ರೋಗಗಳಿಗೆ ಪರಿಹಾರ ನೀಡುವ ಕರ್ತವ್ಯದೊಂದಿಗೆ ಜನ ಜಾಗೃತಿ ಮಾಡುವ ಕೆಲಸವನ್ನು ವೈದ್ಯರು ಮಾಡಬೇಕು. ಈ ಸೇವೆಯಿಂದ ಜನರ ಜೀವನದಲ್ಲಿ ಉತ್ಸಾಹ ಬೆಳೆಸಿದಂತಾಗುತ್ತದೆ. ಸಾಹಿತ್ಯ ರಚನೆ ಮೂಲಕ ಮಾಹಿತಿ ನೀಡುವುದು ಇವುಗಳಲ್ಲಿ ಒಂದು. ಇಂದು ಪೂರ್ಣ ಆರೋಗ್ಯವಂತನಾಗಿದ್ದೇನೆ ಎಂದು ಯಾರೂ ಹೇಳಿಕೊಳ್ಳುವ ಹಾಗಿಲ್ಲ. ಯಾವುದಾದರೊಂದು ದೈಹಿಕ, ಮಾನಸಿಕ ಸಮಸ್ಯೆ ಇರುತ್ತದೆ. ಸಮಸ್ಯೆ ಇದ್ದರೂ ಜೀವನದಲ್ಲಿ ಆಸಕ್ತಿ, ಉಲ್ಲಾಸ ಉಳಿಸಿಕೊಳ್ಳುವುದು ಬಹಳ ಮುಖ್ಯ. ಇಂತವರು ಉಳಿದವರಿಗಿಂತ ಆರೋಗ್ಯವಂತರಾಗಿರುತ್ತಾರೆ. ನಾನು ಹಲವು ವೈದ್ಯಕೀಯ ಮಾಹಿತಿ ಪುಸ್ತಕಗಳನ್ನು ಬರೆದು ವಿತರಿಸಿದ್ದೇನೆ. ಉತ್ತಮ ಸ್ಪಂದನ ದೊರೆತಿದೆ. ಡಾ| ಉಮೇಶ ಭಟ್ ಅವರು ಅಧ್ಯಯನಕ್ಕೆ ಯೋಗ್ಯವಾಗಿರುವ ಉತ್ತಮ ಇಂಗ್ಲೀಷ್ ಕಾದಂಬರಿ ಬರೆದಿದ್ದಾರೆ. ಆದರೆ ಅದನ್ನು ಕನ್ನಡಕ್ಕೆ ಭಾಷಾಂತರಿಸಿದರೆ ಹೆಚ್ಚು ಓದುಗರಿಗೆ ತಲುಪಲು ಸಾಧ್ಯವಾಗುತ್ತದೆ.” ಎಂದು ಖ್ಯಾತ ದಂತ ವೈದ್ಯಕೀಯ ತಜ್ಞ, ಲೇಖಕ, ಸಮಾಜ ಸೇವಕ ಡಾ| ಮುರಲೀಮೋಹನ್ ಚೂಂತಾರು ಹೇಳಿದರು.
ಕುಂದಾಪುರದ ಸರಕಾರಿ ಪ. ಪೂ. ಕಾಲೇಜಿನ ರೋಟರಿ ಲಕ್ಷ್ಮೀ ನರಸಿಂಹ ಕಲಾ ಮಂದಿರದಲ್ಲಿ ಕುಂದಾಪುರದ ಖ್ಯಾತ ಶಸ್ತç ಚಿಕಿತ್ಸಾ ತಜ್ಞ ಡಾ| ಉಮೇಶ ಭಟ್ ಬಿ. ಅವರ ಆಂಗ್ಲ ಕಾದಂಬರಿ “ಫುಟ್ಪ್ರಿಂಟ್ಸ್ ಆನ್ ದಿ ಸ್ಯಾಂಡ್ಸ್ ಆಫ್ ಟೈಮ್” ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘ಮಣಿಪಾಲ ಯುನಿವರ್ಸಲ್ ಪ್ರೆಸ್’ ಹಾಗೂ ‘ಕುಂದಪ್ರಭ’ ಸಂಸ್ಥೆ ಆಶ್ರಯದಲ್ಲಿ ನಡೆದ ಈ ಸಮಾರಂಭದಲ್ಲಿ ಮಣಿಪಾಲ ಯುನಿವರ್ಸಲ್ ಪ್ರೆಸ್ನ ಮ್ಯಾನೇಜಿಂಗ್ ಎಡಿಟರ್ ಅರವಿಂದ್ ಎನ್. ಅಧ್ಯಕ್ಷತೆ ವಹಿಸಿದ್ದರು.
ಕುಂದಾಪುರ ಚಿನ್ಮಯಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ, ಕುಂದಾಪುರ ಕ.ಸಾ.ಪ. ಅಧ್ಯಕ್ಷ ಡಾ| ಉಮೇಶ ಪುತ್ರನ್, ಶ್ರೀಮತಿ ಜಲಜಾ ತೋಳಾರ್ ಕುಂದಾಪುರ, ಶ್ರೀಮತಿ ಮಹಾಲಕ್ಷೀ ಡಾ| ಉಮೇಶ ಭಟ್ ಅವರ ಇಂಗ್ಲೀಷ್ ಕಾದಂಬರಿ ಬಿಡುಗಡೆ“ಜನ ಜಾಗೃತಿ”ಯೂ ವೈದ್ಯರ ಸೇವೆಯಾಗಬೇಕು-ಡಾ| ಮುರಲೀಮೋಹನ್ ಸೋಮಯಾಜಿ ಕೋಟ, “ಕೃತಿ ವಿಮರ್ಶೆ ಮಾಡಿ ಈ ಕೃತಿ ಪ್ರತಿಯೊಬ್ಬರೂ ಓದಲೇಬೇಕಾದ ಗುಣಗಳನ್ನು ಹೊಂದಿದೆ. ಬಹಳ ಆಸಕ್ತಿ ಮೂಡಿಸುತ್ತದೆ. ಚಿಂತನೆ ಮಾಡುವಂತೆ ಹೃದಯವನ್ನು ಕಲಕುತ್ತದೆ. ಉತ್ತಮ ವೈದ್ಯಕೀಯ ವಿಚಾರಗಳನ್ನು ತಿಳಿಸುತ್ತದೆ” ಎಂದರು.
ಕೆ.ಎಂ.ಸಿ. ಮಣಿಪಾಲದ ಪ್ರೊಫೆಸರ್ ಆಫ್ ಸರ್ಜರಿ ಡಾ| ರಾಜಗೋಪಾಲ ಶೆಣೈ ಹಾಗೂ ಮಲಕಾ ಕೆ.ಎಂ.ಸಿ. ಮೆಡಿಕಲ್ ಆಸ್ಪತ್ರೆ, ಮಲೇಷ್ಯಾದ ನಿವೃತ್ತ ಪ್ರೊಫೆಸರ್, ಸರ್ಜನ್ ಡಾ| ಸಂತೋಷ ಪೈ ಸಮಾರಂಭ ಉದ್ಘಾಟಿಸಿ, ಲೇಖಕ ಡಾ| ಉಮೇಶ ಭಟ್ ಅವರ ವೈದ್ಯಕೀಯ ಹಾಗೂ ಸಾಮಾಜಿಕ ಚಿಂತನೆಗಳನ್ನು ಕೊಂಡಾಡಿ ಶುಭ ಹಾರೈಸಿದರು.
