ಕೋಲಾರ:- ನಗರ ಹೊರವಲಯದ ಕೊಂಡರಾಜನಹಳ್ಳಿಯಲ್ಲಿ ಎಪಿಎಂಸಿ ಮಾರುಕಟ್ಟೆಯ ಆರ್.ವಿ.ಎಂ ಮಂಡಿಯ ಚಲಪತಿ ತಮ್ಮ ನಿವಾಸಕ್ಕೆ ಬೆಂಗಳೂರುನಗರ ದೇವತೆ ಅಣ್ಣಮ್ಮ ದೇವಿಯ ಉತ್ಸವ ಮೂರ್ತಿಯನ್ನು ತಂದು ಲೋಕಕಲ್ಯಾಣಕ್ಕಾಗಿ ಹಾಗೂ ಜಿಲ್ಲೆಯಲ್ಲಿ ಶಾಂತಿ, ನೆಮ್ಮದಿ,ಒಳ್ಳೆಯ ಮಳೆ,ಬೆಳೆಗಾಗಿ ವಿಶೇಷ ಪೂಜೆ ಸಲ್ಲಿಸಿದರು.
ಬೆಂಗಳೂರು ನಗರದೇವತೆ ಅಣ್ಣಮ್ಮದೇವಿಯ ಭವ್ಯ ಉತ್ಸವ ಮೂರ್ತಿಗೆ ವಿಶೇಷ ರೀತಿಯಲ್ಲಿ ಹೂವಿನ ಅಲಂಕಾರ ಮಾಡಿದ್ದು, ಗ್ರಾಮದ ನೂರಾರು ಮಂದಿ ಆಗಮಿಸಿ ಪೂಜೆ ಸಲ್ಲಿಸಿದರು.
ಎಪಿಎಂಸಿ ಮಾರುಕಟ್ಟೆಯ ಎಲ್ಲಾ ವರ್ತಕರು,ಕಾರ್ಮಿಕರು, ಅಧಿಕಾರಿಗಳು ಸಿಬ್ಬಂದಿ ಪೂಜೆಯಲ್ಲಿ ಪಾಲ್ಗೊಂಡಿದ್ದು, ಎಲ್ಲರಿಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಚಲಪತಿ ಬೆಂಗಳೂರು ನಗರದೇವತೆ ಅಣ್ಣಮ್ಮ ದೇವಿಯ ಉತ್ಸವ ಮೂರ್ತಿಯನ್ನು ಕೋಲಾರಕ್ಕೆ ತಂದು ಪೂಜೆ ಸಲ್ಲಿಸುವ ಹರಕೆ ಇತ್ತು ಅದನ್ನು ತೀರಿಸಿದ್ದೇವೆ, ಕೋಲಾರ ಜಿಲ್ಲೆಗೆ ಅಂಟಿರುವ ಬರ ಕಳೆದು ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸಿದ್ದೇವೆ ಎಂದು ತಿಳಿಸಿದರು.
ಚಲಪತಿಕುಟುಂಬದವರು ಅಣ್ಣಮ್ಮ ದೇವಿಗೆ ಪೂಜೆ ಸಲ್ಲಿಸುವುದರ ಜತೆಗೆ ಮನೆಯಲ್ಲಿ ಸತ್ಯನಾರಾಯಣ ಪೂಜೆ ನಡೆಸಿದ್ದು, ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಮುಖಂಡರಾದ ಲಕ್ಷ್ಮೀಪತಿ,ವಕ್ಕಲೇರಿ ಮಂಜುನಾಥ್, ತಾಪಂ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ, ಶಿಕ್ಷಕ ನಾರಾಯಣಸ್ವಾಮಿ, ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಮಂಜುನಾಥ್, ವೇಮಗಲ್ ಸುರೇಶ್ ಮತ್ತಿತರರು ಪೂಜೆಯಲ್ಲಿ ಹಾಜರಿದ್ದರು.
