ಶ್ರೀನಿವಾಸಪುರ 1 : ಆರೋಗ್ಯವೇ ಭಾಗ್ಯ ಎಂಬಂತೆ ಮನುಷ್ಯನ ಆರೋಗ್ಯ ಕೈ ಕೊಟ್ಟಾಗ ನೆಮ್ಮದಿ ಮಾಯಾವಾಗುವುದರ ಜೊತೆಗೆ ಅರ್ಥಿಕ ಸ್ಥಿತಿ ದುಸ್ಥಿತಿಯಲ್ಲಿದ್ದಾಗ ಸಮಾಜದ ದುರ್ಬಲ ವರ್ಗದ ಜನರು ಉತ್ತಮ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗದೇ ಹತಾಶರಾಗುವುದು ದುರಂತ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಕಛೇರಿಯಲ್ಲಿ ಗುರುವಾರ ಶ್ರೀನಿವಾಸಪುರ ತಾಲ್ಲೂಕಿನ 15 ಮಂದಿಗೆ ರೂ ಒಂದು ಲಕ್ಷ ಎಂಟು ಸಾವಿರ ಮೊತ್ತದ ಆರೋಗ್ಯ ರಕ್ಷಾ ವಿಮಾ ಮೊತ್ತ ವಿತರಣೆ ಮಾಡಿ ಮಾತನಾಡಿದರು.
ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷರಾದ ವೇಮಣ್ಣರವರು ಆರೋಗ್ಯ ವಿಮಾ ಸೌಲಭ್ಯದ ಚೆಕ್ ವಿತರಣೆ ಮಾಡಿ ಮಾತನಾಡುತ್ತಾ ಧರ್ಮಸ್ಥಳ ಸಂಸ್ಥೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದ್ದು ಪ್ರತಿಯೊಂದು ಕ್ಷೇತ್ರದಲ್ಲೂ ಸಮಾಜಮುಖಿ ಚಿಂತನೆ ಕಾಳಜಿಯಿಂದ ಪ್ರಾಮಾಣಿಕ ಕೆಲಸ ಮಾಡುತ್ತಿದ್ದು ಎಲ್ಲೂ ಕೂಡಾ ಸೌಲಭ್ಯಗಳು ಸೋರಿಕೆಯಾಗದಂತೆ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿರುವುದು ಪ್ರಶಂಸನೀಯ ಎಂದರು..
ಕಾರ್ಯಕ್ರಮದಲ್ಲಿ ತಾಲ್ಲೂಕು ಹಣಕಾಸು ಪ್ರಭಂಧಕರಾದ ಆನಂದ್, ಆಡಳಿತ ಪ್ರಭಂಧಕರಾದ ಮನೀಷಾ, ತಾಲ್ಲೂಕು ನೊಡಲ್ ಅಧಿಕಾರಿ ಪ್ರತಾಪ್ ಉಪಸ್ಥಿತರಿದ್ದರು.
Day: June 27, 2024
ವಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಿಸಲು ಶಾಸಕರ ಸಮ್ಮುಖದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು
ಶ್ರೀನಿವಾಸಪುರ : ವಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ತಹಶೀಲ್ದಾರ್ ಕಛೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ ತಾಲ್ಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಇಂದು (ಗುರುವಾರ) ಆಚರಿಸಲು ಕಳೆದ ಎರಡು ದಿನಗಳ ಹಿಂದೆ ಶಾಸಕರ ಸಮ್ಮುಖದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಸದರಿ ಸಭೆಯಲ್ಲಿ ವಕ್ಕಲಿಗ ಸಂಘದ ಒಂದು ಬಣವನ್ನು ಮಾತ್ರ ಹಾಜರುಪಡಿಸಿಕೊಂಡು ಮತ್ತ್ತೊಂದು ಬಣವನ್ನು ಕಡೆಗಣಿಸಿ ಹಾಜರಿದ್ದ ಒಂದು ಬಣದಿಂದ, ಶಾಸಕರಿಂದ ಹಾಗೂ ಅಧಿಕಾರಿಗಳ ಮತ್ತು ಹಲವು ವಕ್ಕಲಿಗ ಮುಖಂಡರ ಸಲಹೆ ಸೂಚನೆಯಂತೆ 27-06-24 ರ ಗುರುವಾರ ಕೆಂಪೇಗೌಡ ಜಯಂತಿಯನ್ನು ಆಚರಿಸಲು ನಿರ್ಧಾರಿಸಲಾಗಿತ್ತು.
ಆದ್ರೆ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ವಕ್ಕಲಿಗರ ಸಂಘದಲ್ಲಿ ಎರಡು ಬಣಗಳಿದ್ದು ಅದರಲ್ಲಿ ಒಂದಾದ ವಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳು ತಾಲ್ಲೂಕು ಆಡಳಿತದ ನಿರ್ಲಕ್ಷತೆಯ ನಡೆಯನ್ನು ಖಂಡಿಸಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಪೂರ್ವಭಾವಿ ಸಭೆಗೆ ವಕ್ಕಲಿಗ ಕ್ಷೇಮಾಭಿವೃದ್ಧಿ ಸಂಘದ ಯಾವೊಬ್ಬ ಸದಸ್ಯನನ್ನು ಆಹ್ವಾನಿಸದೆ ಸಭೆ ನಡೆಸಿರುವುದು ಖಂಡನೀಯ, ವಕ್ಕಲಿಗ ಸಂಘದ ಜೊತೆ ಹೊಂದಾಣಿಕೆ ಆಗದೆ ಇಲ್ಲಿನ ಸಮುದಾಯ ಬೇರೊಂದು ಸಂಘ ಕಟ್ಟಿಕೊಂಡು ಸ್ಥಿರವಾಗಿದೆ. ಕೆಂಪೇಗೌಡ್ರ ಜಯಂತಿಗೆ ನಮ್ಮ ಸಲಹೆ ಸೂಚನೆ ಬೇಕಿಲ್ಲವೇ ಎಂದು ತಹಶೀಲ್ದಾರ್ರವರನ್ನ ಪ್ರಶ್ನಿಸಿದರು. ನಮಗೂ ಸಭೆಗೆ ಅಹ್ವಾನವಿದ್ದಿದ್ದಾರೆ ಕೆಂಪೇಗೌಡ್ರ ಜಯಂತಿ ಇನ್ನಷ್ಟು ವಿಜೃಂಭಣೆಯಿಂದ ಮಾಡಲು ಸಹಕಾರಿಯಾಗುತ್ತಿತ್ತು ಆದ್ರೆ ತಾಲ್ಲೂಕು ಆಡಳಿತ ನಮ್ಮ ಬಣವನ್ನು ಕಡೆಗಣಿಸಿರುವುದು ನಿಮ್ಮ ವಿರುದ್ಧದ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಸಂಘದ ಅಧ್ಯಕ್ಷರು,ಸದಸ್ಯರು ಗುಡುಗಿದರು.