ಡಾ| ಉಮೇಶ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಕಾದಂಬರಿ ಬರೆಯಲು ಪ್ರೇರಣೆ ನೀಡಿದ ಹಿನ್ನೆಲೆಗಳನ್ನು ವಿವರಿಸಿ, ಪ್ರಕಟಿಸುವ ಮುನ್ನ ಮಾರ್ಗದರ್ಶನ ನೀಡಿದ ಹಲವರನ್ನು ಅಭಿನಂದಿಸಿದರು. ಪುಸ್ತಕ ಪ್ರಕಟಿಸಿದ ‘ಮಣಿಪಾಲ ಯುನಿವರ್ಸಲ್ ಪ್ರೆಸ್’ ನೀಡಿದ ಪ್ರೇರಣೆಗೆ ಅಭಿನಂದನೆ ಸಲ್ಲಿಸಿದರು.
‘ಕುಂದಪ್ರಭ’ ಸಂಸ್ಥೆಯ ಅಧ್ಯಕ್ಷ ಯು. ಎಸ್. ಶೆಣೈ ಸ್ವಾಗತಿಸಿದರು. ಡಾ| ಬಿ. ವಿ. ಉಡುಪ, ಲೇಖಕ, ಡಾ| ಉಮೇಶ ಭಟ್ ಅವರನ್ನು ಪರಿಚಯಿಸಿದರು. ಸುಮನಾ ಹೇರ್ಳೆ ಕೋಟ, ಅತಿಥಿಗಳನ್ನು ಪರಿಚಯಿಸಿದರು. ಧಾರಿಣಿ ಕುಂದಾಪುರ ಸ್ವಾಗತ ಗೀತೆ ಹಾಡಿದರು.
ರೇಡಿಯೋ ಕುಂದಾಪ್ರ ಸಂಯೋಜಕಿ ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು. ಇಂಜಿನಿಯರ್ ರಮಾನಂದ ಕೆ. ವಂದಿಸಿದರು. ಎಚ್. ಸೋಮಶೇಖರ ಶೆಟ್ಟಿ ಸಹಕರಿಸಿದರು.
Month: July 2024
ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಆಟಿಡೊಂಜಿ ದಿನ ಕಾರ್ಯಕ್ರಮ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ನಡೆಸುತ್ತಿರುವ ಸಮಾಜಮುಖಿ ಕಾರ್ಯ ಎಲ್ಲರಿಗೂ ಮಾದರಿ – ಮುಂಡ್ಕೂರು ಸಾಯಿನಾಥ್ ಶೆಟ್ಟಿ
ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಸಂಘದ ಅಧ್ಯಕ್ಷ ಬೀರೊಟ್ಟು ದಿನೇಶ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಸಂಘದ 24ನೇ ವರ್ಷಾಚರಣೇ ಅಂಗವಾಗಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಸಭಾಂಗಣದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಜರಗಿತು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಶಿಕ್ಷಣ ಸಂಸ್ಥೆಯ ನಿವೃತ್ತ ಅಧ್ಯಾಪಕರಾದ ಮುಂಡ್ಕೂರು ಸಾಯಿನಾಥ್ ಶೆಟ್ಟಿ ಅವರು ತುಳು ಮಾತೆಯ ಭಾವಚಿತ್ರಕ್ಕೆ ಮಾಲಾರ್ಪಾಣೆ ಮಾಡಿ, ಪುಷ್ಪರ್ಚನೆ ಸಲ್ಲಿಸಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದವರು ತುಳುನಾಡಿನ ಆಟಿ ತಿಂಗಳಲ್ಲಿ ಹಿರಿಯರು ಆಚರಿಸಿಕೊಂಡು ಬಂದ ಸಂಪ್ರದಾಯ, ಆಚಾರ-ವಿಚಾರ, ವೈಜ್ಞಾನಿಕ ಸಂಗತಿ ಯುವ ಸಮುದಾಯಕ್ಕೆ ತಿಳಿಸಿಕೊಡುವ ಕಾರ್ಯ ಇಂತಹ ಆಚರಣೆಯಿಂದ ನಮ್ಮತನದ ಉಳಿವು ಸಾಧ್ಯ., ಗ್ರಾಮೀಣ ಭಾಗದಲ್ಲಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ನಡೆಸುತ್ತಿರುವ ಸಮಾಜಮುಖಿ ಕಾರ್ಯ ಎಲ್ಲರಿಗೂ ಮಾದರಿ ಎಂದರು.
ಕರ್ನಾಟಕ ಮತ್ತು ಮಹಾರಾಷ್ಟç ಧರ್ಮಶ್ರೀ ರಿಲೀಫ್ ಫೌಂಡೇಶನ್ನ ಸಂಸ್ಥಾಪಕರಾದ ಬೈಂದೂರು ನಾಗರಾಜ್ ಆರ್. ಸುವರ್ಣ ಅವರ ಉದ್ಯಮ ಕ್ಷೇತ್ರದ ಸಾಧನೆಗೆ ಉದ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ನ ಗೌರವಾಧ್ಯಕ್ಷರಾದ ಕುಂಟಲಗುಂಡಿ ರಾಜು ಶೆಟ್ಟಿ, ಕಾರ್ಯದರ್ಶಿ ವೀಣಾ ಪೂಜಾರಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಪದ್ಮಶ್ರೀ ಪೂಜಾರಿ ಮೊದಲಾದವರಿದ್ದರು.
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ನ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಕಾರ್ಯಕ್ರಮ ನಿರೂಪಿಸಿದರು, ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕಾಸರಬೈಲು ಸುರೇಶ್ ಸ್ವಾಗತಿಸಿದರು, ಪೂರ್ವಾಧ್ಯಕ್ಷ ಬೋಳ ಉದಯ ಅಂಚನ್ ಸನ್ಮಾನಿತರ ಪರಿಚಯ ವಾಚಿಸಿದರು, ಕಾರ್ಯಕ್ರಮ ನಿರ್ದೇಶಕಿ ಹರಿಣಿ ಪೂಜಾರಿ ವಂದಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳಿಗೆ ತುಳುನಾಡ ಶಾಲು ಹೊದಿಸಿ ವೀಳ್ಯದೆಲೆ-ಅಡಿಕೆ ನೀಡಿ ಸ್ವಾಗತಿಸಲಾಯಿತು, ಸ್ಮರಣಿಕೆ ಬದಲು ಗೆಂದಲಿ ಸೀಯಾಳ ನೀಡಿ ಅತಿಥಿಗಳನ್ನು ಗೌರವಿಸಲಾಯಿತು ನಂತರ ಸ್ಥಳೀಯ ಪ್ರತಿಭೆಗಳಿಂದ ಸಂಗೀತ ಕಾರ್ಯಕ್ರಮ ಜರಗಿತು.