Month: July 2024
ಕೋಲಾರ ಜಿಲ್ಲೆಯ 14 ಕೇಂದ್ರಗಳಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ ಸಂಪನ್ನ ಎರಡು ಅಧಿವೇಶನದ ಪರೀಕ್ಷೆಗೆ 520 ಮಂದಿ ಗೈರು-ಕೇಂದ್ರಗಳಿಗೆ ಡಿಸಿ ಭೇಟಿ
ಕೋಲಾರ:- ನಗರದ 14 ಕೇಂದ್ರಗಳಲ್ಲಿ ಭಾನುವಾರ ಯಾವುದೇ ಗೊಂದಲವಿಲ್ಲದೇ ಸುಗಮವಾಗಿ ನಡೆದ ಶಿಕ್ಷಕರ ಅರ್ಹತಾ ಪರೀಕ್ಷೆಯ ಎರಡು ಅಧಿವೇಶನಗಳಿಗೆ ಒಟ್ಟು 520 ಮಂದಿ ಗೈರಾಗಿದ್ದು ಕೇಂದ್ರಗಳಿಗೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ಭೇಟಿ ನೀಡಿ ಪರಿಶೀಲಿಸಿದರು.
ನಗರದ ಎಲ್ಲಾ 14 ಕೇಂದ್ರಗಳಲ್ಲೂ ಪರೀಕ್ಷೆ ನಡೆದಿದ್ದು, ಬೆಳಗ್ಗೆ ನಡೆದ ಮೊದಲ ಅಧಿವೇಶನದ ಪರೀಕ್ಷೆಯ ಪತ್ರಿಕೆ-1ಕ್ಕೆ ನೋಂದಾಯಿಸಿದ್ದ 2141 ಮಂದಿ ಪೈಕಿ 1891 ಮಂದಿ ಹಾಜರಾಗಿ 251 ಮಂದಿ ಗೈರಾಗಿದ್ದಾರೆ ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಮಧ್ಯಾಹ್ನ ನಡೆದ 2ನೇ ಅಧಿವೇಶನದ ಪತ್ರಿಕೆ-2ಕ್ಕೆ ನೋಂದಾಯಿಸಿದ್ದ 3394 ಮಂದಿ ಪೈಕಿ 3125 ಮಂದಿ ಹಾಜರಾಗಿದ್ದು, 269 ಮಂದಿ ಗೈರಾಗುವ ಮೂಲಕ ಎರಡೂ ಅಧಿವೇಶನಗಳಿಗೂ ಸೇರಿ ಒಟ್ಟು 520 ಅಭ್ಯರ್ಥಿಗಳು ಗೈರಾದಂತಾಗಿದೆ.
ಕೈಕೊಟ್ಟ ವಿದ್ಯುತ್ ಜನರೇಟರ್ ಸೌಲಭ್ಯ
ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒ ಮಾರ್ಗದರ್ಶನದಲ್ಲಿ ಯಾವುದೇ ಅವ್ಯವಹಾರ,ಗೊಂದಲಗಳಿಗೆ ಅವಕಾಶವಿಲ್ಲದಂತೆ ನಡೆದ ಪರೀಕ್ಷೆಯಲ್ಲಿ ಎಲ್ಲಾ ಕೇಂದ್ರಗಳಲ್ಲೂ ಸಿಸಿ ಕ್ಯಾಮರಾ ವ್ಯವಸ್ಥೆ ಮಾಡಲಾಗಿತ್ತು ಮತ್ತು ವೆಬ್ ಕಾಸ್ಟಿಂಗ್ಗೂ ಕ್ರಮವಹಿಸಿದ್ದು, ಇಂದು ತುರ್ತು ದುರಸ್ಥಿ ಕಾರ್ಯದಿಂದಾಗಿ ಕರೆಂಟ್ ಕೈಕೊಟ್ಟ ಕಾರಣ ಕೇಂದ್ರಗಳಲ್ಲಿ ಜನರೇಟರ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಕೋಲಾರ ನಗರದ ಒಟ್ಟು 14 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಬೆಳಗಿನ ಅಧಿವೇಶನ 9-30ರಿಂದ 12ರವರೆಗೂ ಪತ್ರಿಕೆ-1ರ ಪರೀಕ್ಷೆ 9 ಕೇಂದ್ರಗಳಲ್ಲಿ ಹಾಗೂ ಮಧ್ಯಾಹ್ನ 2 ರಿಂದ 4-30 ರವರೆಗೂ ಪತ್ರಿಕೆ-2ರ ಪರೀಕ್ಷೆ 14 ಕೇಂದ್ರಗಳಲ್ಲಿ ನಡೆಯಿತು.
