ಶ್ರೀನಿವಾಸಪುರ : ಆಟಓಟಗಳಿಂದ ದೇಹದಂಡನೆಯ ಜತೆ ಮಾನಸಿಕ ದೈರ್ಯ,ಛಲ ಹೆಚ್ಚುವುದರೊಂದಿಗೆ ಆರೋಗ್ಯವಂತ ಸಮಾಜದ ಸೃಷ್ಟಿಗೆ ಕಾರಣವಾಗುತ್ತದೆ. ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅಭಿಪ್ರಾಯಪಟ್ಟರು.
ತಾಲೂಕಿನ ರಾಯಲ್ಪಾಡು ಹೋಬಳಿಯ ಕಂಡ್ಲೇವಾರಿಪಲ್ಲಿಯ ಕಾವೇರಿ ಪಬ್ಲಿಕ್ ಶಾಲಾವರಣದಲ್ಲಿ ಸೋಮವಾರ ಶಿಕ್ಷಣ ಇಲಾಖೆ ಹಾಗು ಪಂಚಾಯಿತ್ರಾಜ್ ಇಲಾಖೆ ,ರ್ರಂವಾಪಲ್ಲಿ ಗ್ರಾಮಪಂಚಾಯಿತಿ ಸಹಯೋಗದೊಂದಿಗೆ ಹಿರಿಯ ಪ್ರಾಥಮಿಕ ಮತ್ತು ಪ್ರೌಡಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟವನ್ನ ಉದ್ಗಾಟಿಸಿ ಮಾತನಾತನಾಡಿದರು.
ಈಗಾಗಲೇ ಪಟ್ಟಣದ ಅಮಾನಿಕೆರೆಯಂಗಳದಲ್ಲಿ ಕ್ರೀಡಾಂಗಣದ ಕಾಮಗಾರಿ ನಡೆಯುತ್ತಿದ್ದು, ತಾಲೂಕಿನ ರಾಯಲ್ಪಾಡು , ಗೌನಿಪಲ್ಲಿ, ಲಕ್ಷಿö್ಮÃಪುರ, ಯಲ್ದೂರು, ಸುಗುಟೂರು ಗ್ರಾಮಗಳಲ್ಲಿ ಮಿನಿ ಕ್ರೀಡಾಕೂಟಕ್ಕೆ ಯೋಜನೆಯನ್ನು ರೂಪಿಸಿದ್ದು, ಮುಂದಿನ ದಿನಗಳಲ್ಲಿ ಕಾಮಾಗರಿಯನ್ನು ಪ್ರಾರಂಭಸಿಲಾಗುವುದು. ಅಲ್ಲದೆ ತಾಲೂಕಿನ ಯುವ ಜನತೆ ಉದ್ಯೋಗ ಸೃಷ್ಟಿ ಮಾಡುವ ಉದ್ದೇಶದಿಂದ ಐದು ಸಾವಿರ ಎಕರೆಗಳಲ್ಲಿ ಕೈಗಾರಿಕಾ ವಲಯವನ್ನು ಸ್ಥಾಪಿಸಲು ಸರ್ಕಾರ ಮಟ್ಟದಲ್ಲಿ ರೂಪರೇಷಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ತಹಶೀಲ್ದಾರ್ ಜಿ.ಎನ್.ಸುದೀಂದ್ರ ಮಾತನಾಡಿ ಕ್ರೀಡೆಗಳಲ್ಲಿ ದ್ವೇಷ, ಅಸೂಯೆ, ಸೇಡು ಎಂಬುವುದೇ ಇಲ್ಲ, ಬದಲಾಗಿ ಪರಸ್ಪರ ಪ್ರೀತಿ , ಒಗ್ಗಟಿನ ಬಲ ,ಏಕಾಗ್ರತೆ ,ಕ್ರೀಯಾಶೀಲತೆ , ಬುದ್ದಿವಂತಿಕೆಯನ್ನು ಚುರುಕುಗೊಳಿಸುವಂತಹ ಶಕ್ತಿ ತುಂಬಿವೆ ಎಂದರು.
ಬಿಇಒ ಬಿ.ಸಿ.ಮುನಿಲಕ್ಷö್ಮಯ್ಯ ಮಾತನಾಡುತ್ತಾ ಕ್ರೀಡಾಪಟುಗಳು ಸೋಲುಗೆಲುವು ಸಮನಾಗಿ ಸ್ವೀಕರಿಸಿ ಸೋಲೆ ಗೆಲುವಿನ ಸೋಪಾನವೆಂದು ತಿಳಿಯಬೇಕು ಎಂದು ತಿಳಿಸಿದರು.
