ರೋಟರಿ ಕುಂದಾಪುರ ದಕ್ಷಿಣದ ವತಿಯಿಂದ ಶೈಕ್ಷಣಿಕವಾಗಿ ಪ್ರತಿಭಾವಂತರಾದ ಅರ್ಹ ವಿದ್ಯಾರ್ಥಿಗಳಿಗೆ ಸಹಾಯಧನ ಹಾಗೂ ಅತಿಥಿ ಶಿಕ್ಷಕರಿಗೆ ಆರ್ಥಿಕ ಸಹಕಾರ ನೀಡಲಾಯಿತು.
ನಿವೃತ್ತ ಬಿಎಸ್ಎನ್ಎಲ್ ಅಧಿಕಾರಿ ಜಿ. ಶ್ರೀಧರ ಶೆಟ್ಟಿಯವರು ವಂಡ್ಸೆ ಸಹಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕರಿಗಾಗಿ ತನ್ನ ನಿವೃತ್ತಿ ವೇತನದಲ್ಲಿ 48,000/- ರೂ. ನೀಡಿದರು.
ನಿವೃತ್ತ ಬ್ಯಾಂಕ್ ಅಧಿಕಾರಿ ಮನೋಹರ ಭಟ್ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತಮ ಅಂಕ ಗಳಿಸಿದ ಕು. ಶ್ರೀಪೂಜಾ ಅವರಿಗೆ ಪಿಯುಸಿ ಶಿಕ್ಷಣಕ್ಕಾಗಿ ರೂ. 5 ಸಾವಿರ ನೀಡಿದರು. ಪಿಯುಸಿ ಹಾಗೂ ನೀಟ್ನಲ್ಲಿ ಉತ್ತಮ ಅಂಕ ಗಳಿಸಿದ ಕು. ನಂದಿತಾ ಅವರಿಗೆ ರೂ. 5 ಸಾವಿರ ನೀಡಿದರು.
ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷೆ ಜ್ಯಡಿತ್ ಮೆಂಡೋನ್ಸಾ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಮಾಜಿ ಜಿಲ್ಲಾ ಗವರ್ನರ್ ಅಭಿನಂದನ್ ಶೆಟ್ಟಿ ಚೆಕ್ ಹಸ್ತಾಂತರಿಸಿದರು. ಕಾರ್ಯದರ್ಶಿ ಭರತ್ ಶೆಟ್ಟಿ ವಂದಿಸಿದರು.
Month: July 2024
ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಹೂವಿನ ಗಿಡ ನೆಡುವ ಕಾರ್ಯಕ್ರಮ
ನಂದಳಿಕೆ: ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕ್ರತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಸಂಘದ ಸಭಾಂಗಣದ ಬಳಿ ಹೂವಿನ ಗಿಡ ನೆಡುವ ಕಾರ್ಯಕ್ರಮ ನಡೆಸಲಾಯಿತು. ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ನ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ ಮತ್ತು ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಕಾಸರಬೈಲು ಸುರೇಶ್ ಪೂಜಾರಿ ಅವರು ಹೂವಿನ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ನ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಸ್ಥಾಪಕಾಧ್ಯಕ್ಷರಾದ ಇನ್ನಾ ವಿಠಲ ಮೂಲ್ಯ ಪೂರ್ವಾಧ್ಯಕ್ಷ ಉದಯ ಅಂಚನ್, ಜೊತೆ ಕಾರ್ಯದರ್ಶಿ ಮಂಜುನಾಥ ಆಚಾರ್ಯ, ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಬೋಳ ಯೋಗೀಶ್ ಆಚಾರ್ಯ, ಸದಸ್ಯರಾದ ಹರೀಶ್ ಪೂಜಾರಿ, ಸುದರ್ಶನ್ ಕುಂದರ್, ಲೀಲಾ ಪೂಜಾರಿ, ಅಶ್ವಿನಿ ಪ್ರಭಾಕರ್, ಸುಲೋಚನಾ ಕೋಟ್ಯಾನ್, ಪುಷ್ಪ ಕುಲಾಲ್, ಹರಿಣಾಕ್ಷಿ ಪೂಜಾರಿ, ವೀಣಾ ಆಚಾರ್ಯ, ಶಾಂತರಾಮ್ ಕುಲಾಲ್ ಮೊದಲಾದವರಿದ್ದರು.
The Feast of Our Lady of Mount Carmel was celebrated in a grand manner at Sacred Heart Cathedral, Shivamogga / ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್ನಲ್ಲಿ ಕಾರ್ಮೆಲ್ ಮೌಂಟ್ ಕಾರ್ಮೆಲ್ ಮಾತೆಯ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು
SHIVAMOGGA July 17, 2024: The Feast of Our Lady of Mount Carmel was celebrated on 16 July in grand manner at Sacred Heart Cathedral, Shivamogga.
