ಕುಂದಾಪುರ, ಸೆ. 13: ಇಂದು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಆಸ್ಕರ್ ಫೆರ್ನಾಂಡೀಸ್ ಮೂರನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಜಯಕರ ಶೆಟ್ಟಿಯವರು ಮಾತನಾಡಿ , ಆಸ್ಕರ್ ಫೆರ್ನಾಂಡೀಸ್ ಕೇಂದ್ರದಲ್ಲಿ ಪ್ರಭಾವಿ ನಾಯಕರಾಗಿದ್ದರು ,ತಮ್ಮ ಸರಳ ವ್ಯಕ್ತಿತ್ವದಿಂದ ಜನಸಾಮಾನ್ಯರ ಅಗತ್ಯಗಳನ್ನು ಸ್ಪಂದಿಸುತ್ತಿದ್ದರು. ರೆಡ್ ಕ್ರಾಸ್ ಸಂಸ್ಥೆ ಕುಂದಾಪುರದಲ್ಲಿ ಪ್ರಾರಂಭಿಸುವಾಗ ಕೇಂದ್ರ ಸರ್ಕಾರದಿಂದ ಅನುದಾನವನ್ನು ನೀಡಿ ಪ್ರೋತ್ಸಾಹಿಸಿದ್ದು ಸ್ಮರಣೀಯವೆಂದರು.
ಅನೇಕ ಬಾರಿ ಮುಖ್ಯಮಂತ್ರಿ ಸ್ಥಾನ ದೊರಕುವ ಅವಕಾಶವಿದ್ದರೂ ನಿರಾಕರಿಸಿದ ಆಸ್ಕರಣ್ಣ, ಕರಾವಳಿ ಭಾಗದ ಅಭಿವೃದ್ಧಿಗೆ ಶ್ರಮಿಸಿದರು ಎಂದು ಅಕ್ರಮ ಸಕ್ರಮ ಸಮಿತಿಯ ಸದಸ್ಯರಾದ ಕೆದೂರು ಸದಾನಂದ ಶೆಟ್ಟಿ ಹೇಳಿದರು.
ನಾಯಕರಾದ ದಿನೇಶ್ ಹೆಗ್ಡೆಯವರು, ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷರಾದ ಶಿವರಾಮ ಶೆಟ್ಟಿ , ವಿಕಾಸ್ ಹೆಗ್ಡೆ ಆಸ್ಕರ್ ಫೆರ್ನಾಂಡೀಸ್ ಅವರ ರಾಜಕೀಯ ಜೀವನ ನಮಗೆಲ್ಲ ಮಾರ್ಗದರ್ಶಿ ಎಂದು ನೆನಪಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಅಧ್ಯಕ್ಷರಾದ ದೇವಕಿ ಸಣ್ಣಯ್ಯ, ಪುರಸಭೆ ಸದಸ್ಯರಾದ ಶ್ರೀಧರ ಶೇರಿಗಾರ್ ,ಪಂಚಾಯತ್ ಸದಸ್ಯರಾದ ಜಾನಕಿ ಬಿಲ್ಲವ, ವಿಜಯದರ್ ಕೆ ವಿ , ಗಣಪತಿ ಶೆಟ್, ರೋಷನ್ ಬರೆಟ್ಟೊ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಇಚ್ಚಿತಾರ್ಥ ಶೆಟ್ಟಿ ,ಇಂಟೆಕ್ ಅಧ್ಯಕ್ಷರಾದ ಚಂದ್ರ ಅಮೀನ್, ಗ್ಯಾರೆಂಟಿ ಅನುಷ್ಠಾನ ತಾಲೂಕು ಸಮಿತಿಯ ಸದಸ್ಯರಾದ ಅಭಿಜಿತ್ ಪೂಜಾರಿ , ಆಶಾ ಕರ್ವಾಲ್ಲೊ, ಮಾಜಿ ಜಿಲಾ ಪಂಚಾಯತ್ ಸದಸ್ಯರಾದ ರೇವತಿ ಶೆಟ್ಟಿ, ರಾಜ್ಯ ಐಟಿ ಸೆಲ್ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಸದಾನಂದ ಖಾರ್ವಿ, ಅಶೋಕ್ ಸುವರ್ಣ, ಕೇಶವ್ ಭಟ್, ರಕ್ಷಿತ್ ಶೆಟ್ಟಿ ,ಶೋಭಾ ಸಚ್ಚಿದಾನಂದ, ರಿಯಾಜ್ ಕೋಡಿ, ದಿನೇಶ್ ಬೆಟ್ಟ, ಲಕ್ಷ್ಮಣ ಬರೆಕಟ್ಟು ,ಜೋಸೆಫ್ ರೆಬೆಲ್ಲೊ, ವೇಣುಗೋಪಾಲ, ಮೇಬಲ್ ಡಿಸೋಜಾ, ಶಶಿಧರ, ಕೆಎಸ್ ವಿಜಯ, ಪ್ರೀತಮ್ ಕರ್ವಾಲ್ಲೊ , ದಿನೇಶ್ ಮೊಗವೀರ, ಜೂಲಿಯೆಟ್ ಪಾಯ್ಸ್ ,ಸಂಗೀತ ಇನ್ನಿತರರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಸ್ವಾಗತಿಸಿ, ನಿರೂಪಿಸಿದರು. ನಗರ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಶೆರೀಗಾರ್ ವಂದಿಸಿದರು.
Day: September 13, 2024
ಮೂಡ್ಲಕಟ್ಟೆ ಎಂ ಸಿ ನ್ ನಲ್ಲಿ ಓಣಂ ಆಚರಣೆ
ಕುಂದಾಪುರ ; ಮೂಡ್ಲಕಟ್ಟೆ ಎಂ ಸಿ ನ್ ನಲ್ಲಿ ಓಣಂ ಆಚರಣೆ ಸೆಪ್ಟೆಂಬರ್ 13ರಂದು ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ಆವರಣದಲ್ಲಿ ಓಣಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರು ದೀಪ ಬೆಳಗಿಸುವ ಮೂಲಕ ಓಣಂ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಓಣಂ ಹಬ್ಬದ ಸಾಂಪ್ರದಾಯಿಕ ನೃತ್ಯ, ಚಂಡೆ ವಾದ್ಯ,ಉಡುಗೆ ,ತೊಡುಗೆ ಹೂವಿನ ರಂಗೋಲಿ ಗಮನ ಸೆಳೆದಿದ್ದು ,ವಿದ್ಯಾರ್ಥಿನಿಯರು ಕುಣಿದು ಕುಪ್ಪಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆಯವರಾದ ಪ್ರೊ. ಜೆನ್ನಿಫರ್ ಫ್ರೀಡಾ ಮೆನೇಜಸ್, ಉಪ ಪ್ರಾಂಶುಪಾಲರಾದ ಶ್ರೀಮತಿ ರೂಪಶ್ರೀ ಕೆ ಎಸ್, ಐ ಎಂಜೇ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ. ರಾಮಕೃಷ್ಣ ಹೆಗಡೆ ಹಾಗೂ ಐಎಂಜಿಐಎಸ್ಸಿ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಪ್ರತಿಭಾ ಎಂ ಪಾಟೀಲ್, ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರು ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಕುಮಾರಿ ಸಿನ್ಸಿ ಸ್ವಾಗತಿಸಿ, ಕು.ಆಸಿಫ್ ವಂದಿಸಿದರು. ಕು.ತೆಸ್ಕಾ ಮತ್ತು ಕು.ನಿತ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಮಹತ್ವವನ್ನು ಶೆರಿಲ್ ಸಾರ, ಸೆಲಿನಾ ಹಾಗೂ ಗಾಯತ್ರಿ ವಿವಿಧ ಭಾಷೆಗಳಲ್ಲಿ ತಿಳಿಸಿದರು.