ಕ್ರೀಡಾಪಟುಗಳು ಕ್ರೀಡಾಜ್ಯೋತಿಯನ್ನು ಬೆಳಗಿಸಿದರು. ಶಿಕ್ಷಕಿ ಎನ್.ಮಾದವಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಇಒ ಎ.ಎನ್.ರವಿ, ಅಕ್ಷರ ಸಹಾಯಕ ನಿರ್ದೇಶಕಿ ಟಿ.ಆರ್.ಸುಲೋಚನ, ಬಿಆರ್ಸಿ ಕೆ.ಸಿ.ವಸಂತ, ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಟಿಪಿಒ ಎಸ್.ವೆಂಕಟಸ್ವಾಮಿ, ರ್ರಂವಾರಿಪಲ್ಲಿ ಗ್ರಾ.ಪಂ.ಅಧ್ಯಕ್ಷೆ ಸುಗಣಸುಧಾಕರ್, ಪಿಡಿಒ ಏಜಾಜ್ಪಾಷ, ಈ ದಿನದ ಊಟದ ದಾನಿ ಅಡ್ಡಗಲ್ ಕೆ.ಎಸ್.ಇಂದೂಧರ್, ಬಹುಮಾನಗಳ ಪ್ರಾಯೋಜಕರಾದ ಸಿ.ಶಿವಣ್ಣ, ವಿ,ಕಿಟ್ಟಣ್ಣ, ಸುರೇಶ್, ತಪಸ್ವಿ ಶಿಕ್ಷಕ ಬಾಬು ರಾಯಲ್ಪಾಡು ಗ್ರಾ.ಪಂ ಮಾಜಿಸದಸ್ಯ ಸಿಮೆಂಟ್ನಾರಾಯಣಸ್ವಾಮಿ, ರ್ರಂವಾರಿಪಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ನಾಗಮಣಿ ಹಾಗು ಸದಸ್ಯರಾದ ನರಸಿಂಹರಾಜು, ಸುದರ್ಶನ್, ಮಾಜಿ ಅಧ್ಯಕ್ಷ ಕೃಷ್ಣಾರೆಡ್ಡಿ, ಕಾವೇರಿ ಪಬ್ಲಿಕ್ ಶಾಲೆ ಆಡಳಿತ ಮಂಡಲಿ ಅಧ್ಯಕ್ಷ ಬೈರಾರೆಡ್ಡಿ, ಕಾರ್ಯದರ್ಶಿ ಕೆ.ಬಿ.ಮಹೇಶ್, ಪ್ರಾಥಮಿಕ ,ಪ್ರೌಡಾಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು, ಹೋಬಳಿಗೆ ಸಂಬAದಿಸಿದ ಸಿಆರ್ಪಿಗಳು , ತೀರ್ಪುಗಾರರಾಗಿ ದೈಹಿಕ ಶಿಕ್ಷಕರು ಆರ್.ಕೃಷ್ಣಯ್ಯ ತಂಡವು ಕಾರ್ಯನಿರ್ವಹಿಸಿತು. ಹೋಬಳಿಗಳ ಸರ್ಕಾರಿ , ಅನುದಾನಿತ ಶಾಲೆ, ಅನುದಾರಹಿತ ಮುಖ್ಯ ಶಿಕ್ಷಕರು, ಶಿಕ್ಷಕರು ಭಾಗವಹಿಸಿದರು.
Month: July 2024
ನಗರಾಭಿವೃದ್ಧಿ ಪ್ರಾಧಿಕಾರದ 128ನೇ ಕೆಡಿಪಿ ಸಭೆ ಜುಲೈ 31ಕ್ಕೆ
ಕೋಲಾರ,ಜು.26: ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ 128ನೇ ಕೆಡಿಪಿ ಸಭೆಯನ್ನು ಜುಲೈ 31 ರಂದು ಬುಧವಾರ ಬೆಳಗ್ಗೆ 11-00 ಗಂಟೆಗೆ ಪ್ರಾಧಿಕಾರದ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರ ಆಧ್ಯಕ್ಷ ಮೊಹಮ್ಮದ್ ಹನೀಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಭೆಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಎಂಎಲ್ಸಿ ನಜೀರ್ ಅಹಮದ್, ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೊತ್ತೂರು ಮಂಜುನಾಥ್, ಎಂಎಲ್ಸಿ ಅನಿಲ್ ಕುಮಾರ್, ಎಂಎಲ್ಸಿ ಗೋವಿಂದರಾಜು, ಜಿಲ್ಲಾಧಿಕಾರಿ ಆಕ್ರಂಪಾಷ್, ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಭಾಗವಹಿಸುವರು.
ಓ.ಆರ್.ಎಸ್ ದಿನಾಚರಣೆ – ಕೋಲಾರ ಸರಕಾರಿ ಆಸ್ಪತ್ರೆ
ಕೋಲಾರ,ಜು.29: ಓ.ಆರ್.ಎಸ್ (ಒರಲ್ ರಿಹೈಡ್ರೇಶನ್ ಸೊಲ್ಯೂಷನ್) ದಿನವನ್ನು ಪ್ರತಿ ವರ್ಷ ಜುಲೈ 29 ರಂದು ಆಚರಿಸಲಾಗುತ್ತದೆ. ಕೋಲಾರದ ಸರಕಾರಿ ಆಸ್ಪತ್ರೆಯಲ್ಲಿ ಈ ವರ್ಷ ಓ.ಆರ್.ಎಸ್ ದಿನಾಚರಣೆ ಮಹತ್ವದ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಭಾರತೀಯ ಶಿಶುಚಿಕಿತ್ಸಾ ಸಂಸ್ಥೆ (ಐಎಪಿ ಕೋಲಾರ ಬ್ರಾಂಚ್) ಅಧ್ಯಕ್ಷ ಡಾ. ಬೀರೇಗೌಡ ಅವರ ನೇತೃತ್ವದಲ್ಲಿ ನಡೆಸಲಾಯಿತು.
