್ರ ಪಾಟಿಲ್
  2. ಸಂದೇಶ ಸಾಹಿತ್ಯ ಪ್ರಶಸ್ತಿ –ಕೊಂಕಣಿ–ಆಂಡ್ರ್ಯೂಎಲ್‍ಡಿಕುನ್ಹಾ
  3. ಸಂದೇಶ ಸಾಹಿತ್ಯ ಪ್ರಶಸ್ತಿ – ತುಳು –ಚಿನ್ನಪ್ಪಗೌಡ
  4. ಸಂದೇಶ ಮಾಧ್ಯಮ ಪಶಸ್ತಿ – ಪತ್ರಿಕೋದ್ಯಮ – ಶಿವಾಜಿ ಗಣೇಶನ್
  5. ಸಂದೇಶಕೊಂಕಣಿ ಸಂಗೀತ ಪ್ರಶಸ್ತಿ –ಜೋಯ್ಸ್‍ಒಝಾರಿಯೋ
  6. ಸಂದೇಶ ಕಲಾ ಪ್ರಶಸ್ತಿ –ಡಾ. ಎಮ್‍ಎಸ್ ಮೂರ್ತಿ
  7. ಸಂದೇಶ ಶಿಕ್ಷಣ ಪ್ರಶಸ್ತಿ –ಕೋಟಿ ಗಾನಹಳ್ಳಿ ರಾಮಯ್ಯ
  8. ಸಂದೇಶ ವಿಶೇಷ ಪ್ರಶಸ್ತಿ – ಪ್ರೇರಣಾರಿಸೋರ್ಸ್ ಸೆಂಟರ್
  9. ಸಂದೇಶಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ – ಸಬೀಹಾ ಭೂಮಿಗೌಡ

ಸಂದೇಶ ಶಿಕ್ಷಣ ಪ್ರಶಸ್ತಿ ಪುರಸ್ಕೃತ ಕೋಟಿಗಾನಹಳ್ಳಿ ರಾಮಯ್ಯಅವರು ಕವನ ಪ್ರಸ್ತುತ ಪಡಿಸಿದರು. ಪ್ರಶಸ್ತಿ ಪುರಸ್ಕøತರು, ಸಂದೇಶಕನ್ನಡ ಸಾಹಿತ್ಯ ಪ್ರಶಸ್ತಿ ಪುರಸ್ಕೃತಡಾ.ರಾಘವೇಂದ್ರ ಪಾಟೀಲ ಪ್ರತಿಕ್ರಿಯಿಸಿ, ‘ಸೂಕ್ಷ್ಮ ವಿಕಾಸವಾದಾಗ ಸಮಾಜದಗುಣಮಟ್ಟ ಉತ್ತಮಗೊಳ್ಳುತ್ತದೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಪರಿವರ್ತನೆ, ಬೆಳವಣಿಗೆ ಆದಾಗಸಮಾಜದಲ್ಲಿ ನಾವು ಸಾತ್ವಿಕತೆ ಹೆಚ್ಚುವುದನ್ನುಕಾಣಲು ಸಾಧ್ಯವಾಗುತ್ತದೆ. ಸಂದೇಶ ಸಂಸ್ಥೆಯು ಪ್ರಶಸ್ತಿಗಳ ಪ್ರಧಾನ್ ಮಾಡುವಮೂಲಕ ಸಮಾಜದಲ್ಲಿ ಸಕಾರಾತ್ಮಕತೆ ಮತ್ತು ಒಳಿತನ್ನು ತುಂಬುವಮಹತ್ತರಕಾರ್ಯವನ್ನು ಮಾಡುತ್ತಿದೆ” ಎಂದು ಹೇಳಿದರು.“ಈ ಗೌರವವು ನಾನು ಗುರುತಿಸಲ್ಪಟ್ಟಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡಲುಉತ್ಸಾಹವನ್ನು ಹೆಚ್ಚಿಸಿದೆ” ಎಂದುಅವರು ಹೇಳಿದರು.

ಮಂಗಳೂರಿನ ಬಿಷಪ್‍ಅತೀ ವಂದನೀಯಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಮಾತನಾಡಿ, ”ಮಾನವನುಸಮಾಜದ ಒಳಿತಿಗಾಗಿ ತನ್ನಆಂತರಿಕಮತ್ತುಆಧ್ಯಾತ್ಮಿಕ ಶಕ್ತಿಯನ್ನು ಅನ್ವೇಷಿಸಿನಿರಂತರವಾಗಿ ಶ್ರಮಿಸುತ್ತಾನೆ. ಸಂದೇಶಪ್ರತಿಷ್ಠಾನ, ಸಮಾಜದಲ್ಲಿ ನಿಸ್ವಾರ್ಥವಾಗಿತಮ್ಮ ಸಂಪನ್ಮೂಲಗಳನ್ನು ಮತ್ತುಆಂತರಿಕ ಶಕ್ತಿಯನ್ನುಕೊಡುಗೆಯಾಗಿ ನೀಡಿದವರನ್ನುಗುರುತಿಸಿ ಗೌರವಿಸಿವೆ” ಎಂದು ಹೇಳಿದರು.