ಎಐಸಿಎಸ್ ಫುಟ್ಬಾಲ್ ಪಂದ್ಯಾವಳಿ- ಮಿಲಾಗ್ರೆಸ್ ಸೆಂಟ್ರಲ್ ಸ್ಕೂಲ್ ಚಾಂಪಿಯನ್ / AICS football Tournament- Milagres Central School Champion
ಮಂಗಳೂರಿನ ಅಶೋಕನಗರದ ಎಸ್ಡಿಎಂ ಶಾಲೆಯಲ್ಲಿ 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಎಐಸಿಎಸ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ದ.ಕ.ಜಿಲ್ಲೆಯಾದ್ಯಂತ ಸುಮಾರು 34 ಶಾಲಾ ತಂಡಗಳು ಭಾಗವಹಿಸಿದ್ದು, ಮಿಲಾಗ್ರೆಸ್ ಸೆಂಟ್ರಲ್ ಸ್ಕೂಲ್ ಅಂಡರ್-17 ಬಾಲಕರ ತಂಡವು ಅಂತಿಮವಾಗಿ ಕೆನರಾ ಸಿಬಿಎಸ್ಸಿ ಶಾಲಾ ಅಂಡರ್-17 ಬಾಲಕರ ತಂಡವನ್ನು ಸೊಲೀಸಿ ಎಐಸಿಎಸ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಮೂಡಿ ಬಂತು.
ತಂಡದ ನಾಯಕ AL-HAN ಶಾಲೆಯ ಅಂಡರ್-17 ಬಾಲಕರ ತಂಡಗಳ ನೇತೃತ್ವದ, ದೈಹಿಕ ನಿರ್ದೇಶಕ ಕೇಶವನಾಯಕ್ ಅವರ ಅಸಾಧಾರಣ ಕೌಶಲ್ಯ ಮತ್ತು ತಂಡದ ಸಮನ್ವಯದಿಂದ ಹೊರಹೊಮ್ಮಲು ಸಾಧ್ಯವಾಯಿತು, ಎರಡೂ ತಂಡಗಳು ತಮ್ಮ ಅತ್ಯುತ್ತಮ ಸಮನ್ವಯವನ್ನು ಪ್ರದರ್ಶಿಸಿ ಎದುರಾಳಿ ತಂಡಕ್ಕೆ ಕಠಿಣ ಸ್ಪರ್ಧೆಯನ್ನು ನೀಡಿದ್ದರು.
AICS football Tournament- Milagres Central School Champion
An exhilarating football match was held AICS Football tournament, D.K in boys under-17 category atSDM School Ashoknagar, Mangalore.
Around 34 School Team had participated all over the district, Milagres Central School Under-17 boys’ teamsecured champion against CanaraCbsc School Under-17 boys team of AICS Football tournament.
The captain of the team was AL-HAN School Under-17 boys teams led, Physical Director Mr KeshavaNaik displayed exceptional skill and team work to emerge victories Both the teams were coordinating their best to give tough competition to the opponent team.