ಡಾ. ಬೀರೇಗೌಡ ಓ.ಆರ್.ಎಸ್ ದ್ರಾವಣದ ಮಹತ್ವ ಮತ್ತು ಅದರ ಬಳಕೆ ಕುರಿತು ಸಮಗ್ರ ಮಾಹಿತಿ ನೀಡಿದರು. ಜ್ವರ, ಊಟನಾಳದ ಸೋಂಕು, ಮತ್ತು ಡಿಹೈಡ್ರೇಶನ್ ಸಮಸ್ಯೆಗಳನ್ನು ತಡೆಯಲು ಓ.ಆರ್.ಎಸ್ ಎಷ್ಟು ಪರಿಣಾಮಕಾರಿ ಎಂಬುದರ ಕುರಿತು ವಿವರಿಸಿದರು. ವಿಶೇಷವಾಗಿ ಮಕ್ಕಳ ಮತ್ತು ವಯೋವೃದ್ಧರ ಆರೋಗ್ಯ ಕಾಪಾಡಲು ಓ.ಆರ್.ಎಸ್ ದ್ರಾವಣದ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸಿಬ್ಬಂದಿ, ಸ್ಥಳೀಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಓ.ಆರ್.ಎಸ್ ಬಳಸುವ ಸರಳ ವಿಧಾನಗಳ ಕುರಿತು ಪ್ರತಿಯೊಬ್ಬರಿಗೂ ಸ್ಪಷ್ಟತೆ ನೀಡಲಾಯಿತು. ಓ.ಆರ್.ಎಸ್ ಕಿಟ್ಗಳನ್ನು ವಿತರಿಸಿ, ತಕ್ಷಣವೇ ದ್ರವ ನಷ್ಟವನ್ನು ತಡೆಯುವ ವಿಧಾನಗಳ ಕುರಿತು ಪ್ರಾತ್ಯಕ್ಷಿಕೆಗಳು ನಡೆಸಲಾಯಿತು.
ಕಾರ್ಯಕ್ರಮದ ಪ್ರಮುಖ ಉದ್ದೇಶವು ಸಮುದಾಯದಲ್ಲಿ ಓ.ಆರ್.ಎಸ್ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅದರ ಬಳಕೆಯ ಮಹತ್ವವನ್ನು ತಿಳಿಸುವುದಾಗಿತ್ತು.
ಕಾರ್ಯಕ್ರಮದಲ್ಲಿ ಡಾ. ಬೀರೇಗೌಡ, ಡಾ. ಆಶಾ, ಮತ್ತು ಡಾ. ಕಮಲಾಕರ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಬೀದಿ ನಾಯಿ ಹಾವಳಿ ತಪ್ಪಿಸಲು ಕ್ರಮ ಬೇಕು – ವಿ.ಮುನಿವೆಂಕಟೇಶ್ ಒತ್ತಾಯ
ಕೋಲಾರ,ಜು.29: ಕೋಲಾರ ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ನಗರಪಾಲಿಕೆ ಸೂಕ್ತ ಕ್ರಮ ಕೈಗೊಂಡು ನಾಗರೀಕರಿಗೆ ನಾಯಿಗಳಿಂದ ಆಗುತ್ತಿರುವ ಉಪಟಳಕ್ಕೆ ಇಡೀಶ್ರೀ ಹಾಡಬೇಕು ಎಂದು ಹಿರಿಯ ನಾಗರೀಕರ ಒಕ್ಕೂಟದ ಸಂಚಾಲಕ ವಿ.ಮುನಿವೆಂಕಟೇಶ್ ಒತ್ತಾಯಿಸಿದ್ದಾರೆ.
ನಗರದ ವಿವಿಧ ಬಡಾವಣೆ ಹಾಗೂ ಹೊರವಲಯಗಳಲ್ಲಿ ನಾಯಿಗಳ ಕಾಟ ಹೆಚ್ಚಾಗಿದೆ, ಶಾಲಾ ಮಕ್ಕಳು, ವಯೋವೃದ್ಧರು ಹಾಗೂ ವಾಯು ವಿಹಾರಕ್ಕೆ ತೆರಳುವ ಜನರ ಮೇಲೆ ದಾಳಿ ಮಾಡುತ್ತಿವೆ. ಇದುವರೆಗೂ ಹತ್ತಾರು ಜನರು ಬೀದಿನಾಯಿಗಳ ಹಾವಳಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೋಲಾರ ನಗರದ 35 (ಮೂವತ್ತೈದು) ವಾರ್ಡ್ಗಳಲ್ಲಿಯೂ ಬೀದಿನಾಯಿಗಳ ಹಾವಳಿ ಇದೆ. ಅದರಲ್ಲಿಯೂ ನಗರದ ಹೊರವಲಯ ಎರಡು ಬದಿಯ ರಸ್ತೆಗಳಲ್ಲಿ ಕೋಳಿ, ಮಾಂಸದ ಅಂಗಡಿಗಳ ತ್ಯಾಜ್ಯಗಳನ್ನು ಜನರು ಬಿಸಾಡುವುದರಿಂದ ಅಲ್ಲಿಗೆ ಆಹಾರ ಹುಡುಕಿಕೊಂಡು ಬರುವ ಬೀದಿ ನಾಯಿಗಳು ಹಗಲು ರಾತ್ರಿ ಎನ್ನದೇ ರಸ್ತೆಯಲ್ಲಿ ಓಡಾಡುವ ಜನರೆಲ್ಲರು ದ್ವಿಚಕ್ರ ವಾಹನ, ಸೈಕಲ್ ಮೇಲೆ ಸಂಚರಿಸುವ ಜನರ ಮೇಲೆ ದಾಳಿ ಮಾಡಿ ಕಚ್ಚಿ ಗಾಯಗೊಳ್ಳುಸುತ್ತಿವೆ.