ಬಾಯಲ್ಲಿ ನೀರೂರಿಸುವ ಆಟಿ ತಿಂಗಳ 33 ಬಗೆಯ ತಿನಸುಗಳು: ಬೆಲ್ಲ-ನೀರು, ಜೀರಿಗೆದ ಕಷಾಯ, ಕುಕ್ಕುದ ಉಪ್ಪಡ್, ನೆಲ್ಲಿಕಾಯಿದ ಉಪ್ಪಡ್, ಕುಡುತ ಚಟ್ನಿ, ತಿಮರೆ ಚಟ್ನಿ, ಪುನರೆ ಪುಳಿತ ಚಟ್ನಿ, ಕುಕ್ಕುದ ಚಟ್ನಿ, ಪದೆಂಗಿದ ಕೋಸಂಬರಿ, ತೆಕ್ಕರೆ ತಲ್ಲಿ, ತೊಜಂಕ್ ಬೋಲೆದ ಸುಕ್ಕ, ನುರ್ಗೆ ತೊಪ್ಪುದ ಸುಕ್ಕ, ತೇವುದ ಪುಳಿ ಮುಂಚಿ, ಉಪ್ಪಡ್ ಪಚ್ಚಿರ್, ಖಾರ ಮುಂಚಿ, ಸೆಂಡಿಗೆ, ಗುಜ್ಜೆದ ಚಿಪ್ಸ್, ಉರ್ದುದ ಹಪ್ಪಳ, ಖಾರದ ಹಪ್ಪಳ, ಪೋಡಿ, ತೆಕ್ಕರೆದ ಅಡ್ಯೆ, ಗೆಂಡದಡ್ಡೆ, ಅರೆಪುದ ಪುಂಡಿ, ಪತ್ರೊಡ್ಡೆ, ಬಟಾಟೆ ಬಟಾಣಿ ಗಸಿ, ಕಜೆ ಅರಿತ ಗಂಜಿ, ಉರ್ಪೆಲ್ ಅರಿತ ನುಪ್ಪು, ಕುಡುತ ಸಾರ್, ಅರಿತ ಅಪ್ಪ, ಲಡ್ಡು, ಅರಿತ ಪಾಯಸ, ಅಲೆ (ಮಜ್ಜಿಗೆ), ಬಚ್ಚಿರೆ ಬಜ್ಜೆಯಿ
ತಲ್ಲೂರು ಸಂತ ಫ್ರಾನ್ಸಿಸ್ ಆಸ್ಸಿಸಿ ಇಗರ್ಜಿಯಲ್ಲಿ ಹಿರಿಯರ ದಿನ
ಕುಂದಾಪುರ ತಾರೀಕು 28/07/2024 ರಂದು ತಲ್ಲೂರು ಸಂತ ಫ್ರಾನ್ಸಿಸ್ ಆಸ್ಸಿಸಿ ಇಗರ್ಜಿಯಲ್ಲಿ ಕುಟುಂಬ ಆಯೋಗದ ಸಹಕಾರದಲ್ಲಿ ಹಿರಿಯರ ದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಬೆಳಿಗ್ಗೆ 10.15 ಕ್ಕೆ ಸರಿಯಾಗಿ ಸಂಭ್ರಮದ ದಿವ್ಯ ಬಲಿಪೂಜೆಯನ್ನು ಪ್ರಧಾನ ಗುರುಗಳಾಗಿ ಹಾಜರಿದ್ದ ವಂದನೀಯ ಗುರು ಫ್ರಾನ್ಸಿಸ್ ಕಾರ್ನೆಲಿಯೋ ನೆರವೇರಿಸಿದರು. ನಂತರ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನಿವೃತ್ತ ಪ್ರಾಧ್ಯಾಪಕಿ ಶ್ರೀಮತಿ ಹಿಲ್ಡ ಡಿಸಿಲ್ವ ಹಾಜರಿದ್ದು, ವೃದ್ಧಾಪ್ಯಾದಲ್ಲಿ ಹಿರಿಯರು, ಮಕ್ಕಳು ಮೊಮ್ಮಕ್ಕಳ ಜೊತೆ ಹೇಗೆ ಸುಖಕರ ಜೀವನ ನಡೆಸಬಹುದು ಎಂದು ತಿಳಿಸಿದರು. ಸಮಾರಂಭದಲ್ಲಿ, ಈಗತಾನೆ 60 ವರ್ಷ,75 ವರ್ಷ ಪೂರೈಸಿದ ಹಿರಿಯರನ್ನು ಹಾಗೂ ಮದುವೆಯಾಗಿ 50 ವರ್ಷ ಪೂರೈಸಿದ ಹಿರಿಯ ದಂಪತಿಗಳಿಗೆ ಈಗರ್ಜಿಯ ಧರ್ಮ ಗುರುಗಳಾದ ವಂದನೀಯ ಎಡ್ವಿನ್ ಡಿಸೋಜಾರವರು ಶಾಲು ಹೊದೆಸಿ ಸನ್ಮಾನಿಸಿದರು.
ಹಿರಿಯರಿಗಾಗಿ ಲಕ್ಕಿ ಗೇಮ್ ನಡೆಸಿ ಗೆದ್ದವರಿಗೆ ಬಹುಮಾನವನ್ನು ವಿತರಿಸಿ ಗೌರವಿಸಿದರು . ICYM ಸದಸ್ಯರು ಮನರಂಜನಾ ಕಾರ್ಯಕ್ರಮವನ್ನು ನೀಡಿದರು.YCS ವಿದ್ಯಾರ್ಥಿಗಳು ಹಿರಿಯರನ್ನು ಉಪಚರಿಸಿದರು.ಸುಮಾರು 106 ಮಂದಿ ಹಿರಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಈಗರ್ಜಿಯ ಪಾಲನಾ ಮಂಡಳಿಯ ಉಪಾಧ್ಯಕ್ಷರು, ಕಾರ್ಯದರ್ಶಿ ಹಾಗೂ 20 ಆಯೋಗದ ಸಂಚಾಲಕರು ಹಾಜರಿದ್ದರು.
ಕಾರ್ಯಕ್ರಮವು ಕುಟುಂಬ ಆಯೋಗದ ಸಂಚಾಲಕರಾದ ಶ್ರೀ ರಾಜೇಶ್ ಮೆಂಡೋನ್ಸಾರವರ ನೇತೃತ್ವದಲ್ಲಿ ನಡೆಯಿತು . ಆಯೋಗದ ಸದಸ್ಯರಾದ ಶ್ರೀ ಅನಿಲ್ ಡಿಸಿಲ್ವರವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಹ ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
5 Years of Youth Empowerment: ICYM Cordel Launches New Logo / 5 ವರ್ಷಗಳ ಯುವ ಸಬಲೀಕರಣ: ಕಾರ್ಡೆಲ್ ICYM ಹೊಸ ಲೋಗೊ ಬಿಡುಗಡೆ
On a bright Sunday morning of 28th July 2024, the Cordel Parish community gathered to witness a significant milestone in the history of their church—the launch of the logo for the 75th Platinum Jubilee Celebrations. This event, organized by the Indian Catholic Youth Movement (ICYM) Cordel, marked the beginning of a series of commemorative activities leading up to the grand celebration of ICYM CORDEL 75th anniversary.
The parish priest Rev. Fr. Clifford Fernandes ,Assistant Parish Priests Fr. Paul Sebastian D’Souza and Fr. Vijay Monterio And along with Fr. Prakash Lobo Capuchin, Parish Pastoral Council President Mrs. Ruth Castelino and Secretary Mr.Anil Dsa, ICYM President Vikas Rodrigues in the presence of ICYM members and parishioners, unveiled the newly designed logo. The logo, symbolizing the rich heritage and the journey of the Icym Cordel over the past 75 years, was revealed amid applause and cheers from the gathered crowd. The design intricately captured the essence of the parish’s growth, its spiritual journey, and the unity of the ICYM Cordel.
With the unveiled logo as a symbol of their shared history and aspirations, the parish looks forward to a year of meaningful celebrations, culminating in the grand jubilee event.
5 ವರ್ಷಗಳ ಯುವ ಸಬಲೀಕರಣ: ಕಾರ್ಡೆಲ್ ICYM ಅವರಿಂದ ಹೊಸ ಲೋಗೊ ಬಿಡುಗಡೆ
ಜುಲೈ 28, 2024 ರ ಪ್ರಕಾಶಮಾನವಾದ ಭಾನುವಾರದ ಬೆಳಿಗ್ಗೆ, ಕಾರ್ಡೆಲ್ ಪ್ಯಾರಿಷ್ ಸಮುದಾಯವು ತಮ್ಮ ಚರ್ಚ್ನ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು-75 ನೇ ಪ್ಲಾಟಿನಂ ಜುಬಿಲಿ ಆಚರಣೆಗಳಿಗಾಗಿ ಲೋಗೋವನ್ನು ಬಿಡುಗಡೆ ಮಾಡಲು ಒಟ್ಟುಗೂಡಿದರು. ಇಂಡಿಯನ್ ಕ್ಯಾಥೋಲಿಕ್ ಯೂತ್ ಮೂವ್ಮೆಂಟ್ (ICYM) ಕಾರ್ಡೆಲ್ ಆಯೋಜಿಸಿದ ಈ ಕಾರ್ಯಕ್ರಮವು ICYM CORDEL 75 ನೇ ವಾರ್ಷಿಕೋತ್ಸವದ ಭವ್ಯವಾದ ಆಚರಣೆಗೆ ಕಾರಣವಾಗುವ ಸ್ಮರಣಾರ್ಥ ಚಟುವಟಿಕೆಗಳ ಸರಣಿಯ ಆರಂಭವನ್ನು ಆರಂಭಿಸಿತು.
ಚರ್ಚ್ ಧರ್ಮಗುರು ರೆ.ಫಾ. ಕ್ಲಿಫರ್ಡ್ ಫೆರ್ನಾಂಡಿಸ್, ಸಹಾಯಕ ಧರ್ಮಗುರುಗಳಾದ ಫಾ. ಪೌಲ್ ಸೆಬಾಸ್ಟಿಯನ್ ಡಿಸೋಜಾ ಮತ್ತು ಫಾ. ವಿಜಯ್ ಮೊಂಟೆರಿಯೊ ಮತ್ತು ಫಾದರ್ ಜೊತೆಗೆ. ಪ್ರಕಾಶ್ ಲೋಬೊ ಕಪುಚಿನ್, ಪ್ಯಾಸ್ಟೋರಲ್ ಕೌನ್ಸಿಲ್ ಅಧ್ಯಕ್ಷೆ ಶ್ರೀಮತಿ ರುತ್ ಕ್ಯಾಸ್ಟೆಲಿನೋ ಮತ್ತು ಕಾರ್ಯದರ್ಶಿ ಶ್ರೀ ಅನಿಲ್ ಡಿಸಾ, ಐಸಿವೈಎಂ ಅಧ್ಯಕ್ಷ ವಿಕಾಸ್ ರೋಡ್ರಿಗಸ್ ಐಸಿವೈಎಂ ಸದಸ್ಯರು ಮತ್ತು ಚರ್ಚಿನ ಭಕ್ತಾಧಿಗಳು ಉಪಸ್ಥಿತಿಯಲ್ಲಿ ನೂತನವಾಗಿ ವಿನ್ಯಾಸಗೊಳಿಸಲಾದ ಲೋಗೋವನ್ನು ಅನಾವರಣಗೊಳಿಸಲಾಯಿತು. ಕಳೆದ 75 ವರ್ಷಗಳ ಐಸಿಮ್ ಕಾರ್ಡೆಲ್ನ ಶ್ರೀಮಂತ ಪರಂಪರೆ ಮತ್ತು ಪ್ರಯಾಣವನ್ನು ಸಂಕೇತಿಸುವ ಲೋಗೋವನ್ನು ನೆರೆದಿದ್ದ ಪ್ರೇಕ್ಷಕರ ಚಪ್ಪಾಳೆ ಮತ್ತು ಹರ್ಷೋದ್ಗಾರಗಳ ನಡುವೆ ಬಹಿರಂಗಪಡಿಸಲಾಯಿತು. ವಿನ್ಯಾಸವು ಪ್ಯಾರಿಷ್ನ ಬೆಳವಣಿಗೆ, ಅದರ ಆಧ್ಯಾತ್ಮಿಕ ಪ್ರಯಾಣ ಮತ್ತು ICYM ಕಾರ್ಡೆಲ್ನ ಏಕತೆಯ ಸಾರವನ್ನು ಸಂಕೀರ್ಣವಾಗಿ ಸೆರೆಹಿಡಿಯಿತು.
ಅವರ ಹಂಚಿಕೆಯ ಇತಿಹಾಸ ಮತ್ತು ಆಕಾಂಕ್ಷೆಗಳ ಸಂಕೇತವಾಗಿ ಅನಾವರಣಗೊಂಡ ಲೋಗೋದೊಂದಿಗೆ, ಪ್ಯಾರಿಷ್ ಒಂದು ವರ್ಷದ ಅರ್ಥಪೂರ್ಣ ಆಚರಣೆಗಳನ್ನು ಎದುರು ನೋಡುತ್ತಿದೆ, ಇದು ಮಹಾ ಮಹೋತ್ಸವದ ಸಮಾರಂಭದಲ್ಲಿ ಕೊನೆಗೊಳ್ಳುತ್ತದೆ.
ಬಾರಕೂರು ನೇಷನಲ್ ವಿದ್ಯಾಸಂಸ್ಥೆ – ಉಚಿತ ಸಮವಸ್ತ್ರ ವಿತರಣೆ ಮತ್ತು ಪ್ರತಿಭಾಪುರಸ್ಕಾರ
ಬಾರಕೂರು : “ಇಂದು ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲತೆಗಳು ಹೇರಳವಾಗಿವೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ವಿದ್ಯಾರ್ಥಿಗಳು ಹೆಚ್ಚು ಅಧ್ಯಯನಶೀಲರಾಗಬೇಕು ” ಎಂದು ಬಾರಕೂರು ನೇಷನಲ್ ಪ ಪೂ ಕಾಲೇಜು ಹಳೇ ವಿದ್ಯಾರ್ಥಿಸಂಘ (ರಿ ) ದ ಕಾರ್ಯದರ್ಶಿ ನಿವೃತ್ತ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಹೆಗ್ಡೆ ಹೇಳಿದರು. ಅವರು ನೇಷನಲ್ ಪ. ಪೂ. ಕಾಲೇಜು ಹಳೇ ವಿದ್ಯಾರ್ಥಿ ಸಂಘ ಮತ್ತು ನೇಷನಲ್ ಪ. ಪೂ. ವಿದ್ಯಾಸಂಸ್ಥೆ ಜಂಟಿಯಾಗಿ ಗುರುವಾರ ಬಾರಕೂರನಲ್ಲಿ ಆಯೋಜಿಸಿದ್ದ ಪಿ.ಯು. ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಮತ್ತು ಪ್ರತಿಭಾವಂತ ವಿದ್ಯಾರ್ಥಿಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ನೇಷನಲ್ ವಿದ್ಯಾಸಂಸ್ಥೆ ಇವತ್ತು ಗತ ವೈಭವ ಪಡೆಯುತ್ತಿದೆ. ಶಿಸ್ತು, ಗುಣಮಟ್ಟದ ಶಿಕ್ಷಣ ಶೇಕಡಾ 100 ಫಲಿತಾಂಶದೊಂದಿಗೆ ಹೆಮ್ಮೆ ಮೂಡಿಸುತ್ತಿದೆ. ಆದ್ದರಿಂದ ಉಚಿತ ಸಮವಸ್ತ್ರ ನೀಡುವುದು ಸಾರ್ಥಕ ಎಂಬ ಭಾವನೆ ನಮಗೆ ಬಂದಿದೆ ಸಂಸ್ಥೆಯನ್ನು ಮುಕ್ತವಾಗಿ ಪ್ರಶಂಸಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕರುಣಾಕರ ಶೆಟ್ಟಿ ಸಂಕಾಡಿ ವಹಿಸಿದ್ದರು.
