

ಕುಂದಾಪುರ, ಎ.22; ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ ಕ್ರೈಸ್ತ ಶಿಕ್ಷಣ ಆಯೋಗದ ಸಹಕಾರದಿಂದ ಮೂರು ದಿನಗಳ ಬೇಸಿಗೆ ರಜೆಯಲ್ಲಿ ಅಧ್ಯಾತ್ಮಿಕ ಶಿಬಿರ ಎ.21 ರಂದು ಚರ್ಚಿನ ಸಭಾಭವನದಲ್ಲಿ ಪ್ರಾರ್ಥನಾ ಗೀತೆಯೊಂದಿಗೆ ಆರಂಭಿಸಲಾಯಿತು.
ಈ ಸಂದರ್ಭದಲ್ಲಿ ಚರ್ಚಿನ ಧರ್ಮಗುರು ಅ।ವಂ।ಪೌಲ್ ರೇಗೊ ಮಾತನಾಡಿ “ಈ ಶಿಬಿರದಲ್ಲಿ ಆಟ ಪಾಠಗಳ ಜೊತೆ, ಮಕ್ಕಳಲ್ಲಿ ಅಧ್ಯಾತ್ಮಿಕ ಜ್ಞಾನ ಬೆಳಗಲು ಪ್ರಯತ್ನಿಸಲಾಗುವುದು, ಈ ಪ್ರಾಯದಲ್ಲಿ ಮಕ್ಕಳಿಗೆ ಅಧ್ಯಾತ್ಮಿಕ ಜ್ಞಾನದ ಅವಶ್ಯಕತೆ ಇದೆ. ಮಕ್ಕಳು ಅನ್ಯಾಯ್ ಅನೀತಿಗಳಿಂದ ದೂರವಿರಲು ಇಂತಹ ಶಿಬಿರಗಳು ಸಹಾಯಕವಾಗುತ್ತೇವೆ, ಮೂರು ದಿನಗಳ ಈ ಶಿಬಿರದಲ್ಲಿ ಕೊನೆಯ ದಿನ ಧಾರ್ಮಿಕ ಜಾಗದ ಪ್ರವಾಸವನ್ನು ಮಾಡುತ್ತೇವೆ, ಈ ಶಿಬಿರದ ವೇಳೆ ಮಕ್ಕಳು ಶಿಸ್ತಿನಿಂದ ಇದ್ದು, ಇದರ ಪ್ರಯೋಜನವನ್ನು ಪಡೆಯಬೇಕು” ಎಂದು ಹೇಳಿದರು.
ಕ್ರೈಸ್ತ ಶಿಕ್ಷಣ ಆಯೋಗದ ಸಂಚಾಲಕಿ ವೀಣಾ ಡಿಸೋಜಾ ಸ್ವಾಗತಿಸಿದರು, ವೇದಿಕೆಯಲ್ಲಿ ಬಾಲ್ಯ ಮೇರಿ ಮಾತಾ ಸೊಡೆಲಿಟಿಯ ಸಚೇತಕಿ ಸಿಸ್ಟರ್ ಇವ್ಲಾ, ಚರ್ಚಿನ ಪಾಲನ ಮಂಡಳಿ ಉಪಾಧ್ಯಕ್ಷರಾದ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಸರ್ವಾಅಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಶಿಕ್ಷಕಿ ಸೆಲಿನ್ ಬಾರೆಟ್ಟೊ ಉಪಸ್ಥಿತರಿದ್ದರು.


























