ಅಂಕೋಲಾ:ಜುಲೈ 16 ರಂದು ನಡೆದ ಗುಡ್ಡ ಕುಸಿತದಲ್ಲಿ ಒಂದೇ ಕುಟುಂಬದ ಐವರು ಕಣ್ಮರೆಯಾಗಿದ್ದರು. ಐವರ ಪೈಕಿ ಮೂವರ ಮೃತದೇಹ ಪತ್ತೆಯಾಗಿತ್ತು. ಲಕ್ಷ್ಮಣ ನಾಯ್ಕ, ಪತ್ನಿ ಶಾಂತಿ ನಾಯ್ಕ, ಮಗ ರೋಶನ್ ನಾಯ್ಕ ಮೃತದೇಹ ಪತ್ತೆಯಾಗಿತ್ತು. ಇದೀಗ ಬಾಲಕಿ ಅವಂತಿಕಾ ಮೃತದೇಹ (6) ಕೂಡ ಪತ್ತೆಯಾಗಿದ್ದು, ಗ್ಯಾಸ್ ಟ್ಯಾಂಕರ್ ಚಾಲಕ ಮುರುಗನ್ ಮೃತದೇಹ ನದಿ ನೀರಿನಲ್ಲಿ ಪತ್ತೆಯಾಗಿದೆ.
ಗಂಗಾವಳಿ ನದಿಯಲ್ಲಿ ಇಬ್ಬರು ಲಾರಿ ಚಾಲಕರ ಮೃತದೇಹ ಸಿಕ್ಕಿದೆ. ಅದರಲ್ಲೊಬ್ಬರನ್ನು ಗ್ಯಾಸ್ ಟ್ಯಾಂಕರ್ ಚಾಲಕ ಮುರುಗನ್ ಮೃತದೇಹ ಎಂದು ಗುರುತಿಸಲಾಗಿದೆ. ಶಿರೂರು ಗುಡ್ಡ ಕುಸಿತದ ವೇಳೆ ಲಾರಿ ಸಮೇತ 45 ವರ್ಷದ ಮುರುಗನ್ ನೀರಿಗೆ ಬಿದ್ದಿದ್ದರು ಅವರದೇ ಮ್ರತದೇಹ ಎಂದು ಅಂದಾಜಿಸಲಾಗಿದೆ.
ಮತ್ತೋರ್ವ ವ್ಯಕ್ತಿಯ ಮೃತದೇಹ ಕೂಡ ಗಂಗಾವಳಿ ನದಿಯಲ್ಲಿ ಪತ್ತೆಯಾಗಿದೆ. ಅಂಕೋಲಾ ತಾಲೂಕಿನ ಮಂಜಗುಣಿ ಬಳಿಯಲ್ಲಿ ಸಿಕ್ಕಿದೆ. ಇಲ್ಲಿಯವರೆಗೆ 7 ಮೃತದೇಹ ಸಿಕ್ಕಿದೆ. ಸದ್ಯ ನದಿಯಲ್ಲಿ ಹುಡುಕಾಟದ ಕಾರ್ಯಾಚರಣೆ ಮುಂದುವರೆದಿದೆ.
Month: July 2024
ವಾರಾಹಿ ನದಿಗೆ ಹಾರಿ ಕೊಚ್ಚಿ ಹೋದ ಕಾಳಾವರ ವ್ಯಕ್ತಿಯ ಮೃತದೇಹ ಕುಂದಾಪುರ ಸಂಗಮ ನದಿ ತೀರದಲ್ಲಿ ಪತ್ತೆ
ಕುಂದಾಪುರ:ಗಂಡ ಹೆಂಡತಿಯ ಜಗಳದ ಕಾರಣ ಕಂಡ್ಲೂರು ಸಮೀಪದ ಸೇತುವೆಯಿಂದ ಮಂಗಳವಾರ ಅಪರಾಹ್ನ ವಾರಾಹಿ ನದಿಗೆ ಹಾರಿ, ನೀರಲ್ಲಿ ಕೊಚ್ಚಿಕೊಂಡು ಹೋಗಿರುವ ಹರೀಶ್ ಕಾಳಾವರ ಅವರ ಮೃತದೇಹ ಇಂದು ಅಪರಾಹ್ನ 2:30 ರ ವೇಳೆ ಕುಂದಾಪುರ ಸಂಗಮದ ಸಮೀಪ ನದಿ ತೀರದಲ್ಲಿ ಪತ್ತೆಯಾಗಿದೆ.
ಕಂಡ್ಲೂರು ಠಾಣಾ ಎಸ್ಐ ನೂತನ್ ಹಾಗೂ ಸಿಬಂದಿ ಹುಡುಕಾಟ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.ಕುಂದಾಪುರದ ಅಗ್ನಿ ಶಾಮಕ ದಳದ ಸಿಬಂದಿಗಳು ಸ್ಥಳೀಯ ಶೌರ್ಯ ತಂಡದ ಸದಸ್ಯರು, ಕಾಳಾವರದ ತಂಡ, ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡದಿಂದ ಎರಡು ದಿನಗಳಿಂದ ಮೃತದೇಹ ಹುಡುಕಾಟದ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು.
ಗಂಡ- ಹೆಂಡತಿ ನಡುವೆ ಜಗಳ ಉಂಟಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇಬ್ಬರ ಜಗಳವನ್ನು ರಾಜಿ ಪಂಚಾಯಿತಿ ಮೂಲಕ ಇತ್ಯರ್ಥಪಡಿಸಲಾಯಿತು.ಮಂಗಳವಾರ ಅಪರಾಹ್ನ ಠಾಣೆಗೆ ಹೋಗಿ ಮರಳಿ ಪತ್ನಿ, ತಾಯಿ, ಅಕ್ಕನೊಂದಿಗೆ ರಿಕ್ಷಾದಲ್ಲಿ ಬರುತ್ತಿದ್ದರು. ಕಂಡ್ಲೂರು ಸೇತುವೆ ಬಳಿ ತಲುಪಿದಾಗ ಕೈಗೆ ಕಟ್ಟಿದ್ದ ತಾಯತವನ್ನು ನದಿಗೆ ಎಸೆದು ಬರುತ್ತೇನೆಂದು ಹೇಳಿ ಹರೀಶ್ ರಿಕ್ಷಾವನ್ನು ನಿಲ್ಲಿಸುವಂತೆ ಚಾಲಕನಿಗೆ ಹೇಳಿದರು. ರಿಕ್ಷಾದಿಂದ ಇಳಿದು ಪತ್ನಿ, ತಾಯಿ, ಅಕ್ಕ ನೋಡ ನೋಡುತ್ತಿದ್ದಂತೆ ಸೇತುವೆಯಿಂದ ನದಿಗೆ ಹಾರಿದ್ದರು.
