ಶ್ರೀನಿವಾಸಪುರ : ಶ್ರೀನಿವಾಸಪುರ ತಾಲೂಕು ಬರಗಾಲದ ಪಟ್ಟಿಯಲ್ಲಿ ಇದ್ದು ಇದರ ಹಿನ್ನೆಲೆಯಲ್ಲಿ ತಾಲೂಕಿನ ರೈತರಿಗೂ ಸಹ ಸರ್ಕಾರವು ನೀಡಲಿರುವ ಬರಪರಿಹಾರಕ್ಕಾಗಿ ಹಣ ಬಿಡುಗಡೆಯಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಶಂಕರ್ ವಣಿಕ್ಯಾಳ್ ಹೇಳಿದರು.
ಶ್ರೀನಿವಾಸಪುರ ಪಟ್ಟಣದ ತಾಲೂಕು ಕಚೇರಿ ಗೆ ಬುಧವಾರ ಬೇಟಿ ನೀಡಿ ವಿವಿಧ ದಾಖಲೆಗಳ ಬಗ್ಗೆ ಚರ್ಚೆ ನೆಡೆಸಿ ಮಾತನಾಡಿದರು.
ಅದಕ್ಕೆ ದಾಖಲೆಗಳ ಬಗ್ಗೆ ಚರ್ಚೆ ಮಾಡಲಾಗಿದೆ ಅಲ್ಲದೆ ಆಧಾರ್ ಫೀಡಿಂಗ್ ಲ್ಯಾಂಡ್ ಬೀಟ್ ಆಪ್ ಕುರಿತು ಪ್ರಗತಿ ಪರಿಶೀಲಿಸಿಲಾಗಿದೆ ಎಂದರು ಹಾಗೂ ಕಂದಾಯ ಇಲಾಖೆ ವಿಷಯಗಳ ಬಗ್ಗೆ ಪರಿಶೀಲನೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಜಿ ಎನ್ ಸುದೀಂದ್ರ, ಶಿರಸ್ತೆದಾರ್. ವಿಶ್ವನಾಥ್ ನಾಯಕ್, ಎಸ್ ಡಿ ಎ. ಎಚ್.ಎಸ್. ಅಭಿμÉೀಕ್, ಸಿಬ್ಬಂದಿ ನಿರ್ಮಲ ಇದ್ದರು .
Month: May 2024
ಮೂಡ್ಲಕಟ್ಟೆ ಎಂಐಟಿಕೆ : ರಾಜ್ಯ ಮಟ್ಟದ *ಸಾವಿಷ್ಕಾರ್* ಸಾಂಸ್ಕೃತಿಕ ಹಬ್ಬ ಸಮಾರೋಪ ಸಮಾರಂಭ
ಕುಂದಾಪುರದ ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎರಡು ದಿನಗಳ ರಾಜ್ಯ ಮಟ್ಟದ ಸಾಂಸ್ಕೃತಿಕ -ತಾಂತ್ರಿಕ ಹಾಗೂ ಮ್ಯಾನೇಜ್ ಮೆಂಟ್ ಸ್ಪರ್ಧಾಕೂಟ ವಿಜೃಂಭಣೆಯಿಂದ ಜರುಗಿದ್ದು ಎರಡನೆಯ ದಿನದಂದು ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಯಿತು.. ಸಂಸ್ಥೆಯ ಪ್ರಾಂಶುಪಾಲ ಡಾ.ಅಬ್ದುಲ್ ಕರೀಂ ,ಕಾರ್ಯಕ್ರಮದ ಸಂಚಾಲಕ, ಉಪ ಪ್ರಾಂಶುಪಾಲ ಡಾ.ಮೆಲ್ವಿನ್ ಡಿಸೋಜಾ, ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ.ರಾಮಕೃಷ್ಣ ಹೆಗ್ಡೆ, ಈ ಕಾರ್ಯಕ್ರಮ ನಡೆಸಿಕೊಟ್ಟರು. ವಿವಿಧ ವಿಭಾಗದಲ್ಲಿ 25ಕ್ಕೂ ಹೆಚ್ಚಿನ ಸ್ಪರ್ದೆಗಳನ್ನು ನಡೆಸಿದ್ದು 30ಕ್ಕೂ ಹೆಚ್ಚು ಕಾಲೇಜುಗಳು ಭಾಗವಹಿಸಿದ್ದವು. ಅವುಗಳಲ್ಲಿ ಹೆಚ್ಚು ಆಕರ್ಷಣೆಯ ಸ್ಪರ್ದೆಯಾದ ವೆರೈಟಿ ಶೋ ಅಲ್ಲಿ ಡಾ ಬಿ ಬಿ ಹೆಗ್ಡೆ ಕಾಲೇಜು ಕುಂದಾಪುರ ಪ್ರಥಮ ಸ್ಥಾನ ಗಳಿಸಿದರೆ , ಎಮ್ ಜಿ ಎಮ್ ಕಾಲೇಜು ಉಡುಪಿ ದ್ವಿತೀಯ ಸ್ಥಾನ ಪಡೆಯಿತು. ಎಲ್ಲ ಸ್ಪರ್ದೆಯ ವಿಜೇತರುಗಳಿಗೆ ಕ್ಯಾಶ್ ಪ್ರೈಸ್ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ಸಾಂಸ್ಕೃತಿಕ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಡಾ ಬಿ ಬಿ ಹೆಗ್ಡೆ ಕಾಲೇಜು ಕುಂದಾಪುರ ಚಾಂಪಿಯನ್ ಟ್ರೋಫಿ ತನ್ನದಾಗಿಸಿಕೊಂಡಿತು. ಅಂಜುಮಾನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಭಟ್ಕಳ ರನ್ನರ್ ಆಗಿ ಹೊರ ಹೊಮ್ಮಿದರು. ವಿದ್ಯಾರ್ಥಿ ತೇಜಸ್ ಹಾಗೂ ಪ್ಲೇಸ್ಮೆಂಟ್ ಡೀನ್ ಪ್ರೊಫೆಸರ್ ಅಮೃತಮಾಲ ಕಾರ್ಯಕ್ರಮ ನಿರ್ವಹಿಸಿದರು.
ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಚರ್ಚಿನಲ್ಲಿ ಮಕ್ಕಳಿಗೆ ಪರಮ ಪ್ರಸಾದದ ಸಂಸ್ಕಾರ
PHOTOS: ST.ANTONY STUDIO
ಕುಂದಾಪುರ, ಮೇ.8: ಸ್ಥಳೀಯ ಭಾಗ್ಯವಂತೆ ರೋಜರಿ ಮಾತಾ ಚರ್ಚಿನಲ್ಲಿ ಕ್ರಿಸ್ತಿ ಶಿಕ್ಷಣದಲ್ಲಿ ತೆರ್ಗಡೆಕೊಂಡ ಕ್ರೈಸ್ತ ಮಕ್ಕಳಿಗೆ ಮೇ 5 ರಂದು ದಿವ್ಯ ಪರಮ ಪ್ರಸಾದದ ಸಂಸ್ಕಾರವನ್ನು ನೀಡಲಾಯಿತು.
ಈ ಸಂಸ್ಕಾರದ ದಿವ್ಯ ಬಲಿದಾನವನ್ನು ರೋಜರಿ ಮಾತಾ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ ನಡೆಸಿಕೊಟ್ಟರು. ದಿವ್ಯ ಪರಮ ಪ್ರಸಾದದ ಸಂಸ್ಕಾರದ ಬಗ್ಗೆ ಮಕ್ಕಳಿಗೆ ತಿಳಿಸಿದರು. ಮತ್ತು ಆಯ್ದ ಮಕ್ಕಳಿಗೆ ಪರಮ ಪ್ರಸಾದದ ಸಂಸ್ಕಾರ ನೀಡಿ ಅವರಿಗೆ ದಿವ್ಯ ಪರಮ ಪ್ರಸಾದವನ್ನು ನೀಡಿದರು. ಪ್ರಧಾನ ಧರ್ಮಗುರು ದಿವ್ಯ ಬಲಿದಾನದಲ್ಲಿ ಭಾಗಿಯಾಗಿ ಪರಮ ಪ್ರಸಾದದ ಸಂಸ್ಕಾರ ಪಡೆದುಕೊಂಡ ಮಕ್ಕಳಿಗೆ ಪ್ರಮಾಣ ವಚನ ಭೋದಿಸಿದರು.
ಭಗಿನಿ ಸುನೀತಾ ಮತ್ತು ಜೂಲಿಯೆಟ್ ಪಾಯ್ಸ್ ಇವರು ಪರಮ ಪ್ರಸಾದದ ಸಂಸ್ಕಾರ ಪಡೆದ ಮಕ್ಕಳಿಗೆ ತರಬೇತಿ ನೀಡಿ ಅಣಿಗೊಳಿಸಿದ್ದರು. ಚಿಕ್ಕದಾದ ಅಭಿನಂದನ ಕಾರ್ಯಕ್ರಮವನ್ನು ನೆಡಸಲಾಯಿತು.
