ಶ್ರೀನಿವಾಸಪುರ : ಪಟ್ಟಣದ ಎಸ್ಎಫ್ಎಸ್ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು, ಕಾರ್ಯಕ್ರಮವನ್ನು ಉದ್ಘಾಟಿಸಿದ ಫಾದರ್ ಸ್ಯಾಂಟಿ ಕುರೈನ್, ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಈ ಸಂದರ್ಭದಲ್ಲಿ ಫಾದರ್ ನೆಲ್ಸನ್, ಶಾಲಾ ಪ್ರಾಂಶುಲರು, ಶಿಕ್ಷಕರು, ವಿದ್ಯಾರ್ಥಿಗಳು, ಮತ್ತೀತರರು ಉಪಸ್ಥಿತರಿದ್ದರು
Month: June 2024
ಕುಂದಾಪುರ : ಎಚ್. ಎಮ್. ಎಮ್ ಶಾಲೆಯಲ್ಲಿ ಟೀಚರ್ ಟ್ರೈನಿಂಗ್ ವಿಭಾಗ ಆರಂಭ
ಕುಂದಾಪುರ (22.06.2024) : ಕುಂದಾಪುರ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಟೀಚರ್ ಎಜ್ಯುಕೇಶನ್ ವಿಭಾಗವನ್ನು ಆರಂಭಿಸಲಾಗಿದೆ. ಒಂದು ವರ್ಷದ ಅವಧಿಯ ಪ್ರೈಮರಿ ಟೀಚರ್ ಟ್ರೈನಿಂಗ್, ಮೊಂಟೆಸ್ಸರಿ / ನರ್ಸರಿ ಟೀಚರ್ ಟ್ರೈನಿಂಗ್, ಅರ್ಲಿ ಚೈಲ್ಡ್ ಹುಡ್ ಎಜ್ಯುಕೇಶನ್, ಕಮ್ಯುನಿಕೇಶನ್ ಸ್ಕಿಲ್ಸ್ ಅಂಡ್ ಇಂಗ್ಲಿಷ್ ಸ್ಪೀಕಿಂಗ್ ಹಾಗೂ ಕೌನ್ಸ್ ಲಿಂಗ್ ಅಂಡ್ ಗೈಡೆನ್ಸ್ ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ ಗಳನ್ನು ನೀಡಲಾಗುವುದು. ಬಿಎಸ್ಎಸ್ ವೃತ್ತಿಪರ ಶಿಕ್ಷಣ ಆಶ್ರಯದಲ್ಲಿ ನಡೆಸಲ್ಪಡುವ ಈ ಕೋರ್ಸ್ ಗಳಿಗೆ ಪ್ರವೇಶಾತಿ ಆರಂಭವಾಗಿದ್ದು, ಪಿಯುಸಿ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಎಲ್ಲಾ ತರಬೇತಿಗಳ ಪ್ರಯೋಜನ ಪಡೆದುಕೊಳ್ಳಬಹುದು. ಆಸಕ್ತರು ಅರ್ಜಿ ನಮೂನೆಯನ್ನು ಕುಂದೇಶ್ವರ ದೇವಸ್ಥಾನ ಸಮೀಪ ಅಥವಾ ಬಸ್ರೂರು ಮೂರ್ಕೈ ಕಛೇರಿಯಿಂದ ಪಡೆದು ಭರ್ತಿ ಮಾಡಿ (7975861619) ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಬೆಳ್ಮಣ್ಣು ಜೇಸಿಐ : 10ನೇ ವಿಶ್ವ ಯೋಗ ದಿನಾಚರಣೆ
ಬೆಳ್ಮಣ್ಣು: ಬೆಳ್ಮಣ್ಣು ಜೇಸಿಐ, ಸಚ್ಚೇರಿಪೇಟೆ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಲಯನ್ಸ್ ಕ್ಲಬ್ ಮುಂಡ್ಕೂರು ಕಡಂದಲೆ ಇದರ ಸಂಯುಕ್ತ ಆಶ್ರಯದಲ್ಲಿ ಸಚ್ಚೇರಿಪೇಟೆ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ 10ನೇ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು.
ಉಡುಪಿ ಜಿಲ್ಲಾ ಪಂತಂಜಲಿ ಯೋಗ ಸಮಿತಿ ಕಾರ್ಯದರ್ಶಿಗಳಾದ ರಂಜಿತ್ ಕೆ. ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಯೋಗವು ಆರೋಗ್ಯ ಪೂರ್ಣ ಜೀವನಕ್ಕೆ ಸಹಖಾರಿಯಾಗಿದ್ದು ಪ್ರಮುಖವಾಗಿ ವಿದ್ಯಾರ್ಥಿಗಳಲ್ಲಿ ಮಾನಸಿಕ ಹಾಗೂ ದೈಹಿಕ ದೃಢತೆಯನ್ನು ಹೊಂದಲು ಸಹಕಾರಿ ಆಗುವುದೆಂದು ತಿಳಿಸಿದರು.
