ಕೋಲಾರ:- ಕೋಲಾರ ಕ್ರೀಡಾ ಸಂಘದ ಗರಡಿಯಲ್ಲಿ ಕೃಷ್ಣಮೂರ್ತಿ ಮತ್ತು ಸುರೇಶಬಾಬುರವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದು ಅಗ್ನಿಪಥ ಯೋಜನೆಯಡಿ ಸೈನ್ಯಕ್ಕೆ ಆಯ್ಕೆಗೊಂಡು ಇದೀಗ ಸೇನಾ ತರಬೇತಿ ಮುಗಿಸಿ ಕರ್ತವ್ಯಕ್ಕೆ ಹಾಜರಾಗಲು ಹೊರಟ ಅಗ್ನಿವೀರರಿಗೆ ಶುಭಹಾರೈಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು.
ನಗರದ ಜಯನಗರದ ಅಂಬೇಡ್ಕರ್ ಮಕ್ಕಳ ಉದ್ಯಾನವದಲ್ಲಿರುವ ಹುತಾತ್ಮ ಸೈನಿಕ ಸ್ಮಾರಕಕ್ಕೆ ಆಯ್ಕೆಯಾದ ಎಲ್ಲಾ ಅಗ್ನಿವೀರರು ಗೌರವ ವಂದನೆ ಸಲ್ಲಿಸುವ ಮೂಲಕ ತಮ್ಮ ಕರ್ತವ್ಯಕ್ಕೆ ತೆರಳಲು ಸಜ್ಜಾಗಿದ್ದು ವಿಶೇಷವಾಗಿತ್ತು.
ಅಗ್ನಿವೀರರಾದ ಬಾಲಾಜಿ ಟಿ.ಎಚ್, ತೊರದೇವಂಡಹಳ್ಳಿಯ ವಿನಯ್ಟಿ.ಎಸ್., ಕುಂಬಾರಹಳ್ಳಿಯ ನಾಗರಾಜಪ್ರಸಾದ್, ತೊಟ್ಟಿಗಾನಹಳ್ಳಿಯ ಪವನ್ಎಸ್, ಬಾರಂಡಳ್ಳಿಯ ಶ್ರೀನಿವಾಸ ಎಸ್, ಸೀಪುರದ ಅಭಿಷೇಕ್ಗೌಡ ಮಾತನಾಡಿ, ಭಾರತೀಯಸೇನೆಗೆ ಹೇಗೆ ಸೇರಬೇಕು, ಯಾವ ರೀತಿ ಸಿದ್ಧತೆ ನಡೆಸಬೇಕು ಎಂಬ ಬಗ್ಗೆ ಕಿಂಚಿತ್ತೂ ತಿಳಿಯದ ತಾವುಗಳು ಭಾರತೀಯ ಸೇನೆಯ ಹೆಮ್ಮೆಯ ಯೋಧರಾಗಲು ಶ್ರಮವಹಿಸಿದ ತರಬೇತುದಾರರಾದ ಕೃಷ್ಣಮೂರ್ತಿ, ಸುರೇಶಬಾಬು ಮತ್ತು ಹಿರಿಯ ತರಬೇತುದಾರ ಪುರುಷೋತ್ತಮ ರವರು ನೀಡಿದ ಮಾರ್ಗದರ್ಶನ ಮತ್ತು ಕೋಲಾರ ಕ್ರೀಡಾ ಸಂಘ ನೀಡಿದ ಅವಕಾಶದ ವೇದಿಕೆಯನ್ನು ಸ್ಮರಿಸಿದರು.
ಭಾರತೀಯ ಸೇನೆಗೆ ನೀನು ಆಯ್ಕೆಯಾಗುವುದೇ ಎಂದು ಹೀಯಾಳಿಸಿದವರೇ ಇಂದು ಹೆಮ್ಮೆ ಪಡುತ್ತಿದ್ದಾರೆ, ತಮ್ಮ ಕುಟುಂಬ ಮತ್ತು ತಮ್ಮ ಹಳ್ಳಿಯಲ್ಲಿ ತಮಗೆ ಸಿಗುತ್ತಿರುವ ಗೌರವ, ಜನ ತಮ್ಮ ಬಗ್ಗೆ ತೋರಿಸುವ ಆದರ ಮತ್ತು ಹೆಮ್ಮೆಯ ಬಗ್ಗೆ ಈ ಬಾರಿ ತರಬೇತಿ ಪಡೆಯಲು ಬಂದ ಯುವಕರಿಗೆ ವಿವರಿಸಿದರು.
ಅಗ್ನಿವೀರರನ್ನುದ್ದೇಶಿಸಿ ಮಾತನಾಡಿದ ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ದೇಶಸೇವೆಯೆಂಬುದು ಎಲ್ಲರಿಗೂ ಸಿಗುವಂತÀದಲ್ಲ. ಗಡಿಯಲ್ಲಿ ದೇಶಕಾಯುವ ಸೈನಿಕರು ನಿಜವಾದ ಹೀರೋಗಳು. ನೀವು ನಮ್ಮ ಕೋಲಾರದ ಹೆಮ್ಮೆ. ಇದೊಂದು ಸಾರ್ಥಕ ಕ್ಷಣ, ನಮ್ಮ ಜಿಲ್ಲೆಯಿಂದ ಇನ್ನಷ್ಟು ಯುವಕರು ಸೇನೆಗೆ ಸೇರಲು ನೀವು ಸ್ಪೂರ್ತಿಯಾಗಬೇಕು ಎಂದು ತಿಳಿಸಿದರು.
ಯುವಕರಿಗೆ ಉಚಿತವಾಗಿ ತರಬೇತಿ ನೀಡಿ ಸೈನ್ಯಕ್ಕೆ ಸೇರಲು ಪ್ರೇರೇಪಿಸಿ ದೇಶ ಸೇವೆ ಸಲ್ಲಿಸುತ್ತಿರುವ ಕೋಲಾರ ಕ್ರೀಡಾ ಸಂಘ ಮತ್ತು ಅದರ ತರಬೇತುದಾರರನ್ನು ಅವರು ಶ್ಲಾಘಿಸಿದರು.
ಇತ್ತೀಚೆಗಷ್ಟೇ ತಮ್ಮ ಸಹೋದರ ಕರ್ನಲ್ ಅಮರನಾಥ್ರ ನಿಧನದ ಶೋಕದಿಂದ ಹೊರಬಾರದ ಪೆÇಲೀಸ್ ಅಧಿಕಾರಿ ವಂದೇಮಾತರಂ ಸೋಮಶೇಖರ್ ಮಾತನಾಡಿ, ಸೈನ್ಯಕ್ಕೆ ಸೇರಿದ ಮೇಲೆ ಹೇಗಿರಬೇಕು, ಆರೋಗ್ಯದ ರಕ್ಷಣೆಯನ್ನು ಹೇಗೆ ನೋಡಿಕೊಳ್ಳಬೇಕು ಎಂಬ ಬಗ್ಗೆ ಮಾರ್ಗದರ್ಶನ ನೀಡಿದರು. ಅದೂ ಅಲ್ಲದೇ ತಮ್ಮ ಹಳ್ಳಿಗಳಲ್ಲಿಯ ಯುವಕರನ್ನು ಸೈನ್ಯಕ್ಕೆ ಸೇರುವಂತೆ ಹುರಿದುಂಬಿಸುವುದಲ್ಲದೇ ರಜೆಯಲ್ಲಿ ಬಂದಾಗ ತಾವೇ ಮುಂದೆ ನಿಂತು ಅವರಿಗೆ ತರಬೇತಿ ನೀಡಿ ಮಾರ್ಗದರ್ಶಕರಾಗಿ ಸೈನ್ಯಕ್ಕೆ ಸೇರಲು ಸಹಾಯ ಮಾಡಬೇಕು ಎಂದರು.