144ನೇ ಸೆಕ್ಷನ್ ನಿಷೇದಾಜ್ಞೆ ಜಾರಿ
ಯಾವುದೇ ಸಮಸ್ಯೆ ಎದುರಾಗದಂತೆ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ.ವ್ಯಾಪ್ತಿಯಲ್ಲಿ 144 ನೇ ಸೆಕ್ಷನ್ ಅನ್ವಯ ನಿಷೇದಾಜ್ಞೆ ಜಾರಿ ಮಾಡಲಗಿತ್ತು. ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಈ 200 ಮೀ ವ್ಯಾಪ್ತಿಯಲ್ಲಿನ ಎಲ್ಲಾ ಜೆರಾಕ್ಸ್ ಅಂಗಡಿಗಳನ್ನು ಬೆಳಗ್ಗೆ 8-30 ರಿಂದ ಸಂಜೆ 4-30 ರವರೆಗೂ ಮುಚ್ಚಿಸಿದ್ದು, 14 ಪರೀಕ್ಷಾ ಕೇಂದ್ರಗಳಿಗೂ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಗೌಪ್ಯ ಸಾಮಗ್ರಿಗಳನ್ನು ಖಜಾನೆಯಲ್ಲಿ ಸಂರಕ್ಷಿಸಲು ಜಿಲ್ಲಾಧಿಕಾರಿಗಳೇ ರಚಿಸಿದ್ದ ತ್ರಿಸದಸ್ಯ ಸಮಿತಿ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆಯನ್ನು ಪೊಲೀಸ್ ಬಂದೋಬಸ್ತ್ನಲ್ಲಿ ತಲುಪಿಸುವ ಕಾರ್ಯ ನಡೆಸಿದ್ದು, ಸಮಿತಿಯಲ್ಲಿ ಅಪರ ಜಿಲ್ಲಾಧಿಕಾರಿ ಎಸ್.ಎಂ.ಮಂಗಳಾ, ಜಿಲ್ಲಾ ಖಜಾನಾಧಿಕಾರಿ ಮಹೇಂದ್ರ, ಡಿಡಿಪಿಐ ಕೃಷ್ಣಮೂರ್ತಿ ಇದ್ದರು.
ಪರೀಕ್ಷಾ ಉಸ್ತುವಾರಿಯನ್ನು ಡಿಡಿಪಿಐ,ಪರೀಕ್ಷಾ ನೋಡಲ್ ಅಧಿಕಾರಿ ಕೃಷ್ಣಪ್ಪ ವಹಿಸಿದ್ದು, ಡಯಟ್ ಪ್ರಾಂಶುಪಾಲ ವೀಕ್ಷಕರಾಗಿ ಕಾರ್ಯನಿರ್ವಹಿಸಿದರು.
ಒಟ್ಟಾರೆ ಪರೀಕ್ಷೆ ಸುಗಮವಾಗಿ ನಡೆದಿದ್ದು, ಇದಕ್ಕೆ ಕಾರಣರಾದ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ಎಲ್ಲಾ ಕೇಂದ್ರಗಳ ಮುಖ್ಯ ಅಧೀಕ್ಷಕರು, ಸಿಬ್ಬಂದಿಗೆ ಡಿಡಿಪಿಐ ಕೃಷ್ಣಮೂರ್ತಿ ಧನ್ಯವಾದ ಸಲ್ಲಿಸಿದ್ದಾರೆ.