ತಾಲ್ಲೂಕು ದಂಡಾಧಿಕಾರಿ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷ ಜಿ.ಎನ್.ಸುದೀಂದ್ರ ಮಾತನಾಡಿ ಪೂರ್ವಭಾವಿ ಸಭೆಗೆ ಆಹ್ವಾನಿಸುವಲ್ಲಿ ಸ್ವಲ್ಪ ಗೊಂದಲವಾಗಿದೆಯೇ ಹೊರೆತು ಉದ್ದೇಶಪೂರ್ವಕವಾಗಿ ನಡೆದಿದ್ದಲ್ಲ. ಈ ಮುಂದೆ ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದಂತೆ ವ್ಯವಹಾರಿಸುವುದಾಗಿ ತಿಳಿಸಿದರು.
ಸಮುದಾಯದ ಮುಖಂಡರಾದ ಸಂಜಯ್ರೆಡ್ಡಿ, ಕೆ.ಕೆ.ಮಂಜುನಾಥ್, ಕೂಡಿಪಲ್ಲಿ ಸುಬ್ಬಿರೆಡ್ಡಿ, ವೆಂಕಟಶಿವಾರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ನಾಗೇದನಹಳ್ಳಿ ಸೀತಾರಾಮರೆಡ್ಡಿ, ಮಂಜು, ಸೋಮಯಾಜಲಪಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷ ಮಂಜುನಾಥರೆಡ್ಡಿ ಇತರರು .
ಎ.ಪಿ.ಎಂ.ಸಿ ಮಾರುಕಟ್ಟೆಯ ಪ್ರಾಂಗಣದಲ್ಲಿ ಹಲವಾರು ವ್ಯವಸ್ಥೆಗಳನ್ನು ಮಾಡಲಾಗಿರುತ್ತದೆ-ಎಪಿಎಂಸಿ ಕಾರ್ಯದರ್ಶಿ ಬಿ.ಶಶಿಕಲಾ
ಶ್ರೀನಿವಾಸಪುರ : ಎಪಿಎಂಸಿ ಕಾರ್ಯದರ್ಶಿ ಬಿ.ಶಶಿಕಲಾ ಮಾತನಾಡಿ ಪ್ರಾಂಗಣದಲ್ಲಿ ವ್ಯಾಪಾರ ವಹಿವಾಟು ಹಾಗೂ ಯಾರಿಗೂ ತೊಂದರೆಯಾಗದಂತೆ ರಸ್ತೆಗಳಲ್ಲಿ ಧೂಳು ಏಳದಂತೆ ನೀರಿನ ಟ್ಯಾಂಕರ್ಗಳಿಂದ ರಸ್ತೆಗಳಿಗೆ ನೀರನ್ನು ಹಾಯಿಸಲಾಗುತ್ತಿದೆ ಹಾಗೂ ರಸ್ತೆಗಳಲ್ಲಿ ಬೀದಿ ದೀಪಗಳ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಮಾವು ವಹಿವಾಟಿನಲ್ಲಿ ತೊಡಗಿರುವ ಎಲ್ಲಾ ರೈತರುಗಳಿಗೆ, ಮಂಡಿಗಳಲ್ಲಿ ಕಾರ್ಯನಿರ್ವಹಿಸುವ ಹಮಾಲುರುಗಳಿಗೆ ಅನುಕೂಲವಾಗುವಂತೆ ಕುಡಿಯುವ ನೀರಿನ ಘಟಕದ ವ್ಯವಸ್ಥೆಯನ್ನು ಮಾಡಿದ್ದು, ಮತ್ತು ಪುರುಷರ ಹಾಗೂ ಮಹಿಳೆಯರ ಶೌಚಾಲಯಗಳು ಹಾಗೂ ಸ್ನಾನದ ಗೃಹಗಳ ವ್ಯವಸ್ಥೆಯನ್ನು ಸಿದ್ದವಾಗಿದ್ದು, ಎಲ್ಲಾ ರೈತರು,ಹಮಾಲರು ಮತ್ತು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳ ವ್ಯವಸ್ಥೆ ಮಾಡಲಾಗಿದೆ.
