ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ಘಟಕದಿಂದ, ಕುಂದಾಪುರ ಸರಕಾರಿ ಆಸ್ಪತ್ರೆಯ ಮಾತು/ಶ್ರವಣ ವಿಭಾಗಕ್ಕೆ ರೂ. 87,000/- ಬೆಲೆಯ ಪೀಠೋಪಕರಣ ಕೊಡುಗೆ

ಕುಂದಾಪುರ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ಘಟಕ, ಸರಕಾರಿ ಆಸ್ಪತ್ರೆ ಕುಂದಾಪುರ ಇದರ ವಾಕ್ (ಮಾತು) ಮತ್ತು ಶ್ರವಣ ವಿಭಾಗಕ್ಕೆ ಜನವರಿ 19 ರಂದು ರೂ. 87,000/- ಬೆಲೆಯ ಪೀಠೋಪಕರಣ ಗಳನ್ನು ನೀಡಿದರು. ಈ ದೇಣಿಗೆಯನ್ನು ರೆಡ್ ಕ್ರಾಸ್ ಸಭಾಪತಿ ಎಸ್ ಜಯಕರ ಶೆಟ್ಟಿ ಇವರು ಆಡಳಿತ ಶಸ್ತ್ರ ಚಿಕಿತ್ಸಕರಾದ ಡಾ. ರಾಬರ್ಟ್ ರೆಬೆಲ್ಲೊ ಇವರಿಗೆ ಹಸ್ತಾಂತರಿಸಿದರು. ಈ ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಉಪ ಸಭಾಪತಿ ಡಾ. ಉಮೇಶ್ ಪುತ್ರನ್, ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಗಣೇಶ್ ಆಚಾರ್ಯ, ಎ. ಮುತ್ತಯ್ಯ ಶೆಟ್ಟಿ, ಡಾ. ಸೋನಿ, ಶಾಂತಾರಾಂ ಪ್ರಭು, ಸೀತಾರಾಮ ನಕ್ಕತ್ತಾಯ, ಸತ್ಯನಾರಾಯಣ ಪುರಾಣಿಕ, ನಾರಾಯಣ ದೇವಾಡಿಗ, ಜಿ. ಸಂತೋಷ ಕುಮಾರ್ ಶೆಟ್ಟಿ ಮತ್ತು ಅಬ್ದುಲ್ ಬಶೀರ್ ಹಾಗೂ ಆಸ್ಪತ್ರೆಯ ವಾಕ್ ಮತ್ತು ಶ್ರವಣ ವಿಭಾಗದ ಸಿಭಂದಿಗಳು ಉಪಸ್ಥಿತರಿದ್ದರು.