ಭಂಡಾರಕರ್ಸ್ ಕಾಲೇಜಿನ ಆರ್ ಏನ್ ಶೆಟ್ಟಿ ಸಭಾಂಗಣದಲ್ಲಿ ವಿಶ್ವ ಯೋಗ ದಿನ
ಕುಂದಾಪುರ: ಜೂನ್ 21 ರಂದು ಭಂಡಾರಕಾರ್ಸ್ ಕಾಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ ಮತ್ತು IQAC,, ಭಾರತೀಯ ರೆಡ್ ಕ್ರಾಸ್, ಯೂಥ್ ರೆಡ್ ಕ್ರಾಸ್, ಏನ್ ಎಸ್ ಎಸ್, ಏನ್ ಸಿ ಸಿ, ರೇಂಜ್ ರ್ಸ್ ಮತ್ತು ರೋವರ್ಸ್,ಜೆ ಸಿ ಐ ಕುಂದಾಪುರ ಸಿಟಿ,ಯೋಗ ಬಂದು ಕುಂದಾಪುರ ಇವರ ಸಹಯೋಗದೊಂದಿಗೆ ಭಂಡಾರಕರ್ಸ್ ಕಾಲೇಜಿನ ಆರ್ ಏನ್ ಶೆಟ್ಟಿ ಸಭಾಂಗಣದಲ್ಲಿ ವಿಶ್ವ ಯೋಗ ದಿನ ಆಯೋಜಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಭಂಡಾರಕರ್ಸ್ ಕಾಲೇಜಿನ ಶುಭಕರಾಚಾರ್ಯ ಇವರು” ಮನುಷ್ಯನಿಗೆ ಜೀವನದಲ್ಲಿ ಮುಖ್ಯವಾಗಿ ಬೇಕಾದದ್ದು ಅಂದರೆ ಆರೋಗ್ಯ ಮತ್ತು ನೆಮ್ಮದಿ. ನಮ್ಮ ಆರೋಗ್ಯ ಮತ್ತು ನೆಮ್ಮದಿಗಾಗಿ ಪತಂಜಲಿ ಅವರು ಹಾಕಿಕೊಟ್ಟ ಯೋಗವನ್ನ ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂದು ಮಾಡುತ್ತಿರುವ ಯೋಗ ಇವತ್ತಿಗೆ ಕೊನೆ ಆಗದೆ ನಮ್ಮ ದಿನಚರಿಯಲ್ಲೂ ಒಂದಾಗಬೇಕು. “ಎಂದು ಹೇಳಿದರು.
ಯೋಗ ಬಂದು ಕುಂದಾಪುರ ಇದರ ಸದಸ್ಯರಾದ ಚೀನಾ ಆಚಾರ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಂಡಾರ್ ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಶುಭ ಕರಾಚಾರ್ಯ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಅನಿಲ್ ಚಾತ್ರ, ನಾಗೇಶ್,ಆದರ್ಶ ಹೆಬ್ಬಾರ್, ಗಜಾನಂದ, ಭಾಸ್ಕರ್ ಗಾಣಿಗ, ವಿಜಯಲಕ್ಷ್ಮಿ ಶೆಟ್ಟಿ, ಮೂಕಾಂಬಿಕ ಉಡುಪ, ಕ್ಯಾಪ್ಟನ್ ಅಂಜನ್ ಕುಮಾರ್ ಎ.ಎಲ್, ಸಬ್ ಲೆಫ್ಟಿಂನೆಂಟ್ ಶರಣ್ ಹಾಗೂ ಯೋಗ ಬಂದು ಕುಂದಾಪುರ ಇದರ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯೋಗದಲ್ಲಿ ವಿಶೇಷ ಸಾಧನೆಗೈದ ಭಂಡಾರ್ ಕಾರ್ಸ್ ಕಾಲೇಜಿನ ವಿದ್ಯಾರ್ಥಿನಿ ಮಹಿಮಾರನ್ನು ಸನ್ಮಾನಿಸಲಾಯಿತು.
ರೇಡಿಯೋ ಕುಂದಾಪುರ ಉಸ್ತುವಾರಿಯಾದ ಜ್ಯೋತಿ ಸಾಲಿಗ್ರಾಮ ಇವರು ಕಾರ್ಯಕ್ರಮ ನಿರೂಪಿಸಿದರು.
ಕುಂದಾಪುರ : ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕ – ರಕ್ಷಕ ಸಭೆ
ಕುಂದಾಪುರ: ಸ್ಥಳೀಯ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಶಿಕಕ ರಕ್ಷಕ ಸಭೆಯು ಜು 22 ರಂದು ಶಾಲಾ ಸಭಾಂಗಣದಲ್ಲಿ ನೆಡೆಯಿತು. ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಸಭೆ ಪ್ರಾರಂಭವಾಯಿತು. ವಿದ್ಯಾರ್ಥಿನಿಯರು ನೃತ್ಯದ ಮೂಲಕ ಅತಿಥಿಗಳನ್ನು ಸ್ವಾಗತಿಸಿದರು.
