ಚಲಿಸುತ್ತಿರುವ ರೈಲಿನಲ್ಲಿ 21 ವರ್ಷದ ಯುವತಿಯ ಹತ್ಯೆ! ಅಣ್ಣ ಪೊಲೀಸರನ್ನು ಸಂಪರ್ಕಿಸಿದರೂ ಯುವತಿ ಇನ್ನಿಲ್ಲವಾದಳು

JANANUDI.COM NETWORK

ಭೋಪಾಲ್​: 21 ವರ್ಷ ಮುಸ್ಕನ್ ಹಡಾ ಎಂಬ  ಯುವತಿಯನ್ನು ಇಂದೋರ್‌ನಿಂದ ಬಿಲಾಸ್ಪುರಕ್ಕೆ ಹೋಗುವ ನರ್ಮದಾ ಎಕ್ಸ್‌ಪ್ರೆಸ್ ರೈಲಿನಲ್ಲಿ  ತೀಕ್ಷ್ಣವಾದ ಆಯುಧದಿಂದ ಕುತ್ತಿಗೆಗೆ ತಿವಿದು ಹತ್ಯೆ ಮಾಡಿದ ವಿದ್ರಾವಕ ಘಟನೆ ನಡೆದಿದೆ.  ಸ್ಲೀಪರ್​ ಕೋಚ್​ನಲ್ಲಿ ಸಾಗುತ್ತಿದ್ದ ಯುವತಿ ಸೆಹೋರ್​ ರೈಲ್ವೆ ನಿಲ್ದಾಣ ತಲುಪುವುದರೊಳಗೆ ಯುವತಿ ಹೆಣವಾಗಿದ್ದಾಳೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಯುವತಿಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

   ಯಾವುದೋ ಕಾರಣಕ್ಕೆ ಜೈಲಲ್ಲಿ ಇದ್ದ ತಂದೆಯನ್ನು ಬಿಡಿಸುವ ಒತ್ತಡದಲ್ಲಿದ್ದು,ಇದೇ ಕಾರಣಕ್ಕೆ ಬಿಹಾರನಲ್ಲಿದ್ದ ತನ್ನ ಅಣ್ಣನನ್ನು ಭೇಟಿ ಮಾಡಲು ಇಂದೋರ್ ನಿಂದ ಬೋಪಾಲ್  ಹೊರಟಿದ್ದಳು. ರೈಲು ಒಡುತ್ತೀರುವ ಮಾರ್ಗ ಮಧ್ಯೆ ಈ ಬರ್ಬರ ಕೊಲೆ ನಡೆದಿದೆ

      ಅಂದ ಹಾಗೆ ಯುವತಿ ರೈಲು ಹತ್ತಿದಾಗಿನಿಂದ ಅಣ್ಣನ ಸಂಪರ್ಕದಲ್ಲಿದ್ದಳು. ರೈಲಿನಲ್ಲಿ ಯಾರೋ ತನಗೆ ಹಿಂಸೆ ಕೊಡುತ್ತಿರುವುದಾಗಿಯೂ ಹೇಳಿಕೊಂಡಿದ್ದಾಳೆ. ಈ ವಿಚಾರವನ್ನು ಆಕೆಯ ಅಣ್ಣ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಮಂಗಳವಾರ ರಾತ್ರಿ 9 ಗಂಟೆಗೆ ಸೆಹೋರ್ ನಿಲ್ದಾಣದಲ್ಲಿ ರೈಲು ನಿಲ್ಲಿಸಿ,  ರೈಲು  ಬೋಗಿ ಹತ್ತಿ ಪರೀಕ್ಷಿಸಿದಾಗ ಅಷ್ಟರಲ್ಲೆ,ಯುವತಿ ಕೊಲೆಯಾಗಿದ್ದಾಳೆ, ಕ್ರತ್ಯ ನಡೆಸಿ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ಪೊಲೀಸರು ಯುವತಿಯ ಶವವನ್ನು ಇಳಿಸಿ ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

      ಅಪರಿಚಿತ ಆರೋಪಿಗಳು ಚಲಿಸುವ ರೈಲಿನಲ್ಲಿ ಬಾಲಕಿಯ ಗಂಟಲನ್ನು ಕತ್ತರಿಸಿ ಪರಾರಿಯಾಗಿದ್ದಾರೆ. ಬೋಗಿಯಲ್ಲಿದ್ದ ಪ್ರಯಾಣಿಕರು,ರೈಲಿನ ಸೀಟಿಗಾಗಿ ಎನೋ ಜಗಳ ನಡೆಯುತಿತ್ತು ಮಾಹಿತಿ ನೀಡಿದ್ದಾರೆ.  ಪೊಲೀಸರು ತಲುಪಿ ತನಿಖೆ ಆರಂಭಿಸಿದ್ದಾರೆ.. ಪ್ರಕರಣದ ವಿವರಗಳನ್ನು ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಎಸ್.ಎಸ್.ಚೌಹಾನ್, ಇಂದೋರ್‌ನಿಂದ ಬಿಲಾಸ್ಪುರಕ್ಕೆ ನರ್ಮದಾ ಎಕ್ಸ್‌ಪ್ರೆಸ್‌ನ ಸ್ಲೀಪರ್ ಕೋಚ್‌ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಿದರು.

  ಸದ್ಯ ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಬಗ್ಗೆ ಪೊಲೀಸರು ಒರ್ವನನ್ನು ಬಂದಿಸಿದ್ದಾರೆಂದು ತಿಳಿದು ಬಂದಿದೆ