ದ್ವಿತೀಯ ಪಿಯುಸಿ-ಕೋಲಾರ ಜಿಲ್ಲೆಗೆ ಶೇ.60.41 ಫಲಿತಾಂಶ-ಡಿಡಿ ರಾಮಚಂದ್ರಪ್ಪ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಯಲ್ಲಿ ಪರೀಕ್ಷೆಗೆ ಕುಳಿತಿದ್ದ 14740 ವಿದ್ಯಾರ್ಥಿಗಳ ಪೈಕಿ 8904 ಮಂದಿ ಉತ್ತಿರ್ಣರಾಗುವ ಮೂಲಕ ಶೇ.60.41 ಫಲಿತಾಂಶ ಬಂದಿದ್ದು, ವಿಜ್ಞಾನ ವಿಭಾಗದಲ್ಲಿ ಮುಳಬಾಗಿಲು ಎಸ್‍ಡಿಸಿ ಕಾಲೇಜಿನ ಫರ್ವೀನ್ ಫಾತೀಮಾ, ವಾಣಿಜ್ಯ ವಿಭಾಗದಲ್ಲಿ ಇದೇ ಕಾಲೇಜಿನ ಅಧಿತಿ ಕಲ್ಗಟಗಿ ಹಾಗೂ ಕಲಾ ವಿಭಾಗದಲ್ಲಿ ಕೋಲಾರದ ಬಾಲಕಿಯರ ಜೂನಿಯರ್ ಕಾಲೇಜಿನ ಬಿ.ಕೀರ್ತನಾ ಹಾಗೂ ಆರ್.ಇಂದು ಜಿಲ್ಲೆಗೆ ಮೊದಲಿಗರಾಗಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರಪ್ಪ ತಿಳಿಸಿದ್ದಾರೆ.
ಫಲಿತಾಂಶದ ಕುರಿತು ಮಾಹಿತಿ ನೀಡಿರುವ ಅವರು, ವಿಜ್ಞಾನ ವಿಭಾಗದಲ್ಲಿ ಫರ್ವೀನ್ ಫಾತೀಮಾ, 593 ಅಂಕ, ವಾಣಿಜ್ಯವಿಭಾಗದಲ್ಲಿ ಬಂಗಾರಪೇಟೆ ಎಸ್‍ಡಿಸಿ ಕಾಲೇಜಿನ ಅಧಿತಿ ಕಲ್ಗಟಗಿ 593 ಅಂಕ ಹಾಗೂ ಕಲಾ ವಿಭಾಗದಲ್ಲಿ ಕೋಲಾರದ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಬಿ.ಕೀರ್ತನಾ ಹಾಗೂ ಆರ್.ಇಂದು 567 ಅಂಕಗಳೊಂದಿಗೆ ಜಿಲ್ಲೆಗೆ ಮೊದಲಿಗರಾಗಿ ಹೊರಹೊಮ್ಮಿದ್ದಾರೆ ಎಂದು ತಿಳಿಸಿದ್ದಾರೆ.
ಉಳಿದಂತೆ ವಾಣಿಜ್ಯ ವಿಭಾಗದಲ್ಲಿ ಮುಳಬಾಗಿಲು ಎಸ್‍ಡಿಸಿ ಕಾಲೇಜಿನ ಆರ್.ಸಂಧ್ಯಾ ಹಾಗೂ ಕೋಲಾರದ ಮಹಿಳಾ ಸಮಾಜದ ಆರ್.ಕಾರ್ತಿಕಾ 592 ಅಂಕಗಳೊಂದಿಗೆ ಜಿಲ್ಲೆಗೆ ದ್ವಿತೀಯ ಸ್ಥಾನವನ್ನು ಹಂಚಿಕೊಂಡಿದ್ದಾರೆ
.

ವಿಜ್ಞಾನ ವಿಭಾಗದಲ್ಲಿ ಮುಳಬಾಗಿಲು ಎಸ್‍ಡಿಸಿ ಕಾಲೇಜಿನ ಫರ್ವೀನ್ ಫಾತೀಮಾ 593 ಅಂಕ,
ವಾಣಿಜ್ಯವಿಭಾಗದಲ್ಲಿ ಬಂಗಾರಪೇಟೆ ಎಸ್‍ಡಿಸಿ ಕಾಲೇಜಿನ ಅಧಿತಿ ಕಲ್ಗಟಗಿ 593 ಅಂಕ,

ವಾಣಿಜ್ಯ ವಿಭಾಗದಲ್ಲಿ ಮುಳಬಾಗಿಲು ಎಸ್‍ಡಿಸಿ ಕಾಲೇಜಿನ ಆರ್.ಸಂಧ್ಯಾ 592


ಕೋಲಾರದ ಮಹಿಳಾ ಸಮಾಜದ ಆರ್.ಕಾರ್ತಿಕಾ 592 ಅಂಕ

ಕಲಾ ವಿಭಾಗದಲ್ಲಿ ಕೋಲಾರದ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಬಿ.ಕೀರ್ತನಾ 567 ಹಾಗೂ ಆರ್.ಇಂದು 567 ಅಂಕ