ತರಬೇತುದಾರ ಕೃಷ್ಣಮೂರ್ತಿ ಸೈನ್ಯಕ್ಕೆ ಸೇರಿದಾಗ ವಹಿಸಬೇಕಾದ ಜಾಗ್ರತೆ, ಆರೋಗ್ಯದ ಕುರಿತಾಗಿ ವಹಿಸಬೇಕಾದ ಎಚ್ಚರಿಕೆ, ಸಹಸೈನಿಕರೊಂದಿಗೆ ಸಮನ್ವಯ ಸಾಸುವ ಬಗ್ಗೆ ಯುವಕರಿಗೆ ತಿಳಿಸಿದರು. ಭಾರತೀಯ ಸೈನ್ಯದ ಸೇವೆಗೆ ಹೋಗುತ್ತಿರುವ ಯುವ ಯೋಧರ ಕುಟುಂಬಗಳಲ್ಲಿ ಸಮಸ್ಯೆಯಾದಾಗ ಮುಕ್ತವಾಗಿ ತಿಳಿಸಿ ನಾವೆಲ್ಲರೂ ಅವರೊಂದಿಗೆ ಇರುತ್ತೇವೆ ಎಂದು ಧೈರ್ಯ ತುಂಬಿದರು.
ಕಾರ್ಯಕ್ರಮದಲ್ಲಿ ಹಿರಿಯ ತರಬೇತಿದಾರರಾದ ಪುರುಷೋತ್ತಮ ಮಾತನಾಡಿ, ಯಾವುದೇ ಯುವಕರಿಗೆ ನಿರ್ದಿಷ್ಟ ಗುರಿ, ಆಸಕ್ತಿ ಮತ್ತು ಸೂಕ್ತ ತರಬೇತಿ ಮಾರ್ಗದರ್ಶನ ಸಿಕ್ಕರೆ ಏನು ಬೇಕಾದರೂ ಸಾಸಬಹುದು ಎನ್ನುವುದಕ್ಕೆ ಕೋಲಾರ ಕ್ರೀಡಾಸಂಘದಿಂದ ತರಬೇತಿ ಪಡೆದು ಭಾರತೀಯ ಸೇನೆಗೆ ಆಯ್ಕೆಯಾಗಿರುವ ಈ ಯೋಧರೇ ಸಾಕ್ಷಿ ಎಂದರು.
ತರಬೇತುದಾರ ಸುರೇಶ್ ಬಾಬು ಮಾತನಾಡಿ, ನಿರ್ದಿಷ್ಟ ಛಲ ಮತ್ತು ಕಠಿಣ ಪರಿಶ್ರಮ ಇಂದು ಕೋಲಾರದ ಗ್ರಾಮೀಣ ಯುವಕರನ್ನು ಭಾರತೀಯ ಸೇನೆಗೆ ಆಯ್ಕೆ ಮಾಡಿದೆ, ನಾವುಗಳು ಹೊಸದಾಗಿ ಮಾಡಿದ್ದೇನು ಇಲ್ಲ ತಮಗೆ ಗೊತ್ತಿರುವ ಕೌಶಲ್ಯವನ್ನು ಇವರಿಗೂ ಕಲಿಸಿದ್ದೇವೆ ಎಂದರು.
ಕೋಲಾರ ಕ್ರೀಡಾ ಸಂಘದ ಕಾರ್ಯದರ್ಶಿ ಹರೀಶ್ ಬಾಬುರವರು ಅಗ್ನಿವೀರರಿಗೆ ಶುಭಕೋರಿದರು.
Month: June 2024
C.E.T ಪರೀಕ್ಷೆಯಲ್ಲಿ ಆರ್. ಎನ್. ಎಸ್ ವಿದ್ಯಾರ್ಥಿಗಳ ಸಾಧನೆ
ಕುಂದಾಪುರ: ಸಾಮಾನ್ಯ ಪ್ರವೇಶ ಪರೀಕ್ಷೆ-2024(C.E.T) ಯಲ್ಲಿ ಕುಂದಾಪುರದ ಆರ್.ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ನಿಶಾ ಇವರು ಎಗ್ರಿಕಲ್ಚರ್ B.Sc ವಿಭಾಗದಲ್ಲಿ 2974 ನೇ ರ್ಯಾಂಕ್, ಎಂಜಿನೀಯರಿಂಗ್ ನಲ್ಲಿ 7011, BNYS ನಲ್ಲಿ 5704 ನೇ ರ್ಯಾಂಕ್, ಸುಜನ್ ಕುಮಾರ್ ಎಗ್ರಿಕಲ್ಚರ್ B.Sc ಯಲ್ಲಿ 5136, ಎಂಜಿನೀಯರಿಂಗ್ ನಲ್ಲಿ 9934, BNYS ನಲ್ಲಿ 11,316 ನೇ ರ್ಯಾಂಕ್, ಸುಹಾನಿ ಎನ್ ಇವರು ಎಗ್ರಿಕಲ್ಚರ್ B.Sc . ಯಲ್ಲಿ 5940, BNYS ನಲ್ಲಿ 8312, ಎಂಜಿನಿಯರಿಂಗ್ ನಲ್ಲಿ 14,155 ನೇ ರ್ಯಾಂಕ್, ಸಾನಿಕಾ ಇವರು ಎಂಜಿನಿಯರಿಂಗ್ ನಲ್ಲಿ 7255 ನೇ ರ್ಯಾಂಕ್, ಮೇಘನಾ ಎಂಜಿನಿಯರಿಂಗ್ ನಲ್ಲಿ 12, 339 ನೇ ರ್ಯಾಂಕ್ ಹಾಗೂ ಪ್ರಶಾಂತ್ ಎ ಇವರು ಎಂಜಿನಿಯರಿಂಗ್ ನಲ್ಲಿ 14, 828 ರ್ಯಾಂಕ್, ಗಳಿಸಿರುತ್ತಾರೆ. ಈ ನಿಟ್ಟಿನಲ್ಲಿ ಅವರನ್ನು ಕಾಲೇಜಿನ ಸಂಚಾಲಕರಾದ ಶ್ರೀ ಬಿ.ಎಮ್. ಸುಕುಮಾರ್ ಶೆಟ್ಟಿಯವರು, ಆಡಳಿತ ಮಂಡಳಿ ಸದಸ್ಯರು, ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ ಕುಮಾರ ಶೆಟ್ಟಿಯವರು ಹಾಗೂ ಕಾಲೇಜಿನ ಬೋಧಕ- ಬೋಧಕೇತರ ಸಿಬ್ಬಂದಿ ಯವರು ಅಭಿನಂದನೆ ಸಲ್ಲಿಸಿರುತ್ತಾರೆ.
ನಿವೃತ್ತ ಪೊಲೀಸರಿಗೆ ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ತುರ್ತು ಚಿಕಿತ್ಸೆಗೆ ಆಸ್ಪತ್ರೆಗಳ ಗುರ್ತಿಸಲು ಮನವಿ
ಕೋಲಾರ / 14 ಜೂನ್ : ಕೋಲಾರದಲ್ಲಿ ನಿವೃತ್ತ ಪೊಲೀಸರಿಗೆ ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ತುರ್ತು ಚಿಕಿತ್ಸೆಗೆ ಆಸ್ಪತ್ರೆಗಳ ಗುರ್ತಿಸಲು ಮನವಿ ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ತುರ್ತು ಚಿಕಿತ್ಸೆ ಪಡೆಯಲು ಆಸ್ಪತ್ರೆಗಳನ್ನು ಗುರ್ತಿಸಿ ಸೇರ್ಪಡೆಗೊಳಿಸಲು ಕ್ರಮ ತೆಗೆದುಕೊಳ್ಳುವ ನಿವೃತ್ತ ಎ.ಎಸ್.ಐ. ಗೌರಿಪೇಟೆ ಕೆ.ಎನ್. ರವೀಂದ್ರನಾಥ್ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಮಾಡಿದರು.
ಕೋಲಾರ ನಗರದ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಯಲ್ಲಿ ನಿವೃತ್ತ ನೌಕರರಿಗೆ ಏರ್ಪಡಿಸಿದ್ದ ಸಭೆಯಲ್ಲಿ ಮನವಿ ಪತ್ರವನ್ನು ನೀಡಿದರು.
