ಕೋಲಾರ:- ಹಿಂದಿ ಕಲಿಕೆಯಿಂದ ರಾಜ್ಯದ ವಿದ್ಯಾರ್ಥಿಗಳನ್ನು ವಂಚಿಸುವುದರಿಂದ ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಅನ್ಯಾಯವಾಗಲಿದೆ ಈ ಹಿನ್ನಲೆಯಲ್ಲಿ ತೃತೀಯ ಭಾಷೆ ಜತೆಜತೆಗೆ ಪ್ರೌಢಶಾಲೆಯ ಎಲ್ಲಾ ಮಕ್ಕಳಿಗೂ ಎನ್ಎಸ್ಕ್ಯೂಎಫ್ ಅಡಿ ವೃತ್ತಿಕೌಶಲ ಯೋಜನೆ ಅನುಷ್ಟಾನಗೊಳಿಸುವಂತೆ ಕರ್ನಾಟಕ ರಾಜ್ಯ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘ ಶಾಲಾ ಶಿಕ್ಷಣ ಉಪನಿರ್ದೇಶಕರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಜಿಲ್ಲೆಯ ವಿವಿಧ ಶಿಕ್ಷಕ ಸಂಘಟನೆಗಳ ನೇತೃತ್ವದಲ್ಲಿ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾ ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷ ವಿ.ವಿ.ರಾಮಕೃಷ್ಣಪ್ಪ, ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆಯ್ದ ಸರ್ಕಾರಿ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 9ನೇ ತರಗತಿಯ ವಿದ್ಯಾರ್ಥಿಗಳಿಗೆ ತೃತೀಯ ಭಾಷೆಯ ಬದಲಾಗಿ ವೃತ್ತಿ ಶಿಕ್ಷಣ ಕೌಶಲ ಯೋಜನೆಯನ್ನು ಅನುಷ್ಠಾನಗೊಳ್ಳುತ್ತಿರುವುದರಿಂದ ತೃತೀಯ ಭಾಷೆಯ ಕಲಿಕೆಗೆ ಹಿನ್ನಡೆಯಾಗುತ್ತದೆ ಎಂದು ತಿಳಿಸಿದರು.
ಇದರಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದ ಹುದ್ದೆಗಳ ಅವಕಾಶ ಮರೀಚಿಕೆಯಾಗಲಿದ್ದು, ಈ ಎನ್ಎಸ್ಕ್ಯೂಎಫ್ ವೃತ್ತಿ ಶಿಕ್ಷಣ ಕೌಶಲ ಯೋಜನೆಯನ್ನು ಕೇವಲ ತೃತೀಯ ಭಾಷೆಯ ಬದಲಾಗಿ ಏಕೆ ಅನುಷ್ಠಾನಗೊಳಿಸಬೇಕು ಎಂದು ಪ್ರಶ್ನಿಸಿದ ಅವರು, ವೃತ್ತಿಕೌಶಲ ವಿಷಯವನ್ನು ಹಿಂದಿ ಜತೆಗೆ ಎಲ್ಲಾ ಮಕ್ಕಳಿಗೂ ಕಲಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇಡೀ ದೇಶದಲ್ಲಿ ಹಾಗೂ ಕರ್ನಾಟಕ ರಾಜ್ಯದಲ್ಲಿ ತ್ರಿಭಾಷಾ ಸೂತ್ರದಡಿಯಲ್ಲಿ ಮೂರು ಭಾಷೆ ಕಲಿಯಲು ಅವಕಾಶವಿರುವುದರಿಂದ ಮಕ್ಕಳು ಕನ್ನಡ,ಇಂಗ್ಲೀಷ್ ಜತೆಗೆ ಹಿಂದಿಯನ್ನು ಕಲಿತು ಪ್ರೌಢಿಮೆ ಬೆಳೆಸಿಕೊಳ್ಳುತ್ತಾರೆ ಇದರಿಂದಾಗಿ ರೈಲ್ವೆ, ಬ್ಯಾಂಕಿಂಗ್, ಅಂಚೆ ಇಲಾಖೆ ಮತ್ತಿತರ ಕೇಂದ್ರಸರ್ಕಾರದ ಉದ್ಯೋಗಗಳ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಆದರೆ ರಾಜ್ಯ ಸರ್ಕಾರ ತೃತೀಯ ಭಾಷೆ ಹಿಂದಿ ಬದಲಿಗೆ ವೃತ್ತಿಶಿಕ್ಷಣ ಕೌಶಲ ಯೋಜನೆ ಸರ್ಕಾರಿ ಶಾಲೆಗಳಲ್ಲಿ ಅನುಷ್ಠಾನಗೊಂಡರೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ತೃತೀಯ ಭಾಷೆಯ ಕಲಿಕೆಯಿಂದ ವಂಚಿತರಾಗುತ್ತಾರೆ, ಇದು ಮಕ್ಕಳಿಗೆ ಮಾಡಿದ ಅನ್ಯಾಯವಾಗಲಿದೆ ಎಂದು ತಿಳಿಸಿದರು.
ನೆರೆಯ ಆಂಧ್ರ ಪ್ರದೇಶ ಸೇರಿದಂತೆ ಎಲ್ಲಾ ರಾಜ್ಯಗಳಲ್ಲೂ ತ್ರಿಭಾಷ ಸೂತ್ರದಡಿಯಲ್ಲಿ ಮೂರು ಭಾಷೆಗಳನ್ನು ಕಲಿಯಲು ಅವಕಾಶವಿದೆ. ನಮ್ಮ ರಾಜ್ಯದಲ್ಲಿ ಮಾತ್ರ ಈ ತಾರತಮ್ಯ ಏಕೆ ಎಂದು ಪ್ರಶ್ನಿಸಿದರು.
ಹಿಂದಿ ಭಾಷೆ ಕಲಿಕೆಯಿಂದ ಮಕ್ಕಳನ್ನು ದೂರ ಮಾಡಿ ಕೇವಲ ವೃತ್ತಿ ಶಿಕ್ಷಣ ಕೌಶಲ ತರಬೇತಿ ಅನುಷ್ಠಾನಗೊಳಿಸಿದರೆ ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳು ಮಾತ್ರವಲ್ಲ, ಭಾರತೀಯ ಸೇನೆ ನೇಮಕಾತಿ, ಯುಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಉತ್ತೀರ್ಣರಾಗುವಲ್ಲಿಯೂ ಹಿನ್ನಡೆಯಲಿದೆ ಎಂದರು.
ಸರ್ಕಾರಕ್ಕೆ ನಮ್ಮ ಮಕ್ಕಳಿಗೆ ವೃತ್ತಿ ಶಿಕ್ಷಣ ಕೌಶಲ ನೀಡುವ ಸದುದ್ದೇಶವಿದ್ದರೆ ಎಲ್ಲಾ ಮಕ್ಕಳಿಗೂ ಈ ಅವಕಾಶ ಕಲ್ಪಿಸಲಿ, ತ್ರಿಭಾಷಾ ಸೂತ್ರದನ್ವಯ ಹಿಂದಿ ಕಲಿಕೆಗೂ ಅವಕಾಶ ನೀಡಿ ಅದರ ಜತೆಗೆ 8,9ಮತ್ತು 10ನೇ ತರಗತಿಯ ಎಲ್ಲಾ ಮಕ್ಕಳಿಗೂ ವೃತ್ತಿಶಿಕ್ಷಣ ಕೌಶಲ ಕಲಿಸುವ ಕಾರ್ಯ ಮಾಡಲಿ ಎಂದು ಮನವಿ ಮಾಡಿದರು.