On the Feast day, at 7am the Holy Mass was celebrated by Rev. Fr Franklin D’Souza. The solemn festive eucharistic celebration was at 9.30 am, was presided by Most Rev. Dr Francis Serrao SJ, Bishop of Shimoga. Rev. Fr Arun Venil D’Silva, Procurator of the Diocese of Shimoga preached the Sermon. There were 40 Priests.
In the evening, there was again the Holy Eucharist at 5.30pm, celebrated by Fr Stany D’Souza, the Rector of Sacred Heart Cathedral and the sermon was given by Fr Pius D’Souza, Director, Chaitanya, Shimoga. Then followed the decorated boat shape Chariot Procession of Our Lady of Mount Carmel in the main streets of the City of Shivamogga. A large number of devotees took part in the procession. Rev. Fr Richard Anil D’Souza, Dean of Holy Family Deanery blessed the Chariot of Our Lady of Mount Carmel.
The main theme of the feast was “Pray without ceasing (1 Thessa 5:17)”. This theme was divided into 9 sub themes, wherein, the prerequisites of prayer were explained. The preachers of the Novena days were, Fr Roman Pinto, Parish Priest of Francis Xavier’s Church, Kable, Fr Sunil Rodrigues, Parish Priest of St. Anthony’s Church, Mudigere, Fr Alphonse Nelson D’Souza, HM Loyola High School, Shivamogga, Fr Sunil Rodrigues OCD, Carmel Bhavan, Shivamogga, Fr Santhosh Pereira, Rector of Vianney Minor Seminary, Diocese of Shimoga, Fr Santhosh Almeida, Parish Priest of St. Anthony’s Shrine, Karehalli, Fr Lancy Pinto, Holy Cross Church, Coove and Fr Franklin D’Souza, Youth Director Diocese of Shimoga.
The Sacred Heart Cathedral, Shivamogga has an unique tradition that the faithful celebrate the feast of Our Lady of Mount Carmel feast with utmost devotion and love. The tradition goes back to 18th century. As the Christian faithful were celebrating the novenas of Our Lady of Mount Carmel in the month of July, the incessant rain flashed the town. The river Tunga was in Spate. As a result the overflowing river water gushed in to suburb areas. The people irrespective of caste and creed prayed in their places of worship to stop the rain. The Christian faithful took out a procession praying the holy rosary to the river bank. The people of other faiths too joined. As they reached the river bank, they had a short prayer and left the scapular in the waters. As the procession reached back the Church, miraculously rain stopped and water began to recede. This miracle was well received by the people of all faiths. They thanked the Our Lady of Mount Carmel profusely. Ever since, this feast is celebrated year after year with the right earnestness and devotion.
ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್ನಲ್ಲಿ ಕಾರ್ಮೆಲ್ ಮೌಂಟ್ ಕಾರ್ಮೆಲ್ ಮಾತೆಯ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಶಿವಮೊಗ್ಗ ಜುಲೈ 17, 2024: ಮೌಂಟ್ ಕಾರ್ಮೆಲ್ ಮಾತೆಯ ಹಬ್ಬವನ್ನು ಜುಲೈ 16 ರಂದು ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್ನಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ಹಬ್ಬದ ದಿನದಂದು ಬೆಳಿಗ್ಗೆ 7 ಗಂಟೆಗೆ ಧರ್ಮಗುರು ಫ್ರಾಂಕ್ಲಿನ್ ಡಿಸೋಜ ಅವರಿಂದ ಪವಿತ್ರ ಮಾಸಾಚರಣೆ ನಡೆಯಿತು. ಬೆಳಗ್ಗೆ 9.30ಕ್ಕೆ ಶಿವಮೊಗ್ಗ ಬಿಷಪ್ ಡಾ. ಫ್ರಾನ್ಸಿಸ್ ಸೆರಾವೊ ಎಸ್.ಜೆ.ಯವರ ಅಧ್ಯಕ್ಷತೆಯಲ್ಲಿ ಜರುಗಿತು. ಶಿವಮೊಗ್ಗ ಧರ್ಮಪ್ರಾಂತ್ಯದ ಪ್ರೊಕ್ಯುರೇಟರ್ ರೆ.ಫಾ.ಅರುಣ್ ವೆನಿಲ್ ಡಿಸಿಲ್ವಾ ಪ್ರವಚನ ಬೋಧಿಸಿದರು. 40 ಪುರೋಹಿತರಿದ್ದರು.