ಕುಂದ ಕನ್ನಡ ಅಧ್ಯಯನ ಪೀಠಕ್ಕೆ 50 ಲಕ್ಷ ರೂ. ಬಿಡುಗಡೆ
ಕುಂದಾಪುರ, ಸೆ: ಮಂಗಳೂರು ವಿಶ್ವವಿದ್ಯಾಲಯದಲ್ಲಿನ ಕುಂದ ಕನ್ನಡ ಅಧ್ಯಯನ ಪೀಠ ಸ್ಥಾಪನೆಗಾಗಿ ಸರ್ಕಾರದಿಂದ ಮಂಗಳೂರು ವಿಶ್ವವಿದ್ಯಾಲಯಕ್ಕೆ 50 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎಂದು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಜುಡಿತ್ ಮೆಂಡೊನ್ಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದ ಕನ್ನಡ ಅಧ್ಯಯನ ಪೀಠ ಸ್ಥಾಪನೆಗಾಗಿ ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಅವರು ಈ ಹಿಂದೆ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯ ಮಾಡಿದ್ದಲ್ಲದೆ, ಅಧ್ಯಯನ ಪೀಠದ ಕಾರ್ಯಚಟುವಟಿಕೆಗಳನ್ನು ನಡೆಸಲು ಅನುಕೂಲವಾಗುವಂತೆ 1 ಕೋಟಿ ರೂ. ಅನುದಾನ ನೀಡುವಂತೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು 50 ಲಕ್ಷ ರೂ. ಬಿಡುಗಡೆ ಮಾಡಲು ಆದೇಶಿಸಿದ್ದರು.
ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ತಾಂತ್ರಿಕ ಶಿಕ್ಷಣ ಮತ್ತು ಯೋಜನೆಯ ಉಪಕಾರ್ಯದರ್ಶಿ ಎನ್.ಕುಮಾರ ಅವರು ಸಹಿ ಮಾಡಿರುವ ಆದೇಶ ಪತ್ರದಲ್ಲಿ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಒಟ್ಟು 850 ಲಕ್ಷ ರೂ. ಬಿಡುಗಡೆಗೊಳಿಲಾಗಿದ್ದು, ಅದರಲ್ಲಿ 50 ಲಕ್ಷ ರೂ. ಗಳನ್ನು ಕುಂದ ಕನ್ನಡ ಅಧ್ಯಯನ ಪೀಠಕ್ಕೆ ಮೀಸಲಿರಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷೇವಿಯರ್ ಐಟಿಐ ಅಸೈಗೋಳಿ ಇದರ ನೂತನ ಅಧ್ಯಕ್ಷರಾಗಿ ಆಲ್ವಿನ್ ಡಿಸೋಜ ಪಾನೀರ್ ರವರು ಆಯ್ಕೆ
ಕ್ಷೇವಿಯರ್ ಎಜುಕೇಶನ್ ಟ್ರಸ್ಟ್ (ರಿ.)1984 ರಲ್ಲಿ ಸಮಾಜದಲ್ಲಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗದ ಹಿಂದುಳಿದ ಮತ್ತು ಗ್ರಾಮಿಣ ಯುವಕರಿಗೆ ತಾಂತ್ರಿಕ ತರಬೇತಿ ನೀಡುವ ಉದ್ದೇಶ ದಿಂದ ಜಾತಿ ಮತ ಧರ್ಮ ಲೆಕ್ಕಿಸದೆ ಸಮಾಜದ ಉದ್ಧಾರಕ್ಕಾಗಿ ಸ್ಥಾಪನೆಗೊಂಡಿತು.