ಭಾರೀ ಮಳೆಯಿಂದ ಶಿರಾಡಿ, ಬಾಳೆಬರೆ, ಸೋಮೇಶ್ವರ ಗುಡ್ಡ ಕುಸಿತದಿಂದ ವಾಹನ ಸಂಚಾರ ವ್ಯತ್ಯಯ
ಹಾಸನ, ಜು.೧೮: ಕಳೆದೊಂದೆರಡು ವಾರಗಳಿಂದ ಸಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯ ಕಾರಣದಿಂದಾಗಿ ಶಿರಾಡಿ ಘಾಟ್ ರಸ್ತೆಯಲ್ಲಿ
ಇಂದು (ಗುರುವಾರ) ನಸುಕಿನ ಜಾವ ಏಕಾಏಕಿ ಮಣ್ಣು ಗುಡ್ಡ ಮಾರು3 ಸುಜುಕಿ ಕಂಪನಿಯ ಓಮಿಸಿ ಕಾರು ಮೇಲೆ ಬಿದ್ದಿದೆ.
ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಈ ದುರ್ಫಟನೆ ಸಂಭವಿಸಿದೆ. ಸಕಲೇಶಪುರ ತಾಲ್ಲೂಕಿನ, ಎತ್ತಿನಹಳ್ಳ ಬಳಿ ಭಾರಿ ಮಳೆಯಲ್ಲಿ ಚಪಿಸುತ್ತಿದ್ದ ಕಾರಿನ ಮೇಲೆ ಗುಡ್ಡ ಕುಸಿದಿದೆ. ಪರಿಣಾಮ ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟಗಾಯಗಳಾಗಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಓಮಿಸಿ ಕಾರು ಮಣ್ಣಿನಡಿ ಸಿಲುಕಿದೆ. ಕಂದಾಯ ಇಲಾಖೆ ಸಿಬ್ಬಂದಿ ಮಣ್ಣು ತೆರವುಗೊಳಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಮಾಹಿತಿ ಇದೆ.
ಬೇಲೂರು ತಾಲೂಕಿನ ಬಿಕ್ಕೊಡು ಮೂಲದ ಶರತ್ ಎಂಬವರು ಮಂಗಳೂರು ಕಡೆಯಿಂದ ಸಕಲೇಶಪುರ ಮಾರ್ಗವಾಗಿ ಬರುವ ಸಂದರ್ಭ ದೊಡ್ಡತಪ್ಪಲು ಸಮೀಪ ಗುಡ್ಡಕುಸಿತ ಉಂಟಾಗಿ ಕಾರಿನ ಮೇಲಿ ಬಿದ್ದಿದ್ದು ಕಾರು ಮಣ್ಣಿನ ರಾಶಿಯಲ್ಲಿ ಸಿಬಕಿದೆ. ಈ ಸಂದರ್ಭದಲ್ಲಿ ಹೆದ್ದಾರಿ ಕಾಮಗಾರಿ ಗುತ್ತಿಗೆದಾರ ಕಂಪಸಿಯ ಬಿಹಾರ ಮೂಲದ ಕಾರ್ಮಿಕಕರು ಅಖಿಲೇಶ್, ಶರತ್ ಅವರನ್ನು ವಾಹನದಿಂದ ಹೊರಗೆ
ಕರೆತಂದು ಅವರ ಪ್ರಾಣ ಉಳಿಸಿದ್ದಾರೆ.ಈ ಸಂದರ್ಭದಲ್ಲಿ ಅಖಿಲೇಶ್ ಗೂ ಸಣ್ಣಪುಟ್ಟಗಾಯಗಳಾಗಿದ್ದು, ಪಟ್ಟಣದ ಕ್ರಾಫರ್ಡ್ ಅಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಶರತ್ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಅಸ್ಪತ್ರೆಗೆ ದಾಖಲಾಗಿದ್ದಾರೆ.
ಗುಡ್ಡಕುಸಿತದಿಂದ ಶಿರಾಡಿಘಾಟ್ ನಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಘಟನೆ ನಡೆದ ಸ್ಥಳದಿಂದ ಎರಡೂ ಕಡೆಗೆ 5-5 ಕಿ.ಮೀ. ಟ್ರಾಫಿಕ್ ಜಾಮ್ ಉಂಟಾಗಿತ್ತು. ಹೆದ್ದಾರಿ ಕಾಮಗಾರಿಯವರು ಮಣ್ಣು ತೆರವು ಗೊಳಿಸು ಕಾರ್ಯದಲ್ಲಿ ನಿರತರಾಗಿದೆ. ಹಾಸನದ ಕಂದಲಿ ಗ್ರಾಮದ ಬಳಿಯೇ ಪೊಲೀಸರು ವಾಹನಗಳನ್ನು ತಡೆಯುತ್ತಿದ್ದಾರೆ. ಅತ್ತ ಚಾರ್ಮಾಡಿ ಘಾಟ್ ರಸ್ತೆಯಲ್ಲೂ ಪ್ರಯಾಣ ದುಸ್ತರವಾಗಿದ್ದು, ಹಾಸನ ಬಳಿಯೇ ವಾಹನ ಸಿಲ್ಲಿಸಲು ಪೊಲೀಸರು ಸೂಚನೆ ನೀಡುತ್ತಿದ್ದಾರೆ.
ಶ್ರೀನಿವಾಸಪುರ- ಡ್ರ್ಯಾಗನ್ ಫ್ರುಟ್ ಸಂಮ್ರದ್ಧಿ ಬೆಳೆಯನ್ನು ಬೆಳೆಯುವ ಮೂಲಕ ತಾಲೂಕಿನ ದೇವಲಪಲ್ಲಿ ಗ್ರಾಮದ ಐಟಿಐ ಓದಿರುವ ಯುವ ರೈತ ವಿ.ಆಂಜನೇಯ ಗಮನ ಸಳೆಯುತ್ತಿದ್ದಾರೆ
ಶ್ರೀನಿವಾಸಪುರ : ಪ್ರಪಂಚಕ್ಕೆ ಮಾವಿನ ರುಚಿಯನ್ನ ಕೊಡುತ್ತಿರುವ ಶ್ರೀನಿವಾಸಪುರ ಇಂದು ಡ್ರ್ಯಾಗನ್ ಫ್ರೊಟ್ನ ಸಂವೃದ್ಧಿ ಬೆಳೆಯನ್ನು ಬೆಳೆಯುವ ಮೂಲಕ ತಾಲೂಕಿನ ದೇವಲಪಲ್ಲಿ ಗ್ರಾಮದ ಐಟಿಐ ಓದಿರುವ ಯುವ ರೈತ ವಿ.ಆಂಜನೇಯ ಗಮನ ಸಳೆಯುತ್ತಿದ್ದಾರೆ.