ಕುಂದಾಪುರ- ನೀಟ್ ಅಕ್ರಮಗಳ ವಿರುದ್ಧ ಎನ್ ಎಸ್ ಯು ಐ ಪ್ರತಿಭಟನೆ
ಕುಂದಾಪುರ: ನೀಟ್ ಅಕ್ರಮ ಮೋದಿ ಸರ್ಕಾರದ ಬಹುದೊಡ್ಡ ಹಗರಣ. ಪ್ರತಿಭಾನ್ವಿತ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುವ ಕೇಂದ್ರ ಸರಕಾರದ ಪ್ರಾಯೋಜಿತ ಭ್ರಷ್ಟಾಚಾರ. ಈ ಅಕ್ರಮಗಳ ಬಗ್ಗೆ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಮತ್ತು ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ಸೌರವ ಬಲ್ಲಾಳವರು ಆಗ್ರಹಿಸಿದರು.
ಇಂದು ಕುಂದಾಪುರದ ಶಾಸ್ತ್ರಿ ಸರ್ಕಲ್ ನಲ್ಲಿ ನಡೆದ ಎನ್ ಎಸ್ ಯು ಐ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕರಾವಳಿ ಭಾಗದ ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿಗಳು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ನೂತನ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ಸ್ವಷ್ಟನೆಯನ್ನು ನೀಡಬೇಕು ಎಂದರು .
ಪ್ರತಿಭಟನೆಯ ನೇತೃತ್ವ ವಹಿಸಿದ ಮೊಳಹಳ್ಳಿ ದಿನೇಶ್ ಹೆಗ್ಡೆಯವರು ರಾಷ್ಟ್ರಮಟ್ಟದಲ್ಲಿ ನೀಟ್ ಆಕ್ರಮದ ವಿರುದ್ಧ ಹೋರಾಡುವ ವಿರೋಧಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರ ಜೊತೆ ದೇಶದ ವಿದ್ಯಾರ್ಥಿಗಳು ಇದ್ದು ಹೋರಾಡುತ್ತಿರುವಾಗ ಕೇಂದ್ರ ಸರಕಾರ ಸಂಸತ್ತಿನಲ್ಲಿ ಅವರ ಧ್ವನಿಯನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾ ಕಾರ್ಯಾಧ್ಯಕ್ಷರಾದ ಕಿಶನ್ ಹೆಗ್ಡೆ ಕೋಳ್ಕೆಬೈಲ್ ಮುಂದಿನ ದಿನಗಳಲ್ಲಿ ಇನ್ನಷ್ಟು ಹೋರಾಟಗಳನ್ನು ಮಾಡುತ್ತೇವೆ ಎಂದರು.
ಈ ಪ್ರತಿಭಟನಾ ಕಾರ್ಯಕ್ರಮದಲ್ಲಿ ಹರಿಪ್ರಸಾದ್ ಶೆಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಂದಾಪುರ, ಅರವಿಂದ ಪೂಜಾರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈಂದೂರು, ಸುಜನ್ ಶೆಟ್ಟಿ NSUI ಅಧ್ಯಕ್ಷ ,ಕುಂದಾಪುರ ಬ್ಲಾಕ್, ದೇವಕಿ ಸಣ್ಣಯ್ಯ ಅಧ್ಯಕ್ಷೆ ಮಹಿಳಾ ಕಾಂಗ್ರೆಸ್, ವಿಕಾಸ್ ಹೆಗ್ಡೆ ಜಿಲ್ಲಾ ವಕ್ತಾರ, ಅಶೋಕ್ ಪೂಜಾರಿ ನಾಯಕರು, ರೋಶನ್ ಶೆಟ್ಟಿ ಅಧ್ಯಕ್ಷ ಜಿಲ್ಲಾ ಸೋಶಿಯಲ್ ಮೀಡಿಯಾ, ಚಂದ್ರಶೇಖರ ಶೆಟ್ಟಿ ರಾಜ್ಯ ಸೋಶಿಯಲ್ ಮೀಡಿಯಾ ಕಾರ್ಯದರ್ಶಿ, ಪುರಸಭಾ ಸದಸ್ಯರಾದ ಚಂದ್ರಶೇಖರ ಖಾರ್ವಿ, ಪ್ರಭಾವತಿ ಮತ್ತು ಶ್ರೀಧರ ಶೇರಿಗಾರ್. ಆಶಾ ಕರ್ವಾಲ್ಲೊ, ಸೌಮ್ಯ ಮೊಗವೀರ, ಮುನಾಫ್ ಕೋಡಿ, ಚಂದ್ರ ಆಮೀನ್, ನಾರಾಯಣ ಆಚಾರ್, ಕುಮಾರ ಖಾರ್ವಿ, ಅಭಿಜಿತ್ ಪೂಜಾರಿ, ಗಣೇಶ್ ಶೇರಿಗಾರ್, ಶೋಭಾ ಸಚ್ಚಿದಾನಂದ, ಅಶೋಕ್ ಸುವರ್ಣ, ಹಾರೋನ್ ಸಾಹೆಬ್, ಜ್ಯೋತಿ ನಾಯ್ಕ್, ವಿದ್ಯಾದರ ಪೂಜಾರಿ, ಸುನಿಲ್ ಪೂಜಾರಿ, ಕೇಶವ್ ಭಟ್, ಅಬ್ದುಲ್ ಸಾಹೇಬ್, ಸಂತೋಷ ಪೂಜಾರಿ, ದಿನೇಶ್ ಬೆಟ್ಟ, ಲಕ್ಷ್ಮಣ ಬರೆಕಟ್ಟು, ಚಂದ್ರಕಾಂತ ಖಾರ್ವಿ, ರಾಕೇಶ್ ಶೆಟ್ಟಿ, ರಘುರಾಂ ನಾಯ್ಕ್, ವೇಲಾ ಬ್ರಗಾಂಜ, ಮೇಬಲ್ ಡಿಸೋಜ, ಡೊಲ್ಫಿ ಡಿಕೋಸ್ತ, ವೇಣು ಗೋಪಾಲ ಮತ್ತಿತರ ಕಾರ್ಯಕರ್ತರುರು ಭಾಗವಹಿಸಿದರು.
ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿನೋದ್ ಕ್ರಾಸ್ತಾರವರು ಪ್ರಸ್ತಾವಿಕ ಮಾತುಗಳನ್ನು ಆಡಿ , ಕಾರ್ಯಕ್ರಮವನ್ನು ನಿರೂಪಿಸಿದರು.
UBMC ಮತ್ತು CSI ಕೃಪಾ ಆಂಗ್ಲ ಮಾಧ್ಯಮ ಶಾಲೆ ರಕ್ಷಕ -ಶಿಕ್ಷಕ ಸಂಘದ ಸಭೆ / UBMC and CSI Krupa English Medium School Guardian-Teacher Association meeting
ಕುಂದಾಪುರ 29ನೇ ಜೂನ್ 2024 : UBMC ಮತ್ತು CSI ಕೃಪಾ ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರ, ಪ್ರಥಮ ಮಹಾಸಭೆ ಮತ್ತು ಪೋಷಕರ ಸಭೆ ಕಾರ್ಯಕ್ರಮವನ್ನು 29 ಜೂನ್ ರಂದು ಶಾಲಾ ಸಭಾಂಗಣದಲ್ಲಿ ಆಚರಿಸಲಾಯಿತು.
ಪ್ರಾಂಶುಪಾಲೆ ಅನಿತಾ ಆಲಿಸ್ ಡಿಸೋಜಾ ಮತ್ತು ನರ್ಸರಿ ಮುಖ್ಯೋಪಾಧ್ಯಾಯಿನಿ ಸವಿತಾ ಅವರು ಗಣ್ಯರನ್ನು ವೇದಿಕೆಗೆ ಕರೆದೊಯ್ಯುವ ಮೂಲಕ ಕಾರ್ಯಕ್ರಮವು ಪ್ರಾರಂಭವಾಯಿತು. ಸ್ಕೌಟ್ ಶಿಕ್ಷಕಿ ಸವಿತಾ ಆರ್ ಪ್ರಾರ್ಥನಾ ಗೀತೆಯನ್ನು ಹಾಡಿದರು.
ರೆ. ಇಮ್ಯಾನುಯೆಲ್ ಜಯಕರ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಪೋಷಕರಿಗೆ ಅದ್ಭುತವಾದ ದೃಷ್ಟಿಕೋನ ಕಾರ್ಯಕ್ರಮವನ್ನು ನೀಡಿದರು. ಮಗುವನ್ನು ಅಂದಗೊಳಿಸುವಲ್ಲಿ ಪೋಷಕರ ಪಾತ್ರದ ಮಹತ್ವವನ್ನು ವಿವರಿಸುವಾಗ, ಮಕ್ಕಳು ಪೋಷಕರನ್ನು ಅನುಕರಿಸುವ ಅಂಶವನ್ನು ಒತ್ತಿ ಹೇಳಿದರು. ಆದ್ದರಿಂದ, ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಮಾದರಿಯನ್ನು ಹೊಂದಿಸಬೇಕು ಮತ್ತು ಸ್ಪೂರ್ತಿದಾಯಕ ಉತ್ತಮ ಜೀವನವನ್ನು ನಡೆಸಬೇಕು.” ಎಂದು ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ಗಣ್ಯರು ಹಾಗೂ ಪೋಷಕರು ಪಾಲ್ಗೊಂಡಿದ್ದರು. ಹೊಸದಾಗಿ ದಾಖಲಾದ ವಿದ್ಯಾರ್ಥಿಗಳ ಪೋಷಕರನ್ನು ಸಹಾಯಕ ಶಿಕ್ಷಕರಾದ ಉಜ್ವಲಾ ಮತ್ತು ಸವಿತಾ ಆರ್. ಹೊಸದಾಗಿ ದಾಖಲಾದ ವಿದ್ಯಾರ್ಥಿಗಳ ಪೋಷಕರನ್ನು ಗಣ್ಯರಿಂದ ಸ್ವಾಗತ ಪತ್ರಗಳನ್ನು ಸ್ವೀಕರಿಸಲು ಆಹ್ವಾನಿಸಿದರು.
ಶಿಕ್ಷಕ ಪ್ರಿಯಾಂಕಾ ಅವರು ಆಯಾಯ ವಿಷಯಗಳ ಶಿಕ್ಷಕರನ್ನು ಮತ್ತು ತರಗತಿ ಶಿಕ್ಷಕರನ್ನು ಪೋಷಕರಿಗೆ ಪರಿಚಯಿಸಿದರು. ನರ್ಸರಿ ವಿಭಾಗದ ಮುಖ್ಯೋಪಾಧ್ಯಾಯಿನಿ ಸವಿತಾ ಅವರು ಪೋಷಕರಿಗೆ ನಿಯಮಗಳು ಮತ್ತು ನಿಬಂಧನೆಗಳನ್ನು ಪಟ್ಟಿ ಮಾಡಿದರು.
ಪ್ರಾಂಶುಪಾಲರಾದ ಅನಿತಾ ಆಲಿಸ್ ಡಿಸೋಜಾ, 2024-25ನೇ ಸಾಲಿನ ಶಾಲಾ ಪಠ್ಯಕ್ರಮದ ವಿನ್ಯಾಸದ ಪಕ್ಷಿನೋಟವನ್ನು ನೀಡಿ “ಮನೆ ಮತ್ತು ಶಾಲೆ ಸೇತುವೆ” ಎಂಬ ವಿಷಯದ ಪ್ರಸ್ತುತತೆಯನ್ನು ವಿವರಿಸಿದರು. ಶಿಕ್ಷಕಿ ಪವಿತ್ರಾ ಅವರು ಪ್ರಾಂಶುಪಾಲರ ಸಂದೇಶವನ್ನು ಇಂಗ್ಲಿಷ್ನಲ್ಲಿ ಅನುವಾದಿಸಿದರು.
