ಕುಂದಾಪುರ ಐ.ಸಿ,ವೈ.ಎಮ್. ಸಂಘಟನೆಯಿಂದ “ರೊಜಾರಿಯಾ 22” ಕಿರು ನಾಟಕಗಳ ಸ್ಪರ್ಧೆ


ಕುಂದಾಪುರ, ಅ.4: ಕುಂದಾಪುರ ರೋಜರಿ ಚರ್ಚಿನ ಭಾರತೀಯ ಕ್ರೈಸ್ತ ಯುವ ಸಂಘಟನೆಯಿಂದ “ರೊಜಾರಿಯಾ 22” ಕೊಂಕಣಿ ಕಿರು ನಾಟಕಗಳ ಸ್ಪರ್ಧೆ ಚರ್ಚ್ ಮಟ್ಟದಲ್ಲಿ ವಾಳೆಯವರಿಗಾಗಿ ನಡೆಸಲಾಯಿತು.
ಕಾರ್ಯಕ್ರಮವನ್ನು ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಪರದೆ ಸರಿಸಿ ಉದ್ಘಾಟಿಸಿದರು.
‘ಇಂತಹ ಒಂದು ಸ್ಪರ್ಧೆಗಳಿಂದ ನಮ್ಮಲ್ಲಿ ಒಗಟ್ಟು ಉಂಟಾಗುತ್ತದೆ, ವಾಳೆಯವರಲ್ಲಿ ಸಮ್ಮಿಲನವಾಗುತ್ತದೆ, ನಮ್ಮೊಳಗಿನ ಪ್ರತಿಭೆ ಹೊರಹೊಮ್ಮಲು ಸಹಾಯಕವಾಗುತ್ತದೆ’ ಎಂದು ಸಂಘಟಿಸಿದವರಿಗೆ ಅಭಿನಂದನೆ ಸಲ್ಲಿಸಿ’ ಅ|ವಂ|ಸ್ಟ್ಯಾನಿ ತಾವ್ರೊ ಸ್ಪರ್ಧಿಗಳಿಗೆ ಶುಭ ಹಾರೈಸಿದರು.
ಸಂಘಟನೆಯೆ ಸಿದ್ದ ಪಡಿಸಿದ ವಿಷಯಗಳನ್ನು ಚೀಟಿ ಎತ್ತುವ ಮೂಲಕ ತಮಗೆ ಬಂದ ವಿಷಯಗಳ ಮೇಲೆ 10 ನಿಮಿಷಗಳ ಕಿರು ನಾಟಕಗಳನ್ನು ಪ್ರದರ್ಶಿಸಲಿಕ್ಕೆ ಇದ್ದು, ಸೈಂಟ್ ಲೂರ್ದ್ ವಾಳೆ ಪ್ರಥಮ ಸ್ಥಾನ, ದ್ವೀತಿಯ ಸ್ಥಾನ ರೋಜರಿ ವಾಳೆ ಪಡೆದರೆ ಫಾತಿಮಾ ವಾಳೆ ತ್ರತೀಯ ಸ್ಥಾನ ಪಡೆಯಿತು.
ತಿರ್ಪುಗಾರರಾಗಿ ವಂ|ರೊಲ್ವಿನ್, ಸಿಸ್ಟರ್ ಸುನೀತಾ ಮತ್ತು ಲವೀಟಾ ಪಿಂಟೊ ಸಹಕರಿಸಿದರು.
ಕಾರ್ಯಕ್ರಮದ ವೆದೀಕೆಯಲ್ಲಿ ಉಡುಪಿ ಧರ್ಮಪ್ರಾಂತ್ಯದ ಐ.ಸಿ.ವೈ.ಎಮ್. ಸಂಘಟನೇಯ ಅಧ್ಯಕ್ಷ ಲೈನಿಶ್ ಮಿರಾಂಡ, ಕಾರ್ಯದರ್ಶಿ ಆ್ಯಸ್ಲಿ ಡಿಸೋಜಾ ಶುಭ ಕೋರಿದರು. ವಲಯದ ಅಧ್ಯಕ್ಷ ರೆನ್ಸನ್ ಡಿಸೋಜಾ, ವಲಯದ ಕಾರ್ಯದರ್ಶಿ ಅಂಕಿತಾ ಬುತೆಲ್ಲೊ, ಐ.ಸಿ.ವೈ.ಎಮ್. ಸಚೇತಕರಾದ ಶಾಂತಿ ಬರೆಟ್ಟೊ, ಜೆಸನ್ ಪಾಯ್ಸ್, ಕುಂದಾಪುರ ಚರ್ಚಿನ ಪಾಲನ ಮಂಡಳಿ ಕಾರ್ಯದರ್ಶಿ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನಾ, ಉಪಸ್ಥಿತರಿದ್ದರು. ಐ.ಸಿ.ವೈ.ಎಮ್. ಸಂಘಟನೇಯ ಸಾಂಸ್ಕ್ರತಿಕ ಕಾರ್ಯದರ್ಶಿ ರೀಯಾ ಕ್ರಾಸ್ತಾ ಸ್ವಾಗತಿಸಿದರು, ಪ್ರಿಯೆಲ್ ಡಿಸೋಜಾ, ಕಾರ್ಯದರ್ಶಿ ಜಾಸ್ನಿ ಡಿಆಲ್ಮೇಡಾ ಕಾರ್ಯಕ್ರಮಗಳನ್ನು ನಿರೂಪಿಸಿದರು. ಅಧ್ಯಕ್ಷ ಕೆಲ್ವಿನ್ ರೋಚ್ ವಂದಿಸಿದರು
.