ತಾಲೂಕಿನಲ್ಲಿ ಯಾವುದೇ ರೀತಿಯಾದ ನದಿಗಳು, ನಾಲೆಗಳು ಇಲ್ಲದೆ ಕೇವಲ ಮಳೆ ಯಾಶ್ರಿತ ಬೆಳೆಗಳನ್ನು ಇನ್ನು ಕೆಲ ರೈತರು ಕೊಳವೆ ಬಾವಿಗಳನ್ನು ಬಳಸಿ ಬೆಳೆಗಳನ್ನು ಬೆಳೆಯುತ್ತಾರೆ. ಇನ್ನು ಕೆಲವರು ಕೊಳವೆ ಬಾವಿಗಳಲ್ಲಿ ಕಡಿಮೆ ನೀರು ಇದ್ದು , ಯಾವುದೇ ರೀತಿಯಾದ ಬೆಳೆಗಳನ್ನು ಬೆಳೆಯಲು ಸಾಧ್ಯವಾಗದೆ ಸಂಕಷ್ಟದಲ್ಲಿ ಇರುತ್ತಾರೆ.
ಆದರೆ ದೇವಲಪಲ್ಲಿ ಗ್ರಾಮದ ಯುವ ರೈತ ವಿ.ಆಂಜನೇಯ ಎಂಬುವವರು ಪಕ್ಕದ ಜಮೀನಿನಿಂದ ನೀರು ಪಡೆದು ಒಂದು ಎಕರೆಯಲ್ಲಿ 500 ಕಂಬಗಳು, 2000 ಗಿಡಗಳನ್ನು ಹಾಕಿದ್ದು, ಮೊದಲ ವರ್ಷ 8 ರಿಂದ 10 ಲಕ್ಷ ಬಂಡವಾಳ ಖರ್ಚುಮಾಡಿ, ಒಂದು ವರ್ಷ ಗಿಡಗಳನ್ನು ಪೋಷಣೆ ಮಾಡಿ ಪ್ರಥಮ ಇಳುವರಿಯಲ್ಲಿ ಕಳೆದ 10 ದಿನಗಳ ಹಿಂದೆ 2 ಕ್ವಿಂಟಾಲ್ ಗಳ ಹಣ್ಣುಗಳನ್ನು ಬೆಂಗಳೂರಿನ ಕೆಆರ್.ಮಾರುಕಟ್ಟೆಗೆ ಹಾಕಿದ್ದಾರೆ. ಸೋಮವಾರ 1 ಟನ್ ಡ್ರ್ಯಾಗನ್ ಫ್ರೋಟ್ಗಳನ್ನು ಕಿತ್ತು ಬೆಂಗಳೂರಿನ ಕೆಆರ್. ಮಾರುಕಟ್ಟೆಗೆ ಹಾಕಲಾಯಿತು. ಎರಡ ನೇ ವರ್ಷದಿಂದ 15 ಲಕ್ಷ ಲಾಭ ಪಡೆಯಬಹುದು.
ವಿ.ಆಂಜನೇಯ ಪತ್ರಿಕೆಯೊಂದಿಗೆ ಮಾತನಾಡಿ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿದೇರ್ಶಕ ಶ್ರೀನಿವಾಸನ್ ಮಾರ್ಗದರ್ಶನದಿಂದ ನರೇಗಾ ಯೋಜನೆಯಡಿಯಲ್ಲಿ ಒಂದು ಎಕರೆ 1ಲಕ್ಷ 53 ಸಾವಿರ ಪ್ರೋತ್ಸಾಹ ಧನವನ್ನು ಪಡೆದು ಗಿಡಗಳನ್ನು ಬೆಳೆಸಲಾಗುತ್ತಿದೆ ಎಂದರು. ಇದರ ಸದುಪಯೋಗವನ್ನು ಇತರೆ ರೈತರು ಬಳಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು. ಅಲ್ಲದೆ ಈ ಬೆಳೆಗೆ ಕಾಡು ಪ್ರಾಣಿಗಳ, ಹಕ್ಕಿಗಳ, ಕೋತಿಗಳ ಕಾಟ ಇರುವುದಿಲ್ಲ. ನೀರು ಕಡಿಮೆ ಅವಶ್ಯಕತೆ ಇದ್ದು, ವಾರಕ್ಕೆ ಎರಡು ಸಲ ಅರ್ಧ ಗಂಟೆ ನೀರು ಬಿಟ್ಟರೆ ಸಾಕು. ಕೊಳವೆಬಾವಿಯಲ್ಲಿ ನೀರು ಕಡಿಮೆ ಇರುವ ರೈತರು ಸಹ ಬೆಳೆಯ ಬಹುದು.
ಯಲಹಂಕದ ಶ್ರೀನಿವಾಸರವರ ಬಳಿ ಒಂದು ಗಿಡಕ್ಕೆ 70 ರೂ ನಂತೆ 2000 ಗಿಡಗಳನ್ನ ತೆಗೆದುಕೊಂಡು ಬಂದು ಒಂದು ವರ್ಷ ಗಿಡಗಳನ್ನು ಕಾಲಕಾಲಕ್ಕೆ ನೀರು, ಗೊಬ್ಬರವನ್ನು ಹಾಕಿ ಸಂವೃದ್ಧಿಯಾಗಿ ಬೆಳಸಿ, ಗಿಡಗಳಿಗೆ ಹಸು ಮತ್ತು ಕುರಿಗಳ ಗೊಬ್ಬರವನ್ನು ಡಿ ಕಾಂಫೋಸ್ ಮಾಡಿ, ಇದಕ್ಕೆ ಫಂಗಿಸೈಡಸ್ಸ್ಗಳಾದ ಡ್ರೈಕೋಡರ್ಮಾ, ಸೋಡಾ ಮನ್ಸ್ನ್ನು ಮಿಕ್ಸಿಮಾಡಿ 6 ತಿಂಗಳು ಕಾಲ ಸಂರಕ್ಷಿಸಲಾಗುತ್ತದೆ. ಆ ಗೊಬ್ಬರದ ಮೇಲೆ ವಾರಕ್ಕೊಮ್ಮೆ ನೀರನ್ನ ಇದರ ಮೇಲೆ ಬಿಟ್ಟು ಹದ ಮಾಡಲಾಗುತ್ತದೆ. ಆ ಗೊಬ್ಬರವನ್ನ ಗಿಡಗಳಿಗೆ ಹಾಕಿದಾಗ ಹೆಚ್ಚು ಪರಿಣಾಮಕಾರಿಯಾಗಿ ಡಿ ಕಾಂಫೋಸ್ ಗೊಬ್ಬರವನ್ನ ಹಾಕಿದಾಗ ಕಾಯಿ ಒಳ್ಳೆಯ ಗಾತ್ರ ಬರಲು ಕಾರಣವಾಗುತ್ತದೆ. ತಿಪ್ಪೆಗೊಬ್ಬರ ಬಳಕೆ ಗಿಂತ ಡಿ ಕಾಂಫೋಸ್ ಗೊಬ್ಬರ ಹೆಚ್ಚು ಪರಿಣಾಮಕಾರಿ ಎಂದು ಮಾಹಿತಿ ನೀಡಿದರು.