ಪೆÇಲೀಸ್ ಮಹಾ ನಿರೀಕ್ಷಕರಾದ ವೇದಮೂರ್ತಿ.ರೆ. ಐ.ಪಿ.ಎಸ್. ರವರ ಈ-ಮೇಲ್ ಪ್ಯಾಕ್ಸ್ ಸಂದೇಶ ರಾಜ್ಯದ ಪ್ರತಿ ಜಿಲ್ಲೆಯ ಪೆÇಲೀಸ್ ಅಧೀಕ್ಷಕರುಗಳು ಕಚೇರಿಗೆ ಕಳುಹಿಸಲಾಗಿರುತ್ತದೆ. ಇದರಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ / ಸಿಬ್ಬಂದಿಗಳ ಆರೋಗ್ಯದ ಹಿತದೃಷ್ಠಿಯಿಂದ ತುರ್ತು ಸಮಯದಲ್ಲಿ ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ ನಿವೃತ್ತ ಪೊಲೀಸ್ ಆರೋಗ್ಯ ಯೋಜನೆಯಡಿಯಲ್ಲಿ ಆಸ್ಪತ್ರೆಗಳನ್ನು ಸೇರ್ಪಡೆಗೊಳಿಸಲು ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ.
ಪ್ರತಿ ಜಿಲ್ಲಾ ಘಟಕದ ವ್ಯಾಪ್ತಿಯಲ್ಲಿರುವ ಕರ್ನಾಟಕ ವೈದ್ಯಕೀಯ ಹಾಜರಾತಿ ನಿಯಮ 1963 ರಡಿಯಲ್ಲಿ ಮಾನ್ಯತೆ ಹೊಂದಿರುವ ಆಸ್ಪತ್ರೆಯ ವಿವರಗಳನ್ನು ಗುರ್ತಿಸಿ, ಸದರಿ ಆಸ್ಪತ್ರೆಗೆ ಎ.ಸಿ.ಪಿ. / ಡಿ.ವೈ.ಎಸ್.ಪಿ. ಮಟ್ಟದ ಅಧಿಕಾರಿಗಳನ್ನು ಕಳುಹಿಸಿ ನಿವೃತ್ತ ಪೆÇಲೀಸ್ ಆರೋಗ್ಯ ಯೋಜನೆಯ ಷರತ್ತು ಮತ್ತು ನಿಬಂದನೆಗಳನ್ನು ಒಪ್ಪಿ ಚಿಕಿತ್ಸೆ ನೀಡಲು ಇಚ್ಚಿಸಿದ್ದಲ್ಲಿ ಅಂತಹ ಆಸ್ಪತ್ರೆಗಳನ್ನು ಯೋಜನೆ ವ್ಯಾಪ್ತಿಗೆ ಸೇರ್ಪಡೆಗೊಳಿಸಲು ಶಿಪಾರಸ್ಸು ಮಾಡುವಂತೆ ತಿಳಿಸಲಾಗಿದೆ.
ಮಾನ್ಯ ಹೊಂದಿರುವಂತಹ ಆಸ್ಪತ್ರೆಗಳ ಪಟ್ಟಿ : ಇ.ಟಿ.ಸಿ.ಎಂ. ಆಸ್ಪತ್ರೆ, ವಿವೇಕ ಕಣ್ಣಿನ ಆಸ್ಪತ್ರೆ, ಗೌರಿಪೇಟೆ, ವಾಸನ್ ಐ ಕೇರ್ ಸೆಂಟರ್, ಟೇಕಲ್ ರಸ್ತೆ, ವೇದಾ ಆಸ್ಪತ್ರೆ, ವೇಣುಗೋಪಾಲಸ್ವಾಮಿ ದೇವಸ್ಥಾನದ ಹತ್ತಿರ, ಕಠಾರಿಪಾಳ್ಯ, ವಂಶೋದಯ ಆಸ್ಪತ್ರೆ, ಕುವೆಂಪು ಪಾರ್ಕ್ ಹತ್ತಿರ, ಅಂತರಗಂಗೆ ರಸ್ತೆ, ಲೀಲಾವತಿ ಆಸ್ಪತ್ರೆ, ಗೌರಿಪೇಟೆ, ನಾರಾಯಣ ಹೃದಯಾಲಯ, ಟಮಕ, ಕೋಲಾರ. ಅಕ್ಷಯ ನರಸಿರ್ಂಗ್ ಹೋಂ, ಗೌರಿಪೇಟೆ, ಕೋಲಾರ. ಗೌರವ್ ಆರ್ಥೋಪಿಡಿಕ್ ಟ್ರೋಮಾ ಸೆಂಟ್, ಸರ್ವಜ್ಞ ಪಾರ್ಕ್ ಎದುರು, ಕೋಲಾರ, ಮಂಜುನಾಥ ಹೆಲ್ತ್ ಕೇರ್, ಕನಕನಪಾಳ್ಯ, ಕೋಲಾರ. ಶ್ರೇಯ ಆಸ್ಪತ್ರ, ಕೋಟೆ, ನರೇಂದ್ರ ಆರ್ಥೋಪಿಡಿಕ್ ಸೆಂಟರ್, ಅಮ್ಮವಾರಿಪೇಟೆ, ಎಂ.ಬಿ. ರಸ್ತೆ ಕೋಲಾರ ಇವುಗಳಿಗೆÀ ತಮ್ಮ ಸಿಬ್ಬಂದಿಯನ್ನು ಕಳುಹಿಸಿ, ವಿಚಾರಣೆ ನಡೆಸಿ, ಅಭಿಪ್ರಾಯವನ್ನು ಪಡೆದು ನಂತರ ಆಸ್ಪತ್ರಳ ಪಟ್ಟಿಯನ್ನು ಅಂತಿಮಗೊಳಿಸಿಸದರಿ ಆಸ್ಪತ್ರೆಗಳನ್ನು ಆರೋಗ್ಯ ಯೋಜನೆಯ ಅಡಿಯಲ್ಲಿ ಚಿಕಿತ್ಸೆ ಪಡೆಯಲು ಸೇರ್ಪಡೆಗೊಳಿಸಲು ಶಿಪಾರಸ್ಸು ಮಾಡಿ ನಿವೃತ್ತ ಪೆÇಲೀಸ್ ಸಿಬ್ಬಂದಿಗೆ ಅನುಕೂಲ ಮಾಡಿಕೊಡಬೇಕೆಂದು ಗೌರವಪೂರ್ವಕವಾಗಿ ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಎಂ.ನಾರಾಯಣ ಮಾತನಾಡಿ ಸಮಾಜ ಘಾತುಕ ವ್ಯಕ್ತಿಗಳ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವ ಸಲುವಾಗಿ ನಿಮ್ಮ ಅವಶ್ಯಕತೆ ನಮಗೆ ಇರುವುದಾಗಿ ತಿಳಿಸಿ, ನೀವು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಸಮಾಜದ ಹಿತದೃಷ್ಠಿಯಿಂದ ತಾವು ಸಮಾಜಕ್ಕೆ ಕೆಲಸ ಕಾರ್ಯಗಳನ್ನು ಮಾಡಿದಂತಹವರಿಗೆ ನಾನು ಪೊಲೀಸ್ ಧ್ವಜ ದಿನಾಚರಣೆಯಾಗಲೀ ಅಥವಾ ಪೊಲೀಸ್ ಹುತಾತ್ಮ ದಿನಾಚರಣೆಗೆ ತಮ್ಮನ್ನು ಆಹ್ವಾನಿಸಿ ಗೌರವಿಸಿ ಸನ್ಮಾನ ಮಾಡುವುದಾಗಿ ತಿಳಿಸಿದರು.
ಪೊಲೀಸ್ ಕಲ್ಯಾಣ ನಿಧಿಗೆ ನಿವೃತ್ತ ಪೊಲೀಸ್ ನೌಕರರು ಅರ್ಜಿ ಸಲ್ಲಿಸಿದವರಿಗೆ ಅರ್ಜಿ ಸಲ್ಲಿಸಿದ ನಿವೃತ್ತ ಪಿಎಸ್ಐ ತಿಮ್ಮಯ್ಯ, ಪಿಎಸ್ಐ ನಂಜುಂಡಪ್ಪ ರವರುಗಳಿಗೆ ಮತ್ತು ಪೊಲೀಸ್ ಔಷಧ ಅಂಗಡಿಗೆ ಅಭಿವೃದ್ಧಿ ಸಲುವಾಗಿ ಕೋಶಾಧಿಕಾರಿ ದೊಡ್ಡಯ್ಯ ರವರಿಗೆ ಚೆಕ್ನ್ನು ವಿತರಿಸಿದರು. ಪೊಲೀಸ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಸೊಣ್ಣಪ್ಪರವರು ನಿವೃತ್ತರ ಕುಂದು ಕೊರತೆಗಳನ್ನು ಸವಿಸ್ಥಾರವಾಗಿ ತಿಳಿಸುತ್ತಾ, ಜಿಲ್ಲೆಯ ಪೊಲೀಸ್ ಸಮುದಾಯ ಭವನವನ್ನು ನಿವೃತ್ತರಿಗೆ ಕಲ್ಪಿಸಿಕೊಡಲು ಎಸ್.ಪಿ. ಸಾಹೇಬರಿಗೆ ತಿಳಿಸಿರುತ್ತಾರೆ.
ಜಿಲ್ಲಾ ರಕ್ಷಣಾಧಿಕಾರಿ ಎಂ.ನಾರಾಯಣ, ಅಪರ ಜಿಲ್ಲಾ ರಕ್ಷಣಾಧಿಕಾರಿ ಎಚ್.ಸಿ.ಜಗದೀಶ್, ಸಹಾಯಕ ಆಡಳಿತಾಧಿಕಾರಿ ರವಿಕುಮಾರ್, ಪ್ರಥಮ ದರ್ಜೆ ಗುಮಾಸ್ತ ನಾಗರಾಜ್ ರವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ನಿವೃತ್ತ ಅಧಿಕಾರಿಗಳು, ನೌಕರರು ಹಾಜರಿದ್ದರು.
ಅಭಯಹಸ್ತ ಉಡುಪಿಗೆ ಡಾ.ಸತೀಶ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಪ್ರಶಸ್ತಿ
ಜೂನ್ 14 ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಅಂಗವಾಗಿ ಕಸ್ತೂರಬಾ ಆಸ್ಪತ್ರೆ ಮಣಿಪಾಲ ಆಯೋಜಿಸಿದ ರಕ್ತದಾನಿಗಳಿಗೆ ಹಾಗೂ ರಕ್ತದಾನ ಶಿಬಿರದ ಆಯೋಜಕರಿಗೆ ಗೌರವ ಪ್ರಧಾನ ಸಭಾ ಕಾರ್ಯಕ್ರಮದಲ್ಲಿ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ಸತತವಾಗಿ 4 ನೇ ಬಾರಿ ರಕ್ತ ಕೇಂದ್ರ ಮಣಿಪಾಲ ಸಹಕಾರದಲ್ಲಿ ಅತೀ ಹೆಚ್ಚು ರಕ್ತದಾನ ಶಿಬಿರ ಆಯೋಜಿಸಿದಕ್ಕಾಗಿ ಡಾ. ಸತೀಶ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಪ್ರಶಸ್ತಿ ಯನ್ನು ಸಂಸ್ಥೆಯ ಅಧ್ಯಕ್ಷರಾದ ರಕ್ತದ ಆಪತ್ಬಾಂದವ ಸತೀಶ್ ಸಾಲ್ಯಾನ್ ಮಣಿಪಾಲ್ ಅವರಿಗೆ ಕುಮಾರಿ ರಶ್ಮಿ ಎಸ್ ಆರ್ ,ಸಹಾಯಕ ಆಯುಕ್ತರು ಕುಂದಾಪುರ ಇವರು ನೀಡಿ ಗೌರಾವಿಸಿದರು.
ಈ ಸಂದರ್ಭದಲ್ಲಿ ಡಾ. ಪದ್ಮರಾಜ್ ಹೆಗ್ಡೆ, ಡೀನ್ ಕೆಎಂಸಿ ಮಣಿಪಾಲ, ಡಾ. ಅವಿನಾಶ್ ಶೆಟ್ಟಿ, ವೈದ್ಯಕೀಯ ಅಧೀಕ್ಷಕರು ಕೆಎಂಸಿ ಮಣಿಪಾಲ ಡಾ.ಶಮಿ ಶಾಸ್ತ್ರೀ, ನಿರ್ದೆಶಕರು ರಕ್ತ ಕೇಂದ್ರ ಕೆಎಂಸಿ ಮಣಿಪಾಲ, ಡಾ. ಗಣೇಶ್ ಮೋಹನ್ ವೈದ್ಯರು ,ರಕ್ತಕೇಂದ್ರ ಕೆಎಂಸಿ ಮಣಿಪಾಲ ಉಪಸ್ಥಿತ್ತರಿದ್ದರು.
ಕಳೆದ 4 ವರ್ಷಗಳಿಂದ ಕರಾವಳಿ ಕರ್ನಾಟಕದ್ಯಾಂತ ದಾಖಲೆಯ ರಕ್ತದಾನ ಶಿಬಿರ ಆಯೋಜನೆ ಹಾಗೂ ನಿತ್ಯ ತುರ್ತು ರಕ್ತದಾನಿಗಳನ್ನು ವಿವಿಧ ಆಸ್ಪತ್ರೆಗೆ ಪೂರೈಸಿ ಸಾವಿರಾರು ಜೀವಗಳಿಗೆ ಪುನರ್ಜನ್ಮ ನೀಡಿದ ಅಭಯಹಸ್ತ ಉಡುಪಿ, ಕೇವಲ 4 ವರ್ಷದಲ್ಲಿ ದಾಖಲೆಯ 208 ರಕ್ತದಾನ ಶಿಬಿರವನ್ನು ಆಯೋಜಿಸಿ 23,000 ಯೂನಿಟ್ ರಕ್ತವನ್ನು ಸಂಗ್ರಹಿಸಿದ ಕರ್ನಾಟಕದ ಅತ್ಯಂತ ಪ್ರತಿಷ್ಠಿತ ಸಂಸ್ಥೆ.
ಕರ್ನಾಟಕ ರಾಜ್ಯ ಸರಕಾರದಿಂದ 2021 ರಲ್ಲಿ ಅತೀ ಹೆಚ್ಚು ರಕ್ತ ಸಂಗ್ರಹಕ್ಕಾಗಿ ಪ್ರಥಮ ಸ್ಥಾನ ನೀಡಿ ಬೆಂಗಳೂರಿನಲ್ಲಿ ಗೌರವ ಸನ್ಮಾನ, 2023 ರಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಹತ್ತು ಹಲವು ಸಂಸ್ಥೆಯಿಂದ ಗೌರವ ಸನ್ಮಾನ ಪಡೆದಿದೆ.
ಶ್ರೀನಿವಾಸಪುರ ತಾಲ್ಲೂಕಿನ ನಂಬಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸೀಗೆಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಸ್.ಆರ್.ಧರ್ಮೇಶ್ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದರು
ಶ್ರೀನಿವಾಸಪುರ: ವಿದ್ಯಾರ್ಥಿಗಳು ಸ್ವಂತ ಪರಿಶ್ರಮದ ಮೂಲಕ ಸಾಧನೆಯ ಹಾದಿಯಲ್ಲಿ ಸಾಗಬೇಕು. ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಮಾದರಿಯಾಗಿ ಬದುಕಬೇಕು, ವಿದ್ಯಾರ್ಥಿಗಳು ಪರಿಶ್ರಮದ ಮೂಲಕ ಉತ್ತಮ ಸಾಧನೆ ಮಾಡಬೇಕು ಎಂದು ಸೀಗೆಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹಾಗೂ ದಾನಿ ಎಸ್.ಆರ್.ಧರ್ಮೇಶ್ ಹೇಳಿದರು.
ತಾಲ್ಲೂಕಿನ ನಂಬಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸ್ಥಳೀಯ ಹಾಗೂ ವೈ.ಹೊಸಕೋಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ತಾವೇ ನೀಡಿದ ಉತ್ತಮ ಗುಣಮಟ್ಟದ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು, ನಾನು ಮಕ್ಕಳಲ್ಲಿ ದೇವರನ್ನು ಕಾಣುತ್ತೇನೆ. ಹಾಗಾಗಿಯೇ ನನ್ನ ದುಡಿಮೆಯ ಸ್ವಲ್ಪ ಭಾಗವನ್ನು ಪ್ರತಿ ತಿಂಗಳೂ ಉಳಿಸಿ, ಸರ್ಕಾರಿ ಶಾಲೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಬಳಸುತ್ತಿದ್ದೇನೆ ಎಂದು ಹೇಳಿದರು.
