ಮಾವು ಸ್ಪೇಷಲ್ ಸಿಂಪರಣೆಯ ಬಗ್ಗೆ ಪದ್ಧತಿ ಪ್ರಾತ್ಯಕ್ಷಿಕೆ

ಶ್ರೀನಿವಾಸಪುರ; ತಾಲೂಕಿನ ಬೂರುಗಾನಹಳ್ಳಿ ಗ್ರಾಮದಲ್ಲಿ ಶ್ರೀ ಮಂಜುನಾಥರವರ ತೋಟದಲ್ಲಿ ವಿಸ್ತರಣ ಶಿಕ್ಷಣ ಘಟಕ (ಕೋಲಾರ), ಕೃಷಿ ವಿಜ್ಞಾನ ಕೇಂದ್ರ ಚಿಂತಾಮಣಿ ರವರ ವತಿಯಿಂದ ಮಾವು ಬೆಳೆಯಲ್ಲಿ ಸೆಪ್ಟೆಬಂರ್ 26 ಸೋಮುವಾರದಂದು ಮಾವು ಸ್ಪೇಷಲ್ ಸಿಂಪರಣೆಯ ಬಗ್ಗೆ ಪದ್ಧತಿ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿತ್ತು, ಈ ಸಂಧರ್ಭದಲ್ಲಿ ವಿಸ್ತರಣ ಶಿಕ್ಷಣ ಘಟಕ (ಕೋಲಾರ), ಶ್ರೀಮತಿ ಸಿಂಧು ಕೆ ವಿಜ್ಞಾನಿಗಳು (ತೋಟಗಾರಿಕೆ) ಮತ್ತು ಡಾ. ದೀಲಿಪ್. ಎಸ್, ವಿಜ್ಞಾನಿಗಳು (ಕೃಷಿ ವಿಸ್ತರಣಾ) ರವರು ಮಾವು ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆ ಬಗ್ಗೆ ತಿಳಿಸಿಕೊಟ್ಟರು.

ರೋಗನಿರೋಧಕ ಶಕ್ತಿಯೊಂದಿಗೆ ಬೆಳೆಯು ಆರೋಗ್ಯಕರವಾಗಿ ಬೆಳೆದು ಅಧಿಕ ಇಳುವರಿ ನೀಡಬೇಕಾದರೆ ಬೆಳೆಗಳಿಗೆ ಸಮತೋಲನ ಪೋಷಕಾಂಶಗಳನ್ನು ಒದಗಿಸುವುದು ಅವಶ್ಯ. ಆದರೆ ಕೆಲವೇ ರೈತರು ಲಘು ಪೋಷಕಾಂಶಗಳ ಮಹತ್ವವನ್ನರಿತು ಬಳಸುತ್ತಿದ್ದಾರೆ. ಆದ್ದರಿಂದ ಗುಣಮಟ್ಟದ ಬೆಳೆ ಹಾಗೂ ಹೆಚ್ಚಿನ ಇಳುವರಿಗಾಗಿ ಸಮಗ್ರ ಪೋಷಕಾಂಶಗಳ ನಿರ್ವಹಣೆಯ ಅಂಗವಾಗಿ ಮಾವು ಬೆಳೆಯ ಎಲೆಗಳಿಗೆ ಸಿಂಪಡಿಸಬಹುದಾದ ಮಾವು ಸ್ಪೇಷಲ್ ಅತ್ಯಂತ ಉಪಯುಕ್ತವಾಗಿದೆ.

ಬಳಕೆಯ ವಿಧಾನ

75 ಗ್ರಾಂ, ಮಾವು ಸ್ಪೇಷಲ್ + 1 ಶ್ಯಾಂಪೂ ಸ್ಯಾಚೆಟ್ + 2 ನಿಂಬೆಹಣ್ಣಿನ ರಸವನ್ನು 15 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪರಣೆ ಮಾಡುವುದರಿಂದ ಹಣ್ಣಿನ ಗುಣಮಟ್ಟ ಮತ್ತು ಇಳುವರಿ ಹೆಚ್ಚಿಸಬಹುದು. ಸಿಂಪರಣೆಯು ಆಗಸ್ಟ್-ಸೆಪ್ಟೆಬಂರ್‍ನಲ್ಲಿ ಪ್ರಾರಂಭಗೊಂಡು, ಪ್ರತಿ 2 ತಿಂಗಳಿಗೊಮ್ಮೆ ಬೆಳೆ ಕಟಾವು ಮಾಡುವತನಕ ಸಿಂಪರಣೆನ್ನು ಮಾಡಬಹುದು.