ಆದುದರಿಂದ ಜಿಲ್ಲಾಡಳಿತ ಹಾಗೂ ಆಡಳಿತಾಧಿಕಾರಿ ನಗರಸಭೆ, ಕೋಲಾರ ರವರು ಬೀದಿನಾಯಿಗಳಿಗೆ ಕಡಿವಾಣ ಹಾಕುವ ಸಲುವಾಗಿ ಪೌರಾಯುಕ್ತ/ಹಿರಿಯ ಆರೋಗ್ಯಾಧಿಕಾರಿಯವರುಗಳಿಗೆ ಡಾವೀನ್ ಮೆಥೆಡ್ ಆಡಿ ಕ್ರಮ ಜರುಗಿಸಲು ಸೂಕ್ತ ಆದೇಶ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಶಿರಾಡಿ ಘಾಟ್ನಲ್ಲಿ ಭಾರೀ ಭೂಕುಸಿತ, ಹಲವಾರು ವಾಹನಗಳು ಮಣ್ಣಿನಡಿ ಸಿಲುಕಿವೆ
ಹಾಸನ: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಾಡಿ ಘಾಟಿಯ ದೊಡ್ಡತಪ್ಲೆ ಬಳಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಮತ್ತೆ ಭಾರೀ ಭೂಕುಸಿತ ಸಂಭವಿಸಿದ್ದು, ಹಲವು ವಾಹನಗಳು ಮಣ್ಣಿನಡಿ ಸಿಲುಕಿವೆ. ಎರಡು ಕಾರು, ಒಂದು ಟ್ಯಾಂಕರ್ ಸೇರಿ ಆರು ವಾಹನಗಳು ಮಣ್ಣನಡಿ ಸಿಲುಕಿವೆ ಎನ್ನಲಾಗಿದೆ.ಸತತ ಮಳೆಯಿಂದ ದೊಡ್ಡತಪ್ಲೆ ಬಳಿ ಭಾರೀ ಪ್ರಮಾಣದ ಭೂ ಕುಸಿತ ಸಂಭವಿಸಿದೆ.
ಈ ಪ್ರದೇಶದಲ್ಲಿ ಕಳೆದ ಹದಿನೈದು ದಿನಗಳಿಂದ ಮಣ್ಣು ಕುಸಿಯುತ್ತಿದೆ. ಇಂದು ಮತ್ತೆ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದಿದೆ. ಇದೇ ವೇಳೆ ಕಾರಿನಲ್ಲಿ ಸಂಚರಿಸುತ್ತಿದ್ದವರು ಅದರಡಿ ಸಿಲುಕಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ರಕ್ಷಣಾ ಸಿಬ್ಬಂದಿ ಜೆಸಿಬಿ ಮೂಲಕ ಮಣ್ಣು ತೆರವು ಮಾಡುತ್ತಿದ್ದಾರೆ. ಸ್ಥಳದಲ್ಲಿ ಆತಂಕ ಹೆಚ್ಚಾಗಿದೆ. ಮತ್ತಷ್ಟು ಮಣ್ಣು ಕುಸಿದರೆ ದೊಡ್ಡ ಅನಾಹುತವೇ ಸಂಭವಿಸುವ ಭೀತಿ ಎದುರಾಗಿದೆ. ಸಮರೋಪಾದಿಯಲ್ಲಿ ಮಣ್ಣು ತೆರವು ಮಾಡಲು ಪ್ರಯತ್ನಿಸಲಾಗುತ್ತಿದೆ.
ವಯನಾಡು ಗುಡ್ಡ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 74 ಕ್ಕೆ ಏರಿಕೆ
ಕೇರಳ:ಜುಲಾಯ್ 30, ಇಂದು ಬೆಳಿಗ್ಗೆ ನಡೆದ ಭೀಕರ ವಯನಾಡಿನಲ್ಲಿ ಅತೀ ಮಳೆಯಿಂದಾಗಿ, ಗುಡ್ಡ ಕುಸಿತ ಅರಿಣಾವಾಗಿ ಇಷ್ಟರ ವರೆಗೆ ಸುಮಾರು 74 ಮೃತದೇಹಗಳು ಗುಡ್ಡ ಕುಸಿತದ ನಂತರದ ಕಾರ್ಯಾಚರಣೆಯಲ್ಲಿ ಪತ್ತೆಯಾಗಿದೆ. ಗಂಟೆ-ಗಂಟೆಗೂ ಮರಣದ ಸಂಖ್ಯೆಗಳು ಹೆಚ್ಚುತ್ತಾಗಲಿದ್ದು, ಇನ್ನೂ ಹೆಚ್ಚು ಸಾವನ್ನಪ್ಪಿರುವ ಶಂಕೆ ಇದೆ.