ಕ್ಷೇವಿಯರ್ ಟ್ರಸ್ಟ್ ವತಿಯಿಂದ 1984 ರಲ್ಲಿ ಮುಕ್ಕದಲ್ಲಿ ಕ್ಷೇವಿಯರ್ ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್ ( XITC )ಎಂದು ಸ್ಥಾಪನೆಗೊಂಡು. ತದನಂತರ 1992ರಲ್ಲಿ ಮುಕ್ಕದಿಂದ ಕೊಣಾಜೆ ಸಮೀಪದ ಅಸೈಗೋಳಿಗೆ ಸ್ಥಳಾಂತರಿಸಲಾಯಿತು. ಕ್ಸೇವಿಯರ್ ಐಟಿಐ ಸ್ಥಾಪನೆಯ.ಈ ಐಟಿಐ ಗೆ ಉದ್ಯೋಗ ಮತ್ತು ತರಬೇತಿ ಇಲಾಖೆ ಕರ್ನಾಟಕ ರಾಜ್ಯ ಸರ್ಕಾರ ಮತ್ತು ನ್ಯಾಷನಲ್ ಕೌನ್ಸಿಲ್ ಫಾರ್ ವೊಕೇಶ ನಲ್ ಟ್ರೈನಿಂಗ್ NCVT ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಭಾರತ ಸರ್ಕಾರ ನವ ದೆಹಲಿಯಿಂದ ಗುರುತಿಸಲ್ಪಟ್ಟಿದ್ದ ಈ ಸಂಸ್ಥೆಗೆ 40 ವರ್ಷ ತುಂಬು ವ ಈ ಶುಭ ಸಂದರ್ಭದಲ್ಲಿ 2024 ಸಪ್ಟೆಂಬರ್ 9 ತಾರೀಕಿನಂದು ನಡೆದ ಕ್ಷೇವಿಯರ್ ಟ್ರಸ್ಟ್(ರಿ) ಇದರ ಸಭೆಯಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷರು, All India Christian union ಇದರ ರಾಜ್ಯಧ್ಯಕ್ಷರು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮೈನೋರಿಟಿಯ ಅಧ್ಯಕ್ಷರಾಗಿ ಸಾಮಾಜಿಕ ರಾಜಕೀಯ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ತನ್ನನ್ನೆ ತಾನು ತೊಡಗಿಸಿಕೊಂಡವರಾಗಿದ್ದಾರೆ
ಶ್ರೀನಿವಾಸಪುರ ಜಿ.ಜಿ.ವೇಣು ಗ್ರೂಪ್ಸ್ ಇನ್ಸಿಟ್ಯೂಶನ್ ಶಾಲಾವರಣದಲ್ಲಿ ಪೈಲ್ಸ್ , ಫಿಷಲ್, ಫಿಸ್ತುಲಾ ಮೂಲ ವ್ಯಾಧಿಗೆ ಸಂಬಂದಿಸಿದ ಖಾಯಿಲೆಗಳಿಗಗಾಗಿ ಹೆಸರುವಾಸಿ ವೈದ್ಯರಿಂದ ಶಿಬಿರ
ಶ್ರೀನಿವಾಸಪುರ:ಪಟ್ಟಣದ ಜಿ.ಜಿ.ವೇಣು ಗ್ರೂಪ್ಸ್ ಇನ್ಸಿಟ್ಯೂಶನ್ ಶಾಲಾವರಣದಲ್ಲಿ ಇದೇ ತಿಂಗಳು 14 ರಂದು ಶನಿವಾರ ಬೆಳಗ್ಗೆ 10.00 ಗಂಟೆಯಿಂದ ಸಂಜೆ 5.00 ರ ವರೆಗೆ ಸ್ಮೈಲ್ಸ್ ಇನ್ಸಿಟ್ಯೂಟ್ ಆಫ್ ಗ್ಯಾಸ್ಟ್ರೋ ಎಂಟೆರೊಲೊಜಿ ಮತ್ತಕರೆ ಇವರ ಸಹಯೋಗದೊಂದಿಗೆ ಪೈಲ್ಸ್( ಮೊಳೆರೋಗ) ಫಿಷಲ್, ಫಿಸ್ತುಲಾ ಮೂಲ ವ್ಯಾಧಿಗೆ ಸಂಬಂದಿಸಿದ ಖಾಯಿಲೆಗಳಿಗಗಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿ ವೈದ್ಯರಾದ ಡಾ|| ಸಿ.ಎಂ.ಪರಮೇಶ್ವರ್ ರವರ ನೇತೃತ್ವದಲ್ಲಿ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿದೆ.ಆದ್ದರಿಂದ ಈ ಕ್ಷೇತ್ರದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಉಚಿತ ಆರೋಗ್ಯ ಶಿಬಿರದಲ್ಲಿ ಪಾಲ್ಗೋಂಡು ಸದುಪಯೋಗಪಡಿಸಿಕೊಳ್ಳಬೇಕೆಂದು ಕೋರಿದರು.