ಜೆ.ತಿಮ್ಮ ಸಂದ್ರ ಗ್ರಾ.ಪಂ.ವ್ಯಾಪ್ತಿಯ ಕಿರುವಾರ ಗ್ರಾಮದ ಸರ್ಕಾರಿ ಹಿ. ಪ್ರಾ. ಶಾಲೆ ಕಟ್ಟಡದ ಕಳಪೆ ಕಾಮಗಾರಿ ಗುತ್ತಿಗೆದಾರನ ವಿರುದ್ಧ ಗ್ರಾಮಸ್ಥರ ಆಕ್ರೋಶ
ಶ್ರೀನಿವಾಸಪುರ : ಸರ್ಕಾರವು ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಬಿಸಿಊಟ, ಸಮವಸ್ತ್ರ, ಉಚಿತ ಪುಸ್ತಕಗಳು ಹೀಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೂ ಸಹ ಸರ್ಕಾರಿ ಶಾಲೆಗಳನ್ನು ಉಳಿಸಲು ಅನೇಕ ರೂಪರೇಷಗಳನ್ನು ಹಮ್ಮಿಕೊಂಡಿದೆ. ಆದರೂ ಸರ್ಕಾರಿ ಶಾಲೆಗಳೆಂದರೆ ಮಕ್ಕಳ ಪೋಷಕರಲ್ಲಿ ಒಂದು ರೀತಿಯಲ್ಲಿ ನಿರುತ್ಸಾಹ.
ಇಂತಹ ಸಂದರ್ಭದಲ್ಲಿ ತಾಲೂಕಿನ ಜೆ.ತಿಮ್ಮಸಂದ್ರ ಗ್ರಾ.ಪಂ.ವ್ಯಾಪ್ತಿಯ ಕಿರುವಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡದ ಕಳಪೆ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರನ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕಾಗಿ ಜಿ.ಪಂ ಅನುದಾನದಲ್ಲಿ ಸುಮಾರು 14 ಲಕ್ಷ ಅಂದಾಜು ಮೊತ್ತ ಕಾಮಗಾರಿಗೆ ಸರ್ಕಾರವು ಅನುದಾನವು ಬಿಡುಗಡೆ ಮಾಡಿದೆ.
ಕಿರುವಾರ ಗ್ರಾಮದ ಸರ್ಕಾರಿ ಶಾಲೆಯಲ್ಲಿ 1 ರಿಂದ 7 ತರಗತಿಯ ವರೆಗೂ ಇದ್ದು ಅದರಲ್ಲಿ ಒಟ್ಟು 16 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಪಾಠ ಪ್ರವಚನಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಇಲಾಖೆ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಸರ್ಕಾರವು ಒಂದು ಕೊಠಡಿ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದೆ. ಆ ಕೊಠಡಿಯ ಪ್ರಾರಂಭ ಹಂತದಲ್ಲಿಯೇ ಕಳಪೆ ಕಾಮಗಾರಿಯಿಂದ ಕೂಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ತಕ್ಷಣ ಇದಕ್ಕೆ ಸಂಬಂದಿಸಿದ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿ ಗುತ್ತಿಗೆದಾರನ ವಿರುದ್ಧ ಕ್ರಮಕೈಗೊಳ್ಳಬೇಕು ಇಲ್ಲವಾದರೆ ಕಾಮಗಾರಿ ಮುಂದುವರೆಸಲು ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರು ಎಚ್ಚರಿಸಿದರು.