ದಿ ಬಾರಕೂರು ಎಜುಕೇಷನ್ ಸೊಸೈಟಿ ( ರಿ) ಅಧ್ಯಕ್ಷ ಬಿ ಶಾಂತಾರಾಮ ಶೆಟ್ಟಿ ಸಮವಸ್ತ್ರ ವಿತರಿಸಿದರು. ವೇದಿಕೆಯಲ್ಲಿ ದಿ ಬಾರಕೂರು ಎಜುಕೇಷನ್ ಸೊಸೈಟಿ (ರಿ ) ಕಾರ್ಯದರ್ಶಿ ಅಶೋಕಕುಮಾರ್ ಶೆಟ್ಟಿ, ಉಪಾಧ್ಯಕ್ಷ ಶೇಡಿಕೋಡ್ಲು ವಿಠಲ ಶೆಟ್ಟಿ, ಕೋಶಾಧಿಕಾರಿ ಕೃಷ್ಣ ಹೆಬ್ಬಾರ್, ಸಂಚಾಲಕ ಬಿ ಗೋಪಾಲ ನಾಯ್ಕ, ಆಡಳಿತ ಸಂಯೋಜಕರಾದ ಆರ್ಚಿ ಬಾಲ್ಡ್ ಪುರ್ಟಾಡೋ, ಹೇರಾಡಿ ಎಸ್ ವಿ ವಿ ಎನ್ ಆಂಗ್ಲಮಾಧ್ಯಮ ಶಾಲಾ ಸಂಚಾಲಕ ಎಸ್ ಜಯರಾಮ್ ಶೆಟ್ಟಿ, ಹಳೇ ವಿದ್ಯಾರ್ಥಿಸಂಘದ ಉಪಾಧ್ಯಕ್ಷ ಎಸ್ ಜಯರಾಮ್ ಹೆಗ್ಡೆ, ಹರೀಂದ್ರ ನಾಥ ಶೆಟ್ಟಿ, ಕೋಶಾಧಿಕಾರಿ ಜ್ಯೋತಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಇದೆ ಸಂದರ್ಭದಲ್ಲಿ ಶೇಕಡಾ 100% ಫಲಿತಾಂಶ ತಂದ ಎಲ್ಲ ಉಪನ್ಯಾಸಕ ಮತ್ತು ಶಿಕ್ಷಕರನ್ನು ಗೌರವಿಸಲಾಯಿತು. ನೇಷನಲ್ ಪ. ಪೂ. ಕಾಲೇಜನ ಪ್ರಾಂಶುಪಾಲ ಯು ಕೊಟ್ರಸ್ವಾಮಿ ಸ್ವಾಗತಿಸಿದರು. ನೇಷನಲ್ ಪ್ರೌಢಶಾಲವಿಭಾಗದ ಮುಖ್ಯಸ್ಥೆ ಹೇಮಾವತಿ ವಂದಿಸಿದರು. ಕನ್ನಡ ಉಪನ್ಯಾಸಕಿ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.
ಶ್ರೀ ವಿಧ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ – ಬಾರಕೂರು: ಶಾಲಾ ಸಂಸತ್ತು ಮತ್ತು ವಿವಿಧ ಸಂಘದ ಉದ್ಘಾಟನೆ
ಬಾರಕೂರು: ಶ್ರೀ ವಿಧ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ -ಬಾರಕೂರು ನಲ್ಲಿ 2024-25ರ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತು ಮತ್ತು ವಿವಿಧ ಸಂಘದ ಉದ್ಘಾಟನೆ ಯನ್ನು ಬಾರಕೂರು ಎಜುಕೇಷನಲ್ ಸೊಸೈಟಿ ಯ ಆಡಳಿತಕ್ಕೆ ಒಳ ಪಟ್ಟ ಎಲ್ಲಾ ಸಂಸ್ಥೆ ಗಳ ಕೋ ಒರ್ಡಿ ನೇಟರ್ ಆಗಿರುವ ಶ್ರೀ ಆರ್ಚಿ ಬಾಲ್ಡ್ ಪುಟಾರ್ದೋರವರು ದೀಪ ಬೆಳಗಿಸಿ ” ನಾಯಕತ್ವ ಪರಿ ಪೂರ್ಣತೆಯಿಂದ ಇರಬೇಕು, ಇನ್ನೊಬ್ಬರಿಗೆ ಮಾರ್ಗದರ್ಶನ ವಾಗಿರಬೇಕು ” ಎಂದು ತಿಳಿಸಿದರು.
ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಶಾಲೆಯ ಸಂಚಾಲಕರಾದ ಶ್ರೀ ರಾಜಾರಾಮ್ ಶೆಟ್ಟಿ ರವರು ವಹಿಸಿ , “ವಿದ್ಯಾರ್ಥಿ ಗಳು ನಾಯಕತ್ವ ದ ಗುಣ ವನ್ನು ಬೆಳೆಸಿಕೊಳ್ಳಲು ಶಾಲಾ ಸಂಸತ್ತು ಉತ್ತಮ ವೇದಿಕೆ ” ಎಂದು ತಮ್ಮ ಮಾತುಗಳಲ್ಲಿ ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಲಿಖಿತಾ ಕೊಠಾರಿ ರವರುಶಾಲಾ ಸಂಸತ್ತು ನ ಸದಸ್ಯರಿಗೆ ಪ್ರಮಾಣ ವಚನ ಭೋಧಿಸಿದರು.
ವೇದಿಕೆ ಯಲ್ಲಿ ಶಾಲಾ ವಿದ್ಯಾರ್ಥಿ ನಾಯಕ ಪ್ರತೀಕ್, ವಿರೋಧ ಪಕ್ಷದ ನಾಯಕಿ ವೈಷ್ಣವಿ , ಉಪ ವಿದ್ಯಾರ್ಥಿ ನಾಯಕಿ ಶರಣ್ಯ , ಸಾಂಸ್ಕೃತಿಕ ಕಾರ್ಯದರ್ಶಿ ಸಿಂಚನ , ಆರೋಗ್ಯ ಮಂತ್ರಿ ವರ್ಷ , ಕ್ರೀಡಾ ಕಾರ್ಯದರ್ಶಿ ಶೋಭಿತ್ ಶೆಟ್ಟಿ , ಪ್ರೌಢ ಶಾಲಾ ವಿಭಾಗದ ವಿವಿಧ ಸಂಘ ಗಳಾದ ಪರಿಸರ ಸಂಘ ದ ಅಧ್ಯಕ್ಷೆ ಖುಷಿ , ಸಾಹಿತ್ಯ ಸಂಘ ದ ಅಧ್ಯಕ್ಷೆ ಧನುಶ್ರೀ , ಗ್ರಾಹಕ ಸಂಘ ದ ಅಧ್ಯಕ್ಷ ದಿಗಂತ್ , ವಿಜ್ಞಾನ ಸಂಘ ದ ಅಧ್ಯಕ್ಷ ಸುಶ್ರುತ್ , ಪ್ರಾಥಮಿಕ ವಿಭಾಗ ದಲ್ಲಿ ಪರಿಸರ ಸಂಘದ ಅಧ್ಯಕ್ಷೆ ಶಿವಾನಿ , ವಿಜ್ಞಾನ ಸಂಘದ ಅಧ್ಯಕ್ಷೆ ಕೀರ್ತನಾ, ಸಾಹಿತ್ಯ ಸಂಘ ದ ಸಾನಿಧ್ಯ, ರವರು ವೇದಿಕೆ ಯಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮ ವನ್ನು ಅನಿಷಾ ನಿರೂಪಿಸಿ, ವೈಷ್ಣವಿ, ಅಧಿತಿ ಪ್ರಸ್ತುತಿ ರವರು ಪ್ರಾರ್ಥಿಸಿದರು, ಶ್ರೀಶ ಸ್ವಾಗಸಿ, ಕೀರ್ತಿ ವಂದಿಸಿದರು.