ಸಂಜೆ 5.30 ಕ್ಕೆ ಮತ್ತೆ ಪವಿತ್ರವಾದ ಮಹಾಪ್ರಾರ್ಥನೆ ನಡೆಯಿತು, ಸೇಕ್ರೆಡ್ ಹಾರ್ಟ್ ಕೆಥೆಡ್ರಲ್ ನ ರೆಕ್ಟರ್ ಫಾದರ್ ಸ್ಟ್ಯಾನಿ ಡಿಸೋಜ ಮತ್ತು ಶಿವಮೊಗ್ಗ ಚೈತನ್ಯ ಸಂಚಾಲಕ ಫಾ.ಪಿಯೂಸ್ ಡಿಸೋಜ ಪ್ರವಚನ ನೀಡಿದರು. ನಂತರ ಶಿವಮೊಗ್ಗ ನಗರದ ಪ್ರಮುಖ ಬೀದಿಗಳಲ್ಲಿ ಮೌಂಟ್ ಕಾರ್ಮೆಲ್ ಮಾತೆಯ ಅಲಂಕೃತ ದೋಣಿಯ ಆಕಾರದ ರಥೋತ್ಸವವನ್ನು ಅನುಸರಿಸಲಾಯಿತು. ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಹೋಲಿ ಫ್ಯಾಮಿಲಿ ಡೀನ್ ಫಾದರ್ ರಿಚರ್ಡ್ ಅನಿಲ್ ಡಿಸೋಜ ಅವರು ಕಾರ್ಮೆಲ್ ಮೌಂಟ್ ಲೇಡಿ ರಥಕ್ಕೆ ಆಶೀರ್ವದಿಸಿದರು.
ಹಬ್ಬದ ಮುಖ್ಯ ವಿಷಯವೆಂದರೆ “ಎಡೆಬಿಡದೆ ಪ್ರಾರ್ಥಿಸು (1 ಥೆಸ್ಸಾ 5:17)”. ಈ ವಿಷಯವನ್ನು 9 ಉಪ ವಿಷಯಗಳಾಗಿ ವಿಂಗಡಿಸಲಾಗಿದೆ, ಇದರಲ್ಲಿ ಪ್ರಾರ್ಥನೆಯ ಪೂರ್ವಾಪೇಕ್ಷಿತಗಳನ್ನು ವಿವರಿಸಲಾಗಿದೆ. ನೊವೆನಾ ದಿನಗಳ ಪ್ರವಚನಕಾರರು, ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ನ ಪ್ಯಾರಿಷ್ ಪ್ರೀಸ್ಟ್, ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್, ಫಾದರ್ ಸುನೀಲ್ ರೋಡ್ರಿಗಸ್, ಮೂಡಿಗೆರೆ ಸೇಂಟ್ ಅಂತೋನಿ ಚರ್ಚ್ನ ಪ್ಯಾರಿಷ್ ಪ್ರೀಸ್ಟ್ ಫಾದರ್ ಅಲ್ಫೋನ್ಸ್ ನೆಲ್ಸನ್ ಡಿಸೋಜ, ಎಚ್ಎಂ ಲೊಯೋಲಾ ಹೈಸ್ಕೂಲ್, ಶಿವಮೊಗ್ಗ, ಫಾ. ಸುನಿಲ್ ರೋಡ್ರಿಗಸ್ ಒಸಿಡಿ, ಕಾರ್ಮೆಲ್ ಭವನ, ಶಿವಮೊಗ್ಗ, ಫಾದರ್ ಸಂತೋಷ್ ಪಿರೇರಾ, ವಿಯಾನಿ ಮೈನರ್ ಸೆಮಿನರಿ, ಶಿವಮೊಗ್ಗ ಡಯಾಸಿಸ್, ಫಾದರ್ ಸಂತೋಷ್ ಅಲ್ಮೇಡಾ, ಸೇಂಟ್ ಅಂತೋನಿ ಪುಣ್ಯಕ್ಷೇತ್ರ, ಕಾರೇಹಳ್ಳಿ, ಫ್ರಾಂಕ್ ಲ್ಯಾನ್ಸಿ ಪಿಂಟೋ, ಕೊವ್ಲಿನ್ ಹೋಲಿ ಕ್ರಾಸ್ ಚರ್ಚ್, ಫ್ರಾಂಕ್ ಡಿ. ‘ಸೋಜಾ, ಯುವ ಸಂಚಾಲಕ ಶಿವಮೊಗ್ಗ ಧರ್ಮಾಧ್ಯಕ್ಷ.
ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್, ಶಿವಮೊಗ್ಗ, ನಿಷ್ಠಾವಂತರು ಮೌಂಟ್ ಕಾರ್ಮೆಲ್ ಮಾತೆಯ ಹಬ್ಬವನ್ನು ಅತ್ಯಂತ ಭಕ್ತಿ ಮತ್ತು ಪ್ರೀತಿಯಿಂದ ಆಚರಿಸುವ ವಿಶಿಷ್ಟ ಸಂಪ್ರದಾಯವನ್ನು ಹೊಂದಿದೆ. ಸಂಪ್ರದಾಯವು 18 ನೇ ಶತಮಾನದಷ್ಟು ಹಿಂದಕ್ಕೆ ಹೋಗುತ್ತದೆ. ಜುಲೈ ತಿಂಗಳಿನಲ್ಲಿ ಮೌಂಟ್ ಕಾರ್ಮೆಲ್ ಮಾತೆಯ ನೊವೆನಾಗಳನ್ನು ಕ್ರೈಸ್ತ ಧರ್ಮೀಯರು ಆಚರಿಸುತ್ತಿರುವಾಗ, ಎಡೆಬಿಡದೆ ಮಳೆಯು ಪಟ್ಟಣವನ್ನು ಮಿನುಗಿತು. ತುಂಗಾ ನದಿ ಸ್ಪೇಟ್ನಲ್ಲಿತ್ತು. ಪರಿಣಾಮವಾಗಿ ನದಿ ನೀರು ಉಕ್ಕಿ ಉಪನಗರ ಪ್ರದೇಶಗಳಿಗೆ ನುಗ್ಗಿದೆ. ಜಾತಿ, ಮತ ಭೇದವಿಲ್ಲದೇ ಜನರು ತಮ್ಮ ದೇಗುಲಗಳಲ್ಲಿ ಪೂಜೆ ಸಲ್ಲಿಸಿ ಮಳೆ ನಿಲ್ಲುವಂತೆ ಮಾಡಿದರು. ಕ್ರಿಶ್ಚಿಯನ್ ಭಕ್ತರು ಪವಿತ್ರ ಜಪಮಾಲೆಯನ್ನು ಪ್ರಾರ್ಥಿಸುತ್ತಾ ನದಿ ದಡಕ್ಕೆ ಮೆರವಣಿಗೆ ನಡೆಸಿದರು. ಬೇರೆ ಧರ್ಮದವರೂ ಸೇರಿಕೊಂಡರು. ಅವರು ನದಿಯ ದಡವನ್ನು ತಲುಪುತ್ತಿದ್ದಂತೆ, ಅವರು ಸಣ್ಣ ಪ್ರಾರ್ಥನೆಯನ್ನು ಮಾಡಿದರು ಮತ್ತು ನೀರಿನಲ್ಲಿ ಸ್ಕಾಪುಲರ್ ಅನ್ನು ಬಿಟ್ಟರು. ಮೆರವಣಿಗೆಯು ಚರ್ಚ್ಗೆ ಹಿಂತಿರುಗುತ್ತಿದ್ದಂತೆ, ಅದ್ಭುತವಾಗಿ ಮಳೆ ನಿಂತು ನೀರು ಇಳಿಯಲು ಪ್ರಾರಂಭಿಸಿತು. ಈ ಪವಾಡವನ್ನು ಎಲ್ಲಾ ಧರ್ಮದ ಜನರು ಚೆನ್ನಾಗಿ ಸ್ವೀಕರಿಸಿದರು. ಅವರು ಕಾರ್ಮೆಲ್ ಪರ್ವತದ ಅವರ್ ಲೇಡಿಗೆ ಅಪಾರವಾಗಿ ಧನ್ಯವಾದಗಳನ್ನು ಅರ್ಪಿಸಿದರು. ಅಂದಿನಿಂದ, ಈ ಹಬ್ಬವನ್ನು ವರ್ಷದಿಂದ ವರ್ಷಕ್ಕೆ ಸರಿಯಾದ ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸಲಾಗುತ್ತದೆ.
ಕುಂದಾಪುರದಲ್ಲಿ ಕಾರ್ಮೆಲ್ ಮಾತೆಯ ಹಬ್ಬ