ಹೋಲಿ ರೋಜರಿ ಹಾಗೂ ಸಂತಮೇರಿ ಸಮೂಹ ಶಿಕ್ಷಣ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ಸ್ಥಳೀಯ ಹೋಲಿ ರೋಜರಿ ಚರ್ಚಿನ ಪ್ರದಾನ ಧಮಗುರುಗಳು ಅ| ವಂ| ಪೌಲ್ ರೇಗೊ ಸಭೆಯ ಅಧ್ಯಕತೆಯನ್ನು ವಹಿಸಿದ್ದರು. ಲೆಸ್ಲಿ ಆರೋಜಾ ಆಪ್ತ ಸಮಾಲೋಚಕರು ಬಿಷಪ್ ಹೌಸ್ ಉಡುಪಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನದ ಕುರಿತು ಹಾಗು ಮಕ್ಕಳ ಪಾಲನೆಯಲ್ಲಿ ಹೆತ್ತವರ ಕರ್ತವ್ಯದ ಕುರಿತು, ಮಕ್ಕಳ ಮೇಲೆ ಮಾಧ್ಯಮಗಳ ಪ್ರಭಾವದ ಕುರಿತು ತಿಳುವಳಿಕೆ ನೀಡಿದರು.
ಶಾಲಾ ಮುಖೋಪಾಧ್ಯಾಯಿನಿ ಸಿಸ್ಟರ್ ತೆರೆಜ್ ಶಾಂತಿ ಎ.ಸಿ. ರವರು ಶಾಲಾ ನಿಯಮ ಹಾಗೂ ಶಾಲೆಗೆ ಸಂಬಂಧಿಸಿದ ಮಾಹಿತಿಯನ್ನು ಪೋಷಕರರಿಗೆ ತಿಳಿಸಿದರು. ಶಾಲಾ ಶೈಕ್ಷಣಿಕ ಮಾರ್ಗದರ್ಶಕರಾದ ಮಾರ್ಗರೇಟ್ ಪ್ರೆಸಿಲ್ಲಾ ಪಿಕಾರ್ಡೊರವರು ಪೋಷಕರು ಮಕ್ಕಳಿಗೆ ನೀಡಬೇಕಾದ ಸಲಹೆ ಸೂಚನೆಗಳ ಬಗ್ಗೆ ತಿಳುವಳಿಕೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಧರ್ಮಗುರು ಪೌಲ್ ರೆಗೋರವರು ಪೋಷಕರನ್ನು ಉದ್ದೇಶಿಸಿ ‘ಮನೆಯೇ ಮೊದಲ ಪಾಠ ಶಾಲೆ, ತಾಯಿ ತಂದೆಯವರೇ ಮೊದಲ ಗುರು, ಆದ್ದರಿಂದ ನೀವು ನಿಮ್ಮ ಮಕ್ಕಳಿಗೆ ಶೈಕ್ಷಣಿಕ, ಭಾವನ್ಮಾಕ, ನೈತಿಕ, ಅದ್ಯಾತ್ಮಿಕ ಜ್ಞಾನವನ್ನು ನೀಡಿ ಬೆಳಿಸಿರಿ ತಾವೆಲ್ಲರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದೀರಿ ನಿಮಗೂ ನಿಮ್ಮ ಮಕ್ಕಳಿಗೂ ಹಾಗು ಈ ವಿದ್ಯಾಸಂಸ್ಥೆಗೂ ದೇವರ ಆಶೀರ್ವಾದವಿರಲಿ’ ಎಂದು ಹಾರೈಸಿದರು.
ಸಭೆಯಲ್ಲಿ ಸುಮಾರು 350 ಮಂದಿ ಪೋಷಕರು ಉಪಸ್ಥಿತರಿದ್ದರು. ಶಿಕ್ಷಕ ಓರನ್ ಡಿ’ಸೋಜಾರವರು ಸ್ವಾಗತಿಸಿದರು. ಶಿಕ್ಷಕಿ ರಮ್ಯಾ ಹೆಗ್ಡೆ ಹಿಂದಿನ ವರ್ಷದ ಶಿಕ್ಷಕ-ರಕ್ಷಕ ಸಂಘದ ವರದಿ ವಾಚಿಸಿದರು.
ಶ್ರೀಮತಿ ನಿಮಿಷಾ ಗೊನ್ಸಾಲ್ವಿಸ್ರವರು ವಾರ್ಷಿಕ ಲೆಕ್ಕ ಪತ್ರ ಮಂಡಿಸಿದರು. ಶಿಕ್ಷಕಿ ಪ್ರತಿಮಾ ಶೆಟ್ಟಿಯವರು ಶಾಲಾ ವಾರ್ಷಿಕ ಶೈಕ್ಷಣಿಕ ಚಟುವಟಿಕೆಗಳ ವರದಿ ವಾಚಿಸಿದರು. ಶಿಕ್ಷಕಿ ಕುಮಾರಿ ರಮ್ಯಾರವರು ವಂದಿಸಿದರು ಶಿಕ್ಷಕ ಲೂವಿಸ್ ಪ್ರಶಾಂತ್ರವರು ಕಾರ್ಯಕ್ರಮ ನಿರೂಪಿಸಿದರು.