ನೆರವಿನ ಅಗತ್ಯವಿರುವ ಜನರಿಗೆ ಸಹಾಯ ಮಾಡುವುದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ. ಅದರಲ್ಲೂ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಸರಿ ಇರುವುದಿಲ್ಲ. ಹಾಗಾಗಿ ಅವರಿಗೆ ಶೈಕ್ಷಣಿಕ ನೆರವಿನ ಅಗತ್ಯವಿದೆ. ಅದರಲ್ಲೂ ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರದ ಯೋಜನೆಗಳ ಜತೆಗೆ, ದಾನಿಗಳು ನೆರವು ನೀಡಲು ಮುಂದೆ ಬರಬೇಕು ಎಂದು ಹೇಳಿದರು.
ನಿವೃತ್ತ ಶಿಕ್ಷಕ ಜಿ.ಶಿವಾನಂದರೆಡ್ಡಿ ಮಾತನಾಡಿ, ಎಸ್.ಆರ್.ಧರ್ಮೇಶ್ ಯಾವುದೇ ಪ್ರಚಾರ ಬಯಸದೆ ಪ್ರತಿ ತಿಂಗಳು ತಮ್ಮ ಸಂಬಳದಲ್ಲಿ ರೂ.10 ಸಾವಿರ ಉಳಿಸಿ ಸರ್ಕಾರಿ ಶಾಲಾ ಮಕ್ಕಳ ಓದಿಗೆ ವಿನಿಯೋಗಿಸುತ್ತಿದ್ದಾರೆ. ಪರಿಸರ ರಕ್ಷಣೆ, ಸಾರ್ವಜನಿಕ ಆರೋಗ್ಯ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಂಥ ಕೊಡುಗೈ ದಾನಿಗೆ ಸಾಮಾಜಿಕ ಮನ್ನಣೆ ದೊರೆಯಬೇಕು. ಅವರ ಮಾದರಿ ಅನುಕರಣೀಯ ಎಂದು ಹೇಳಿದರು.
ಶಿಕ್ಷಕರಾದ ಎನ್.ಆರ್.ರಮೇಶ್, ವೇಣುಗೋಪಾಲ್, ಮುಖ್ಯ ಶಿಕ್ಷಕ ಡಿ.ಎನ್.ರಾಮಚಂದ್ರ ಸಮಾರಂಭದಲ್ಲಿ ಮಾತನಾಡಿದರು.
ಸಿಆರ್ಪಿ ಆರ್.ಮಂಜುನಾಥರೆಡ್ಡಿ, ಶಿಕ್ಷಕರಾದ ಡಿ.ಎ.ರಾಜೇಂದ್ರ ಪ್ರಸಾದ್, ಶಿವಣ್ಣ, ನರಸಿಂಹರೆಡ್ಡಿ, ಶಿಕ್ಷಕಿ ಶಾರದ ಇದ್ದರು.
ಸರ್ಕಾರಿ ಶಾಲೆ ಕಾಲೇಜುಗಳು ಯಾವ ಖಾಸಗಿ ಶಾಲೆಕಾಲೇಜು ಗಳಿಗೂ ಕಡಿಮೆಯಿಲ್ಲ – ಲಕ್ಷ್ಮೀನಾರಾಯಣಮೂರ್ತಿ
ಶ್ರೀನಿವಾಸಪುರ : ಸರ್ಕಾರಿ ಶಾಲೆಕಾಲೇಜುಗಳು ಯಾವ ಖಾಸಗಿ ಶಾಲೆಕಾಲೇಜು ಗಳಿಗೂ ಕಡಿಮೆಯಿಲ್ಲ. ಎಂಬಂತೆ ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಕಾಲೇಜುಗಳಲ್ಲಿ ಲಭ್ಯವಾಗುತ್ತಿದೆ ಎಂಬುದಕ್ಕೆ ಫಲಿತಾಂಶಗಳೇ ಸಾಕ್ಷಿಯಾಗಿವೆ.ವಿಶೇಷವಾಗಿ ಸರ್ಕಾರಿ ಶಾಲೆಕಾಲೇಜುಗಳಲ್ಲಿ ಓದಿದ ವಿದ್ಯಾರ್ಥಿಗಳಲ್ಲಿ ಸಂಸ್ಕಾರ,ಸಂಸ್ಕøತಿಗಳನ್ನು ಕಾಣಬಹುದು ಎಂದು ಬೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಲಕ್ಷ್ಮೀನಾರಾಯಣಮೂರ್ತಿ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗೆ ಶುಕ್ರವಾರ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.
ಉಪನ್ಯಾಸಕಿ ಶಾರದಮ್ಮ, ಬೆಸ್ಕಾಂ ಸಿಬ್ಬಂದಿಗಳಾದ ನಂಜುಂಡೇಶ್ವರ, ಶ್ರೀನಿವಾಸ್, ವೇಣು, ಮಮತಕಾಂತ್ರಾಜ್ ಶೇಠ್ ಇದ್ದರು.
ಕುತಂತ್ರ, ತಂತ್ರಗಾರಿಕೆ ನಡುವೆ ನೈತಿಕತೆಗೆ ಸೋಲಾಗಿದ್ದು, ಆತ್ಮಸ್ಥೈರ್ಯ ಹೆಚ್ಚಿದೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸುವೆ-ಡಾ.ವೈ.ಎ.ನಾರಾಯಣಸ್ವಾಮಿ
ಕೋಲಾರ:- ಕುತಂತ್ರ, ತಂತ್ರಗಾರಿಕೆಗಳ ನಡುವೆ ನೈತಿಕತೆಗೆ ಸೋಲಾಗಿದ್ದು, ಇದರಿಂದ ನಾನು ಕಂಗಾಲಾಗಿಲ್ಲ, ಆತ್ಮವಿಶ್ವಾಸ ವೃದ್ದಿಯಾಗಿದ್ದು, ಶಿಕ್ಷಕರ ಸೇವೆಯನ್ನು ಮುಂದುವರೆಸಿಕೊಂಡು ಹೋಗುತ್ತೇನೆ, ನನಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸುವುದಾಗಿ ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿನ ಸೋಲಿನಿಂದ ನಾನು ಧೃತಿಗೆಟ್ಟಿಲ್ಲ, ಮೂರು ಅವಧಿ ವಿಧಾನಪರಿಷತ್ ಸದಸ್ಯನಾಗಿ ಒಂದು ಅವಧಿ ಶಾಸಕನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ, ಯಾರಿಂದಲೂ ಲಂಚ ಪಡೆದಿಲ್ಲ ಎಂದು ಆತ್ಮವಿಶ್ವಾಸದಿಂದ ಹೇಳುತ್ತೇನೆ, ಶಿಕ್ಷಕರ ಕೆಲಸ ಮಾಡಿದ್ದೇನೆ ಎಂದರು.
ನನ್ನ ಅವಧಿಯಲ್ಲಿ ಶಿಕ್ಷಕರಿಗೆ ನೆರವಾಗಿದ್ದೇನೆ, ಕಷ್ಟದಲ್ಲಿರುವ, ರೋಗಕ್ಕೆ ತುತ್ತಾಗಿರುವವರಿಗೆ ನೆರವು ನೀಡಿದ್ದೇನೆ, ಕೋವಿಡ್ ಸಂದರ್ಭದಲ್ಲಿ ಖಾಸಗಿ ಶಾಲಾ ಶಿಕ್ಷಕರಿಗಾಗಿ ಅಂದು ಸಿಎಂ ಆಗಿದ್ದ ಯಡಿಯೂರಪ್ಪ ಅವರ ಮೇಲೆ ಒತ್ತಡ ವಿಶೇಷ ಕಾನೂನು ಮಾಡಿಸಿ 100 ಕೋಟಿ ಬಿಡುಗಡೆ ಮಾಡಿ ತಲಾ 5 ಸಾವಿರ ವಿತರಿಸಲು ಕ್ರಮವಹಿಸಿದ್ದೇನೆ ಎಂದು ಸ್ಮರಿಸಿದರು.