ಕುಂದಾಪುರ, ಜು.16: ಕುಂದಾಪುರ ಹೋಲಿ ರೋಜರಿ ಮಾತಾ ಚರ್ಚಿನಲ್ಲಿ ಸ್ಥಳಿಯ ಸಂತ ಜೋಸೆಫ್ ಕಾನ್ವೆಂಟಿನ ಆಪೊಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಧರ್ಮ ಭಗಿನಿಯರು, ತಮ್ಮ ಪಾಲಕಿ ಕಾರ್ಮೆಲ್ ಮಾತೆಯ ಹಬ್ಬವನ್ನು ಜುಲಾಯ್ 14 ರಂದು ಆಚರಿಸಿದರು. ಹಬ್ಬದ ಬಲಿದಾನವನ್ನು ರೋಜರಿ ಮಾತಾ ಚರ್ಚಿನ ಪ್ರಧಾನ ಧರ್ಮಗುರು ಅ|ವಂ| ಫಾ| ಪಾವ್ಲ್ ರೇಗೊ ಇವರ ನೇತ್ರತ್ವದಲ್ಲಿ, ಕುಂದಾಪುರದವರೇ ಆದ ವಂ| ಫಾ| ಮನೋಜ್ ಬ್ರಗಾಂಜ ದಿವ್ಯ ಬಲಿ ಪೂಜೆಯನ್ನು ಅರ್ಪಿಸಿ ಕಾರ್ಮೆಲ್ ಮಾತೆಯ ಮಹತ್ವವನ್ನು ವಿವರಿಸಿ “ದೇವರ ಇಚ್ಚೆ ತಿಳಿಯಲು ಮತ್ತು ಅದನ್ನು ಪಾಲಿಸಲು ಪ್ರಾರ್ಥನೇಯ ಅಗತ್ಯ ಇದೆ ಎಂದು ತಿಳಿಸಿ, ನಾವು ಪ್ರಾರ್ಥನ ಭರಿತರಾಗಬೇಕು, ಕ್ಷಮೆಯುಳ್ಳವರಾಗಬೇಕು, ಕೋರಿಕೆಯನ್ನು ಕೋರುವಂತರಾಗಬೇಕು, ಸತ್ಯದ ಮಾರ್ಗದಲ್ಲಿ ನಡೆಯಬೇಕು” ಎಂದು ಸಂದೇಶ ನೀಡಿದರು. ಕಾರ್ಮೆಲ್ ಮಾತೆ ಬೆಂತಿಣ್ ಗಳನ್ನು ಆಶಿರ್ವದಿಸಿದರು. ಬೆಂತಿಣ್ ಗಳನ್ನು ಭಕ್ತಾಧಿಗಳಿಗೆ ವಿತರಿಸಲಾಯಿತು. ಅಂದಿನ ದಿವ್ಯ ಬಲಿದಾನದ ಪ್ರಾರ್ಥನ ವಿಧಿಯನ್ನು ಕಾರ್ಮೆಲ್ ಮೇಳದ ಧರ್ಮಭಗಿನಿಯರು ಮತ್ತು ಅವರಿಗೆ ಸಹಕಾರ ನೀಡುವ ಬ್ಲೊಸಮ್ ಪಂಗಡವರು ನೆಡೆಸಿಕೊಟ್ಟರು. ಅ|ವಂ| ಪಾವ್ಲ್ ರೇಗೊ ಆವರು ಕಾರ್ಮೆಲ್ ಪಂಗಡದ ಧರ್ಮಭಗಿನಿಯರಿಗೆ ಪುಷ್ಪ ನೀಡಿ ಹಬ್ಬದ ಶುಭಾಷಯಗಳ ಜೊತೆ ಅಭಿನಂದಿಸಿದರು. ಈ ಸಂದರ್ಭದಲ್ಲಿ ಕಾರ್ಮೆಲ್ ಭಗಿನಿಯವರ ಉಪಸ್ಥಿತರಿದ್ದರು.
ಕಾರ್ಮೆಲ್ ಮಾತೆಯ ಹಬ್ಬದಂದು ಕಾರ್ಮೆಲ್ ಭಗಿನಿಯರು, ಕುಂದಾಪುರ ಸಂತ ಜೋಸೆಫ್ ಕಾನ್ವೆಂಟ್ ನಲ್ಲಿ ತಾರೀಕಿಗೆ ಸರಿಯಾಗಿ ಜುಲಾಯ್ 16 ರಂದು ತ್ರಾಸಿ ಡಾನ್ ಬಾಸ್ಕೊ ಶಾಲೆಯ ಪ್ರಾಂಶುಪಾಲರಾದ ವಂ|ಫಾ|ಮ್ಯಾಕ್ಷಿಮ್ ಡಿಸೋಜಾ ಇವರ ನೇತ್ರತ್ವದಲ್ಲಿ ಪವಿತ್ರ ಬಲಿದಾನ ಅರ್ಪಿಸಿ, ಸಂದೇಶ ನೀಡಿದರು. ವಂ| ಫಾ|ಮನೋಜ್ ಬ್ರಗಾಂಜ ಸಹ ಬಲಿದಾನವನ್ನು ಅರ್ಪಿಸಿದರು. ಕಾನ್ವೆಂಟ್ ಮುಖ್ಯಸ್ಥೆ ಭಗಿನಿ ಸುಪ್ರಿಯಾ, ಸಂತ ಜೋಸೆಫ್ ಕಾನ್ವೆಂಟಿನ ಕಾರ್ಮೆಲ್ ಭಗಿನಿಯರು ಹಾಗೂ ಕಾರ್ಮೆಲ್ ಭಗಿನಿಯರ ಸಹಾಯಕರ ಬ್ಲೊಸಮ್ ಪಂಗಡದವರು ಹಾಜರಿದ್ದು, ಹಲವಾರು ಭಕ್ತರು ಹಾಜರಿದ್ದರು.