ಎಂಎಲ್ಸಿ ಐವನ್ ಡಿಸೋಜ ಅವರಿಂದ ಸೈಂಟ್ ಜೋಸೆಫ್ ಪ್ರಶಾಂತ್ ನಿವಾಸ ಜೆಪ್ಪು ಕ್ಯಾಂಪಸ್ನಲ್ಲಿ ನೆಲೆಸಿರುವ ನಿವಾಸಿಗಳು ಮತ್ತು ಸಹೋದರಿಯರ ಭೇಟಿ / MLC Ivan D’Souza Visits Residents and Sisters residing at St. Joseph Prashant Niwas Jeppu Campus
ಮಂಗಳೂರು: ಎಂಎಲ್ಸಿ ಶ್ರೀ ಇವಾನ್ ಡಿಸೋಜಾ ಅವರು ಸೇಂಟ್ ಜೋಸೆಫ್ಸ್ ಪ್ರಶಾಂತ್ ನಿವಾಸ್ ಜೆಪ್ಪು ಕ್ಯಾಂಪಸ್ಗೆ ಭೇಟಿ ನೀಡಿ, ಅಲ್ಲಿ ವಾಸಿಸುತ್ತಿರುವ ನಿವಾಸಿಗಳು ಮತ್ತು ಸಹೋದರಿಯರನ್ನು ಜೂನ್ 21,2024 ರಂದು ಸ್ವಾಗತಿಸಿದರು.
ಸೇಂಟ್ ಜೋಸೆಫ್ ಪ್ರಶಾಂತ್ ನಿವಾಸದ ಅಧೀಕ್ಷಕರಾದ ಸೀನಿಯರ್ ಸಿಲ್ವಿಯಾ ಫೆರ್ನಾಂಡಿಸ್ ಅವರು ಸಿಸ್ಟರ್ಸ್ ಸಿಬ್ಬಂದಿ ಮತ್ತು ನಿವಾಸಿಗಳೊಂದಿಗೆ ಕಿರು ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿದರು. ಶ್ರೀ ಐವನ್ ಡಿಸೋಜ ಎಂಎಲ್ಸಿ ಡಾ. ಕವಿತಾ, ಸೀನಿಯರ್ ಸಿಲ್ವಿಯಾ ಫೆರ್ನಾಂಡಿಸ್, ಸೀನಿಯರ್ ವಿದಾ ಒಲಿವಿರಾ ಮತ್ತು ಸೀನಿಯರ್ ಹೆಲೆನ್ ಫೆರ್ನಾಂಡಿಸ್ ಡಯಾಸ್ನಲ್ಲಿ ಉಪಸ್ಥಿತರಿದ್ದರು. ಅವರನ್ನು ಪುಷ್ಪಗುಚ್ಛ ನೀಡಿ ಸ್ವಾಗತಿಸಲಾಯಿತು. ಸೀನಿಯರ್ ಸಿಲ್ವಿಯಾ ಎಲ್ಲರನ್ನು ಸ್ವಾಗತಿಸಿದರು. ಶ್ರಿ. ಲಿನೆಟ್ಪ್ರೀತಾ ಡಿಸೋಜ ಅವರು ತಮ್ಮ ಅಭಿನಂದನಾ ಭಾಷಣದಲ್ಲಿ ಹೀಗೆ ಹೇಳಿದರು: ಎಂಎಲ್ಸಿ ಐವನ್ ಡಿಸೋಜಾ ಅವರು ತುಳಿತಕ್ಕೊಳಗಾದವರನ್ನು ಮೇಲೆತ್ತಲು ತುಂಬಾ ಶ್ರಮಿಸಿದ್ದಾರೆ ಮತ್ತು ಬಡವರು ಮತ್ತು ನಿರ್ಗತಿಕರಿಗೆ ತಮ್ಮನ್ನು ನೀಡಿದ್ದಾರೆ. ಅವರ ವಿನಮ್ರ ಸೇವೆ ಮತ್ತು ಏಕೀಕೃತ ಕೆಲಸವು ಅನೇಕರ ಜೀವನದಲ್ಲಿ ಬೆಳಕನ್ನು ತಂದಿದೆ. ಗೌರವಾನ್ವಿತ ಶ್ರೀ ಐವನ್ ಡಿಸೋಜಾ ಮತ್ತು ಅವರ ಪತ್ನಿ ಡಾ. ಕವಿತಾ ಶ್ರೀ ವಿಕ್ಟರ್ ವಾಸ್ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಶ್ರೀ ಜೋಸೆಫೀನ್ ಡಿಸಿಲ್ವಾ ಧನ್ಯವಾದಗಳನ್ನು ಅರ್ಪಿಸಿದರು.
