ಮುಳಬಾಗಿಲು ಸೆ-13, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ವಿಶೇಷ ತಂಡ ರಚನೆ ಮಾಡಿ ಜನಸಾಮಾನ್ಯರ ಪ್ರಾಣ ರಕ್ಷಣೆ ಮಾಡಬೇಕೆಂದು ರೈತ ಸಂಘದಿಂದ ಪುರಸಭೆ ಆಯುಕ್ತರಾದ ಶ್ರೀಧರ್ ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಪ್ರತಿ ವರ್ಷ ಬೀದಿನಾಯಿಗಳು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ತಮ್ಮ ಸಾಮ್ರಾಜ್ಯವನ್ನು ಹೆಚ್ಚಳ ಮಾಡಿಕೊಂಡು ಪ್ರತಿ ದಿನ ಒಂದಲ್ಲಾ ಒಂದು ರೀತಿಯಲ್ಲಿ ಮಕ್ಕಳು, ಹಿರಿಯರು, ಮತ್ತು ಮಹಿಳೆಯರ ಮೇಲೆ ದಾಳಿ ಮಾಡುತ್ತಿದ್ದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ನೀಡುವಲ್ಲಿ ತಾಲ್ಲೂಕು ಆಡಳಿತ ವಿಫಲವಾಗಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಅವ್ಯವಸ್ಥೆ ಹಾಗೂ ನಿರ್ಲಕ್ಷೆ ವಿರುದ್ದ ಅಸಮದಾನ ವ್ಯಕ್ತಪಡಿಸಿದರು.
ಮಕ್ಕಳು ಕೈಯಲ್ಲಿ ಬನ್ ಹಿಡಿಯಂಗಿಲ್ಲ ಹಿರಿಯರು ಮಹಿಳೆಯರು ಹಾಲು ಹಾಗೂ ತರಕಾರಿ ಬ್ಯಾಗ್ ಹಿಡಿದುಕೊಂಡು ಓಡಾಡುವಂತಿಲ್ಲ. ನೋಡಿದರೆ ಸಾಕು ಗುಂಪುಗುಂಪಾಗಿರುವ ಬೀದಿ ನಾಯಿಗಳು ಏಕಾಏಕಿ ದಾಳಿ ಮಾಡಿ ಗಾಯಗಳು ಗಳಿಸುವಜೊತೆಗೆ ಪ್ರಾಣವನ್ನು ತೆಗೆಯುವ ಮಟ್ಟಕ್ಕೆ ನಾಯಿ ಹಾವಳಿಗಳು ಹೆಚ್ಚಾಗಿದ್ದರೂ ನಿರ್ಲಕ್ಷೆ ಮಾಡಿ ಜನ ಸಾಮಾನ್ಯರ ಪ್ರಾಣದ ಜೊತೆ ಅಧಿಕಾರಿಗಳು ಚಲ್ಲಾಟವಾಡುತ್ತಿದ್ದಾರೆಂದು ಆರೋಪ ಮಾಡಿದರು.
ಒಂದು ಕಡೆ ಮಕ್ಕಳ ಮೇಲೆ ದಾಳಿಯಾದರೆ ಮತ್ತೊಂದು ಕಡೆ ರಸ್ತೆಗಳಲ್ಲಿ ಓಡಾಡುವ ದ್ವಿಚಕ್ರ ವಾಹನಗಳಿಗೆ ಅಡ್ಡಾಬಂದು ಏಕಾಏಕಿ ಬ್ರೇಕ್ ಹಾಕಲಾಗದೆ ವಾಹನ ಸವಾರರು ನಾಯಿಮೇಲೆ ಹತ್ತಿಸಿ ಅಪಘಾತಗಳಾಗಿ ಪ್ರಾಣವನ್ನು ಕೈಕಾಲುಗಳನ್ನು ಕಳೆದುಕೊಂಡು ಆಸ್ಪತ್ರೆ ಸೇರುವ ಜೊತೆಗೆ ಕುಟುಂಬ ಜವಾಬ್ದಾರಿ ಹೊತ್ತಿರುವ ಯುವಕರ ಹಿರಿಯರ ಪ್ರಾಣ ಪಕ್ಷಿ ಹಾರಿ ಹೋಗುವ ಪರಿಸ್ತಿತಿ ಇದ್ದರೂ ಸಮಸ್ಯೆ ಕಡೆ ಗಮನಹರಿಸದ ಆಡಳಿತ ವರ್ಗದ ವಿರುದ್ದ ಕಿಡಿಕಾರಿದರು.