ಇಂದು ಮತ್ತು ನಾಳೆ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅತ್ಯಂತ ಭಾರಿ ಮಳೆ ಆಗಲಿದೆ – ಅಲರ್ಟ್ ಘೋಷಣೆ
ಬೆಂಗಳೂರು,ಜು.16: ರಾಜ್ಯದಲ್ಲಿ ಮುಂಗಾರು ಮಾರುತ ಪ್ರಭಾವ ಹೆಚ್ಚುತ್ತಲಿದ್ದು ಚುರುಕುಗೊಂಡಿದ್ದು ಎಲ್ಲೆಡೆ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಕರಾವಳಿ ಮತ್ತು ಮಲೆನಾಡಿನ ಆರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಮುಂದಿನ 24 ಗಂಟೆಗಳ ಕಾಲ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಮತ್ತು ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಹಾಸನ ಜಿಲ್ಲೆಗೆ ಆರೇಂಜ್ ಅಲರ್ಟ್ ನೀಡಲಾಗಿದೆ. ಇನ್ನು ಉತ್ತರ ಒಳನಾಡಿನ ಬೆಳಗಾವಿ, ಬೀದರ್, ರಾಯಚೂರು, ಯಾದಗಿರಿ, ಕಲಬುರಗಿ ಜಿಲ್ಲೆಗಳು ಮತ್ತು ದಕ್ಷಿಣ ಒಳನಾಡಿನ ಮೈಸೂರು ಜಿಲ್ಲೆಗೆ ಯೆಲ್ಲೋ ಅಲರ್ಟ್ ಪ್ರಕಟಿಸಲಾಗಿದೆ.
ಇಂದು ಮತ್ತು ನಾಳೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಅತ್ಯಂತ ಭಾರಿ ಮಳೆ ಆಗಲಿದೆ. ನಿರಂತರ ಗಾಳಿ ಸಹ ಇರಲಿದ್ದು ಪ್ರತಿ ಗಂಟೆಗೆ 30 ರಿಂದ 40 ಕಿಮೀ ವೇಗ ತಲುಪುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಗಾಳಿಯು 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬೀಸಲಿದ್ದು ಅತಿ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ದಕ್ಷಿಣ ಒಳನಾಡಿನ ಹಾಸನ ಜಿಲ್ಲೆಯ ಒಂದು ಅಥವಾ ಎರಡು ಸ್ಥಳಗಳಲ್ಲಿ ನಿರಂತರ ಗಾಳಿಯೊಂದಿಗೆ ಭಾರಿ ಮಳೆಯಾಗಲಿದೆ. ಉಳಿದಂತೆ ಕಲಬುರಗಿ, ಬೀದರ್, ಬೆಳಗಾವಿ, ರಾಯಚೂರು, ಯಾದಗಿರಿ, ಮೈಸೂರು ಜಿಲ್ಲೆಗಳ ಕೆಲ ಸ್ಥಳಗಳಲ್ಲಿ ಸಹ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು, ಒಳನಾಡಿನ ಉಳಿದ ಜಿಲ್ಲೆಗಳ ಬಹುತೇಕ ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಂಭವವಿದೆ ಎಂದು ಮಾಹಿತಿ ನೀಡಿದೆ.
ಶಿರೂರು ಬಳಿ ಗುಡ್ಡ ಕುಸಿತ: ಮಣ್ಣಿನಡಿ ಸಿಲುಕಿದ ಏಳು ಮಂದಿಯಲ್ಲಿ ಒಬ್ಬರ ಶವ ಪತ್ತೆ : ಕಾರ್ಯಾಚರಣೆಗೆ ಜೆಸಿಬಿಗಳ ಕೊರತೆ
ಕಾರವಾರ: ಕುಮಟಾ- ಕಾರವಾರ ಮಧ್ಯೆ ಹೆದ್ದಾರಿಯ ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿದ ಏಳು ಜನರ ಪೈಕಿ ಶಾಂತಾ ನಾಯ್ಕ ಎಂಬ ಮಹಿಳೆಯ ಶವ ಪತ್ತೆಯಾಗಿದೆ.
ಇಂದು ಬೆಳಗಿನ ಜಾವ 8-45 ಕ್ಕೆ ಧರೆ ಕುಸಿದಿತ್ತು. ಕರಾವಳಿಯಲ್ಲಿ ಸುರಿದ ಭಾರೀ ಮಳೆಗೆ ರಸ್ತೆ ಪಕ್ಕದ ಗುಡ್ಡ ಕುಸಿಯಿತು. ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ ಪಕ್ಕದ ಇದ್ದ ಟೀ ಸ್ಟಾಲ್ ಹಾಗೂ ಮನೆಯ ಮೇಲೆ ಅಪಾರ ಪ್ರಮಾಣದ ಮಣ್ಣು ಬಿದ್ದು, ಚಹಾ ಅಂಗಡಿಯಲ್ಲಿ ಇದ್ದ ಏಳು ಜನ ಮಣ್ಣಿನ ಅಡಿ ಸಿಲುಕಿದ್ದಾರೆ ಎನ್ನಲಾಗಿದೆ .