ಪ್ರಾಂಗಣದಲ್ಲಿ ಪ್ರತಿದಿನ ಮಾವು ಟಮೋಟೋ ಹಾಗೂ ಇತರ ತ್ಯಾಜ್ಯವನ್ನು ಸ್ವಚ್ಚತಾ ಗುತ್ತಿಗೆದಾರರಿಂದ ಸ್ವಚ್ಚಗೊಳಿಸಿ, ವಿಲೇ ಮಾಡುವ ವ್ಯವಸ್ಥೆ ಮಾಡಲಾಗಿದೆ. ಮಾವಿನ ಸುಗ್ಗಿಯ ಅವಧಿಯಲ್ಲಿ ತ್ಯಾಜ್ಯವನ್ನು ಕಸದ ಬುಟ್ಟಿಗಳಲ್ಲಿ ತುಂಬಿಸಿ ವಿಲೇವಾರಿ ಸಮಯದಲ್ಲಿ ಟ್ರಾಕ್ಟರ್ಗಳಲ್ಲಿ ಹಾಕುವಂತೆ ಸಭೆಗಳಲ್ಲಿ ತಿಳಿಸಿದ್ದರೂ ಕೆಲವರು ಪ್ರಾಂಗಣದ ವಿವಿಧ ಕಡೆಗಳಲ್ಲಿ ತ್ಯಾಜ್ಯವನ್ನು ಹಾಕುತ್ತಿದ್ದು ಸಮಿತಿ ಗಮನಕ್ಕೆ ಬಂದಿದ್ದು ಅವುಗಳನ್ನು ತಕ್ಷಣದಲ್ಲೇ ಸ್ವಚ್ಚಗೊಳಿಸಲಾಗುತ್ತಿದೆ.
ವ್ಯಾಪಾರಸ್ಥರು, ರೈತರು ಹಾಗೂ ಸಾರ್ವಜನಿಕರುಗಳಿಗೆ ಅನುಕೂಲವಾಗುಂತೆ ಶ್ರೀನಿವಾಸಪುರ ರಸ್ತೆ- ಚಿಂತಾಮಣಿ ರಸ್ತೆ ಹಾಗೂ ಪ್ರಾಂಗಣಕ್ಕೆ ಹೊಂದಿಕೊಂಡಂತೆ ಇರುವ ಖಾಸಗಿ ರಸ್ತೆಯನ್ನು ಜೆಲ್ಲಿ ಮತ್ತು ಗ್ರಾವೇಲ್ ರಸ್ತೆಯನ್ನು ಕೃಷಿ ಮಾರಾಟ ಇಲಾಖೆ ನಿರ್ದೇಶಕರು ಹಾಗೂ ಶಾಸಕರ ಅನುಮತಿ ಮೇರೆಗೆ ಅಭಿವೃದ್ಧಿಪಡಿಸಲಾಗಿರುತ್ತದೆ ಎಂದು ಹೇಳಿದರು.
ಕೋಲಾರದ 14 ಕೇಂದ್ರಗಳಲ್ಲಿ ಜೂ30ರ ಭಾನುವಾರ ಶಿಕ್ಷಕರ ಅರ್ಹತಾ ಪರೀಕ್ಷೆಕೇಂದ್ರಗಳ ಸುತ್ತ ನಿಷೇಧಾಜ್ಞೆ-ಅವ್ಯವಹಾರ ತಡೆಗೆ ಕಟ್ಟೆಚ್ಚರ-ಡಿಸಿ ಅಕ್ರಂ ಪಾಷಾ
ಕೋಲಾರ:- ನಗರದ 14 ಕೇಂದ್ರಗಳಲ್ಲಿ ಜೂ.30 ರಂದು ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಯಲಿದ್ದು, ಯಾವುದೇ ಅವ್ಯವಹಾರ,ಗೊಂದಲಗಳಿಗೆ ಅವಕಾಶವಿಲ್ಲದಂತೆ ಎಲ್ಲಾ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಟಿಇಟಿ ಪರೀಕ್ಷಾ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಕೋಲಾರ ನಗರದ ಒಟ್ಟು 14 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಬೆಳಗಿನ ಅಧಿವೇಶನ 9-30ರಿಂದ 12ರವರೆಗೂ ಪತ್ರಿಕೆ-1ರ ಪರೀಕ್ಷೆ 9 ಕೇಂದ್ರಗಳಲ್ಲಿ ಹಾಗೂ ಮಧ್ಯಾಹ್ನ 2 ರಿಂದ 4-30 ರವರೆಗೂ ಪತ್ರಿಕೆ-2ರ ಪರೀಕ್ಷೆ 14 ಕೇಂದ್ರಗಳಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕೆ-1 ಬೆಳಗ್ಗೆ 9-30 ರಿಂದ 12 ಗಂಟೆವರೆಗೂ 9 ಕೇಂದ್ರಗಳಲ್ಲಿ ಮಾತ್ರ ಪರೀಕ್ಷೆ ನಡೆಯಲಿದ್ದು, ಒಟ್ಟು 2142 ಅಭ್ಯರ್ಥಿಗಳು ನೋಂದಣಿ ಮಾಡಿಸಿದ್ದಾರೆ. ಪತ್ರಿಕೆ-2ರ ಪರೀಕ್ಷೆ ಮಧ್ಯಾಹ್ನ 2 ರಿಂದ 4-30ರವರೆಗೂ ನಡೆಯಲಿದ್ದು, 3394 ಮಂದಿ ನೋಂದಣಿ ಮಾಡಿಸಿದ್ದಾರೆ ಎಂದು ತಿಳಿಸಿದರು.
144ನೇ ಸೆಕ್ಷನ್ನಿ ಷೇದಾಜ್ಞೆ ಜಾರಿ
ಯಾವುದೇ ಸಮಸ್ಯೆ ಎದುರಾಗದಂತೆ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ.ವ್ಯಾಪ್ತಿಯಲ್ಲಿ 144 ನೇ ಸೆಕ್ಷನ್ ಅನ್ವಯ ನಿಷೇದಾಜ್ಞೆ ಜಾರಿ ಮಾಡಿದ್ದು, ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಈ 200 ಮೀ ವ್ಯಾಪ್ತಿಯಲ್ಲಿನ ಎಲ್ಲಾ ಜೆರಾಕ್ಸ್ ಅಂಗಡಿಗಳನ್ನು ಬೆಳಗ್ಗೆ 8-30 ರಿಂದ ಸಂಜೆ 4-30 ರವರೆಗೂ ಮುಚ್ಚಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಸತತ ವಿದ್ಯುತ್
ಒದಗಿಸಲು ತಾಕೀತು
ಪರೀಕ್ಷೆ ಸಂದರ್ಭದಲ್ಲಿ ವಿದ್ಯುತ್ ಸಮಸ್ಯೆ ಎದುರಾಗದಂತೆ ಕ್ರಮವಹಿಸಲು ಬೆಸ್ಕಾಂ ಅಧಿಕಾರಿಗಳಿಗೆ ತಾಕೀತು ಮಾಡಿದ ಡಿಸಿಯವರು, 14 ಪರೀಕ್ಷಾ ಕೇಂದ್ರಗಳಿಗೂ ಪೊಲೀಸ್ ಬಂದೋಬಸ್ತ್ ಒದಗಿಸಲು ಪೊಲೀಸ್ ಇಲಾಖೆಗೆ ಸೂಚಿಸಿದರು.