ಸಾವಿರ ಶಾಲೆಗಳಿಗೆ ವಾಟರ್ಫಿಲ್ಟರ್ ಕೊಡಿಸಿದ್ದೇನೆ, ಶಿಕ್ಷಕರ ಸಮಸ್ಯೆಗಳಿಗೆ ಸದಾ ನೆರವಾಗಿದ್ದೇನೆ ಎಂದು ತಿಳಿಸಿ, ನನ್ನ ಸೋಲಿನಿಂದ ನಿರಾಸೆಯಾಗಿಲ್ಲ, ಇನ್ನೂ ಆತ್ಮವಿಶ್ವಾಸ ಹೆಚ್ಚಿದೆ, ಪಕ್ಷದ ಕಾರ್ಯಕರ್ತನಾಗಿ, ಶಿಕ್ಷಕರ ಸಮಸ್ಯೆಗಳ ನಿವಾರಣೆಗೆ ಹೋರಾಡುವ ಶಕ್ತಿ, ಅಧಿಕಾರಿಗಳ ಮೇಲೆಒತ್ತಡ ಹಾಕಿ ಕೆಲಸ ಮಾಡಿಸಿಕೊಡುವ ಶಕ್ತಿ ನನಗಿದೆ ಎಂದರು.
ಉದಯಕುಮಾರ್ ನನ್ನ ಪರ ಕೆಲಸ ಮಾಡಿದ್ದಾರೆ, ಕೆಲವು ತಮ್ಮ ತೆವಲು ತೀರಿಸಿಕೊಳ್ಳಲು ಅವರ ವಿರುದ್ದ ಅಪಪ್ರಚಾರ ಮಾಡುತ್ತಿದ್ದಾರೆ, ಇದನ್ನು ನಾನು ನಂಬುವುದಿಲ್ಲ ಎಂದ ಅವರು, ನನ್ನ ವಿರುದ್ದ ಕೆಲಸ ಮಾಡಿದವರಿಗೆ ಈ ಸಂದರ್ಭದಲ್ಲಿ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ ಎಂದರು.
ಕೆಲವೇ ದಿನಗಳಲ್ಲಿ ವೈಎಎನ್ ನಮ್ಮೊಂದಿಗೆ ಹೇಗಿದ್ದರೂ, ಹೊಸಬರು ಹೇಗಿರುತ್ತಾರೆ ಎಂಬ ಸತ್ಯದ ಅರಿವು ಆಗುತ್ತದೆ ಎಂದ ಅವರು, ಸದಾ ನನ್ನ ಜತೆಗಿದ್ದು, ರಾಜಕಾರಣದಲ್ಲಿ ಹಿರಿತನ ತಂದುಕೊಟ್ಟಿದ್ದೀರಿ, ಧ್ವನಿ ನೀಡಿದ್ದೀರಿ ನಿಮ್ಮ ಕಷ್ಟಗಳಿಗೆ ಸದಾ ನಿಮ್ಮೊಂದಿಗೆ ಇರುವೆ ಎಂದರು.
ನನ್ನಿಂದ ಸಹಾಯ ಪಡೆದವರೂ ಸ್ಥಳೀಯವಾಗಿ ಅವರವರ ನಡುವಿನ ವಿರೋಧಗಳಿಂದ ದೂರವಾಗಿ ಕೆಲಸ ಮಾಡಿದ್ದಾರೆ, ನನ್ನ ವಿರೋಧಿಗಳಿಗೂ, ಹಿತಶತ್ರುಗಳಿಗೂ ದೇವರು ಒಳ್ಳೆಯದು ಮಾಡಲಿ, ರಾಜಕಾರಣ ನಿಂತ ನೀರಲ್ಲ, ಇನ್ನೂ ಅವಕಾಶಗಳಿವೆ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ವಾಸುದೇವ್, ಕೂಡಾ ಮಾಜಿ ಅಧ್ಯಕ್ಷ ವಿಜಯಕುಮಾರ್, ವಕೀಲ ಮಾಗೇರಿ ನಾರಾಯಣಸ್ವಾಮಿ, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕಿ ಅರುಣಮ್ಮ ಮತ್ತಿತರರಿದ್ದರು.
ಎಮ್.ಸಿ.ಸಿ. ಬ್ಯಾಂಕ್ ಲಿಮಿಟೆಡ್ ಇವರಿಂದ ಮುಸ್ಲಿಂ ಗ್ರಾಹಕರು ಮತ್ತು ಹಿತೈಸಿಗಳ ಜೊತೆ ಬಕ್ರೀದ್ ಹಬ್ಬದ ಆಚರಣೆ
ಬ್ರಹ್ಮಾವರ: ಜೂ. 16: ಎಮ್.ಸಿ.ಸಿ. ಬ್ಯಾಂಕ್ ಲಿಮೆಟೆಡ್ ಇದರ ಬ್ರಹ್ಮಾವರ ಶಾಖೆಯಲ್ಲಿ ಜೂ.15 ರಂದು, ಮುಸ್ಲಿಂ ಗ್ರಾಹಕರು ಮತ್ತು ಹಿತೈಸಿಗಳ ಜೊತೆ ಬಕ್ರೀದ್ ಹಬ್ಬ ಆಚರಣೆ ಮಾಡಲಾಯಿತು.
ಎಮ್.ಸಿ.ಸಿ. ಬ್ಯಾಂಕ್ ಲಿಮಿಟೆಡ್ ಇದರ ಅಧ್ಯಕ್ಷರಾದ ಅನಿಲ್ ಲೋಬೊ ಮಾತನಾಡಿ ನಮ್ಮ ಬ್ಯಾಂಕಿನ 112 ವರ್ಷಗಳ ಇತಿಹಾಸದಲ್ಲಿ ಪ್ರಥಮ ಭಾರಿ ಈ ವರ್ಷ ನಮ್ಮ ಬ್ರಹ್ಮಾವರ ಶಾಖೆಯಲ್ಲಿ, ಬ್ರಹ್ಮಾವರ ವಲಯದ ಮುಸ್ಲಿಂ ಗ್ರಾಹಕರು ಮತ್ತು ಹಿತೈಸಿಗಳೊಡನೆ ಬಕ್ರಿದ್ ಹಬ್ಬವನ್ನು ಆಚರಿಸುತ್ತೀದ್ದೆವೆ. ನಮ್ಮ ಬ್ಯಾಂಕ್ ಎಲ್ಲರಿಗೂ ಒಂದೇ ರೀತಿಯ ಸೇವೆಯನ್ನು ನೀಡುತ್ತದೆ, ಬಕ್ರೀದ್ ಹಬ್ಬದ ಸಂಭ್ರಮಕ್ಕೆ ನಾವು ಮುಸ್ಲಿಂ ಭಾಂದವರಿಗೆ ಶುಭಾಷಯಗಳನ್ನು ಕೋರುತ್ತೇವೆ, ಹಾಗೇಯೆ ಮುಂದಿನ ದಿನಗಳಲ್ಲಿ ದೀಪಾವಳಿಯನ್ನು ಆಚರಿಸುತ್ತೆವೆ’ ಎಂದು ಬ್ಯಾಂಕಿನ ಅಧ್ಯಕ್ಷರಾದ ಅನಿಲ್ ಲೋಬೊ ತಿಳಿಸಿದರು.
