ಶ್ರೀನಿವಾಸಪುರ : ಮನುಷ್ಯನು ದಿನನತ್ಯದ ಜಂಜಾಟಗಳಲ್ಲಿ ತೊಡಗಿರುತ್ತಾನೆ . ಅವನಿಗೆ ಮಾನಸಿಕವಾಗಿ ಒಂದಿಲ್ಲದೊಂದು ಸಮಸ್ಯೆಗಳು ಇದ್ದೇ ಇರುತ್ತದೆ. ಎಷ್ಟೇ ಮಾನಸಿಕ ಒತ್ತಡಗಳು ಇದ್ದರೂ ಸಹ ದೇವಾಲಯಗಳಿಗೆ ಬಂದು ಹೋದರೆ ಮನಸ್ಸು ಸಂತಸಗೊಳ್ಳುತ್ತದೆ . ಮಾನಸಿಕವಾಗಿ ಸದೃಡವಾಗಿ ಇರಬಹುದುಎಂದು ತಹಶೀಲ್ದಾರ್ ಜಿ.ಎನ್.ಸುದೀಂದ್ರ ತಿಳಿಸಿದರು.
ಪಟ್ಟಣದ ಪೊಲೀಸ್ ಸ್ಟೇಷನ್ ಬಳಿ ಸೋಮವಾರ ಗಣಪತಿ ಪ್ರತಿಷ್ಟಾಪನಾ ಕಾರ್ಯಕ್ರಮದಲ್ಲಿ ಪಾಲ್ಗುಂಡು ಮಾತನಾಡಿದರು.
ಗಣಪತಿಯು ವಿಘ್ನಗಳನ್ನು ನಿವಾರಿಸುವವನು ಈ ಕಾರಣಕ್ಕಾಗಿ ವಿಶೇಷ ಮಹತ್ವವನ್ನು ನೀಡಲಾಗಿದೆ. ಹಾಗೂ ಯಾವುದೇ ಮಂಗಳಕರ ಕಾರ್ಯವನ್ನು ಆರಂಭಿಸುವ ಮುನ್ನ ಗಣಪತಿ ಪೂಜೆಯನ್ನು ಮಾಡಲಾಗವುದು. ಗಣೇಶನು ನಮ್ಮ ಪೂಜೆಯಿಂದ ಪ್ರಸನ್ನನಾದಾಗ ಅವನು ನಮ್ಮೆಲ್ಲಾ ತೊಂದರೆಗಳನ್ನು ದೂರ ಮಾಡುತ್ತಾನೆ. ಎಂಬ ನಂಬಿಕೆಯೊಂದಿಗೆ ಶ್ರದ್ಧಾ ಭಕ್ತಿಯೊಂದಿಗೆ ಪೂಜೆ , ಪ್ರಾರ್ಥನೆ ಸಲ್ಲಿಸಿದಾಗ ಸಕಲ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ ಎಂದರು.
ಪೊಲೀಸ್ ನಿರೀಕ್ಷಕ ಎಂ.ಬಿ.ಗೊರವನಕೊಳ್ಳ ಮಾತನಾಡಿ ಸ್ವಾರ್ಥ ಜೀವನವನ್ನು ಬಿಟ್ಟು ಸಮಾಜಕ್ಕೆ ಉಪಯೋಗವಾಗುವಂತಹ ಕೆಲಸಕಾರ್ಯಗಳನ್ನು ಹಮ್ಮಿಕೊಂಡಾಗ ಮಾನಸಿಕ ಹಾಗು ದೈಹಿಕವಾಗಿ ಸದೃಡವಾಗಲು ಸಾಧ್ಯ, ಇದಲ್ಲದೆ ಪ್ರತಿ ದಿನ ದ್ಯಾನ,ಯೋಗ ಮಾಡುವುದರಿಂದ ಆರೋಗ್ಯ ಜೀವನವನ್ನು ನಡೆಸಬಹುದಾಗಿದೆ ಎಂದರು.
ಗೌನಿಪಲ್ಲಿ ವೃತ್ತ ಪೊಲೀಸ್ ನಿರೀಕ್ಷಕ ಜಯಾನಂದ್ ಮಾತನಾಡಿದರು. ಪ್ರತಿಷ್ಟಾಪನಾ ಹಾಗು ಪೂಜಾ ಕಾರ್ಯಕ್ರಮಗಳನ್ನು ಅರುಣ್ಕುಮಾರ್ ಶರ್ಮ ತಂಡದವರು ನೆರವೇರಿಸಿದರು. ಇಒ ಎ.ಎನ್.ರವಿ, ಮುಖಂಡರಾದ ದಿಂಬಾಲ್ ಅಶೋಕ್, ಜಗದೀಶ್, ರಾಮು, ತಿಮ್ಮಯ್ಯ, ರಾಮಾಂಜಮ್ಮ, ವಕೀಲ ನಾಗರಾಜ್, ಪಿಎಸ್ಐ ಜುರಾಮ್, ಎಎಸ್ಐ ಗಳಾದ ಎಂ.ಡಿ.ನಾರಾಯಣಪ್ಪ, ಶ್ರೀನಿವಾಸ್,ರವೀಂದ್ರನಾಥ್, ಪೊಲೀಸ್ ಸಿಬ್ಬಂದಿಗಳಾದ ರಾಮಚಂದ್ರ, ಆನಂದ್, ಶ್ರೀನಾಥ್, ರಮೇಶ್ , ಮಂಜುನಾಥ್, ಶಿವಾನಂದ ಬಡಿಯಾರ್ ಇದ್ದರು.
Month: June 2024
ರೋಸಾ ಮಿಸ್ಟಿಕಾ ಪಿಯು ಕಾಲೇಜ್ – ಹೂಡಿಕೆ ಸಮಾರಂಭ, ಎನ್ಎಸ್ಎಸ್ ಮತ್ತು ಕ್ಲಬ್ಗಳ ಉದ್ಘಾಟನೆ / Rosa Mystica PU College – Investiture Ceremony, Inauguration of NSS and Clubs
ಮಂಗಳೂರು: ರೋಸಾ ಮಿಸ್ಟಿಕಾ ಪಿಯು ಕಾಲೇಜಿನಲ್ಲಿ ಹೂಡಿಕೆ ಸಮಾರಂಭ, ಎನ್ಎಸ್ಎಸ್ ಉದ್ಘಾಟನೆ ಮತ್ತು ಕ್ಲಬ್ಗಳ ಉದ್ಘಾಟನೆಯ ಶುಭ ಸಂದರ್ಭದಲ್ಲಿ, ಉತ್ಸಾಹ ಮತ್ತು ಹೆಮ್ಮೆಯ ಭಾವವು ಗಾಳಿಯಲ್ಲಿ ತುಂಬಿತ್ತು. ಸಮಾರಂಭವು ಗಂಭೀರ ಆವಾಹನೆಯೊಂದಿಗೆ ಪ್ರಾರಂಭವಾಯಿತು, ನಂತರ ಅಧ್ಯಕ್ಷರು, ಮುಖ್ಯ ಅತಿಥಿಗಳು ಮತ್ತು ವಿದ್ಯಾರ್ಥಿ ಪರಿಷತ್ ಸದಸ್ಯರು ದೀಪ ಬೆಳಗಿಸಿದರು.