ರಾಜ್ಯ ಮುಖಂಡ ಪಾರುಕ್ಪಾಷ ಮಾತನಾಡಿ ನಗರಗಳಲ್ಲಿ ಸಂಜೆ ಆದರೆ ಹೊರಗಡೆ ಬರುವಂತಿಲ್ಲ. ಗುಂಪುಗುಂಪಾಗಿರುವ ಬೀದಿ ನಾಯಿಗಳು ಏಕಾಏಕಿ ಅಟ್ಟಾಡಿಸಿಕೊಂಡು ಬಂದು ಜನ ಸಾಮಾನ್ಯರ ಮೇಲೆ ತಮ್ಮ ಪ್ರತಾಪವನ್ನು ತೋರಿಸುತ್ತಿವೆ. ಕೈಯಲ್ಲಿ ಕೋಲು ಹಿಡಿದರೆ ಮತ್ತಷ್ಟು ಕೋಪಿತರಾಗಿ, ಗುಂಪು ಗುಂಪಾಗಿ ಬಂದು ದಾಳಿ ಮಾಡುತ್ತವೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮಾಂಸದ ಅಂಗಡಿ ಹಾಗೂ ಹೋಟೆಲ್ ಮಾಲೀಕರು ಹೊರ ಹಾಕುವ ತ್ಯಾಜ್ಯವೇ ಬೀದಿನಾಯಿಗಳ ಹಾವಳಿಗೆ ಕಾರಣವಾಗಿದೆ. ತಮಗೆ ಇಷ್ಟ ಬಂದ ರೀತಿ ರಸ್ತೆಗಳಲ್ಲಿ, ಚರಂಡಿಗಳಲ್ಲಿ ತ್ಯಾಜ್ಯವನ್ನು ಸುರಿದು ಹೋಗುತ್ತಾರೆ. ಇತ್ತ ನಾಯಿಗಳು, ಆಹಾರಕ್ಕಾಗಿ ಬಂದು ಆಹಾರ ಸಿಗದೆ ಇದ್ದರೆ, ಮಕ್ಕಳು ಮತ್ತು ಮಹಿಳೆಯರ ಮೇಲೆ ದಾಳಿ ಮಾಡುತ್ತಿರುವ ಪ್ರಕರಣಗಳಿಗೆ ಹೋಟೆಲ್ ಮಾಂಸದ ಅಂಗಡಿ ಮಾಲೀಕರೇ ನೇರ ಕಾರಣವೆಂದು ಆರೋಪ ಮಾಡಿದರು.
ಬೀದಿ ನಾಯಿ ಹಾವಳಿಗೆ ಕಡಿವಾಣ ಹಾಕಲು ಪ್ರತಿ ಪಂಚಾಯಿತಿಗೊಂದು ಪಾರ್ಕ್ ವ್ಯವಸ್ಥೆ ಮಾಡಿ ಕಾನೂನಿನ ಪ್ರಕಾರ ಸಂತಾನಶಕ್ತಿ ಹರಣ ಚಿಕಿತ್ಸೆ ನೀಡಿ ಪ್ರಾಣವನ್ನು ರಕ್ಷಣೆ ಮಾಡುವ ಜೊತೆಗೆ ಜನ ಸಾಮಾನ್ಯರ ಆರೋಗ್ಯ ಜೀವವನ್ನು ಕಾಪಾಡಬೇಕು ಹಾಗೂ ನಾಯಿ ದಾಳಿಗೆ ತುತ್ತಾಗಿರುವ ಮಕ್ಕಳು ಮತ್ತು ಜನ ಸಾಮಾನ್ಯರಿಗೆ ತಾಲ್ಲೂಕು ಆಡಳಿತದಿಂದ ಚಿಕಿತ್ಸೆ ವೆಚ್ಚಕ್ಕಾಗಿ 1 ಲಕ್ಷ ಪರಿಹಾರ ನೀಡಬೇಕೆಂದು ಮನವಿ ಮೂಲಕ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ನಗರಸಭೆ ಪೌರಾಯುಕ್ತರಾದ ಶ್ರೀಧರ್ ರವರು ಈಗಾಗಲೇ ಬೀದಿನಾಯಿಗಳ ಹಾವಳಿಗೆ ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಸಂಬಂಧಪಟ್ಟಂತೆ ಸಮಸ್ಯೆ ಬಗೆ ಹರಿಸಲು ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ಶೀಘ್ರದಲ್ಲಿಯೇ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ತಾ.ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ಬಂಗಾರಿ ಮಂಜು, ರಾಜೇಶ್, ಸುನಿಲ್ಕುಮಾರ್, ಶ್ರೀನಿವಾಸ್, ಬಾಸ್ಕರ್, ಜುಬೇರ್ಪಾಷ, ವೇಣು, ಚಲಪತಿ, ಆನಂದರೆಡ್ಡಿ, ವಿಶ್ವ, ವಿಜಯ್ಪಾಲ್, ಮುಂತಾದವರು ಇದ್ದರು.