ಅಥಿತಿಗಳಾದ ಕೋಟ ಇಬ್ರಾಹಿಮ್ ಸಾಹೇಬ್ ಮಾತನಾಡಿ ‘ಎಮ್.ಸಿ.ಸಿ. ಬ್ಯಾಂಕ್ ಲಿಮಿಟೆಡ್ ಸಹಕಾರಿ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಬ್ಯಾಂಕ್ ಆಗಿದೆ, ಮತ್ತು ಇದು ರಾಜ್ಯಾದಂತ ತನ್ನ ಕಾರ್ಯ ಕ್ಷೇತ್ರವನ್ನು ವ್ಯಾಪಿಸಿದೆ. ಹೀಗಿರುವಾಗ ನಮ್ಮ ಮುಸ್ಲಿಂ ಸಮುದಾಯದೊಂದಿಗೆ ಬಕ್ರೀದ್ ಹಬ್ಬ ಆಚರಿಸಿದ್ದು ನಮಗೆ ಅತ್ಯಂತ ಹರ್ಷ ತಂದಿದೆ’ ಎಂದು ಸಂತೋಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಉಡುಗೊರೆಯನ್ನು ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಸೀನಿಯರ್ ಮೇನೆಜರ್ ಸಂದೀಪ್ ಕ್ವಾಡರ್ಸ್ ಉಪಸ್ಥಿತರಿದ್ದು, ಎಮ್.ಸಿ.ಸಿ. ಬ್ಯಾಂಕ್ ಲಿಮಿಟೆಡ್ ನಿರ್ದೇಶಕ ಎಲ್ರೊಯ್ ಕಿರಣ್ ಕ್ರಾಸ್ಟೊ ಸ್ವಾಗತಿಸಿದರು, ಶಾಖೆಯ ವ್ಯವಸ್ಥಾಪಕ ಒವಿನ್ ರೆಬೆಲ್ಲೊ ಧ್ಯನವಾದಗಳನ್ನು ಅರ್ಪಿಸಿದರು. ಬ್ಯಾಂಕಿನ ಸಿಬಂದಿ ಅನ್ಸಿಲ್ಲಾ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.
ರಂಗ ಅಧ್ಯಯನ ಕೇಂದ್ರ ಸೇಂಟ್ ಅಲೋಶಿಯಸ್ ಅಭಯ ಫ್ರೆಂಡ್ಸ್ ಸಹಯೋಗದೊಂದಿಗೆ ಮಂಗಳೂರಿನಲ್ಲಿ “ದಿ ಫೇಸ್ ಆಫ್ ದಿ ಫೇಸ್ಲೆಸ್” ನ ಮೊದಲ ಪ್ರದರ್ಶನ / Ranga Adhyayana Kendra St Aloysius in association with Abhaya Friends hosts first-ever screening of “The Face of the Faceless” in Mangaluru
ಮಂಗಳೂರು: ಅಭಯ ಫ್ರೆಂಡ್ಸ್ ಸ್ಥಳೀಯ ಗೆಳೆಯರ ಬಳಗವು ಶನಿವಾರ ಸಂಜೆ ಸೇಂಟ್ ಅಲೋಶಿಯಸ್ ವಿಶ್ವವಿದ್ಯಾನಿಲಯದ ಎಲ್ಸಿಆರ್ಐ ಆಡಿಟೋರಿಯಂನಲ್ಲಿ ಅತ್ಯಂತ ಮೆಚ್ಚುಗೆ ಪಡೆದ “ದಿ ಫೇಸ್ ಆಫ್ ದಿ ಫೇಸ್ಲೆಸ್” ಚಲನಚಿತ್ರದ ಉದ್ಘಾಟನಾ ಪ್ರದರ್ಶನವನ್ನು ಆಯೋಜಿಸಿದ್ದರಿಂದ ಮಂಗಳೂರು ಸಿನಿಮೀಯ ಮೈಲಿಗಲ್ಲೊಂದಕ್ಕೆ ಸಾಕ್ಷಿಯಾಯಿತು.
ಶೈಸನ್ ಪಿ. ಜೋಸೆಫ್ ನಿರ್ದೇಶಿಸಿದ್ದಾರೆ ಮತ್ತು ಸಾಂಡ್ರಾ ಡಿಸೋಜಾ ರಾಣಾ ನಿರ್ಮಿಸಿದ್ದಾರೆ, “ದಿ ಫೇಸ್ ಆಫ್ ದಿ ಫೇಸ್ಲೆಸ್” ತನ್ನ ಬಲವಾದ ನಿರೂಪಣೆ ಮತ್ತು ಅಸಾಧಾರಣ ಅಭಿನಯಕ್ಕಾಗಿ ಅಂತರರಾಷ್ಟ್ರೀಯ ಗಮನವನ್ನು ಗಳಿಸಿದೆ. ಇದು ಭಾರತದ ಮಧ್ಯಪ್ರದೇಶದ ಇಂದೋರ್ನಲ್ಲಿ ಮಹಿಳೆಯರ ಸೇವೆ ಮತ್ತು ಸಬಲೀಕರಣಕ್ಕೆ ಅಚಲವಾದ ಬದ್ಧತೆಯನ್ನು ಹೊಂದಿರುವ ಕ್ಯಾಥೊಲಿಕ್ ಸನ್ಯಾಸಿನಿಯರಾದ ಪೂಜ್ಯ ರಾಣಿ ಮಾರಿಯಾ ಅವರ ಸ್ಪೂರ್ತಿದಾಯಕ ಪ್ರಯಾಣವನ್ನು ವಿವರಿಸುವ ಚಲನಚಿತ್ರವಾಗಿದೆ. ಅವಳು ಧಾರ್ಮಿಕ ಗಡಿಗಳನ್ನು ಮೀರಿದಳು ಮತ್ತು ಅಸಂಖ್ಯಾತ ಜೀವನವನ್ನು ಮುಟ್ಟಿದಳು; ತನ್ನ ಆಳವಾದ ಆಧ್ಯಾತ್ಮಿಕತೆ ಮತ್ತು ನಿಸ್ವಾರ್ಥ ಸೇವೆಯ ಮೂಲಕ, ಅವಳು ಸಾರ್ವತ್ರಿಕ ಏಕತೆಯನ್ನು ಉದಾಹರಿಸಿದಳು, ಅವಳು ಎದುರಿಸಿದ ಪ್ರತಿಯೊಬ್ಬರ ಮೇಲೆ ಅಳಿಸಲಾಗದ ಗುರುತು ಹಾಕಿದಳು.
ಈ ಜೀವನಚರಿತ್ರೆ ಕೇವಲ ಸೆರೆಹಿಡಿಯುವ ಸಿನಿಮೀಯ ಅನುಭವವನ್ನು ನೀಡುತ್ತದೆ ಆದರೆ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಪ್ರತಿಬಿಂಬಕ್ಕೆ ಆಳವಾದ ಅವಕಾಶವನ್ನು ಒದಗಿಸುತ್ತದೆ. ಗಮನಾರ್ಹವಾಗಿ, ಇದು 2024 ರಲ್ಲಿ 96 ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಆಸ್ಕರ್-ಅರ್ಹ ಚಲನಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಗಳಿಸಿದೆ. ದಿ ಫೇಸ್ ಆಫ್ ದಿ ಫೇಸ್ಲೆಸ್ ವಿಶ್ವಾದ್ಯಂತ 60 ಕ್ಕೂ ಹೆಚ್ಚು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಅಭಯ ಗೆಳೆಯರ ಗೀತೆ ಮತ್ತು ಭಾಷಣದೊಂದಿಗೆ ಸಂಜೆ ಆರಂಭಗೊಂಡ ಅಭಯ ಗೆಳೆಯರ ಬಳಗದ ಅಧ್ಯಕ್ಷರಾದ ಶ್ರೀ ನಿರ್ಮಲ್ ಡಿಸೋಜ ಅವರು ಸಭೆಯನ್ನು ಸ್ವಾಗತಿಸಿ ಮಂಗಳೂರಿಗೆ ಇಂತಹ ಪ್ರತಿಷ್ಠಿತ ಸಿನಿಮಾ ಅನುಭವವನ್ನು ತಂದುಕೊಟ್ಟಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ಸಂಜೆಯ ಮುಖ್ಯ ಅತಿಥಿಗಳಾದ ಸೇಂಟ್ ಅಲೋಶಿಯಸ್ ನ ರೆಕ್ಟರ್ ರೆ.ಫಾ ಮೆಲ್ವಿನ್ ಪಿಂಟೋ ಎಸ್.ಜೆ ಅವರು ಚಲನಚಿತ್ರದ ಸಂಘಟಕರು, ನಿರ್ಮಾಪಕರು, ನಿರ್ದೇಶಕರನ್ನು ಅಭಿನಂದಿಸಿದರು ಮತ್ತು ಪೂಜ್ಯ ರಾಣಿ ಮರಿಯಾ ಅವರ ಜೀವನವನ್ನು ಎತ್ತಿ ತೋರಿಸಿದರು.