ಪೋಷಕರು ತಮ್ಮ ಮಕ್ಕಳ ಬಗ್ಗೆ ಅನೇಕ ಕನಸನ್ನು ಕಂಡಿದ್ದು ತಮ್ಮ ಮಕ್ಕಳ ಜೀವದ ಜೊತೆ ಚಲ್ಲಾಟವಾಡುವ ರೀತಿಯಲ್ಲಿ ಗುತ್ತಿಗೆದಾರ ಶಾಲಾ ಕಟ್ಟಡವನ್ನು ಪ್ರಾರಂಭದ ಹಂತದಲ್ಲಿಯೇ ಕಳಪೆ ಕಾಮಗಾರಿಯನ್ನು ಮಾಡುತ್ತಿರುವ ಬಗ್ಗೆ ಗ್ರಾಮಸ್ಥರಾದ ಮುನಿಸ್ವಾಮಿ, ಕೆ.ಐ. ನಾರಾಯಣಸ್ವಾಮಿ, ಕೆ.ಎಂ.ನರಸಿಂಹಯ್ಯ, ಕೆ.ಎಲ್.ಅರುಣ್ಕುಮಾರ್, ಕೆ.ಎನ್.ಮಂಜುನಾಥ, ಕೆ.ಟಿ.ಶ್ರೀನಿವಾಸ್, ಸುರೇಶ್, ಕೆ.ಎನ್.ಕೃಷ್ಣಪ್ಪ, ಕೆ.ಎನ್.ವೆಂಕಟರಮಣ ಮುಂತಾದವರು ಆರೋಪ ಮಾಡುತ್ತಿದ್ದಾರೆ
ಕನ್ಯಾಕುಮಾರಿ – ವೈದ್ಯರಾಗುವ ಸ್ವಲ್ಪ ಸಮಯ ಇರುವಾಗ ಸಮುದ್ರದಲ್ಲಿ ಮುಳುಗಿ 5 ವೈದ್ಯ ವಿದ್ಯಾರ್ಥಿಗಳ ದಾರುಣ ಸಾವು
ಕನ್ಯಾಕುಮಾರಿಯಲ್ಲಿನ ಸಮುದ್ರದಲ್ಲಿ ಮುಳುಗಿ ಐವರು ಮೆಡಿಕಲ್ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಮದುವೆ ಸಮಾರಂಭಕ್ಕೆ ಬಂದತ್ತಹ ಸಮುದ್ರ ತೀರಕ್ಕೆ ಐವರು ವಿದ್ಯಾರ್ಥಿಗಳು ತೆರಳಿದ್ದರು. ಇದೇ ವೇಳೆ, ಲೆಮುರ್ ಬೀಚ್ನಲ್ಲಿ ಈಜಾಡುವಾಗ ಐವರೂ ನೀರುಪಾಲಾಗಿದ್ದಾರೆ. ಐವರಲ್ಲಿ ಇಬ್ಬರು ಯುವತಿಯರಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಐವರೂ ತಿರುಚಿರಪಳ್ಳಿಯಲ್ಲಿರುವ ಎಸ್ ಆರ್ ಎಂ ಮೆಡಿಕಲ್ ಕಾಲೇಜಿನವರು ಎಂದು ಮಾಹಿತಿ ಲಭ್ಯವಾಗಿದೆ.
ಮೃತರನ್ನು ತಂಜಾವೂರಿನ ಚಾರುಕವಿ, ನೇಯ್ವೇಲಿಯ ಗಾಯತ್ರಿ, ಕನ್ಯಾಕುಮಾರಿಯ ಸರ್ವದರ್ಶಿತ್, ದಿಂಡಿಗಲ್ನ ಪ್ರವೀಣ್ ಸ್ಯಾಮ್ ಹಾಗೂ ಆಂಧ್ರಪ್ರದೇಶದ ವೆಂಕಟೇಶ್ ಎಂಬುದಾಗಿ ಗುರುತಿಸಲಾಗಿದೆ. ಒಟ್ಟು ಎಂಟು ವಿದ್ಯಾರ್ಥಿಗಳು ಈಜಾಡಲು ಹೋಗಿದ್ದಾಗ ಐವರು ನೀರುಪಾಲಾಗಿದ್ದಾರೆ. ಇಂಟರ್ನ್ಗಳಾಗಿದ್ದ ಕರೂರಿನ ನೇಶಿ, ಥೆಂಗಿಯ ಪ್ರಿಯಾಂಕಾ ಹಾಗೂ ಮದುರೈನ ಶರಣ್ಯ ಎಂಬ ಯುವತಿಯರನ್ನು ರಕ್ಷಿಸಲಾಗಿದೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
“ಲೆಮುರ್ ಬೀಚ್ ಖಾಸಗಿ ಬೀಚ್ ಆಗಿದ್ದು, ಇಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಭಾನುವಾರ (ಮೇ 5) ಮದುವೆಗೆ ಬಂದಿದ್ದ ವಿದ್ಯಾರ್ಥಿಗಳು ಅವರಲ್ಲೇ ಗುಂಪುಗಳಾಗಿ ಚದುರಿ ಹೋಗಿದ್ದಾರೆ. ಗೆಳೆಯರು ಸೇರಿ ಪ್ರವಾಸಿ ತಾಣಗಳಿಗೆ ಹೆಸರಾದ ಕನ್ಯಾಕುಮಾರಿಯನ್ನು ಸುತ್ತಲು ಮುಂದಾಗಿದ್ದಾರೆ. ಇವರಲ್ಲಿ ಎಂಟು ವಿದ್ಯಾರ್ಥಿಗಳು ಲೆಮುರ್ ಬೀಚ್ ಪ್ರವೇಶಿಸಿದ್ದಾರೆ. ಸಮುದ್ರದಲ್ಲಿ ಭಾರಿ ಅಲೆಗಳಿರುವ ಕಾರಣ ಪ್ರವೇಶ ನಿರಾಕರಿಸಲಾಗಿತ್ತು. ಹೀಗಿದ್ದರೂ ಅವರು ಹೇಗೆ ಹೋದರು ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ” ಎಂದು ಕನ್ಯಾಕುಮಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇ. ಸುಂದರವದನಂ ಮಾಹಿತಿ ನೀಡಿದ್ದಾರೆ.
ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಕೋರ್ಸ್ ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯುವುದಿತ್ತು. ಎಲ್ಲರೂ ವೈದ್ಯರಾಗುವ ಕನಸು ಕಾಣುತ್ತಿದ್ದರು. ಯಾವ ಆಸ್ಪತ್ರೆಯಲ್ಲಿ ಇಂಟರ್ನ್ಶಿಪ್ ಮಾಡಬೇಕು, ಯಾವ ನಗರಕ್ಕೆ ಹೋದರೆ ಸೂಕ್ತ ಎಂಬ ಕುರಿತು ಅವರ ಮಧ್ಯೆಯೇ ಚರ್ಚೆ ನಡೆಯುತ್ತಿತ್ತು. ಅವರ ಪೋಷಕರು ಕೂಡ ನೂರಾರು ಕನಸು ಕಂಡಿದ್ದರು. ಆದರೆ, ಮದುವೆಗೆ ಹೋದವರು, ಮದುವೆ ಮುಗಿಸಿ, ಖಾಸಗಿ ಬೀಚ್ನಲ್ಲಿ ಪ್ರವೇಶ ಇಲ್ಲದಿದ್ದರೂ ಈಜಲು ಹೋಗಿದ್ದೇ ಅವರ ಪ್ರಾಣಕ್ಕೆ ಕುತ್ತು ತಂದಿದೆ.
ದೇವಾಲಯಗಳು ಮನುಷ್ಯನ ಜೀವನಕ್ಕೆ ದಾರಿದೀಪ, ದೇವರ ಆರಾಧನೆಯಿಂದ ನೆಮ್ಮದಿಯ ಬದುಕು ಪ್ರಾಪ್ತಿಯಾಗುತ್ತದೆ – ತೂಪಲ್ಲಿ ಮಧುಸೂದನರೆಡ್ಡಿ
ಶ್ರೀನಿವಾಸಪುರ : ದೇವಾಲಯಗಳು ಮನುಷ್ಯನ ಜೀವನಕ್ಕೆ ದಾರಿದೀಪವಾಗಿದ್ದು, ದೇವರ ಆರಾಧನೆಯಿಂದ ನೆಮ್ಮದಿಯ ಬದುಕು ಪ್ರಾಪ್ತಿಯಾಗುತ್ತದೆ ಎಂದು ಗ್ರಾಮದ ಮುಖಂಡ ತೂಪಲ್ಲಿ ಮಧುಸೂದನರೆಡ್ಡಿ ಹೇಳಿದರು.
ಶ್ರೀನಿವಾಸಪುರ ತಾಲೂಕಿನ ನೆಲವಂಕಿ ಹೋಬಳಿ ತೂಪಲ್ಲಿ ಗ್ರಾಮದಲ್ಲಿ ನಡೆದ ಶ್ರೀ ಕೋದಂಡರಾಮಸ್ವಾಮಿ ದೇವಾಲಯದ ವಾರ್ಷಿಕೋತ್ಸವ ಹಾಗು ಲೋಕಾಕಲ್ಯಾಣರ್ಥವಾಗಿ ಕಲ್ಯಾಣೋತ್ಸವ, ರಾಮಕೋಟಿ ಕಾರ್ಯಕ್ರಮಗಳ ಅಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮದ ಶ್ರೀಕೋದಂಡರಾಮಸ್ವಾಮಿ ದೇವಾಲಯವು ಪುರತಾನವಾಗಿದ್ದು , ಕಳೆದ ಎರಡು ವರ್ಷಗಳಿಂದ ಪುನಃಪ್ರತಿಷ್ಟಾಪಿಸಲಾಗಿದ್ದು, ದೇವಾಲಯಕ್ಕೆ ಉತ್ಸವ ಮೂರ್ತಿಗಳನ್ನು ತಂದು ಅವುಗಳಿಗೆ ವಿಶೇಷ ಪೂಜೆಗಳನ್ನು ಮಾಡಿ ನಂತರ ಕಲ್ಯಾಣೋತ್ಸವವನ್ನು ಹಾಗು ಲೋಕಕಲ್ಯಾಣರ್ಥವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದೇವರ ನಮ್ಮ ನಾಡಿನ ಜನತೆಗೆ ಸಕಾಲದಲ್ಲಿ ಮಳೆ ಬೆಳೆಯಾಗಿ ನೆಮ್ಮದಿ ಜೀವನ ನಡೆಸಿಕೊಂಡು ಹೋಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಲಾಗಿದೆ ಎಂದರು.
ಪೂಜಾ ಕಾರ್ಯಕ್ರಮಗಳನ್ನು ಗನಿಬಂಡೆ ವೈ.ಆರ್.ಶ್ರೀನಾಥಾಚಾರಿ ನಡೆಸಿಕೊಟ್ಟರು. ರಾಮಕೋಟಿಯನ್ನು ಪಾಂಡುರಂಗ ಜಾನಪದ ಮತ್ತು ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ತೂಪಲ್ಲಿ ಬಸವರಾಜ್ ನೇತೃತ್ವದಲ್ಲಿ ರಾಮಕೋಟಿ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಯಿತು.