ಗೌಪ್ಯ ಸಾಮಗ್ರಿಗಳನ್ನು ಖಜಾನೆಯಲ್ಲಿ ಸಂರಕ್ಷಿಸಲು ತ್ರಿಸದಸ್ಯ ಸಮಿತಿ ರಚಿಸಿದ್ದು, ಅದರಲ್ಲಿ ಅಪರ ಡಿಸಿಯವರು, ಡಿಡಿಪಿಐ ಕೃಷ್ಣಮೂರ್ತಿ, ಜಿಲ್ಲಾ ಖಜಾನಾಧಿಕಾರಿ ಮಹೇಂದ್ರ ಅವರು ಇದ್ದಾರೆ ಎಂದು ತಿಳಿಸಿದರು. ಪ್ರಶ್ನೆಪತ್ರಿಕೆ ಕೇಂದ್ರಗಳಿಗೆ ತಲುಪಿಸಲು, ಉತ್ತರ ಪತ್ರಿಕೆ ಬಂಡಲ್ಗಳನ್ನು ಖಜಾನೆಗೆ ಸಾಗಿಸುವ 9 ಮಾರ್ಗಾಧಿಕಾರಿಗಳ ವಾಹನಗಳಿಗೂ ಬಂದೋಬಸ್ತ್ ಒದಗಿಸಲಾಗಿದೆ ಎಂದರು.
ಕುಡಿಯುವ ನೀರಿಗೆ ಕ್ರಮವಹಿಸಿ-ಸಿಇಒ
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಬಸವಂತಪ್ಪ ಅವರು ಮಾತನಾಡಿ,ಪರೀಕ್ಷಾರ್ಥಿಗಳಿಗೆ ಶುದ್ದ ಕುಡಿಯುವ ನೀರು ಒದಗಿಸಿ, ಶೌಚಾಲಯ ವ್ಯವಸ್ಥೆ ಸಮರ್ಪಕವಾಗಿರುವಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.
ನಗರದಲ್ಲೇ 14 ಕೇಂದ್ರಗಳ ವಿವರ
ಡಿಡಿಪಿಐ ಕೃಷ್ಣಮೂರ್ತಿ ಸಭೆಗೆ ಮಾಹಿತಿ ನೀಡಿ, ಪ್ರವೇಶದ್ವಾರ, ಕೇಂದ್ರದ ಕಾರಿಡಾರ್, ಬಂಡಲ್ ಕಟ್ಟುವ ಕಚೇರಿಯಲ್ಲಿ ಸಿಸಿ ಕ್ಯಾಮರಾ ವೀಡಿಯೋ ಕವರೇಜ್ಅನ್ನು ಪ್ರತಿ ಕೇಂದ್ರದಲ್ಲೂ ಮಾಡಲಾಗುತ್ತಿದೆ ಎಂದು ತಿಳಿಸಿದರು.
ನಗರದಲ್ಲೇ ಎಲ್ಲಾ 14 ಕೇಂದ್ರಗಳಿದ್ದು, ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ 2 ಕೇಂದ್ರಗಳು, ಸರ್ಕಾರಿ ಬಾಲಕರ ಪಿಯು ಕಾಲೇಜಿನಲ್ಲಿ 2 ಕೇಂದ್ರಗಳು, ಚಿನ್ಮಯ ವಿದ್ಯಾಲಯದಲ್ಲಿ 2 ಕೇಂದ್ರ, ಮಹಿಳಾ ಸಮಾಜದಲ್ಲಿ 2 ಹಾಗೂ ಸುಭಾಷ್ ಶಾಲೆಯಲ್ಲಿ 2 ಕೇಂದ್ರಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಉಳಿದಂತೆ ಬೆಂಗಳೂರು ಮಾಂಟೋಸ್ಸರಿ ಶಾಲೆಯಲ್ಲಿ ಒಂದು, ನೂತನ ಸರ್ಕಾರಿ ಪ್ರೌಢಶಾಲೆಯಲ್ಲಿ ಒಂದು ಕೇಂದ್ರ, ಮೆಥೊಡಿಸ್ಟ್ ಶಾಲೆಯಲ್ಲಿ ಒಂದು ಕೇಂದ್ರ, ಎಂಬಿ ರಸ್ತೆಯ ಸೆಂಟ್ಸ್ ಆನ್ಸ್ ಶಾಲೆಯಲ್ಲಿ ಒಂದು ಕೇಂದ್ರ ರಚಿಸಲಾಗಿದೆ ಎಂದು ತಿಳಿಸಿದರು.