ಕೆಲವು ಮಕ್ಕಳಿಗೆ ತೃತೀಯ ಭಾಷೆ ಹಿಂದಿ ಮತ್ತೆ ಕೆಲವು ಮಕ್ಕಳಿಗೆ ಎನ್ಎಸ್ಕ್ಯೂಎಫ್ ವೃತ್ತಿ ಶಿಕ್ಷಣ ಕೌಶಲ ತರಬೇತಿ ನೀಡುವುದರಿಂದ ಮಕ್ಕಳಲ್ಲಿ ತಾರತಮ್ಯವುಂಟು ಮಾಡಿ ವಂಚಿಸಿದಂತಾಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಜಿಲ್ಲೆಯ ಗ್ರಾಮೀಣ ಬಡ ವಿದ್ಯಾರ್ಥಿಗಳ ಪರವಾಗಿ ನಮ್ಮ ಕಳಕಳಿಯ ಮನವಿ ಏನೆಂದರೆ ಸರ್ಕಾರ ಈ ಹಿಂದೆ ತ್ರಿಭಾಷಾ ಸೂತ್ರ ಜಾರಿಗೊಳಿಸಿರುವಂತೆ ಮುಂದುವರೆಸಿ, ಪ್ರೌಢಶಾಲೆಗಳ 8, 9, 10ನೇ ತರಗತಿಯ ವಿದ್ಯಾರ್ಥಿಗಳಿಗೆ ಯಾವುದೇ ತಾರತಮ್ಯವಿಲ್ಲದಂತೆ ಎಲ್ಲಾ ವಿದ್ಯಾರ್ಥಿಗಳಿಗೂ ತೃತೀಯ ಭಾಷೆಯನ್ನು ಕಡ್ಡಾಯವಾಗಿ ಬೋಧಿಸುವಂತಾಗಬೇಕು. ಈ ವಿಷಯಕ್ಕೆ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ತೃತೀಯ ಭಾಷೆಯ ಅನಿವಾರ್ಯತೆಯನ್ನು ವಿವರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಡಲು ತಮ್ಮಲ್ಲಿ ಕೋರುತ್ತೇವೆ ಎಂದು ತಿಳಿಸಿದರು.
ಮನವಿ ಸ್ವೀಕರಿಸಿದ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ, ಈ ಮನವಿಯನ್ನು ಸರ್ಕಾರಕ್ಕೆ ಕಳುಹಿಸುವುದಾಗಿಯೂ ಸಾಧಕಬಾಧಕಗಳ ಕುರಿತು ವರದಿ ನೀಡುವುದಾಗಿಯೂ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ವಿ.ವಿ.ರಾಮಕೃಷ್ಣಪ್ಪ, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಚೌಡಪ್ಪ.ಎಸ್, ಕೋಲಾರ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಶಿವಕುಮಾರ್, ಕೋಲಾರ ಜಿಲ್ಲಾ ಎಸ್ಸಿ, ಎಸ್ಟಿ ನೌಕರರ ಸಂಘದ ಅಧ್ಯಕ್ಷ ರಾಮಾಂಜನೇಯ, ಖಜಾಂಚಿ ವೇಣುಗೋಪಾಲ,ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ, ಶಿಕ್ಷಕರಾದ ಮಂಜುನಾಥ್, ವೆಂಕಟರಮಣಪ್ಪ, ಲಲಿತಕಲಾ, ಪ್ರಭಾ, ಚಂದ್ರಶೇಖರ್, ಶ್ರೀನಾಥ್, ಶ್ರೀನಾಥ್ ಬಂಗಾರಪೇಟಿ, ರಘುಕುಮಾರ್ ಹಾಗೂ ಹಿಂದಿ ಶಿಕ್ಷಕರು ಹಾಜರಿದ್ದರು.
Month: June 2024
ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿ ಸಂಸತ್ತು ಮತ್ತು ವಿವಿಧ ಶೈಕ್ಷಣಿಕ ಸಂಘಗಳ ಉದ್ಘಾಟನೆ
ದಿನಾಂಕ : 18/06/2024 ರಂದು ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ ಇಲ್ಲಿ ಶಾಲಾ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನೆ ಸಮಾರಂಭವು ಜರುಗಿತು. ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಗಿ, ವಿದ್ಯಾರ್ಥಿನಿಯರು ನೃತ್ಯ ಪ್ರದರ್ಶನದ ಮೂಲಕ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು.
ಶಾಲಾ ಸಂಚಾಲಕರು ಹಾಗು ಸ್ಥಳೀಯ ಚರ್ಚಿನ ಪ್ರಧಾನ ಧರ್ಮಗುರುಗಳೂ ಆದ ಅತೀ ವಂದನೀಯ ಪೌಲ್ ರೇಗೋರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಿ. ರಾಘವೇಂದ್ರಚರಣ್ ನಾವಡ ವಕೀಲರು ಕುಂದಾಪುರ ಹಾಗು ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಜ್ ಶಾಂತಿ ಎ.ಸಿ.ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು
ಮುಖೋಪಾಧ್ಯಾಯಿನಿ, ಮುಖ್ಯ ಅತಿಥಿಗಳು ಹಾಗು ಹೊಸದಾಗಿ ಆಯ್ಕೆಆದ ವಿದ್ಯಾರ್ಥಿ ನಾಯಕಿ ಹಾಗು ಉಪನಾಯಕರೊಡಗೂಡಿ ಶಾಲಾ ಸಂಚಾಲಕರು ಹಾಗು ಇಂದಿನ ಈ ಸಭೆಯ ಅಧ್ಯಕ್ಷರಾದ ಅತೀ ವಂದನೀಯಗುರು ಪೌಲ್ರೇಗೋರವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಮತ್ತು ಶಾಲಾ ಸಂಚಾಲಕರು ವಿದ್ಯಾರ್ಥಿ ಸಂಸತ್ತಿನಎಲ್ಲಾ ಪದಾಧಿಕಾರಿಗಳಿಗೆ ಪದನಾಮದ ಪದಕವನ್ನು ತೊಡಿಸಿ ಶಾಲಾ ಸಂಸತ್ತು ಬಹಳ ಸುಂದರವಾಗಿ ಉದ್ಘಾಟನೆಗೊಂಡಿತು. ಶಾಲೆಯ ಶಿಸ್ತು ಸುವ್ಯವಸ್ಥೆಗೆ ವಿದ್ಯಾರ್ಥಿ ಸಂಸತ್ತು ಅತಿ ಅವಶ್ಯಕ. ಒಬ್ಬ ನಿಜವಾದನಾಯಕನೆಂದರೆ ದಾರಿಯನ್ನು ತಿಳಿದಿರುವವನು ಹಾಗು ಇತರರಿಗೆ ಮಾರ್ಗದರ್ಶಕನಾಗಿ ಮುನ್ನಡೆಸುವವನು ಆಗಿರುತ್ತಾನೆಎಂಬುವುದಾಗಿವಿದ್ಯಾರ್ಥಿ ನಾಯಕಿ ಹಾಗು ಉಪನಾಯಕನಿಗೆ ಕಿವಿ ಮಾತನ್ನು ಹೇಳಿ ಶಾಲಾ ಸಂಚಾಲಕರು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿರುವ ರೋಟೆರಿಯನ್ ಬಿ. ರಾಘವೇಂದ್ರಚರಣ್ ನಾವಡರವರು ಶಾಲಾ ಸಂಸತ್ತಿನ ಪದಾಧಿಕಾರಿಗಳಿಗೆ ಪದನಾಮದ ಪಟ್ಟಿಯನ್ನು ಹಾಕಿ ಶುಭ ಹಾರೈಸಿ, ಬಹಳ ಸುಂದರವಾಗಿಕಾರ್ಯಕ್ರಮವನ್ನುಆಯೋಜಿಸಲಾಗಿದೆ, ಇಂದಿನ ಮಕ್ಕಳು ಮುಂದಿನ ದೇಶದ ಪ್ರಜೆಗಳಾಗಿರುವುದರಿಂದ ವಿದ್ಯಾರ್ಥಿ ದೆಸೆಯಲ್ಲೆ ಸಂಸತ್ತಿನ ಜ್ಞಾನಇರಬೇಕು ಎಂಬುದಾಗಿ ಹೇಳಿ ಶಾಲಾ ಸಂಸತ್ತಿಗೆ ಶುಭ ಹರೈಸಿದರು.