ಗೌರವ ಅತಿಥಿ, ರೆ.ಫಾ. ಸೇಂಟ್ ಜೋಸೆಫ್ ಸೆಮಿನರಿಯ ರೆಕ್ಟರ್ ರೊನಾಲ್ಡ್ ಸೆರಾವೊ ಅವರು ಚಲನಚಿತ್ರವನ್ನು ಪ್ರದರ್ಶಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ರಂಗ ಅಧ್ಯಯನ ಕೇಂದ್ರದ ಶ್ರೀ ಕ್ರಿಸ್ಟೋಫರ್ ಮತ್ತು ಶ್ರೀ ನಿರ್ಮಲ್ ಡಿಸೋಜ ಮತ್ತು ಶ್ರೀ ವಿಶ್ವಾಸ್ ರೆಬಿಂಬಸ್, ಸಾಂಸ್ಕೃತಿಕ ಕಾರ್ಯದರ್ಶಿ ಮತ್ತು ಸಂಪೂರ್ಣ ಅಭಯ ಗೆಳೆಯರ ಬಳಗವು ಚಲನಚಿತ್ರ ಸಂಯೋಜಕ ಶ್ರೀ ಜೇಸು ರಾಜಾ ಅವರೊಂದಿಗೆ ಉಪಸ್ಥಿತರಿದ್ದು ಅವರ ಅಚಲ ಬೆಂಬಲಕ್ಕಾಗಿ ಸಂಘಟಕರು ಮತ್ತು ಪ್ರೇಕ್ಷಕರಿಗೆ ಧನ್ಯವಾದಗಳನ್ನು ವ್ಯಕ್ತಪಡಿಸಿದರು. ಶ್ರೀ ಅಲ್ವಿನ್ ಟೌರೊ ಅಧಿಕೃತ ಕಾರ್ಯಕ್ರಮವನ್ನು ನಿರ್ವಹಿಸಿದರು ಮತ್ತು ಶ್ರೀ ಓಲ್ವಿನ್ ಮಿರಾಂಡಾ ಅವರು ಪ್ರೇಕ್ಷಕರಿಂದ ಪ್ರತಿಕ್ರಿಯೆಯನ್ನು ಪಡೆದರು.
ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರು ತೆರೆಯ ಮೇಲಿನ ಪೂಜ್ಯ ರಾಣಿ ಮಾರಿಯಾ ಅವರ ಭಾವನಾತ್ಮಕ ಪಯಣದಲ್ಲಿ ಸಂಪೂರ್ಣವಾಗಿ ಮುಳುಗಿದ್ದರು. ಹಾಲ್ನಲ್ಲಿನ ಮುಖಗಳು ಪರಾನುಭೂತಿ, ದುಃಖ ಮತ್ತು ಆಳವಾದ ಚಿಂತನೆಯ ಮಿಶ್ರಣವನ್ನು ಪ್ರತಿಬಿಂಬಿಸುತ್ತವೆ ಏಕೆಂದರೆ ಕ್ಷಮೆಯ ಕುರಿತಾದ ಚಿತ್ರದ ಶಕ್ತಿಯುತ ಸಂದೇಶವು ಹಂಚಿಕೊಂಡ ಸಹಾನುಭೂತಿ ಮತ್ತು ಸಂಪರ್ಕದ ಪ್ರಜ್ಞೆಯನ್ನು ಸೃಷ್ಟಿಸುವ ಉದ್ದಕ್ಕೂ ಬಲವಾದ ಭಾವನೆಗಳನ್ನು ಉಂಟುಮಾಡುತ್ತದೆ. ಚಲನಚಿತ್ರವು ಮುಕ್ತಾಯಗೊಳ್ಳುತ್ತಿದ್ದಂತೆ, ಚಪ್ಪಾಳೆಗಳು ಕೋಣೆಯನ್ನು ತುಂಬಿದವು, ಜೊತೆಗೆ ಚಿತ್ರದ ವಿಷಯಗಳು ಮತ್ತು ಪ್ರಭಾವಶಾಲಿ ಕ್ಷಣಗಳ ಬಗ್ಗೆ ಹೃತ್ಪೂರ್ವಕ ಚರ್ಚೆಗಳು ನಡೆದವು. ರೆ.ಫಾ.ಜೆ.ಬಿ.ಸಲ್ಡಾನ್ಹಾ ಮಂಗಳೂರು ಧರ್ಮಪ್ರಾಂತ್ಯದ ಪಿಆರ್ಒ ಶ್ರೀ ಲೀನಾ ವಾಝ್, ಶ್ರೀ ಜಾನ್ ಪೆರ್ಮನೂರು ಚಿತ್ರಕ್ಕೆ ರಚನಾತ್ಮಕ ಪ್ರತಿಕ್ರಿಯೆ ನೀಡಿದರು. ಎಲ್ಲಾ ವಿಮರ್ಶೆಗಳು ಪೂಜ್ಯ ರಾಣಿ ಮಾರಿಯಾ ಅವರ ಜೀವನದಲ್ಲಿ ಸುವಾರ್ತೆಯನ್ನು ಜೀವಿಸಿದವು ಮತ್ತು ಅವರ ಪಾದದ ಗುರುತುಗಳನ್ನು ಅನುಸರಿಸಲು ನಮಗೆಲ್ಲರಿಗೂ ಇದು ಸಾಕ್ಷಿಯಾಗಿದೆ
Ranga Adhyayana Kendra St Aloysius in association with Abhaya Friends hosts first-ever screening of “The Face of the Faceless” in Mangluru
Mangalore witnessed a cinematic milestone as Abhaya Friends a local friends group, hosted the inaugural screening of the highly acclaimed movie “The Face of the Faceless” at the LCRI Auditorium, St. Aloysius deemed to be University on Saturday evening.
Directed by Shaison P. Joseph and Produced by Sandra Dsouza Rana, “The Face of the Faceless” has garnered international attention for its compelling narrative and exceptional performances. This is a feature film that narrates the inspiring journey of Blessed Rani Maria, a Catholic nun whose unwavering commitment to serving and empowering women in Indore, Madhya Pradesh, India. She transcended religious boundaries and touched countless lives; through her profound spirituality and selfless service, she exemplified universal oneness, leaving an indelible mark on everyone she encountered.
This biopic not only offers a captivating cinematic experience but also provides a profound opportunity for emotional and spiritual reflection. Notably, it has earned a place on the list of Oscar-eligible films at the 96th Academy Awards in 2024. The Face of the Faceless has recieved over 60 prestigious awards worldwide.
The evening commenced with Abhaya Friends Anthem and address from Abhaya Friends’ President, Mr. Nirmal Dsouza who welcomed the gathering and expressed his gratitude in bringing such a prestigious cinematic experience to Mangalore. The chief guest of the evening Rev Fr Melwin Pinto SJ, Rector of St Aloysius congratulated the organisers, producers, directors of the movie and highlighted the life of Blessed Rani Maria.
Guest of honour, Rev. Fr. Ronald Serrao, Rector of St. Joseph Seminary expressed his gratitude for screening the movie. Mr. Christopher from Ranga Adhyayana Kendra and Mr. Nirmal Dsouza and Mr. Vishwas Rebimbus, Cultural Secretary and entire Abhaya Friends group were present with the film coordinator Mr. Jesu Raja who expressed his thanks to the orgainsers and audiences for their unwavering support. Mr. Alwyn Tauro compered the official program and Mr Olwin Miranda took the feedback from the audience.
The packed audience was completely immersed in the emotional journey of Blessed Rani Maria on the screen. Faces in the hall reflected a mix of empathy, sadness and profound contemplation as the film’s powerful message on Forgiveness evoked strong emotions throughout creating a sense of shared empathy and connection. As the movie concluded, applause filled the room, accompanied by heartfelt discussions about the film’s themes and impactful moments. Rev Fr J. B Saldanha PRO Mangalore Diocese, Sr Leena Vaz, Mr. John Permanur gave a constructive feedback for the movie. All the reviews were Blessed Rani Maria lived Gospel in her life and it’s a testament for all of us to follow her foot prints.