ನಮ್ಮ ರೈತರು ಬೇರೆ ಬೆಳಗಳಿಂದ ನಷ್ಟ ಆಗುತ್ತಿದ್ದಾರೆ. ಈ ಬೆಳೆಯು ರೈತರನ್ನ ಆರ್ಥಿಕವಾಗಿ ಸಭಲರಾಗುಲು ಈ ಬೆಳೆಯು ಕಾರಣವಾಗುತ್ತದೆ. ಈ ಬೆಳೆಗೆ ಮಾರುಕಟ್ಟೆ ಸಂಬಂದಿಸಿದಂತೆ ಯಾವುದೇ ತೊಂದರೆಗಳು ಇಲ್ಲ. ಒಂದು ಕಾಯಿ 300 ಗ್ರಾಂನಿಂದ 800 ಗ್ರಾಂ ವರೆಗೂ ತೂಕವಿದೆ, ನಮಗೆ 1 ಕೆಜಿ 180 ರೂ ಸಿಗುತ್ತಿದೆ.
ನೋಟ್ 1: ಬೇರೆ ಬೆಳೆಗಳಲ್ಲಿ ನಷ್ಟ ಇದ್ದೇ ಇರುತ್ತದೆ. ಆದರೆ ಈ ಬೆಳೆಯಲ್ಲಿ ನಷ್ಟ ಎಂಬುದು ಇರುವುದಿಲ್ಲ. 1 ಕೆಜಿ ಎಂಬತ್ತು, ನೂರು ರೂ ಹೋದರು ಸಹ ವರ್ಷಕ್ಕೆ ಕನಿಷ್ಟ ಪಕ್ಷ ಒಂದು ಟನ್ಗೆ 8 ಲಕ್ಷ ಲಾಭ ಇದ್ದೇ ಇರುತ್ತದೆ . ಡ್ಯ್ರಾಗನ್ ಫ್ರೊಟ್ ಬೆಳೆ ಬೆಳೆದರೆ ಉಪಯುಕ್ತ ಇದ್ದೇ ಇರುತ್ತದೆ. ಬೇರೆ ಬೆಳೆಗಳು ಬೆಳದು ನಷ್ಟ ಆಗುವುದರಿಂದ ಈ ಬೆಳೆಯನ್ನು ಬೆಳೆದರೆ ಲಾಭ ಇದ್ದೇ ಇರುತ್ತದೆ . ಪ್ರಾರಂಭದಲ್ಲಿ ಎಂಟು ರಿಂದ ಹತ್ತು ಲಕ್ಷ ಬಂಡವಾಳ ಹಾಕಬೇಕು. ಒಂದು ಬಾರಿ ಬಂಡವಾಳ ಮಾಡಿದರೆ 30 ವರ್ಷ ಇರುತ್ತದೆ ಈ ಬೆಳೆಯಿಂದ ಲಾಭ ಪಡೆಯಬಹುದು ಎಂದು ರೈತರಿಗೆ ಸಲಹೆ ನೀಡಿದರು.
ಚಿಕ್ಕನ್ಸಾಲ್ ರಸ್ತೆಯ ಅಮರಸನ ಕಟ್ಟಡದ ಸಮೀಪದ ಬೃಹತ್ ಸಮಾರು 200 ವರ್ಷದ ಆಲದ ಮರ ಬುಡ ಸಮೇತವಾಗಿ ಉರುಳಿದೆ /A huge 200-year-old banyan tree near Amarasana building on Chickensal Road fell down with its base
ಕುಂದಾಪುರ, ಜು.18: ಮಳೆಯ ಆರ್ಭಟದಿಂದ ಕುಂದಾಪುರ ನಗರದ, ಚಿಕ್ಕನ್ಸಾಲ್ ರಸ್ತೆಯ ಅಮರಸನ ಕಟ್ಟಡದ ಸಮೀಪದ ಸಮಾರು 200 ವರ್ಷದ ಬೃಹತ್ ಆಲದ ಮರ ಬೆಳಗಿನ ಜಾವ ಗಂಟೆಗೆ ಬುಡ ಸಮೇತವಾಗಿ ಉರುಳಿ ಬಿದ್ದಿದೆ. ಮರ ರಸ್ತೆ ಬದಿಗೆ ಬೀಳದೆ ರಸ್ತೆಯ ಇನ್ನೊಂದು ಪಕ್ಕದಲ್ಲಿ ಬಿದ್ದಿರುವುದರಿಂದ ಸಂಚಾರಕ್ಕೆ ಅಡಚಣೆಯಾಗಿಲ್ಲ.
ಆದರೂ ಅಮರಸನ ಕುಟುಂಬದ ಮನೆಗೆ ಹೋಗುವ ಖಾಸಗಿ ರಸ್ತೆಯ ಮೇಲೆ ಬಿದ್ದಿದೆ. ಮರ ಈಷ್ಟು ವಿಶಾಲ ಆಗಿತ್ತೆಂದರೆ ಮರ ಬೀಳುವಾಗ ಅನತಿ ದೂರದಲ್ಲಿರುವ ಮರದ ಗೆಲ್ಲುಗಳು ವಿದ್ಯುತ್ ಟ್ರಾನ್ಸ್ಪಾರ್ಮರ್ ಕಂಬಗಳಿಗೆ ತಾಗಿ ಟ್ರಾನ್ಸ್ಪಾರ್ಮರಿನ ಎರಡು ಕಂಬಗಳು ಮುರಿದೆವೆ. ಇದರಿಂದಾಗಿ ವಿದ್ಯುತ್ ವಯರ್ಗಳು ತುಂಡಾಗಿದ್ದು,. ಟ್ರಾನ್ಸ್ಪಾರ್ಮರ್ ಪಕ್ಕದ ಮನೆಯವರ ಕಂಪೌಂಡಿಗೆ ವಾಲಿದೆ. ಹಾಗೆ ಇನ್ನೊಂದ ಬದಿಯ ಕಂಪೌಂಡ್ ಮೇಲೆ ಮರದ ಬೃಹತ್ ಭಾಗ ಮಗುಚಿ ಬಿದ್ದಿದ್ದು ಕಂಪೌಂಡ್ ಹಾನಿಗೊಂಡಿದೆ.ಹಾಗೆ ಇನ್ನೊಂದ ಬದಿಯ ಕಂಪೌಂಡ್ ಮೇಲೆ ಮರದ ಬøಹತ್ ಭಾಗ ಮಗುಚಿ ಬಿದ್ದಿದ್ದು ಕಂಪೌಂಡ್ ಹಾನಿಗೊಂಡಿದೆ. ಅಕ್ಕಪಕ್ಕದ ವಿದ್ಯುತ್ ಕಂಬಗಳಿಗೂ ಹಾನಿಯುಂಟಾಗಿದೆ.