ವಿದ್ಯಾರ್ಥಿಗಳಾದ ಚಿರಾಗ್ 7ನೇ ತರಗತಿ ಹಾಗು ರಿಶೆಲ್ ರೋಡ್ರಿಗಸ್ರವರು ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕಿ ರೆನಿಷಾ ಡಿ’ಅಲ್ಮೇಡಾರವರು ಸ್ವಾಗತಿಸಿದರು. ವಿದ್ಯಾರ್ಥಿ ನಾಯಕಿ ಅಂಜಲಿ 10ನೇ ತರಗತಿ ಇವರು ವಂದಿಸಿದರು ಶಿಕ್ಷಕಿಯರಾದ ಶ್ರೀಮತಿ ಮಮತಾ ಮತ್ತು ಶ್ರೀಮತಿ ನಿಖಿತಾ ಶೆಟ್ಟಿಯವರು ಮಕ್ಕಳಿಗೆ ಮಾರ್ಗದರ್ಶನ ನೀಡಿಕಾರ್ಯಕ್ರಮ ಆಯೋಜಿಸಿದ್ದು. ಶಾಲಾ ವಿದ್ಯಾರ್ಥಿಗಳು ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.
ವಿಶ್ವ ರಕ್ತಧಾನಿಗಳ ದಿನ: ಮೂಡ್ಲುಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ಕಾಲೇಜಿನಲ್ಲಿ ರಕ್ತದಾನ ಶಿಬಿರ
ವಿಶ್ವ ರಕ್ತಧಾನಿಗಳ ದಿನ: ಮೂಡ್ಲುಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇವರ ಸಹಯೋಗದೊಂದಿಗೆ ಕಾಲೇಜಿನ ಸಭಾಂಗಣದಲ್ಲಿ ವಿಶ್ವ ರಕ್ತಧಾನಿಗಳ ದಿನದ ಅಂಗವಾಗಿ ರಕ್ತದಾನ ಶಿಬಿರ ಜರಗಿತು.
ಮುಖ್ಯ ಅತಿಥಿಯವರಾದ ಶ್ರೀಯುತ ವೈ .ಸೀತಾರಾಮ್ ಶೆಟ್ಟಿ (ಕಾರ್ಯದರ್ಶಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ) ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಒದ್ದಾಟಿಸಿ ,ವಿದ್ಯಾರ್ಥಿಗಳಿಗೆ ರಕ್ತದಾನದ ಮಹತ್ವವನ್ನು ತಿಳಿಸುತ್ತಾ ರಕ್ತ ಸಂಗ್ರಹಣೆ , ಪರಿಷ್ಕರಣೆಯ ಬಗ್ಗೆ ತಿಳಿಸಿ
ಮುಖ್ಯ ಅತಿಥಿಯವರಾದ ಶ್ರೀಯುತ ವೈ .ಸೀತಾರಾಮ್ ಶೆಟ್ಟಿ (ಕಾರ್ಯದರ್ಶಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ) ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಒದ್ದಾಟಿಸಿ,ವಿದ್ಯಾರ್ಥಿಗಳಿಗೆ ರಕ್ತದಾನದ ಮಹತ್ವವನ್ನು ತಿಳಿಸುತ್ತಾ ರಕ್ತ ಸಂಗ್ರಹಣ, ಪರಿಷ್ಕರಣೆಯ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಶ್ರೀಯುತ ಶಿವರಾಮ ಶೆಟ್ಟಿ (ಕೋಶಾಧಿಕಾರಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ),ಪ್ರಾಂಶುಪಾಲೆಯವರಾದ ಜನಿಫರ್ ಫ್ರೀಡ ಮೆನೇಜಸ್, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಶರೀಲ್ ಸಾರಾ ಕಾರ್ಯಕ್ರಮವನ್ನು ನಿರೂಪಿಸಿದರು, ನಿತ್ಯ ಪಿ ಸ್ವಾಗತಿಸಿ, ಭಾಗ್ಯಶ್ರೀ ಕಾರ್ಯಕ್ರಮವನ್ನು ವಂದಿಸಿದರು.
ರಕ್ತದಾನಿಗಳ ಬಳಗ ಮರವಂತೆ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ, ಭಾ. ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಮತ್ತು ಮರವಂತೆಯ ಎಲ್ಲಾ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ರಕ್ತದಾನ ಶಿಬಿರ
ರಕ್ತದಾನಿಗಳ ಬಳಗ ಮರವಂತೆ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ ) ಉಡುಪಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಮತ್ತು ಮರವಂತೆಯ ಎಲ್ಲಾ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ದಿನಾಂಕ 16/06/2024 ಆದಿತ್ಯವಾರದಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮರವಂತೆ ಇಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ಇದರ ಅಧ್ಯಕ್ಷರಾದ ರಕ್ತದ ಆಪತ್ಬಾಂದವ ಸತೀಶ್ ಸಾಲ್ಯಾನ್ ಮಣಿಪಾಲ್ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಡಾ:ಗಣೇಶ್ ಭಟ್ ವೈದ್ಯಾಧೀಕಾರಿ ಪ್ರಾಥಮಿಕ ಅರೋಗ್ಯ ಕೇಂದ್ರ ಮರವಂತೆ ಇವರು ವಹಿಸಿದ್ದರು.