ಉಳಿದಂತೆ
ಟಿಇಟಿ ಪರೀಕ್ಷಾ ನೋಡಲ್ ಅಧಿಕಾರಿ ಕೃಷ್ಣಪ್ಪ, ಮಾಹಿತಿ ನೀಡಿ, ಸುಗಮ ಪರೀಕ್ಷೆಗೆ ಎಲ್ಲಾ ಅಗತ್ಯ ಸಿದ್ದತೆ ಮಾಡಿದ್ದು, ಎಲ್ಲಾ 14 ಕೇಂದ್ರಗಳಿಗೂ 14 ಮುಖ್ಯಅಧೀಕ್ಷಕರು, 14 ಮಂದಿ ಸ್ಥಾನಿಕ ಜಾಗೃತದಳ ಅಧಿಕಾರಿಗಳು, 9 ಮಾರ್ಗಗಳಿಗೂ ಮಾರ್ಗಾಧಿಕಾರಿಗಳು, 210 ಮಂದಿ ಕೊಠಡಿ ಮೇಲ್ವಿಚಾರಕರನ್ನು ನೇಮಿಸಲಾಗಿದೆ ವೀಕ್ಷಕರಾಗಿ ಡಯಟ್ ಪ್ರಾಂಶುಪಾಲ ಕೆ.ಎನ್.ಜಯಣ್ಣ ಕಾರ್ಯ ನಿರ್ವಹಿಸುವರು ಎಂದು ತಿಳಿಸಿದರು.
ಪರೀಕ್ಷಾರ್ಥಿಗಳಿಗೆ ಹಲವು ಸೂಚನೆ
ಪರೀಕ್ಷೆಗೆ ಬರುವ ಅಭ್ಯರ್ಥಿಗಳು ಕಡ್ಡಾಯವಾಗಿ 3 ಇತ್ತೀಚಿನ ಭಾವಚಿತ್ರ ಹಾಗೂ ಪ್ರವೇಶ ಪತ್ರದೊಂದಿಗೆ ಒಂದು ಗುರುತಿನ ಚೀಟಿ ಕಡ್ಡಾಯವಾಗಿ ತರಬೇಕು ಎಂದು ತಿಳಿಸಿದ ಅವರು, ಪರಿಕ್ಷಾ ಕೇಂದ್ರದಲ್ಲಿ ಡಿಜಿಟಲ್ ವಾಚ್, ಮೊಬೈಲ್ ಮತ್ತಿತರ ಎಲೆಕ್ಟ್ರಾನಿಕ್ ಉಪಕರಣ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಪಂ ಸಿಇಒ ಪದ್ಮಬಸವಂತಪ್ಪ, ನಿಕಟಪೂರ್ವ ಅಪರ ಡಿಸಿ ಡಾ.ಶಂಕರ್ ವಾಣಿಕ್ಯಾಳ್, ಜಿಲ್ಲಾಖಜಾನಾಧಿಕಾರಿ ಮಹೇಂದ್ರ, ಡಿಹೆಚ್ಒ ಡಾ.ಜಗದೀಶ್, ಬಿಇಒಗಳಾದ ಕನ್ನಯ್ಯ, ಗಂಗರಾಮಯ್ಯ, ಮುನಿವೆಂಕಟರಾಮಾಚಾರಿ, ಮುನಿಲಕ್ಷ್ಮಯ್ಯ, ಶಿಕ್ಷಣಾಧಿಕಾರಿ ಸಗೀರಾ ಅಂಜುಂ, ಡಿವೈಪಿಸಿ ಗುರುಮೂರ್ತಿ, ವಿಷಯ ಪರಿವೀಕ್ಷಕರಾದ ಶಶಿವಧನ, ಎವೈಪಿಸಿ ಮೋಹನ್ ಬಾಬು ಮತ್ತಿತರರಿದ್ದರು.
ಇಂತಹ ಉದ್ಯೋಗ ಮಾಡುವರಿಗೆ BPL ರೇಷನ್ ಕಾರ್ಡ್ ದೊರೆಯುವುದಿಲ್ಲ
ಸರ್ಕಾರವು ಬಿಪಿಎಲ್ ಕಾರ್ಡ್ ಅನ್ನು ಬಡತನ ರೇಖೆಗಿಂತ ಕೆಳಗಿರುವಂತಹ ವರ್ಗದ ಜನರಿಗೆ ವಿತರಿಸುತ್ತದೆ. ಆದರೆ ಇದರ ಲಾಭ ಪದೆದು ಅನಹ್ರರಲ್ಲದವರೂ, ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳುತ್ತಾರೆ. ಬಿಪಿಎಲ್ ರೇಷನ್ ಕಾರ್ಡ್ ಇದ್ದಂತಹ ಜನರು ಉಚಿತವಾಗಿಯೇ ಪಡಿತರವನ್ನು ಪಡೆಯಬಹುದಾಗಿದೆ. ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಬಿಪಿಎಲ್ ಕಾರ್ಡ್ ಅನ್ನು ಹೊಂದಿದವರಿಗೆ ಅಕ್ಕಿಯ ಬದಲು ಫಲಾನುಭವಿಗಳ ಖಾತೆಗೆ ಹಣವನ್ನು ವರ್ಗಾವಣೆ ಮಾಡುತ್ತಿದೆ. ಇನ್ನು ಮುಂದೆ ಇಂತಹ ಉದ್ಯೋಗ ಮಾಡುತ್ತಿದ್ದರೆ ಅವರಿಗೆ ಬಿಪಿಎಲ್ ರೇಷನ್ ಕಾರ್ಡ್ಸ್ ಸಿಗುವುದಿಲ್ಲ
ಯಾವ ಉದ್ಯೋಗ ಮಾಡುತ್ತಿದ್ದರೆ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ –
1 ಸರ್ಕಾರಿ ನೌಕರರಾಗಿದ್ದರೆ ಸಾಮಾಜಿಕ ವಲಯದ ಉದ್ಯಮಗಳಲ್ಲಿ ಕೆಲಸವನ್ನು ಮಾಡುತ್ತಿದ್ದರೆ, ಯಾವುದೇ ಸರ್ಕಾರಿ ನಿಗಮಗಳಲ್ಲಿ ಕೆಲಸವನ್ನು ಮಾಡುತ್ತಿದ್ದರೆ ನಿಮಗೆ ಬಿಪಿಎಲ್ ರೇಷನ್ ಕಾರ್ಡ್ ದೊರೆಯುವುದಿಲ್ಲ.