ಈ ಆಲದ ಮರದ ಸುತ್ತ ಹಲವಾರು ಭಕ್ತರು ಬೆಳಗಿನ ಜಾವ ಬಂದು ಸುತ್ತು ತೆಗೆದು ಭಕ್ತಿಯನ್ನು ಆಚರಿಸುತ್ತೀದ್ದರು. ಆಗಿದಾಂದ್ದಾಗೆ ಪೂಜಾ ಕಾರ್ಯಕ್ರಮಗಳು ನಡೆಯುತಿತ್ತು.
A huge 200-year-old banyan tree near Amarasana building on Chickensal Road fell down with its base
Kundapur, June 18: A huge banyan tree near Amarasana building on Chikansal Road, Kundapur city fell down with its base in the wee hours of the morning. The tree has not fallen on the side of the road and is lying on the other side of the road, so traffic is not obstructed.
However, it fell on a private road leading to Amarasan’s family home. The tree was so wide that when the tree fell, the branches of the tree at an infinite distance hit the electricity transformer poles and broke two poles of the transformer. Because of this, the electric wires were cut. The transformer is leaning towards the neighbor’s compound. A large part of a tree fell on the compound on the other side and the compound was damaged. A large part of the tree fell on the compound on the other side and the compound was damaged. Electricity poles nearby have also been damaged.
Many devotees used to come around this banyan tree in the morning to remove the wrap and celebrate devotion. Pooja programs were being held since then.
ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ – ಹವಾಮಾನ ಇಲಾಖೆ / Heavy rain is likely to occur in the state for the next 5 days – Meteorological Department
ಬೆಂಗಳೂರು ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜುಲೈ 22 ರವರೆಗೆ ಮಳೆಯಾಗಲಿದೆ. ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು 8 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಕರಾವಳಿ, ದಕ್ಷಿಣ ಕನ್ನಡ, ಉತ್ತರಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಈ 4 ಜಿಲ್ಲೆಗಳಿಗೆ ಇಂದು ಮತ್ತು ನಾಳೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಜುಲೈ 20 ರವರೆಗೆ ಆರೆಂಜ್ ಅಲರ್ಟ್ ಅಲರ್ಟ್, ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡುಗು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು ಈ ನಾಲ್ಕು ಜಿಲ್ಲೆಗಳಲ್ಲಿ ಇಂದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಹಾಸನ, ಕಲಬುರ್ಗಿ, ಬೀದರ್, ಬೆಳಗಾವಿ, ರಾಯಚೂರು, ಯಾದಗಿರಿ, ಮೈಸೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Heavy rain is likely to occur in the state for the next 5 days – Meteorological Department
The State Meteorological Department has predicted that there is a possibility of heavy rains in Bengaluru state for the next 5 days. It will rain till July 22. Heavy rain is likely to occur in many districts of the state and red alert has been announced for 8 districts.
Coastal, Dakshina Kannada, Uttara Kannada, Udupi districts are likely to receive heavy rains, red alert has been announced for these 4 districts today and tomorrow. Orange alert alert till July 20, heavy rain is likely to occur in Shimoga, Chikkamagaluru, Kodugu districts of southern interior and red alert has been announced today in these four districts.
Orange and yellow alert has been announced in Hassan, Kalaburgi, Bidar, Belgaum, Raichur, Yadgiri, Mysore districts due to possibility of heavy rain. The weather department has predicted that the weather will be cloudy in Bangalore and there is a possibility of moderate rain.
ಚೆನ್ನೈ ಎಕ್ಸ್ಪ್ರೆಸ್ನಿಂದ ಕೋಲಾರಕ್ಕೆ ಬುಲೆಟ್ ರೈಲು ಬರಲು ಸಿದ್ದ- ಜಿಲ್ಲಾಧಿಕಾರಿ ಅಕ್ರಂ ಪಾಷ
ಕೋಲಾರ : ಚೆನ್ನೈ ಮೈಸೂರು ಚೆನ್ನೈ ಅತಿ ವೇಗದ ರೈಲು ಕಾರಿಡಾರ್ ಯೋಜನೆ, 463.159 ಕಿಲೋ ಮೀಟರ್ಗಳ ಪರಮ ಆದ್ಯತೆಯ ಮಹತ್ವದ ಯೋಜನೆಯಾಗಿದ್ದು ಚೆನ್ನೈನಿಂದ ಶುರುವಾಗಲಿದ್ದು, ಚೆನ್ನೈ ಎಕ್ಸ್ ಪ್ರೆಸ್ ನಿಂದ ನಮ್ಮ ಕೋಲಾರಕ್ಕೆ ಯಾವುದೇ ತೊಂದರೆಯಿಲ್ಲದೆ ಬುಲೆಟ್ ರೈಲು ಬರುವುದಕ್ಕೆ ಸಿದ್ಧವಿದೆ ಎಂದು ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಂಗಣ ಸಭಾಂಗಣದಲ್ಲಿ ನಡೆದ ಮೈಸೂರು ಚೆನ್ನೈ ಹೈ ಸ್ಪೀಡ್ ರೈಲು ಕಾರಿಡಾರ್ಗಳಿಗಾಗಿ ಪರಿಸರ ಮತ್ತು ಸಾಮಾಜಿಕ ಪರಿಗಣನೆಗಳ ಸಾರ್ವಜನಿಕ ಸಮಾಲೋಚನೆ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಚೆನ್ನೈ ಮೈಸೂರು ಚೆನ್ನೈ ರೈಲು ಮಾರ್ಗವು ಹೊಲ ಗದ್ದೆಗಳ ನಡುವೆ ಹಾದು ಹೋಗುವುದಾಗಿ ಗ್ರಾಮಸ್ಥರಿಗೆ ತಿಳಿಸಿದರು.
ಪ್ರಸ್ತಾವಿತ ಮಾರ್ಗವು ಎತ್ತರಿಸಿದ ಸೇತುನಾಲೆಗಳು ಮತ್ತು ಸುರಂಗಗಳನ್ನು ಒಳಗೊಂಡಿದೆ. ಜೊತೆಗೆ ಇವರು ಜಾಸ್ತಿ ಜಮೀನನ್ನು ತೆಗೆದುಕೊಳ್ಳುವುದಿಲ್ಲ ಇವರು 17 ಮೀಟರ್ ಮಾತ್ರ ಅವರು ತೆಗೆದುಕೊಳ್ಳುತ್ತಾರೆ ನಿಮ್ಮ ಜಮೀನಿನ ಮೇಲೆ ಟ್ಯಾಕ್ ಇರುವುದಿಲ್ಲ ಮೇಲೆ ಇರುತ್ತದೆ ಏಕೆಂದರೆ ಆ ವೇಗ ತುಂಬಾ ಇರುತ್ತದೆ ಆ ಕಾರಣದಿಂದ ಮೇಲೆ ಹೋಗುತ್ತವೆ ಎಂದರು.
