ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ವಿಶ್ವ ವೈದ್ಯರ ದಿನಾಚರಣೆ ಡಾ. ಮಲ್ಲಿಗೆ ಸನ್ಮಾನ

JANANUDI.COM NETWORK

 

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ವಿಶ್ವ ವೈದ್ಯರ ದಿನಾಚರಣೆ ಡಾ. ಮಲ್ಲಿಗೆ ಸನ್ಮಾನ

 

 

ಕುಂದಾಪುರ, ಜು.2: ಭಾರತೀಯ ರೆಡ್ ಕ್ರಾಸ್ ಕುಂದಾಪುರ ಸಂಸ್ಥೆಯು ಜುಲಾಯ್ ಒಂದರಂದು ತಮ್ಮ ಸಂಸ್ಥೆಯಲ್ಲಿ ವಿಶ್ವ ವೈದ್ಯರ ದಿನಾಚರಣೆಯನ್ನು ಆಚರಿಸಿತು.

   ಈ ಸಂದರ್ಭದಲ್ಲಿ ನಿವ್ರತ್ತರಾಗಿರುವ ಹಿರಿಯ ವೈದ್ಯ ಡಾ.ಮಲ್ಲಿಯನ್ನು ಸನ್ಮಾನಿಸಿ ಗೌರವವನ್ನು ಸಲ್ಲಿಸಿತು. ಡಾ. ಮಲ್ಲಿ  ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ ಸ್ವಖುಷಿಯಿಂದ ತಮ್ಮನ್ನು ಸಮರ್ಪಣಾಭಾವದಿಂದ ತೊಡಗಿಸಿಕೊಂಡವರು. ಅವರ ಸೇವೆ ನಿಸ್ವಾರ್ಥವಾಗಿದೆ’ ಎಂದು ಸನ್ಮಾನ ಮಾಡಿದ ಸಂದರ್ಭದಲ್ಲಿ ಅವರನ್ನು ಸೇವೆಯ ಬಗ್ಗೆ ತಿಳಿಸಲಾಯಿತು.

     ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆಯ  ಸಭಾ ಪತಿಗಳಾದ ಶ್ರೀ ಎಸ್. ಜಯಕರ ಶೆಟ್ಟಿ, ಕಾರ್ಯದರ್ಷಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಗಣೇಶ್ ಆಚಾರ್ಯ, ಡಾ. ಸೋನಿ ಡಿಕೋಸ್ಟಾ ಮತ್ತು ರಕ್ತ ನಿಧಿ ಕೇಂದ್ರದ ಮೇಲ್ವಿಚಾರಕರಾದ ವೀರೇಂದ್ರ ಕುಮಾರ್ ಉಪಸ್ತಿತರಿದ್ದರು