ಎಸ್ ಜನಾರ್ಧನ್ ,ನಿವೃತ್ತ ಅಧ್ಯಾಪಕರು ಮರವಂತೆ. ಜಯಕರು ಶೆಟ್ಟಿ ,ಚೇರ್ಮನ್ ಭಾರತೀಯ ರೆಡ್ ಕ್ರಾಸ ಸಂಸ್ಥೆ ಕುಂದಾಪುರ,ಶಿವರಾಮ ಶೆಟ್ಟಿ, ಕೋಶಾಧಿಕಾರಿ ಭಾರತೀಯ ರೆಡ್ ಕ್ರಾಸ ಸಂಸ್ಥೆ ಕುಂದಾಪುರ.ಪ್ರವೀಣ್ ಖಾರ್ವಿ,ಅಧ್ಯಕ್ಷರು,ಮೀನುಗಾರರ ಸಹಕಾರಿ ಸಂಘ (ರಿ )ಮರವಂತೆ ಹಾಗೂ ಇತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಳೆದ 17 ವರ್ಷಗಳಿಂದ ರಕ್ತದಾನ ಕ್ಷೇತ್ರಸಲ್ಲಿ ಸಲ್ಲಿಸಿದ ಸೇವೆಗಾಗಿ ರಕ್ತದ ಆಪತ್ಬಾಂದವ ಸತೀಶ್ ಸಾಲ್ಯಾನ್ ಮಣಿಪಾಲ್ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕುಂದಾಪುರ ಜಾಮಿಯಾ ಮಸೀದಿಯಲ್ಲಿ ಈದುಲ್ ಅಝಆ ( ಬಕ್ರೀದ್) ಹಬ್ಬವನ್ನು ಆಚರಿಸಲಾಯಿತು
ಜೂನ್ 19 ರಂದು ಗಿಳಿಯಾರು ಕುಶಲ ಹೆಗ್ಡೆ ದತ್ತಿನಿಧಿಯಿಂದ ಕುಂದಾಪುರದ ಕಲಾಮಂದಿರದಲ್ಲಿ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ
ಕುಂದಾಪುರ: ಗಿಳಿಯಾರು ಕುಶಲಹೆಗ್ಡೆ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ (ರಿ) ಕುಂದಾಪುರ ವತಿಯಿಂದ ಜೂನ್ 19 ರಂದು ಬುಧವಾರ ಮಧ್ಯಾಹ್ನ 3 ಗಂಟೆಗೆ ಕುಂದಾಪುರ ಸ.ಪ.ಪೂ.ಕಾಲೇಜಿನ ರೋಟರಿಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ, ಸಾಧಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಸಮಾರಂಭ ನಡೆಯಲಿದೆ. ಹಿರಿಯ ಸಾಹಿತಿ, ಸಂಶೋಧಕ ಪ್ರೊ.ಎ.ವಿ. ನಾವಡ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ಮಾಡಲಿದ್ದಾರೆ.
ಖ್ಯಾತ ಲೆಕ್ಕ ಪರಿಶೋಧಕರು ಹಾಗೂ ಕಾನೂನು ಸಲಹೆಗಾರರಾದ ಸಿ.ಎ.ನಾಗರಾಜ ಆಚಾರ್ ಬೆಂಗಳೂರು, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಗಿಳಿಯಾರು ಕುಶಲ ಹೆಗ್ಡೆ ಸ್ಮಾರಕ ದತ್ತಿನಿಧಿಯ ಅಧ್ಯಕ್ಷ ಬಿ.ಪ್ರಕಾಶ್ಚಂದ್ರ ಶೆಟ್ಟಿ ವಹಿಸಲಿದ್ದಾರೆ.
ಕುಂದಾಪುರ, ಬೈಂದೂರು ತಾಲ್ಲೂಕಿನ ಸುಮಾರು 400 ವಿದ್ಯಾರ್ಥಿಗಳಿಗೆ ಸಹಾಯಧನ ನೀಡಲಾಗುತ್ತಿದ್ದು, ಎಸ್.ಎಸ್. ಎಲ್.ಸಿ. ಹಾಗೂ ಪಿಯುಸಿ ಯಲ್ಲಿ ರಾಜ್ಯಮಟ್ಟದಲ್ಲಿ ರ್ಯಾಂಕ್ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಗುತ್ತದೆ. ಈ ಸಮಾರಂಭದಲ್ಲಿ ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಪಾಲ್ಗೊಳ್ಳಬೇಕೆಂದು ಆಹ್ವಾನಿಸಲಾಗಿದೆ.
ಚಿತ್ರದುರ್ಗದ ಹಿರಿಯೂರಿನ ಅವರ್ ಲೇಡಿ ಆಫ್ ಅಸಂಪ್ಷನ್ ಚರ್ಚ್ನ ಪ್ಯಾರಿಷ್ ಪ್ರೀಸ್ಟ್ ಆಗಿ ಫಾದರ್ ರೊನಾಲ್ಡ್ ಡಿ’ಕುನ್ಹಾ ಅಧಿಕಾರ ವಹಿಸಿಕೊಂಡರು /
ಚಿತ್ರದುರ್ಗ, ಜೂನ್ 17, 2024: ರೆ.ಫಾ. ರೊನಾಲ್ಡ್ ಡಿ’ಕುನ್ಹಾ ಅವರು ಜೂನ್ 16 ರಂದು ಸಂಜೆ 5:30 ಕ್ಕೆ ಶಿವಮೊಗ್ಗದ ಧರ್ಮಪ್ರಾಂತ್ಯದ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಅವರ್ ಲೇಡಿ ಆಫ್ ಅಸಂಪ್ಷನ್ ಚರ್ಚ್ನ ಪ್ಯಾರಿಷ್ ಅರ್ಚಕರಾಗಿ ಅಧಿಕಾರ ವಹಿಸಿಕೊಂಡರು.
ನಿಷ್ಠಾವಂತರು ಫ್ರಾ ರೊನಾಲ್ಡ್ ಡಿ’ಕುನ್ಹಾ ಅವರನ್ನು ಗೇಟ್ನಲ್ಲಿ ಬರಮಾಡಿಕೊಂಡರು. ಹೊರಹೋಗುವ ಧರ್ಮಗುರು ಫ್ರಾಂಕ್ಲಿನ್ ಡಿಸೋಜ ಅವರನ್ನು ಹಾರ ಹಾಕಿ ಸ್ವಾಗತಿಸಿದರು.
ಬಿಷಪ್ ಅವರ ಪ್ರತಿನಿಧಿ ರೆ.ಫಾ.ರಿಚರ್ಡ್ ಅನಿಲ್ ಡಿಸೋಜ, ಹೋಲಿ ಫ್ಯಾಮಿಲಿ ಡೀನ್ನ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಹೊರಹೋಗುವ ಪ್ಯಾರಿಷ್ ಪ್ರೀಸ್ಟ್ ರೆ.ಫಾ.ಫ್ರಾಂಕ್ಲಿನ್ ಡಿಸೋಜ ಅವರು ಧರ್ಮಗುರು ಫಾ.ರೊನಾಲ್ಡ್ ಡಿ’ಕುನ್ಹಾ ಅವರಿಗೆ ಹಸ್ತಾಂತರ ಸಮಾರಂಭದ ವಿಧಿವಿಧಾನದ ಪ್ರಕಾರ ಸ್ಟೋಲ್ ಮತ್ತು ಬೈಬಲ್ ಅನ್ನು ನೀಡಿದರು. ನಂತರ ಅವರು ಜಾನ್ 10:11-18 ರಿಂದ ದೇವರ ವಾಕ್ಯವನ್ನು ಓದಿದರು. ಅವರು ನಂಬಿಕೆಯ ವೃತ್ತಿಯೊಂದಿಗೆ ಪ್ರಮಾಣವಚನ ಸ್ವೀಕರಿಸಿದರು. ನಂತರ ಗುಡಾರದ ಕೀಲಿಕೈ ಅವರಿಗೆ ಹಸ್ತಾಂತರಿಸಲಾಯಿತು. ಫ್ರಾಂಕ್ಲಿನ್ ಡಿಸೋಜ ಅವರು ಲೆಕ್ಕಪತ್ರ ಹಾಗೂ ಪಾಲಿಕೆ ಸದಸ್ಯರ ದಾಖಲೆ ಪುಸ್ತಕವನ್ನು ಹಸ್ತಾಂತರಿಸಿದರು.
