ಬೆಂಗಳೂರ್, ಸೆ. 14 ಮತ್ತು 15 ವೆರ್ ಬೆಂಗಳೂರ್ ಕೋರಮಂಗಲ ಹಾಂಗಾಸರ್ ಚಲಲ್ಯಾ ಅಖೀಲ್ ಕರ್ನಾಟಕ ಸ್ಫೊಟ್ರ್ಸ್ ಕರಾಟೆ ಅಸೋಸಿಯೆನ್ ಹಾಣಿ ಮಾಂಡುನ್ ಹಾಡ್ಲ್ಯಾ 15 ವೇ ರಾಜ್ಯ್ ಮಟ್ಟಚ್ಯಾ ಸಬ್ ಜೂನಿಯರ್ ಕರಾಟೆ ಚಾಂಪಿಯೆನ್ ಶಿಫ್ 2024, ಹಾಂತುನ್ ಕುಂದಾಪುರ್ ಫಿರ್ಗಜೆಚ್ಯಾ ಅರ್ನೊನ್ ಡಿಆಲ್ಮೇಡಾ, 10 ವರ್ಸಾಂ ಪ್ರಾಯೆಚ್ಯಾ ಪಂಗ್ಡಾಂತ್, ಕರಾಟೆ ‘ಕಟಾ’ ವಿಭಾಗಾಂತ್ ರೂಪ್ಯಾಳೆ ಪದಕ್ ಆನಿ 10 ವರ್ಸಾಂ ಪ್ರಾಯೆಚ್ಯಾ, ತಸೆಂ 30-40 ಕೆ.ಜಿ. ‘ಕಮಿಟೆ’ ವಿಭಾಗಾಂತಾಯಿ ರೂಪ್ಯಾಳೆ ಪದಕ್ ಅಪ್ಣಾಯ್ಲಾ. ಹೊ ಕುಂದಾಪುರ್ ಫಿರ್ಗಜೆಚೊ ವಿಲ್ಸನ್ ಆನಿ ಜ್ಯೋತಿ ಡಿಆಲ್ಮೇಡಾ ಹಾಂಚೊ ಪುತ್ ಜಾವ್ನಾಸಾ. ಹ್ಯಾ ಪಂದ್ಯಾಟಾಂತ್ ಕರ್ನಾಟಕಚ್ಯಾ 31 ಜಿಲ್ಲೆ ಥಾವ್ನ್ 1200 ಸ್ಫರ್ಧಿಕಾಂನಿ ಭಾಗ್ ಘೆತ್ಲೊ. ಹಾಕಾ ಕುಂದಾಪುರ್ ಕೆ.ಡಿ.ಎಫ್. ಕರಾಟೆ ಇಸ್ಕೊಲಾಚೊ ಕಿಯೋಷಿ ಕಿರಣ್ ಕುಂದಾಪುರ್, ಶಿಹಾನ್ ಸಂದೀಪ್ ವಿ.ಕೆ., ಶಿಹಾನ್ ಕೀರ್ತಿ ಜಿ.ಕೆ., ಸೇನ್ ಸಾಯಿ ಶಿಹಾನ್ ಶೇಖ್, ಬಸ್ರೂರ್, ಆನಿ ಸೇನ್ ಸಾಯಿ ಶಶಾಂಕ್ ಶೆಣೈ ಟಿ ಹಾಣಿ ತರ್ಬೆತಿ ದಿಲ್ಲಿ ಜಾವ್ನಾಸಾ.
