HUMNABAD: Saint Mary English Medium School, Humnabad recently hosted a Fancy Dress competition for its pre-primary students to encourage creativity and build confidence. Children from different classes participated, presenting a range of imaginative costumes from fairytale characters to historical figures. The competition was judged on creativity, presentation, and costume relevance, with teachers cheering for the participants. The event fostered self-expression and teamwork, highlighting the vibrant spirit of the school community.
Day: August 31, 2024
ಯುವಜನರ ಆಯೋಗ ಗುಲ್ಬರ್ಗ ಧರ್ಮ ಕ್ಷೇತ್ರ-ವಿದ್ಯಾ ಜ್ಯೋತಿ ಶಾಲೆ ಹುಲಸೂರಿನಲ್ಲಿ ಯುವ ವಿದ್ಯಾರ್ಥಿ ಸಂಚಲನ ಕಾರ್ಯಕ್ರಮ
30/08/2024 ರಂದು ವಿದ್ಯಾ ಜ್ಯೋತಿ ಶಾಲೆ ಹುಲಸೂರಿನಲ್ಲಿ ಯುವ ವಿದ್ಯಾರ್ಥಿ ಸಂಚಲನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಾಯಣಿಯಾದ ಸಿಸ್ಟರ್ ಮೇಬಲ್ ರವರು ಎಲ್ಲರನ್ನು ಸ್ವಾಗತಿಸಿದರು ಈ ಒಂದು ಸಂಚಲನದ ಸಚೇತಕಿಯಾದ ಸಿಸ್ಟರ್ ಜೋಸ್ ಪಿನ್ ರವರು ಕಾರ್ಯಕ್ರಮದ ಬಗ್ಗೆ ವಿವರಿಸಿದ್ದರು ಯುವ ವಿದ್ಯಾರ್ಥಿ ಸಂಚಲನಾದ ನಿರ್ದೇಶಕರಾದ ಫಾದರ್ ಸಚಿನ್ ಕ್ರಿಸ್ಟಿ ರವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಒಟ್ಟು 99 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಒಂದು ತರಬೇತಿಯಲ್ಲಿ ಅನೇಕ ಕಾರ್ಯ ಚಟುವಟಿಕೆಗಳನ್ನು ಹಾಗೂ ಯುವ ವಿದ್ಯಾರ್ಥಿ ಸಂಚಲನದ ಅವಶ್ಯಕತೆಯನ್ನು ಫಾದರ್ ಸಚಿನ್ ಕ್ರಿಸ್ಟಿ ರವರು ವಿದ್ಯಾರ್ಥಿಗಳಿಗೆ ಮನಮುಟ್ಟುವ ಹಾಗೆ ಹೇಳಿದರು ಅದೇ ರೀತಿ ನವ ಸಮಾಜವನ್ನು ನಿರ್ಮಿಸುವಲ್ಲಿ ಯುವ ವಿದ್ಯಾರ್ಥಿ ಗಳು ಜವಾಬ್ದಾರಿಯನ್ನು ಹೊಂದಿದ್ದಾರೆ ಈ ಜವಾಬ್ದಾರಿಯನ್ನು ಜವಾಬ್ದಾರಿಯುತವಾಗಿ ನಡೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಅನೇಕ ಗುಂಪು ಚಟುವಟಿಕೆಗಳೊಂದಿಗೆ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು.
ಫಾದರ್ ಸಚಿನ್ ಕ್ರಿಸ್ಟಿ ನಿರ್ದೇಶಕರು ಯುವ ವಿದ್ಯಾರ್ಥಿ ಸಂಚಲನ, ಗುಲ್ಬರ್ಗ ಧರ್ಮ ಕ್ಷೇತ್ರ
ಭಂಡಾರ್ಕಾರ್ಸ್ ಪ್ರಥಮ ಪದವಿಯ ಬಿಸಿಎ ವಿದ್ಯಾರ್ಥಿಗಳಿಗಾಗಿ “ಬಿ.ಸಿ.ಎ ಕೋರ್ಸ್” ಪರಿಚಯ
ಕುಂದಾಪುರ: ಆಗಸ್ಟ್ 29ರಂದು ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಗಣಕಯಂತ್ರ ವಿಭಾಗ ಹಾಗೂ ಇನ್ಸ್ಟಿಟ್ಯೂಷನ್ ಇನ್ನೋವೆಷನ್ ಕೌನ್ಸಿಲ್ ಇವರ ಸಹಯೋಗದೊಂದಿಗೆ ಪ್ರಥಮ ಪದವಿಯ ಬಿಸಿಎ ವಿದ್ಯಾರ್ಥಿಗಳಿಗಾಗಿ “ಬಿ.ಸಿ.ಎ ಕೋರ್ಸ್ ಪರಿಚಯ ಎನ್ನುವ ಮಾಹಿತಿ ಮತ್ತು ಅವಕಾಶಗಳು” ಕಾರ್ಯಾಕ್ರಮವು ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಬಿಸಿಎ ಪದವಿಯ ಉಪಯುಕ್ತತೆ ಬಗ್ಗೆ ತಿಳಿಸಿದರು.