ಹಸ್ತಾಂತರ ಸಮಾರಂಭದಲ್ಲಿ ಫಾದರ್ ಯುಜಿನ್ ಲೋಬೋ ಎಸ್ಜೆ, ಫಾದರ್ ರೋಶನ್ ಪಿಂಟೋ, ವೆನಿಲ್ ಡಿಸಿಲ್ವಾ, ಫಾದರ್ ಕ್ಲಾರೆನ್ಸ್ ಡಯಾಸ್, ಫಾದರ್ ಜಾರ್ಜ್ ಕೆ ಎ, ಫಾದರ್ ಆಲ್ವಿನ್ ಸ್ಟಾನಿಸ್ಲಾಸ್ ಮತ್ತು ಫಾದರ್ ಪೌಲ್ ಕ್ರಾಸ್ತಾ ಉಪಸ್ಥಿತರಿದ್ದರು.
ಸಂಜೆ 6:30ಕ್ಕೆ ಫಾದರ್ ರೊನಾಲ್ಡ್ ಡಿ’ಕುನ್ಹಾ ಅವರು ಪವಿತ್ರ ಬಾಹುಬಲಿ ಆಚರಿಸಿದರು. ಫಾದರ್ ಆಲ್ವಿನ್ ಸ್ಟಾನಿಸ್ಲಾಸ್ ಪ್ರವಚನ ಬೋಧಿಸಿದರು. ಈ ದಿನವನ್ನು ಫಾದರ್ಸ್ ಡೇ ಎಂದು ಆಚರಿಸಿದ ಕಾರಣ ಮಾಸ್ ಫ್ರಾಂಕ್ಲಿನ್ ಡಿಸೋಜ ಅವರು ತಂದೆಯರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಹೋಲಿ ಯೂಕರಿಸ್ಟ್ ಔಟ್ ಗೋಯಿಂಗ್ ಕೊನೆಯಲ್ಲಿ ಪ್ಯಾರಿಷ್ ಪಾದ್ರಿ ಫ್ರಾಂಕ್ಲಿನ್ ಡಿಸೋಜಾ ಅವರು ಫಾದರ್ ರೊನಾಲ್ಡ್ ಡಿ’ಕುನ್ಹಾ ಮತ್ತು ಅವರ್ ಲೇಡಿ ಆಫ್ ಹೆಲ್ತ್ ಮೈನರ್ ಬೆಸಿಲಿಕಾದ ರೆಕ್ಟರ್ ಫಾದರ್ ಜಾರ್ಜ್ ಕೆ ಎ ಅವರನ್ನು ಪರಿಚಯಿಸಿದರು.
ಮತ್ತು ದಾವಣಗೆರೆಯ ಲೂರ್ಡ್ಸ್ ಬಾಲಕರ ಶಾಲೆಯ ವ್ಯವಸ್ಥಾಪಕ ಮತ್ತು ಕರೆಸ್ಪಾಂಡೆಂಟ್ ಫಾದರ್ ಆಲ್ವಿನ್ ಸ್ಟಾನಿಸ್ಲಾಸ್ ಅವರನ್ನು ಪ್ಯಾರಿಷಿಯನ್ನರ ಪರವಾಗಿ ಸನ್ಮಾನಿಸಿದರು.
ಫಾದರ್ ಜಾರ್ಜ್ ಕೆ ಎ ಅವರು ಫಾದರ್ ರೊನಾಲ್ಡ್ ಡಿ’ಕುನ್ಹಾ ಅವರಿಗೆ ಅಭಿನಂದನಾ ಮಾತುಗಳನ್ನಾಡಿದರು.
ಫ್ರಾಂಕ್ಲಿನ್ ಡಿಸೋಜ ಅವರು ಧರ್ಮಪ್ರಾಂತ್ಯದ ಯುವಜನ, ವೃತ್ತಿ ಮತ್ತು ರಚನಾ ಆಯೋಗದ ಅಧಿಕಾರ ವಹಿಸಿಕೊಂಡಾಗ, ಪ್ಯಾರಿಷ್ ಪಾದ್ರಿ ಫಾ.ರೊನಾಲ್ಡ್ ಡಿ’ಕುನ್ಹಾ ಅವರನ್ನು ಅಭಿನಂದಿಸಿ ಶಾಲು ಹೊದಿಸಿ, ಹಾರ ಹಾಕಿ ಗೌರವಿಸಿದರು.
Fr Ronald D’Cunha takes charge as Parish Priest of Our Lady of Assumption Church, Hiriyur, Chitradurga.
Chitradurga, June 17, 2024: Rev. Fr Ronald D’Cunha takes charge as Parish Priest of Our Lady of Assumption Church, Hiriyur, Chitradurga District, Diocese of Shimoga on June 16th 5:30pm.
Faithful received Fr Ronald D’Cunha at the gate. Out going Parish Priest Fr Franklin D’Souza welcomed him with garland.
Oath taking ceremony took place in the presence of Bishop’s representative Rev. Fr Richard Anil D’Souza, Dean of Holy Family Deanery. Out going Parish Priest Rev. Fr Franklin D’Souza presented stole and Bible as per the ritual of handing over ceremony to Rev. Fr Ronald D’Cunha. Then he read the Word of God from John 10:11-18. He took Oath together with the profession of faith. Then tabernacle key was handed over to him. Fr Franklin D’Souza also handed over books of accounts as well as the record book of Parish members.
Fr Eugene Lobo SJ, Fr Roshan Pinto, Fr Venil D’Silva, Fr Clarence Dias, Fr George K A, Fr Alvin Stanislaus and Fr Paul Crasta were present for the handing over ceremony.
At 6:30pm Fr Ronald D’Cunha celebrated Holy Eucharist. Fr Alvin Stanislaus preached the homily. End of the Mass Fr Franklin D’Souza led special prayers for the Fathers because this day was celebrated as Fathers day.
At the end of the Holy Eucharist Out going Parish Priest Fr Franklin D’Souza introduced Fr Ronald D’Cunha and Fr George K A, Rector of Our Lady of Health Minor Basilica
and Fr Alvin Stanislaus, Manager and Corresspondent of Lourdes Boys School, Davanagere felicitated him on behalf of the Parishioners.
Fr George K A spoke felicitatory words for Fr Ronald D’Cunha.
As Fr Franklin D’Souza took charge of Diocesan Youth, Vocation and Formation Commission, Parish Priest Fr Ronald D’Cunha Congratulated and honoured him with a Shawl and garland.
