ಶ್ರೀನಿವಾಸಪುರ ಪಟ್ಟಣದ ಹೊರವಲಯದ ಎನುಮೇರಪಲ್ಲಿ ಗ್ರಾಮದ ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯದ ಆರಣದಲ್ಲಿ ಸೋಮವಾರ ತಾಲೂಕು ವೃತ್ತ ನಿರತ ಛಾಯಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದವತಿಯಿಂದ ಇತ್ತೀಚಿಗೆ ಕರ್ನಾಟಕ ರಾಜ್ಯ ಛಾಯಗ್ರಾಹಕರ ಸಂಘದವತಿಯಿಂದ ಛಾಯ ವಿಭೂಷಣ ಪ್ರಶಸ್ತಿಯನ್ನ ಪಡೆದ ವಿಶ್ವನಾಥಸಿಂಗ್ ರವರನ್ನು ಸನ್ಮಾನಿಸಲಾಯಿತು.
ತಾಲೂಕು ಛಾಯಗ್ರಾಹಕರ ಸಂಘದ ಸದಸ್ಯರಾದ ವೇಣುಗೋಪಾಲರೆಡ್ಡಿ, ರಾಯಲ್ಪಾಡು ಅಶೋಕರೆಡ್ಡಿ, ರಘು , ಮಂಜು ಹಾಗು ಪದಾಧಿಕಾರಿಗಳು ಇದ್ದರು
Day: September 4, 2024
ಓದುವ ಅಭಿಯಾನ ಭಾಗವಹಿಸುವುದು ಕಡ್ಡಾಯವಾಗಿರುತ್ತದೆ ಬಿಆರ್ಸಿ ಕೆ.ಸಿ.ವಸಂತ ಕರೆ
ಶ್ರೀನಿವಾಸಪುರ : ತಾಲೂಕಿನ ಹೊಗಳಗೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಓದು ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕರ್ನಾಟಕ ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ1 ನೇ ತರಗತಿಯಿಂದ 7ನೇ ತರಗತಿಗೆ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಈ ದಿನ ಓದುವ ಅಭಿಯಾನ ಭಾಗವಹಿಸುವುದು ಕಡ್ಡಾಯವಾಗಿರುತ್ತದೆ ಬಿಆರ್ಸಿ ಕೆ.ಸಿ.ವಸಂತ ಕರೆ ನೀಡಿದರು.
ಸರ್ಕಾರದ ಆದೇಶದಂತೆ ನಡೆಯುವ ಈ ಕಾರ್ಯಕ್ರಮ ಉತ್ತಮವಾದ ಯೋಜನೆಯಾಗಿರುತ್ತದೆ ಈ ದಿನದಿಂದ 21 ದಿನಗಳ ಕಾಲ ವಿವಿಧ ರೀತಿಯ ಚಟುವಟಿಕೆಗಳನ್ನು ಆಧರಿಸಿ ಈ ಕಾರ್ಯಕ್ರಮ ನಡೆಯುವುದಾಗಿದೆ . ಈ ದಿನ ಪುಸ್ತಕ ಲೇಖನ ಗ್ರಂಥಾಲಯ ಪುಸ್ತಕಗಳನ್ನ ಓದುವ ಮುಖಾಂತರ ಈ ಕಾರ್ಯಕ್ರಮ ಉದ್ಘಾಟನೆ ಮಾಡುತ್ತಿರುವುದು ಶ್ಲಾಘನೀಯ ಕಥೆ ಕಟ್ಟುವುದು ಧಾರ್ಮಿಕ ಕಥೆ ಓದುವುದು ಗಣೇಶ ಚತುರ್ಥಿ, ಈದ್ ಮಿಲಾದ್ ಸಾರ್ವಜನಿಕ ಗ್ರಂಥಾಲಯ ಅಜ್ಜಿ ತಾತರ ಕಥೆಗಳು ಮನೆಯ ಹಿರಿಯರ ಕಥೆಗಳು ಚಿತ್ರಪಟದ ಕಥೆಗಳು ಅಭಿನಯದ ಕಥೆಗಳು ಪಾತ್ರ ಅಭಿನಯದ ಕಥೆಗಳು ಸ್ವರಚಿತ ಕಥೆಗಳು ಇವೆಲ್ಲವೂ ಸಹ ಈ 21 ದಿನಗಳ ಕಾಲದಲ್ಲಿ ರೂಡಿಸಿಕೊಂಡು ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕಾಗಿದೆ ಎಂದು ನುಡಿದರು .
ಮಕ್ಕಳಿಗೆ ಉತ್ತಮವಾದ ಓದು ಗಟ್ಟಿ ಓದು ವ್ಯಾಕರಣ ಬದ್ಧವಾಗಿ ಓದುವುದನ್ನು ಮಾದರಿಯಾಗಿ ತಿಳಿಸಿಕೊಟ್ಟರು .
ಬಿಐಆರ್ಟಿಐ ಅಧಿಕಾರಿ ಜಿ.ವಿ.ಚಂದ್ರಪ್ಪ, ಎಸ್ಡಿಎಂಸಿ ಅಧ್ಯಕ್ಷ ಶ್ರೀನಿವಾಸ್, ಮುಖ್ಯ ಶಿಕ್ಷಕರು ಎಸ್.ಪಿ.ವೆಂಕಟರತ್ನಮ್ಮ ಉಮಾದೇವಿ, ಶ್ರೀಲಕ್ಷ್ಮಿ ಹಾಗೂ ಶಾಲಾ ಸಿಬ್ಬಂದಿ ಶಾಲಾ ಮಕ್ಕಳು ಭಾಗವಹಿಸಿ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲು ಪ್ರಮಾಣ ವಚನ ನೀಡಲಾಯಿತು.
ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ. ಮಹಾಸಭೆ
ಉಡುಪಿ : ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ. ಉಡುಪಿ ಇದರ ಮಹಾಸಭೆಯು ಸಹಕಾರಿಯ ನೋಂದಾಯಿತ ಕಚೇರಿಯಲ್ಲಿ ಅಧ್ಯಕ್ಷರಾದ ಜೆಸಿಂತಾ ಡಿ ಸೋಜ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಹಕಾರಿಯ ಅಧ್ಯಕ್ಷರಾದ ಜೆಸಿಂತಾ ಡಿಸೋಜ ಮಾತನಾಡಿ, ನಮ್ಮ ಸಹಕಾರಿಯು ಅಭಿವೃದ್ಧಿ ಹೊಂದುತ್ತಿದ್ದು ತಮ್ಮೆಲ್ಲರ ಸಹಕಾರದಿಂದ ಈ ಮಟ್ಟಕ್ಕೆ ಬೆಳೆದಿದೆ ಎನ್ನಲು ನಮಗೆ ಸಂತೋಷವಾಗುತ್ತದೆ. ಮುಂದಿನ ಆರ್ಥಿಕ ವರ್ಷದಲ್ಲಿ ಹೊಸ ಯೋಜನೆಗಳಿಗೆ ಸದಸ್ಯರ ಸಹಕಾರವಿರಲಿ ಎಂದರು.
ಮಿಲಾಗ್ರಿಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ನೇರಿ ಕರ್ನೆಲಿಯೋ, ಸಾಮಾಜಿಕ ಕಾರ್ಯಕರ್ತ ಸ್ಟೀವನ್ ಕುಲಾಸೊ ಶುಭ ಹಾರೈಸಿದರು.
ದೇವರ ಸ್ತುತಿಯೊಂದಿಗೆ ಪ್ರಾರ್ಥನೆಯನ್ನು ಶಾಖಾ ಸಿಬ್ಬಂದಿಗಳು ನೆರವೇರಿಸಿದರೆ, ಉಪಾಧ್ಯಕ್ಷರಾದ ಅಜಯ್ ಕುಮಾರ್ ಸ್ವಾಗತಿಸಿದರು. ಲೆಕ್ಕ ಪರಿಶೋಧನಾ ವರದಿ ವಾಚನೆ ಮತ್ತು ನಿರೂಪಣೆಯನ್ನು ಮುಖ್ಯಕಾರ್ಯನಿರ್ವಾಹಕರಾದ ಜೀವನ್ ಡಿಸೋಜ ಇವರು ನೆರವೇರಿಸಿದರು. ಧನ್ಯವಾದವನ್ನು ನಿರ್ದೇಶಕರಾದ ಪ್ರಶಾಂತ್ ಕುಮಾರ್ ಇವರು ಸಲ್ಲಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಪ್ರಶಾಂತ್ ಕುಮಾರ್, ಜೂದ್ ನೆಲ್ಸನ್ ಡಿ ಸೋಜಾ, ಗುರುಚರಣ್ ನಾಯ್ಕ್, ರೋಹನ್ ಪ್ರಶಾಂತ್ ಕುಲಾಸೊ, ಪ್ರಶಾಂತಿ ಪ್ರಿಯಾ ಕ್ಯಾಸ್ತಲಿನೋ, ಸೀಮಾ, ಅಜಿತ್, ಸಿಬ್ಬಂದಿ ವರ್ಗದವರು ಹಾಗೂ ಸಹಕಾರಿಯ ಸದಸ್ಯರು ಉಪಸ್ಥಿತರಿದ್ದರು.
Fifth Day’s Novena at Our Lady of Health Minor Basilica, Harihara
Davanagere, Harihara, September 3, 2023 : Fifth day’s Novena at Our Lady of Health, Minor Basilica, Harihara, Davanagere District, Diocese of Shimoga, began at 5:30pm with Rosary, Procession and floral homages to Harihara Matha. Then Basilica’s Assistant Parish Priest Rev. Fr Richard Mascarenhas SJ led the Novena.
At 6:30pm Rev. Fr Robert D’Mello, Parish Priest of St. Sebastian’s Church, Soraba, Sagar, offered Holy Eucharist. He preached his homily on the theme: “Mother Mary is an inspiration for Priests”.
In his homily explained the who is a priest? What is his mission in the Church? What the strengths and weaknesses they have? How we have to work together in faith to build the body of Christ. He narrated the call of Mother Theresa how she responded the call given by God. He said that we need to work together in building up of the body of Christ.
Fr Alphonse Lobo, Fr Alvine Stanislaus, Fr Mathew, Fr Richard Mascarenhas SJ and other Priests concelebrated the Holy Eucharist.
After the Mass Rev. Fr Alvine Stanislaus led the benediction and priests prayed over the pilgrims. Rector Rev. Fr George K. A. thanked Fr Robert D’Mello for making available for the day’s Novena Mass.
Day 5: Holy Eucharist link: