ಕುಂದಾಪುರ, ಜು,27: ನಗರದ ಸೈoಟ್ ಮೇರಿಸ್ ಪದವಿ ಪೂರ್ವ ಕಾಲೇಜಿನಲ್ಲಿ ಬೇಳೂರಿನ ಸರಕಾರಿ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕರು, ಪರಿಸರ ಪ್ರೇಮಿ, ಬರಹಗಾರರು, ಹಲವು ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಗೌರವಾನ್ವಿತ ಉದಯ ಗಾಂವಕರ್ ರವರು ದಿನಾಂಕ 27 ಜುಲೈ ಶನಿವಾರದಂದು ಗಿಡ ನೆಡುವುದರೊಂದಿಗೆ ಹಾಗೂ ಗಿಡಕ್ಕೆ ನೀರನ್ನು ಎರೆಯುವುದರೊಂದಿಗೆ ಸಾಂಕೇತಿಕ ಪರಿಸರ ಹಾಗೂ ವಿಜ್ಞಾನ ಸಂಘಗಳ ಉದ್ಘಾಟನೆ ಮಾಡಿದರು.
ಅವರು ಸಭೆಯನ್ನು ಉದ್ದೇಶಿಸಿ ನಮಗೆ ಪರಿಸರದ ಬಗ್ಗೆ ಕಾಳಜಿ ಅಂತರ್ಗತ. ನಾವೆಲ್ಲ ನಮ್ಮ ಕೈಲಾದಷ್ಟು ಪರಿಸರದ ಮೇಲೆ ಆಗುವ ಅನಾಹುತಗಳನ್ನು ತಿರುವು ಮುರುವು ಗೊಳಿಸಲಿಕ್ಕೆ ಪ್ರಯತ್ನಿಸಬೇಕು. ನಾವು ನಮ್ಮಿಂದ ಪರಿಸರದ ಮೇಲಾಗುವ ಸಣ್ಣ ಸಣ್ಣ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು ಎನ್ನುತ್ತಾ ಪರಿಸರಕ್ಕೆ ಸಂಬಂಧಿಸಿದ ಅನೇಕ ವಿಚಾರಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ರೇಷ್ಮಾ ಫೇರ್ನಾಂಡಿಸ್ ರವರು ಉಪಸ್ಥಿತರಿದ್ದು, ಪರಿಸರದ ಕುರಿತು ಅನೇಕ ಮಾತುಗಳನ್ನು ತಿಳಿಸಿ ಶುಭ ಹಾರೈಸಿದರು. ವಿಜ್ಞಾನ ಹಾಗೂ ಪರಿಸರ ಸಂಘಗಳ ವಿದ್ಯಾರ್ಥಿ ಪ್ರತಿನಿಧಿಗಳಾದ ಹರ್ಷಿತ್ ಹಾಗೂ ಜುವೆಲ್ ಮೆಂಡೋನ್ಸಾ ರವರು ಉಪಸ್ಥಿತರಿದ್ದರು.
ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ, ಉಪನ್ಯಾಸಕ ನಾಗರಾಜ ಶೆಟ್ಟಿ ಸ್ವಾಗತಿಸಿದರು. ವಿಜ್ಞಾನ ಸಂಘದ ಸಂಯೋಜಕಿ ಹಾಗೂ ಗಣಿತ ಉಪನ್ಯಾಸಕಿ ಮಲ್ಲಿಕಾರವರ ಧನ್ಯವಾದದೊಂದಿಗೆ, ಆಂಗ್ಲ ಉಪನ್ಯಾಸಕಿ ಶಿಲ್ಪಶ್ರೀ ಯವರು ಕಾರ್ಯಕ್ರಮ ನಿರೂಪಿಸಿದರು.
Month: July 2024
ಕೂರಿಗೇಪಲ್ಲಿ ಗ್ರಾ.ಪಂ.ಅಧ್ಯಕ್ಷರಾಗಿ ಕಾಂಗ್ರೇಸ್ ಬೆಂಬಲಿತ ಯಲ್ಲಮ್ಮ ಅವಿರೋಧ ಆಯ್ಕೆ
ಶ್ರೀನಿವಾಸಪುರ : ಕೂರಿಗೇಪಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು ರಾಜೀನಾಮೆ ನೀಡಿ ತೆರವಾಗಿದ್ದ ಸ್ಥಾನಕ್ಕೆ ಜುಲೈ 26 ರಂದು ಚುನಾವಣೆ ನಡೆದಿದ್ದು ಕಾಂಗ್ರೇಸ್ ಬೆಂಬಲಿತ ಅಧ್ಯಕ್ಷರಾಗಿ ಯಲ್ಲಮ್ಮ ಜಯರಾಮ್ ರವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಕೂರಿಗೇಪಲ್ಲಿ ಗ್ರಾಮ ಪಂಚಾಯತಿಯಲ್ಲಿ ಒಟ್ಟು 12 ಸದಸ್ಯರಿದ್ದು ಕಾಂಗ್ರೇಸ್ ಬೆಂಬಲಿತ 11 ಜೆಡಿಎಸ್ ಬೆಂಬಲಿತ ಒಬ್ಬರು ಮಾತ್ರ ಸದಸ್ಯರಾಗಿರುವ ಕಾರಣ ಅಧ್ಯಕ್ಷರ ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಕೆ ಮಾಡಲಾಗಿದ್ದು ಚುನಾವಣಾಧಿಕಾರಿ ನಾರಾಯಣಸ್ವಾಮಿ ಅವಿರೋಧವಾಗಿ ಯಲ್ಲಮ್ಮ ಜಯರಾಮ್ ಆಯ್ಕೆಯಾಗಿದ್ದಾರೆಂದು ಘೋಷಣೆ ಮಾಡಿದರು ಉಪಾಧ್ಯಕ್ಷರ ಸ್ಥಾನಕ್ಕೆ ರಾಜೀನಾಮೆ ನೀಡದ ಕಾರಣದಿಂದಾಗೂ ಉಪಾಧ್ಯಕ್ಷರಾಗಿ ಶ್ರೀರಾಮರೆಡ್ಡಿಯವರೇ ಮುಂದುವರಿಯುತ್ತಿದ್ದಾರೆ.
ಈ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡರಾದ ಕೆ ಕೆ ಮಂಜುನಾಥ್ ಮಾತನಾಡಿ ನೂತನ ಅಧ್ಯಕ್ಷರಿಗೆ ಶುಭಾಶಯಗಳು ಕೋರಿ ಪಕ್ಷಾತೀತವಾಗಿ ಕೆಲಸ ಮಾಡಬೇಕು ಅರ್ಹ ಪಲಾನುಭವಿಗಳಿಗೆ ಸರ್ಕಾರ ದಿಂದ ಸಿಗುವ ಸೌಲಭ್ಯಗಳನ್ನು ಒದಗಿಸಿ ಗ್ರಾಮಗಳಲ್ಲಿನ ಮೂಲ ಭೂತ ಸೌಲಭ್ಯಗಳಿಗೆ ಹೆಚ್ಚು ಒತ್ತು ನೀಡಬೇಕೆಂದು ಸಲಹೆ ನೀಡಿದರು ನಂತರ ಮಾತನಾಡಿದ ದೊರಸ್ವಾಮಿರೆಡ್ಡಿ ಮಾತನಾಡಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾರ್ಗದರ್ಶನದಂತೆ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದೇವೆ ಎಲ್ಲಾ ಸದಸ್ಯರು ಯಾವುದೇ ಭಿನ್ನಮತ ಇಲ್ಲದೆ ಎಲ್ಲರ ಒಪ್ಪಿಗೆ ಪಡೆದು ಅವಿರೋಧವಾಗಿ ಆಯ್ಕೆಮಾಡಲಾಗಿದೆಯೆಂದರು.
ಈ ಸಂದರ್ಭದಲ್ಲಿ ಕೆ ಕೆ ಮಂಜುನಾಥ್, ದೊರಸ್ವಾಮಿ ರೆಡ್ಡಿ, ರವೀಂದ್ರಾರೆಡ್ಡಿ ಪಾತೂರು,ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ವಿಶ್ವನಾಥರೆಡ್ಡಿ,ಶಂಕರ, ನಾಗರಾಜ್,ರೆಡ್ದೆಪ್ಪ, ಬಿ ವಿ ರೆಡ್ದೆಪ್ಪ,ನಾಗರಾಜ್ ರೆಡ್ಡಿ,ಸದಸ್ಯರಾದ ನಾಗೇಶ್,ಶ್ರೀನಿವಾಸ್ ಆರ್,ಲಕ್ಷ್ಮಿದೇವಿ,ಶ್ರೀರಂಗಪ್ಪ,ಅನಿತಮ್ಮ,ವಿಜಯಲಕ್ಷ್ಮಿ, ನಾಗರಾಜ್,ಆದಿಲಕ್ಷ್ಮಮ್ಮ, ವೆಂಕಟಲಕ್ಷ್ಮಮ್ಮ, ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಮೇಶ್ ಕುಮಾರ್, ಡೇಟಾ ಆಪರೇಟರ್ ಸುಧಾಕರ್ ಚುನಾವಣಾ ಅಧಿಕಾರಿ ನಾರಾಯಣಸ್ವಾಮಿ, ರಾಯಲ್ಪಾಡು ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಯೋಗೇಶ್ ಯೋಗೇಶ್ ಹಾಗೂ ಸಾರ್ವಜನಿಕರು ಹಾಜರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದಡಿಯಲ್ಲಿ ವಿಶೇಷಚೇತನರಿಗೆ ಅಗತ್ಯ ಉಪಕರಣಗಳನ್ನು ವಿತರಣೆ ಮಾಡಲಾಯಿತು
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದಡಿಯಲ್ಲಿ ಶ್ರೀನಿವಾಸಪುರ ತಾಲ್ಲೂಕಿನ ಜಾಕೀರ್ ಹುಸೇನ್ ಮೊಹಲ್ಲದ ನಿವಾಸಿ ಸಕ್ಕರೆ ಕಾಯಿಲೆಯಿಂದ ಕಾಲನ್ನು ಕಳೆದುಕೊಂಡು ಬಳಲುತ್ತಿರುವ ಅತಾಉಲ್ಲಾಖಾನ್ರವರಿಗೆ ಧರ್ಮಸ್ಥಳ ಸಂಸ್ಥೆಯ ಬೆಂಗಳೂರು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶೀನಪ್ಪ ರವರಿಂದವೀಲ್ಚೇರ್ ವಿತರಣೆ ಮಾಡಿದರು.
ಈ ಸಂದರ್ಭ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಈಗಾಗಲೇ 88 ಮಂದಿ ವಿಶೇಷ ಚೇತನರಿಗೆ ವೀಲ್ಚೇರ್, ವಾಟರ್ ಬೆಡ್, ಯು ಶೇಪ್ ವಾಕರ್, ಕಮೋಡ್ಚೇರ್, ಆಕ್ಸಿಲರಿಕ್ರಚ್ಚಸ್ ಇನ್ನಿತರ ಉಪಕರಣಗಳನ್ನು ಸಂಸ್ಥೆಯು ಉಚಿತವಾಗಿ ನೀಡುತ್ತಿದ್ದು ವಿಶೇಷಚೇತನರಿದ್ದಲ್ಲಿ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದರು.
ಈ ಸಂಧರ್ಭಜಿಲ್ಲಾ ನಿರ್ದೇಶಕರಾದ ಪದ್ಮಯ್ಯ ಸಿ.ಹೆಚ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ನಾಗವೇಣಿರೆಡ್ಡಿ, ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ಕುಮಾರ್, ಮೇಲ್ವಿಚಾರಕರಾದಯಶೋಧ ಹಾಗೂ ಸೇವಾಪ್ರತಿನಿಧಿ ಉಮಾದೇವಿ, ಪುಷ್ಪಾವತಿಉಪಸ್ಥಿತರಿದ್ದರು
ದರೋಡೆ ಮಾಡಿದ ಮನೆಯ ಮಗುವನ್ನು ಎತ್ತಿಕೊಂಡು ಮುದ್ದಾಡಿ, ಮಹಿಳೆಯರ ಕಾಲಿಗೆ ನಮಸ್ಕರಿಸಿ , ಮಗುವನ್ನು ಚೆನ್ನಾಗಿ ನೋಡಿಕೊಳ್ಳಲು ಹೇಳಿ ಹೋದ ಕಳ್ಳರು!!
ಶ್ರೀನಿವಾಸಪುರ : ಒಂಟಿ ಮನೆ ಗುರಿಯಾಗಿಸಿಕೊಂಡು ದರೋಡೆ ಮಾಡಿರುವ ಖದೀಮರು, ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನಿನಲ್ಲಿ ಮನೆ ಕಟ್ಟಿಕೊಂಡು ಜೀವನ ಮಾಡುತ್ತಿದ್ದ ರಾಮಕೃಷ್ಣಪ್ಪ ಕುಟುಂಬ, ಮನೆಯಲ್ಲಿ ಇಬ್ಬರು ಮಹಿಳೆಯರು ಇದ್ದನ್ನು ಗಮನಿಸಿ ದರೋಡೆ ಮಾಡಿರುವ ಶಂಕೆ.
ಗೌನಿಪಲ್ಲಿ ಪೊಲೀಸ್ ಠಾಣಾವ್ಯಾಪ್ತಿಯ ತಾಡಿಗೋಲ್ ಕ್ರಾಸ್ ಬಳಿ ಪಿಸ್ತೂಲ್, ಲಾಂಗುಗಳು ತೋರಿಸಿ ಮನೆಯಲ್ಲಿ ದರೋಡೆ ಬುಧವಾರ ರಾತ್ರಿ 8 ಗಂಟೆ ಸಮಯದಲ್ಲಿ ನಡೆದಿದೆ. ಮನೆಯ ಯಜಮಾನ ರೇಷನ್ ತರಲು ಹೋಗಿದ್ದ ವೇಳೆ ಘಟನೆ, ನಾಲ್ವರು ದರೋಡೆಕೊರ ಬಂದಿರಬಹುದೆದು ಮಾಹಿತಿ ನೀಡಿದರು.
1 ತಾಳಿ,3 ಜೊತೆ ಓಲೆ,6 ಉಂಗುರ ,1 ನಕ್ಲೆಸ್, 55ಸಾವಿರ ಹಣ ಕಳ್ಳತನವಾಗಿದೆ ಎಂದು ಮಾಹಿತಿ ನೀಡಿದರು.
ದರೋಡೆ ಕೊರ ಮೃದುಬಾವನೆ !!
ಸೊಸೆ ಪವಿತ್ರ ಮಾತನಾಡಿ ಪತ್ರಿಕೆಯೊಂದಿಗೆ ಮಾತನಾಡಿ ಮನೆಯಲ್ಲಿ ಎಲ್ಲಾ ಪದಾರ್ಥಗಳನ್ನು ದರೋಡೆ ಮಾಡಿದ ನಂತರ ಮಗುವನ್ನು ಎತ್ತಿಕೊಂಡು ಮುದ್ದಾಡಿ , ನಂತರ ಕಾಲಿಗೆ ನಮಸ್ಕಾರ ಮಾಡಿ , ಮಗುವನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿ ಹೊರಟುಹೋದರು ಎಂದರು.
ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಮತ್ತೆ ಭೂ ಕುಸಿತ : ಕೆಲ ಕಾಲ ವಾಹನ ಸಂಚಾರ ಬಂದ್
ಸಕಲೇಶಪುರ : ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಇಂದು ಮತ್ತೆ ಭೂ ಕುಸಿತ ಉಂಟಾಗಿದೆ.
ಎತ್ತಿನಹಳ್ಳ ಪೈಪ್ ಲೈನ್ ಹಾದು ಹೋಗುವ ಹೆಗ್ಗದೆ ಕಪ್ಪಳ್ಳಿ ಮಧ್ಯದಲ್ಲಿ ಭೂ ಕುಸಿತವಾಗಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುವ ವಾಹನ ಸಂಚಾರದಲ್ಲಿ ಕೆಲ ಕಾಲ ವ್ಯತ್ಯಯ ಉಂಟಾಗಿತ್ತು. ತಕ್ಷಣವೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಜೆಸಿಬಿ ಸ್ಥಳಕ್ಕೆ ಆಗಮಿಸಿ ರಸ್ತೆ ಮೇಲೆ ಬಿದ್ದಿದ್ದ ಮಣ್ಣನು ತೆರವುಗೊಳಿಸಿದ ನಂತರ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಗುರುಗಳಾದ ರೆ.ಫಾ.ಅಂಥೋನಿ ಪೀಟರ್ ಅವರ ಅಂತಿಮ ಯಾತ್ರೆ / Final Journey of Rev. Fr Anthony Peter, a Priest of Diocese of Shimoga
ಶಿವಮೊಗ್ಗ, ಜುಲೈ 26, 2024: ಶಿಕಾರಿಪುರದ ಸೇಂಟ್ ಥೆರೇಸಾ ಆಫ್ ಚೈಲ್ಡ್ ಜೀಸಸ್ ಚರ್ಚ್ನ ಪ್ಯಾರಿಷ್ ಧರ್ಮಗುರು ರೆ.ಫಾ.ಅಂಥೋನಿ ಪೀಟರ್ ಅವರ ಅಂತ್ಯಕ್ರಿಯೆಯು ಇಂದು ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್ನಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ನಡೆಯಿತು.
ಆಂಟನಿ ಪೀಟರ್ ಅವರು ಮಂಗಳವಾರ ಜುಲೈ 23 ರಂದು ಮಧ್ಯಾಹ್ನ ತಮ್ಮ ಪ್ಯಾರಿಷ್ ಶಿಕಾರಿಪುರಕ್ಕೆ ಹೋಗುವ ಮಾರ್ಗದಲ್ಲಿ ಚಿನ್ನಿಕಟ್ಟೆಯಲ್ಲಿ ರಸ್ತೆ ಅಪಘಾತಕ್ಕೊಳಗಾದರು. ಅವರು ಶಿವಮೊಗ್ಗದಿಂದ ಪ್ರಯಾಣಿಸುತ್ತಿದ್ದರು. ಆವರು ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಅವರ ಪಾರ್ಥಿವ ಶರೀರವನ್ನು ಬೆಳಗ್ಗೆ 7 ಗಂಟೆಗೆ ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್ಗೆ ಸಾರ್ವಜನಿಕರ ದರ್ಶನಕ್ಕೆ ತರಲಾಯಿತು. ಧರ್ಮಪ್ರಾಂತ್ಯದ ಯುವ ಸಂಚಾಲಕ ರೆ.ಫಾ.ಫ್ರಾಂಕ್ಲಿನ್ ಡಿಸೋಜ ಪಾರ್ಥಿವ ಶರೀರವನ್ನು ಸ್ವೀಕರಿಸಿ ಪ್ರಾರ್ಥನೆಯನ್ನು ನಡೆಸಿದರು. ಸನ್ನಿಧಿಯ ಸಂಚಾಲಕ ರೆ.ಫಾ.ರೋಶನ್ ಪಿಂಟೋ, ಎಸ್ಎಂಎಸ್ಎಸ್ಎಸ್ನ ಸಂಚಾಲಕ ರೆ.ಫಾ.ಪಿಯೂಸ್ ಡಿಸೋಜಾ, ಚೈತನ್ಯ, ಧರ್ಮಪ್ರಾಂತ್ಯ ಸಂಚಾಲಕ ಫಾ.ಅರುಣ್ ವೆನಿಲ್ ಡಿ’ಸಿಲ್ವಾ ಮತ್ತು ಲೊಯೊಲಾ ಆಂಗ್ಲ ಪ್ರೌಢಶಾಲೆಯ ಎಚ್ಎಂ ನೆಲ್ಸನ್ ಡಿಸೋಜ , ಉಪಸ್ಥಿತರಿದ್ದರು.
ಬೆಳಿಗ್ಗೆ 8 ಗಂಟೆಗೆ ಧರ್ಮಪ್ರಾಂತ್ಯದ ಬಿಷಪ್ ಅತಿ ವಂ. ಡಾ. ಫ್ರಾನ್ಸಿಸ್ ಸೆರಾವೊ ಎಸ್.ಜೆ. ಪಾರ್ಥಿವ ಶರೀರವನ್ನು ಆಶೀರ್ವದಿಸಿದರು.
ಬೆಳಗ್ಗೆ 10ಗಂಟೆಗೆ ಪವಿತ್ರ ಬಲಿದಾನ ಆರಂಭವಾಯಿತು. ಬಿಷಪ್ ಫ್ರಾನ್ಸಿಸ್ ಸೆರಾವೊ ಎಸ್.ಜೆ ಅವರು ಕಾರವಾರದ ಧರ್ಮಪ್ರಾಂತ್ಯದ ಬಿಷಪ್ ಡುಮಿಂಗ್ ಡಯಾಸ್, ಭದ್ರಾವತಿ ಧರ್ಮಪ್ರಾಂತ್ಯದ ಬಿಷಪ್ ಜೋಸೆಫ್ ಅರುಮಚದತ್, ಶಿವಮೊಗ್ಗ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಜೋಸೆಫ್ ಫೆಲಿಕ್ಸ್ ನೊರೊನ್ಹಾ, ಶಿಮೊಗದ ಧರ್ಮಪ್ರಾಂತ್ಯದ ಧರ್ಮಾಧಿಕಾರಿ ಫಾ. ಮತ್ತು ಕರ್ನಾಟಕದಾದ್ಯಂತ ಹೆಚ್ಚಿನ ಸಂಖ್ಯೆಯ ಧರ್ಮಗುರುಗಳು ಉಪಸ್ಥಿತರಿದ್ದರು.
ಕಾರವಾರ ಧರ್ಮಪ್ರಾಂತ್ಯದ ಬಿಷಪ್ ಡುಮಿಂಗ್ ಡಯಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು, ತೀರ್ಥಹಳ್ಳಿಯ ಅವರ್ ಲೇಡಿ ಆಫ್ ಲೂರ್ಡ್ಸ್ ಚರ್ಚ್ನ ಪ್ಯಾರಿಷ್ ಪ್ರೀಸ್ಟ್ ರೆ.ಫಾ.ವೀರೇಶ್ ವಿನ್ಸೆಂಟ್ ಮೊರಾಸ್ ಹೃದಯಸ್ಪರ್ಶಿ ಧರ್ಮೋಪದೇಶವನ್ನು ಬೋಧಿಸಿದರು. ಅವರು ತಮ್ಮ ಧರ್ಮೋಪದೇಶವನ್ನು Lk 24: 1-12 ಅನ್ನು ಆಧರಿಸಿ; “ಸತ್ತವರ ನಡುವೆ ಜೀವಂತವಾಗಿರುವವರನ್ನು ಏಕೆ ಹುಡುಕಬೇಕು?”. ಅವರು ಅದನ್ನು ಫಾದರ್ ಆಂಥೋನಿ ಪೀಟರ್ ಅವರ ಜೀವನಕ್ಕೆ ಸರಿತೂಗಿಸಿದರು ಮತ್ತು ಪುನರುತ್ಥಾನಗೊಂಡ ಕರ್ತನಾದ ಯೇಸು ಕ್ರಿಸ್ತನಲ್ಲಿ ನಾವು ಹೊಂದಿರುವ ಭರವಸೆಯ ಕುರಿತು ಮಾತನಾಡಿದರು.
ದಿವ್ಯ ಬಲಿಪೂಜೆಯ ಕೊನೆಯಲ್ಲಿ ವಂದನೀಯ ಫಾದರ್ ಸ್ಟೀವನ್ ಡೆಸಾ ಶ್ಲಾಘನೆಗೈದರು. ವಂದನೀಯ ಫಾ.ಅಂತೋನಿ ಪೀಟರ್ ರವರ ಸಹೋದರ ಶ್ರೀ ಮ್ಯಾನುಯೆಲ್ ಕುಟುಂಬದ ಪರವಾಗಿ ಮಾತನಾಡಿದರು. ಅವರು ಬಿಷಪ್ ಫ್ರಾನ್ಸಿಸ್ ಸೆರಾವೊ ಎಸ್ಜೆ, ಧರ್ಮಗುರುಗಳು ಮತ್ತು ಧಾರ್ಮಿಕ ಹಾಗೂ ನಿಷ್ಠಾವಂತರು ಅಂತ್ಯಕ್ರಿಯೆ ಸಮಾರಂಭಕ್ಕೆ ಧನ್ಯವಾದ ಹೇಳಿದರು.
ಧರ್ಮಪ್ರಾಂತ್ಯದ ಪರವಾಗಿ ಬಿಷಪ್ ಫ್ರಾನ್ಸಿಸ್ ಸೆರಾವೋ ಎಸ್.ಜೆ. ಒಳ್ಳೆಯ ಹಾಗೂ ಸಮರ್ಪಣಾ ಮನೋಭಾವದ ಪುರೋಹಿತರನ್ನು ಕಳೆದುಕೊಂಡಿದ್ದೇವೆ ಎಂದರು. ಆವರು ಬಡವರ ಮತ್ತು ದೀನದಲಿತರ ಬಗೆಗಿನ ತನ್ನ ಪ್ರೀತಿಯಿಂದಾಗಿ, ಚರ್ಚ್ನ ಬಗೆಗಿನ ಎಲ್ಲಾ ಪ್ರೀತಿ ಬಹಳ ಎತ್ತರಕ್ಕೆ ನಿಲ್ಲುತ್ತದೆ
ಶರಾವತಿನಗರದ ಇನ್ಫೆಂಟ್ ಜೀಸಸ್ ಚರ್ಚ್ನ ಧರ್ಮಗುರು ರೆ.ಫಾ.ಬಿಜು ವಂದಿಸಿದರು. ವಂದನೀಯ ಫಾದರ್ ಅಲ್ಫೋನ್ಸ್ ನೆಲ್ಸನ್ ಡಿಸೋಜ ಕಾರ್ಯಕ್ರಮವನ್ನು ನಿರೂಪಿಸಿದರು.
ಅಂತ್ಯಕ್ರಿಯೆಯನ್ನು ಬಿಷಪ್ ಫ್ರಾನ್ಸಿಸ್ ಸೆರಾವೋ ಎಸ್.ಜೆ. ಬಿಷಪ್ ಡುಮಿಂಗ್ ಡಯಾಸ್ ಮತ್ತು ಹೆಚ್ಚಿನ ಸಂಖ್ಯೆಯ ಪುರೋಹಿತರು, ಧಾರ್ಮಿಕ ಮತ್ತು ನಿಷ್ಠಾವಂತರು ಕ್ಯಾಥೆಡ್ರಲ್ ಕ್ಯಾಂಪಸ್ನಲ್ಲಿರುವ ಧರ್ಮಗುರುಗಳ ಸ್ಮಶಾನದಲ್ಲಿ ಅವರ ಸಮಾಧಿಗೆ ಸಾಕ್ಷಿಯಾದರು.
ಫಾದರ್ ಆಂಥೋನಿ ಪೀಟರ್ ಅವರು 07.01.1973 ರಂದು ಜನಿಸಿದರು ಮತ್ತು 04.05.2004 ರಂದು ದೀಕ್ಷೆ ಪಡೆದರು. ಅವರು ಹಿರಿಯೂರಿನ ಅವರ್ ಲೇಡಿ ಆಫ್ ಅಸಂಪ್ಷನ್ ಚರ್ಚ್, ಸೇಂಟ್ ಥಾಮಸ್ ಚರ್ಚ್, ದಾವಣಗೆರೆಯ ಸಹಾಯಕ ಪ್ಯಾರಿಷ್ ಅರ್ಚಕರಾಗಿ ಸೇವೆ ಸಲ್ಲಿಸಿದರು. ನಂತರ ಅವರು ತಮ್ಮ ಉನ್ನತ ಅಧ್ಯಯನವನ್ನು ಮಾಡಿದರು ಮತ್ತು ಅರ್ಬನಿಯಾನಾ ವಿಶ್ವವಿದ್ಯಾಲಯ ರೋಮ್ನಲ್ಲಿ ಪ್ರಾರ್ಥನೆಯಲ್ಲಿ ಡಾಕ್ಟರೇಟ್ ಪಡೆದರು. ಅವರು ಕಾರೇಹಳ್ಳಿಯ ಸೇಂಟ್ ಅಂತೋನಿ ಪುಣ್ಯಕ್ಷೇತ್ರದ ಪ್ಯಾರಿಷ್ ಅರ್ಚಕರಾಗಿ 2017 ರಿಂದ 2023 ರವರೆಗೆ ಹರಿಹರದ ಮೈನರ್ ಬೆಸಿಲಿಕಾದ ಅವರ್ ಲೇಡಿ ಆಫ್ ಹೆಲ್ತ್ನಲ್ಲಿ ಸೇವೆ ಸಲ್ಲಿಸಿದರು. ಪ್ರಸ್ತುತ ಅವರು ಶಿಕಾರಿಪುರದ ಸೇಂಟ್ ಥೆರೇಸಾ ಆಫ್ ಚೈಲ್ಡ್ ಜೀಸಸ್ ಚರ್ಚ್ನ ಪ್ಯಾರಿಷ್ ಧರ್ಮಗುರುಗಳಾಗಿದ್ದರು. ಅವರಲ್ಲಿ ಶಿವಮೊಗ್ಗ ಧರ್ಮಪ್ರಾಂತ್ಯವು ಒಬ್ಬ ಉತ್ತಮ ಧರ್ಮಗುರುವನ್ನು ಕಳೆದುಕೊಂಡಿತು.
Final Journey of Rev. Fr Anthony Peter, a Priest of Diocese of Shimoga
Shivamogga, July 26, 2024: Funeral ceremony of Rev. Fr Anthony Peter, Parish Priest of St. Theresa of Child Jesus Church, Shikaripura held today at Sacred Heart Cathedral, Shivamogga at 10am today.
Rev. Fr Anthony Peter, met with an road accident on Tuesday 23rd July afternoon, at Chinnikatte on the way to his parish Shikaripura. He was travelling from Shivamogga. He died on the spot.
His mortal remains were brought to the Sacred Heart Cathedral, Shivamogga at 7am for the public homage. Rev. Fr Franklin D’Souza, Diocesan Youth Director received the body and led the prayer. Rev. Fr Roshan Pinto, Director of Sannidhi, Rev. Fr Pius D’Souza, Director of SMSSS – Chaitanya, Rev. Fr Arun Venil D’Silva, Procurator of the Diocese and Fr Nelson D’Souza, HM of Loyola English High School, were present.
At 8am Diocesan Bishop Most Rev. Dr Francis Serrao SJ blessed the body.
Holy Eucharist began at 10am. Bishop Francis Serrao SJ concelebrated Holy Eucharist with Bishop Duming Dias of Diocese of Karwar, Bishop Joseph Arumachadath of Diocese of Bhadravati, Msgr Joseph Felix Noronha, Vicar General of the Diocese of Shimoga, Rev. Fr Stephen Maxi Albuquerque, Chancellor of the Diocese of Shimoga and large number of Priests from all around Karnataka.
Bishop Duming Dias of Diocese of Karwar gave the introduction, Rev. Fr Veeresh Vincent Moras, Parish Priest of Our Lady of Lourdes Church, Tirthahalli, preached a heart touching sermon. He based his homily on Lk 24:1-12; “Why do look for the living among the dead?”. He connected it to the life of Fr Anthony Peter and spoke on the hope that we have in the Resurrected Lord Jesus Christ.
At the end of the Holy Eucharist Rev. Fr Steven D’Sa gave the Eulogy. Mr. Manuel Brother of Rev. Fr Anthony Peter spoke on behalf of the family. He thanked the Bishop Francis Serrao SJ, Priests and Religious as well as faithful gathered for the funeral ceremony.
Bishop Francis Serrao SJ spoke on behalf of the Diocese. He said that we have lost a good and dedicated Priest. He stands tall for his love for the Poor and the
downtrodden above all love for the Church.
Rev. Fr Biju, Parish Priest of Infant Jesus Church, Sharavathinagar proposed the vote of thanks. Rev. Fr Alphonse Nelson D’Souza Emceed the program.
Funeral rites were done by the Bishop Francis Serrao SJ. Bishop Duming Dias and large number of Priests, Religious and faithful witnessed his burial in Priests cemetery at Cathedral Campus.
Rev. Fr Anthony Peter was born on 07.01.1973 and was ordained on 04.05.2004. He served as Assistant Parish Priest of Our Lady of Assumption Church, Hiriyur, St. Thomas Church, Davanagere,. Then he did his Higher Studies & got his Doctorate in Liturgy in Urbaniana University Rome. He served as Parish Priest of St. Anthony’s Shrine, Karehalli, 2017 to 2023 he served at Our Lady of Health, Minor Basilica of Harihar. At Present he was the Parish Priest of St. Theresa of Child Jesus Church, Shikaripura. In him Diocese of Shimoga lost a good pastor.
ಜನರಿಗೆ ಜಾಗೃತಿಗೆ ಸರಿಯಾದ ಮಾಹಿತಿಗೆ ಮಾಧ್ಯಮ ಅಗತ್ಯ ಸಮಾಜದಲ್ಲಿನ ತಪ್ಪುಗಳನ್ನು ಹೊರತರಲು ಜೊತೆಯಾಗಿ ಕೆಲಸ ಮಾಡೋಣ – ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ
ಕೋಲಾರ,ಜು.26: ಜನರಿಗೆ ಜಾಗೃತಿ ಮೂಡಿಸಲು, ಸರಿಯಾದ ಮಾಹಿತಿ ತಲುಪಿಸಲು ಮಾಧ್ಯಮ ಬೇಕು. ಸಮಾಜದಲ್ಲಿನ ತಪ್ಪುಗಳನ್ನು ಹೊರತರಲು ಜೊತೆಯಾಗಿ ಕೆಲಸ ಮಾಡೋಣ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಶುಕ್ರವಾರ ಆಯೋಜಿಸಿದ್ದ ಸಂವಾದ ಮತ್ತು ಕೇಂದ್ರ ಸರ್ಕಾರ ಹೊಸದಾಗಿ ರೂಪಿಸಿರುವ ಭಾರತೀಯ ನ್ಯಾಯ ಸಂಹಿತೆ ಕುರಿತು ಪತ್ರಕರ್ತರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವ ಜನತೆಗೆ ತಿಳಿವಳಿಕೆ ಮೂಡಿಸುವುದು. 15 ದಿನಕ್ಕೊಮ್ಮೆ ಆರಕ್ಷಕರ ದಿನ ಆಚರಣೆ. ಮಾದಕ ವಸ್ತುಗಳ ಬಗ್ಗೆ ಶಾಲಾ ಕಾಲೇಜುಗಳಿಗೆ ತೆರಳಿ ಜಾಗೃತಿ ಮೂಡಿಸಲಾಗುವುದು. ಪ್ರಕರಣ ದಾಖಲಾದರೆ ಭವಿಷ್ಯದ ಮೇಲೆ ಯಾವ ರೀತಿ ಪರಿಣಾಮ ಉಂಟಾಗುತ್ತದೆ ಎಂಬುದರ ಬಗ್ಗೆ ತಿಳಿವಳಿಕೆ ಮೂಡಿಸಲಾಗುವುದು. ಪ್ರಾಥಮಿಕ ಶಾಲಾ ಮಕ್ಕಳನ್ನು ಠಾಣೆಗೆ ಕರೆಯಿಸಿ “ತೆರೆದ ಮನೆ” ಕಾರ್ಯಕ್ರಮ ನಡೆಸುವ ಮೂಲಕ ಅರಿವು ಮೂಡಿಸಲಾಗುವುದು ಎಂದರು.
ಮಹಿಳೆಯರು ಹಾಗೂ ಮಕ್ಕಳ ಮೇಲಿನ ಅಪರಾಧ ಸಂಬಂಧ ಸಮನ್ವಯ ಸಾಧಿಸಬೇಕು. ಈ ಸಂಬಂಧ ವಿವಿಧ ಇಲಾಖೆಗಳೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು. ಈಗಾಗಲೇ ಎರಡು ಸಭೆ ನಡೆದಿದೆ. ಮಹಿಳೆಯರು ಹಾಗೂ ಹಿರಿಯ ನಾಗರೀಕರಿಗೆ ಧೈರ್ಯ ತುಂಬುವುದು ನಮ್ಮ ಆದ್ಯತೆ. ದೂರು ಕೊಡಲು ಬರುವವರ ಮಾತು ಆಲಿಸಬೇಕು ನಂತರ ಕ್ರಮ ವಹಿಸಬೇಕೆಂದು ಹೇಳಿದರು.
ಬಿ.ಎನ್.ಎಸ್ ಬಗ್ಗೆ ಗೊತ್ತಿರಬೇಕು. ದೇಶದ ಯಾವುದೇ ಭಾಗದಲ್ಲಿ ಘಟನೆ ನಡೆದರೂ ಬೇರೆ ಯಾವುದೇ ಠಾಣೆಯಲ್ಲಿ ಪ್ರಕರಣ ದಾಖಲಿಸಬಹುದು. ಆದರೆ, ತನಿಖೆ ಮಾತ್ರ ಅದೇ ಠಾಣೆಯಲ್ಲಿ ನಡೆಯುತ್ತದೆ. ಆನ್ ಲೈನ್ ಮೂಲಕ ದೂರು ದಾಖಲಿಸಬಹುದು. ಆದರೆ, ಠಾಣೆಗೆ ಬಂದು ಇ ಸಿಗ್ನೇಚರ್ ಮಾಡಿದ ಮೇಲೆ ಎಫ್.ಐ.ಆರ್ ದಾಖಲಾಗುತ್ತದೆ ಎಂದು ವಿವರಿಸಿದರು.
ಏಳು ವರ್ಷದ ಮೇಲಿನ ಪ್ರಕರಣಗಳಲ್ಲಿ ವಿಡಿಯೊ ರೆಕಾರ್ಡ್ ಮಾಡಬಹುದು. ಹೀನಿಯಸ್ ಅಪರಾಧ ವಿಡಿಯೊ ರೆಕಾರ್ಡ್ ಮಾಡುತ್ತಿದ್ದೇವೆ. ನಮ್ಮಲ್ಲಿ ಪೈಲಟ್ ಕಾರ್ಯಕ್ರಮವಾಗಿ ಪರಿಗಣಿಸುತ್ತಿದ್ದೇವೆ.
7 ವರ್ಷದ ಕೆಳಗಿನ ಶಿಕ್ಷೆಯ ಪ್ರಮಾಣದ ಪ್ರಕರಣಗಳಿಗೆ ಬಂಧನ ಮಾಡಬೇಕಾದರೆ ಡಿಎಸ್ಪಿ ಅನುಮತಿ ಬೇಕಾಗುತ್ತದೆ. ಎಫ್.ಐ.ಆರ್ ಗೆ ಮೊದಲು 15 ದಿನ ಡಿಎಸ್ಪಿ ಪ್ರಾಥಮಿಕ ತನಿಖೆ ನಡೆಸಿ ಪ್ರಕರಣ ದಾಖಲಿಸುವ ಅವಕಾಶವೂ ಇದೆ ಎಂದು ಹೇಳಿದರು.
ರೇಪ್ ವಿಕ್ಟಿಮ್ ಗೆ ವೈದ್ಯಕೀಯ ಪರೀಕ್ಷೆಗೆ ಸಮಯ ನಿಗಧಿಪಡಿಸಿದ್ದಾರೆ. ಮಹಿಳಾ ವೈದ್ಯರೇ ಪರೀಕ್ಷೆ ನಡೆಸಬೇಕು. ಭದ್ರತಾ ದೃಷ್ಟಿಯಿಂದ ಈ ಕ್ರಮ ಕೈಕೊಳ್ಳಲಾಗಿದೆ. ಹಾಗೆಯೇ ಹಿರಿಯ ನಾಗರಿಕರು ಅಥವಾ ಮಹಿಳೆಯರಿಂದ ಹೇಳಿಕೆ ಪಡೆಯಲು ಅವರ ಮನೆಗೆ ಹೋಗಿ ಪಡೆಯಬಹುದು. ಹಿಂದೆ ಠಾಣೆಗೆ ಬರಬೇಕಿತ್ತು. ಭದ್ರತಾ ದೃಷ್ಟಿಯಿಂದ ಈ ಕ್ರಮ ವಹಿಸಲಾಗಿದೆ ಎಂದರು. ನ್ಯಾಯಾಲಯದಲ್ಲಿ ಈ ಅಂಶಗಳನ್ನು ಪ್ರಶ್ನೆ ಮಾಡಬಹುದು.
ಬಿ.ಎನ್.ಎಸ್ನಲ್ಲಿ ಶಿಕ್ಷೆ ಸಮುದಾಯ ಸೇವೆ ಮಾಡುವ ನಿಯಮ ತರಲಾಗಿದೆ. ಇದು ನ್ಯಾಯಾಲಯ ಕೊಡುತ್ತದೆ. ಅಪರಾಧಿ ಸುಧಾರಣೆಗೆ ಈ ನಿಯಮ ಜಾರಿ ಮಾಡಲಾಗಿದೆ. ಜಿಲ್ಲೆಯಲ್ಲಿ ಪೊಲೀಸರಿಗೆ 8 ಕಾರ್ಯಾಗಾರ ನಡೆಸಲಾಗಿದೆ. ಪತ್ರಕರ್ತರಲ್ಲದವರು ಪ್ರೆಸ್ ಎಂಬ ಫಲಕ ಹಾಕಿರುವ ಬಗ್ಗೆ ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದರು.
ಔಷಧಿ ಅಂಗಡಿ ಹೊರತುಪಡಿಸಿ ರಾತ್ರಿ 11 ಗಂಟೆಯೊಳಗೆ ಅಂಗಡಿಗಳನ್ನು ಮುಚ್ಚಬೇಕು ಎಂಬ ಆದೇಶದ ಬಗ್ಗೆ ಮಾಹಿತಿ ನೀಡಿ ಕೋಲಾರ ಜಿಲ್ಲಾ ಪತ್ರಕರ್ತರ ಸಂಘವು ಮಾದರಿ ಪತ್ರಕರ್ತರ ಸಂಘವಾಗಿದೆ. ಇಡೀ ರಾಜ್ಯದಲ್ಲಿ ಈ ರೀತಿಯ ಕಾರ್ಯಕ್ರಮ ಎಲ್ಲೂ ನೋಡಿಲ್ಲ. ಇಲ್ಲಿಯ ಜನರು ಪರಿಶ್ರಮಿಗಳು ಎಂದು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಡಿ.ಸಿ, ಸಿಇಒ, ಎಸ್.ಪಿ ಆಡಳಿತ ಆಧಾರ ಸ್ತಂಭಗಳು. ಭಾರತೀಯ ನ್ಯಾಯ ಸಂಹಿತೆ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತಿರಬೇಕು. ಪತ್ರಕರ್ತರು ಹಾಗೂ ಪೊಲೀಸರ ನಡುವೆ ಉತ್ತಮ ಬಾಂಧವ್ಯ ಇರಲಿ. ಪ್ರೆಸ್ ಸ್ಟಿಕರ್ ಕೊಡಿ. ದುರ್ಬಳಕೆ ಬೇಡ. ಪತ್ರಕರ್ತರಲ್ಲದ ಯಾರೋ ಯಾರೋ ಪ್ರೆಸ್ ಸ್ಟಿಕರ್ ಅಂಟಿಸಿಕೊಂಡಿರುತ್ತಾರೆ ಇದರ ಬಗ್ಗೆ ಗಮನ ವಹಿಸಬೇಕು ಎಂದರು.
ವೇದಿಕೆಯಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಎಸ್.ಗಣೇಶ್, ವಿ.ಮುನಿರಾಜು, ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಎ.ಜಿ.ಸುರೇಶ್ ಕುಮಾರ್ ಸೇರಿದಂತೆ ಪತ್ರಕರ್ತರು ಇದ್ದರು.
ಕೈಗಾರಿಕಾ ತರಬೇತಿ ಸಂಸ್ಥೆಗಳು (ಐ.ಟಿ.ಐ) ಹಾಗೂ ಜಿ.ಟಿ.ಟಿ.ಸಿ ಯಲ್ಲಿ ಲಭ್ಯವಿರುವ ಕೌಶಲ್ಯ ತರಬೇತಿ ಪಡೆದು ಉದ್ಯೋಗಸ್ಥರಾಗಲು ಜಿಲ್ಲಾಧಿಕಾರಿ ಅಕ್ರಂ ಪಾಷ ಕರೆ
ಕೋಲಾರ : ಎಸ್.ಎಸ್.ಎಲ್.ಸಿ ನಂತರ ಶೀಘ್ರದಲ್ಲಿಯೇ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಏನು ಮಾಡಬೇಕು ಎಂದು ಯೋಚಿಸುವ ಯುವಕ, ಯುವತಿಯರಿಗೆ ಅತಿ ಕಡಿಮೆ ಅವಧಿಯಲ್ಲಿ ಹಾಗೂ ಕಡಿಮೆ ಖರ್ಚಿನಲ್ಲಿ ತಾಂತ್ರಿಕ ಕೌಶಲ್ಯಗಳನ್ನು ಗಳಿಸಿಕೊಂಡು ಉದ್ಯೋಗಸ್ಥರಾಗಲು ಕೈಗಾರಿಕಾ ತರಬೇತಿ ಸಂಸ್ಥೆಗಳು ಹಾಗೂ ಜಿ.ಟಿ.ಟಿ.ಸಿ ಸಂಸ್ಥೆಗಳಲ್ಲಿ ಭೋದಿಸಲಾಗುತ್ತಿರುವ ಕೋರ್ಸ್ಗಳು ದಾರಿದೀಪಗಳಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜುಲೈ 22 ರಂದು ಜಿಲ್ಲೆಯ ಎಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆಗಳ ಹಾಗೂ ಜಿ.ಟಿ.ಟಿ.ಸಿ ಸಂಸ್ಥೆಯ ಪ್ರಾಂಶುಪಾಲರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡ ನಂತರ ನಡೆಸಲಾದ ಸುದ್ದಿ ಗೋಷ್ಟಿಯಲ್ಲಿ ಕೌಶಲ್ಯ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಜಿಲ್ಲೆಯಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು ಲಭ್ಯವಿದ್ದು, ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ ಜಿ.ಟಿ.ಟಿ.ಸಿ ಸಂಸ್ಥೆಗಳ ದಾಖಲಾತಿ ಪ್ರಕ್ರಿಯೆ ಈ ತಿಂಗಳದ ಅಂತ್ಯದವರೆಗೂ ನಡೆಯಲಿದ್ದು ಎಸ್.ಎಸ್.ಎಲ್.ಸಿ ಉತ್ತೀರ್ಣ, ಅನುತ್ತೀರ್ಣ ಹಾಗೂ ದ್ವಿತೀಯ ಪಿ.ಯು.ಸಿ ಅನುತ್ತೀರ್ಣರಾದ ಅಭ್ಯರ್ಥಿಗಳು ತಮಗೆ ಹತ್ತಿರವಾದ ಕೈಗಾರಿಕಾ ತರಬೇತಿ ಸಂಸ್ಥೆಯನ್ನು ದಾಖಲಾತಿಗಾಗಿ ಸಂಪರ್ಕಿಸಬಹುದು.
