ನಕಲಿ ರಸಗೊಬ್ಬರ ಬಿತ್ತನೆ ಬೀಜ ಕೀಟನಾಶಕ ದಂದೆಕೋರರ ವಿರುದ್ದ ಗೂಂಡಾ ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಿ- ರೈತ ಸಂಘ

ಬಂಗಾರಪೇಟೆ-ನ-17, ನಕಲಿ ರಸಗೊಬ್ಬರ ಬಿತ್ತನೆ ಬೀಜ ಕೀಟನಾಶಕ ನಿಯಂತ್ರಣಕ್ಕೆ ವಿಶೇಷ ತಂಡ ರಚನೆ ಮಾಡಿ ದಂದೆಕೋರರ ವಿರುದ್ದ ಗೂಂಡಾ ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಿ ರೋಗ ನಿಯಂತ್ರಣಕ್ಕೆ ಗುಣಮಟ್ಟದ ಔಷಧಿ ನೀಡುವಂತೆ ನ-25 ರಂದು ನಕಲಿ ಔಷಧಿ ಬೆಳೆ ಸಮೇತ ರಾಜ್ಯ ಹೆದ್ದಾರಿ ಹಂಚಾಳ ಗೇಟ್ ಬಂದ್‍ಮಾಡಲು ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದ ರೈಲ್ವೆ ನಿಲ್ದಾಣ ಆವರಣದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ ಭೂಮಿ ತಾಯಿಯ ಮಡಲಿಗೆ ಒಂದು ಬೀಜ ಹಾಕಿದರೆ ಲಕ್ಷಾಂತರ ಬೀಜ ಉತ್ಪಾದನೆ ಮಾಡುವ ಕೃಷಿ ಕ್ಷೇತ್ರವನ್ನು ನಿರ್ಲಕ್ಷೆ ಮಾಡಿ 100 ಕಚ್ಚಾವಸ್ತುಗಳಿಂದ ಒಂದು ವಸ್ತುವನ್ನು ತಯಾರು ಮಾಡುವ ಕೈಗಾರಿಕೆಗಳಿಗೆ ಆದ್ಯತೆ ನೀಡಿ ದೇಶದಲ್ಲಿ ಆಹಾರ ಅಭದ್ರತೆ ಸರ್ಕಾರಗಳು ಸೃಷ್ಟಿ ಮಾಡುವ ಮುಖಾಂತರ ಹಸಿವೆಂಬ ಮಹಾಮಾರಿಗೆ ಲಕ್ಷಾಂತರ ಜನ ಸಾಮಾನ್ಯರನ್ನು ಬಲಿ ಕೊಡುವ ಸರ್ಕಾರಗಳ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ಸರ್ಕಾರ ನಿಷೇದಿತ ಔಷಧಿಗಳನ್ನು ಇಂದು ರಾಜಾರೋಷವಾಗಿ ಅಮೇಜಾನ್, ಪ್ಲಿಪ್‍ಕಾರ್ಟ್, ಬಜಾಜ್, ಮತ್ತಿತರ ಕಂಪನಿಗಳು ಆನ್‍ಲೈನ್ ಮೂಲಕ ರೈತರಿಗೆ ನೇರವಾಗಿ ಮಾರಾಟ ಮಾಡುವ ಮುಖಾಂತರ ರೈತರ ಆರೋಗ್ಯವನ್ನು ಕಸಿಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ನಾಪತ್ತೆಯಾಗಿರುವುದಕ್ಕೆ ಅಸಮದಾನ ವ್ಯಕ್ತಪಡಿಸಿದರು.
ಜಿಲ್ಲಾದ್ಯಂತ ಗಲ್ಲಿಗೊಂದು ಔಷಧಿ ಮಾರಾಟ ಮಾಡುವ ಮಳಿಗೆಗಳಿದ್ದು, ಆಂದ್ರ ತಮಿಳುನಾಡು, ಮೂಲದ ಕೆಲವು ದಂದೆಕೋರರು ಆನ್‍ಲೈನ್ ಮೂಲಕ ರೈತರಿಗೆ ಭಯೋ ಔಷಧಿಗಳನ್ನು ಮಾರಾಟ ಮಾಡುವ ಜೊತೆಗೆ ಸ್ಥಳೀಯವಾಗಿ ಕೆಲವರು ಬಯೋಕಂಪನಿಗಳ ಮಾಲೀಕರ ಜೊತೆ ಕೈ ಜೋಡಿಸಿ ಉದ್ಯೋಗ ನೆಪದಲ್ಲಿ ನಕಲಿ ಬಯೋ ಔಷಧಿಗಳನ್ನು ಗುಣಮಟ್ಟದ ಔಷಧಿಗಳ ಜೊತೆಯಲ್ಲಿ ಮಾರಾಟ ಮಾಡುವ ದಂದೆ ದಿನೇ ದಿನೇ ಹೆಚ್ಚಾಗುತ್ತಿದ್ದರೂ ನಿಯಂತ್ರಣ ಮಾಡಬೇಕಾದ ಗುಣಮಟ್ಟದ ಪರಿಶೀಲನಾ ಅಧಿಕಾರಿಗಳು ಕಂಪನಿಗಳ ಜೊತೆ ಕೈ ಜೋಡಿಸಿದ್ದಾರೆಂದು ಆರೋಪ ಮಾಡಿದರು.
ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ ವ್ಯವಸಾಯ ಮನೆ ಮಕ್ಕಳೆಲ್ಲ ಉಪವಾಸ ಸಾಯ ಎಂಬ ಗಾದೆಯಂತೆ ಕೃಷಿ ಕ್ಷೇತ್ರ ದಿನೇ ದಿನೇ ಶ್ರೀಮಂತವಾಗುತ್ತಿದೆ. ಬೆಳೆಗಳಿಗೆ ಬಾದಿಸುತ್ತಿರುವ ರೋಗ ನಿಯಂತ್ರಣಕ್ಕೆ ಗುಣಮಟ್ಟದ ಔಷಧಿ ಇಲ್ಲದೆ ರೈತರು ಪರದಾಡುತ್ತಿರುವುದನ್ನು ಬಂಡವಾಳ ವಹಿಸಿಕೊಂಡಿರುವ ಕೆಲವು ಕಂಪನಿಗಳು ಗುಣಮಟ್ಟದ ಬಯೋ ಔಷಧಿ ಹೆಸರಿನಲ್ಲಿ ನಕಲಿ ಔಷಧಿಯನ್ನು ತಯಾರು ಮಾಡುವ ದೊಡ್ಡ ದಂದೆಯೇ ಕೋಲಾರ ಜಿಲ್ಲೆಯಲ್ಲಿದೆ. ದಾಖಲೆ ಸಮೇತ ದೂರು ನೀಡಿದರು ಅಧಿಕಾರಿಗಳು ನೆಪಮಾತ್ರಕ್ಕೆ ದಾಳಿ ಮಾಡಿ ಗುಣಮಟ್ಟ ಪರಿಶೀಲನೆ ಮಾಡಲು ಪ್ರಯೋಗಾಲಾಯಕ್ಕೆ ಕಳುಹಿಸಿದ್ದೇವಂದು ಕೈತೊಳೆದುಕೊಳ್ಳುತ್ತಿದ್ದಾರೆಂದು ಕಿರಿಕಾರಿದರು.
ಹಾಲಿವುಡ್ ಬಾಲಿವುಡ್ ಹೆಸರುಗಳನ್ನು ಮೀರುವ ಬಯೋ ಔಷಧಿಗಳು ಅಮೃತ, ಅಟ್ಯಾಕ್, ಪವರ್, ರೂಟ್‍ಕೇರ್, ಲಜೆಂಡ್, ಲಯನ್, ಬಿಲ್ರ್ಲಾ, ಬ್ಲಾಂಕ್, ಹಿಟ್ಲರ್, ಜಿ-5, ಸ್ನೇಕ್ ಮುಂತಾದ ವಿವಿಧ ಹೆಸರುಗಳಲ್ಲಿ ಔಷಧಿಗಳು ರೈತರಿಗೆ ನೀಡುತ್ತಿದ್ದರೂ ಕನಿಷ್ಠ ಪಕ್ಷ ಗಿಡದ ಮೇಲಿರುವ ಸೊಳ್ಳೆ ಸಹ ಸಾಯುತ್ತಿಲ್ಲ. ಅಷ್ಟರ ಮಟ್ಟಿಗೆ ಔಷಧಿಗಳ ಗುಣಮಟ್ಟ ಹದಗೆಟ್ಟಿದೆ. ರೈತರು ಸಾಲಗಾರರಾಗುತ್ತಿದ್ದರೆ ಕಂಪನಿಗಳು ಅಂಗಡಿ ಮಾಲೀಕರು ಕೋಟ್ಯಾದಿಪತಿಗಳಾಗುತ್ತಿದ್ದಾರೆಂದು ಸಭೆಯಲ್ಲಿ ಕಣ್ಣೀರು ಹಾಕಿದರು.