ಗ್ರಾಮದ ಮುಖಂಡರಾದ ರಾಮರೆಡ್ಡಿ, ನರೇಂದ್ರಕುಮಾರ್, ಶ್ರೀನಿವಾಸರೆಡ್ಡಿ, ಜಯರಾಮರೆಡ್ಡಿ, ಎಂ.ಶೋಭಾ, ಅಶೋಕ್ ಹಾಗೂ ಗ್ರಾಮಸ್ಥರು ಇದ್ದರು.
ಜಾಹೀರಾತು ದರ ಹೆಚ್ಚಳದ ಭರವಸೆ ನೀಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರು
ಬೆಂಗಳೂರು : ಕಳೆದ ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿರುವ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಶೇ.12 ರಷ್ಟು ಜಾಹೀರಾತು ದರವನ್ನು ಶೀಘ್ರವೇ ಹೆಚ್ಚಳ ಮಾಡಲಾಗುವುದೆಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಸೂರಳ್ಕರ್ ವಿಕಾಸ್ ಕಿಶೋರ್ ಭರವಸೆ ನೀಡಿದರು.
ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ ಅವರ ನೇತೃತ್ವದಲ್ಲಿ ಶನಿವಾರ ಮಧ್ಯಾಹ್ನ ಆಯುಕ್ತರನ್ನು ಭೇಟಿ ಮಾಡಿ ಈ ಹಿಂದಿನ ಆಯುಕ್ತರೊಂದಿಗೆ ಸಂಘದ ಪದಾಧಿಕಾರಿಗಳು ಸಭೆ ನಡೆಸಿ ಸಲ್ಲಿಸಲಾದ ಮನವಿಯಲ್ಲಿನ ಬೇಡಿಕೆಗಳ ಕುರಿತು ಆಯುಕ್ತರ ಗಮನಕ್ಕೆ ತರಲಾಯಿತು. ಸಂಘದ ಯಾವೊಂದು ಬೇಡಿಕೆಗಳನ್ನು ಸಹ ಇದುವರೆಗೆ ಇಲಾಖೆ ಈಡೇರಿಸದ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಂಘದ ಪದಾಧಿಕಾರಿಗಳು ಕೂಡಲೇ ಜಾಹೀರಾತು ದರ ಹೆಚ್ಚಳ, ಇಲಾಖೆಯಲ್ಲಿ ಹೊಸದಾಗಿ ಸೇರಿರುವ ಎಸ್ ಸಿ/ಎಸ್ ಟಿ/ಒಬಿಸಿ ಪತ್ರಿಕೆಗಳಿಗೆ ಮಾಸಿಕ ಒಂದು ಪುಟ ಜಾಹೀರಾತು ನೀಡಿಕೆ ಕುರಿತು ಕ್ರಮಕೈಗೊಳ್ಳುವಂತೆ ಮನವಿ ಮಾಡಲಾಯಿತು.
ಇನ್ನೂ ಇಲಾಖೆಯಿಂದ ಜಾಹೀರಾತು ಸಂಸ್ಥೆಗಳಿಗೆ ಹಣ ಪಾವತಿಯಾಗಿದ್ದರೂ ಕೂಡ ಪತ್ರಿಕೆಗಳಿಗೆ ಕೆಲವು ಏಜೆನ್ಸಿಗಳು ಹಣ ಪಾವತಿ ಮಾಡದಿರುವ ಕುರಿತು ಆಯುಕ್ತರ ಗಮನಕ್ಕೆ ತರಲಾಯಿತು. ಇಲಾಖೆ ಎಜೆನ್ಸಿಗಳ ಮೂಲಕ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಬಿಡುಗಡೆ ಮಾಡುವ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಪತ್ರಿಕೆಗಳು ಏಜೆನ್ಸಿಗಳಿಗೆ ಶೇ.15 ರಷ್ಟು ಕಮಿಷನ್ ನೀಡದಿರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ವಿನಂತಿ ಮಾಡಲಾಯಿತು.ಒಂದು ವೇಳೆ ಕಮಿಷನ್ ಕೊಡಲೇಬೇಕೆಂದರೆ ಪತ್ರಿಕೆಗಳಿಗೆ ಎಜೆನ್ಸಿಗಳು ಹಣ ಕೊಡಬೇಕಾದ ಅವಧಿಯನ್ನ ನಿಗಧಿಪಡಿಸಿ ಇಲಾಖೆಯಿಂದ ಆದೇಶ ಹೊರಡಿಸುವಂತೆ ಕೋರಲಾಯಿತು.