MLC Ivan D’Souza Visits Residents and Sisters residing at St. Joseph Prashant Niwas Jeppu Campus
Mangalore: MLC Ivan D’Souza Visited the campus of St. Joseph’s PrashanthNivasJeppu to greet the inmates & Sisters residing thereon 21st June 2024.
Sr. Sylvia Fernandes the Superintendent of St. Joseph’s PrashanthNivas along with Sisters staff & residents organized a short felicitation programme. Mr. Ivan D’Souza MLC Dr. Kavitha, Sr. Sylvia Fernandes, Sr. Vida Oliviera& Sr. Helen Fernandes were present on the dias. He was welcomed & greeted with bouquet flowers. Sr. Sylvia welcomed all. Sr. LynetPreetha D’Souza in her felicitation speech said that : MLC Ivan Dsouza has worked very hard to uplift the down trodden and given himself for the poor and needy. His humble service and unified work has brought light in the lives of many.” All present on the diashonoured Mr. Ivan Dsouza and his Wife Dr. Kavitha Mr. Victor Vas compered the programme and Sr. Josephine D’Silva gave vote of thanks.
ಇಡೀ ರಾಜ್ಯಕ್ಕೆ ಮೂರು ತಿಂಗಳೊಳಗಾಗಿ ಏ-ಬಿ ಖಾತಾ ನೀಡಲು ಕ್ರಮ ಪೌರಾಡಳಿತ ಸಚಿವ – ರಹೀಮ್ ಖಾನ್
ಕೋಲಾರ : ಕೋಲಾರ ಜಿಲ್ಲೆ ಸೇರಿದಂತೆ ಇಡೀ ರಾಜ್ಯದಲ್ಲಿ ಇ-ಖಾತಾ ಹಾಗೂ ಮೂಟೇಷನ್ ಕುರಿತು ಸಮಸ್ಯೆಯಿದ್ದು, ಇನ್ನೂ ಮೂರು ತಿಂಗಳೊಳಗಾಗಿ ಏ ಹಾಗೂ ಬಿ-ಖಾತಾ ನೀಡಲು ಕ್ರಮಕೈಗೊಳ್ಳಲಾಗುವುದೆಂದು ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಮ್ ಖಾನ್ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಇಲಾಖಾವಾರು ಪ್ರಗತಿ ಪರಿಶೀಲನೆ ನಂತರ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಕೋಲಾರದಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಅಂಗಡಿ-ಮುಂಗಟ್ಟು ಹಾಗೂ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಅವರಿಗೆ ರಸ್ತೆ, ವಿದ್ಯುತ್, ನೀರು, ಚರಂಡಿ ಮುಂತಾದ ಮೂಲಭೂತ ಸೌಕರ್ಯಗಳು ಬೇಕಾಗಿವೆ. ಆದರೆ ಇವರು ಯಾವುದೇ ರೀತಿಯ ಆಸ್ತಿ ತೆರಿಗೆಯನ್ನು ಕಟ್ಟುತ್ತಿಲ್ಲ. ಕಾರಣ ಮ್ಯೂಟೇಷನ್ ಹಾಗೂ ಇ- ಖಾತಾ ಕುರಿತು ನಗರಸಭೆಗಳಲ್ಲಿ ದಾಖಲೆಗಳಿರುವುದಿಲ್ಲ. ಬೆಂಗಳೂರಿನಲ್ಲಿದಂತೆ ಏ ಮತ್ತು ಬಿ ಖಾತಾ ರೀತಿಯಲ್ಲಿ ಕೋಲಾರ ಸೇರಿದಂತೆ ರಾಜ್ಯದಲ್ಲಿ ಎಲ್ಲರಿಗೂ ಅನ್ವಯುಸುವಂತೆ ಮಾಡಲು ಕ್ಯಾಬಿನೆಟ್ನಲ್ಲಿಡಲಾಗಿದ್ದು, ಮೂರು ತಿಂಗಳಲ್ಲಿ ರಾಜ್ಯದಾದ್ಯಂತ ಎ-ಬಿ ಖಾತಾ ನೊಂದಣಿ ಜಾರಿಗೊಳಿಸಲಾಗುವುದು.
ಜಿಲ್ಲೆಯಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳು ತೃಪ್ತಿ ತಂದಿರುವುದಿಲ್ಲ ಎಂದ ಸಚಿವರು 1-2 ತಿಂಗಳೊಳಗಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಕಾಮಗಾರಿ ಪೂರ್ಣಗೊಳಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದರು. ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಆಗಾಗ್ಗೆ ಅಭಿವೃದ್ಧಿ ಕುರಿತು ಸಭೆ ನಡೆಸಲು ತೀರ್ಮಾನಿಸಲಾಯಿತು.