ಫಾ. ಫ್ರಾಂಕ್ಲಿನ್ ಡಿಸೋಜ ಅವರು ಶಿವಮೊಗ್ಗ ಧರ್ಮಪ್ರಾಂತ್ಯದ ಯುವ ನಿರ್ದೇಶಕರಾಗಿ ಮತ್ತು ಯಾಜಕ ವೃತ್ತಿ ಪ್ರಚಾರ ಮತ್ತು ರಚನೆಯ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು / Fr. Franklin D’Souza takes charge as the Youth Director & Director for Vocation promotion & Formation of Diocese of Shimoga
ಫಾ. ಫ್ರಾಂಕ್ಲಿನ್ ಡಿಸೋಜ ಅವರು ಶಿವಮೊಗ್ಗ ಧರ್ಮಪ್ರಾಂತ್ಯದ ಯುವ ನಿರ್ದೇಶಕರಾಗಿ ಮತ್ತು ಯಾಜಕ ವೃತ್ತಿ ಪ್ರಚಾರ ಮತ್ತು ರಚನೆಯ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು
ಶಿವಮೊಗ್ಗ, ಜೂನ್ 16, 2024: ಫ್ರಾಂಕ್ಲಿನ್ ಡಿಸೋಜಾ ಅವರು ಶಿವಮೊಗ್ಗ ಧರ್ಮಪ್ರಾಂತ್ಯದ ಯುವ ನಿರ್ದೇಶಕ ಮತ್ತು ವೃತ್ತಿ ಪ್ರಚಾರ ಮತ್ತು ರಚನೆಯ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು. ಶಿವಮೊಗ್ಗದ ಧರ್ಮಪ್ರಾಂತ್ಯದ ಬಿಷಪ್ ಆದ ಗೌರವಾನ್ವಿತ ಅತಿ ವಂದನೀಯ ಡಾ. ಫ್ರಾನ್ಸಿಸ್ ಸೆರಾವೊ ಎಸ್.ಜೆ., ಫ್ರಾಂಕ್ಲಿನ್ ಡಿಸೋಜ ಅವರನ್ನು 2024ರ ಏಪ್ರಿಲ್ 19ರಂದು ಶಿವಮೊಗ್ಗ ಡಯಾಸಿಸ್ನ ವೃತ್ತಿ ಪ್ರಚಾರ ಮತ್ತು ರಚನೆಗಾಗಿ ಯುವ ನಿರ್ದೇಶಕ ಮತ್ತು ನಿರ್ದೇಶಕರನ್ನಾಗಿ ನೇಮಿಸಿದರು.
ಅವರು ಜೂನ್ 15 ರಂದು ಮಧ್ಯಾಹ್ನ 3 ಗಂಟೆಗೆ ಯುವಮಿತ್ರದಲ್ಲಿ ಶಿವಮೊಗ್ಗ ಧರ್ಮಪ್ರಾಂತ್ಯದ ಬಿಷಪ್ ಅತಿ ವಂ. ಡಾ. ಫ್ರಾನ್ಸಿಸ್ ಸೆರಾವೊ ಎಸ್.ಜೆ ಅವರ ಉಪಸ್ಥಿತಿಯಲ್ಲಿ ನಿರ್ಗಮಿತ ನಿರ್ದೇಶಕ ಫಾದರ್ ಪಿಯೂಸ್ ಡಿಸೋಜಾ ಅವರಿಂದ ಅಧಿಕಾರ ಸ್ವೀಕರಿಸಿದರು. ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್ ಕ್ಯಾಂಪಸ್ನ ‘ಯುವಮಿತ್ರ’ ಧರ್ಮಪ್ರಾಂತ್ಯದ ಯುವಜನ ಕಚೇರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶಿವಮೊಗ್ಗ ಧರ್ಮಪ್ರಾಂತ್ಯದ ನಿರ್ಗಮಿತ ಯುವ ಸಂಚಾಲಕ ಫಾ. ಪಿಯೂಸ್ ಡಿಸೋಜಾ, ಹಾಗೂ ನೂತನ ನಿರ್ದೇಶಕರಾದ ಫಾ. ಫ್ರಾಂಕ್ಲಿನ್ ಫಿಲಿಪ್ ಡಿಸೋಜಾ. ICYM ಮತ್ತು YCS YSM ಸಮಿತಿಯ ಸದಸ್ಯರು ಆಯೋಜಿಸಿದ ಈವೆಂಟ್ ಹೃತ್ಪೂರ್ವಕ ಭಾವನೆಗಳು, ಕೃತಜ್ಞತೆ ಮತ್ತು ಹೊಸ ಆರಂಭಗಳ ಪರಿಪೂರ್ಣ ಮಿಶ್ರಣವಾಗಿತ್ತು. ಪವಿತ್ರಾತ್ಮನ ಸ್ವಾಗತದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.
ಗೌರವಾನ್ವಿತ ಹಾಜರಿದ್ದವರಲ್ಲಿ ಶಿವಮೊಗ್ಗದ ಬಿಷಪ್ ಮೋಸ್ಟ್ ರೆವ್. ಬಿಷಪ್ ಫ್ರಾನ್ಸಿಸ್ ಸೆರಾವೊ ಎಸ್.ಜೆ. ರೆ.ಫಾ. ಫ್ರಾಂಕ್ಲಿನ್ ಫಿಲಿಪ್ ಡಿಸೋಜಾ, ರೆ.ಫಾ. ಪಿಯೂಸ್ ಡಿಸೋಜಾ, ರೆ. ಫಾ. ಸ್ಟಾನಿಶ್ ಎಸ್. ಡಿಸೋಜಾ, ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್ನ ಪ್ಯಾರಿಷ್ ಪ್ರೀಸ್ಟ್ ಮತ್ತು ಕಾರ್ಮೆಲ್ ಡೀನರಿಯ ಡೀನ್; ಅಲ್ಫೋನ್ಸ್ ನೆಲ್ಸನ್ ಡಿಸೋಜಾ, ಲೊಯೊಲಾ ಇಂಗ್ಲಿಷ್ ಹೈಸ್ಕೂಲ್ ಮತ್ತು ಸೇಕ್ರೆಡ್ ಹಾರ್ಟ್ ನರ್ಸರಿ ಮತ್ತು ಇಂಗ್ಲಿಷ್ ಪ್ರಾಥಮಿಕ ಶಾಲೆಯ ಪ್ರಾಂಶುಪಾಲರಾದ ರೆ. ರೆವ. ಫ್ರಾನ್ಸಿಸ್ ನೊರೊನ್ಹಾ, ಸೇಕ್ರೆಡ್ ಹಾರ್ಟ್ ಸಂಸ್ಥೆಗಳ ಕ್ಯಾಂಪಸ್ ನಿರ್ದೇಶಕ, ಶಿವಮೊಗ್ಗ;
Sr. ಟ್ರೀಜಾ ಲಿಡಿಯಾ BS, ICYM ಮತ್ತು YCS/YSM ನ ಲೇಡಿ ಆನಿಮೇಟರ್; Sr. ಜಯಂತಿ, ಕಾರ್ಮೆಲ್ ಡೀನರಿ ಲೇಡಿ ಅನಿಮೇಟರ್; ICYM ಧರ್ಮಪ್ರಾಂತ್ಯದ ಅಧ್ಯಕ್ಷರಾದ ಶ್ರೀಮತಿ ಪ್ರಿಯಾ ಮರಿಯಾ ಡಿಸೋಜಾ, YCS/YSM ಧರ್ಮಾಧ್ಯಕ್ಷರಾದ ಶ್ರೀ ಜೋಶುವಾ ಮತ್ತು ಇತರ ಗಣ್ಯರು.
YCS/YSM ಕಾರ್ಯದರ್ಶಿ ಶ್ರೀಮತಿ ರೆನಿಶಾ ಗಣ್ಯರನ್ನು ಸ್ವಾಗತಿಸಿದರು.