Day: September 19, 2024
ಈದ್ ಮಿಲಾದ್ ಮೆರವಣಿಗೆ ಸಂದರ್ಭ ಮುಸ್ಲಿಂ ಬಾಂಧವರಿಗೆ ಹಿಂದೂ ಬಾಂಧವರು ತಂಪು ಪಾನೀಯ ನೀಡಿ ಸ್ವಾಗತ
ಆರೋಗ್ಯವಂತ ಯುವಕರೇ ದೇಶದ ಆಸ್ತಿ , ದೇಶವು ಪ್ರಗತಿ ಯುವ ಜನತೆ ಸತ್ಪ್ರಜೆಗಳಾದರೇ ಮಾತ್ರ ಸಾಧ್ಯ – ಇಒ ಎ.ಎನ್.ರವಿ
ಶ್ರೀನಿವಾಸಪುರ: ದೇಶಕ್ಕೆ ಬೆನ್ನೆಲುಬಾದ ಆರೋಗ್ಯವಂತ ಯುವಕರೇ ದೇಶದ ಆಸ್ತಿ , ದೇಶವು ಪ್ರಗತಿಯತ್ತಾ ಸಾಗಲು ಯುವ ಜನತೆ ಸತ್ಪ್ರಜೆಗಳಾದರೇ ಮಾತ್ರ ಸಾಧ್ಯ . ಆದ್ದರಿಂದ ಆರೋಗ್ಯವಂತ ಸಮಾಜಕ್ಕೆ ಯುವ ಸಮುದಾಯ ಇರಲೇಬೇಕು ಎಂದು ಇಒ ಎ.ಎನ್.ರವಿ ಅಭಿಪ್ರಾಯ ಪಟ್ಟರು.
ಪಟ್ಟಣದ ಅಮಾನಿಕೆರೆ ಕ್ರೀಡಾಂಗಣದಲ್ಲಿ ಬುಧವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಹಾಗು ತಾಲೂಕು ಆಡಳಿತ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಯುವ ಜನತೆಯಲ್ಲಿ ಮಾನಸಿಕ ಹಾಗು ದೈಹಿಕವಾಗಿ ಉತ್ಸಾಹ ತುಂಬಿದರೆ , ಭವಿಷ್ಯದಲ್ಲಿ ಆರೋಗ್ಯವಂತ ಸಮಾಜ ಕಟ್ಟಲು ಸ್ಪೂರ್ತಿ ತುಂಬಲಿದೆ. ಪ್ರಸ್ತುತ ಯುವ ಜನತೆಯ ಅದ್ಯತೆ ಮೊಬೈಲ್ , ಟಿವಿ, ಹಾಗೂ ಮಾದಕ ವ್ಯಸನಿಗಳಾಗುತ್ತಿದ್ದು ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯ ಕಳೆದುಕೊಳ್ಳುತ್ತಿದ್ದು , ದೇಶದ ಅಭಿವೃದ್ದಿಗೆ ಯುವ ಜನತೆಯ ಪಾಳುದಾರಿಕೆಯಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿತ ಕಂಡುಬರುತ್ತಿದೆ ಎಂದು ಅಂತಕ ವ್ಯಕ್ತಪಡಿಸಿದರು.
ಬಿಇಒ ಕಚೇರಿ ವ್ಯವಸ್ಥಾಪಕ ಮಂಜುನಾಥ್, ಟಿಪಿಒ ವೆಂಕಟಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಶಿವಣ್ಣ, ನಿರ್ದೇಶಕ ರಘುನಾಥರೆಡ್ಡಿ, ಆರೋಗ್ಯ ಇಲಾಖೆ ಸಿಬ್ಬಂದಿ ಶಿವಬಸಪ್ಪ, ಹಿಂದುಳಿದ ವರ್ಗಗಗಳ ಒಕ್ಕೂಟದ ತಾಲೂಕು ಅಧ್ಯಕ್ಷ ವೇಣುಗೋಪಾಲ್, ಶಿಕ್ಷಕ ಕಿಟ್ಟಣ್ಣ, ಹಿರಿಯ ದೈಹಿಕ ಶಿಕ್ಷಕ ಕೃಷ್ಣಯ್ಯ, ಉಪನ್ಯಾಸಕರಾದ ಜಿ.ಕೆ.ನಾರಾಯಣಸ್ವಾಮಿ, ರಾಯಲ್ಪಾಡು ಪದವಿ ಪೂರ್ವ ಕಾಲೇಜಿನ ಗಿರೀಶ್, ಹಾಗು ತಾಲೂಕಿನ ಎಲ್ಲಾ ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು.
ಆರಿಕುಂಟೆ ಗ್ರಾಮಪಂಚಾಯಿತಿ ಉಪಾಧ್ಯಕ್ಷರಾಗಿ ಕಂಬಾಲಪಲ್ಲಿ ಮುನಿರತ್ನಮ್ಮರಾಮಚಂದ್ರಪ್ಪ ಅವಿರೋಧವಾಗಿ ಆಯ್ಕೆ
ಶ್ರೀನಿವಾಸಪುರ : ತಾಲೂಕಿನ ಆರಿಕುಂಟೆ ಗ್ರಾಮಪಂಚಾಯಿತಿ ಕಚೇರಿಯಲ್ಲಿ ಬುಧವಾರ ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನವಾಣೆಯಲ್ಲಿ ಕಂಬಾಲಪಲ್ಲಿ ಮುನಿರತ್ನಮ್ಮರಾಮಚಂದ್ರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗ್ರಾಮಪಂಚಾಯಿತಿಗೆ ಸೇರಿದಂತೆ ಒಟ್ಟು 19 ಸದಸ್ಯರಿದ್ದು, ಅದರಲ್ಲಿ ಜೆಡಿಎಸ್ ಬೆಂಬಲಿತ 14, ಕಾಂಗ್ರೆಸ್ ಬೆಂಬಲಿತ 05 ಸದ್ಯರಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ವೆಂಕಟಲಕ್ಷಮ್ಮ ರವರು ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿದ ಹಿನ್ನೆಲೆಯಲ್ಲಿ ಬುಧವಾರ ನಡೆದ ಚುನವಾಣೆಯಲ್ಲಿ ಕುಂಬಾಲಪಲ್ಲಿ ಮುನಿರತ್ನಮ್ಮರಾಮಚಂದ್ರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ರವಿಚಂದ್ರ ಮಾಹಿತಿ ನೀಡದರು.
ಈ ಸಂದರ್ಭದಲ್ಲಿ ಪಿಡಿಒ ಮಂಗಳಾಂಬ, ಲೆಕ್ಕಪರಿಶೋದಕ ಶ್ರೀನಿವಾಸ್ ಸದಸ್ಯರಾದ ನಾಗೇದನಹಳ್ಳಿ ಚೌಡರೆಡ್ಡಿ, ಡಿಎಸ್ಆರ್ ಶ್ರೀನಾಥರೆಡ್ಡಿ, ಮುನಿರಾಜು, ಬಿ.ವಿ.ವೆಂಕಟರೆಡ್ಡಿ, ಅಶ್ವನಿ, ಮುನಿವೆಂಕಟಮ್ಮ, ಸತೀಶ್, ವೆಂಕಲಕ್ಷ್ಮಮ್ಮ, ಸೈಯದ್ಶರೀಫ್, ಅಮ್ರರಾನ್ತಾಜ್, ಮುನಿರೆಡ್ಡಿ, ಹರೀಶ್, ಸರಸ್ವತಮ್ಮ, ಮುಖಂಡರಾದ ಟಿಪಿಎಸ್ ಲಕ್ಷ್ಮಣರೆಡ್ಡಿ, ನೀಲಟೂರು ಚಂದ್ರಶೇಖರ ರೆಡ್ಡಿ, ಆನಂದ್, ಆರಿಕುಂಟೆ ಯಶ್ವಂತರೆಡ್ಡಿ, ಕಂಬಾಲಪಲ್ಲಿ ಅರ್.ಕೆ.ಸೀನ, ರವಿ, ನರಸಿಂಹರೆಡ್ಡಿ, ಬೈರೆಡ್ಡಿ, ಗಜೇಂದ್ರ ಇದ್ದರು.