ಐಎಂಜೆ ಸಂಸ್ಥೆಗಳು ಮೂಡ್ಲಕಟ್ಟೆ, ವತಿಯಿಂದ ಶ್ರೀ ಗಣೇಶೋತ್ಸವ
ಡೈರಿಗಳಿಗೆ ಉತ್ಪಾದಕರು ಗುಣಮಟ್ಟ ಹಾಲು ಹಾಕಿದಾಗ ಮಾತ್ರ ಒಕ್ಕೂಟದಿಂದ ಸೌಲಬ್ಯಗಳು ನಿಮ್ಮ ಸಂಘಗಳಿಗೆ ದೊರೆಯುತ್ತವೆ – ಕೆ.ಎಂ.ಎಪ್ ಉಪ ವ್ಯವಸ್ಥಾಪಕ ಮುನಿರಾಜು
ಶ್ರೀನಿವಾಸಪುರ ಡೈರಿಗಳಿಗೆ ಉತ್ಪಾದಕರು ಗುಣಮಟ್ಟ ಹಾಲು ಹಾಕಿದಾಗ ಮಾತ್ರ ನಿಮ್ಮ ಹಾಲಿಗೆ ಪ್ರೋತ್ಸಾಹಧನ ಮತ್ತು ಬೋನಸ್ ಜೊತೆಗೆ ಒಕ್ಕೂಟದಿಂದ ಬರುವ ಎಲ್ಲಾ ಸೌಲಬ್ಯಗಳು ನಿಮ್ಮ ಸಂಘಗಳಿಗೆ ಶೀಘ್ರವಾಗಿ ದೊರೆಯುತ್ತವೆ, ಗುಣಮಟ್ಟ ಹಾಲು ಹಾಕಲು ಪ್ರತಿಯೊಬ್ಬ ಉತ್ಪಾದಕರು ದೃಢಮನಸ್ಸು ಮಾಡಬೇಕೆಂದು ಕೆ.ಎಂ.ಎಪ್ ಉಪ ವ್ಯವಸ್ಥಾಪಕ ಮುನಿರಾಜು ತಿಳಿಸಿದರು.
ತಾಲ್ಲೂಕಿನ ಆರಮಾಕಲಹಳ್ಳಿ ಚೌಡನಹಳ್ಳಿ, ಶೆಟ್ಟಿಹಳ್ಳಿ ಗ್ರಾಮಗಳ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ 2023-24 ನೇ ಸಾಲಿನ ವಾರ್ಷಿಕ ಸಾಮಾನ್ಯಸಭೆಗಳಲ್ಲಿ ಬಾಗವಹಿಸಿ ಮಾತನಾಡಿದ ಮುನಿರಾಜು ಆರಮಾಕಲಹಳ್ಳಿಯಲ್ಲಿ ಗ್ರಾಮದಲ್ಲಿ ಹಾಲಿನ ಗುಣಮಟ್ಟ ಚೆನ್ನಾಗಿದೆ ಪಣಸ ಚೌಡನಹಳ್ಳಿ ಗ್ರಾಮದ ಹಾಲುಉತ್ಪಾದಕರು ಮತ್ತಷ್ಟು ಗುಣಮಟ್ಟ ಹಾಲು ಡೈರಿಗೆ ಹಾಕಲು ಶ್ರಮಿಸಬೇಕು, ಶೆಟ್ಟಿಹಳ್ಳಿ ಸಂಘ ಗುಣಮಟ್ಟಕ್ಕೆ ಒತ್ತು ನೀಡಬೇಕು, ಗುಣಮಟ್ಟದಲ್ಲಿ ನಾವು ರಾಜಿ ಆಗುವುದಿಲ್ಲಾ ನಮ್ಮ ಒಕ್ಕೂಟದಿಂದ ಬರುವ ಸೌಲಬ್ಯಗಳು ನಿಮಗೆ ತಲುಪಿಸಲು ಸಿದ್ದರಾಗಿದ್ದೇವೆ, ಮ್ಯಾಟುಗಳು ಇತರೆ ಸಾಮಗ್ರಿಗಳು ಒಕ್ಕೂಟದ ಮಹಾಮಂಡಳಿ ಚುನಾವಣೆ ನಂತರ ಎಲ್ಲವೂ ನಿಮ್ಮ ಸಂಘಗಳಿಗೆ ತಲುಪಿಸುತ್ತೇವೆ, ಸಮಯ ಹತ್ತಿರ ಬಂದಿದೆ ಎಂದರು.