ಫಾ. ಪಿಯೂಸ್ ಡಿಸೋಜಾ ಅವರು ಅಧಿಕೃತವಾಗಿ ತಮ್ಮ ಜವಾಬ್ದಾರಿಯನ್ನು ಫಾ. ಫ್ರಾಂಕ್ಲಿನ್ ಫಿಲಿಪ್ ಡಿಸೋಜಾ ಅವರಿಗೆ ಯುವಮಿತ್ರ ಕಚೇರಿಯ ಕೀ ಮತ್ತು ಇತರ ದಾಖಲೆಗಳನ್ನು ನೀಡುವ ಮೂಲಕ. ಅತಿ ವಂದನೀಯ ಬಿಷಪ್ ಫ್ರಾನ್ಸಿಸ್ ಸೆರಾವೊ ಎಸ್.ಜೆ ಮತ್ತು ಇತರ ಗಣ್ಯರು ಫಾ. ಪಿಯೂಸ್ ಡಿಸೋಜಾ ಅವರಿಗೆ ಮೆಚ್ಚುಗೆಯ ಟೋಕನ್ಗಳನ್ನು ನೀಡಿದರು. ಹೆಮ್ಮೆಯ ಮತ್ತು ಗೌರವದ ಈ ಕ್ಷಣವು Fr ಅವರ ಗಮನಾರ್ಹ ಪರಿಣಾಮವನ್ನು ಎತ್ತಿ ತೋರಿಸುತ್ತದೆ. ಪಾಯಸ್ ಅವರ ಕೊಡುಗೆಗಳು.
ಫಾ. ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಪಿಯುಸ್ ಡಿಸೋಜಾ ಅವರು ತಮ್ಮ ಕೃತಜ್ಞತೆಗಳನ್ನು ವ್ಯಕ್ತಪಡಿಸಿ ತಮ್ಮ ಪ್ರಯಾಣದ ಬಗ್ಗೆ ಪ್ರತಿಬಿಂಬಿಸಿದರು. ಅವರ ಪದಗಳು ಭಾವನಾತ್ಮಕ ಮತ್ತು ಹೃತ್ಪೂರ್ವಕವಾಗಿದ್ದು, ಅವರ ಅಧಿಕಾರಾವಧಿಯಲ್ಲಿ ಮಾಡಿದ ಬೆಳವಣಿಗೆ ಮತ್ತು ಸಾಧನೆಗಳನ್ನು ಗುರುತಿಸಿವೆ.
ಈವೆಂಟ್ ಡಿಯೋಸಿಸನ್ ಆಲ್ಬಂನ ಬಿಡುಗಡೆಯನ್ನು ಸಹ ಒಳಗೊಂಡಿತ್ತು, Fr ರಿಂದ ಸ್ಮರಣೀಯ ಕ್ಷಣಗಳನ್ನು ಸೆರೆಹಿಡಿಯಿತು. ಪಿಯುಸ್ ಅವರ ಆರು ವರ್ಷಗಳ ಸಮರ್ಪಿತ ಸೇವೆ, ಹಾಗೆಯೇ ಡಯೋಸಿಸನ್ ಐಸಿವೈಎಂ ಬೈಲಾಸ್ ಪುಸ್ತಕ, ‘ಸನ್ಮಾರ್ಗ’.
ನಂತರ ಅತಿ ವಂದನೀಯ ಬಿಷಪ್ ಫ್ರಾನ್ಸಿಸ್ ಸೆರಾವೋ ಎಸ್.ಜೆ. ಪಿಯುಸ್ ಅವರ ಸಮರ್ಪಿತ ಸೇವೆ ಮತ್ತು ಯುವಕರ ಮೇಲೆ ಅವರ ಸಕಾರಾತ್ಮಕ ಪ್ರಭಾವ. ಶ್ರೇಷ್ಠತೆಗಾಗಿ ಶ್ರಮಿಸುವುದನ್ನು ಮುಂದುವರಿಸಲು ಮತ್ತು ಹೊಸ ನಾಯಕತ್ವವನ್ನು ಉತ್ಸಾಹದಿಂದ ಸ್ವೀಕರಿಸಲು ಅವರು ಯುವಕರನ್ನು ಪ್ರೋತ್ಸಾಹಿಸಿದರು.
ಫಾ. ಫ್ರಾಂಕ್ಲಿನ್ ಫಿಲಿಪ್ ಡಿಸೋಜಾ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಯುವಕರೊಂದಿಗೆ ಕೆಲಸ ಮಾಡುವ ಉತ್ಸಾಹ ಮತ್ತು ಬದ್ಧತೆಯನ್ನು ವ್ಯಕ್ತಪಡಿಸಿದರು. ಅವರ ಭಾಷಣವು ಪ್ರೇಕ್ಷಕರೊಂದಿಗೆ ಪ್ರತಿಧ್ವನಿಸಿತು, ಶಕ್ತಿಯುತ ಮತ್ತು ಪ್ರೇರಿತ ನಾಯಕತ್ವದ ಭವಿಷ್ಯವನ್ನು ಭರವಸೆ ನೀಡಿತು.
ಶಿವಮೊಗ್ಗ ಧರ್ಮಪ್ರಾಂತ್ಯದ ಐಸಿವೈಎಂ ಅಧ್ಯಕ್ಷೆ ಪ್ರಿಯಾ ಮರಿಯಾ ಡಿಸೋಜಾ ಮತ್ತು ಸೀನಿಯರ್ ಟ್ರೀಜಾ ಲಿಡಿಯಾ ಬಿಎಸ್ ಅವರು ತಮ್ಮ ಅನುಭವಗಳನ್ನು ಫಾ. ಪಿಯೂಸ್ ಡಿಸೋಜಾ. ಅವರ ಸಾಕ್ಷ್ಯಗಳು ಸ್ಪರ್ಶ ಮತ್ತು ಹೃತ್ಪೂರ್ವಕವಾಗಿದ್ದು, ಆಳವಾದ ಪ್ರಭಾವವನ್ನು ಪ್ರದರ್ಶಿಸುತ್ತವೆ. ಪಿಯುಸ್ ತಮ್ಮ ಜೀವನದಲ್ಲಿ ಹೊಂದಿದ್ದರು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾದ ಶ್ರೀ ಪ್ರದೀಪ್ ಡಿ’ಸಿಲ್ವ, ಮಾಜಿ ICYM ಅಧ್ಯಕ್ಷರು ಹಾಗೂ ಪ್ರಸ್ತುತ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗದ ಕಾರ್ಯಾಧ್ಯಕ್ಷರು, ಶಿವಮೊಗ್ಗ ಇವರುಗಳನ್ನು ಸನ್ಮಾನಿಸಲಾಯಿತು. ಅವರ ನಾಯಕತ್ವ ಮತ್ತು ಕೊಡುಗೆಗಳನ್ನು ಗುರುತಿಸಲಾಯಿತು ಮತ್ತು ಅವರ ನಿರಂತರ ಸೇವೆ ಮತ್ತು ಸಮರ್ಪಣೆಗಾಗಿ ಗಣ್ಯರು ಅವರನ್ನು ಗೌರವಿಸಿದರು.
ಐಸಿವೈಎಂ ಧರ್ಮಪ್ರಾಂತ್ಯದ ಅಧ್ಯಕ್ಷೆ ಪ್ರಿಯಾ ಮರಿಯಾ ಡಿಸೋಜಾ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಈವೆಂಟ್ ಅನ್ನು ಯಶಸ್ವಿ ಮತ್ತು ಸ್ಮರಣೀಯವಾಗಿಸಿದ ಎಲ್ಲಾ ಭಾಗವಹಿಸುವವರು, ಭಾಗವಹಿಸುವವರು ಮತ್ತು ಸಂಘಟಕರಿಗೆ ಅವರು ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ಶ್ರೀ ಜೋಶುವಾ ಕಾರ್ಯಕ್ರಮ ನಿರೂಪಿಸಿದರು.