ಗುಡ್ಡದ ಪಕ್ಕ ನಿಂತಿದ್ದ ಒಂದು ಲಾರಿ, ಒಂದು ಟ್ಯಾಂಕರ್ ಗಂಗಾವಳಿ ನದಿಯಲ್ಲಿ ಕೊಚ್ಚಿ ಹೋಗಿದೆ. ಗಡ್ಡು ಕುಸಿದ ಮಣ್ಣಿನಡಿ ಜಗನ್ನಾಥ (55), ಲಕ್ಷ್ಮಣ ನಾಯ್ಕ( 47), ಶಾಂತಿ ನಾಯ್ಕ, ಮಕ್ಕಳಾದ ರೋಶನ್, ಅವಂತಿಕಾ ಇದ್ದರು ಎನ್ನಲಾಗಿದೆ. ರಾಷ್ಟ್ರೀಯ ಹೆದ್ದಾರಿ ಕುಮಟಾ ಅಂಕೋಲಾ ಮಧ್ಯೆ ರಸ್ತೆ ಸಂಚಾರ ಸ್ಥಗಿತವಾಗಿದೆ.
ಇನ್ನು ಮುಂದಕ್ಕೆ ಭಾರತ ದೇಶಾದ್ಯಂತ ಏಕರೂಪದ ಚಿನ್ನದ ಬೆಲೆ
ದೆಹಲಿ: ದೇಶಾದ್ಯಂತ ಏಕರೂಪದ ಚಿನ್ನದ ಬೆಲೆಯನ್ನು ಬಯಸುವ ಚಿನ್ನಕ್ಕೆ ಒನ್ ನೇಷನ್ ಒನ್ ರೇಟ್ (ಒಎನ್ಒಲರ್) ನೀತಿಯನ್ನು ಅಳವಡಿಸಿಕೊಳ್ಳಲು ದೇಶಾದ್ಯಂತದ ಪ್ರಮುಖ ಆಭರಣ ವ್ಯಾಪಾರಿಗಳು ಒಪ್ಪಿಕೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ವಿವಿಧ ಮಾಧ್ಯಮ ವರದಿಗಳ ಪ್ರಕಾರ, ವಿವಿಧ ರಾಜ್ಯಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿನ ಅಂತರವನ್ನು ತಗ್ಗಿಸುವ ಗುರಿಯನ್ನು ಒಎನ್ಒಆರ್ ಹೊಂದಿದೆ.
ರತ್ನ ಮತ್ತು ಅಭರಣ ಮಂಡಳಿ (ಜಿಜೆಸಿ) ಬೆಂಬಲದೊಂದಿಗೆ ಒಎನ್ಒಆರ್ ಉಪಕ್ರಮವು ಸೆಪ್ಟೆಂಬರ್ನಲ್ಲಿ ಸಭೆ ಸೇರಲಿದ್ದು, ನಂತರ ಅಧಿಕೃತ ಪ್ರಕಟಣೆ ನೀಡಲಾಗುವುದು ಎಂದು ವರದಿಗಳು ತಿಳಿಸಿವೆ.
ಸಾಗರೋತ್ತರ ಮಾರುಕಟ್ಟೆಗಳಲ್ಲಿ ಅಮೂಲ್ಯ ಲೋಹದ ದರಗಳು ಕುಸಿದಿದ್ದರೂ ಅಭರಣ ತಯಾರಕರು ಹೊಸ ಖರೀದಿಯ ಮಧ್ಯೆ ಸ್ಥಳೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸೋಮವಾರ 10 ಗ್ರಾಂಗೆ 50 ರೂ.ಗಳಿಂದ 75150
ರೂ.ಗೆ ಏರಿದೆ. ಆಲ್ ಇಂಡಿಯಾ ಸರಾಘಾ ಅಸೋಸಿಯೇಷನ್ ಪ್ರಕಾರ, ಹಳದಿ ಲೋಹದ ಬೆಲೆ ಶನಿವಾರ 10 ಗ್ರಾಂಗೆ 75,100 ರೂ.ಏರಿದೆ.