ವ್ಯಾಪಾರ ಪರವಾನಗಿ(ಟ್ರೇಡ್ ಲೈಸನ್ಸ್): ಈಗ ವ್ಯಾಪಾರ ಪರವಾನಿಗೆಯನ್ನು ಐದು ವರ್ಷಗಳಿಗೊಮ್ಮೆ ನೀಡಲು ನಿರ್ಧರಿಸಲಾಗಿದೆ. ಈ ಹಿಂದೆ ಒಂದೇ ವರ್ಷಕ್ಕೆ ವ್ಯಾಪರ ಪರವಾನಿಗೆ ನೀಡಲಾಗುತ್ತಿತ್ತು ಎಂದರು.
ತೆರಿಗೆ ವಸೂಲಾತಿ: ತೆರಿಗೆ ವಸೂಲಾತಿಯಲ್ಲಿ ತೀವ್ರ ಕ್ರಮಕೈಗೊಳ್ಳಲು ದ್ರೋಣ್ ಸರ್ವೆ ಸಹಾಯವನ್ನು ಪಡೆದು ಇಂಡೀಕರಣ (ಅಪ್ಡೆಟ್) ಮಾಡಲಾಗುವುದು. ಒಂದೇ ಕಟ್ಟಡಕ್ಕೆ ಅನುಮತಿ ಪಡೆದು 3-4ಕ್ಕೂ ಅಂತಸ್ತುಗಳನ್ನು
ಕಟ್ಟುತ್ತಿರುವುದು ಕಂಡು ಬರುತ್ತಿದ್ದು, ತೆರಿಗೆಯನ್ನು ಒಂದೇ ಕಟ್ಟಡಕ್ಕೆ ತುಂಬುತ್ತಿದ್ದಾರೆ. ಹೀಗಾಗಿ ತೆರಿಗೆಯ ಮಾಹಿತಿಯನ್ನು ಒಂದೆಡೆ ಸಂಗ್ರಹಿಸಲು ದ್ರೋಣ್ ಸರ್ವೇ ಉಪಯುಕ್ತವಾಗಿದೆ. ಇದರಿಂದ ತೆರಿಗೆಯನ್ನು ಕಟ್ಟುನಿಟ್ಟಾಗಿ ಹಾಗೂ ವ್ಯವಸ್ಥೆಗನುಗುಣವಾಗಿ ತುಂಬಿಸಬಹುದಾಗಿದೆ ಎಂದರು.
ನೀರಿನ ತೆರಿಗೆ: ಯಥೇಚ್ಛವಾಗಿ ದಿನನಿತ್ಯ ಬಳಸುವ ನೀರಿಗೆ ಸರ್ಕಾರವು ಶೇ.5-10 ನೀರಿನ ಶುಲ್ಕವನ್ನು ವಿಧಿಸಿದ್ದರೂ ಸಾರ್ವಜನಿಕರು ಸರಿಯಾಗಿ ಕರವನ್ನು ತುಂಬುವುದಿಲ್ಲ ಹಾಗೂ ಸಂಬಂಧಪಟ್ಟವರು ಕರ ಸಂಗ್ರಹಿಸಲು ಹೋಗುತ್ತಿಲ್ಲ. ಆದ್ದರಿಂದ ಆಸ್ತಿ ಹಾಗೂ ನೀರಿನ ತೆರಿಗೆಯನ್ನು ವಸೂಲಿ ಮಾಡಲು ಖಾಸಗಿ ಸಂಘ-ಸಂಸ್ಥೆಗಳಿಗೆ ವಹಿಸಲು ಕ್ಯಾಬಿನೇಟ್ಲ್ಲಿ ಮಂಡಿಸಲಾಗಿದೆ ಎಂದರು. ಈ ಸಂಘ-ಸಂಸ್ಥೆಗಳವರಿಗೆ ಮನೆ-ಮನೆಗೆ ಹೋಗಿ ನೀರು ಹಾಗೂ ಆಸ್ತಿಯ ತೆರಿಗೆಯನ್ನು ವಸೂಲಿ ಮಾಡುವ ಕಾರ್ಯವನ್ನು ವಹಿಸಲಾಗುವುದು ಎಂದರು.
ಪ್ರತಿ ಜಿಲ್ಲೆಗೂ ಚರಂಡಿ, ಉದ್ಯಾನವನ ಇನ್ನಿತರೆ ಮೂಲಭೂತ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ರೂ.10 ಕೋಟಿಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದರು.