ಚಾಲಿಯಾರ್ ನದಿಯಲ್ಲಿ ಹಲವಾರು ಮಂದಿ ನಾಪತ್ತೆಯಾಗಿದ್ದಾರೆ. ನೂರಾರು ಮಂದಿ ಘಟನೆ ಸಿಲುಕಿ ಗಾಯಗೊಂಡಿದ್ದಾರೆ. ಇದೀಗ ಸಮೀಪದ ಮದ್ರಸ ಮತ್ತುಮಸೀದಿಗಳನ್ನು ಆಸ್ಪತ್ರೆಗಳಾಗಿ ಬದಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಾಹಿತಿಯಂತೆ ಇನ್ನೂ ಹಲವು ಮಂದಿ ಮಣ್ಣಿನಡಿ ಸಿಲುಕಿಕೊಂಡಿದ್ದು ಅವರನ್ನು ರಕ್ಷಿಸುವ ಕಾರ್ಯ NDRF ನೇತೃತದಲ್ಲಿ ಜಾರಿಯಲ್ಲಿದೆ.
ಕರ್ನಾಟದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಘಟನೆಯ ಕುರಿತು ದುಃಖ ತೋರ್ಪಡಿಸಿ ತಮ್ಮಿಂದಾದ ಸಹಾಯ ಮಾಡುವುದಾಗಿ ಟ್ವೀಟ್ ಮಾಡಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವಯನಾಡಿನ ಜನರೊಂದಿಗೆ ಭಾರತ ಸ್ಪಂದಿಸುತ್ತಿದ್ದು ಅವರಿಗಾಗಿ ಪ್ರಾರ್ಥಿಸುತ್ತಿದೆ.
At Mount Rosary Church The parishioners rejoice with Elders to celebrate, ‘GRANDPARENTS DAY’
Santhekatte, Kallianpur: It was truly a bright Sunday, 28th July, 2024, as the usual rain too gave us a break; the day was so unique and special for everyone. Grandparents, numbering a total around 230, in this large parish, of them almost 110, above 70 years of age, made their mind to be in the church to celebrate the Special Holy Mass at 8.00 am. Especially children and youth took extra care and interest to prepare their respective Grandparents, get ready to bring them to the Church, both to pray with and for them…… Yes, today is ‘Grandparents & Elders Day’ in Mount Rosary Church, Santhekatte, Kallianpur.
The 8.00 am Holy Grand Mass was celebrated by our Vicar Rev Dr Roque DSouza and in his opening address, beautifully narrated the importance of elders in our life, in the society and at our individual homes, and ‘we Rosarian Family, well aware of your contribution and sacrifices both to Church and society…’ he told.
In the followed homily, which was really inspiring and touching, emphasized on elders role in our families, by referring the Ruth and her life, as Pope Francis officially declared this year 2021 dedicated to Family in Amoris Leticia and the Church was requested to honour our respective grandparents, every year and this is consecutive 4th year in our parish, as they are an integral part of a happy family, on 28th July, 2024… (There was a custom in many churches in Coastal Karnataka to have this on the Feast of Jesus Grandparents Sts Anna & Joachim on 26th July, every year. However, globally we celebrate Senior Citizens Day on 21st August every year)
Under the energetic, spirited initiative and leadership of the Family Commission of the Parish the liturgy was meticulously shared by the elders and the choir too made it a point to have very meaningful hymns for the occasion.
After the Holy Mass the elders posed for a Group Photograph in the Portico and moved to the adjacent Mini Hall for the Get Together.
After the Breakfast and traditional welcome address and few spot games, Rev Dr Roque DSouza the Parish priest addressed the elders, ‘all of you are yourselves a valuable treasure, a divine Blessing to the society and an ideal and model to imitate great Christian values to the youngsters’. To start with Vicar paid rich tributes to our forefathers ‘who laid sound foundation to our faith, future and wellbeing in mind, as we cherish the fruit of their sacrifices. We are not afforded to forget our roots’ he stressed…..
He specially thanked Convenor and all the Members of the Family Commission of the parish who took initiative to have these small but very meaningful celebrations. Main sponsors of the event and others in different ways and means too were recognised and the Chief Guest couple, Mrs Rosy and Mr Joseph Fernandes were honoured by draping the traditional shawl and memento. Vice President of PPC and Coordinator of 20 Ayogs, Mr Luke DSouza and Mrs Daisy Mendonca, too were present and extended their greetings to the elders of the parish.
The Gurkars of 18 wards and the office bearers and few elderly members of Pastoral Council, Family Commission of the parish Church led by Mr Vijay Sequeira, Mrs Prathiba DSouza along with others organised and witnessed a festive look and the gathering of faithful in the Mini Hall, to its near capacity, as the ‘World Day for Grand Parents & Elderly’ was celebrated in a simple but meaningful manner as the whole parish family congratulated the Senior Citizens who took part in the whole proceedings with keen interest and excitement.