ಅಂಬಲಪಾಡಿ ಬೆಂಕಿ ದುರಂತ : ಚಿಕಿತ್ಸೆ ಫಲಕಾರಿಯಾಗದೆ ಪತ್ನಿ ಅಶ್ವಿನಿ ಶೆಟ್ಟಿ ಕೂಡ ಮೃತ್ಯು
ಉಡುಪಿ, ಜು.16: ಅಂಬಲಪಾಡಿ ಗಾಂಧಿನಗರದ ಮನೆಯಲ್ಲಿ ಸೋಮವಾರ ಸಂಭವಿಸಿದ ಭೀಕರ ಅಗ್ನಿ ದುರಂತ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಶ್ವಿನಿ ಶೆಟ್ಟಿ(43) ಇಂದು ಮಧ್ಯಾಹ್ನ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಬೆಳಗಿನ ಜಾವ ಮನೆಯಲ್ಲಿ ಮಲಗಿದ್ದ ವೇಳೆ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಅವಘಡ ಉಂಟಾಗಿದ್ದು, ಇದರಿಂದ ಮನೆಯೊಳಗೆ ಬೆಂಕಿ ಜೊತೆ ದಟ್ಟ ಹೊಗೆ ಆವರಿಸಿತ್ತು. ಇದರ ಪರಿಣಾಮ ತೀವ್ರವಾಗಿ ಅಸ್ವಸ್ಥಗೊಂಡ ಉದ್ಯಮಿ ರಮಾನಂದ ಶೆಟ್ಟಿ ಹಾಗೂ ಅಶ್ವಿನಿ ಶೆಟ್ಟಿ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು.
ಇದರಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ರಮಾನಂದ ಶೆಟ್ಟಿ ಸೋಮವಾರ ಬೆಳಗ್ಗೆಯೇ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಇತ್ತ ಗಂಭೀರ ಸ್ಥಿತಿಯಲ್ಲಿದ್ದ ಅವರ ಪತ್ನಿ ಅಶ್ವಿನಿ ಶೆಟ್ಟಿ ಇಂದು ಮಧ್ಯಾಹ್ನ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ವೈದ್ಯಾಧಿಕಾರಿಗಳು ಘೋಷಿಸಿದ್ದಾರೆ. ಇವರಿಬ್ಬರ ಅಂತ್ಯಕ್ರಿಯೆ ಆದಿಉಡುಪಿಯ ಪಂದುಬೆಟ್ಟುವಿನಲ್ಲಿರುವ ರಮಾನಂದ ಶೆಟ್ಟಿ ಮೂಲ ಮನೆಯಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಈ ಅಗ್ನಿ ದುರಂತದಲ್ಲಿ ಇವರ ಇಬ್ಬರು ಮಕ್ಕಳಾದ ಅಂಶುಲಾ ಶೆಟ್ಟಿ ಹಾಗೂ ಅಭಿಕ್ ಶೆಟ್ಟಿ ರಕ್ಷಿಸಲ್ಪಟ್ಟಿದ್ದರು. ದಟ್ಟ ಹೊಗೆಯಿಂದ ಪಾರಾಗಲು ಇವರು ಕೂಡಲೇ ಶೌಚಾಲಯಕ್ಕೆ ಹೋಗಿ ಬಾಗಿಲು ಹಾಕಿ ಜೀವ ಉಳಿಸಿಕೊಂಡರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಮಳೆಯ ಆರ್ಭಟ – ಉಡುಪಿ, ಮಂಗಳೂರು, ಕೊಡಗು ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಜು.16 ರಂದು ರಜೆ ಘೋಷಣೆ
ಕುಂದಾಪುರ:ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆಯ ರೆಡ್ ಅಲರ್ಟ್ ಮುನ್ಸೂಚನೆಯಂತೆ ಮಳೆಯ ತೀವ್ರತೆ ಹೆಚ್ಚಾಗುವುದರಿಂದ ಮುಂಜಾಗ್ರತಾ ಕ್ರಮವಾಗಿ, ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ನಾಳೆ ದಿನಾಂಕ 16.07.2024ರಂದು ಉಡುಪಿ ಜಿಲ್ಲೆಯ ಎಲ್ಲಾ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ ಶಾಲೆ ,ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ. ಉಳಿದಂತೆ ಎಲ್ಲಾ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ, ಐಟಿಐ ಕಾಲೇಜುಗಳಿಗೆ ರಜೆ ಘೋಷಿಸಿರುವುದಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ದಿನಾಂಕ: 16-07-2024ರಂದು ರೆಡ್ ಅಲರ್ಟ್ ಘೋಷಣೆಯಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು (12ನೇ ತರಗತಿವರೆಗೆ) ಗಳಿಗೆ ದಿನಾಂಕ: 16-07-2024 ರಂದು ರಜೆಯನ್ನು ಘೋಷಿಸಿ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಆದೇಶಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆ ನಾಳೆ (ಜು.16 ರಂದು) ಜಿಲ್ಲೆಯ ಅಂಗನವಾಡಿ ಸೇರಿದಂತೆ ಶಾಲೆಗಳಿಗೆ ರಜೆ ನೀಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶರಾದ ರಂಗಧಾಮಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ನಟರಾಜು ಹಾಗೂ ಪದವಿಪೂರ್ವ ಕಾಲೇಜಿನ ಉಪನಿರ್ದೇಶಕರಾದ ಮಂಜುಳಾ ಅವರು ತಿಳಿಸಿದ್ದಾರೆ.