ಸಂಘದ ಮನವಿ ಸ್ವೀಕರಿಸಿ ಶಾಂತ ರೀತಿಯಿಂದ ಬೇಡಿಕೆಗಳ ಕುರಿತು ಆಲಿಸಿದ ಅದಕ್ಕೆ ಸ್ಪಂದಿಸಿದ ಆಯುಕ್ತರು ನನ್ನ ಅಧಿಕಾರದ ಹಂತದಲ್ಲಿ ಕ್ರಮಕೈಗೊಳ್ಳಬೇಕಾದ ನಿಮ್ಮ ಸಂಘದ ಬೇಡಿಕೆಗಳಿಗೆ ಚುನಾವಣೆ ಮುಗಿದ ತಕ್ಷಣ ಮುಂದಿನ ಒಂದು ವಾರದೊಳಗೆ ಖಂಡಿತ ಕ್ರಮತೆಗೆದುಕೊಳ್ಳುತ್ತೇನೆ ಎಂಬ ಭರವಸೆಯನ್ನು ಸಂಘದ ನಿಯೋಗಕ್ಕೆ ಆಯುಕ್ತರು ನೀಡಿದರು.
ಆಯುಕ್ತರ ಭರವಸೆಯಿಂದ ಮತ್ತು ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿರುವ ಜಾಹೀರಾತು ದರ ಹೆಚ್ಚಳ, ಎಸ್ಸಿ, ಎಸ್ಟಿ, ಒಬಿಸಿ, ಬ್ರಾಹ್ಮಣ ಸಂಪಾದಕತ್ವದ ಪತ್ರಿಕೆಗಳಿಗೆ ಜಾಹೀರಾತು ನೀಡಿಕೆ, ಐದು ವರ್ಷ ಪೂರೈಸಿರುವ ಒಬಿಸಿ ಪತ್ರಿಕೆಗಳಿಗೆ ಎರಡು ಪುಟಗಳ ಜಾಹೀರಾತು ಕೊಡುವ ಕಡತಗಳಿಗೆ ಮತ್ತು ಬಾಕಿ ಉಳಿದಿರುವ ಪತ್ರಿಕೆಗಳ ಕಡತಗಳಿಗೆ ಮುಕ್ತಿ ಸಿಗಬಹುದೆಂಬ ಆಶಾಭಾವನೆ ಸಂಘದ ಪದಾಧಿಕಾರಿಗಳಿಗೆ ಆಯಿತು.
ಕೊಪ್ಪಳ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ಇಲಾಖೆ ಅಯುಕ್ತರನ್ನು ಬಿಬಿಎಂಪಿ ಕಚೇರಿಯಲ್ಲಿ ಶುಕ್ರವಾರ ಭೇಟಿ ಮಾಡಿ ಸಂಘದ ಬೇಡಿಕೆಗಳ ಕುರಿತು ಸಹ ಚರ್ಚಿಸಲಾಗಿತ್ತು.
ಶನಿವಾರ ಕೂಡ ಬೆಳಿಗ್ಗೆ ಭೇಟಿ ಮಾಡಿದ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಿಗೆ ಮಧ್ಯಾಹ್ನ ಭೇಟಿ ಮಾಡಿ ಚರ್ಚಿಸುವಂತೆ ಆಯುಕ್ತರು ತಿಳಿಸಿದ್ದರಿಂದ ಸಂಘದ ಪದಾಧಿಕಾರಿಗಳಾದ ಮಹಮದ್ ಯೂನುಸ್, ಜಿ.ವೈ ಪದ್ಮಾ ನಾಗರಾಜ್, ಹೆಚ್.ನರಸಿಂಹರಾಜು,ಕೆ. ಎಸ್. ಸ್ವಾಮಿ , ದಾವಣಗೆರೆ ಜಿಲ್ಲಾ ಘಟಕದ ಕಾರ್ಯದರ್ಶಿ ಗೋವಿಂದರಾಜು ಅವರೊಂದಿಗೆ ಭೇಟಿ ಮಾಡಿ ಚರ್ಚಿಸಲಾಯಿತು.