ಕಾಲೇಜು ಸಮುದಾಯಕ್ಕೆ ಸಮಗ್ರತೆ, ನಾಯಕತ್ವ ಮತ್ತು ಸೇವೆಯ ಮೌಲ್ಯಗಳನ್ನು ಎತ್ತಿಹಿಡಿಯುವುದಾಗಿ ಪ್ರತಿಜ್ಞೆ ಮಾಡುವ ಮೂಲಕ ಹೊಸದಾಗಿ ನೇಮಕಗೊಂಡ ವಿದ್ಯಾರ್ಥಿ ಪರಿಷತ್ತಿನ ಸದಸ್ಯರು ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಪ್ರಾರಂಭೋತ್ಸವವು ಪ್ರಾರಂಭವಾಯಿತು. ಪ್ರಾಂಶುಪಾಲರು ಸ್ಪೂರ್ತಿದಾಯಕ ಭಾಷಣ ಮಾಡಿ ವಿದ್ಯಾರ್ಥಿಗಳಲ್ಲಿ ಜವಾಬ್ದಾರಿ ಮತ್ತು ನಾಯಕತ್ವದ ಮಹತ್ವವನ್ನು ಒತ್ತಿ ಹೇಳಿದರು.
ಎನ್ಎಸ್ಎಸ್ (ರಾಷ್ಟ್ರೀಯ ಸೇವಾ ಯೋಜನೆ) ಘಟಕವನ್ನು ಎನ್ಎಸ್ಎಸ್ ದೀಪ ಬೆಳಗಿಸಿ ಉದ್ಘಾಟಿಸಲಾಯಿತು, ಇದು ಸೇವಾ ಮನೋಭಾವ ಮತ್ತು ಸಮುದಾಯದ ಅಭಿವೃದ್ಧಿಯ ಸಂಕೇತವಾಗಿದೆ. NSS ಸ್ವಯಂಸೇವಕರು ಸಮಾಜಕ್ಕೆ ಧನಾತ್ಮಕ ಕೊಡುಗೆ ನೀಡುವ ಉದ್ದೇಶದಿಂದ ವಿವಿಧ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಪ್ರತಿಜ್ಞೆ ಮಾಡಿದರು. ಸಮಾರಂಭದಲ್ಲಿ ಗೌರವಾನ್ವಿತ ಮುಖ್ಯ ಅತಿಥಿ ಶ್ರೀ ಗೋಪಾಲ ಕೃಷ್ಣ ಕುಂದರ್, ಪೊಲೀಸ್ ಆಂತರಿಕ ಭದ್ರತಾ ಅಧಿಕಾರಿ, ಮಂಗಳೂರು,
ಸಾಂಸ್ಕೃತಿಕ ಮತ್ತು ಸಾಹಿತ್ಯ ಕ್ಲಬ್ಗಳಿಂದ ಕ್ರೀಡೆ ಮತ್ತು ಪರಿಸರ ಕ್ಲಬ್ಗಳವರೆಗೆ ವಿವಿಧ ಕ್ಲಬ್ಗಳು ನಡೆದವು. ಪ್ರತಿ ಕ್ಲಬ್ ತನ್ನ ಉದ್ದೇಶಗಳನ್ನು ಮತ್ತು ಶೈಕ್ಷಣಿಕ ವರ್ಷಕ್ಕೆ ಯೋಜಿತ ಚಟುವಟಿಕೆಗಳನ್ನು ಪ್ರದರ್ಶಿಸಿತು, ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಭಾಗವಹಿಸಲು ಮತ್ತು ಉತ್ಕೃಷ್ಟಗೊಳಿಸಲು ಪ್ರೋತ್ಸಾಹಿಸುತ್ತದೆ. ಸಮಾರಂಭದಲ್ಲಿ ಕಿನ್ನಿಕಂಬಳದ ಜೀವದಾನ ಚಾರಿಟೇಬಲ್ ಸೆಂಟರ್ ನ ನಿರ್ದೇಶಕಿ ಬಿನ್ಸಿ ಥಾಮಸ್ ವಂದಿಸಿದರು. ಕಾಲೇಜಿನ ವೈವಿಧ್ಯಮಯ ಪ್ರತಿಭೆಗಳನ್ನು ಬಿಂಬಿಸುವ ಮೂಲಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಕಾರ್ಯಕ್ರಮಕ್ಕೆ ರಂಗು ತಂದುಕೊಟ್ಟವು.
ಮುಖ್ಯ ಅತಿಥಿಗಳು ವಿದ್ಯಾರ್ಥಿ ಸಂಪುಟದ ಸದಸ್ಯರನ್ನು ಹಾಗೂ ವಿವಿಧ ಕ್ಲಬ್ಗಳ ಎಲ್ಲ ಸದಸ್ಯರನ್ನು ಅಭಿನಂದಿಸಿದರು. ಕುಟುಂಬ, ಕಾಲೇಜು ಮತ್ತು ಸಮಾಜದಲ್ಲಿ ಉತ್ತಮ ನಾಯಕರಾಗಲು ಕರೆ ನೀಡಿದರು.
Mr. ರಾವಿಲ್ ರೆನಿಲ್ ಡಿಸಿಲ್ವಾ ಕಾರ್ಯಕ್ರಮವನ್ನು ನಿರ್ವಹಿಸಿದರು ಮತ್ತು ಕಾರ್ಯಕ್ರಮವನ್ನು ಅದ್ಧೂರಿಯಾಗಿ ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲಾ ಗಣ್ಯರು, ಅತಿಥಿಗಳು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಕಾಲೇಜು ಕ್ಯಾಬಿನೆಟ್ ಅಧ್ಯಕ್ಷರಾದ ಕುಶಿ ಅವರು ಧನ್ಯವಾದ ಅರ್ಪಿಸಿದರು. ಪ್ರಾಂಶುಪಾಲರು ಪ್ರೋತ್ಸಾಹದ ಮಾತುಗಳೊಂದಿಗೆ ಸಮಾರಂಭವನ್ನು ಮುಕ್ತಾಯಗೊಳಿಸಿದರು, ವಿದ್ಯಾರ್ಥಿಗಳು ಏಕತೆ, ಶಿಸ್ತು ಮತ್ತು ಶೈಕ್ಷಣಿಕ ಶ್ರೇಷ್ಠತೆಯ ಆದರ್ಶಗಳನ್ನು ಎತ್ತಿಹಿಡಿಯಬೇಕು. ಸಮಾರೋಪದಲ್ಲಿ, ರೋಸಾ ಮಿಸ್ಟಿಕಾ ಪಿಯು ಕಾಲೇಜಿನಲ್ಲಿ ಹೂಡಿಕೆ ಸಮಾರಂಭ, ಎನ್ಎಸ್ಎಸ್ ಉದ್ಘಾಟನೆ ಮತ್ತು ಕ್ಲಬ್ಗಳ ಉದ್ಘಾಟನೆಯು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸೇವೆ ಮತ್ತು ಸಮಗ್ರ ಅಭಿವೃದ್ಧಿಯ ಭರವಸೆ ಮತ್ತು ಬದ್ಧತೆಯಿಂದ ತುಂಬಿದ ಹೊಸ ಶೈಕ್ಷಣಿಕ ವರ್ಷಕ್ಕೆ ನಾಂದಿ ಹಾಡಿತು. ಈ ಘಟನೆಯು ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಸಾಮರ್ಥ್ಯವನ್ನು ಹೊಂದಿರುವ ಸುಸಂಘಟಿತ ವ್ಯಕ್ತಿಗಳನ್ನು ಪೋಷಿಸುವ ಕಾಲೇಜಿನ ಸಮರ್ಪಣೆಯನ್ನು ಬಲಪಡಿಸಿತು
Rosa Mystica PU College – Investiture Ceremony, Inauguration of NSS and Clubs
Mangalore: On the auspicious occasion of the Investiture Ceremony, NSS Inauguration and Clubs Inauguration at RolsaMystica PU College, a sense of enthusiasm and pride filled the air. The ceremony commenced with a solemn invocation, followed by the lighting of the lamp by the President, Chief Guest, and the student Council members.