ಹಳ್ಳಿಗಳಲ್ಲಿ ಅವರು ಈಗಾಗಲೇ ಜೋಡಣೆಯನ್ನು ತೋರಿಸಿದ್ದಾರೆ. ಮುಂದಿನ ದಿನಗಳಲ್ಲಿ ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದೆಂದು ಹೇಳಿದರು. ಬೆಂಗಳೂರು ವಿಮಾನ ನಿಲ್ದಾಣ ದಿಂದ ಕೆಜಿಎಫ್ಗೆ ಕೇವಲ ಅರ್ಧ ಗಂಟೆಯಲ್ಲಿ ಹೋಗಬಹುದೆಂದರು. ಕೋಲಾರದಿಂದ ಕೆಜಿಎಫ್ 15 ನಿಮಿಷದಲ್ಲಿ ತಲುಪಬಹುದು. ಬುಲೆಟ್ ರೈಲುಗಳು ಮಾಡಬೇಕು ಎಂದು ಸುಮಾರು ಕಡೆ ಪ್ರಾಜೆಕ್ಟ್ಗಳನ್ನು ಕೊಟ್ಟಿದ್ದಾರೆ ಅದರಲ್ಲಿ ನಮ್ಮ ರಾಜ್ಯವನ್ನು ಆಯ್ಕೆ ಮಾಡಲಾಗಿದೆ. ಆಂಧ್ರಪ್ರದೇಶ, ಕರ್ನಾಟಕ ಹಾಗೂ ತಮಿಳುನಾಡು ಈ ಮೂರು ಸೇರುವಂತಹ ರಸ್ತೆ ಇದೆ. ಆ ಕಾರಣದಿಂದ ಪ್ರಾಜೆಕ್ಟ್ ನಮಗೆ ಬಂದರೆ ತುಂಬಾ ಸೌಲಭ್ಯಗಳು ನಮಗೆ ದೊರೆಯುತ್ತವೆ ಬೇರೆ ಬೇರೆ ಕೈಗಾರಿಕೆಗಳು ಬರುತ್ತವೆ ಇವು ಎಲ್ಲ ನಮ್ಮ ಜಿಲ್ಲೆಗೆ ಬಂದರೆ ಉದ್ಯೋಗಗಳು ಸಿಗುತ್ತವೆ ಜನರಿಗೆ ತುಂಬಾ ಅನುಕೂಲವಾಗುತ್ತದೆ ಎಂದರು.
ಇಂತಹ ಸಂದರ್ಭದಲ್ಲಿ ನಾವುಗಳು ಸರ್ಕಾರಕ್ಕೆ ಪ್ರೋತ್ಸಾಹ ಕೊಟ್ಟಾಗ ಸರ್ಕಾರ ನಮಗೆ ಬೆಂಬಲ ನೀಡುತ್ತದೆ. ರೈಲು ವಿನ್ಯಾಸದಲ್ಲಿ ಶಬ್ದ ಮತ್ತು ಕಂಪನಗಳನ್ನು ತೆಗೆಸುವ ಕ್ರಮಗಳನ್ನು ಅಳವಡಿಸಲಾಗುವುದು ಸೂಕ್ತ ಪ್ರದೇಶಗಳಲ್ಲಿ ಶಬ್ದ ನಿಬರ್ಂಧಕಗಳನ್ನು ಒದಗಿಸಲಾಗುವುದು ಜನನಿಬಿಡ ಮತ್ತು ನಗರ ಪ್ರದೇಶಗಳ ಮೂಲಕ ಹಾದು ಹೋಗುವಲ್ಲಿ ಖಾಸಗಿ ಸಮಸ್ಯೆ ಅಂತಹ ಪ್ರದೇಶಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸಲಾಗುವುದೆಂದರು.
ಸಭೆಯಲ್ಲಿ ನ್ಯಾಷನಲ್ ಹೈ ಸ್ಪೀಡ್ ರೈಲು ಕಾರ್ಪೋರೇಷನ್ ಲಿಮಿಟೆಡ್ನ ಜೆ.ಜಿ.ಎಂ.ಎಸ್.ಡಿ ಅನಿಲ್ ಶರ್ಮ, ಆರ್.ಬಿ ಅಸೋಸಿಯೇಷನ್ ಪ್ರಾಜೆಕ್ಟ್ ಇಂಜಿನಿಯರ್ ಸಚ್ಚಿದಾನಂದ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕರಿಗೆ ಭಾರತ ಸೇವಾದಳದಿಂದ ತಾಲ್ಲೂಕು ಮಟ್ಟದ ಪುನಶ್ಚೇತನ ಕಾರ್ಯಾಗಾರ – ಪ್ರತಿಶಾಲೆಯಲ್ಲೂ ಸೇವಾದಳ ಸಂಘಟಿಸಿ,ಮಕ್ಕಳಲ್ಲಿ ದೇಶಭಕ್ತಿ ಬೆಳೆಸಿ-ಸಿಎಂಆರ್ ಶ್ರೀನಾಥ್
ಕೋಲಾರ:- ದೇಶದ ಸ್ವಾತಂತ್ರ್ಯ, ಐಕ್ಯತೆಗೆ ಪ್ರತೀಕವಾಗಿರುವ ಭಾರತ ಸೇವಾದಳವನ್ನು ಪ್ರತಿ ಶಾಲೆಯಲ್ಲಿ ಸಂಘಟಿಸಿ,ಮಕ್ಕಳಲ್ಲಿ ರಾಷ್ಟ್ರಪ್ರೇಮ, ಭಾವೈಕ್ಯತೆ ಮೂಡಿಸಿ ಸಂಸ್ಕಾರಯುತ, ದೇಶಭಕ್ತ ಪ್ರಜೆಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿ ಎಂದು ಭಾರತ ಸೇವಾದಳ ಜಿಲ್ಲಾ ಕಾರ್ಯಾಧ್ಯಕ್ಷ ಸಿಎಂಆರ್.ಶ್ರೀನಾಥ್ ಶಿಕ್ಷಕರಿಗೆ ಕರೆ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಶಾಲಾ ಶಿಕ್ಷಣ ಇಲಾಖೆ ಹಾಗೂ ಭಾರತ ಸೇವಾದಳ ಜಿಲ್ಲಾ ಸಮಿತಿಯಿಂದ ಆಯೋಜಿಸಲಾಗಿದ್ದ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಪುನಶ್ಚೇತನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮಹನೀಯರ ಕುರಿತು ಮಕ್ಕಳಿಗೆ ತಿಳಿಸಿಕೊಡಿ, ಡಾ.ನಾ.ಸು.ಹರ್ಡಿಕರ್ ಅವರು ದೇಶವನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಲು ಸಂಘಟಿಸಿದ ಈ ಸಂಘಟನೆ ಇಂದು ಮಕ್ಕಳಲ್ಲಿ ದೇಶಪ್ರೇಮ, ರಾಷ್ಟ್ರಧ್ವಜದ ಕುರಿತು ಗೌರವ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.