ಪೋಷಕರಿಗಾಗಿ ಸಂವಾದ ಕಾರ್ಯಕ್ರಮ ನಡೆಯಿತು. ಸಂಚಾಲಕಿ ಐರೀನ್ ಸಾಲಿನ್ಸ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ,ಶಾಲೆಯು ಎದುರಿಸುತ್ತಿರುವ ಸವಾಲುಗಳನ್ನು ಪೋಷಕರಿಗೆ ಮುಂದಿಟ್ಟರು, ಆದರೂ ಶಾಲಾ ಅಧಿಕಾರಿಗಳು ತಮ್ಮ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸದಾ ಸಿದ್ಧ ಎಂದು ಮಕ್ಕಳನ್ನು ಸದಾ ನಾವು ಸಂತೋಷದಲ್ಲಿ ಇಡಲು ಶ್ರಮಿಸುತ್ತೇವೆ’ ಎಂದು ತಿಳಿಸಿದರು.ಪಾಲಕರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು ಮತ್ತು ಶಾಲೆಯು ಹೊಸ ಮತ್ತು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಬಗ್ಗೆ ತಮ್ಮ ಸಕಾರಾತ್ಮಕ ಅಭಿಪ್ರಾಯಗಳನ್ನು ಹಂಚಿಕೊಂಡರು. ಪೋಷಕ ಶಿಕ್ಷಕರ ಸಭೆಯು “ಮನೆ ಮತ್ತು ಶಾಲೆಯನ್ನು ಸೇತುವೆ ಮಾಡುವುದು” ಎಂಬ ವಿಷಯದ ಕುರಿತು ಉತ್ತಮ ಮತ್ತು ಸಕಾರಾತ್ಮಕ ಟಿಪ್ಪಣಿಯಲ್ಲಿ ಕೊನೆಗೊಂಡಿತು.
ಸಹಾಯಕ ಶಿಕ್ಷಕಿ ವೀಣಾ ಸ್ವಾಗತಿಸಿದರು. ಸಿಎಸ್ಐ ಕೃಪಾ ವಿದ್ಯಾಲಯ ನರ್ಸರಿ ಆಂಗ್ಲ ಮಾಧ್ಯಮ ಶಾಲೆಯ ಸಹಾಯಕ ಶಿಕ್ಷಕಿ ರೇಖಾ ಎಲ್ಲರಿಗೂ ಧನ್ಯವಾದ ಅರ್ಪಿಸಿದರು, ಕಾರ್ಯಕ್ರಮವನ್ನು ಸಹಾಯಕ ಶಿಕ್ಷಕಿ ರಾಜೇಶ್ವರಿ ನಡೆಸಿಕೊಟ್ಟರು, ಸಹಾಯಕ ಶಿಕ್ಷಕಿ ಶ್ರೀಮತಿ ವೀಣಾ ಸ್ವಾಗತಿಸಿದರು.
UBMC and CSI Krupa English Medium School Guardian-Teacher Association meeting
Kundapur 29th June 2024 : UBMC and CSI Krupa English Medium School, Kundapur, first Mahasabha and parents meeting program was celebrated on 29th June in school hall.
The program began with Principal Anita Alice D’Souza and Nursery Headmistress Savita leading the dignitaries to the stage. Scout teacher Savita R sang the prayer song.
Rev. Emmanuel Jayakar inaugurated the program by lighting the lamp. They gave a wonderful orientation program to the parents. While explaining the importance of parents’ role in grooming a child, he emphasized the fact that children imitate their parents. Therefore, parents should set a good example for their children and lead an inspiring good life.” The program was attended by dignitaries and parents. Assistant teachers Ujwala and Savita R. invited the parents of the newly admitted students to receive welcome letters from the dignitaries.
Teacher Priyanka introduced the respective subject teachers and class teachers to the parents. Savitha, headmistress of the nursery department listed the rules and regulations for the parents.
Anita Alice D’Souza, Principal, gave a bird’s eye view of the school curriculum design for 2024-25 and explained the relevance of the theme “Bridging Home and School”. Teacher Pavitra translated the principal’s message in English.
An interaction program was held for parents. Principal Irene Sallins, in her presidential address, presented to the parents the challenges faced by the school, yet the school authorities are always ready to provide quality education to their students, we always strive to keep the children happy. . The parent teacher meeting ended on a good and positive note with the theme “Bridging Home and School”.
Assistant teacher Veena welcomed. CSI Krupa Vidyalaya Nursery English Medium School Assistant Teacher Rekha thanked everyone, Assistant Teacher Rajeshwari conducted the program, Assistant Teacher Veena welcomed.