The investiture ceremony began with the newly appointed student council members taking their oath of office, pledging to uphold the values of integrity, leadership and service to the college Community. The Principal delivered an inspiring speech emphasizing the importance of responsibility and leadership among students.
The NSS (National Service Scheme) unit was inaugurated with the lighting of the NSS lamp, symbolizing the spirit of service and community development. The NSS volunteers pledged to actively engage in various social service activities aimed at contributing positively to society. The event was graced by esteemed Chief Guest Mr Gopala Krishna Kundar, Police Internal Security Officer, Mangalore,
The various clubs took place, ranging from cultural and literary clubs to sports and environmental clubs. Each club showcased its objectives and planned activities for the academic year, encouraging students to participate and excel in their areas of interest. The event was graced by Sr. Bincy Thomas, Director of Jeevadana Charitable Centre, Kinnikambla. Cultural performances by students added colours and vibrancy to the event, reflecting the diverse talents of the college.
The Chief guests Congratulated the student cabinet members and also all the members of the various clubs. They called up to be the good leaders in the Family, college and also in the society.
Mr Avil Renil DSilva compereed the programmed and the vote of thanks was proposed by Kushi, President of the College Cabinet, to all the dignitaries, guests, faculty and students for the contribution and participation in making the event a grand success. The Principal concluded the ceremony with the words of encouragement, urging students to uphold the ideals of unity, discipline and academic excellence. In conclusion, the investiture Ceremony, NSS inauguration, and clubs inauguration at Rosa Mystica PU College marked the beginning of a new academic year filled with promise and commitment to leadership, service and holistic development among the students. The event reinforced the college’s dedication to nurturing well-rounded individuals capable of making a positive impact on society.
ಅಂಬೇಡ್ಕರ್ ರನ್ನು ಓಬಿಸಿ ಸಮುದಾಯದಿಂದ ದೂರ ಮಾಡಿದ್ದು ಒಂದು ಷಡ್ಯಂತ್ರ – ಲೋಹಿತ್ ನಾಯಕ
ತೀರ್ಥಹಳ್ಳಿ – ಜೂನ್ 23. ಅಂಬೇಡ್ಕರ್ ಈ ದೇಶದ ಎಲ್ಲಾ ಮೂಲ ನಿವಾಸಿಗಳ ನಾಯಕರು, ಮಹಿಳೆಯರ ಮತ್ತು ಸಕಲ ಬಹುಜನರ ನಾಯಕರು. ಆದರೆ ಬಾಬಾ ಸಾಹೇಬರನ್ನ ಈ ಎಲ್ಲಾ ಸಮುದಾಯಗಳಿಂದ ದೂರ ಮಾಡಿ, ಅವರ ವಿಚಾರಗಳನ್ನು ಸಾಮಾನ್ಯರಿಗೆ ತಲುಪದಂತೆ ಈ ವ್ಯವಸ್ಥೆ ಷಡ್ಯಂತ್ರ ನಡೆಸಿತ್ತು ಅದು ಸಾಧ್ಯವಾಗದಿದ್ದಾಗ ವರನ್ನ ದಲಿತ ನಾಯಕ ಎಂದು ಬಿಂಬಿಸಲಾಯಿತು’ ಎಂದು ಚಿಂತಕ ಮತ್ತು ಹಿಂದುಳಿದ ವರ್ಗದ ಯುವ ಹೋರಾಟಗಾರ ಲೋಹಿತ್ ನಾಯ್ಕ ತೀರ್ಥಹಳ್ಳಿಯಲ್ಲಿ ನಡೆದ BAMCEF ನ south india half yearly national convention ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು “ಬಾಬಾ ಸಾಹೇಬರನ್ನು ಓಬಿಸಿ ಸಮುದಾಯ ಸರಿಯಾಗಿ ಅರ್ಥಮಾಡಿಕೊಳ್ಳಲಿಲ್ಲ. ಬಾಬಾ ಸಾಹೇಬರು ನೆಹರು ಅವರ ಕ್ಯಾಬಿನೆಟ್ ಗೆ ರಾಜೀನಾಮೆ ಕೊಟ್ಟಿದ್ದು ಹಿಂದೂ ಕೋಡ್ ಬಿಲ್ ಒಂದು ಕಾರಣ ವಾದರೆ ಎರಡನೆಯ ಕಾರಣ OBC ಕಮಿಷನ್ ನ ಅನುಷ್ಠಾನ ಆಗದ ಕಾರಣಕ್ಕೆ. ಬಾಬಾ ಸಾಹೇಬರು ಆರ್ಟಿಕಲ್ 15 /4, 16/4 ಮತ್ತು 340 ನ್ನು ಸಂವಿಧಾನದಲ್ಲಿ ಕಾರಣಕ್ಕೆ ಮತ್ತು ಬಾಬಾ ಸಾಹೇಬರು ಕಟ್ಟಿದ ಚಳುವಳಿಯನ್ನು ಮುನ್ನಡೆಸಿದ ಮಾನ್ಯವರ್ ಕಾಂಶಿರಾಂ ಅವರ ಕಾರಣಕ್ಕೆ ಇಂದು ಓಬಿಸಿ ಸಮಾಜ 27% ಮೀಸಲಾತಿಯನ್ನು ಅನುಭವಿಸುತ್ತಿದೆ. ಆದರೆ ಓಬಿಸಿ ಸಮಾಜ ಸಂವಿಧಾನ ಉಳಿಸುವ ಅಥವಾ ಮೀಸಲಾತಿ ಉಳಿಸುವ ಹೋರಾಟಕ್ಕೆ ಕೈ ಜೋಡಿಸುವುದು ವಿರಳ. ಇದು ನಮ್ಮ ಸಮಾಜದ ವಿಪರ್ಯಾಸ ತಿಳಿಸಿ Bamcef ನಂತಹ ಚಳುವಳಿ ಬಾಬಾ ಸಾಹೆಬರ ವಿಚಾರ ಮತ್ತು ಹೋರಾಟವನ್ನ ಸರ್ವರಿಗೂ ತಲುಪಿಸುವ ಕೆಲಸ ಮಾಡುವ ಜೊತೆಗೆ ಈ ನೆಲದ ಮೂಲ ನಿವಾಸಿಗಳ ಹಕ್ಕಿನ ಹೋರಾಟ ಕಟ್ಟುತ್ತಿದೆ. ಬಹುಜನರ ಹಕ್ಕುಗಳ ಬಗ್ಗೆ ಮತ್ತು ಸಮಗ್ರ ಅಭಿವೃದ್ಧಿಯ ಬಗ್ಗೆ ದ್ವನಿ ಎತ್ತುವ ಇಂಥಹ ಸಂಘಟನೆಗಳಿಗೆ ಶಕ್ತಿ ತುಂಬುವ ಅಗತ್ಯವಿದೆ. ಎಂದು ಹೇಳಿದ ಅವರು ಬಹುಜನ ಚಳುವಳಿ ನಾರಾಯಣ ಗುರುಗಳ ಸಂದೇಶವನ್ನು ಅಳವಡಿಸಿಕೊಂಡು ಮುನ್ನೆಡೆದರೆ ಯಶಸ್ಸು ಸಾಧ್ಯ ಹುಚ್ಚಾಸ್ಪತ್ರೆಗೆ ಯಂತಿದ್ದ ಕೆರಳವನ್ನು ಸರಿದಾರಿಗೆ ತಂದ ಸಂತನ ಸಂದೇಶ ನಮಗೆ ಮಾರ್ಗದರ್ಶವಾಗಲಿ ಎಂದರು.
IMPA ಮುಖ್ಯಸ್ಥರಾದ ಡಾ. ಭಾನುಪ್ರಕಾಶ್ ಉದ್ಘಾಟಿಸಿದರು, ಕಾರ್ಯಕ್ರಮದಲ್ಲಿ BAMCEF ನ ಮುಖ್ಯಸ್ಥ ವಿಲಾಸ್ ಕಾರತ್, ಕೇರಳದ ವಸ್ತುವಾರಿ ತೆಲಂಗಾಣದ ವಸ್ತುವಾರಿ,ಶಿವಮೊಗ್ಗ ವಕೀಲ ಸಂಘದ ಅಧ್ಯಕ್ಷರಾದ
ಬಿ ಗಿ ಶಿವಮೂರ್ತಿ, ಸುಧೀರ್ ನಾಗ್, ಅಬ್ದುಲ್ ಅಜೀಜ್ ಮುಂತಾದ ಸಂಘಟನೆಯ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಪಾವೂರು ಉಳಿಯ ದ್ವೀಪದಲ್ಲಿ ಅಕ್ರಮ ಮರಳುಗಾರಿಕೆ ಶಾಶ್ವತವಾಗಿ ತಡೆಯಲು ಹಾಗೂ ದ್ವೀಪವಾಸಿಗಳ ಬದುಕಿನ ರಕ್ಷಣೆಗೆ ಒತ್ತಾಯಿಸಿ ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ್(ರಿ)ಸಮಾನ ಮನಸ್ಕ ಸಂಘಟನೆಗಳಿಂದ ಜಿಲ್ಲಾಧಿಕಾರಿಗಳ ಭೇಟಿ
ಪಾವೂರು ಉಳಿಯ ದ್ವೀಪದಲ್ಲಿ ಅಕ್ರಮ ಮರಳುಗಾರಿಕೆಯನ್ನು ಶಾಶ್ವತವಾಗಿ ತಡೆಯಲು ಹಾಗೂ ದ್ವೀಪವಾಸಿಗಳ ಬದುಕಿನ ರಕ್ಷಣೆಗೆ ಒತ್ತಾಯಿಸಿ ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ್(ರಿ) ಮತ್ತುಸಮಾನ ಮನಸ್ಕ ಸಂಘಟನೆಗಳಿಂದ ಜಿಲ್ಲಾಧಿಕಾರಿಗಳ ಭೇಟಿ
ಪಾವೂರು ಉಳಿಯ ದ್ವೀಪದಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯನ್ನು ಶಾಶ್ವತವಾಗಿ ತಡೆಗಟ್ಟಬೇಕು ಹಾಗೂ ಅಲ್ಲಿನ ದ್ವೀಪವಾಸಿಗಳ ಬದುಕನ್ನು ರಕ್ಷಿಸಬೇಕೆಂದು ಒತ್ತಾಯಿಸಿ ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ್(ರಿ) ಹಾಗೂ ದ.ಕ.ಜಿಲ್ಲಾ ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆಯ ಆಶ್ರಯದಲ್ಲಿ ಇಂದು(24-06-2024) ದ.ಕ.ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿಯನ್ನು ಅರ್ಪಿಸಲಾಯಿತು.
ಉಳ್ಳಾಲ ತಾಲೂಕು, ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಪಾವೂರು ಉಳಿಯ ದ್ವೀಪ(ಕುದ್ರು) ದಲ್ಲಿ ಯಾವುದೇ ತರಹದ ಮರಳುಗಾರಿಕೆಗೆ ಅನುಮತಿ ಇಲ್ಲದಿದ್ದರೂ ಬಲಾಢ್ಯ ಮರಳು ಮಾಫಿಯಾ ಅಕ್ರಮವಾಗಿ ಮರಳುಗಾರಿಕೆ ವ್ಯಾಪಕವಾಗಿ ನಡೆಸುತ್ತಿರುವುದರಿಂದ ಇಡೀ ಉಳಿಯ ದ್ವೀಪ ಕೊಚ್ಚಿಹೋಗುವ ಭೀತಿಗೆ ಗುರಿಯಾಗಿದೆ.ಸುಮಾರು 55 ಕುಟುಂಬಗಳು ಹಲವು ತಲೆಮಾರುಗಳಿಂದ ವಾಸ ಇರುವ, ಕಾಂಡ್ಲಾ ಜಾತಿಯ ಸಸ್ಯವರ್ಗಗಳಿರುವ ಪರಿಸರದ ದೃಷ್ಟಿಯಿಂದ ಅತಿ ಸೂಕ್ಷ್ಮ ವಾಗಿರುವ ಉಳಿಯ ದ್ಚೀಪವನ್ನು ರಕ್ಷಿಸಲು ತಕ್ಷಣದಿಂದಲೇ ಅಕ್ರಮ ಮರಳುಗಾರಿಕೆಗೆ ಪೂರ್ಣ ರೀತಿಯ ಕಡಿವಾಣ ಹಾಕಬೇಕು, ಈ ವರೆಗೆ ನಿಯಮಗಳನ್ನು ಪೂರ್ತಿ ಉಲ್ಲಂಘಿಸಿ ಅರ್ಧ ದ್ವೀಪವನ್ನೇ ಕಬಳಿಸಿರುವ ಅಕ್ರಮ ಮರಳುಗಾರಿಕೆಯ ಹಿಂದಿರುವ ಶಕ್ತಿಗಳನ್ನು ಬಯಲಿಗೆಳೆಯಲು ತನಿಖೆಗೆ ಆದೇಶಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪರಿಸರ ಇಲಾಖೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗಳು ಈ ದ್ವೀಪದಲ್ಲಿ ಸರ್ವೇ ನಡೆಸಿ “ಉಳಿಯ ದ್ವೀಪ (ಕುದ್ರು) ಪರಿಸರದ ದೃಷ್ಟಿಯಿಂದ ಅತಿ ಸೂಕ್ಷ್ಮ ಪ್ರದೇಶವಾಗಿದ್ದು, ಸಿಆರ್ ಜೆಡ್ – 1 ರಲ್ಲಿದೆ, ಕರಾವಳಿ ನಿಯಂತ್ರಣ ವಲಯ ಅಧಿಸೂಚನೆ 2011 ರಂತೆ ಇಲ್ಲಿ ಮರಳುಗಾರಿಕೆಗೆ ಅವಕಾಶ ಇರುವುದಿಲ್ಲ” ಎಂದು ಅಭಿಪ್ರಾಯ ಪಟ್ಟಿರುತ್ತದೆ. ಆದರೂ ಕಳೆದ ಎರಡು ದಶಕಗಳಿಂದ ಉಳಿಯ ಕುದ್ರುವಿನಲ್ಲಿ ಪೊಲೀಸ್ ಹಾಗೂ ವಿವಿಧ ಇಲಾಖೆಗಳು, ರಾಜಕೀಯ ಹಿತಾಸಕ್ತಿಗಳ ಬೆಂಬಲದೊಂದಿಗೆ ವ್ಯಾಪಕ ಪ್ರಮಾಣದಲ್ಲಿ ಮರಳು ದಂಧೆ ನಡೆಸುತ್ತಾ ಬಂದಿರುತ್ತಾರೆ. 2014 ರಲ್ಲಿ ಆಗಿನ ದ.ಕ. ಜಿಲ್ಲಾಧಿಕಾರಿ A B ಇಬ್ರಾಹಿಂ ರವರು ಅಕ್ರಮ ಮರಳುಗಾರಿಕೆ ಕುರಿತಾದ ಸತತ ದೂರಿನ ಹಿನ್ನಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿ ಆಗಿರುವ ಅನಾಹುತಗಳನ್ನು ಕಂಡು ದ್ವೀಪದ ಸುತ್ತಲ ಒಂದು ಕೀ ಮೀ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಮರಳುಗಾರಿಕೆ ನಿಷೇಧಿಸಿ 28.11.2014 ರಂದು ಆದೇಶ ಹೊರಡಿಸಿರುತ್ತಾರೆ.
ಆ ತರುವಾಯ ಒಂದಿಷ್ಟು ಕಾಲ ಸ್ಥಗಿತಗೊಂಡಿದ್ದ ಮರಳುಗಾರಿಕೆ ದಂಧೆ ಇತ್ತೀಚಿನ ವರ್ಷಗಳಲ್ಲಿ ಮತ್ತೆ ಆರಂಭಗೊಂಡಿದೆ. ಈಗಿನ ಒಂದೆರಡು ವರ್ಷಗಳಲ್ಲಿ ಉಳಿಯ ಕುದ್ರುವಿನ ಸುತ್ತಲೂ ದಿಬ್ಬದಂತಿದ್ದು ದ್ವೀಪದ ರಕ್ಷಾ ಕವಚದಂತಿರುವ ದಿಬ್ಬದಂತಹ ಭಾಗದಲ್ಲಿರುವ ಕಾಂಡ್ಲಾ ಜಾತಿಯ ಸಸ್ಯಗಳನ್ನು ಕಿತ್ತು ಹಾಕಿ ಅಲ್ಲಿಂದ ಹಾರೆ, ಪಿಕಾಸಿಗಳ ಮೂಲಕ ನೇರವಾಗಿ ಮರಳನ್ನು ದಂಧೆಕೋರರು ಕಬಳಿಸುತ್ತಿದ್ದಾರೆ. ಈ ದಂಧೆಗೆ ಸ್ಥಳೀಯ ಪೊಲೀಸ್ ಠಾಣೆಯ ಶ್ರೀ ರಕ್ಷೆಯೂ ಇರುತ್ತದೆ. ದೂರು ನೀಡಿದಲ್ಲಿ ದೂರು ನೀಡಿದವರ ಪೂರ್ತಿ ವಿವರಗಳನ್ನು ಪೊಲೀಸರೇ ದಂಧೆಕೋರರಿಗೆ ತಲುಪಿಸುತ್ತಾರೆ.ಈ ರೀತಿಯ ಮರಳುಗಾರಿಕೆಯಿಂದ ಈಗಾಗಲೆ ಕುದ್ರುವಿನ ಭೂಪ್ರದೇಶ ಅರ್ಧಕ್ಕಿಳಿದಿದೆ. ನದಿಯ ಪಾತ್ರ ಅಗಲ, ಆಳಗೊಂಡಿದ್ದು ನದಿ ನೀರು ಒಳಭಾಗಕ್ಕೆ ಹರಿಯುತ್ತಿದೆ. ರಭಸದ ನೆರೆ ನೀರಿನ ಸಂದರ್ಭ ಉಳಿದ ಭಾಗಗಳು ಸವೆಯುವ ಸಾಧ್ಯತೆಗಳಿವೆ. ಹೀಗೆಯೆ ಮುಂದುವರಿದಲ್ಲಿ ಇಡೀ ಉಳಿಯ ದ್ವೀಪ ಕೆಲವೇ ವರ್ಷಗಳಲ್ಲಿ ಕಣ್ಮರೆಯಾಗುವ ಭೀತಿ ಎದುರಾಗಿದೆ ಎಂದು ಉಭಯ ಸಂಘಟನೆಗಳ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ.
ನಿಯೋಗದಲ್ಲಿ ಕೆಥೊಲಿಕ್ ಸಭಾದ ಅಧ್ಯಕ್ಷರಾದ ಆಲ್ವಿನ್ ಡಿಸೋಜ, ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆಯ ಸಂಚಾಲಕರಾದ ಮುನೀರ್ ಕಾಟಿಪಳ್ಳ, ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋ ವಿವಿಧ ಸಂಘಟನೆಗಳ ಮುಖಂಡರಾದ ಮಂಜುಳಾ ನಾಯಕ್, ಬಿ.ಶೇಖರ್,ಸುನಿಲ್ ಕುಮಾರ್ ಬಜಾಲ್,ಸಂತೋಷ್ ಬಜಾಲ್, ಸ್ಟಾನಿ ಲೋಬೋ,ಆಲ್ವಿನ್ ಮೊಂತೆರೋ,ಜೋನ್ ಡಿಸೋಜ,ಸ್ಟಾನ್ಲಿ ಡಿಕುನ್ನಾ ಹಾಗೂ ಸ್ಥಳೀಯರಾದ ಗಿಲ್ಬರ್ಟ್ ಡಿಸೋಜ, ಲವೀನಾ ಡಿಸೋಜ ಮುಂತಾದವರು ಉಪಸ್ಥಿತರಿದ್ದರು.
ಮುನೀರ್ ಕಾಟಿಪಳ್ಳ,ಸಂಚಾಲಕರು, ಸಮಾನ ಮನಸ್ಕ ಸಂಘಟನೆ ಗಳ ಜಂಟಿ ವೇದಿಕೆ, ಮಂಗಳೂರು.
ಗೋವಾ ಪಣಜಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಶಾಲೆಯ ವಿದ್ಯಾರ್ಥಿಗಳಿಗೆ ಸಹಾಯಧನ ಮತ್ತು ಶಾಲಾ ಬ್ಯಾಗ್ ವಿತರಣೆ / Distribution of Subsidy and School Bag to School Students of Government Primary School, Goa Panaji
ಪಣಜಿ : 3L ಮಿಷನ್ ಬಳಗದಿಂದ (ಬಡತನದಿಂದ ಅತೀ ಕೆಳಹಂತದ ಅಂದರೆ 3ನೇ ಹಂತದಲ್ಲಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಬಳಗ) 22 ಜೂನ್ 2024 ರಂದು, 3L ನ ಸ್ನೇಹಿತರು ಗೋವಾದ ಸರ್ಕಾರಿ ಪ್ರಾಥಮಿಕ ಶಾಲೆಯ ರಾಮದಾಸ್ ಪಣಜಿಯ 46 ವಿದ್ಯಾರ್ಥಿಗಳಿಗೆ ಪ್ರತಿ ವಿದ್ಯಾರ್ಥಿಗೆ 500/- ರೂಪಾಯಿ ಮೌಲ್ಯದ ಲೇಖನ ಸಾಮಗ್ರಿಗಳೊಂದಿಗೆ ಉತ್ತಮ ಗುಣಮಟ್ಟದ ಹೊಸ ಶಾಲಾ ಬ್ಯಾಗ್ಗಳನ್ನು ವಿತರಿಸಿದರು. ಜುಲೈ ಎರಡನೇ ವಾರದಲ್ಲಿ ಒಂದು ಜೊತೆ ಶಾಲಾ ಸಮವಸ್ತ್ರವನ್ನು ನೀಡಲಾಗುವುದು.
ಮೇಲಿನ ವಿದ್ಯಾರ್ಥಿಗಳಲ್ಲದೆ, ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ 26 ಬಡ 3L ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ಒದಗಿಸಲಾಗಿದೆ, ಕೆಲವು ಮಳೆ ಉಡುಪುಗಳು, ಪಾದರಕ್ಷೆಗಳು, ಶಾಲಾ ಸಮವಸ್ತ್ರ, ಶಾಲಾ ಬ್ಯಾಗ್ ಮತ್ತು ಶಾಲಾ ಶುಲ್ಕವನ್ನು ನೀಡಲಾಗಿದೆ. ಎಂದು 3L ಮಿಷನ್ನ ಸಂಯೋಜಕರಾದ ಧರ್ಮಗುರು ಪ್ರತಾಪಾನಂದ ನಾಯ್ಕ್, ಎಸ್.ಜೆ ಮಾಧ್ಯಮಕ್ಕೆ ತಿಳಿಸಿದ್ದಾರೆ.
Distribution of Subsidy and School Bag to School Students of Government Primary School, Goa Panaji
Panaji : From the 3L mission group (Helping Students from Below Poverty Line i.e. 3rd Level) On 22nd June 2024, Friends of 3L distributed new school bags of good quality with stationery worth rupees 500/- per student for 46 students of Government Primary School Ramdas Panaji, Goa. One pair of school uniform will be given to them in the second week of July.
Apart from the above students, 26 poor 3L students studying in private and government schools were provided with stationery, some rain clothes, footwear, school uniform, school bag and school fees.
That is Rev, Fr. Pratap Naik, Coordinator of 3L Mission, SJ told the media.
ಕರ್ನಾಟಕ ರಾಜ್ಯದಲ್ಲಿ ಸೇರಿ ಈ ರಾಜ್ಯಗಳಲ್ಲಿ ಮುಂದಿನ 5 ದಿನ ಭಾರೀ ಮಳೆ
ಬೆಂಗಳೂರು : ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮುಂದಿನ ಐದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದಲ್ಲದೆ, ಶಾಖದಿಂದ ತತ್ತರಿಸುತ್ತಿರುವ ಮಧ್ಯಪ್ರದೇಶ ಮತ್ತು ಛತ್ತೀಸ್ಗಢದಂತಹ ಅನೇಕ ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ನೈಋತ್ಯ ಮಾನ್ಸೂನ್ ಜೂನ್ 11 ರಂದು ಮುಂಜಾನೆ ಆಗಮಿಸಿದ ನಂತರ ಭಾನುವಾರ ದಕ್ಷಿಣ ಗುಜರಾತ್ನ ಕೆಲವು ಭಾಗಗಳಿಗೆ ಮುಂದುವರಿಯಿತು ಮತ್ತು ಹಲವಾರು ದಿನಗಳವರೆಗೆ ಸ್ಥಗಿತಗೊಂಡಿತ್ತು. ಐಎಂಡಿ ಈ ಮಾಹಿತಿಯನ್ನು ನೀಡಿದೆ. ಮುಂದಿನ 3-4 ದಿನಗಳಲ್ಲಿ ಗುಜರಾತ್ ಮತ್ತು ಪಕ್ಕದ ಉತ್ತರ ಅರೇಬಿಯನ್ ಸಮುದ್ರಕ್ಕೆ ಮಾನ್ಸೂನ್ ಮತ್ತಷ್ಟು ಮುಂದುವರಿಯಲು ಪರಿಸ್ಥಿತಿಗಳು ಅನುಕೂಲಕರವಾಗಿವೆ ಎಂದು ಐಎಂಡಿ ತನ್ನ ಮುನ್ಸೂಚನೆಯಲ್ಲಿ ತಿಳಿಸಿದೆ.
ಕರ್ನಾಟಕದ ಈ ಜಿಲ್ಲೆಗಳಲ್ಲಿ ಮಳೆ!
ರಾಜಧಾನಿ ಬೆಂಗಳೂರು ಸೇರಿದಂತೆ ಉಡುಪಿ,ಮಂಗಳೂರು, ಉತ್ತರ ಕನ್ನಡ, ವಿಜಯಪುರ & ಕಲಬುರಗಿ, ರಾಯಚೂರು, ಯಾದಗಿರಿ, ಬೀದರ್, ಬಾಗಲಕೋಟೆ, ಬೆಳಗಾವಿ & ಬಳ್ಳಾರಿ, ಕೊಪ್ಪಳ, ಧಾರವಾಡ, ಗದಗ ಜಿಲ್ಲೆಗಳಲ್ಲೂ ಮಳೆ ಅಬ್ಬರಿಸಲಿದೆ. ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ಮಳೆ ಭರ್ಜರಿ ಅಬ್ಬರ ತೋರಿಸಲಿದ್ದು, ಹೀಗಾಗಿ ಉಡುಪಿ & ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಎಚ್ಚರಿಕೆ ವಹಿಸಲು ತಿಳಿಸಲಾಗಿದೆ. ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು ಸೇರಿ , ಚಾಮರಾಜನಗರ, ಮಂಡ್ಯ, ತುಮಕೂರು, ಹಾಸನ ಜಿಲ್ಲೆಯ ಬಹುತೇಕ ಭಾಗದಲ್ಲಿ ಭರ್ಜರಿ ಮಳೆ ಆಗಲಿದೆ. ಈ ಮೂಲಕ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸುವುದು ಗ್ಯಾರಂಟಿ ಆಗಿದೆ.
ರಷ್ಯಾದಲ್ಲಿ ಬಂದೂಕುಧಾರಿಗಳಿಂದ ಚರ್ಚ್ಗಳ ಮೇಲೆ ದಾಳಿ – ಧರ್ಮಗುರು, ನಾಗರಿಕರು ಹಾಗೂ ಪೊಲೀಸ್ ಅಧಿಕಾರಿಗಳ ಹತ್ಯೆ!
ಮಾಸ್ಕೋ: ರಷ್ಯಾದ ಡಾಗೆಸ್ತಾನ್ನಲ್ಲಿ ಅಪರಿಚಿತ ಬಂಧೂಕುದಾರಿಗಳು ಸಿನಗಾಗ್, ಆರ್ಥೊಡಾಕ್ಸ್ ಚರ್ಚ್ಗಳು ಹಾಗೂ ಪೊಲೀಸ್ ಪೋಸ್ಟ್ನಲ್ಲಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಆರ್ಥೊಡಾಕ್ಸ್ ಚರ್ಚ್ನ ಧರ್ಮಗುರು, ನಾಗರಿಕರು ಹಾಗೂ ಕನಿಷ್ಠ 15 ಮಂದಿ ಪೊಲೀಸ್ ಅಧಿಕಾರಿಗಳನ್ನು ಹತ್ಯೆಗೈದಿರುವ ಘಟನೆ ನಡೆದಿದೆ.
ಕಳೆದ ಮೂರ್ನಾಲ್ಕು ತಿಂಗಳ ಹಿಂದೆಯಷ್ಟೇ ಮಾಸ್ಕೋ ಬಳಿಯ ಸಂಗೀತ ಕಛೇರಿ ಹಾಲ್ ಮೇಲೆ ಇಸ್ಲಾಮಿಕ್ ಸ್ಟೇಟ್ ನಡೆಸಿದ ದಾಳಿಯಲ್ಲಿ 145 ಜನ ಸಾವನ್ನಪ್ಪಿದ್ದರು. ಇದೀಗ ಉತ್ತರ ಕಾಕಸಸ್ನ ಮಖಚ್ಕಲಾ ಮತ್ತು ಡರ್ಬೆಂಟ್ ನಗರಗಳಾದ್ಯಂತ ಅಂತಹದ್ದೇ ದಾಳಿಗಳು ಸಂಭವಿಸಿದೆ. ದಾಳಿಯ ಕೆಲವೇ ಸಮಯದಲ್ಲಿ ಮಖಚ್ಕಲಾದಲ್ಲಿ ನಾಲ್ವರು ಮತ್ತು ಡರ್ಬೆಂಟ್ನಲ್ಲಿ ಇಬ್ಬರು ಬಂದೂಕುಧಾರಿಗಳನ್ನು ಪೊಲೀಸರು ಹೊಡೆದುರುಳಿಸಿದ್ದಾರೆ.
ಕುಂದಾಪುರದಲ್ಲಿ ಶ್ರೀಸಾಮನ್ಯರ ದಿನಾಚರಣೆ ; ಕಥೊಲಿಕ್ ಸಭಾದಿಂದ ಸಾಹಿತಿ ಪತ್ರಕರ್ತ, ಸಂಗೀತಗಾರನಿಗೆ ಸನ್ಮಾನ
ಕುಂದಾಪುರ, ಜೂ 23: ಕುಂದಾಪುರ ಹೋಲಿ ರೋಜರಿ ಚರ್ಚಿನ, ಕಥೊಲಿಕ್ ಸಭಾ ಘಟಕ ಮತ್ತು ಶ್ರೀಸಾಮಾನ್ಯರ ಆಯೋಗದಿಂದ ಶ್ರೀಸಾಮನ್ಯರ ದಿನವನ್ನು ಆಚರಿಸಲಾಯಿತು. ಮೊದಲಿಗೆ ಅ|ವಂ| ಪಾವ್ಲ್ ರೇಗೊ ನೇತ್ರತ್ವದಲ್ಲಿ ಚರ್ಚಿನಲ್ಲಿ ಕ್ರತ್ಞತಾ ಬಲಿದಾನವನ್ನು ಅರ್ಪಿಅಸಾಲಾಯಿತು.
ನಂತರ ನೆಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕಥೊಲಿಕ್ ಸಭಾದ ಅಧ್ಯಾತ್ಮಿಕ ನಿರ್ದೇಶಕರಾದ ಅ|ವಂ| ಪಾವ್ಲ್ ರೇಗೊ ಇವರು ಭಾಗವಹಿಸಿ ಕ್ರೈಸ್ತ ಸಮಾಜದಲ್ಲಿ ಪತ್ರಕರ್ತರಾಗಿ ಸೇವೆ ನೀಡುತ್ತಿರುವ ಹಾಗೇಯೆ ಕೊಂಕಣಿ ಮತ್ತು ಕನ್ನಡದಲ್ಲಿ ಸಾಹಿತ್ಯ, ನಾಟಕಗಳನ್ನು ರಚಿಸಿ ಹೆಸರುವಾಸಿಯಾದ ಬರ್ನಾಡ್ ಡಿಕೋಸ್ತಾ,ಕುಂದಾಪುರ. ಮತ್ತು ಕೊಂಕಣಿಯ ಹಲವಾರು ಸಂಗೀತ ರಸಮಂಜರಿ ಕಾರ್ಯಕ್ರಮ ನೀಡಿದ, ಹಲವಾರು ಸಂಗೀತ ಸಿ.ಡಿ. ಗಳನ್ನು ಹೊರತೆಗೆದ ಹೆಸರುವಾಸಿ ಸಂಗೀತಗಾರನಾದ ವಿಲ್ಸನ್ ಒಲಿವೆರಾ ಪಡುಕೋಣೆ ಇವರುಗಳ ಸೇವೆಯನ್ನು ಪರಿಗಣಿಸಿ ಶ್ರೀಸಾನ್ಯರ ದಿನಾಚರಣೆ ಅಂಗವಾಗಿ ಶಾಲು, ಹಾರ, ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು.
ಇವರುಗಳನ್ನು ಸನ್ಮಾನಿಸಿದ ಅ|ವಂ| ಪಾವ್ಲ್ ರೇಗೊ ಮಾತನಾಡಿ “ಬರ್ನಾಡ್ ಡಿಕೋಸ್ತಾ ತುಂಬಾ ಸಾಹಿತ್ಯ ರಚಿಸಿದ್ದಾರೆ, ನಮ್ಮ ಮಧ್ಯೆ ಇಂದು ಪತ್ರಕರ್ತನಾಗಿ ನಮ್ಮ ಚಟುವಟಿಕೆಗಳನ್ನು ಸುದ್ದಿ ಪ್ರಕಟಿಸುತ್ತಾರೆ, ಅಲ್ಲದೆ ಕನ್ನಡ ದಿನಪತ್ರಿಕೆಗಳಲ್ಲಿ ಬರುವಂತೆ ಶ್ರಮಿಸುತ್ತಾರೆ, ಅವರ ಸೇವೆ ನಿಸ್ವಾರ್ಥ ಮತ್ತು ಅಮೂಲ್ಯವಾಗಿದೆ, ಹಾಗೇಯೆ ಸಂಗೀತಗಾರರಾದ ವಿಲ್ಸನ್ ಬಹಳ ಹೆಸರುವಾಸಿ, ಅವರ ಸಂಗೀತ ರಸಮಂಜರಿ ಎಲ್ಲ ಕಡೆ ನಡೆದಿದೆ, ¸ ಅವರಿಗೆ ಉತ್ತಮ ಸ್ವರವಿದೆ, ಇವತ್ತು ಸನ್ಮಾನಿಸಲ್ಪಟ್ಟ ಈ ಇಬ್ಬರೂ ಪ್ರತಿಭಾವಂತರು, ಇವರು ನಮ್ಮ ಚರ್ಚಿಗೆ ಕಣ್ಮಣಿಗಳು ನಕ್ಷತ್ರಗಳು’ ಎಂದು ಹೇಳುತ್ತಾ ನಮ್ಮ ಕಥೊಲಿಕ್ ಸಭೆಯು ಸಾಕಷ್ಟು ಉತ್ತಮ ಕಾರ್ಯಗಳನ್ನು ಸೇವೆಯನ್ನು ನೀಡುತ್ತದೆ ಎಂದು ಶ್ಲಾಘಿಸಿದರು.
ಸನ್ಮಾನಿತರಿಬ್ಬರೂ ತಮ್ಮ ಆನ್ನಿಸಿಕೆಗಳನ್ನು ವ್ಯಕ್ತಪಡಿಸಿದರು. ಸನ್ಮಾನಿತರನ್ನು ಪಾಲನ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ ಮತ್ತು ಸರ್ವ ಆಯೋಗಗಳ ಸಂಚಾಲಕರಾದ ಪ್ರೇಮ ಡಿಕುನ್ಹಾ ಪರಿಚಯಿಸಿದರು. ಚರ್ಚಿನ ಉಪಾಧ್ಯಕ್ಷರಾದ ಶಾಲೆಟ್ ರೆಬೆಲ್ಲೊ ಶುಭ ಕೋರಿದರು.
ಕಥೊಲಿಕ್ ಸಭಾ ಅಧ್ಯಕ್ಷರಾದ ವಿಲ್ಸನ್ ಡಿಆಲ್ಮೇಡಾ ಸ್ವಾಗತಿಸಿದರು, ಶ್ರೀ ಸಾಮಾನ್ಯ ಆಯೋಗದ ಸಂಚಾಲಕ ವಾಲ್ಟರ್ ಡಿಸೋಜಾ, ವೇದಿಕೆಯಲ್ಲಿದ್ದರು, ಕಥೊಲಿಕ್ ಸಭಾದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ಶಾಂತಿ ಪಿಂಟೊ ವಂದಿಸಿದರು, ಡಾ|ಸೋನಿ ಕೋಸ್ತಾ ನಿರೂಪಿಸಿದರು.
ಪಡುಕೋಣೆ – ಕೆಥೋಲಿಕ್ ಸಭಾ ಹಾಗೂ ಐ.ಸಿ.ವೈಮ್, ಸಹಭಾಗಿತ್ವದಲ್ಲಿ ಅಪ್ಪಂದಿರ ದಿನಾಚರಣೆ
ಜೂನ್ 16 ರಂದು ಸಂತ ಅಂತೋನಿ ಪಡುಕೋಣೆಯಲ್ಲಿ ಕೆಥೋಲಿಕ್ ಸಭಾ ಹಾಗೂ ಐ.ಸಿ.ವೈಮ್, ಪಡುಕೋಣೆ ಸಹಭಾಗಿತ್ವದಲ್ಲಿ ಅಪ್ಪಂದಿರ ದಿನಾಚರಣೆ ಆಚರಿಸಲಾಯಿತು. ಎಲ್ಲಾ ಅಪ್ಪಂದಿರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು ಅಧ್ಯಕ್ಷತೆಯನ್ನು ಧರ್ಮಗುರು ವಂದನೀಯ ಫ್ರಾನ್ಸಿಸ್ ಕರ್ನೇಲಿಯೊ ವಹಿಸಿದ್ದರು. ಅವರು ತಂದೆಯು ತಮ್ಮ ಕುಟುಂಬಕ್ಕಾಗಿ ಎಷ್ಟೆಲ್ಲಾ ತ್ಯಾಗ ಮಾಡುತ್ತಾರೆ, ಮಕ್ಕಳ ಏಳಿಗೆಯಲ್ಲಿ ತನ್ನ ಯಶಸ್ಸನ್ನು ಬಯಸುತ್ತಾರೆ ಎಂದು ಹೇಳಿದರು. ಆರ್ಥಿಕವಾಗಿ ಹಿಂದುಳಿದ ಕೆಲವು ತಂದೆಯರ ಪರಿಶ್ರಮ ಮತ್ತು ಅವರ ಮಕ್ಕಳ ಸಾಧನೆಯನ್ನು ಗುರುತಿಸಿ ಅಭಿನಂದಿಸಿದರು. ಮುಖ್ಯ ಅತಿಥಿ ಶಾಂತಿ ಪಾಯಸ್ ಅಪ್ಪಂದಿರ ದಿನಾಚರಣೆ ಚರಿತ್ರೆ ಹಾಗೂ ಅವರ ಪಾತ್ರವನ್ನು ಕೊಂಡಾಡಿದರು.
ಸಭೆಯಲ್ಲಿ ಪಾಲನಾ ಮಂಡಳಿ ಉಪಾಧ್ಯಕ್ಷ ಕೆನಡಿ ಪಿರೇರಾ, ಕಾರ್ಯದರ್ಶಿ ಅಲೆಕ್ಸ್ ಆಂಟನಿ ಡಿಸೋಜ, ಆಯೋಗದ ಸಂಚಾಲಕ ವಿನ್ಸೆಂಟ್ ಡಿಸೋಜ, ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ಮರ್ಸಿ, ಕೆಥೋಲಿಕ್ ಸಭೆಯ ಅಧ್ಯಕ್ಷ ವಿನಯ್ ಡಿಆಲ್ಮೇಡ ವೇದಿಕೆಯಲ್ಲಿ ಉಪಸ್ಥಿತರಿದ್ದರು _ ಕಾರ್ಯಕ್ರಮದ ಬಳಿಕ ಆಟಗಳನ್ನು ಆಡಿಸಿ ಬಹುಮಾನ ವಿತರಿಸಲಾಯಿತು ,