ವಿಭಾಗವಾರು ಫಲಿತಾಂಶ ವಿವರ

ವಿಜ್ಞಾನ ವಿಭಾಗದಲ್ಲಿ ಜಿಲ್ಲೆಯಿಂದ ಒಟ್ಟು 5217 ಮಂದಿ ಪರೀಕ್ಷೆಗೆ ಕುಳಿತಿದ್ದು, ಅವರಲ್ಲಿ 3377 ಮಂದಿ ಉತ್ತೀರ್ಣರಾಗುವ ಮೂಲಕ ಶೇ.69.2 ರಷ್ಟು ಫಲಿತಾಂಶ ಬಂದಿದ್ದು, ಒಟ್ಟಾರೆಯಾಗಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ 7766 ಮಂದಿ ಪರೀಕ್ಷೆಗೆ ಕುಳಿತಿದ್ದು, ಅವರಲ್ಲ 4793 ಮಂದಿ ಉತ್ತೀರ್ಣರಾಗುವ ಮೂಲಕ ಜಿಲ್ಲೆಗೆ ಶೇ.61.72 ರಷ್ಟು ಫಲಿತಾಂಶ ಲಭ್ಯವಾಗಿದೆ ಎಂದು ವಿವಿರ ನೀಡಿದ್ದಾರೆ.

ಕಲಾವಿಭಾಗದಲ್ಲಿ ಪರೀಕ್ಷೆಗೆ ಕುಳಿತಿದ್ದ 2094 ಮಂದಿ ಪೈಕಿ ಕೇವಲ 734 ಮಂದಿ ಉತ್ತೀರ್ಣರಾಗುವ ಮೂಲಕ ಶೇ.35.05 ಫಲಿತಾಂಶ ಬಂದಿದ್ದು, ಇದು ಜಿಲ್ಲೆಯ ಒಟ್ಟಾರೆ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ.

ನಗರ ವಿದ್ಯಾರ್ಥಿಗಳೇ ಫಳಿತಾಂಶದಲ್ಲಿ ಮೇಲುಗೈ

ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಗೆ ನಗರ ವ್ಯಾಪ್ತಿಯ ಕಾಲೇಜುಗಳಲ್ಲಿ ಒಟ್ಟು 11277 ಮಂದಿ ಪರೀಕ್ಷೆಗೆ ಕುಳಿತಿದ್ದು, ಅದರಲ್ಲಿ 7061 ಮಂದಿ ಉತ್ತೀರ್ಣರಾಗುವ ಮೂಲಕ ಶೇ.62.06 ಫಲಿತಾಂಶ ಬಂದಿದೆ ಎಂದು ಪಿಯುಸಿ ಡಿಡಿ ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶದ ಪಿಯು ಕಾಲೇಜುಗಳಿಂದ ಒಟ್ಟು 3363 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಅವರಲ್ಲಿ 1843 ಮಂದಿ ಉತ್ತೀರ್ಣರಾಗುವ ಮೂಲಕ ಶೇ.54.8 ರಷ್ಟು ಫಲಿತಾಂಶ ಬಂದಿದ್ದು, ನಗರ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ ಎಂದು ತಿಳಿಸಿದ್ದಾರೆ.

ಸಹ್ಯಾದ್ರಿ ಕಾಲೇಜಿಗೆ ಶೇ.95 ಫಲಿತಾಂಶ

ಪರೀಕ್ಷೆಗೆ ಕುಳಿತಿದ್ದ 399 ಮಂದಿಯಲ್ಲಿ 380 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಎಂ.ಮನೋಹರ್ 586 ಅಂಕ ಗಳಿಸಿ ಶಾಲೆಗೆ ಮೊದಲಿಗರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಇ.ಪಿ.ಜೀವಿತಾ, 586 ಅಂಕ ಪಡೆಯುವ ಮೂಲಕ ಕಾಲೇಜಿಗೆ ಮೊದಲಿಗರಾಗಿದ್ದಾರೆ.

ಎಸ್.ದರ್ಶನ್ ಅವರಿಗೆ ವಿಜ್ಞಾನ ವಿಭಾಗದಲ್ಲಿ ಪಿಸಿಎಂಬಿ ವಿಷಯದಲ್ಲಿ ಶೇ.100 ಸಾಧನೆ ಮಾಡಿದ್ದು, 400ಕ್ಕೆ 400 ಅಂಕಗಳು ಬಂದಿವೆ ಎಂದು ಕಾಲೇಜಿನ ಆಡಳಿತಾಧಿಕಾರಿ ಉದಯಕುಮಾರ್ ಹಾಗೂ ಪ್ರಾಂಶುಪಾಲ ಜಿ.ವಿ.ಕೃಷ್ಣಪ್ಪ ಸಂತಸ ಹಂಚಿಕೊಂಡಿದ್ದಾರೆ.

ಸಾಯಿ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಎಬೇತಮಂಗಲದ ಶ್ರೀಸಾಯಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಾಣಿಜ್ಯ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ್ದು, ಕಾಲೇಜಿನ ಕೆ.ವಿ.ದಿವ್ಯಶ್ರೀ 589 ಅಂಕಗಳೊಂದಿಗೆ ಕಾಲೇಜಿಗೆ ಮೊದಲಿಗರಾಗಿದ್ದಾರೆ. ಹಾಗೇಯೇ ಕೆ.ಎಸ್.ಕಿರಣ್ ಕುಮಾರ್ 581 ಹಾಗೂ ಬಿ.ಎನ್.ಭಾರ್ಗವಿ 580 ಅಂಕಗಳನ್ನು ಗಳಿಸಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.