ಕುಂದಾಪುರ ಚರ್ಚ್ ಮೈದಾನದಲ್ಲಿ 75 ನೇಯ ಸ್ವಾತಂತ್ರ್ಯ ದಿನಾಚರಣೆ

JANANUDI.COM NETWORK

ಕುಂದಾಪುರ,ಅ.15: ಕಥೊಲಿಕ್ ಸಭಾ ಕುಂದಾಪುರ ಚರ್ಚ್ ಘಟಕದ ವತಿಯಿಂದ ಕುಂದಾಪುರ ಹೋಲಿ ರೋಜರಿ ಮಾತಾ ಇಗರ್ಜಿಯ ಮೈದಾನದಲ್ಲಿ, 75 ನೇಯ ಸ್ವಾತಂತ್ರ್ಯತ್ರ್ಸೋವವನ್ನು ಆಚರಿಸಿಲಾಯಿತು.
ಮಾಜಿ ಕುಂದಾಪುರ ಪುರಸಭೆಯ ಉಪಾಧ್ಯಕ್ಷೆ ಲಿಯೊನಿಲ್ಲಾ ಕ್ರಾಸ್ಟೊ ಗೌರವ ಸ್ವೀಕರಿಸಿ ಧ್ವಜಾ ರೋಹಣಗೈದು ‘ನಮ್ಮ ಹಿರಿಯರು ಪ್ರಾಣ ತ್ಯಾಗ ಕಷ್ಟದಿಂದ ಸ್ವಾತಂತ್ರವನ್ನು ಗಳಿಸಿಕೊಟ್ಟಿದ್ದು ನಾವು ಸದಾ ನೆನಪಿನಲ್ಲಿ ಇಟ್ಟು ಕೊಳ್ಳಬೇಕು ಎಂದು, ಅವರು ಅಮ್ರತೋತ್ಸವ ಸ್ವಾತಂತ್ರ ದಿನಾಚರಣೆಯ ಶುಭ ಕೋರಿದರು. ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಎಲ್ಲರಿಗೂ ಗೌರವ ಕೊಟ್ಟು ಬಾಳೋಣ ಎಂದು ಸಂದೇಶ ನೀಡಿದರು
ಸಹಾಯಕ ಧರ್ಮಗುರು ವಂ| ವಿಜಯ್ ಡಿಸೋಜಾ, ಪಾಲನ ಮಂಡಳಿ ಉಪಧ್ಯಾಕ್ಷ ಲುವಿಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ಕಥೊಲಿಕ್ ಸಭಾದ ನಿಯೋಜಿತೆ ಅಧ್ಯಕ್ಷೆ ಜೂಲಿಯೆಟ್ ಪಾಯ್ಸ್, ನಿರ್ಗಮನ ಅಧ್ಯಕ್ಷ ವಾಲ್ಟರ್ ಡಿಸೋಜಾ, ಪದಾಧಿಕಾರಿಗಳಾದ ವಿನೋದ್ ಕ್ರಾಸ್ಟೊ, ವಿಲ್ಸನ್ ಡಿ ಆಲ್ಮೇಡಾ, ಮೈಕಲ್ ಗೊನ್ಸಾಲ್ವಿಸ್, ಜೋನ್ ಮಾಸ್ಟರ್, ಮತ್ತು ಕಾರ್ಯಕ್ರಮದ ಸಂಚಾಲಕಿ ಶೈಲಾ ಡಿಆಲ್ಮೇಡಾ ಇನ್ನಿತರರು ಉಪಸ್ಥಿತರಿದ್ದರು. ಘಟಕದ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ ಸ್ವಾಗತಿಸಿದರು, ಕಾರ್ಯದರ್ಶಿ ಆಲ್ಡ್ರಿನ್ ಡಿಸೋಜಾ ವಂದಿಸಿದರು, ಡಾ|ಸೋನಿ ಡಿಕೋಸ್ತಾ ನಿರೂಪಿಸಿದರು
.