ಕುಂದಾಪುರ: ಯುಬಿಎಂಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಕೊ ಕ್ಲಬ್ ಸ್ಥಾಪನೆ / Kundapur: Establishment of Eco Club at UBMC English Medium School
ಕುಂದಾಪುರ, 27.07.2024: UBMC ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರ ECO CLUB ಅನ್ನು 27.07.2024 ರಂದು ಸ್ಥಾಪಿಸಲಾಯಿತು. ಪ್ರಾಂಶುಪಾಲರಾದ ಶ್ರೀಮತಿ ಅನಿತಾ ಆಲಿಸ್ ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು. ಇಸಿಒ ಕ್ಲಬ್ನ ಸಂಯೋಜಕಿ ಶ್ರೀಮತಿ ರಾಜೇಶ್ವರಿ ಮತ್ತು ವಿದ್ಯಾರ್ಥಿ ಸಂಯೋಜಕರಾದ ಆಯುಷ್ ಮತ್ತು ನಿಧಿ ಅವರು ಜೊತೆ ನೀಡಿದರು. ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆಯ ಮೂಲಕ ದೇವರ ಕೃಪೆಗೆ ಪಾತ್ರರಾದರು. ಶ್ರೀಮತಿ ವೀಣಾ ಶ್ಲೋಕ ಪಠಿಸಿದರೆ ಗಣ್ಯರು ದೀಪ ಬೆಳಗಿಸಿ ಇಕೋ ಕ್ಲಬ್ ಅನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ‘ಶಿಕ್ಷಾ ಸಪ್ತಾಹ’ದ 6 ನೇ ದಿನದಂದು “ಜೀವನಕ್ಕಾಗಿ ಮಿಷನ್” ಎಂಬ ವಿಷಯದೊಂದಿಗೆ ನಿಗದಿಪಡಿಸಲಾಯಿತು.
ಪ್ರಾಂಶುಪಾಲರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾನವನ ಸ್ವಾರ್ಥದಿಂದ ಪ್ರಕೃತಿ ಮಾತೆಗೆ ಉಂಟಾದ ಹಾನಿಯ ಬಗ್ಗೆ ದುಃಖ ವ್ಯಕ್ತಪಡಿಸಿದರು. ಪ್ಲಾಸ್ಟಿಕ್ ಬಳಕೆ, ಅಭಿವೃದ್ಧಿ ಉದ್ದೇಶಗಳಿಗಾಗಿ ಮರಗಳನ್ನು ಕಡಿಯುವುದು, ಕಾರ್ಖಾನೆಗಳು ಮತ್ತು ವಾಹನಗಳು ಗಾಳಿಯಲ್ಲಿ ಹಾನಿಕಾರಕ ಅನಿಲಗಳನ್ನು ಹೊರಸೂಸುವ ಕಾರ್ಖಾನೆಗಳು ಮತ್ತು ಕಾರ್ಖಾನೆಗಳು ನೀರು ಮತ್ತು ಮಣ್ಣಿನಲ್ಲಿನ ಅವಶೇಷಗಳನ್ನು ವಿಲೇವಾರಿ ಮಾಡುವುದರಿಂದ ಗಾಳಿ, ಮಣ್ಣು ಮತ್ತು ನೀರಿನ ಮಾಲಿನ್ಯದ ಬಗ್ಗೆ ವಿಷಾದಿಸಿದರು. ಯುವ ವಿದ್ಯಾರ್ಥಿಗಳು ಭವಿಷ್ಯದ ಜವಾಬ್ದಾರಿಯುತ ನಾಗರಿಕರಾಗಬೇಕು ಮತ್ತು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಮತ್ತು ಅಂತಿಮವಾಗಿ ನಿಲ್ಲಿಸುವ ಮೂಲಕ ಭೂಮಿ ತಾಯಿಯನ್ನು ರಕ್ಷಿಸಬೇಕೆಂದು ಅವರು ಒತ್ತಾಯಿಸಿದರು. ಕಡಿಮೆ ವಾಹನಗಳನ್ನು ಬಳಸಲು ಪ್ರಯತ್ನಿಸಿ ಮತ್ತು ಶಾಲೆ ಮತ್ತು ಹತ್ತಿರದ ದೂರದವರೆಗೆ ನಡೆಯಲು ಪ್ರಯತ್ನಿಸಿ. ಪ್ರಕೃತಿ ಮಾತೆಗೆ ಉಂಟಾದ ಹಾನಿಯ ಬಗ್ಗೆ ಅವರ ಕುಟುಂಬಗಳು, ನೆರೆಹೊರೆಯವರು ಮತ್ತು ಸಂಬಂಧಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ನಮ್ಮ ತಾಯಿ ಭೂಮಿಯನ್ನು ಉಳಿಸಲು.ವಿದ್ಯಾರ್ಥಿ ಸಂಯೋಜಕರು ಭೂಮಿ ತಾಯಿಯನ್ನು ಉಳಿಸುವ ಪ್ರತಿಜ್ಞೆಯನ್ನು ಪಠಿಸಿದರು ಮತ್ತು ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪುನರುಚ್ಚರಿಸಿದರು.
