ಕುಂದಾಪುರ : ಪಡುಕೋಣೆಯಲ್ಲಿ ನಡೆದ ನಡೆದ ರಕ್ತದಾನ ಶಿಬಿರದಲ್ಲಿ ಕಥೋಲಿಕ್ ಸಭಾದ ಅಧ್ಯಕ್ಷರಾದ ವಿನಯ್ ಡಿ ಅಲ್ಮೇಡ ರವರು ಅಧ್ಯಕ್ಷತೆಯನ್ನು ವಹಿಸಿದ್ದರು ಉದ್ಘಾಟಕರಾಗಿ ಪಡುಕೋಣೆ ಚರ್ಚಿನ ಧರ್ಮ ಗುರುಗಳಾದ ಫಾದರ್ ಫ್ರಾನ್ಸಿಸ್ ಕರ್ನೆಲಿಯೋ ಕಾರ್ಯಕ್ರಮವನ್ನು ಉದ್ಘಾಟಿಸಿದರು ಮುಖ್ಯ ಅತಿಥಿಯಾಗಿ ರೆಡ್ ಕ್ರಾಸ್ ಸಂಸ್ಥೆಯ ಚೇರ್ಮನಾದ ಜೈಕರ್ ಶೆಟ್ಟಿ ಅವರು ಮತ್ತು ಡಾಕ್ಟರ್ ಸೋನಿ ಡಿಕೋಸ್ಟ ಆಗಮಿಸಿದ್ದರು ಗೌರವ ಉಪಸ್ಥಿತಿಯಾಗಿ ಆಗಮಿಸಿದ ರಾಜ್ಯ ಪ್ರಶಸ್ತಿ ವಿಜೇತ ಡಾಕ್ಟರ್ ಚಿಕ್ಕಮರಿ ಯವರಿಗೆ ಸನ್ಮಾನಿಸಲಾಯಿತು , ದಲಿತ ಸಂಘರ್ಷ ಸಮಿತಿ ನಾಡ ಸೇನಾಪುರ ಮತ್ತು ಚರ್ಚಿನ ಇತರ ಸಂಘಟನೆಗಳ ನೆರವಿನಿಂದ ನಡೆದ ಶಿಬಿರದಲ್ಲಿ ಒಟ್ಟು 49 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು ಶಾಂತಿ ಡಿ ಅಲ್ಮೆಡ ಅವರು ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ವಿನ್ಸೆಂಟ್ ಡಿಸೋಜ ರವರು ಧನ್ಯವಾದ ಅರ್ಪಿಸಿದರು.
Day: August 26, 2024
ವಿದ್ಯಾ ಅಕಾಡೆಮಿ ಮೂಡಲಕಟ್ಟೆಯಲ್ಲಿ ಹಲ್ಲಿನ ಆರೋಗ್ಯ ಕುರಿತು ಮಾಹಿತಿ ಕಾರ್ಯಾಗಾರ
ಕುಂದಾಪುರ : ವಿದ್ಯಾ ಅಕಾಡೆಮಿ ಮೂಡಲಕಟ್ಟೆಯಲ್ಲಿ ವಿದ್ಯಾರ್ಥಿಗಳಲ್ಲಿ ದಂತ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಶ್ರೀದೇವಿ ಡೆಂಟಲ್ ಕ್ಲಿನಿಕ್ನ ಡಾ. ಜಗದೀಶ್ ಜೋಗಿ ಕೋಟೇಶ್ವರ ಅವರಿಂದ ಮಾಹಿತಿಪೂರ್ಣ ಉಪನ್ಯಾಸ ಹಾಗೂ ದಂತ ಪರಿಶೀಲನೆ ಶಿಬಿರ ಆಯೋಜಿಸಲಾಯಿತು
ಈ ಸಂದರ್ಭ, ಡಾ. ಜಗದೀಶ್ ಜೋಗಿ ಅವರು ಬಾಯಿಗಾಸು, ಹಲ್ಲಿನ ಶ್ರದ್ಧೆ, ಹಾಗೂ ನಿತ್ಯದ ದಂತಚಿಕಿತ್ಸೆಯ ಮಹತ್ವದ ಬಗ್ಗೆ ವಿವರಣೆ ನೀಡಿದರು. ವಿದ್ಯಾರ್ಥಿಗಳಿಗೆ ಹಲ್ಲಿನ ಸ್ವಚ್ಛತೆಯ ಮೇಲೆ ಕೇವಲ ನಿತ್ಯದ ಶ್ರದ್ಧೆ ಮಾತ್ರವಲ್ಲದೆ, ಸಕ್ಕರೆ, ಚಾಕೊಲೇಟ್ಗಳು ಮತ್ತು ಶೀತ ಪಾನೀಯಗಳಂತಹ ಆಹಾರಗಳ ದುಷ್ಪರಿಣಾಮಗಳ ಬಗ್ಗೆ ಚರ್ಚೆ ಮಾಡಿದರು.