ಮುಖ್ಯಅತಿಥಿ ಡಾ.ಎಂ.ಮೋಹನ್ ಆಳ್ವ ಮಾತನಾಡಿ, “ದೇವರು ನೀಡಿದಕೊಡುಗೆ ಮತ್ತು ಪ್ರತಿಭೆಯನ್ನು ಧಾರಾಳವಾಗಿ ಬಳಸಿಕೊಂಡ ಈ ಮಹಾಪುರುಷರನ್ನು ಮತ್ತು ಮಹಿಳೆಯರನ್ನು ಸನ್ಮಾನಿಸಲು ನಾನು ಮುಖ್ಯಅತಿಥಿಯಾಗಿ ಹರ್ಷಿಸುತ್ತೇನೆ. ಬೆಳೆಯುತ್ತಿರುವ ಲೌಕಿಕ ಜೀವನ ಮತ್ತುತಾಂತ್ರಿಕ ಪ್ರಗತಿಯ ನಡುವೆ ನಮ್ಮ ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಾಮಾಜಿಕಜೀವನ ಮತ್ತು ಮೌಲ್ಯಗಳು ರಾಜಿಯಾಗುತ್ತಿವೆ. ತಮ್ಮ ಕೊಡುಗೆಗಳ ಮೂಲಕ ಸಾಮಾಜಿಕ-ಸಾಂಸ್ಕೃತಿಕ ಮೌಲ್ಯಗಳನ್ನು ಪೆÇೀಷಿಸುವ ಅನೇಕ ವ್ಯಕ್ತಿಗಳನ್ನು ನಾವು ಕಳೆದುಕೊಳ್ಳುವುದು ದುರದೃಷ್ಟಕರ. ಸಮಾಜಕ್ಕಾಗಿ ಅವಿಶ್ರಾಂತವಾಗಿ ಮತ್ತು ನಿಸ್ವಾರ್ಥವಾಗಿದುಡಿದಾಗಲೇ ಸದ್ಗುಣದಜೀವನ ನಡೆಸುವಲ್ಲಿ ನಿಜವಾದಆನಂದ ಹುದುಗಿದೆ” ಎಂದು ಹೇಳಿದರು.

ಸಂದೇಶ ಪ್ರತಿμÁ್ಠನದಅಧ್ಯಕ್ಷರಾದ ಬಳ್ಳಾರಿ ಧರ್ಮಪ್ರಾಂತ್ಯದಧರ್ಮಾಧ್ಯಕ್ಷರಾದಅತಿ ವಂ. ಡಾ.ಹೆನ್ರಿಡಿಸೋಜಅವರುತಮ್ಮಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿ, “ಪರಿಸರ, ಸೌಹಾರ್ದತೆ, ಆರೋಗ್ಯ, ಏಕತೆ, ಸೂಕ್ಷ್ಮತೆ, ಬಾಂಧವ್ಯ ಮತ್ತು ಸಹಕಾರವುಅತ್ಯಂತ ಕಾಳಜಿಯ ವಿಷಯಗಳಾಗಿರುವ ಜಗತ್ತಿನಲ್ಲಿಇಂದು ನಾವು ಬದುಕುತ್ತಿದ್ದೇವೆ.ದ್ವೇಷ, ಒಡಕು, ಹಿಂಸಾಚಾರಇಲ್ಲದ ಸಮಾಜಕಟ್ಟಲು ಹಾತೊರೆಯೋಣ.”ಅವರು ವಿವಿಧ ಕ್ಷೇತ್ರಗಳಲ್ಲಿ ಪ್ರೀತಿಯಿಂದ ಕೆಲಸ ಮಾಡಿದಎಲ್ಲಾಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು.

ಸಂದೇಶ ಸಂಸ್ಥೆಯಲ್ಲಿ 15 ವರ್ಷಗಳ ಸುದೀರ್ಘ ಸೇವೆಗೈದಡೈಮಂಡ್‍ಜುಬಿಲೇರಿಯನ್‍ಶ್ರೀ ಸೈಮನ್ ಪೀಟರ್‍ಕುವೆಲ್ಲೊಅವರನ್ನುಅಧ್ಯಕ್ಷ ಬಿಷಪ್ ಹೆನ್ರಿಡಿಸೋಜಾಅವರು ಗೌರವಿಸಿದರು.

ಈ ಸಂದರ್ಭದಲ್ಲಿ ಪ್ರಶಸ್ತಿ ಆಯ್ಕೆ ಸಮಿತಿಸದಸ್ಯರಾದಡಾ.ವಲೇರಿಯನ್‍ರೋಡ್ರಿಗಸ್, ಡಾ.ನಾ.ಡಾ.ಶೆಟ್ಟಿ, ಕಾನ್ಸೆಪ್ಟಾ ಆಳ್ವ, ಚಂದ್ರಕಲಾ ನಂದಾವರ ಮತ್ತುರಫೀಕ್ ಮಾಸ್ಟರ್‍ಅವರನ್ನು ಸನ್ಮಾನಿಸಲಾಯಿತು. ಸಂದೇಶ ಸಂಸ್ಥೆಯ ಪೆÇೀಷಕರು, ಪ್ರಾಯೋಜಕರು ಹಾಗೂ ಹಿತೈಷಿಗಳನ್ನುಕೂಡ ಸನ್ಮಾನಿಸಲಾಯಿತು.

ಸಂದೇಶ ಸಂಸ್ಥೆಯ ಸಂಚಾಲಕ ರೆ.ಫಾ.ಸುದೀಪ್ ಪಾವ್ಲ್‍ಗಣ್ಯರನ್ನು ಸ್ವಾಗತಿಸಿದರು. ಸಂದೇಶ ಪ್ರಶಸ್ತಿಗಳ ವಿಸ್ವಾಸ್ಥರಾದ ಮತ್ತುಕಾರ್ಯಕ್ರಮದಸಂಚಾಲಕರಾದ ಶ್ರೀ ರಾಯ್‍ಕ್ಯಾಸ್ಟೆಲಿನೊ ನೆರೆದಿದ್ದಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ಶ್ರೀಮತಿ ಐರಿನ್‍ರೆಬೆಲ್ಲೊ, ಕುಲಶೇಕರ್‍ಕಾರ್ಯಕ್ರಮ ನಿರೂಪಿಸಿದರು.
ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಎಲಾರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.