5 ವರ್ಷಗಳಿಂದ ಜಿಲ್ಲೆಯ ವಾಣಿಜ್ಯ ಬೆಳೆಗಳಾದ ಟೆಮೋಟೋ ಕ್ಯಾಪ್ಸಿಕಂ ಆಲೂಗಡ್ಡೆಗೆ ಬಾದಿಸುತ್ತಿರುವ ಚುಕ್ಕಿ ರೋಗ ಅಂಗಮಾರಿ ರೋಜ್ ನಿಯಂತ್ರಣಕ್ಕೆ ಬಾರದೆ ಗುಣಮಟ್ಟದ ಔಷಧಿ ಇಲ್ಲದೆ ರೈತರು ಕೋಟ್ಯಾಂತರ ರೂಪಾಯಿ ಸಾಲದ ಸುಳಿಗೆ ಸಿಲಿಕಿದ್ದಾರೆ. ಅಧಿಕಾರಿಗಳನ್ನು ಕೇಳಿದರೆ ವಿಜ್ಞಾನಿಗಳನ್ನು ಕರೆಯಿಸಿ ವರದಿ ನೀಡಿ ಕಡೆಯದಾಗಿ ರೈತರದೆ ತಪ್ಪು ಎಂದು ಕಂಪನಿ ಪರ ಸತ್ಯ ಹರಿಚಂದ್ರ ಪ್ರಮಾಣ ಪತ್ರ ನೀಡುತ್ತಾರೆಂದು ಅಸಮದಾನ ವ್ಯಕ್ತಪಡಿಸಿದರು.

ಟೆಮೋಟೋ ಕ್ಯಾಪ್ಸಿಕಂ ಸಮಯದಲ್ಲಿ ಜಿಲ್ಲಾಧ್ಯಂತ 150 ಕೋಟಿ ಔಷಧಿ ವ್ಯವಹಾರ ನಡೆಯುತ್ತಿದೆ. ಆದರೂ ಯವುದೇ ಗುಣಮಟ್ಟವಿಲ್ಲ ಒಟ್ಟಾರೆಯಾಗಿ ರೈತರ ಅಮಾಯಕತನವನ್ನು ಬಂಡವಾಳಗಿಸಿಕೊಂಡು ನಕಲಿ ಬಯೋ ಔಷಧಿಯನ್ನು ಆನ್‍ಲೈನ್ ಮೂಲಕ ರೈತರಿಗೆ ನೇರವಾಗಿ ಮಾರಾಟ ಮಾಡುವ ಜೊತೆಗೆ ಕಂಪನಿಗಳ ಜೊತೆ ಸ್ಥಳೀಯ ಯುವಕರು ಸೇರಿಕೊಂಡು ರೈತರನ್ನು ಯಾಮಾರಿಸುತ್ತಿರುವ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದಮ್ಮೆ ದಾಖಲು ಮಾಡಿ ಗುಣಮಟ್ಟದ ಔಷಧಿ ವಿತರಣೆ ಮಾಡಬೇಕಂದು ಮೇಲ್ಕಂಡ ದಿನಾಂಕದಂದು ಹಂಚಾಳ ಗೇಟ್ ಬಂದ್ ಮಾಡುವ ಮುಖಾಂತರ ನ್ಯಾಯ ಪಡೆದುಕೊಳ್ಳುವ ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾ ಉಪಾಧ್ಯಕ್ಷ ಚಾಂದ್‍ಪಾಷ, ಮಹ್ಮದ್ ಶೋಹೀಬ್ ಬಾಬಾಜಾನ್, ಆರೀಪ್, ಕದರಿನತ್ತ ಅಪ್ಪೋಜಿರಾವ್, ಕಾಮಸಮುದ್ರ ಮುನಿಕೃಷ್ಣ, ಭೀಮಗಾನಹಳ್ಳಿ ಮುನಿರಾಜು, ವಿಶ್ವ, ಸಂದೀಪ್‍ರೆಡ್ಡಿ, ಸಂದೀಪ್‍ಗೌಡ, ರಾಮಸಾಗರ ವೇಣು, ಐತಂಡಹಳ್ಳಿ ಮುನ್ನ, ಯಲುವಳ್ಳಿ ಪ್ರಭಾಕರ್, ಹನುಮಂತಪ್ಪ, ಮಾಲೂರು ತಾಲ್ಲೂಕು ಅಧ್ಯಕ್ಷ ಯಲ್ಲಣ್ಣ, ಹರೀಶ್, ಮಾಸ್ತಿ ವೆಂಕಟೇಶ್, ಮುಂತಾದವರು ಇದ್ದರು.