ಪರಿಸರ ಸ್ನೇಹಿ ಕಾಗದದ ಚೀಲಗಳನ್ನು ತಯಾರಿಸಲು ವಿದ್ಯಾರ್ಥಿಗಳಿಗೆ ಕಲಿಸಲಾಯಿತು. ಇದರ ಮುಂದುವರಿದ ಭಾಗವಾಗಿ, ಜೈವಿಕ ತಾಯಿಯೊಂದಿಗೆ ಮಗು ಮತ್ತು ಮಾತೃ ವೃಕ್ಷದೊಂದಿಗೆ ಸಸಿಗಳನ್ನು ನೆಡಲು ಪ್ರೋತ್ಸಾಹಿಸಲಾಯಿತು. ವಿದ್ಯಾರ್ಥಿಗಳು ಮರುದಿನ ಅದೇ ರೀತಿ ಮಾಡಿದರು.
ಶ್ರೀಮತಿ ರಾಜೇಶ್ವರಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಶ್ರೀಮತಿ ಪವಿತ್ರಾ ಮತ್ತು ಸಹಾಯಕ ಶಿಕ್ಷಕಿ ನಿರೂಪಿಸಿದರು. ಶ್ರೀಮತಿ ಸವಿತಾ ಆರ್ ಅವರು ಧನ್ಯವಾದ ಸಲ್ಲಿಸಿದರು.
Kundapur: Establishment of Eco Club at UBMC English Medium School
Kundapura, 27.07.2024 : UBMC English Medium School , Kundapura established the ECO CLUB on 27.07.2024. The event was scheduled during the 6th day of the ‘ Shiksha Saptah’ with the theme :”Mission For Life.”
The Principal, Mrs. Anita Alice Dsouza presided over the event. She was escorted by Mrs.Rajeshwari , the coordinator of ECO club and Students Ayush & Nidhi, the Student Coordinators. Students implored God’s blessings through a prayer song. The dignitaries inaugurated the ECO CLUB by Lighting the Lamp while Mrs.Veena recited the shloka .
Mrs. Rajeshwari welcomed the gathering.
Students were taught to prepare eco-friendly paper bags .
The Principal in her presidential address expressed her grief over the harm caused to Mother nature due to human beings’ selfish motives. She lamented on the Use of Plastics, felling off trees for development purposes , pollution of air, soil & water due to factories & vehicles emitting harmful gases in the air and factories disposing off residues in the water and soil. She urged the young students to be future responsible citizens and protect Mother Earth by minimising and eventually stopping the use of Plastics.To try using fewer vehicles and to walk up to school and nearby distance. To spread awareness among their families, neighbours, and relatives about the harm caused to Mother Nature and to save our Mother Earth.
Student Coordinator recited the Pledge to save Mother Earth and all students and teachers of the school repeated.
As a follow-up, students were encouraged to plant a sapling with their mother…… Child with the with biological mother & Mother tree. Students did the same the following day.
The event winded up after Mrs. Savitha R. expressed her vote of thanks.
The program was anchored by Mrs. Pavithra and Asst. Teacher.
.
ಶ್ರೀನಿವಾಸಪುರ : ಹೆಚ್ಚು ಶಬ್ದ ಬರುವ ಸೈಲೆನ್ಸರ್ ಅಳವಡಿಸಿಕೊಂಡು ಕಿರಿಕಿರಿ ಉಂಟು ಮಾಡುತ್ತಿದ್ದ 150 ಸೈಲೆನ್ಸರ್ಗಳನ್ನು ರೋಡ್ ರೋಲರ್ನಿಂದ ನಜ್ಜುಗುಜ್ಜು ಮಾಡಲಾಗಿದೆ – ಡಿವೈಎಸ್ಪಿ ಡಿ.ಸಿ.ನಂದಕುಮಾರ್
ಶ್ರೀನಿವಾಸಪುರ : ಶ್ರೀನಿವಾಸಪುರ ಪಟ್ಟಣ, ರಾಯಲಪಾಡು ಹಾಗೂ ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಲವು ಯುವಕರು ಹೆಚ್ಚು ಶಬ್ದ ಬರುವ ಸೈಲೆನ್ಸರ್ ಅಳವಡಿಸಿಕೊಂಡು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದು, ಈಗಾಗಲೇ ಮುಳಬಾಗಿಲು ತಾಲೂಕಿನಲ್ಲಿ ಇಂತಹ ಬೈಕ್ಗಳ ಸುಮಾರು ೧೫೦ ಸೈಲೆನ್ಸರ್ಗಳನ್ನು ಪೊಲೀಸರು ಕಿತ್ತು ನಗರದ ಡಿವಿಜಿ ವೃತ್ತದಲ್ಲಿ ರೋಡ್ ರೋಲರ್ನಿಂದ ತುಳಿಸಿ ನಜ್ಜುಗುಜ್ಜು ಮಾಡಲಾಗಿದೆ ಎಂದು ಡಿವೈಎಸ್ಪಿ ಡಿ.ಸಿ.ನಂದಕುಮಾರ್ ಮಾಹಿತಿ ನೀಡಿದರು.
ಪಟ್ಟಣದ ನೌಕರರ ಭವನದಲ್ಲಿ ಶುಕ್ರವಾರ ಜಿಲ್ಲಾ ಪೊಲೀಸ್ ಇಲಾಖೆವತಿಯಿಂದ ಏರ್ಪಡಿಸಿದ್ದ ಜನ ಸಂಪರ್ಕಸಭೆಗೆ ಚಾಲನೆ ನೀಡಿ ಮಾತನಾಡಿದರು.