ಶಾಲಾ ಶಿಕ್ಷಕಿಯರಾದ ಶ್ರೀಮತಿ ಜ್ಯೋತಿ ಶೆಟ್ಟಿ ಮತ್ತು ನಾಗರತ್ನ ಹೆಬ್ಬಾರ್ ಈ ಕಾರ್ಯಕ್ರಮ ವನ್ನು ಸಂಯೋಜನೆ ಮಾಡಿದರು ಶಾಲೆಯ ಎಲ್ಲಾ ಶಿಕ್ಷಕ -ಶಿಕ್ಷಕೇತರರು ಸಹಕರಿಸಿದರು.
ಕಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ.) ಬಂಟ್ವಾಳ ವಲಯ – ಅಲ್ಪಸಂಖ್ಯಾತರಿಗೆ ಲಭ್ಯವಿ ರುವ ಸವಲತ್ತುಗಳಿಗೆ ಮಾಹಿತಿ ಶಿಬಿರ
ಕಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ.) ಬಂಟ್ವಾಳ ವಲಯ, ಇವರ ಮುಂದಾಳತ್ವದಲ್ಲಿ ದ.ಕ.ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ನಿಗಮ ಇವರ ಸಹಯೋಗದೊಂದಿಗೆ ಅಲ್ಪಸಂಖ್ಯಾತರಿಗೆ ಲಭ್ಯವಿ ರುವ ಸವಲತ್ತುಗಳಿಗೆ ಮಾಹಿತಿ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ ಮೊಡಂಕಾಪು ಅನುಗ್ರಹ ಸಭಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಫಾ.ವಲೇರಿಯನ್ ಡಿ.ಸೋಜ ಅವರು ಮಾತನಾಡಿ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಸರಕಾರದ ಕೆಲಸ ದೇವರ ಕೆಲಸ ಎಂಬ ಮನಸ್ಸಿನಿಂದ ಮಾಡಿದಾಗ ಸರಕಾರದ ಎಲ್ಲಾ ಸವಲತ್ತುಗಳು ಫಲಾನುಭವಿಗಳಿಗೆ ಸಿಗಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ.ಸೋಜ ಅವರನ್ನು ಸನ್ಮಾನಿಸಿದರು.
ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ, ಯಡಿಯೂರಪ್ಪ ಅವರು ಮುಖ್ಯ ಮಂತ್ರಿಯಾಗಿದ್ದ ಸಂಧರ್ಬದಲ್ಲಿ ನನ್ನ ಶಾಸಕತ್ವದ ಅವಧಿಯಲ್ಲಿ ಕ್ಷೇತ್ರದ ಚರ್ಚ್ ಗಳ ಅಭಿವೃದ್ಧಿಗೆ ಅನುದಾನವನ್ನು ಒದಗಿಸಿದ್ದೇನೆ, ಈ ಬಾರಿಯೂ ಬಜೆಟ್ ನಲ್ಲಿ ಸರಕಾರ ಅನುದಾನವನ್ನು ಘೋಷಣೆ ಮಾಡಿದೆ,ಅದರ ಸಂಪೂರ್ಣ ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿದರು.
ಸರಕಾರದ ವಿವಿಧ ಯೋಜನೆಗಳ ಮಾಹಿತಿ ಪಡೆದು ಪ್ರತಿಯೊಬ್ಬರು ಲಾಭ ಪಡೆಯಬೇಕು ಎಂದು ಮನವಿ ಮಾಡಿದರು.
ಸನ್ಮಾನ ಸ್ವೀಕರಿಸಿ ಬಳಿಕ ಸಭೆಯಲ್ಲಿ ಮಾತನಾಡಿದ ಐವನ್ ಡಿ.ಸೋಜ ಅವರು, ಜನಸಾಮಾನ್ಯರ ನಡುವಿನ ಬಾಂಧವ್ಯವನ್ನು ವೃದ್ದಿಸಿ, ಜವಾಬ್ದಾರಿಯಿಂದ ಜನರ ನಡುವೆ ಇದ್ದು,ಜನಸಾಮಾನ್ಯರ ಬದುಕಿಗೆ ಪೂರಕವಾದ ವಾತಾವರಣ ನಿರ್ಮಿಸಿ, ಸಮಸ್ಯೆ ಗಳನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಕರ್ತವ್ಯ ನಿರ್ವಹಿಸಬೇಕಿದೆ ಎಂದು ತಿಳಿಸಿದರು.
ಚುನಾವಣಾ ಪೂರ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಭರವಸೆಯಂತೆ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ ಹಾಗೂ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಕೊಡುಗೆಯನ್ನು ನೀಡಿದ್ದಾರೆ. ಇದರ ಜೊತೆಗೆ ಕ್ರಿಶ್ಚಿಯನ್ ಸಮುದಾಯ ನಡೆಸುವ ಆಸ್ಪತ್ರೆಗಳಿಗೆ ಅನುದಾನವನ್ನು ಒದಗಿಸುವ ನಿಟ್ಟಿನಲ್ಲಿ ಕಾನೂನು ರೂಪಿಸಲು ಚಿಂತನೆ ನಡೆಸಿ ಮಾತುಕತೆ ನಡೆಸಿದ್ದೇನೆ ಎಂದು ತಿಳಿಸಿದರು. ಅಲ್ಲದೆ ಶಾಲೆಗಳ ರಕ್ಷಣೆಗೆ ಮುಂದಾಗುತ್ತೇವೆ ಎಂದು ಭರವಸೆ ನೀಡಿದರು. ಜೆರುಸ್ಲೇಮ್ ಗೆ ಹೋಗುವ ಸಮುದಾಯದ ಹಿರಿಯರಿಗೆ ಸಬ್ಸಿಡಿ ದರದಲ್ಲಿ ಕ್ರೈಸ್ತ ಸಮುದಾಯದ ಅನುದಾನವನ್ನು ಬಳಸಲು ಯೋಜನೆ ರೂಪಿಸುವ ಯೋಚನೆ ಮಾಡಿದ್ದೇವೆ,ಮುಂದಿನ ದಿನಗಳಲ್ಲಿ ಎಲ್ಲಾ ಬೇಡಿಕೆಗಳಿಗೆ ಸದಾ ಸ್ಪಂದನೆ ನೀಡುತ್ತೇವೆ ಎಂದು ಭರವಸೆ ನೀಡಿದರು.
ಕ್ರೈಸ್ತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತರಾಗಿದ್ದಾರೆ, ಆದರೆ ನಮ್ಮ ಜಿಲ್ಲೆಯಲ್ಲಿಯೇ ಅವಕಾಶಗಳನ್ನು ಬಳಸಿಕೊಂಡು ಸರಕಾರಿ ನೌಕರಿ ಅಥವಾ ದೊಡ್ಡ ಉದ್ಯಮದ ಮೂಲಕ ಕೊಡುಗೆಯನ್ನು ನೀಡಬೇಕು ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಕಥೊಲಿಕ್ ಸಭಾ ಮಂಗಳೂರ್ ಪ್ರದೇಶ್ ರಿ .ಇದರ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಸ್ಟೇನಿ ಲೋಬೊ,ಬೂಡ ಮಾಜಿ ಅಧ್ಯಕ್ಷ ಪಿಯೂಸ್ ಎಲ್.ರೋಡ್ರಿಗಸ್,ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಅರುಣ್ ರೋಶನ್ ಡಿ.ಸೋಜ,, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿನೇಂದ್ರ ಕೋಟ್ಯಾನ್, ನಿಗಮದ ಜಿಲ್ಲಾ ವ್ಯವಸ್ಥಾಪಕ ಯಶೋಧರ ಜೆ. , ಕಥೋಲಿಕ್ ಸಭಾ ಇದರ ಬಂಟ್ವಾಳ ವಲಯದ ಅಧ್ಯಕ್ಷರಾದ ಶ್ರೀ ಜೋನ್ ಲಸ್ರಾದೊ ಕಾರ್ಯಕ್ರಮದ ಅಧ್ಯಕ್ಷರು, ಕಾರ್ಯದರ್ಶಿ ಆಸ್ಟಿನ್ ಲೋಬೋ, ವಿವಿಧ ಚರ್ಚ್ ಗಳ ಧರ್ಮಗುರುಗಳು ಸಮುದಾಯ ಅಭಿವೃದ್ಧಿ ಸಂಚಾಲಕ ಸಿರಿಲ್ ನೊರೊನ್ಹಾ, ರಾಜಕೀಯ ಸಂಚಾಲಕ ರಾಯನ್ ರೊಡ್ರಿಗಸ್ ಮತ್ತಿತರರು ಉಪಸ್ಥಿತರಿದ್ದರು.