ಕೋಲಾರ ಜಿಲ್ಲೆಯ ನಗರಸಭೆಗಳಲ್ಲಿ 107 ಅಧಿಕಾರಿ ಹಾಗೂ ಸಿಬ್ಬಂದಿ ಕೊರತೆಯಿದ್ದು, ನೇಮಕಾತಿಗೊಳಿಸಲು ಮನವಿ ಮಾಡಿದರು. ಕೆ.ಜಿ.ಎಫ್ ನಗರಸಭೆ ವ್ಯಾಪ್ತಿಯಲ್ಲಿ-23 ಹಾಗೂ ಮಾಲೂರು ಪುರಸಭೆ-29 ಹುದ್ದೆಗಳು ಖಾಲಿಯಿದ್ದು, ವಿಶೇಷ ನೇಮಕಾತಿ ಮೂಲಕ ನೇಮಕ ಮಾಡಲು ಪೌರಾಡಳಿತ ನಿರ್ದೇಶನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆಯೆಂದು ನಗರಸಭೆ ಆಯುಕ್ತರಾದ ಶಿವಾನಂದ ಅವರು ಈ ಬಗ್ಗೆ ಕ್ರಮವಹಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಡಾ. ಕೊತ್ತೂರು ಜಿ. ಮಂಜುನಾಥ್, ಶ್ರೀನಿವಾಸಪುರ ಶಾಸಕ ಜಿಕೆ ವೆಂಕಟಶಿವಾರೆಡ್ಡಿ , ಅಪರ ಜಿಲ್ಲಾಧಿಕಾರಿ ಡಾ. ಶಂಕರ ವಣಿಕ್ಯಾಳ್ ಉಪಸ್ಥಿತರಿದ್ದರು.
ಶ್ರೀನಿವಾಸಪುರ: ರೋಟರಿ ಸಂಸ್ಥೆ ಸೇವಾ ಮನೋಭಾವನೆಯನ್ನು ಹೊಂದಿದ್ದು ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ – ಎಸ್.ಎನ್. ಮಂಜುನಾಥ ರೆಡ್ಡಿ
ಶ್ರೀನಿವಾಸಪುರ: ರೋಟರಿ ಸಂಸ್ಥೆಯು ಸೇವಾ ಮನೋಭಾವನೆಯನ್ನು ಹೊಂದಿದ್ದು, ಶಿಕ್ಷಣ ಮತ್ತುಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆಎಂದುರೋಟರಿ ಶ್ರೀನಿವಾಸಪುರ ಸೆಂಟ್ರಲ್ನ ಅಧ್ಯಕ್ಷರಾದ ಎಸ್.ಎನ್. ಮಂಜುನಾಥರೆಡ್ಡಿ ತಿಳಿಸಿದರು.
ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಹಾಗೂ ಬೆಂಗಳೂರಿನ ರೋಟರಿ ಸೌತ್ಕ್ಲಬ್ನ ಸಹಭಾಗಿತ್ವದಲ್ಲಿತಾಲ್ಲೂಕಿನ ಯಲ್ದೂರಿನಲ್ಲಿರುವ ಶ್ರೀ ಶ್ರೀನಿವಾಸ ಪಬ್ಲಿಕ್ ಶಾಲೆಯಲ್ಲಿ1 ರಿಂದ 10ನೇ ತರಗತಿಯ ಸುಮಾರು 150 ಮಕ್ಕಳಿಗೆ ಉಚಿತವಾಗಿ ಲೇಖನ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದಎಸ್.ಎನ್. ಮಂಜುನಾಥರೆಡ್ಡಿ, ವಿದ್ಯಾರ್ಥಿಗಳು ಈ ಪುಸ್ತಕಗಳನ್ನು ಉಪಯೋಗಿಸಿಕೊಳ್ಳಬೇಕು, ಒಳ್ಳೆಯ ಶಿಕ್ಷಣವನ್ನು ಪಡೆದುಕೊಳ್ಳಬೇಕು, ಭವಿಷ್ಯದಲ್ಲಿಉತ್ತಮ ಪ್ರಜೆಗಳಾಗಿ ಬೆಳೆದು ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು, ರೋಟರಿ ಸಂಸ್ಥೆಯು ಸೇವಾ ಮನೋಭಾವನೆಯನ್ನು ಹೊಂದಿದ್ದು, ಆರೋಗ್ಯ, ಶಿಕ್ಷಣ, ಸೇವಾ ಮನೋಭಾವ ಹೊಂದಿರುವ ಹಿರಿಯ ನಾಗರೀಕರನ್ನು ಗುರ್ತಿಸಿ ಸನ್ಮಾನಿಸುವುದು, ಉತ್ತಮ ಶಿಕ್ಷಕರನ್ನು ಗುರ್ತಿಸಿ ಸನ್ಮಾನಿಸುವುದು, ಶಾಲಾ ಆವರಣಗಳಲ್ಲಿ ಹಾಗೂ ರಸ್ತೆಯ ಬದಿಗಳಲ್ಲಿ ಸಸಿಗಳನ್ನು ನೆಡುವುದು, ಆರೋಗ್ಯ ಶಿಭಿರಗಳನ್ನು ಹಮ್ಮಿಕೊಳ್ಳುವುದು ಮುಂತಾದ ಕಾರ್ಯಕ್ರಮಗಳನ್ನು ಉಚಿತವಾಗಿ ಹಮ್ಮಿಕೊಳ್ಳಲಾಗುತ್ತಿದೆಎಂದು ತಿಳಿಸಿದರು.