ಇದೇ ವೇಳೆಯಲ್ಲಿ ಸಂಘಗಳ ವಾರ್ಷಿಕ ವರದಿಯನ್ನು ಮೇಲ್ವಿಚಾರಕ ನರಸಿಂಹರಾಜು ಮಂಡಿಸಿದರು, ಆರಮಾಕಲಹಳ್ಳಿ ಸಂಘದಲ್ಲಿ ಉತ್ಪಾದಕರಿಗೆ ಬೋನಸ್ ಆಗಿ ಪ್ಲಾಸ್ಕ್ ಗಳನ್ನು ವಿತರಿಸಲಾಗಿದೆ,
ಈ ವೇಳೆಯಲ್ಲಿ ಆರಮಾಕಲಹಳ್ಳಿ ಅದ್ಯಕ್ಷ ಎನ್. ಮಂಜುನಾಥ್ ರೆಡ್ಡಿ, ಉಪಾದ್ಯಕ್ಷ ಎಂ. ವೆಂಕಟೇಶಪ್ಪ, ಕಾರ್ಯದರ್ಶಿ ನಾನಪ್ಪ, ಪಣಸಚೌಡನಹಳ್ಳಿ ಅದ್ಯಕ್ಷಿಣಿ ಲಕ್ಷ್ಮಮ್ಮ, ಉಪಾದ್ಯಕ್ಷ ಸಿ.ವಿ ನಾರಾಯಣರೆಡ್ಡಿ, ಕಾರ್ಯದರ್ಶಿ ಎಂ. ವೆಂಕಟೇಶ್, ಶೆಟ್ಟಿಹಳ್ಳಿ ಅದ್ಯಕ್ಷ ಟಿ.ರಾಮಚಂದ್ರಪ್ಪ, ಉಪಾದ್ಯಕ್ಷ ವಿ.ನರಸಿಂಹಪ್ಪ, ಕಾರ್ಯದರ್ಶಿ ಎಸ್.ವೈ ಸೋಮನಾಥ್, ಮೇಲ್ವಿಚಾರಕ ವಿನಾಯಕ್, ಸಂಘಗಳ ಹಾಲು ಪರೀಕ್ಷಕರು, ಸಹಾಯಕರು, ಹಾಗು ಎಲ್ಲಾ ಹಾಲು ಉತ್ಪಾದಕರು ಬಾಗವಹಿಸಿದ್ದರು.
ಶ್ರೀನಿವಾಸಪುರ – ಮೊದಲ ಬಾರಿಗೆ ಪುರಸಭಾ ವಾಣಿಜ್ಯ ಮಳಿಗೆಗಳ ಸಂಕೀರ್ಣದಲ್ಲಿ ಹಿಂದೂ ಮುಸ್ಲೀಂ ಬಾಂದವ ವ್ಯಾಪಾರಿಗಳಿಂದ ಗಣೇಶೋತ್ಸವ
ಶ್ರೀನಿವಾಸಪುರ: ಮೊಟ್ಟ ಮೊದಲಬಾರಿಗೆ ಪುರಸಭಾ ವಾಣಿಜ್ಯ ಮಳಿಗೆಗಳ ಸಂಕೀರ್ಣದಲ್ಲಿ ಹಿಂದೂ ಮುಸ್ಲೀಂ ಬಾಂದವ ವ್ಯಾಪಾರಿಗಳು ಗಣೇಶ ಮೂರ್ತಿಯನ್ನು ಪೂಜಿಸಿ ವಿಜೃಂಭಣೆಯಿಂದ ಮೆರವಣಿಗೆ ಮಾಡಿ ಜಲವಿಸರ್ಜನೆ ಮಾಡಿದರು.