ಬಂಟ್ವಾಳ ಇದರ ಅಧ್ಯಕ್ಷ ಜೋನ್ ಲಸ್ರಾದೋ ಸ್ವಾಗತಿಸಿ, ಕಾರ್ಯದರ್ಶಿ ಅಸ್ಟಿನ್ ಲೋಬೋ ವಂದಿಸಿದರು, ಅಲ್ಫೋನ್ಸ್ ಪೆರ್ನಾಂಡಿಸ್ ನೀರ್ಕಾನ ಅವರು ಕಾರ್ಯಕ್ರಮ ನಿರೂಪಿಸಿದರು.
ಸುಪ್ರಸನ್ನ ನಕ್ಕತ್ತಾಯರ “ಸಂಚಯ” ಚಿತ್ರಕಲಾ ಪ್ರದರ್ಶನ
ಕುಂದಾಪುರ ತಾಲೂಕಿನ ಕೋಟೇಶ್ವರದ ಶ್ರೀಮತಿ ಸುಪ್ರಸನ್ನ ನಕ್ಕತ್ತಾಯ ಅವರ 100 ಕಲಾಕೃತಿಗಳ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ ಕುಂದಾಪುರದ ಸೂರ್ನಳ್ಳಿ ರಸ್ತೆಯಲ್ಲಿರುವ ಸುಪ್ರಭಾ ಕಾಂಪ್ಲೆಕ್ಸ್ನ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ ಜು. 27 ರಂದು ನಡೆಯಿತು.
ಹಿರಿಯ ಕಲಾವಿದ, ಪರಿಸರ ತಜ್ಞ ದಿನೇಶ ಹೊಳ್ಳ ಮಂಗಳೂರು ವೈವಿಧ್ಯಮಯ ಹಕ್ಕಿಗಳ “ಸಂಚಯ” ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದರು. “ಹಕ್ಕಿಗಳೇ ನಮ್ಮ ರಕ್ಷಕರು. ಪಶ್ಚಿಮ ಘಟ್ಟದ ಪ್ರದೇಶ ಅಭಿವೃದ್ಧಿಯ ಹೆಸರಲ್ಲಿ ನಾಶಗೊಳ್ಳುತ್ತಾ ಇರುವುದರಿಂದ ಇಂದು ಹಕ್ಕಿಗಳಿಗೂ ಪ್ರಾಣಿಗಳಿಗೂ ಸಂಕಟ ಮಾತ್ರವಲ್ಲ, ಗುಡ್ಡಗಳೇ ಕುಸಿದು ಬೀಳುವಂತಹ ದುರಂತ ಇಂದು ಸಂಭವಿಸುತ್ತಿದೆ. ಸುಂದರ ಹಕ್ಕಿಗಳ ಈ ಕಲಾ ಪ್ರದರ್ಶನ ಗಮನಿಸಿದಾಗ ಸಂತೋಷವಾಗುತ್ತದೆ. ನಾವು ನಮ್ಮನ್ನು ಕಾಪಾಡುವ ಪ್ರಕೃತಿಯ ಜೀವಗಳನ್ನು ಎಷ್ಟು ನೋಯಿಸುತ್ತಿದ್ದೇವೆ ಎಂದು ದು:ಖವಾಗುತ್ತದೆ. ಪ್ರಾಕೃತಿಕ ವ್ಯವಸ್ಥೆಯನ್ನು ವಿರೂಪಗೊಳಿಸುತ್ತಿದ್ದೇವೆ ಎಂದು ಅರಿವಾಗುತ್ತದೆ. ವಿದ್ಯಾರ್ಥಿಗಳು ಪರಿಸರದಲ್ಲಿರುವ ಹಕ್ಕಿಗಳೊಂದಿಗೆ ಅವರ ಬಾಂಧವ್ಯ ಬೆಳೆಯುವಂತೆ ಮಾಡಬೇಕು. ಈ ಕಲಾ ಪ್ರದರ್ಶನ ಬಹಳ ಉತ್ತಮವಾಗಿದೆ” ಎಂದು ದಿನೇಶ ಹೊಳ್ಳ ಹೇಳಿದರು.
ಚಿತ್ರಕಲಾ ವಿದ್ಯಾರ್ಥಿಗಳಿಗೆ ಶಿಫಾರಸು ಪತ್ರ ವಿತರಿಸಿದ ನಿವೃತ್ತ ಪ್ರಾಂಶುಪಾಲರಾದ ಚಿತ್ರಾ ಕಾರಂತ ಮಾತನಾಡಿ, “ಸುಪ್ರಸನ್ನ ನಕ್ಕತ್ತಾಯರಲ್ಲಿ ಸೂಪ್ತವಾಗಿ ಹುದಗಿರುವ ಕಲಾ ನೈಪುಣ್ಯತೆ ಈ “ಸಂಚಯ” ಕಲಾ ಪ್ರದರ್ಶನದಿಂದ ಬೆಳಕಿಗೆ ಬಂದಿದೆ” ಎಂದರು.
ಮುಖ್ಯ ಅಭ್ಯಾಗತರಾದ ‘ಕುಂದಪ್ರಭ’ ಸಂಸ್ಥೆಯ ಯು. ಎಸ್. ಶೆಣೈ ಮಾತನಾಡಿ, “ಉತ್ತಮ ಕವನಗಳನ್ನು ಬರೆಯುವ ಸುಪ್ರಸನ್ನ ನಕ್ಕತ್ತಾಯ, ತಾವು ಉತ್ತಮ ಚಿತ್ರಕಲಾವಿದರೂ ಸಹ ಎಂದು ಸಾಬೀತು ಪಡಿಸಿದ್ದಾರೆ. ಅವರಲ್ಲಿರುವ ಶ್ರದ್ಧೆ ಅನುಕರಣೀಯ. ಚಿತ್ರ ಪ್ರದರ್ಶನಕ್ಕೆ ಇವರಿಗೆ ಪ್ರೇರಣೆ ತುಂಬಿದ ತ್ರಿವರ್ಣ ಕಲಾ ಗ್ಯಾಲರಿ ಸಂಚಾಲಕ, ಕಲಾವಿದ ಹರೀಶ ಸಾಗಾ ಅವರೂ ಅಭಿನಂದನಾರ್ಹರು. ವಿದ್ಯಾರ್ಥಿಗಳು ಈ ಕಲಾ ಪ್ರದರ್ಶನ ನೋಡಲೇಬೇಕು” ಎಂದರು.