ರೋಟರಿ ಶ್ರೀನಿವಾಸಪುರ ಸೆಂಟ್ರಲ್ನ ಕಾರ್ಯದರ್ಶಿ ಎಸ್. ಶಿವಮೂರ್ತಿ ಮಾತನಾಡಿ, ಈ ಶಾಲೆಯ ಸುಮಾರು 150 ಮಕ್ಕಳಿಗೆ ಬೆಂಗಳೂರಿನ ರೋಟರಿ ಸೌತ್ಕ್ಲಬ್ ವತಿಯಿಂದಉಚಿತವಾಗಿಪಠ್ಯಪುಸ್ತಕ ಮತ್ತುನೋಟ್ ಪುಸ್ತಕಗಳನ್ನು ನೀಡಿದ ಬೆಂಗಳೂರಿನ ರೋಟರಿ ಸೌತ್ಕ್ಲಬ್ಅಧ್ಯಕ್ಷರಾದ ಲೋಕನಾಥ್ರವರಿಗೆ ಧನ್ಯವಾದಗಳನ್ನು ತಿಳಿಸಿ, ಮಕ್ಕಳು ಈ ಪುಸ್ತಕಗಳನ್ನು ಉಪಯೋಗಿಸಿಕೊಂಡು ಉತ್ತಮ ವ್ಯಾಸಂಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿಸ್ಟ್ರಿಕ್ಟ್ ಕ್ಲಬ್ ಸಪೆÇರ್ಟ್ಡೈರಕ್ಟರ್ರವೀಂದ್ರನಾಥ್ ಮಾತನಾಡಿ, ಉಚಿತವಾಗಿ ಪುಸ್ತಕಗಳನ್ನು ನೀಡಿದ ಬೆಂಗಳೂರಿನ ಸೌತ್Àಕ್ಲಬ್ಅಧ್ಯಕ್ಷರಾದ ಲೋಕನಾಥ್ರವರಿಗೆ ಧನ್ಯವಾದಗಳನ್ನು ತಿಳಿಸಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಶಶಿಕಲಾ, ಶಾಲೆಯ ಸಿಬ್ಬಂಧಿ, ಪೆÇೀಷಕರು ಹಾಗೂ ವಿದ್ಯಾರ್ಥಿ ವಿಧ್ಯಾರ್ಥಿನಿಯರು ಹಾಜರಿದ್ದರು.
ಶಂಕರನಾರಾಯಣ ಮದರ್ ತೆರೇಸಾ ಮೆಮೋರಿಯಲ್ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ
ಕುಂದಾಪುರ : ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್ ಶಂಕರನಾರಾಯಣ ಯೋಗ ಶಿಕ್ಷಣವನ್ನು 2024-25ನೇ ಶೈಕ್ಷಣಿಕ ವರ್ಷದಿಂದ ಶಾಲಾ ಪಠ್ಯಕ್ರಮದಲ್ಲಿ ಅಳವಡಿಸಲಾಗಿದ್ದು ಇಂದು ನಡೆದ ಅಂತರಾಷ್ಟ್ರೀಯ ಯೋಗದಿನಾಚರಣೆಯ ಕಾರ್ಯಕ್ರಮದಲ್ಲಿ ಅದರ ಉದ್ಘಾಟನೆಯನ್ನು ಮುಖ್ಯಶಿಕ್ಷಕ ರವಿದಾಸ್ ಶೆಟ್ಟಿ, ಸಂಯೋಜಕರಾದ ಉಮೇಶ ಶೆಟ್ಟಿ,ಅವಿನಾ,ದಿವ್ಯಾ ಪೂಜಾರಿ ಮತ್ತು ಕುಸುಮಾ ಶೆಟ್ಟಿ ಜಂಟಿಯಾಗಿ ವಿದ್ಯಾರ್ಥಿಗಳಿಗೆ ಯೋಗ ಸಮವಸ್ತ್ರ ನೀಡುವುದರ ಮೂಲಕ ಉದ್ಘಾಟಿಸಿದರು ಎಲ್ ಕೆ ಜಿ ಯಿಂದ ಹತ್ತನೇ ತರಗತಿ ವಿದ್ಯಾರ್ಥಿಗಳು ಹೊಸ ಯೋಗಸಮವಸ್ತ್ರದೊಂದಿಗೆ ಸಂಭ್ರಮದಿಂದ ಯೋಗಾಸನದ ವಿವಿಧ ಆಸನಗಳನ್ನು ಪ್ರದರ್ಶಿಸಿದರು
ಯೋಗ ಶಿಕ್ಷಕ ರತ್ನಕುಮಾರ್ ಯೋಗದ ವಿವಿಧ ಆಸನಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿ ಯೋಗವನ್ನು ನಿತ್ಯಜೀವನದಲ್ಲಿ ಅಳವಡಿಕೊಳುವಂತೆ ಮಾಹಿತಿ ನೀಡಿದರು
ಈ ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕ ವರ್ಗದವರು ಯೋಗಾಸನವನ್ನು ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಹೆಚ್ಚಿನ ಕಳೆಯನ್ನು ನೀಡಿದರು.