ಇದೇ ಪ್ರಥಮಬಾರಿಗೆ ಪುರಸಭಾ ಮಾರುಕಟ್ಟೆ ವಾಣಿಜ್ಯ ಮಳಿಗೆಗಳ ಸಂಕೀರ್ಣ ವರ್ತಕರ ಸೇವಾ ಟ್ರಸ್ಟ್ ವತಿಯಿಂದ ಗೌರಿ ಗಣೇಶ ಹಬ್ಬದಪ್ರಯುಕ್ತ ವಿನಾಯಕನ ಮೂರ್ತಿಯನ್ನು ಆವರಣದಲ್ಲಿ 5 ದಿನಗಳು ಪೂಜಿಸಿ ಎಲ್ಲಾ ವರ್ತಕರು ಮತ್ತು ಮುಸ್ಲೀಂ ಬಾಂದವ ವ್ಯಾಪಾರಸ್ಥರು ಶಾಂತಿ ಸೌಹಾರ್ದತೆಯಿಂದ ಒಗ್ಗಟ್ಟಿನಿಂದ ಅಂಗಡಿಗಳನ್ನು ಮುಚ್ಚುವುದರಮೂಲಕ ಡೋಳ್ಳು ಕುಣಿತಗಳೊಂದಿಗೆ ಟ್ಯಾಕ್ಟರ್ ಮೂಲಕ ಗಣಪತಿಯನ್ನು ವಿಶೇಷ ಪುಷ್ಪ ಅಲಂಕಾರದೊಂದಿಗೆ ಭವ್ಯ ಮೆರವಣಿಗೆಯನ್ನು ಪಟ್ಟಣದ ಪ್ರಮುಖ ರಥಬೀದಿಗಳಲ್ಲಿ ಮೆರವಣಿಗೆ ಮಾಡಿ ಹೊರವಲಯದಲ್ಲಿ ಜಲ ವಿಸರ್ಜನೆ ಮಾಡಲಾಯಿತು.
ಈ ವೇಳೆಯಲ್ಲಿ ಪ್ರತಿನಿತ್ಯ ಗಣಪತಿ ದೇವರಿಗೆ ಪುಷ್ಪ ಅಲಂಕಾರ ತೀರ್ಥ ಪ್ರಸಾದ ಸೇವೆಯನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅದ್ಯಕ್ಷ ಸಿ.ಮುನಿಯಪ್ಪ, ನೀಲಟೂರು ಚಿನ್ನಪ್ಪ ರೆಡ್ಡಿ, ಚಲಪತಿ, ನಜೀರ್, ಚೊಕ್ಕರೆಡ್ಡಿ, ಪೂಲು ಶೀವಾರೆಡ್ಡಿ, ಪುರಸಭೆ ಮಾಜಿ ಸದಸ್ಯ ಆಂಜಪ್ಪ, ಕೃಷ್ಣ, ಆರ್.ಹರೀಶ್, ರಂಜಿತ್, ಶ್ರೀನಾಥ್, ಡೆಲ್ಲಿ, ಮೌಲ, ಅಪ್ಪೂರ್ ಶ್ರೀನಿವಾಸ್, ಅಲ್ಲಾ ಬಕಾಶ್, ಕಿರಣ್, ನವೀನ್, ಮಂಜು, ಚೇತನ್, ರಾದಾಕೃಷ್ಣ ಅನೇಕರು ಬಾಗವಹಿಸಿದ್ದರು.