ಪ್ರತಿ ಶಾಲೆಗೆ ರಾಷ್ಟ್ರಧ್ವಜಸಂಹಿತೆ ಕುರಿತಂತೆ ಭಾರತ ಸೇವಾದಳ ಪ್ರಕಟಿಸಿರುವ ಪುಸ್ತಕಗಳನ್ನು ಉಚಿತವಾಗಿ ತಾವೇ ವಿತರಿಸುವುದಾಗಿ ಭರವಸೆ ನೀಡಿದ ಅವರು, ತಮ್ಮದೇ ರಾಷ್ಟ್ರದ ಚಿಹ್ನೆ, ಧ್ವಜದ ಅಡಿಯಲ್ಲಿ ಹೋರಾಟಗಳನ್ನು ನಡೆಸುವ ಮೂಲಕ ಭಾರತೀಯರ ಸಾರ್ವಭೌಮತೆ, ಐಕ್ಯತೆ, ಘನತೆ ಗೌರವದ ಸಂಕೇತವಾಗಿ ಗಣರಾಜ್ಯೋತ್ಸವ ಸ್ವಾತಂತ್ರ್ಯದಿನ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ರಾಷ್ಟ್ರಧ್ವಜದ ಬಣ್ಣಗಳು ಯಾವುದೇ ಧರ್ಮದ ಸಂಕೇತವಲ್ಲ ಈ ಕಲ್ಪನೆ ತಪ್ಪು ಎಂದ ಅವರು, ಧ್ವಜ ಬಗೆಗಿನ ಈ ಅಜ್ಞಾನ ದೂರವಾಗಬೇಕು ಎಂದು ತಿಳಿಸಿದರು.
ಆಂಧ್ರಪ್ರದೇಶದ ಪಿಂಗಳಿ ವೆಂಕಯ್ಯ ತ್ರಿವರ್ಣ ಧ್ವಜವನ್ನು ರೂಪಿಸಿದ್ದು, ಇದರ ವಿನ್ಯಾಸವನ್ನು ಅಂತಿಮವಾಗಿ ಹೈದ
ರಾಬಾದ್ನ ದೇಶಭಕ್ತ ಕುಟುಂಬದ ಸುರಾಯ್ಯ ಬದ್ರೂದ್ದೀನ್ ಎಂಬುವವರು ವಿನ್ಯಾಸ ಮಾಡಿದ್ದರ ಕುರಿತು ಸ್ಮರಿಸಿದರು.
ಸ್ವಾತಂತ್ರ್ಯದ ದಿನ ಪ್ರತಿ ಶಾಲೆಯಲ್ಲಿ ರಾಷ್ಟ್ರಧ್ವಜವನ್ನು ವ್ಯವಸ್ಥಿತವಾಗಿ ಹಾರಿಸಬೇಕು. ಸರಿಯಾದ ವ್ಯವಸ್ಥೆಯಲ್ಲಿ ಬಾವುಟ ಹಾರಿಸದಿದ್ದರೆ ಸೇವೆಯಿಂದ ಅಮಾನತು ಆಗುವುದು ಖಚಿತ. ಪ್ರತಿನಿತ್ಯ ಪಾಠ ಮಾಡಿ ವಿದ್ಯಾರ್ಥಿಗಳ ಜ್ಞಾನವನ್ನು ವೃದ್ಧಿಸುವ, ಬುದ್ದಿ ಹೇಳುವ ಶಿಕ್ಷಕರು ಧ್ವಜಕ್ಕೆ ನೀಡುವ ಗೌರವವನ್ನು ಅರಿಯಬೇಕು. ದಿನನಿತ್ಯ ನಿಮ್ಮ ಕೆಲಸದ ಜಂಜಾಟದಲ್ಲಿ ಮರೆಯುವ ಪಾಠವನ್ನು ಭಾರತ ಸೇವಾದಳದಿಂದ ನಿಮಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದರು.
ಪ್ರತಿ ತಾಲೂಕಿನಲ್ಲಿ ಭಾರತ ಸೇವಾದಳ ಘಟಕಗಳಿದೆ. ಪ್ರತಿ ಶಾಲೆಯಲ್ಲಿ 33 ಜನ ತಂಡ ಮಾಡಿ,
ಸೇವಾದಳ ಸಮರಶೀಲ ಶಿಸ್ತುಬದ್ದ ಸಂಘಟನೆಯಾಗಿದ್ದು, ಮಕ್ಕಳಲ್ಲಿ ದೇಶಭಕ್ತಿ ಬೆಳೆಸಿ, ರಾಷ್ಟ್ರಧ್ವಜವನ್ನು ಹಾರಿಸುವ ಗೌರವ ನೀಡುವ ಹಾಗೂ ಬ್ಯಾಂಡ್ ಸೆಟ್ ತರಬೇತಿಯನ್ನು ಸೇವಾದಳ ನೀಡುತ್ತದೆ ಇದರ ಸದುಪಯೋಗ ಪಡೆಯಿರಿ ಎಂದು ಕೋರಿದರು.
ಭಾರತ ಸೇವಾದಳದ ಜಿಲ್ಲಾ ಉಪಾಧ್ಯಕ್ಷ ಜಿ.ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿ, ನಾವು ಎಂದಿಗೂ ಇತಿಹಾಸ ಮರೆಯಬಾರದು, ಸೇವಾದಳ ನಮಗೆ ಸಮಯಪ್ರಜ್ಞೆ ಕಲಿಸುತ್ತದೆ, ಮಕ್ಕಳಲ್ಲಿ ಶಿಸ್ತು ಮೂಡಿಸಿ ಶಾಲೆಯ ವಾತಾವರಣವನ್ನೇ ಸರಿದಾರಿಗೆ ತರುವ ಶಕ್ತಿ ಹೊಂದಿದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಬೆಂಗಳೂರು ಜಿಲ್ಲೆಯವರದ ಭಾರತ ಸೇವಾದಳ ಸಹ ಕಾರ್ಯದರ್ಶಿ ಮಹೇಶ್ ಗೌಡ ಹಾಗೂ ಜಿಲ್ಲಾ ಸಂಘಟಕ ಎಂ.ಬಿ.ದಾನೇಶ್ ರಾಷ್ಟ್ರಧ್ವಜ ಕಟ್ಟುವ, ಮಡಚುವ, ಹಾರಿಸುವ ಸಮಯದಲ್ಲಿ ಯಾವಗೀತೆ ಹಾಡಬೇಕು ಹಾಗೂ ಇಳಿಸುವ ಸಮಯದಲ್ಲಿ ಯಾವ ಗೀತೆ ಹಾಡಬೇಕು ಎಂಬ ವಿಧಾನಗಳ ಕುರಿತು ಪ್ರಾತ್ಯಕ್ಷಿಕೆ ನೀಡಿದರಲ್ಲದೇ ಸೇವಾದಳ ಕಾರ್ಯಯೋಜನೆಗಳ ಕುರಿತು ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು.
ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಎಸ್.ಸುಧಾಕರ್ ಮಾತನಾಡಿ, ಖಾಸಗಿ ಶಾಲೆಗಳಲ್ಲಿನ ಶಿಕ್ಷಣದಿಂದ ಅಂಕ,ಸಂಪಾದನೆ ಹೆಚ್ಚಾಗುತ್ತದೆ ಆದರೆ ಸರ್ಕಾರಿ ಶಾಲೆಗಳ ಶಿಕ್ಷಣದಿಂದ ಮಕ್ಕಳಲ್ಲಿ ಸಮಾಜಮುಖಿ ಆಲೋಚನೆ ಮತ್ತು ಸಂಸ್ಕಾರ ವೃದ್ದಿಯಾಗುತ್ತದೆ ಎಂದು ತಿಳಿಸಿ, ಸೇವಾದಳ ಪ್ರತಿ ಶಾಲೆಯಲ್ಲೂ ಸಂಘಟಿಸಿ ಮಕ್ಕಳ ಮನಸ್ಸನ್ನು ಅಪರಾಧ ಮುಕ್ತವಾಗಿಸಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಭಾರತ ಸೇವಾದಳ ಅಧ್ಯಕ್ಷ ಶ್ರೀರಾಮ್ ಮಾತನಾಡಿ, ಯಾವುದೇ ಶಾಲೆಯಲ್ಲಿ ಸೇವಾದಳ ಘಟಕ ಆರಂಭಿಸಿದರೆ ಆಶಾಲೆಯ ಎಲ್ಲಾ 33 ಮಕ್ಕಳಿಗೂ ಸೇವಾದಳದಿಂದ ಉಚಿತ ಸೇವಾದಳ ಟೋಪಿ ವಿತರಿಸುವುದಾಗಿ ಭರವಸೆ ನೀಡಿ, ಸೇವಾದಳ ಸಂಘಟಿಸೋಣ, ಸಮಾಜದಲ್ಲಿ ರಾಷ್ಟ್ರಪ್ರೇಮ ಬೆಳೆಸೋಣ ಎಂದರು.
ಭಾರತ ಸೇವಾದಳ ಜಿಲ್ಲಾ ಸಂಘಟಕ ದಾನೇಶ್ ನಿರೂಪಿಸಿ, ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಸೇವಾದಳ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ವಿ.ಜಗನ್ನಾಥ್,ಜಿಲ್ಲಾ ಪ್ರತಿನಿಧಿಗಳಾದ ಬಹದ್ದೂರ್ ಸಾಬ್, ಎಂ.ಎನ್.ಶ್ರೀನಿವಾಸಮೂರ್ತಿ, ಫಾಲ್ಗುಣ, ಸುಬ್ರಮಣಿರೆಡ್ಡಿ ಮತ್ತಿತರರು ಉಪಸ್ಥಿತರಿದ್ದು, ಶಿಕ್ಷಕರಾದ ಕೆ.ಲೀಲಾ,ಅಂಬಿಕಾ,ವಿಜಯ ಸರ್ವಧರ್ಮ ಪ್ರಾರ್ಥನೆ ನೆರವೇರಿಸಿಕೊಟ್ಟಿದ್ದು, ಮಹೇಶ್ಗೌಡ ವಂದಿಸಿದರು. ತಾಲ್ಲೂಕಿನ 200ಕ್ಕೂ ಹೆಚ್ಚು ಶಿಕ್ಷಕರು ಪಾಲ್ಗೊಂಡಿದ್ದರು.
ಶಿಕ್ಷಕರ ಪುನಶ್ಚೇತನ ಶಿಬಿರದ ಧ್ವಜಾರೋಹಣವನ್ನು ಜಿಲ್ಲಾ ಮತ್ತು ತಾಲ್ಲೂಕು ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆಸಿಕೊಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಾಜೇಶ್ಸಿಂಗ್,ಮಹಮದ್ ಚಾಂದ್ಪಾಷಾ, ಚಲಪತಿ, ಗಂಗಾಧರ್ ಮತ್ತಿತರರಿದ್ದರು.
ಒಮಾನ್ ಕರಾವಳಿಯಲ್ಲಿ ಮುಳುಗಿದ ತೈಲ ಟ್ಯಾಂಕರ್: 13 ಭಾರತೀಯ ಸಿಬ್ಬಂದಿಗಳು ಕಾಣೆಯಾಗಿದ್ದಾರೆ
ಮಸ್ಕತ್: ಒಮಾನ್ನ ಕರಾವಳಿಯಲ್ಲಿ ತೈಲ ಟ್ಯಾಂಕರ್ ಮುಳುಗಿದ್ದು, ಟ್ಯಾಂಕರ್ನಲ್ಲಿದ್ದ 13 ಭಾರತೀಯ ಸಿಬ್ಬಂದಿ ಸೇರಿದಂತೆ 16 ಮಂದಿ ನಾಪತ್ತೆಯಾಗಿದ್ದಾರೆ.
ಕೊಮೊರೊಸ್ ಧ್ವಜ ಹೊಂದಿದ್ದ ತೈಲ ಹಡಗು ಯೆಮೆನ್ ಬಂದರು ನಗರವಾದ ಏಡೆನ್ಗೆ ತೆರಳುತ್ತಿತ್ತು. ಈ ಹಡಗಿನಲ್ಲಿ 13 ಭಾರತೀಯ ಮತ್ತು ಶ್ರೀಲಂಕಾದ ಮೂವರು ಸಿಬ್ಬಂದಿಗಳಿದ್ದರು.
ಒಮನ್ನ ಡುಕ್ಮ್ ಬಂದರಿನಿಂದ 25 ನಾಟಿಕಲ್ ಮೈಲ್ ದೂರದಲ್ಲಿ ಹಡಗು ಮುಳುಗಿದೆ. ಪ್ರೆಸ್ಟೀಜ್ ಫಾಲ್ಕನ್ ಹೆಸರಿನ ಹಡಗನ್ನು 2007 ರಲ್ಲಿ ನಿರ್ಮಾಣ ಮಾಡಿದ್ದು 117 ಮೀಟರ್ ಉದ್ದವಿದೆ. ನಾಪತ್ತೆಯಾಗಿರುವ ಸಿಬ್ಬಂದಿ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ.