ಕುಂದಾಪುರ, ಜೂ.13: ಕುಂದಾಪುರ ವಲಯದ ಹೊಸಂಗಡಿ ಸಮೀಪದ ಕೆರೆಕಟ್ಟೆ ಸಂತ ಅಂತೋನಿ ಪುಣ್ಯ ಕ್ಷೇತ್ರದ ವಾರ್ಷಿಕ ಮಹಾಹಬ್ಬವನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರ ನೇತ್ರತ್ವದಲ್ಲಿ ದಿವ್ಯ ಬಲಿದಾನವನ್ನು ಅರ್ಪಿಸುವ ಮೂಲಕ ಆಚರಿಸಲಾಯಿತು. ಈ ಹಬ್ಬವು ‘ನೀವು ತಪ್ಪದೇ ಪ್ರಾಥಿಸಿರಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಯಿತು. ಪ್ರಾರ್ಥನೆ ಒಂದು ಬಹಳ ಶಕ್ತಿದಾಯಕ ಅಸ್ತ್ರವಾಗಿದೆ, ಅದು ಸ್ವರ್ಗದ ದ್ವಾರಗಳನ್ನು ತೆರೆಯುವ ಕೀಲಿ ಕೈ ಆಗಿದೆ. ಆದರಿಂದ ತಪ್ಪದೆ ಪ್ರಾರ್ಥಿಸಿರಿ. ಎದೆ ಗುಂದದೆ ಪ್ರಾರ್ಥಿಸಿರಿ. ಪ್ರಾರ್ಥನೆಯ ಮೂಲಕ ನಾವು ದೇವರ ಸಾಮಿಪ್ಯ ಪಡೆಯೋಣ, ಅವಾಗ ದೇವರು ನಮ್ಮ ಅಗತ್ಯಕ್ಕೆ ತಕ್ಕಂತೆ ಪ್ರತಿಫಲ ಕೊಡುತ್ತಾನೆ. ನಮ್ಮ ಕೊರೀಕೆಗಳನ್ನು ಆಲಿಸುತ್ತಾನೆ. ಯೇಸು ಸ್ವಾಮಿಯು ತಾನು ಮಾಡಿದ ಎಲ್ಲ ಅದ್ಬುತಗಳ ಮೊದಲು, ಪ್ರಾರ್ಥಿಸುತ್ತಿದ್ದನು. ಸತ್ತವರನ್ನು ಜೀವಂತ ಮಾಡುವಾಗಲೂ, ರೋಗಿಗಳನ್ನು ಗುಣ ಪಡಿಸುವಾಗಲೂ, ತನ್ನ ಧರ್ಮದೂತರನ್ನು ಆಯ್ಕೆ ಮಾಡುವಾಗಲೂ ಪ್ರಾರ್ಥಿಸಿದ್ದನು. ನಿಮ್ಮ ನೆಚ್ಚಿನ ಸಂತ ಅಂತೋನಿಯವರು ಕೂಡ ಗಂಟೆ ಗಟ್ಟಲೆ ಪವಿತ್ರ ಪ್ರಸಾದದ ಮುಂದೆ ಮಂಡಿಯೂರಿ ಪ್ರಾಥಿಸುತಿದ್ದರು, ಪ್ರಾರ್ಥನೇಯ ಮೂಲಕ ಅವರಿಗೆ ಸಿಕ್ಕ ಕ್ರಿಸ್ತಿ ಅನುಭವ ನಿಮ್ಮಲ್ಲಿ ಹಂಚಿಕೊಳ್ಳುತಿದ್ದರು” ಎನ್ನುತ್ತಾ “ನಮ್ಮ ಕುಟುಂಬಗಳು ಪ್ರಾರ್ಥನೇಯ ಕೇಂದ್ರಗಳಾಗಲಿ, ನಮ್ಮ ಮನೆಯೇ ಪ್ರಾರ್ಥನೇಯ ಶಾಲೆಗಳಾಗಲಿ, ಅಲ್ಲೆ ನಾವು ನಮ್ಮ ಪ್ರಾರ್ಥನೆಗಳನ್ನು ಕಲಿಯೋಣ, ನಮ್ಮ ಪೋಪ್ ಸ್ವಾಮಿ ಹೇಳುತ್ತಾರೆ, ನಮ್ಮ ಎಲ್ಲಾ ಮನೆ ಕುಟುಂಬಗಳಲ್ಲಿ ಒಂದು ದೇವಪೀಠ ಇರಲಿ (ಆಲ್ತಾರ್) ಅಲ್ಲಿ ನಾವು ಭಕ್ತಿಯಿಂದ ಪ್ರಾಥಿಸೋಣ, ನಾವು ಕ್ರೈಸ್ತರು ಪ್ರಾರ್ಥನೆ ಮತ್ತು ಕ್ರೈಸ್ತ ಜೀವನ ವಿಂಗಡಿಸಲಾಗದು ಪ್ರಾಥನೇಯ ಮೂಲಕ ನಾವು ಮುಕ್ತಿ ಪಡೆಯೋಣ ಎಂದು ಸಂದೇಶ ನೀಡಿದರು.
ಉಡುಪಿ ಧರ್ಮಪ್ರಾಂತ್ಯದ ಅ|ವಂ| ವಿಕಾರ್ ಜನರಲ್ ಅ|ವಂ|ಮೊನ್ಸಿಂಜ಼ೊರ್ ಫರ್ಡಿನಂಡ್ ಗೊನ್ಸಾಲ್ವಿಸ್ ದೇವರ ವಾಕ್ಯ ಪಟಿಸಿಸಿದರು. ನೂತನವಾಗಿ ಆಯ್ಕೆಯಾದ ಕುಂದಾಪುರ ವಲಯದ ಪ್ರಧಾನರು, ಭಾಗ್ಯವಂತೆ ರೋಜರಿ ಮಾತಾ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಪಾವ್ಲ್ ರೇಗೊ, ಸಂತ ಅಂತೋನಿಯವರಿಗೆ ಸಮರ್ಪಿಸಲ್ಪಟ್ಟ ಇಗರ್ಜಿಗಳು ಸಾಕಷ್ಟಿವೆ, ಆದರೆ ಕೆರೆಕಟ್ಟೆ ಸಂತ ಅಂತೋನಿ ಪುಣ್ಯ ಕ್ಷೇತ್ರಗಳಲ್ಲಿ ಸೇರಿದ ಜನ ನೋಡಿದರೆ, ಇದೊಂದು ಅದ್ಬುತವೇ ಎಂದು ಕಾಣುತ್ತೀದೆ” ಎಂದು ತಿಳಿಸಿ ಹಬ್ಬದ ಶುಭಾಷಯಗಳನ್ನು ಕೋರಿದರು. ಸಂದೇಶ ನೀಡಿದರು.
ದಾನಿಗಳಿಗೆ, ಬಲಿಪೂಜೆ ನಿವೇದನೆ ಮಾಡಿಕೊಂಡವರಿಗೆ ಮುಂಬತ್ತಿ ನೀಡಿ ಗೌರವಿಸಲಾಯಿತು. ಆಗಮಿಸಿದ ಎಲ್ಲಾ ಭಕ್ತಾಧಿಗಳಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಈ ವಾರ್ಷಿಕ ಮಹಾಹಬ್ಬದ ಬಲಿದಾನದಲ್ಲಿ ಕುಂದಾಪುರ ವಲಯದ, ಹೊರ ವಲಯದ ಹಲವಾರು ಧರ್ಮಗುರುಗಳು ಕಾರವಾರ ಧರ್ಮಪ್ರಾಂತ್ಯದ ಧರ್ಮಗುರುಗಳು ಅತಿಥಿ ಧರ್ಮಗುರುಗಳು ಮತ್ತು ಧರ್ಮ ಭಗಿನಿಯರು ಭಾಗಿಯಾಗಿದ್ದು ಭಕ್ತಾಧಿಗಳು ಕೂಡ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು. ಪಡುಕೋಣೆ ಚರ್ಚಿನ ಗಾಯನ ಮಂಡಳಿ ಭಕ್ತಿ ಗಾಯನಗಳನ್ನು ಹಾಡಿತು.
ಕೆರೆಕಟ್ಟೆ ಸಂತ ಅಂತೋನಿ ಪುಣ್ಯ ಕ್ಷೇತ್ರದ ರೆಕ್ಟರ್ ವಂ|ಸುನೀಲ್ ವೇಗಸ್ ಮಾತನಾಡಿ “ಅನಾಥರಿಗೆ ನೆಚ್ಚಿನವರಾದ ್ ಸಂತ ಅಂತೋನಿಯವ ಹೆಸರಿನಲ್ಲಿ ಕಳೆದ ವಷ 60 ಜನ ಅನಾಥರಿಗೆ ಧರ್ಮಾರ್ಥ ಊಟ ಉಪಚಾರ, ನೆಲವು ನೀಡುವ ಅನಾಥಲಯವನ್ನು ಆರಂಭಿಸಲು, ಕಳೆದ ವರ್ಷ ಶಿಲಾನ್ಯಾಸ ಮಾಡಿದ್ದು, ಕೆಲಸ ಆರಂಭವಾಗಿದೆ, ಇದು 6 ಕೋಟಿ ಅಂದಾಜಿನ ಯೋಜನೆಯಾಗಿದ್ದು, ಈಗಲು ನಮಗೆ ಉದಾರ ದಾನಿಗಳ ಸಹಕರ ಅಗತ್ಯವಿದೆಯೆಂದು, ತಿಳಿಸಿ ಎಲ್ಲರಿಗೂ ವಂದನೆಗಳನ್ನು ಸಲ್ಲಿಸಿದರು.
Month: June 2024
ಗಿಳಿಯಾರು ಕುಶಲಹೆಗ್ಡೆ ಸ್ಮಾರಕ ಟ್ರಸ್ಟ್ – ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಗೌರವಿಸಲಾಗುವುದು ವಿವರಕ್ಕೆ ನೋಡಿ
ಕುಂದಾಪುರ, ಬೈಂದೂರು ತಾಲ್ಲೂಕಿನವರಾಗಿದು, ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಯಲ್ಲಿ ರಾಜ್ಯಮಟ್ಟದಲ್ಲಿ 10 ರೊಳಗೆ ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು, ಗಿಳಿಯಾರು ಕುಶಲಹೆಗ್ಡೆ ಸ್ಮಾರಕ ಟ್ರಸ್ಟ್ ಪರವಾಗಿ ಜೂನ್ 19 ರಂದು ಗೌರವಿಸಲಾಗುತ್ತದೆ.
ಸಾಧಕ ವಿದ್ಯಾರ್ಥಿಗಳು ತಮ್ಮ ಭಾವಚಿತ್ರ, ರ್ಯಾಂಕ್ ವಿವರದ ದಾಖಲೆಗಳನ್ನು ಯು.ಎಸ್.ಶೆಣೈ (9448120765), “ಕುಂದಪ್ರಭ” ನಾರಾಯಣಗುರು ಕಾಂಪೆಕ್ಸ್, ಕುಂದಾಪುರ ಇವರಿಗೆ ಕಳುಹಿಸಿಕೊಡಬೇಕೆಂದು ತಿಳಿಸಲಾಗಿದೆ.
ಕುವೈಟ್: ಭಾರತೀಯ ಕಂಪನಿ ಉದ್ಯೋಗಿಗಳಿದ್ದ ಕಟ್ಟಡಕ್ಕೆ ಬೆಂಕಿ; ಕನಿಷ್ಠ 41 ಸಜೀವ ದಹನವಾಗಿದ್ದಾರೆ
ದೆಹಲಿ: ಕುವೈಟ್ ನ ಮಂಗಾಫ ನಗರದಲ್ಲಿ ಕಟ್ಟಡ ಒಂದಕ್ಕೆ ಬೆಂಕಿ ತಾಗಿ ಹಲವರು ಸಜೀವ ದಹನವಾದ ಕರಾಳ ಘಟನೆ ನಡೆದಿದೆ. ಕೇರಳ ಮೂಲದವರ ಒಡೆತನದ ಫ್ಲ್ಯಾಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಲ್-ಅಹ್ಮದಿ ಗವರ್ನರೇಟ್ನ ಮಂಗಾಫ್ ಬ್ಲಾಕನಲ್ಲಿರುವ ಫ್ಲ್ಯಾಟ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಮುಂಜಾನೆ 4 ಗಂಟೆಗೆ ಬೆಂಕಿ ಉರಿಯಲು ಆರಂಭಸಿದ್ದು ಕೆಲವೆದ ಕ್ಷಣಗಳಲ್ಲಿ ಆ ಕಟ್ಟಡ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಭಾರತೀಯರು ಸೇರಿದಂತೆ ಅನೇಕ ಜನರು ಅಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಈ ಅವಘಡದಲ್ಲಿ ಭಾರತೀಯರು ಸೇರಿದಂತೆ ಕನಿಷ್ಠ 41 ಜನರು ಸಾವನ್ನಪ್ಪಿದ್ದಾರೆ ಎಂದು ದೇಶದ ಅಧಿಕೃತ ಸುದ್ದಿ ಸಂಸ್ಥೆ ವರದಿ ಮಾಡಿದೆ.ಬೆಂಕಿಯಲ್ಲಿ ಸಾವನ್ನಪ್ಪಿದವರ ಪಯ್ಕಿ ನಾಲ್ವರು ಭಾರತೀಯರು ಎಂದು ವರದಿಯಾಗಿದೆ. ಗಾಯಗೊಂಡವರಲ್ಲಿ ಕನಿಷ್ಠ 15 ಜನರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಕುವೈಟ್ ಪೊಲೀಸ್ ಅಧಿಕಾರಿ ಈದ್ ರಶೀದ್ ಹಮಾಸ್ ಕುವೈಟ್ ಮಾಹಿತಿ ಸಚಿವಾಲಯಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಅಂಕಿಅಂಶಗಳನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ.
ಜಾಗತಿಕ ತಾಪಮಾನದ ಬಗ್ಗೆ ಎಚ್ಚೆತ್ತುಕೊಂಡು ಜಿಲ್ಲೆಯನ್ನು ಹಸಿರು ಹೊದಿಕೆಯಂತಾಗಿಸಲು ಸಾರ್ವಜನಿಕರು ಸಹಕಾರಿಸಬೇಕಾಗಿದೆ:ರ ಜಿಲ್ಲಾಧಿಕಾರಿ ಅಕ್ರಂ ಪಾಷಾ
ಕೋಲಾರ: ಜಾಗತಿಕ ತಾಪಮಾನದ ಬಗ್ಗೆ ಎಚ್ಚೆತ್ತುಕೊಂಡು ಜಿಲ್ಲೆಯನ್ನು ಹಸಿರು ಹೊದಿಕೆಯಂತಾಗಿಸಲು ಸಾರ್ವಜನಿಕರು ಸಹಕಾರಿಸಬೇಕಾಗಿದೆ. ಪರಿಸರದ ರಕ್ಷಣೆ ಮಾಡಿದಾಗ ಮಾಡಿದಾಗ ಮಾತ್ರ ಮನುಕುಲ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯ ಎಂದು ಕೋಲಾರ ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷಾ ರವರು ಅಭಿಪ್ರಾಯಪಟ್ಟಿದ್ದಾರೆ.
ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಗಳ ಆವರಣದಲ್ಲಿ ಕದಂಬ ಸೇವಾ ಫೌಂಡೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತೀ ದಿನ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕದಂಬ ಸೇವಾ ಫೌಂಡೇಷನ್ ವತಿಯಿಂದ ಪ್ರತೀ ದಿನ ಕನಿಷ್ಠ ಒಂದು ಗಿಡ ನೆಡುವ ಸಂಕಲ್ಪದೊಂದಿಗೆ ದಿನಕ್ಕೊಂದು ಗಿಡ ನೆಡುವ ಅಭಿಯಾನ ರೂಪಿಸಲಾಗಿದ್ದು,ಪ್ರಮುಖವಾಗಿ ಸರ್ಕಾರಿ ಕಚೇರಿಗಳು,ವಸತಿ ಶಾಲೆಗಳು ಮತ್ತು ಶಾಲೆಗಳ ಬಳಿ ಗಿಡಗಳನ್ನು ನೆಡುವ ಕಾರ್ಯಕ್ರಮಗಳನ್ನು ಮಾಡುತ್ತಿದ್ದು,ಪರಿಸರ ಉಳಿಸುವ ನಿಟ್ಟಿನಲ್ಲಿ ಇದೊಂದು ದಿಟ್ಟ ಹೆಜ್ಜೆಯಾಗಿದೆ. ಜಿಲ್ಲೆಯಲ್ಲಿನ ಸೇವಾ ಸಂಸ್ಥೆಗಳು ಸಹಾ ಇದೇ ರೀತಿಯಲ್ಲಿ ಜಿಲ್ಲಾಡಳಿತದ ಜೊತೆಗೂಡಿದರೆ ಉತ್ತಮವಾದ ಪರಿಸರ ನಿರ್ಮಾಣ ಮಾಡಬಹುದು.ಇತ್ತೀಚಿಗೆ ಜಾಗತಿಕ ತಾಪಮಾನ ಬಹಳಷ್ಟು ಏರಿಕೆಯಾಗಿದ್ದು,ಅದನ್ನು ನಿಯಂತ್ರಿಸಲು ಕದಂಬ ಸೇವಾ ಫೌಂಡೇಷನ್ ಸಂಸ್ಥೆ ಮಾಡಿರುವ ಈ ಕಾರ್ಯ ತುಂಬಾ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.
ಜಿಲ್ಲೆಯ ಬೇರೆ ಬೇರೆ ಸಂಘ ಸಂಸ್ಥೆಗಳನ್ನು ತೊಡಗಿಸಿಕೊಂಡು ಪರಿಸರ ಸಂರಕ್ಷಣೆ,ಜಾಗತಿಕ ತಾಪಮಾನಗಳ ಬಗ್ಗೆ ಎಚ್ಚೆತ್ತುಕೊಳ್ಳುವುದರ ಜೊತೆಗೆ ಸಾರ್ವಜನಿಕರಿಗೆ ಜಾಗೃತಿಯನ್ನು ಮೂಡಿಸಿ,ಹೆಚ್ಚೆಚ್ಚು ಸಸಿಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆ ಮಾಡುವ ಮೂಲಕ ಕೋಲಾರ ಜಿಲ್ಲೆಯನ್ನು ಹಸಿರು ಹೊದಿಕೆಯಂತಾಗಿಸಬೇಕು.ಈ ಕಾರ್ಯಕ್ಕೆ ಸಾರ್ವಜನಿಕರ ಸಹಕರಿಸಬೇಕೆಂದು ಮನವಿ ಮಾಡಿ ಕದಂಬ ಸೇವಾ ಫೌಂಡೇಷನ್ ನ ಸಂಸ್ಥಾಪಕ ಅಧ್ಯಕ್ಷರಾದ ಹೊಲ್ಲಂಬಳ್ಳಿ ಶಿವು ಮತ್ತವರ ತಂಡ ಉತ್ತಮವಾದ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆಂದು ಅಭಿನಂದನೆ ಸಲ್ಲಿಸಿದರು,.
ಸೋಮವಾರ ತಹಶಿಲ್ದಾರ್ ಕಚೇರಿಯಿಂದ ಪ್ರಾರಂಭವಾಗಿ 2ನೇ ದಿನ ಜಿಲ್ಲಾಧಿಕಾರಿಗಳ ಆವರಣದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸುಮಾರು 50ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕರಾದ ನಾಗವೇಣಿ ಬಿ,ಜೆಎಚ್.ಎಂ ಚಂದ್ರಪ್ಪ,ಶ್ರೀನಿವಾಸಪುರ ತಹಶಿಲ್ದಾರರಾದ ಸುದೀಂದ್ರ ಉಪನಿರ್ದೇಕರಾದ ರಾಮಚಂದ್ರಪ್ಪ, ಕದಂಬ ಸೇವಾ ಫೌಂಡೇಷನ್ ನ ಸಂಸ್ಥಾಪಕ ಅಧ್ಯಕ್ಷರಾದ ಖಜಾಂಚಿ ನಂದಿನಿ ಆರ್, ಸಂಘಟನಾ ಕಾರ್ಯದರ್ಶಿಗಳಾದ ಆಕಾಶ್ ಮತ್ತು ಲಕ್ಷ್ಮೀ ಎಸ್,ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ನಳಿನಿಗೌಡ, ಗಿರೀಶ್, ಯಾರಂಗಟ್ಟ ಮುನಿರಾಜು ಮತ್ತಿತತರು ಹಾಜರಿದ್ದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರವರಿಗೆ ಉಡುಪಿಯಲ್ಲಿ ಅಭಿನಂದನೆ
ಉಡುಪಿ : 2ನೇ ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಐವನ್ ಡಿಸೋಜ ಇವರನ್ನು ಜೂ. 10ರಂದು ಉಡುಪಿ ಜಿಲ್ಲಾ ಕ್ರೈಸ್ತ ಸಮುದಾಯದವರು ಡಾನ್ ಬಾಸ್ಕೋ ಸಭಾಭವನದಲ್ಲಿ ಅಭಿನಂದಿಸಿದರು.
ಅಭಿನಂದನಾ ಭಾಷಣ ಮಾಡಿದ ಉಡುಪಿ ಶೋಕ ಮಾತ ದೇವಾಲಯದ ಪ್ರಧಾನ ಧರ್ಮಗುರು ಫಾ. ಚಾರ್ಲ್ಸ್ ಮಿನೇಜಸ್, ಐವನ್ ಡಿಸೋಜರವರು ಸಮಾಜ ಮತ್ತು ಪಕ್ಷಕ್ಕೆ ನೀಡಿದ ಸೇವೆಗೆ ಸಿಕ್ಕ ಪ್ರತಿಫಲ. ಸರ್ಕಾರ ನಮ್ಮ ಕ್ರೈಸ್ತ ಸಮಾಜಕ್ಕೆ ನೀಡಿದ ಕೊಡುಗೆ. ಐವನ್ ಡಿಸೋಜ ಇವರ ಸೇವೆಯು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಲಿ ಎಂದು ಶುಭ ಹಾರೈಸಿದರು.
ಕ್ರೈಸ್ತ ಬಾಂಧವರ ಸನ್ಮಾನ ಸ್ವೀಕರಿಸಿ ಮಾತನಾಡಿದ ಐವನ್ ಡಿಸೋಜ, ಈ ಹುದ್ದೆಯು ಕ್ರೈಸ್ತ ಸಮುದಾಯದ ಕೊಡುಗೆಯನ್ನು ಗುರುತಿಸಿ ಕಾಂಗ್ರೆಸ್ ಸರಕಾರ ಈ ಹುದ್ದೆಯನ್ನು ನೀಡಿದೆ. ಈ ಹುದ್ದೆಯನ್ನು ಪಡೆದ ನಾನು ಧನ್ಯನು. ನನ್ನ ಅವಧಿಯಲ್ಲಿ ಸಮಾಜದ ಕುಂದು ಕೊರತೆಗಳನ್ನು ನನ್ನ ಕೈಲಾದ ಮಟ್ಟಿಗೆ ಸರಿಪಡಿಸಲು ಪ್ರಯತ್ನಿಸುತ್ತೇನೆ. ಹಾಗೇ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ಒದಗಿಸಲು ಪ್ರಯತ್ನಿಸುತ್ತೇನೆ. ಸಮಾಜದ ಎಲ್ಲಾ ವರ್ಗದ ಹಾಗೂ ಧರ್ಮದ ಜನರನ್ನು ಒಗ್ಗೂಡಿಸಿ ಅವರ ದ್ವನಿಯಾಗಿ ವಿಧಾನ ಪರಿಷತ್ ಮತ್ತು ಸರಕಾರದ ಮಟ್ಟದಲ್ಲಿ ನನ್ನ ಕೊಡುಗೆಯನ್ನು ಕೊಡಲು ಬದ್ದನಿದ್ದೇನೆ. ಕಳೆದ ಅವಧಿಯಲ್ಲಿ ಜಾತಿ ಧರ್ಮ ನೋಡದೆ ಮುಖ್ಯಮಂತ್ರಿ ನಿದಿಯಿಂದ ಧಾಖಲೆಯ ಮಟ್ಟದಲ್ಲಿ ಪರಿಹಾರ ನಿಧಿಯನ್ನು ಅಗತ್ಯವಿದ್ದವರಿಗೆ ತಲುಪಿಸಿದ್ದೇನೆ. ನನ್ನಿಂದ ಕೆಲಸ ತೆಗೆಸುವ ಜವಾಬ್ದಾರಿ ತಮ್ಮ ಮೇಲಿದೆ’ ಎಂದು ತಿಳಿಸಿದರು.
ವೇದಿಕೆಯಲ್ಲಿ ಉಡುಪಿ ಶೋಕ ಮಾತ ದೇವಾಲಯದ ಪ್ರಧಾನ ಧರ್ಮ ಗುರುಗಳಾದ ಫಾ| ಚಾರ್ಲ್ಸ್ ಮಿನೆಜಸ್, ಸಂತ ಮೇರಿ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರಾದ ಫಾ| ವಿಜಯ್ ಡಿಸೋಜ, ಐವನ್ ಡಿಸೋಜರವರ ಧರ್ಮಪತ್ನಿ ಡಾ. ಕವಿತಾ, ಪಾಲನ ಮಂಡಳಿಯ ಉಪಾಧ್ಯಕ್ಷ ಮ್ಯಾಕ್ಷಿಮ್ ಡಿಸೋಜ ಮತ್ತಿತರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಜಿತೇಂದ್ರ ಪುರ್ತಾಡೋ, ಮೇರಿ ಡಿಸೋಜ, ಗ್ರೇಸಿ ಕರ್ಡೊಜ,ವಿಲ್ಸನ್ ರೋಡ್ರಿಗಸ್ ಶಿರ್ವ, ಮೆಲ್ವಿನ್ ಅರಾನ್ಹ, ಚಾರ್ಲ್ಸ್ ಅಂಬ್ಲರ್, ಕಥೋಲಿಕ್ ಸಭಾ ಉಡುಪಿ ಜಿಲ್ಲಾ ಅಧ್ಯಕ್ಷ ಸಂತೋಷ್ ಕರ್ನೆಲಿಯೋ, ಲೆಸ್ಲಿ ಕರ್ನೆಲಿಯೋ, ಪ್ರಶಾಂತ್ ಜತ್ತನ್ನ, ರೋಜಾರಿಯೋ ಡಿಸೋಜ, ಅನಿತಾ ಡಿಸೋಜ ಬೆಲ್ಮಣ್ ಮತ್ತಿತರರು ಹಾಜರಿದ್ದರು.
ಸಮಾರಂಭದಲ್ಲಿ ಹಾಜರಿದ್ದ ಪ್ರಮುಖರು ಐವನ್ ಡಿಸೋಜರಿಗೆ ಸರಕಾರ ತನ್ನ ಸಂಪುಟದಲ್ಲಿ ಉನ್ನತ ಹುದ್ದೆಯನ್ನು ನೀಡಬೇಕಾಗಿ ಅಭಿಪ್ರಾಯ ಮಂಡಿಸಿದರು. ಅಭಿನಂದನ ಸಮಾರಂಭದ ಬಳಿಕ ಐವನ್ ಡಿಸೋಜರು ಧರ್ಮಧ್ಯಕ್ಷರನ್ನು ಭೇಟಿ ಮಾಡಿ ಆಶೀರ್ವಾಚನ ಪಡೆದರು.
ಶಿರ್ವ ಗ್ರಾಮ ಪಂಚಾಯತ್ ಸದಸ್ಯ ಮೆಲ್ವಿನ್ ಡಿಸೋಜ ಕಾರ್ಯಕ್ರಮ ನಿರ್ವಹಿಸಿದರೆ ಇಫ್ಕಾ ಸಂಘಟನೆಯ ಮಾಜಿ ಅಧ್ಯಕ್ಷ ಲುವಿಸ್ ಲೋಬೊ ಧನ್ಯವಾದ ಸಮರ್ಪಿಸಿದರು.
ಡೋರ್ನಹಳ್ಳಿ ಮೈಸೂರಿನಲ್ಲಿ ನಡೆದ ಸಂತ ಅಂತೋನಿಯವರ ವಾರ್ಷಿಕ ಹಬ್ಬಕ್ಕೆ ಮುನ್ನ ಎಂಟನೇ ದಿನದ ಭಕ್ತಿಭಾವ / Eight day of devotion preceding Annual Feast of St Anthony held at Dornahalli Mysore
ದೋರ್ನಹಳ್ಳಿ: ಪಡುವಾ ಸಂತ ಅಂತೋನಿಯವರ ವಾರ್ಷಿಕ ಹಬ್ಬದ ಹಿಂದಿನ ಹನ್ನೊಂದನೇ ದಿನದ ನೊವೆನಾ ಭಕ್ತಿಯು ಜೂನ್ 11, 2024 ರಂದು ಮೈಸೂರಿನ ಸೇಂಟ್ ಆಂಥೋನಿ ಬೆಸಿಲಿಕಾ ಡೋರ್ನಹಳ್ಳಿಯಲ್ಲಿ ನಡೆಯಿತು.
ಸುಳುವಾಡಿಯ ಸೇಂಟ್ ಫಾತಿಮಾ ಚರ್ಚ್ನ ಪ್ಯಾರಿಷ್ ಪಾದ್ರಿ ರೆ.ಫಾ. ಟೆನ್ನಿ ಕುರಿಯನ್ ಅವರು ಮಹಾಮಸ್ತಕಾಭಿಷೇಕವನ್ನು ಆಚರಿಸಿದರು ಮತ್ತು ಭಕ್ತಾದಿಗಳ ಉದ್ದೇಶಗಳಿಗಾಗಿ ಪ್ರಾರ್ಥಿಸಿದರು. ಪ್ರವೀಣ್ ಪೆದ್ರು, ಆಡಳಿತಾಧಿಕಾರಿ, ಸೇಂಟ್ ಅಂತೋನಿ ಬೆಸಿಲಿಕಾ ದೋರ್ನಹಳ್ಳಿ ಮೈಸೂರು.
ಸಾಮೂಹಿಕ ಪ್ರಾರ್ಥನೆಯ ಕೊನೆಯಲ್ಲಿ, ಸಂತ ಅಂತೋನಿಯವರ ಗೌರವಾರ್ಥವಾಗಿ ನೊವೆನಾ ನಡೆಯಿತು, ಈ ಸಂದರ್ಭದಲ್ಲಿ ಭಕ್ತಾದಿಗಳ ವಿವಿಧ ಅಗತ್ಯತೆಗಳು ಮತ್ತು ಪ್ರಾರ್ಥನೆ ಉದ್ದೇಶಗಳಿಗಾಗಿ ಅಧಿವೇಶನದ ವಿಶೇಷ ಮಧ್ಯಸ್ಥಿಕೆಯನ್ನು ಕೋರಲಾಯಿತು. ಸಂತ ಅಂತೋನಿಯವರ ಪವಿತ್ರ ಪ್ರತಿಮೆಯ ಮೆರವಣಿಗೆ ಮತ್ತು ಪವಿತ್ರ ಆಶೀರ್ವಾದ. ಸಾಮೂಹಿಕ ಪೂಜೆಯ ನಂತರ ಪ್ರಸಾದವನ್ನು ಏರ್ಪಡಿಸಲಾಗಿತ್ತು.
Eleventh day of devotion preceding Annual Feast of St Anthony held at Dornahalli Mysore
Dornahalli : The eleventh day of Novena devotion preceding the annual feast of St Anthony of Padua was held on June 11, 2024, at St Anthony’s Basilica Dornahalli Mysore
Rev. Fr Tenny Kurian, Parish priest , St Fathima Church Suluvadi, celebrated the Eucharistic and prayed for intentions of the devotees with Rev. Fr N.T Joseph,Rector,St Anthony’s Basilica Dornahalli and Rev.Fr. Praveen Pedru, Administrator, St Anthony’s Basilica Dornahalli Mysore .
At the end of the mass, novena was held in honour of St Anthony, during which the special intercession of the session was sought for the various needs and prayer intentions of the devotees.Procession of the holy statue of St Anthony and benediction of the holy eucharist was organised after the mass.
ಶ್ರೀನಿವಾಸಪುರ ಪ್ರಪಂಚದಲ್ಲಿಯೇ ಮಾವಿಗೆ ವಿಶ್ವ ಪ್ರಸಿದ್ದಿ, ಆದರೆ ಎಪಿಎಂಸಿ ಮಾರುಕಟ್ಟೆ ಮೂಲಭೂತ ಸೌಲಭ್ಯಗಳು ಕೊರತೆ ಎದ್ದು ಕಾಣುತ್ತದೆ
ಶ್ರೀನಿವಾಸಪುರ : ಪ್ರಪಂಚದಲ್ಲಿಯೇ ಮಾವಿಗೆ ವಿಶ್ವ ಪ್ರಸಿದ್ದಿಯಾಗಿದೆ ಶ್ರೀನಿವಾಸಪುರ ಎಪಿಎಂಸಿ ಮಾರುಕಟ್ಟೆ ಆದರೆ ಮೂಲಭೂತ ಸೌಲಭ್ಯಗಳು ಕೊರತೆ ಎದ್ದು ಕಾಣುತ್ತದೆ.
ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಮಾವು ವಹಿವಾಟ ಪ್ರಾರಂಭವಾಗಿ ಎರಡು ತಿಂಗಳು ಕಳೆಯುತ್ತಿದೆ ಎಪಿಎಂಸಿಯಲ್ಲಿ ಮಾತ್ರ ಮೂಲಭೂತ ಸೌಲಭ್ಯಗಳು ಇಲ್ಲದೆ ಕೂಲಿ ಕಾರ್ಮಿಕರು ಬಯಲಿನಲ್ಲಿಯೇ ಶೌಚಾಲಯವನ್ನು ಅವಲಂಬಿಸಿದ್ದಾರೆ. ಕನಿಷ್ಟ ನೀರು ಸಹ ಸಿಗುತ್ತಿಲ್ಲ. ಎಲ್ಲಂದರಲ್ಲಿ ಕಸಕಡ್ಡಿ ಚರಂಡಿ ತುಂಬಿ ಗೊಬ್ಬನಾರುತ್ತದೆ. ಸಾಂಕ್ರಾಮಿಕ ರೋಗಗಳು ಹರಡುವ ಬೀತಿಯನ್ನು ಉಂಟು ಮಾಡಿದೆ.
ಒಂದೇ ಸ್ಥಳದಲ್ಲಿ ಬಟ್ಟೆ ಒಗೆಯುವುದು ಸ್ನಾನ ಮಾಡುವುದು ನೀರು ಹಿಡಿಯುವುದು
ಎಪಿಎಂಸಿ ಮಾರುಕಟ್ಟೆಯಲ್ಲಿ ನೀರಿನ ಟ್ಯಾಂಕ್ ಇದ್ದು ಸುಮಾರು ನೂರಾರು ಮಂದಿ ಕೂಲಿ ಕಾರ್ಮಿಕರು ತಣ್ಣೀರು ಸ್ನಾನ ಮಾಡುವುದು ಬಟ್ಟೆ ಒಗೆಯುವುದು ಪಾತ್ರೆ ತೊಳೆದುಕೊಳ್ಳುವುದು ಮಾಡಿಕೊಳ್ಳುತ್ತಿದ್ದಾರೆ. ಆದರೆ ಒಂದೆ ಜಾಗದಲ್ಲಿ ನೀರು ಸರಬರಾಜು ಮಾಡುವ ಕಾರಣ ಜನ ಸಂದಣಿ ಹೆಚ್ಚಾಗಿದೆ ಕಾರ್ಮಿಕರು ಕೆಲಸ ಬಿಟ್ಟು ನೀರಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿರುವುದು ಕಂಡು ಬಂದಿದೆ.
ಮಾರುಕಟ್ಟೆಯಲ್ಲಿ ರೈತರು, ಸಾರ್ವಜನಿಕರು, ಕಾರ್ಮಿಕರು, ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಕಾರಣ ರಸ್ತೆಯಲ್ಲಿ ನೂರಾರು ಟ್ಯಾಕ್ಟರ್, ಲಾರಿ, ಬೃಹತ್ ವಾಹನಗಳು ಸಂಚಾರ ಮಾಡುತ್ತಿದ್ದರಿಂದ ದೂಳು ಹೆಚ್ಚಿನದಾಗಿ ಬರುತ್ತಿದ್ದು, ಕನಿಷ್ಟ ಪಕ್ಷ ಎಪಿಎಂಸಿ ಅಧಿಕಾರಿಗಳು ಗಮನಹರಿಸಿ ನೀರನ್ನು ಹಾಕದೆ ಇದಕ್ಕೂ ನಮಗೂ ಸಂಬಂದವಿಲ್ಲದಂತೆ ಕಛೇರಿಯಲ್ಲಿ ಕುಳಿತಿದ್ದಾರೆಂದು ರೈತರು ಆರೋಪಿಸಿದ್ದಾರೆ.
ನೋಟ-1
ಎಪಿಎಂಸಿ ಮಾರುಕಟ್ಟೆಯಲ್ಲಿ ಎರಡು ಕಡೆ ಶೌಚಾಲಯ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಸ್ನಾನ ಮಾಡಿಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪ್ರತಿದಿನ ಸಂಜೆ ಮತ್ತು ಬೆಳಗ್ಗೆ ಸ್ವಚ್ಚತೆ ಕಾರ್ಯವನ್ನು ಮಾಡುತ್ತಿದ್ದೇವೆ. ಮಂಡಿ ಮಾಲೀಕರಿಗೆ ಸ್ವಚ್ಚತೆಯನ್ನು ಕಾಪಾಡುವಂತೆ ಸಭೆಯನ್ನು ಕರೆದು ಕಟ್ಟುನಿಟ್ಟಾಗಿ ನಿರ್ದೇಶನ ಮಾಡಿದ್ದೇವೆ. ಇದನ್ನು ಪಾಲನೆ ಮಾಡದೆ ಇರುವ ಮಂಡಿ ಮಾಲೀಕರಿಗೆ ನೋಟೀಸ್ನ್ನು ನೀಡಿದ್ದೇವೆ. ನಮ್ಮ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆಯಿಂದ ಎಲ್ಲವನ್ನು ನೋಡುವುದಕ್ಕೆ ಆಗುತ್ತಿಲ್ಲ. ಇದರ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆಂದ
ಎಪಿಎಂಸಿ ಕಾರ್ಯದರ್ಶಿ ಬಿ.ಶಶಿಕಳಾ.
ನೋಟ-2
ಮಾವು ವಹಿವಾಟು ನಡೆಯುವ ಮಾರುಕಟ್ಟೆಯಲ್ಲಿ ಮೂಲಭೂತ ಸೌಲಭ್ಯಗಳು ಮರಿಚಿಕೆಯಾಗಿದೆ. ನೂರಾರು ಕೂಲಿ ಕಾರ್ಮಿಕರು ಕೆಲಸವನ್ನು ಅರಿಸಿ ಮಾರುಕಟ್ಟೆಗೆ ಬಂದಿದ್ದಾರೆ. ಆದರೆ ಇಲ್ಲಿ ನೋಡಿದರೆ ಎಲ್ಲಂದರೆ ಅಲ್ಲಿ ಗೊಬ್ಬುನಾರುತ್ತದೆ. ಚರಂಡಿಗಳು ತುಂಬಾ ಕೊಳೆತ ಮಾವು ತುಂಬಿದ್ದಾರೆ. ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಇಲ್ಲದೆ ಮಾರುಕಟ್ಟೆ ಪ್ರಾಂಗಣದ ಅಂಗಡಿಗಳ ಸಂದಿ ಗೊಂದಿ, ಬಯಲು ಪ್ರದೇಶವನ್ನು ಅವಲಂಬಿಸಿದ್ದಾರೆ. ಈ ಮಾರುಕಟ್ಟೆಗೆ ವಿಶ್ವದಲ್ಲಿಯೇ ಮಾವಿನ ನಗರ ಎಂದು ಹೆಸರುವಾಸಿಯಾಗಿದೆ.ಆದರೆ ಇದಕ್ಕೆ ಕಪ್ಪು ಚುಕ್ಕೆ ತರುತ್ತಿದೆ. ಶುದ್ದ ಕುಡಿಯುವ ನೀರಿನ ಘಟಕ ಕೆಲಸ ಮಾಡುತ್ತಿಲ್ಲ. ರೈತರ ಭವನ ಬಳಿಕೆಯಾಗುತ್ತಿಲ್ಲ. ಒಟ್ಟಾರೆಯಾಗಿ ಈ ಎಪಿಎಂಸಿ ಮಾರುಕಟ್ಟೆಯ ಸೌಲಭ್ಯಗಳ ಬಗ್ಗೆ ಹೇಳುವರು ಕೇಳುವರು ಇಲ್ಲದಂತಾಗಿದೆ. ಅಧಿಕಾರಿಗಳು ಕೂಡಾ ಎಲ್ಲಾ ಸೌಲಭ್ಯಗಳನ್ನು ಒದಗಿಸಿದ್ದೇವೆಂದು ಕಛೇರಿಯಲ್ಲಿ ಕುಳಿತು ಕಾಲಹರಣ ಮಾಡುತ್ತಿರುವುದು ವಿಪರ್ಯಾಸವಾಗಿದೆಂದು.
ರೈತ ಸೇನೆಯ ಜಿಲ್ಲಾಧ್ಯಕ್ಷ ಚಲ್ದಿಗಾನಹಳ್ಳಿ ಸಿ.ವಿ. ಪ್ರಭಾಕರ ಗೌಡ
ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನಲ್ಲಿ “ಇಕೋಕ್ಲಬ್ ಉದ್ಘಾಟನೆ ಮತ್ತು ವಿಶ್ವಪರಿಸರ ದಿನಾಚರಣೆ”
ಕುಂದಾಪುರ: ಜೂನ್ 10ರಂದು ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನಲ್ಲಿ “ಇಕೋಕ್ಲಬ್ ಉದ್ಘಾಟನೆ ಮತ್ತು ವಿಶ್ವಪರಿಸರ ದಿನಾಚರಣೆ” ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಂದಾಪುರದ ಸರಕಾರಿ ಜ್ಯೂನಿಯರ್ ಕಾಲೇಜಿನ ಉಪಪ್ರಾಂಶುಪಾಲರಾದ ಕಿರಣ್ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪರಿಸರ ದಿನಾಚರಣೆ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೇ ವಿದ್ಯಾರ್ಥಿಗಳೆಲ್ಲರೂ ಜೀವನ ಪರ್ಯಂತ ಪರಿಸರ ಸಂರಕ್ಷಣೆಯ ಬಗೆಗೆ ಒಲವನ್ನು ತೋರಿಸಬೇಕು. ಪ್ಲಾಸ್ಟಿಕ್ ಮುಕ್ತ ಸ್ವಚ್ಛ ಪರಿಸರದಿಂದ ಕೂಡಿದ ಸಮಾಜವನ್ನು ನಿರ್ಮಾಣ ಮಾಡಬೇಕು. ನೀರಿನ ದುರ್ಬಳಕೆಯನ್ನು ತಡೆಯಬೇಕು.ಹಾಗಿದ್ದರೆ ಮಾತ್ರ ಸಧೃಡ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ>ಶುಭಕರಾಚಾರಿ ಮಾತನಾಡಿ ನಮ್ಮ ಸುತ್ತಲಿನ ಸಸ್ಯಶ್ಯಾಮಲೇಯನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಹಾಗಿದ್ದರೆ ಮಾತ್ರ ನಾವು ಶುದ್ಧವಾದ ಗಾಳಿಯನ್ನು ಉಸಿರಾಡಬಹುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಮ್.ಗೊಂಡ ವಹಿಸಿದ್ದರು.
ಜೀವಶಾಸ್ತ್ರ ಉಪನ್ಯಾಸಕಿ ಡಾ.ಸರೋಜ ಎಮ್ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು. ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಶಾಲಿನಿ ವಂದಿಸಿದರು.
ಸ್ವರ್ಣಭೂಮಿ ಫೌಂಡೇಷನ್ ಕೋಲಾರ ವತಿಯಿಂದಪ್ರತಿಭಾವಂತ ವಿದ್ಯಾರ್ಥಿ ಕೆ.ಸಿ.ಚರಣ್ಗೆ ಸನ್ಮಾನ
ಕೋಲಾರ: ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಸ್ವರ್ಣಭೂಮಿ ಫೌಂಡೇಷನ್ ಹಮ್ಮಿಕೊಂಡಿದ್ದ ವಚನ ವೈಭವ 3ನೇ ವರ್ಷದ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆ ಕನ್ನಡ ಮಾದ್ಯಮದಲ್ಲಿ ಓದಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿಕಲಚೇತನ ಪ್ರತಿಭಾವಂತ ವಿದ್ಯಾರ್ಥಿ ಕೆ.ಸಿ. ಚರಣ್ ರವರನ್ನು ನಾಗಲಾಪುರ ವೀರ ಸಿಂಹಾಸನ ಸಂಸ್ಥಾನ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ ರವರು ಸನ್ಮಾನಿಸಿದರು.
ಪ್ರತಿಭಾವಂತ ವಿದ್ಯಾರ್ಥಿ ಕೆ.ಸಿ.ಚರಣ್ಗೆ ಸಮಾಜ ಸೇವಕರಾದ ಪರ್ವತ್ ಸ್ಪೋರ್ಟ್ಸ್ನ ಎಂ.ಆನಂದರೆಡ್ಡಿರವರು 5001 ಹಾಗೂ ಗಮನ ಶಾಂತಮ್ಮನವರು 2001 ರೂ ಪ್ರೋತ್ಸಾಹ ಧನವನ್ನು ನೀಡಿದರು.
ಈ ಸಂದರ್ಭದಲ್ಲಿ ಕಸಾಪ ಗೌರವಾಧ್ಯಕ್ಷ ಟಿ.ಸುಬ್ಬರಾಮಯ್ಯ, ಕಸಾಪ ಗೌರವ ಕಾರ್ಯದರ್ಶಿ ಕೆ.ಎಸ್.ಗಣೇಶ್, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ವಿ.ಲಕ್ಷ್ಮಯ್ಯ, ಸ್ವರ್ಣಭೂಮಿ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಬಿ.ಶಿವಕುಮಾರ್, ರಂಗಭೂಮಿ ನಿರ್ದೇಶಕ ಡಾ.ಇಂಚರ ನಾರಾಯಣಸ್ವಾಮಿ, ರೋಟರಿ ವಲಯ ರಾಜ್ಯಪಾಲ ಎಚ್.ರಾಮಚಂದ್ರಪ್ಪ, ಚುಸಾಪ ಜಿಲ್ಲಾಧ್ಯಕ್ಷ ಪಿ.ನಾರಾಯಣಪ್ಪ, ಡಾ|| ಪೋಸ್ಟ್ ನಾರಾಯಣಸ್ವಾಮಿ ಹಾಗೂ ನಿವೃತ್ತ ಎಎಸ್ಐ ಕೆ.ಎನ್.ರವೀಂದ್ರನಾಥ್, ಪೋಷಕರಾದ ಪತ್ರಕರ್ತ ಚಂದ್ರು, ರಮ್ಯಾ, ಮತ್ತಿತರರು ಉಪಸ್ಥಿತರಿದ್ದರು.