ಸುಮಾರು ದಿನಗಳಿಂದ ಕರ್ಕಶ ಶಬ್ದದಿಂದ ಸಾರ್ವಜನಿಕರು ಗಾಬರಿಗೊಳ್ಳುವಂತೆ ಅಥವಾ ಭಯ ಪಡುವಂತೆ ಮಾಡಿ ಬೈಕ್ ಸವಾರರು ಖುಷಿ ಪಡುತ್ತಿದ್ದರು. ಇದನ್ನು ಗಮನಿಸಿದ ಕರ್ಕಶ ಶಬ್ದ ಬರುವ ಸೈಲೆನ್ಸರ್ ವಶಕ್ಕೆ ಪಡೆಯಲು ಎಲ್ಲಾ ಠಾಣೆಗಳಿಗೆ ಸೂಚಿಸಲಾಗಿದೆ. ಅದರಂತೆ ಬುಧವಾರ ಆಯಾಯ ಠಾಣೆಯ ಪೊಲೀಸರು ಗೋಣಿ ಚೀಲದಲ್ಲಿ ಸೈಲೆನ್ಸರ್ ತುಂಬಿಕೊAಡು ಬಂದು ಸಾರ್ವಜನಿಕ ಸ್ಥಳದಲ್ಲಿ ರೋಡ್ ರೋಲರ್ ಮೂಲಕ ಸೈಲೆನ್ಸರ್ ನಾಶಪಡಿಸಿ ವಾಹನ ಸವಾರರಿಗೆ ಎಚ್ಚರಿಕೆ ನೀಡಲಾಗಿದೆ.
ಜನ ಸಂಪರ್ಕ ಸಭೆಯಲ್ಲಿ ಶ್ರೀನಿವಾಸಪುರ ಅಥ್ಲೆಟಿಕ್ ಅಸೋಸಿಯೇಷನ್ ಪದಾಧಿಕಾರಿಗಳು ಮಾತನಾಡಿ, ತಾಲೂಕಿನಲ್ಲಿ ೧೮ ವರ್ಷ ಒಳಗಿನ ಯುವಕರು ಬೈಕ್ ಚಲಾಯಿಸುತ್ತಿದ್ದು ಅವರ ಮೇಲೆ ಕ್ರಮ ಹಾಗೂ ತಾಲೂಕಿನಲ್ಲಿ ನಡೆಯುತ್ತಿರುವ ಡ್ರಗ್ಸ್ ದಂಧೆ ಹಾಗೂ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಶ್ರೀನಿವಾಸಪುರ ಅಥ್ಲೆಟಿಕ್ ಅಸೋಸಿಯೇಷನ್ ಪದಾಧಿಕಾರಿಗಳು ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಇನ್ನು ಕೆಲವರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಕೂಡಲೇ ಪೊಲೀಸ್ ಅಧಿಕಾರಿಗಳು ತಾಲೂಕಿನಲ್ಲಿ ಕ್ರಿಕೇಟ್ ಬೆಟ್ಟಿಂಗ್ ಹಾಗೂ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ ಎಂ.ಬಿ.ಗೊರವನಕೊಳ್ಳ ಮಾತನಾಡಿ, ತಾಲೂಕಿನಲ್ಲಿ ಅಸಭ್ಯವಾಗಿ ನಡೆದುಕೊಳ್ಳುತ್ತಿರುವ ಯುವಕರ ಮೇಲೆ ಹಾಗೂ ರಾತ್ರಿ ಸಮಯದಲ್ಲಿ ವಾಹನಗಳಿಗೆ ಹೈ ಫೋಕಸ್ ಬಲ್ಬ್ ಅಳವಡಿಸಿರುವ ವಾಹನ ಚಾಲಕರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆಂದು ಹೇಳಿದರು. ಹಾಗು ಇತರೆ ಅನೈತಿಕ ಚಟುವಟಿಕೆಗಳ ಬಗ್ಗೆ ಕ್ರಮವಹಿಸುತ್ತೇವೆ ಎಂದು ಭರವಸೆ ನೀಡಿದರು.
ಪಿಎಸ್ಐ ಜಯರಾಮ್, ಪೊಲೀಸ್ ಸಹಾಯಕ ಸಬ್ ಇನ್ಸ್ಪೆಕ್ಟರ್ ಎಂ.ಡಿ ನಾರಾಯಣಪ್ಪ, ಹಾಗೂ ಸಿಬ್ಬಂದಿ ರಾಮಚಂದ್ರ ,ಆನಂದ್, ಕುಮಾರ್ ,ಸಂಪತ್
ಮುಖAಡರಾದ ಈರಪ್ಪ, ಮುನಿ ವೆಂಕಟಪ್ಪ, ಶ್ರೀನಿವಾಸ್, ನಾರಾಯಣಸ್ವಾಮಿ, ರಾಮಾಂಜಮ್ಮ, ಉಮಾದೇವಿ, ಎನ್ಎನ್ಆರ್ ನಾಗರಾಜ್, ನಿಶಾಂತ್ ರೆಡ್ಡಿ, ಎಸ್ ವೇಣುಗೋಪಾಲ್, ವರ್ತನಹಳ್ಳಿ ವೆಂಕಟೇಶ್ ಇದ್ದರು.