ಹರೀಶ ಸಾಗಾ ಮಾತನಾಡಿ, “ಚಿತ್ರಕಲೆಗೆ ಆಸಕ್ತಿ, ಶ್ರದ್ಧೆ ಹಾಗೂ ನಿರಂತರ ಅಧ್ಯಯನ ಮುಖ್ಯ. ಇದರಲ್ಲಿ ಹಲವು ಹಂತಗಳಿರುತ್ತವೆ. ಕೆಲವರು ಕಲಿಯುವ ಹಂತದಲ್ಲೇ ಎಲ್ಲವೂ ತಿಳಿಯಿತು ಎಂದು ಭಾವಿಸುತ್ತಾರೆ. ಅದು ಸರಿಯಲ್ಲ. ಸುಪ್ರಸನ್ನ ನಕ್ಕತ್ತಾಯರಿಗೆ ಇನ್ನಷ್ಟು ಕಲಿಯುವ ಆಸಕ್ತಿ ಇದೆ. ಅವರು ಸಾಧನೆ ಮಾಡಬಲ್ಲರು” ಎಂದರು.
ಶ್ರೀಮತಿ ಸುಪ್ರಸನ್ನ ನಕ್ಕತ್ತಾಯ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಶ್ರೀಮತಿ ವಸಂತಿ ಪಂಡಿತ ಸುಪ್ರಸನ್ನ ನಕ್ಕತ್ತಾಯರನ್ನು ಅಭಿನಂದಿಸಿದರು. ಶ್ರೀಮತಿ ಸುಲೋಚನಾ ರಮೇಶ್ ನಿರೂಪಿಸಿದರು. ಕಲಾ ವಿದ್ಯಾರ್ಥಿನಿ ಕೃತಿ ದೇವಾಡಿಗ ವಂದಿಸಿದರು.
ಕುಂದಾಪುರದಲ್ಲಿ “ಕ್ರೈಸ್ತ ಸಹಕಾರಿ” ಸಮ್ಮಿಲನ ಕಾರ್ಯಕ್ರಮ
ಕುಂದಾಪುರದ ಪ್ರತಿಷ್ಠಿತ ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ನೇತೃತ್ವದಲ್ಲಿ ದಿನಾಂಕ 27- 07- 2024 ರಂದು ತನ್ನ ಪ್ರಧಾನ ಕಚೇರಿಯ ಮೂರನೇ ಅಂತಸ್ತಿನ ರೋಜರಿ ಸಭಾಭವನದಲ್ಲಿ “ಕ್ರೈಸ್ತ ಸಹಕಾರಿ ಸಮ್ಮಿಲನ ” ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ|ವಂ| ಡಾ. ಜೆರಾಲ್ಡ್ ಐಸಾಕ್ ಲೋಬೋ ಮುಖ್ಯ ಅತಿಥಿಯಾಗಿ ಆಗಮಿಸಿ “ಇಂತಹ ಒಂದು ಕೂಟ ನಮಗೆ ಅಗತ್ಯವಿದೆ, ಸಹಕಾರಿ ಸಂಘಗಳ ನಡುವೆ ಸಹಕಾರ ಅಗತ್ಯವಿದೆ, ಇದನ್ನು ಮುಂದಕ್ಕೆ ನೆಡೆಕೊಂಡು ಹೋಗಬೇಕು’ ತಮ್ಮ ಸಂದೇಶ ನೀಡಿದರು. ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅತೀ ವಂದನೀಯ ಪಾವ್ಲ್ ರೇಗೊ,ಶುಭ ಹಾರೈಸಿ ಸಂದೇಶ ನೀಡಿದರು.
ಸಹಕಾರ ಸಂಘದ ಸಾಧನೆಗಳನ್ನು ಆಚರಿಸಲು, ಸ್ನೇಹಿತತ್ವವನ್ನು ಬಲಪಡಿಸಲು ಮತ್ತು ನಮ್ಮ ಸಮೂಹದ ಯಶಸ್ಸನ್ನು ಸಂಭ್ರಮಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಕ್ಯಾಥೋಲಿಕ್ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿ ಬ್ರಹ್ಮಾ ವರ,ಇದರ ಅಧ್ಯಕ್ಷರಾದ ವಲೇರಿಯನ್ ಮಿನೆಜೆಸ್, ಉಡುಪಿ ಕ್ಯಾಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉಡುಪಿ, ಇದರ ಅಧ್ಯಕ್ಷ ಲುವಿಸ್ ಲೋಬೊ, ಕೊಂಕಣ್ ಕ್ಯಾಥೊಲಿಕ್ ವಿವಿದೋದ್ಧೇಶ ಸಹಕಾರಿ ಸಂಘ ಕಾರ್ಕಳ ಇದರ ಅಧ್ಯಕ್ಷರಾದ ಡಾ|ಪೀಟರ್ ಫೆರ್ನಾಂಡಿಸ್, ಸುಗಮ್ಯಾ ಮಹಿಳಾ ಸೌಹಾರ್ದ ಸಹಕಾರಿ ಸಂಘ ಉಡುಪಿ ಇದರ ಅಧ್ಯಕ್ಷರಾದ ಪ್ರಮೀಳಾ ಡೆಸಾ ಇವರುಗಳು ತಮ್ಮ ಸಂಘಗಳು ಬೆಳೆದು ಬಂದ ರೀತಿ ಸಭೆಯಲ್ಲಿ ಮಾತನಾಡಿ ಮುಂದೆ ಸಂಘವನ್ನು ಹೇಗೆ ಮುನ್ನಡೆಸಬೇಕು ಎನ್ನುವುದರ ಬಗ್ಗೆ ಸಲಹೆ ನೀಡಿದರು.
ಮುಂದೆ ಇಂತಹ ಕೂಟ ಮುಂದುವರೆಸಿ ಬಲ ಪಡಿಸಲು, ಮುಂದಿನ ಮೂರು ವರ್ಷಗಳ ಕಾಲಕ್ಕೆ ರೋಜರಿಯ ಸೊಸೈಟಿಯ ಅಧ್ಯಕ್ಷ ಜೋನ್ಸನ್ ಡಿ ‘ ಆಲ್ಮೇಡಾ ಅವರನ್ನು ಸಂಚಾಲಕರನ್ನಾಗಿ ಆರಿಸಲಾಯಿತು.
ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ಜೆರಾಲ್ಡ್ ಫೆರ್ನಾಂಡಿಸ್, ಎಮ್.ಸಿ.ಸಿ. ಬ್ಯಾಂಕಿನ ನಿರ್ದೇಶಕರಲ್ಲಿ ಒಬ್ಬರಾದ ಡಾ.ಜೆರಾಲ್ಡ್ ಪಿಂಟೊ, ರೋಜರಿ ಸೊಸೈಟಿಯ ಎಲ್ಲಾ ನಿರ್ದೇಶಕರು, ಎಲ್ಲಾ 5 ಸೊಸೈಟಿಗಳ ಉಪಾಧ್ಯಕ್ಷರು, ನಿರ್ದೇಶಕರು ಸೇರಿ 70 ಮಂದಿ ಭಾಗವಹಿಸಿದ್ದರು. ರೋಜರಿ ಸೊಸೈಟಿಯ ಅಧ್ಯಕ್ಷ ಹಾಗೂ ಕಾರ್ಯಕ್ರಮದ ಸಂಚಾಲಕರಾದ ಶ್ರೀ ಜೋನ್ಸನ್ ಡಿ ‘ ಆಲ್ಮೇಡಾ ಪ್ರಸ್ತಾವನೆಗೈದು ಸರ್ವರನ್ನು ಸ್ವಾಗತಿಸಿದರು, ರೋಜರಿಯ ಸೊಸೈಟಿಯ ಉಪಾಧ್ಯಕ್ಷರಾದ ಕಿರಣ್ ಲೋಬೊ ಕಾರ್ಯಕ್ರಮಕ್ಕೆ ಸಹಕರಿಸಿದರು. ರೋಜರಿ ಸೊಸೈಟಿಯ ನಿರ್ದೇಶಕ ಶ್ರೀ ವಿಲ್ಸನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.