ಅವರ ಮಾರ್ಗದರ್ಶನದಲ್ಲಿ, ಪ್ರತಿಯೊಬ್ಬ ವಿದ್ಯಾರ್ಥಿಯ ಹಲ್ಲುಗಳನ್ನು ಪರಿಶೀಲಿಸಲಾಯಿತು, ಮತ್ತು ಕೆಲವು ವಿದ್ಯಾರ್ಥಿಗಳಿಗೆ ಪ್ರಾರಂಭದ ಹಲ್ಲಿನ ಸಮಸ್ಯೆಗಳು ಪತ್ತೆಯಾಗಿದ್ದು, ತಕ್ಷಣದ ಚಿಕಿತ್ಸೆಗಾಗಿಯು ಸಲಹೆ ನೀಡಲಾಯಿತು. ವಿದ್ಯಾರ್ಥಿಗಳು ಬಹಳ ಸಕ್ರಿಯವಾಗಿ ಭಾಗವಹಿಸಿದರು ಮತ್ತು ದಂತ ಚಿಕಿತ್ಸೆಯ ಬಗ್ಗೆ ತಮಗೆ ಮೂಡಿದ ಶಂಕೆಗಳನ್ನು ಡಾಕ್ಟರ್ರೊಂದಿಗೆ ಹಂಚಿಕೊಂಡರು.
ಕಾರ್ಯಾಗಾರದ ಕೊನೆಯಲ್ಲಿ ಡಾ.ಜಗದೀಶ್ ಜೋಗಿ ಅವರಿಗೆ ಶಾಲೆಯ ಪರವಾಗಿ ಧನ್ಯವಾದ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಎಲ್ಲಾ ಬೋಧಕ ಸಿಬ್ಬಂದಿ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಮದರ್ ತೆರೇಸಾ ಶಿಕ್ಷಣ ಸಂಸ್ಥೆಯಲ್ಲಿ ಬಾಲರಾಧೆ ಮತ್ತು ಬಾಲಗೋಪಾಲ ಸ್ಪರ್ಧೆ
ಶಂಕರನಾರಾಯಣ : ಇಲ್ಲಿನ ಮದರ್ ತೆರೇಸಾ ಎಜುಕೇಶನ್ ಟ್ರಸ್ಟ್ ಪ್ರವರ್ತಿತ ಮದರ್ ತೆರೇಸಾ ಮೆಮೋರಿಯಲ್
ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮುಂಜಾನೆ ಎಲ್ ಕೆ ಜಿ ಮತ್ತು ಯು ಕೆ ಜಿ ಹಾಗೂ ಅಪರಾಹ್ನ ಒಂದರಿಂದ ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಬಾಲರಾಧೆ ಮತ್ತು ಬಾಲಗೋಪಾಲ ಸ್ಪರ್ಧೆಯನ್ನು ಆಯೋಜಿಸಲಾಯಿತು
ಸ್ಪರ್ಧೆಯಲ್ಲಿ 90 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೃಷ್ಣ ರಾಧೆಯರ ವಿವಿಧ ವೇಷ ಭೂಷಣಗಳೊಂದಿಗೆ ಉಲ್ಲಾಸದಿಂದ ಪಾಲ್ಗೊಂಡರು ಬೆಣ್ಣೆ ಮಡಕೆಯೊಂದಿಗೆ ಶ್ರೀಕೃಷ್ಣನ