2 ಸ್ವಾಯತ್ತ ಮಂಡಳಿಗಳಲ್ಲಿ ಕೆಲಸವನ್ನು ಮಾಡುವವರಿಗೂ ಬಿಪಿಎಲ್ ಕಾರ್ಡ್ ನೀಡಲಾಗುವುದಿಲ್ಲ.
3 ಸಹಕಾರಿ ಸಂಸ್ಥೆಗಳಲ್ಲಿ ಖಾಯಂ ಉದ್ಯೋಗಿಗಳಾಗಿದ್ದರೆ ಬಿಪಿಎಲ್ ರೇಷನ್ ಕಾರ್ಡ್ ಸಿಗುವುದಿಲ್ಲ
4 ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರಿಗೆ, ವಕೀಲರಿಗೆ ಮತ್ತು ಲೆಕ್ಕಪರಿಶೋಧಕರಿಗೂ ಈ ಕಾರ್ಡ್ಗಳನ್ನು ಪಡೆಯುವ ಅವಕಾಶವಿಲ್ಲರುದಿಲ್ಲ.
In Inauguration of Saint Aloysius International School, Harihara and 457thJubilee of the Patron of the Institution, Saint Aloysius Gonzaga / ಹರಿಹರದ ಸಂತ ಅಲೋಶಿಯಸ್ ಇಂಟರ್ನ್ಯಾಶನಲ್ ಸ್ಕೂಲ್ ಉದ್ಘಾಟನೆ ಹಾಗೂ ಸಂಸ್ಥೆಯ ಪಾಲಕ ಸಂತ ಅಲೋಶಿಯಸ್ ಗೊನ್ಜಾಗಾ ಅವರ 457ನೇ ಜಯಂತಿ
Harihar: The inauguration ceremony of Saint Aloysius International School in Harihara, Karnataka, is coinciding with the 457th Jubilee of Saint Aloysius Gonzaga, was a momentous event held on June 25, 2024, at 12 noon.The event commenced with the National Anthem, followed by the lighting of the ceremonial lamp by the dignitaries on dais. Amemorial plaque commemorating the inauguration of the school and an effigy of Saint Aloysius Gonzaga were unveiled, marking the significant milestone.Ms Reena Pinto, Principal of Saint Aloysius International School, led the prayer, invoking the presence of God during this auspicious moment. Fr Melvin Pinto SJ, Rector of Saint Aloysius Institutions, Mangalore, extended a warm welcome to the guests and attendees.The esteemed Governor of Kamataka, Hon’ble Shri Thawarchand Gehlot, gracedthe occasion as the chief guest. In his address, he emphasized that culturededucation is the key to realizing the concept of an integral India. He highlighted that building a well-educated society is the foundation of national
prosperity, fostering democratic ideals, diverse customs, cultural heritage,
and historical awareness.Most Rev. Dr Francis Serrao SJ, Bishop of Shivamogga Diocese, congratulated the Jesuit organization for its revolutionary steps in education, which aims to transform humanity and benefit society globally. Mr B.P. Harish, MLA of Harihar Assembly Constituency, praised Saint Aloysius Institution for its two decades
of dedicated educational service to Harihar Taluk and its continuous efforts for societal development.Rev. Fr. Dionysius SJ, Provincial of Karnataka Jesuit Province, proudly noted that theopening of the new Saint Aloysius International School marks a new chapter for the Aloysius Institutions in Mangalore.St Aloysius interational school owes a deep sense of gratitude to the Jesuits especially Rev. Fr Eric Mathias, SJ, Director of St Aloysius Institutions, Harihar.The entire event was masterfully led by MCs Mr. Abdul Rahman and Mrs Shamim Banu Sabha. A cultural programme by the kindergartners was a feast to the eyes, school students, from Classes 1 to VIlI as well as from the Pre-University (PU) ection, captivated the audience and was highly commendable. Hundreds of parents and students attended the event, making it a memorable occasion.The successful execution of the event was due to the coordinated efforts of various departments and individuals. The District Administration, Taluk Management Board, Security Department, Press Media, Audio-Visual Media, and all the concerned Departmental Officers played crucial rolesThe presence and support of well-wishers and parents added to the significance of this historic event. Mr. Baptist Sunny Gudinho, Program Coordinator, proposed the vote of thanks.
ಹರಿಹರದ ಸಂತ ಅಲೋಶಿಯಸ್ ಇಂಟರ್ನ್ಯಾಶನಲ್ ಸ್ಕೂಲ್ ಉದ್ಘಾಟನೆ ಹಾಗೂ ಸಂಸ್ಥೆಯ ಪಾಲಕ ಸಂತ ಅಲೋಶಿಯಸ್ ಗೊನ್ಜಾಗಾ ಅವರ 457ನೇ ಜಯಂತಿ
ಹರಿಹರ: ಹರಿಹರದ ಸಂತ ಅಲೋಶಿಯಸ್ ಅಂತರಾಷ್ಟ್ರೀಯ ಶಾಲೆಯ ಉದ್ಘಾಟನಾ ಸಮಾರಂಭ ಕರ್ನಾಟಕವು ಸಂತ ಅಲೋಶಿಯಸ್ ಗೊನ್ಜಾಗಾ ಅವರ 457 ನೇ ಜಯಂತಿಯೊಂದಿಗೆ ಆಚರಿಸಲಾಯಿತು. ಜೂನ್ 25, 2024 ರಂದು ಮಧ್ಯಾಹ್ನ 12 ಗಂಟೆಗೆ ನಡೆದ ಮಹತ್ವದ ಘಟನೆ ನಡೆಯಿತು.
ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಪ್ರಾರಂಭವಾಯಿತು, ನಂತರ ದೀಪ ಬೆಳಗಿಸಲಾಯಿತು ವೇದಿಕೆಯಲ್ಲಿ ಗಣ್ಯರಿಂದ ವಿಧ್ಯುಕ್ತ ದೀಪ. ಸ್ಮರಣಾರ್ಥ ಸ್ಮಾರಕ ಫಲಕ ಶಾಲೆಯ ಉದ್ಘಾಟನೆ ಮತ್ತು ಸಂತ ಅಲೋಶಿಯಸ್ ಗೊನ್ಜಾಗಾ ಅವರ ಪುತ್ಥಳಿಯನ್ನು ಅನಾವರಣ ಗೊಳಿಸಲಾಯಿತು. ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತಿದೆ. ಸಂತ ಅಲೋಶಿಯಸ್ ಇಂಟರ್ನ್ಯಾಶನಲ್ ಸ್ಕೂಲ್ನ ಪ್ರಾಂಶುಪಾಲೆ ರೀನಾ ಪಿಂಟೋ ಪ್ರಾರ್ಥನೆ ಸಲ್ಲಿಸಿದರು. ಈ ಮಂಗಳಕರ ಸಮಯದಲ್ಲಿ ದೇವರ ಉಪಸ್ಥಿತಿಯನ್ನು ಆಹ್ವಾನಿಸುವುದು. ಈಡಿ ಮೆಲ್ವಿನ್ ಪಿಂಟೋ Sಎ, ಮಂಗಳೂರಿನ ಸಂತ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ಅವರು ಸ್ವಾಗತಿಸಿದರು ಅತಿಥಿಗಳು ಮತ್ತು ಪಾಲ್ಗೊಳ್ಳುವವರು.
ಗೌರವಾನ್ವಿತ ಕರ್ನಾಟಕದ ರಾಜ್ಯಪಾಲರಾದ ಸನ್ಮಾನ್ಯ ಶ್ರೀ ತಾವರಚಂದ್ ಗೆಹ್ಲೋಟ್ ರವರು ಮುಖ್ಯ ಅತಿಥಿಯಾಗಿದ್ದು ಅವರು. “ಸಂಸ್ಕಾರಯುತ ಶಿಕ್ಷಣವೇ’ ಎಂದು ಅವರು ತಮ್ಮ ಭಾಷಣದಲ್ಲಿ ಒತ್ತಿ ಹೇಳಿದರು ಸಮಗ್ರ ಭಾರತದ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಕೀಲಿಕೈ. ಅವರು ಕಟ್ಟಡವನ್ನು ಎತ್ತಿ ತೋರಿಸಿದರು ಸುಶಿಕ್ಷಿತ ಸಮಾಜವು ರಾಷ್ಟ್ರೀಯ ಸಮೃದ್ಧಿಯ ಅಡಿಪಾಯವಾಗಿದೆ, ಪ್ರಜಾಪ್ರಭುತ್ವವನ್ನು ಬೆಳೆಸುತ್ತದೆ ಆದರ್ಶಗಳು, ವೈವಿಧ್ಯಮಯ ಪದ್ಧತಿಗಳು, ಸಾಂಸ್ಕೃತಿಕ ಪರಂಪರೆ ಮತ್ತು ಐತಿಹಾಸಿಕ ಅರಿವು. ಶಿವಮೊಗ್ಗ ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ.ಫ್ರಾನ್ಸಿಸ್ ಸೆರಾವೋ ಎಸ್.ಜೆ. ಶಿಕ್ಷಣದಲ್ಲಿ ತನ್ನ ಕ್ರಾಂತಿಕಾರಿ ಹೆಜ್ಜೆಗಳಿಗಾಗಿ ಜೆಸ್ಯೂಟ್ ಸಂಸ್ಥೆಯು ರೂಪಾಂತರಗೊಳ್ಳುವ ಗುರಿಯನ್ನು ಹೊಂದಿದೆ ಮಾನವೀಯತೆ ಮತ್ತು ಜಾಗತಿಕವಾಗಿ ಸಮಾಜಕ್ಕೆ ಪ್ರಯೋಜನ. ಶ್ರೀ ಬಿ.ಪಿ. ಹರೀಶ್, ಹರಿಹರ ವಿಧಾನಸಭಾ ಶಾಸಕ ಕ್ಷೇತ್ರ, ತನ್ನ ಎರಡು ದಶಕಗಳ ಸಮರ್ಪಿತ ಸಂತ ಅಲೋಶಿಯಸ್ ಸಂಸ್ಥೆಯನ್ನು ಶ್ಲಾಘಿಸಿದರು ಹರಿಹರ ತಾಲೂಕಿಗೆ ಶೈಕ್ಷಣಿಕ ಸೇವೆ ಮತ್ತು ಸಮಾಜಕ್ಕಾಗಿ ಅದರ ನಿರಂತರ ಪ್ರಯತ್ನ ಅಭಿವೃದ್ಧಿ.
ರೆ.ಫಾ. ಕರ್ನಾಟಕ ಜೆಸ್ಯೂಟ್ ಪ್ರಾಂತ್ಯದ ಪ್ರಾಂತೀಯ ಡಯೋನಿಸಿಯಸ್ ಎಸ್.ಜೆ. ಅವರು ಹೆಮ್ಮೆಯಿಂದ ಗಮನಿಸಿದರು ಹೊಸ ಸಂತ ಅಲೋಶಿಯಸ್ ಇಂಟರ್ನ್ಯಾಶನಲ್ ಸ್ಕೂಲ್ನ ಉದ್ಘಾಟನೆಯು ಹೊಸ ಅಧ್ಯಾಯವನ್ನು ಗುರುತಿಸುತ್ತದೆ
ಮಂಗಳೂರಿನ ಅಲೋಶಿಯಸ್ ಸಂಸ್ಥೆಗಳು. ಸೇಂಟ್ ಅಲೋಶಿಯಸ್ ಇಂಟರ್ಯಾಷನಲ್ ಶಾಲೆಯು ಜೆಸ್ಯೂಟ್ಗಳಿಗೆ ಆಳವಾದ ಕೃತಜ್ಞತೆಯ ಭಾವನೆಯನ್ನು ಹೊಂದಿದೆ ವಿಶೇಷವಾಗಿ ರೆವ. ಫಾ. ಎರಿಕ್ ಮಥಿಯಾಸ್, Sಎ, ಸೇಂಟ್ ಅಲೋಶಿಯಸ್ ಸಂಸ್ಥೆಗಳ ನಿರ್ದೇಶಕ, ಹರಿಹರ್.