ಕೋಲಾರ ಜಿಲ್ಲೆಯಲ್ಲಿ 07 ಸರ್ಕಾರಿ ಐ.ಟಿ.ಐಗಳು, 06 ಅನುದಾನಿತ ಐ.ಟಿ.ಐಗಳು, 22 ಖಾಸಗಿ ಐ.ಟಿ.ಐಗಳು ಹಾಗೂ ಜಿಲ್ಲಾ ಕೇಂದ್ರದಲ್ಲಿ ಜಿ.ಟಿ.ಟಿ.ಸಿ ತರಬೇತಿ ಸಂಸ್ಥೆಯಿದ್ದು ಹಲವಾರು ವೃತ್ತಿ ಕೌಶಲ್ಯಗಳನ್ನು ಬೋಧಿಸಲಾಗುತ್ತಿದೆ ಎಂದು ತಿಳಿಸಿದರು. ಕೋಲಾರ ಜಿಲ್ಲೆಯ ಕೆ.ಜಿ.ಎಫ್ನಲ್ಲಿರುವ ಕೈಗಾರಿಕಾ ತರಬೇತಿ ಸಂಸ್ಥೆಯು 50 ವರ್ಷಗಳಗಿಂತ ಹೆಚ್ಚಿನ ಇತಿಹಾಸವನ್ನು ಹೊಂದಿದ್ದು, ಸುಮಾರು 16 ರೀತಿಯ 1 ವರ್ಷದ ಹಾಗೂ 2 ವರ್ಷದ ಅವಧಿಯ ಕೋರ್ಸ್ಗಳನ್ನು ಬೋಧಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಕೋಲಾರ, ಮುಳಬಾಗಿಲು, ದೇವರಾಯಸಮುದ್ರ, ರೋಣೂರು ಕ್ರಾಸ್, ದಳಸನೂರು, ಮಾಲೂರು ಹಾಗೂ ಕೆ.ಜಿ.ಎಫ್ ನಲ್ಲಿ ಸರ್ಕಾರಿ ಐ.ಟಿ.ಐಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿ ಈ ಎಲ್ಲಾ ಸಂಸ್ಥೆಗಳಲ್ಲಿ ಇನ್ನು ಹಲವಾರು ಸೀಟುಗಳು ಭರ್ತಿಯಾಗದೇ ಖಾಲಿ ಉಳಿದಿದ್ದು, ಈ ತಿಂಗಳ ಅಂತ್ಯದವರೆಗೆ ಲಭ್ಯವಿರುವ ಕಾಲಾವಧಿಯಲ್ಲಿ ಜಿಲ್ಲೆಯ ಯುವಕ, ಯುವತಿಯವರು ಹತ್ತಿರದ ಕೈಗಾರಿಕಾ ತರಬೇತಿ ಸಂಸ್ಥೆಯನ್ನು ದಾಖಲಾತಿಗಾಗಿ ಸಂಪರ್ಕಿಸಲು ಸೂಚಿಸಿದರು. ದಾಖಲಾತಿಯ ಅವಧಿ ಇನ್ನೂ 15 ದಿನಗಳಷ್ಟು ವಿಸ್ತರಿಸುವ ಸಾಧ್ಯತೆಗಳಿದೆಯೆಂದು ತಿಳಿಸಿದರು.
ಐ.ಟಿ.ಐ ತರಬೇತಿ ನಂತರ ಡಿಪ್ಲೋಮೋ, ಇಂಜಿನಿಯರಿಂಗ್ ಹಾಗೂ ಪದವಿ ಶಿಕ್ಷಣವನ್ನು ಮುಂದುವರೆಸಲು ಅವಕಾಶವಿರುತ್ತದೆ.
ಕೋಲಾರ ಜಿಲ್ಲೆಯ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ 2 ವರ್ಷ ಅವಧಿಯ ಕೋರ್ಸ್ಗಳಾದ ಎಲೆಕ್ನಿಷಿಯನ್, ಎಲೆಕ್ಟ್ರಾನಿಕ್ ಮೆಕಾನಿಕ್, ಫಿಟ್ಟರ್, ಮೆಶಿನಿಷ್, ಮೆಕಾನಿಕ್ ಮೋಟಾರ್ ವೆಹಿಕಲ್, ಟರ್ನರ್, ಟೂಲ್ & ಡೈ ಮೆಕಿಂಗ್, ಮುಂತಾದ ಕೋರ್ಸ್ಗಳು ಹಾಗೂ ಎಸ್.ಎಸ್.ಎಲ್.ಸಿ ಅನುತ್ತೀರ್ಣರಾದ ಅಭ್ಯರ್ಥಿಗಳಿಗೂ ಸಹ 1 ವರ್ಷದ ಕೋರ್ಸ್ಗಳಾದ ವೆಲ್ಡರ್ ಹಾಗೂ ವುಡ್ ವರ್ಕ್ ಟಿಕ್ನಿಷಿಯನ್ ಕೋರ್ಸ್ಗಳು ಲಭ್ಯವಿದೆ.
ಟಾಟಾ ಸಂಸ್ಥೆಯವರ ಸಹಯೋಗದಲ್ಲಿ ಕೈಗಾರಿಕೆ 4.0 ಕೌಶಲ್ಯಗಳುವುಳ್ಳ ಉದ್ಯೋಗ ಯೋಜನೆಯನ್ನು ಜಿಲ್ಲೆಯ 4 ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಪ್ರಾರಂಭಿಸಿದ್ದು, ಅತ್ಯಾಧುನಿಕ ಕೋರ್ಸ್ಗಳಾದ Advanced CNC Machining, Mechanic Electric Vehicle, Industrial Robotics & Digital Manufacturing ,ಗಳನ್ನು ಬೋಧಿಸಲಾಗುತ್ತಿದ್ದು, ಕೈಗಾರಿಕೆಗಳಿಗೆ ಪೂರಕವಾದ ತಾಂತ್ರಿಕ ತರಬೇತಿಯನ್ನು ನೀಡಲಾಗುತ್ತಿದೆ.
ಪ್ರಸ್ತುತ ಐ.ಟಿ.ಐಗಳಲ್ಲಿ ಡ್ಯೂಯಲ್ ಸಿಸ್ಟಮ್ ಆಫ್ ಟ್ರೈನಿಂಗ್ ಅನ್ನು ಆರಂಭಿಸಿದ್ದು, ತರಬೇತಿದಾರರು ತಮ್ಮ ಶೈಕ್ಷಣಿಕ ಅವಧಿಯಲ್ಲಿ ಅರ್ಧ ಕಾಲಾವಧಿಯನ್ನು ಕೈಗಾರಿಕೆಗಳಲ್ಲಿ ತರಬೇತಿ ಪಡೆದು ತರಬೇತಿ ಅವಧಿಯಲ್ಲಿಯೇ ಶಿಶುಕ್ಷು ವೇತನ ಪಡೆಯುವ ಸೌಲಭ್ಯವಿದೆ. ಅದೇ ರೀತಿ ಜಿ.ಟಿ.ಟಿ.ಸಿ ಕೋಲಾರ ಕೇಂದ್ರದಲ್ಲಿ ಡಿಪ್ಲೋಮೋ ಇನ್ ಟೂಲ್ & ಡೈ ಮೇಕಿಂಗ್, ಪ್ರಿಸಿಷನ್ ಮ್ಯಾನುಫ್ಯಾಕ್ಟರಿಂಗ್ ಹಾಗೂ ಎಲೆಕ್ಟಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಕೋರ್ಸ್ಗಳು ಲಭ್ಯವಿದ್ದು ಶೇಕಡ 100 ರಷ್ಟು ನೇಮಕಾತಿ ಅವಕಾಶಗಳಿವೆ ಎಂದು ತಿಳಿಸಿದರು.
ಐ.ಟಿ.ಐ ಹಾಗೂ ಇತರೆ ಕೌಶಲ್ಯ ಕೋರ್ಸ್ಗಳನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಪೂರೈಸಬಹುದಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಉಚಿತ ಟೂಲ್ ಕಿಟ್, ಸಮವಸ್ತ್ರ ಹಾಗೂ ಸ್ಟೇಷನರಿ ವಸ್ತುಗಳನ್ನು ನೀಡಲಾಗುತ್ತದೆ ಹಾಗೂ ಒಟ್ಟು ಸೀಟುಗಳಲ್ಲಿ ಶೇಕಡ 33 ರಷ್ಟು ಮಹಿಳಾ ತರಬೇತಿದಾರರಿಗೆ ಮೀಸಲು ಇರಿಸಲಾಗುತ್ತದೆ. ಐ.ಟಿ.ಐ ತೇರ್ಗಡೆಯಾದ ಅಭ್ಯರ್ಥಿಗಳು ನೇರವಾಗಿ ಕಾರ್ಖಾನೆಗಳಲ್ಲಿ ಉದ್ಯೋಗ ಪಡೆಯಬಹುದು ಅಥವಾ ಅಪ್ರೆಂಟಿಸ್ಶಿಪ್ ತರಬೇತಿ ಪಡೆದು ನಂತರ ಉದ್ಯೋಗಕ್ಕೆ ಸೇರ್ಪಡೆಯಾಗಬಹುದು ಎಂದು ತಿಳಿಸಿದರು.