ಬಾಲ್ಯಲಿಲೆಗಳನ್ನು ವರ್ಣಿಸುವ ದೃಶ್ಯಾವಳಿಗಳು ನೋಡುಗರ ಮನ ಸೂರೆಗೊಳಿಸಿತು ಮುಂಜಾನೆ ನಡೆದ ಸ್ಪರ್ಧೆಯ ನಿರ್ಣಾಯಕರಾಗಿ ಕಿಶೋರಕುಮಾರ್ ಆರೂರು (ಯಕ್ಷಸಿರಿ ಶಂಕರನಾರಾಯಣ ) ಜಗದೀಶ್ ಬನ್ನಂಜೆ (ನೃತ್ಯಗಾರ,ಉಡುಪಿ ) ಪ್ರಿಯಾಂಕ ರಾವ್ (ಶಾಲೆಯ ಹಳೆ ವಿದ್ಯಾರ್ಥಿ) ಸಹಕರಿಸಿದರು ಅದೇರೀತಿ ಅಪರಾಹ್ನ ನಡೆದ ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ ಪೂಜಿತಾ ಆಚಾರ್ಯ ( ಖ್ಯಾತ ನೃತ್ಯಗಾರ್ತಿ ಮಂದಾರ್ತಿ ) ಪ್ರಿಯಾಂಕಾ ರಾವ್ (ಸಂಸ್ಥೆಯ ಹಳೆ ವಿದ್ಯಾರ್ಥಿ)
ಭಾರತಿ (ಖ್ಯಾತ ನೃತ್ಯಗಾರ್ತಿ ಬಾರಕೂರು )ಸಹಕರಿಸಿದರು
ವಿಜೇತರ ಯಾದಿ* :
ಎಲ್ ಕೆ ಜಿ ವಿಭಾಗ
ಬಾಲರಾಧೆ
1.ಮನ್ವಿಕಾ ಎಮ್ ಶೇಟ್ 2.ಆರಾಧ್ಯ ಕೆ 3.ಆಯೇಷಾ ಶಾಜ್ನಾ
ಬಾಲಗೋಪಾಲ
1.ಆಗಮ್ಯ ಶೆಟ್ಟಿ 2.ತನ್ವಿ ಶೆಟ್ಟಿ 3.ಅಮೋಘವರ್ಷ
ಯು ಕೆ ಜಿ ವಿಭಾಗ
ಬಾಲರಾಧೆ
1.ಸಮನ್ವಿ ಕುಲಾಲ್ 2.ಅದ್ವಿಕಾ ಡಿ 3.ಪೂರ್ವಿ
ಬಾಲಗೋಪಾಲ
1.ಆರವ್ ಎಸ್ ಪೂಜಾರಿ
2.ಪ್ರತ್ವಿಕ್ ಎಸ್ ಪೂಜಾರಿ 3.ಅಶ್ವಿಜ್
1ನೇ ತರಗತಿ ವಿಭಾಗ
ಬಾಲರಾಧೆ
1.ಐಶಾನಿ ಸಿ 2. ಆಶನಿ ಆರ್ ಹೆಗ್ಡೆ 3.ರಿಶಾನಿ ಶೆಟ್ಟಿ ಬಾಲಗೋಪಾಲ
1.ಅಚಿಂತ್ಯ ಕನ್ನಂತ 2.ಅಹನ್ ಆರ್
3.ಪ್ರಣೀತ್ ಕೆ ಅರೂರ್
2ನೇ ತರಗತಿ*ಬಾಲರಾಧೆ
1.ಅದ್ವಿತಿ ಸಿ 2.ಧನುಶ್ರೀ 3.ಸನ್ನಿಧಿ ಪಿ
ಬಾಲಗೋಪಾಲ
1.ರಿಷಿಕ್ ಆರ್ ಪೂಜಾರಿ 2.ಯುಕ್ತ ಬಿ ಭಟ್ 3.ಚಿರಂತ್ ಎಸ್ ದೇವಾಡಿಗ ಕ್ರಮವಾಗಿ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿರುತ್ತಾರೆ
ಮುಖ್ಯಶಿಕ್ಷಕ ರವಿದಾಸ್ ಶೆಟ್ಟಿ
ಪ್ರಾಸ್ತಾವಿಕ ನುಡಿಗಳನ್ನಾಡಿದರು
ಸಂಯೋಜಕಿ ಕುಸುಮಾ ಶೆಟ್ಟಿ, ಸಹ ಸಂಯೋಜಕಿ ಅಕ್ಷತಾ,ಸಹಶಿಕ್ಷಕರು, ಪಾಲಕರು ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.