ಕಾರ್ಯಕ್ರಮವನ್ನು ಒಅ ಗಳಾದ ಶ್ರೀ ಅಬ್ದುಲ್ ರಹಮಾನ್ ಮತ್ತು ಶ್ರೀಮತಿ ಶಮೀಮ್ ಬಾನು ಸಬಾರವರು ಕೌಶಲ್ಯದಿಂದ ಮುನ್ನಡೆಸಿದರು
ಬಾಲಮಂದಿರದಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಕಣ್ಣಿಗೆ ಹಬ್ಬವಾಗಿತ್ತು. ಶಾಲಾ ವಿದ್ಯಾರ್ಥಿಗಳು, 1 ತರಗತಿಯಿಂದ 8 ರ ವರೆಗೆ ಹಾಗೂ ಪ್ರಿ-ಯೂನಿವರ್ಸಿಟಿ (PU) ವಿಭಾಗದಿಂದ, ಪ್ರೇಕ್ಷಕರನ್ನು ಆಕರ್ಷಿಸಿತು ಮತ್ತು ಹೆಚ್ಚು ಶ್ಲಾಘನೀಯವಾಗಿತ್ತು. ನೂರಾರು ಪೋಷಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಇದೊಂದು ಸ್ಮರಣೀಯ ಸಂದರ್ಭವಾಗಿದೆ.
ಕಾರ್ಯಕ್ರಮದ ಯಶಸ್ಸಿಗೆ ವಿವಿಧರ ಸಂಘಟಿತ ಪ್ರಯತ್ನವೇ ಕಾರಣ ಇಲಾಖೆಗಳು ಮತ್ತು ವ್ಯಕ್ತಿಗಳು. ಜಿಲ್ಲಾಡಳಿತ, ತಾಲೂಕು ಆಡಳಿತ ಮಂಡಳಿ, ಭದ್ರತಾ ಇಲಾಖೆ, ಪತ್ರಿಕಾ ಮಾಧ್ಯಮ, ಶ್ರವ್ಯ-ದೃಶ್ಯ ಮಾಧ್ಯಮ, ಮತ್ತು ಸಂಬಂಧಿಸಿದ ಎಲ್ಲಾ ಇಲಾಖಾ ಅಧಿಕಾರಿಗಳು ನಿರ್ಣಾಯಕ ಪಾತ್ರ ವಹಿಸಿದರು.ಹಿತೈಷಿಗಳು ಮತ್ತು ಪೋಷಕರ ಉಪಸ್ಥಿತಿ ಮತ್ತು ಬೆಂಬಲವು ಮಹತ್ವವನ್ನು ಹೆಚ್ಚಿಸಿದೆ ಈ ಐತಿಹಾಸಿಕ ಘಟನೆ. ಕಾರ್ಯಕ್ರಮದ ಸಂಯೋಜಕರಾದ ಶ್ರೀ ಬ್ಯಾಪ್ಟಿಸ್ಟ್ ಸನ್ನಿ ಗುಡಿನೊ ಪ್ರಸ್ತಾವಿಸಿದರು ಧನ್ಯವಾದವನ್ನು ಅಎಪಿಸಿದರು.
ಕುಂದಾಪುರ – ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಶಾಲಾ ವಿದ್ಯಾರ್ಥಿ ಸಂಸತ್ತು ಮತ್ತು ವಿವಿಧ ಶೈಕ್ಷಣಿಕ ಸಂಘಗಳ ಉದ್ಘಾಟನೆ
ಕುಂದಾಪುರ : ದಿನಾಂಕ 26-06-2024 ರಂದು ಸಂತ ಜೋಸೆಫರ ಪ್ರೌಢಶಾಲೆ ಕುಂದಾಪುರ ಇಲ್ಲಿ ಶಾಲಾ ವಿದ್ಯಾರ್ಥಿ ಸಂಸತ್ತು ಹಾಗೂ ವಿವಿಧ ಶೈಕ್ಷಣಿಕ ಸಂಘಗಳ ಉದ್ಘಾಟನಾ ಸಮಾರಂಭ ಜರುಗಿತು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆಯನ್ನು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ ಇಲ್ಲಿನ ಶಿಕ್ಷಣ ಸಂಯೋಜಕರಾದ ಶ್ರೀಯುತ ಶೇಖರ್ ಇವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಪ್ರಜಾಪ್ರಭುತ್ವದ ಮಹತ್ವದ ಬಗ್ಗೆ ತಿಳಿಸಿ, ಶಾಲೆಯ ನಿಯಮ ಹಾಗೂ ಶಿಸ್ತು ಕಾಪಾಡುವಲ್ಲಿ ಶಾಲಾ ಸಂಸತ್ತಿನ ಪಾತ್ರ ಅತಿ ಮುಖ್ಯವಾದದ್ದು ಎಂದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಐ ವಿ ಇವರು ಎಲ್ಲಾ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ದೈಹಿಕ ಶಿಕ್ಷಕರಾದ ಮೈಕಲ್ ಇವರು ಸಹಕರಿಸಿದರು. ವಿರೋಧ ಪಕ್ಷದ ನಾಯಕಿ ಕು. ವರ್ಷಿಣಿ ಇವರು ನಿರೂಪಿಸಿದರು. ಚಟುವಟಿಕ ಮಂತ್ರಿ ಕು. ಲತೀಕಾ ಇವರು ಸ್ವಾಗತಿಸಿದರು. ಶಾಲಾ ನಾಯಕಿ ಕು. ಶ್ರೀನಿಧಿ ಇವರು ವಂದಿಸಿದರು.
ಶಿಕ್ಷಕ ಶಿಕ್ಷಕೇತರ ವೃಂದದವರು ಉಪಸಿತರಿದ್ದರು.