ಮುಖ್ಯ ಅತಿಥಿಯಾಗಿ
ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಸತ್ಯನಾರಾಯಣ ಅವರು ಉಪಸ್ಥಿತರಿದ್ದರು.
ಗಣಕಯಂತ್ರ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಗಣೇಶ್ ಕೆ ಅವರು ವಿದ್ಯಾರ್ಥಿಗಳಿಗೆ ಡೇಟಾ ಅನಾಲಿಟಿಕ್ಸ್ , ಅದರ ಪಠ್ಯಕ್ರಮ ಮತ್ತು ವೃತ್ತಿ ಅವಕಾಶಗಳ ಬಗ್ಗೆ ವಿವರಿಸಿದರು. ಕಂಪ್ಯೂಟರ್ ಸೈನ್ಸ್ ಉಪನ್ಯಾಸಕಿಯಾದ ಪ್ರೊಫೆಸರ್ ವಿಜಯಲಕ್ಷ್ಮಿ ಎನ್ ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮತ್ತು ಮಶಿನ್ ಲರ್ನಿಂಗ್ ಕೋರ್ಸ ಅವಶ್ಯಕತೆ ಹಾಗೂ ವಿವಿಧ ವೃತ್ತಿ ಅವಕಾಶಗಳ ಬಗ್ಗೆ, ಅಂತೆಯೇ ಇನ್ನೊರ್ವ ಉಪನ್ಯಾಸಕರಾದ ಪ್ರೊ. ಕೃಷ್ಣ ಅವರು ಸಾಮಾನ್ಯ ಬಿಸಿಎ ಕೋರ್ಸ್ ನ ಉಪಯುಕ್ತತೆ, ವಿಪುಲ ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕಿಯರಾದ ಶ್ರೀನಿಧಿ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ರೂಪ ಕೆ ಸ್ವಾಗತಿಸಿ, ಚಂದ್ರಕಲಾ ಸಕಲಾತಿ ಅವರು ವಂದಿಸಿದರು.
ಬೈಂದೂರು : ಅವೈಜ್ಞಾನಿಕ ರೀತಿಯಲ್ಲಿ ಬಸ್ ತಂಗುದಾಣ ಯೋಜನೆ -ಸಾರ್ವಜನಿಕರ ಆಕ್ರೋಶ
ಬೈಂದೂರು : ಸ್ಥಳೀಯ ಆಂಜನೇಯ ಸ್ವಾಮಿ ದೇವಸ್ಥಾನದ ಎದುರುಗಡೆ ಹಾಗೂ ಅಂಗಡಿ ಮಳಿಗೆಗಳನ್ನು ಹೊಂದಿರುವ ಇಕ್ಕಟ್ಟಾದ ಸ್ಥಳದಲ್ಲಿ ಅವೈಜ್ಞಾನಿಕ ಮಾದರಿಯಲ್ಲಿ ಬಸ್ ತಂಗುದಾಣ ನಿರ್ಮಾಣ ಯೋಜನೆಗೆ ಸ್ಥಳೀಯ ನಾಗರಿಕರಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಅಸಂಖ್ಯಾತ ಭಕ್ತರ ಶ್ರದ್ಧಾ ಕೇಂದ್ರವಾಗಿರುವ ಈ ಪರಿಸರ ತಂಗುದಾಣದ ನಿರ್ಮಾಣದಿಂದಾಗಿ ದೇವಸ್ಥಾನದ ಪಾವಿತ್ರ್ಯತೆಗೆ ಹಾಗೂ ಸ್ವಚ್ಛತೆಗೆ ಧಕ್ಕೆ ಯಾಗುವುದು ಅಲ್ಲದೆ ತೀರಾ ಇಕ್ಕಟ್ಟಾಗಿರುವ ಈ ಪರಿಸರ ಸದಾ ಜನ ಜಂಗುಳಿಯಿಂದ ಕೂಡಿರುವುದರಿಂದ ವಾಹನ ಸಂಚಾರಕ್ಕೂ ತೊಂದರೆಯಾಗುತ್ತಿದೆ. ಹಾಗಿರುವಾಗ ಇಲ್ಲಿ ಬಸ್ ತಂಗುದಾಣ ನಿರ್ಮಾಣವಾದರೆ ಅದರಿಂದ ಸಾರ್ವಜನಿಕರಿಗೆ ಅನುಕೂಲಕ್ಕಿಂತ ಆನಾನುಕೂಲವೇ ಜಾಸ್ತಿ ಎಂದಿರುವ ಸ್ಥಳೀಯರು, ಹಾಗೊಂದು ವೇಳೆ ತಂಗುದಾಣ ಅವಶ್ಯಕವೇ ಎಂದಾದರೆ ದೇವಸ್ಥಾನ ಆಸುಪಾಸಿನ 50 ಮೀಟರ್ ದೂರದಲ್ಲಿ ನಿರ್ಮಾಣವಾಗಲಿ ಎಂದು ಬೈಂದೂರು ತಹಶೀಲ್ದಾರರಿಗೆ ಮತ್ತು ಪಟ್ಟಣ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗೆ ಮನವಿ ಸಲ್ಲಿಸಲಾಗಿದೆ.