ಕೋಲಾರ ಜಿಲ್ಲೆಯು ಬೆಂಗಳೂರಿನ ಸಮೀಪವಿದ್ದು, ರಸ್ತೆ, ರೈಲು ಹಾಗೂ ವಿಮಾನ ಸೇವೆ ಸೌಲಭ್ಯಗಳು ಹತ್ತಿರದಲ್ಲಿಯೇ ಲಭ್ಯವಿರುವುದರಿಂದ ಹಲವಾರು ಕೈಗಾರಿಕೆಗಳು ಕೋಲಾರ ಜಿಲ್ಲೆಯಲ್ಲಿ ಸ್ಥಾಪನೆಯಾಗಿದ್ದು, ಐ.ಟಿ.ಐ ಹಾಗೂ ಜಿ.ಟಿ.ಟಿ.ಸಿ ಕೋರ್ಸ್ ಪೂರೈಸಿರುವ ಅಭ್ಯರ್ಥಿಗಳಿಗೆ ಪ್ರತಿ ವರ್ಷವೂ ಸಾವಿರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿದ್ದು, ಜಿಲ್ಲೆಯ ಅಭ್ಯರ್ಥಿಗಳು ಜಿಲ್ಲೆಯಲ್ಲಿ ಲಭ್ಯವಿರುವ ತರಬೇತಿ ಸಂಸ್ಥೆಗಳಲ್ಲಿ ದಾಖಲಾಗಿ ಶೀಘ್ರದಲ್ಲಿಯೇ ಉದ್ಯೋಗ ಪಡೆಯುವ ಸದಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹದು.
ಕೋಲಾರ ಜಿಲ್ಲೆಯಲ್ಲಿ ಪ್ರಸಕ್ತ ನರಸಾಪುರ, ಮಾಲೂರು, ವೇಮಗಲ್ಗಳ ಕೈಗಾರಿಕಾ ಪ್ರದೇಶಗಳಲ್ಲಿ ಹಲವಾರು ಕೈಗಾರಿಕೆಗಳು ಸ್ಥಾಪನೆಯಾಗಿದ್ದು, ಸಾವಿರಾರು ಉದ್ಯೋಗ ಅವಕಾಶಗಳು ಲಭ್ಯವಿದ್ದು ಮುಂದಿನ ದಿನಗಳಲ್ಲಿ ಕೆ.ಜಿ.ಎಫ್ ಹಾಗೂ ಮುಳಬಾಗಿಲು ತಾಲ್ಲೂಕಿನಲ್ಲೂ ಹಲವಾರು ಬೃಹತ್ ಕೈಗಾರಿಕೆಗಳು ಸ್ಥಾಪನೆಯಾಗಲಿದ್ದು, ಬೆಂಗಳೂರು ನಗರವು ಸಹ ಕೋಲಾರಕ್ಕೆ ಹತ್ತಿರವಿರುವುದರಿಂದ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಕೌಶಲ್ಯ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಭವಿಷ್ಯದಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಈ ಸದವಕಾಶವನ್ನು ಬಳಸಿಕೊಂಡು ಜಿಲ್ಲೆಯ ಉದ್ಯೋಗಾಕಾಂಕ್ಷಿ ಯುವಕ, ಯುವತಿಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿರಬೇಕೆಂದು ಕರೆ ನೀಡಿದರು.
ಬ್ರಹ್ಮಾವರ ಎಸ್ ಎಮ್ ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ
ಬ್ರಹ್ಮಾವರ : ಎಸ್ ಎಮ್ ಎಸ್ ಪದವಿ ಪೂರ್ವ ಕಾಲೇಜು ಬ್ರಹ್ಮಾವರ , ಲಯನ್ಸ್ ಕ್ಲಬ್ ಬ್ರಹ್ಮಾವರ-ಬಾರ್ಕೂರ್, ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಹಾಗೂ ಜನೌಷಧಿ ಕೇಂದ್ರ ಬ್ರಹ್ಮಾವರ ಇವರ ಜಂಟಿ ಆಶ್ರಯದಲ್ಲಿ ಕಾಗಿ೯ಲ್ ಯುದ್ದ ವಿಜಯದ 25 ನೇ ವರ್ಷದ ಆಚರಣೆ ಅಂಗವಾಗಿ ಕಾರ್ಗಿಲ್ ವಿಜಯ್ ದಿವಸವನ್ನು ಎಸ್ ಎಮ್ ಎಸ್ ಪದವಿ ಪೂವ೯ ಕಾಲೇಜಿನ ಸಭಾಂಗಣದಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರೊ. ಮೇಜರ್ ರಾಧಾಕೃಷ್ಣ ಎಮ್ ಸಂಪನ್ಮೂಲ ವ್ಯಕ್ತಿಯಾಗಿ ಹಾಜರಿದ್ದು ,ಕಾಗಿ೯ಲ್ ಯೋಧರ ಶೌರ್ಯ ಮತ್ತು ಬಲಿದಾನಗಳ ಬಗ್ಗೆ ಹಾಗೂ ಭಾರತೀಯ ಸೇನೆಯಲ್ಲಿರುವ ಹುದ್ದೆ ಹಾಗೂ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪ್ರೊಫೇಸರ್ ಮೇಜರ್ ರಾಧಾಕೃಷ್ಣ ಎಮ್, ನಿವ್ರತ್ತ ಸೈನಿಕರಾದ ಭೂಸೇನೆಯ ಶ್ರೀ ಜಯರಾಮ ಶೆಟ್ಟಿ , ಬಿ.ಎಸ್.ಎಫ಼್ ನ ರಿಚರ್ಡ್ಡ್ ಫೆರ್ನಾಂಡಿಸ್ ಹಾಗೂ ವಾಯುದಳದ ಸ್ಟೀವನ್ ಡಿಸಿಲ್ವರವರನ್ನು ಸನ್ಮಾನಿಸಲಾಯಿತು .ಜೊತೆಯಲ್ಲಿ ಎನ್ ಸಿ ಸಿ ಅಧಿಕಾರಿಗಳಾದ ಶ್ರೀ ಜಿ ಬಾಲಕ್ರಷ್ಣ ಶೆಟ್ಟಿ ಮತ್ತು ಸೆಕೆಂಡ್ ಆಫೀಸರಾದ ಶ್ರೀ ವಿಷ್ಣುದಾಸ್ ಉಪಾಧ್ಯಾರವರನ್ನು ಗೌರವಿಸಲಾಯಿತು. ಪ್ರಾಂಶುಪಾಲರಾದ ಲಯನ್ ಐವನ್ ದೊನಾತ್ ಸುವಾರಿಸ್ ರವರು ಸ್ವಾಗತಿಸಿದರು. ಲಯನ್ ಅಧ್ಯಕ್ಷರಾದ ಲಯನ್ ಎಸ್ ಜಯರಾಮ ನಾಯಕ್ , ಜಯಂಟ್ಸ್ ಅಧ್ಯಕ್ಷರಾದ ಶ್ರೀ ಸುಂದರ ಪೂಜಾರಿ, ಜಯಂಟ್ಸ್ ಸಲಹಾ ಅಧಿಕಾರಿ ಶ್ರೀ ಮಧುಸೂಧನ್ ಹೇರೂರು, ಜಯಂಟ್ಸ್ ವಲಯ ಅಧಿಕಾರಿ ಶ್ರೀ ವಿಕ್ರಮ್ ಕಾಮತ್ ಮತ್ತು ಕಾರ್ಯದಶಿ೯ ಶ್ರೀ ಮಿಲ್ಟನ್ ಒಲಿವೆರಾ ಉಪಸ್ತಿತರಿದ್ದರು. ಉಪನ್ಯಾಸಕ ಶ್ರೀ ಸೀಸರ್ ಗೊನ್ಸಾಲ್ವಿಸ್ ವಂದಿಸಿ ,ಶ್ರೀ ಸಂತೋಷ್ ನೀಲಾವರ್ ನಿರೂಪಿಸಿದರು.