Fr. Franklin D’Souza takes charge as the Youth Director & Director for Vocation promotion & Formation of Diocese of Shimoga
Shivamogga, June 16, 2024: Fr Franklin D’Souza takes charge as the Youth Director & Director for Vocation promotion & Formation of Diocese of Shimoga. His Excellency Most Rev. Dr Francis Serrao SJ, Bishop of Diocese of Shimoga appointed Fr Franklin D’Souza as the Youth Director & Director for Vocation promotion & Formation of Diocese of Shimoga on April 19th, 2024.
He took charge at the Yuvamitra June 15th at 3pm from outgoing Director Fr Pius D’Souza in the presence of Most Rev. Dr Francis Serrao SJ, Bishop of Diocese of Shimoga. A programme was organised at ‘Yuvamitra’ Diocesan Youth office, Sacred Heart Cathedral Campus, Shivamogga.
A farewell ceremony was organized by the ‘YUVAMITRA’ for the outgoing Youth Director of the Diocese of Shimoga, Fr. Pius D’Souza, and to welcome the new Director, Fr. Franklin Philip D’Souza. The event, organized by the ICYM and YCS YSM committee members, was a perfect blend of heartfelt emotions, gratitude, and new beginnings. The program began with welcoming the Holy Spirit.
Distinguished attendees included Most Rev. Bishop Francis Serrao SJ, Bishop of Shimoga; Rev. Fr. Franklin Philip D’Souza, Rev. Fr. Pius D’Souza,Rev. Fr. Stanish S. D’Souza, Parish Priest of Sacred Heart Cathedral and Dean of Carmel Deanery; Rev. Fr Alphonse Nelson D’Souza, Principal of Loyola English High School & Sacred Heart Nursery and English Primary School; Rev. Fr Francis Noronha, Campus Director of Sacred Heart institutions,Shivamogga;
Sr. Treeza Lydia BS, Lady Animator of ICYM and YCS/YSM; Sr. Jayanti, Carmel Deanery Lady Animator; Ms. Priya Maria D’Souza, ICYM Diocesan President, Mr. Joshua, YCS/YSM Diocesan President and other dignitaries.
Ms. Renisha, YCS/YSM Secretary welcomed the dignitaries.
Fr. Pius D’Souza officially handed over his responsibilities to Fr. Franklin Philip D’Souza by giving him the Yuvamitra office key and other records. Most Rev. Bishop Francis Serrao SJ and other dignitaries felicitated Fr. Pius D’Souza, presenting him with tokens of appreciation. This moment of pride and respect highlighted the significant impact of Fr. Pius’s contributions.
Fr. Pius D’Souza then addressed the gathering, expressing his gratitude and reflecting on his journey. His words were emotional and heartfelt, acknowledging the growth and achievements made during his tenure.
The event also featured the release of the Diocesan album, capturing memorable moments from Fr. Pius’s six years of dedicated service, as well as the Diocesan ICYM bylaws book, ‘Sanmarga’.
Most Rev. Bishop Francis Serrao SJ then spoke about Fr. Pius’s dedicated service and his positive impact on the youth. He encouraged the youth to continue striving for excellence and to embrace the new leadership with enthusiasm.
Fr. Franklin Philip D’Souza addressed the gathering, expressing his enthusiasm and commitment to working with the youth. His speech resonated with the audience, promising a future of energetic and inspired leadership.
Ms. Priya Maria D’Souza, ICYM President of the Diocese of Shimoga, and Sr. Treeza Lydia BS, shared their experiences with Fr. Pius D’Souza. Their testimonies were touching and heartfelt, showcasing the profound influence Fr. Pius had on their lives.
The program also honored special guest Mr. Pradeep D’Silva, the former ICYM President and current Working President of the Congress Committee Labour Department, Shivamogga. His leadership and contributions were recognized, and dignitaries honored him for his continued service and dedication.
The program concluded with a vote of thanks delivered by Ms. Priya Maria D’Souza, the ICYM Diocesan President. She expressed gratitude to all attendees, participants, and organizers for making the event successful and memorable. Mr. Joshua compered the program.
ಟೊಮೇಟೊ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದ್ದು ಟಮೋಟೋ ಬೆಳೆಯನ್ನು ಬೆಳೆದ ರೈತನಿಗೆ ಜಾಕ್ಪಾಟ್
ಶ್ರೀನಿವಾಸಪುರ : ಮಾವು ಬೆಳೆಯನ್ನು ನಂಬಿಕೊಂಡಿರುವ ರೈತರಿಗೆ ಮಾವು ಬೆಳೆಯು ಬಹುತೇಕ ಕೈಕೊಟ್ಟಿತ್ತು. ಆದರೆ ಈ ಭಾರಿ ಟೊಮೇಟೊ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದ್ದು ಟಮೋಟೋ ಬೆಳೆಯನ್ನು ಬೆಳೆದ ರೈತನಿಗೆ ಜಾಕ್ಪಾಟ್ಬೆಳೆಯನ್ನು ಬೆಳೆದ ರೈತನಿಗೆ ಒಂದು ರೀತಿಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದ್ದು, ರೈತನಿಗೆ ಜಾಕ್ಪಾಟ್ ಹೊಡೆಯುತ್ತಿದೆ.
ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಶನಿವಾರ ಟೊಮೇಟೊ ವಹಿವಾಟು ಜೋರಾಗಿ ನಡೆಯಿತು. 15 ಕೆಜಿ ತೂಗುವ ಟೊಮೇಟೊ ಬಾಕ್ಸೊಂದು ರೂ. 850 ದವರೆಗೆ ಮಾರಾಟವಾಯಿತು.
ತಾಲೂಕಿನ ಬುಹುತೇಕ ಟೊಮೇಟೊ ಬೆಳೆಗಳಿಗೆ ನುಶಿ ರೋಗವು ಹರಡಿದ್ದು ಇದರಿಂದ ರೈತರು ಟೊಮೇಟೊ ಬೆಳೆಗೆ ಬೆಲೆ ಇದೆ ಆದರೆ , ಫಸಲು ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. “ಹಲ್ಲು ಇದ್ದವರಿಗೆ ಕಡಲೆ ಇಲ್ಲ. ಕಡಲೆ ಇದ್ದವರಿಗೆ ಹಲ್ಲು ಇಲ್ಲ” ಎಂಬ ಗಾದೆ ಎಂಬಂತೆ ಇಂದಿನ ಟೊಮೇಟೊ ಬೆಳೆಯ ಪರಿಸ್ಥಿತಿ. ಇರುವುದರಲ್ಲಿ ಮಾರುಕಟ್ಟೆಗೆ ಟೊಮೇಟೊ ತಂದಿದ್ದ ರೈತರು ಹೆಚ್ಚಿನ ಬೆಲೆಗೆ ಮಾರಾಟವಾದ್ದರಿಂದ ಹರ್ಷಚಿತ್ತರಾಗಿ ನಿಟ್ಟುಸಿರು ಬಿಡುವ ಪರಿಸ್ಥಿತಿ ಉಂಟಾಗಿದೆ.