Day: September 14, 2024
ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಇವರ ವತಿಯಿಂದ ಕ್ಯಾನ್ಸರ್ ತಪಾಸಣಾ ಶಿಬಿರ
ಕುಂದಾಪುರ, ಸೆ.14; ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಇವರ ವತಿಯಿಂದ, ಇನ್ನರ್ ವಿಲ್ ತುಂದಾಪುರ ದಕ್ಷಿಣ. ರೋಟರಿ ಸಮುದಾಯ ದಳ ತಲ್ಲೂರು, ಪ್ರಾಥಮಿಕ ಅರೋಗ್ಯ ಕೇಂದ್ರ ಗಂಗೊಳ್ಳಿ ಕಥೋಲಿಕ್ ಸಭಾ ತಲ್ಲೂರು ಘಟಕ ಹಾಗೂ ಆರೋಗ್ಯ ಆಯೋಗ ತಲ್ಲೂರು ಚರ್ಚ್ ಇವರ ಅಶ್ರಯದಲ್ಲಿ, ಮಂಗಳೂರಿನ ಪ್ರಸಿದ್ಧ ಜುಲೇಖಾ ಯೆನೆಪೆÇೀಯ ಇನ್ಸಿಟ್ಯೂಟ್ ಆಫ್ ಒಂಕೋಲಜಿ ಆಸ್ಪತ್ರೆಯ ನುರಿತ ಅನುಭವಿ ವೈದ್ಯರಿಂದ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ತಲ್ಲೂರು ಇಗರ್ಜಿಯ ಸಭಾಂಗಣದಲ್ಲಿ ಸೆ.14ರಂದು ನಡೆಸಲಾಯಿತು.
ಚಿನ್ನಯಿ ಆಸ್ಪತ್ರೆಯ ವೈದ್ಯಾಧಿಕಾ ರೊ. ಡಾ. ಉಮೇಶ್ ಪುತ್ರನ್, ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ “ಇಂದು ನಮ್ಮ ಭಾರತ 3 ವಿಷಯಗಳಲ್ಲಿ ನಂಬರ್ ಒಂದನೇ ಸ್ಥಾನ ಪಡೆದಿದೆ, ಇದು ಉತ್ತಮ ವಿಚಾರಗಳಲ್ಲಿ ಅಲ್ಲ, ಒಂದು ಅಪಘಾತದಲ್ಲಿ ಸಾವನ್ನಪ್ಪುವವರ ಸಂಖ್ಯೆಯಲ್ಲಿ, ಇನ್ನೊಂದು ಮಧುಮೇಹ, ಮತ್ತೊಂದು ಕ್ಯಾನ್ಸ್ರ್ ಈ ವಿಷಯಗಳಿಗೆ ಭಾರತದ ರಾಜಾದಾನಿಗಳಾಗಿವೆ, ಇದೆಲ್ಲ ನಮ್ಮ ಉಪೇಕ್ಷೆಯ ಫಲ, ನಾವು ತಪಾಸಣೆಗೆ ಹಿಂಜರಿಯುತ್ತೇವೆ, ನಮಗೇನು ಇಲ್ಲಪ್ಪ ಅಂದು ಸುಮ್ಮನಾಗುತ್ತೇವೆ, ಕ್ಯಾನ್ಸರ್ ಕಾಯಿಲೆ ಮೊದಲೇ ಆರಂಭವಾಗಿದ್ದರೂ ನಮ್ಮ ಗೋಚರಕ್ಕೆ ಬರುವುದಿಲ್ಲ, ಅದು ನಮ್ಮ ದೇಹದಲ್ಲಿ ನಿಗೂಢವಾಗಿ ಬಹಳ ಹಿಂದಿನಿಂದಲೂ, ನಂತರ ಬಾಧಿಸಬಹುದು, ಈ ಗಡ್ಡೆಗಳು ಬೆಳೆಯಲು ಸಾಕಷ್ಟು ವರ್ಷಗಳು ತೆಗೆದುಕೊಳ್ಳುತ್ತವೆ, ಆದರಿಂದ ನಾವು ಮೊದಲೇ ತಪಾಸಣೆ ಮಾಡಿಕೊಂಡರೆ, ಹೆಚ್ಚಿನ ರೀತಿಯಲ್ಲಿ ಆಗಬಹುದಾದ ಅನಾಹುತಗಳನ್ನು ತಪ್ಪಿಸಬಹುದಾಗಿದೆ, ಹೆಂಗಸರಿಗೆ ಸ್ಥನ ಜ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್ ಮತ್ತು ಗಂಡಸರಿಗೆ ಬಾಯಿ ಕ್ಯಾನ್ಸರ್ ಹೆಚ್ಚಾಗಿ ಭಾದಿಸುತ್ತದೆ ’ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾದ ರೊ. ಡಾ. ಉತ್ತಮ್ ಕುಮಾರ್ ಶೆಟ್ಟಿ ಇವರು ಮಾತನಾಡಿ ‘ರೋಗ ಬಂದು ಚಿಕಿತ್ಸೆ ಮಾಡಿಕೊಳ್ಳುವುದಕಿಂತ ರೋಗ ಬರದ ರೀತಿ ಜೀವಿಸುವುದು ಉತ್ತಮ, ಕ್ಯಾನ್ಸರ್ ತಪಾಸಣಾ ಶಿಬಿರ ಒಂದು ಉತ್ತಮ ಕಾರ್ಯಕ್ರಮ ಒಂದು ವೇಳೆ ಕ್ಯಾನ್ಸರ್ ಬರುವ ಸಂದರ್ಭ ಹಾಗೂ ಕ್ಯಾನ್ಸರ್ ಆರಂಭ ಹಂತದಲ್ಲಿದೆ ಇದೆ ಎಂದು ತಿಳಿದರೆ ಅದನ್ನು ವಾಸಿ ಮಾಡಬಹುದು, ಅದಕ್ಕಾಗಿ ಇಂತಹ ಶಿಬಿರಗಳ ಅಗತ್ಯವಿದೆ’ ಎಂದು ತಿಳಿಸಿದರು.
ತಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಿರೀಶ್ ಎಸ್. ನಾಯಕ್ ‘ಇದೊಂದು ವೀಶೆಷ ಕಾರ್ಯಕ್ರಮ, ರಕ್ತದಾನ, ಅನ್ನದಾನ ಇಂತಹದೆಲ್ಲ ನಾವು ಮಾಡಬಹುದು, ಆದರೆ ಆರೋಗ್ಯ ದಾನ ಮಾಡಲಿಕ್ಕೆ ಆಗುವುದಿಲ್ಲ, ಆದರೆ ಆದರೆ ಆರೋಗ್ಯ ಸುಧಾರಿಸಿಕೊಳ್ಳಲು ಸಹಾಯ ಮಾಡಬಹುದು ಈ ಕಾರ್ಯಕ್ರಮ ಅಂತಹುದಾಗಿದೆ, ಇದನ್ನು ಹಮ್ಮಿಕೊಂಡ ರೋಟರಿ ಅಧ್ಯಕ್ಷರಿಗೆ ಮತ್ತು ಸಹಕಾರ ನೀಡಿದವರಿಗೆ ಶ್ಲಾಘಿಸಿದರು.
ಜುಲೇಖಾ ಯೆನೆಪೆÇೀಯ ಇನ್ಸಿಟ್ಯೂಟ್ ಆಫ್ ಒಂಕೋಲಜಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಎಸ್. ನೇಹ ಕಾರಂತ್ ಮಾತನಾಡಿದರು. ವೇದಿಕೆಯಲ್ಲಿ ಡಾ. ರಾಜೇಂದ್ರ ಶೆಟ್ಟಿ, ತಲ್ಲೂರು ಚರ್ಚಿನ ಪಾಲನ ಮಂಡಳಿ ಉಪಾಧ್ಯಕ್ಷರಾದ ಕೆಲ್ವಿನ್ ಮೆಂಡೊನ್ಸಾ ಮತ್ತು ಇತರರು ಉಪಸ್ಥಿತರಿದ್ದರು. ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಇದರ ಅಧ್ಯಕ್ಷೆ ರೊ. ಜೂಡಿತ್ ಮೆಂಡೊನ್ಸಾ ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ರೊ. ಸುರೇಖ ಪುರಾಣಿಕ್ ಕಾರ್ಯಕ್ರಮ ನಿರೂಪಿಸಿದರು. ಈ ಶಿಬಿರದ ಲಾಭವನ್ನು ಎಲ್ಲಾ ಸಮಾಜದವರು ಪಡೆದುಕೊಂಡರು.