ರೈತರ ಕ್ಷೀರಭಾಗ್ಯ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಿ ಬರದಿಂದ ತತ್ತರಿಸಿರುವ ರೈತರ ರಕ್ಷಣೆಗೆ ಸಹಕಾರ ಸಚಿವರು ನಿಲ್ಲಬೇಕೆಂದು ಒತ್ತಾಯ
ಕೋಲಾರ; ಮೇ.6: ರೈತರ ಹೈನೋದ್ಯಮದ ಕ್ಷೀರಭಾಗ್ಯ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಿ ಬರದಿಂದ ತತ್ತರಿಸಿರುವ ರೈತರ ರಕ್ಷಣೆಗೆ ಸಹಕಾರ ಸಚಿವರು ನಿಲ್ಲಬೇಕೆಂದು ರೈತ ಸಂಘದಿಂದ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಗೋಪಾಲಮೂರ್ತಿ ಅವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ರೇಷ್ಮೆ, ಮಾವು, ಟೊಮೇಟೊ ಬೆಳೆಗಳಿಗೆ ಬಾದಿಸುತ್ತಿರುವ ರೋಗಗಳಿಂದ ತತ್ತರಿಸಿ ಹಾಕಿದ ಬಂಡವಾಳ ಕೈಗೆ ಸಿಗದೆ ಸಂಕಷ್ಟದಲ್ಲಿದ್ದ ರೈತರ ಕೈ ಹಿಡಿದ ಹೈನೋದ್ಯಮ ಇಂದು ದಿನೇ ದಿನೇ ನಷ್ಟದ ಸುಳಿಯಲ್ಲಿ ಸಿಲುಕುತ್ತಿದೆ. ಹೈನೋದ್ಯಮದ ರಕ್ಷಣೆಗೆ ನಿಲ್ಲಬೇಕಾದ ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂದು ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಸರ್ಕಾರದ ವಿರುದ್ದ ಅಸಮದಾನ ವ್ಯಕ್ತಪಡಿಸಿದರು.
ಲಕ್ಷಾಂತರ ರೈತ ಕುಟುಂಬಗಳ ಜೀವನಾಡಿಯಾಗಿರುವ ಹೈನೋದ್ಯಮದ ಅಭಿವೃದ್ದಿಗೆ ಸರ್ಕಾರ ಮನಸ್ಸು ಮಡಬೇಕಾಗಿದೆ. ಕಳೆದ 7 ತಿಂಗಳಿಂದ ರೈತರಿಗೆ ಕ್ಷೀರಭಾಗ್ಯ ಪೆÇ್ರೀತ್ಸಾಹ ಧನ, ಸೇರಿಲ್ಲ ರಾಜ್ಯದಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದ್ದು, ಕೃಷಿ ಚಟುವಟಿಕೆ ಜೊತೆಗೆ ಹೈನುಗಾರಿಕೆಯಲ್ಲಿ ರೈತರು ತೊಡಗಿಸಿಕೊಂಡಿರುತ್ತಾರೆ. ಮುಂಗಾರು ಮಳೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಖರೀದಿ ಸೇರಿದಂತೆ ಹಲವು ಖರ್ಚು ವೆಚ್ಚಗಳಿಗೆ ಹೈನುಗಾರಿಕೆಯಿಂದ ಬರುವ ಹಣವೇ ಆದಾಯವಾಗಿರುತ್ತದೆ. ಆದರೆ 7 ತಿಂಗಳ ಹಣವನ್ನು ಬಾಕಿ ಉಳಿಸಿಕೊಂಡಿರುವುದು ನ್ಯಾಯವಲ್ಲವೆಂದು ಸರ್ಕಾರ ನಡೆಗೆ ಆಕ್ರೋಷ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಒಟ್ಟು 14 ಹಾಲು ಒಕ್ಕೂಟಗಳಿದ್ದು, ಇದರಲ್ಲಿ 35 ಸಾವಿರ ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಈ ಸಂಘಗಳಲ್ಲಿ 24 ಲಕ್ಷ ಮಂದಿ ನೊಂದಾಯಿತ ಹಾಲು ಉತ್ಪಾದಕರಿದ್ದಾರೆ. ಇವರಲ್ಲಿ ನಿತ್ಯ 9 ಲಕ್ಷ ಮಂದಿ ರೈತರು ಹಾಲು ಸರಬರಾಜು ಮಾಡುತ್ತಿದ್ದಾರೆ. ರಾಜ್ಯ ಸರ್ಕಾರವು ಹೈನುಗಾರಿಕೆ ನಡೆಸುವ ರೈತರಿಗೆ ಅನುಕೂಲವಾಗಿಲಿ ಎಂಬ ಕಾರಣದಿಂದ ಕ್ಷೀರದಾರೆ ಹೆಸರಿನಲ್ಲಿ ಪ್ರತಿಯೊಬ್ಬ ರೈತರಿಗೆ ಲೀಟರ್ಗೆ 5 ರೂಪಾಯಿ ಪೆÇ್ರೀತ್ಸಾಹ ಧನ ನೀಡುತ್ತಿದ್ದು, ಈಗ ಆ ಹಣವನ್ನು ಬಿಡುಗಡೆ ಮಾಡದೆ ಸಂಕಷ್ಟದಲ್ಲಿ ಹಾಲು ಉತ್ಪಾದಕರು ಸಿಲುಕಿದ್ದಾರೆಂದು ಸರ್ಕಾರಕ್ಕೆ ಮನವರಿಕೆ ಮಾಡಿದರು.
ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ ರೈತರ ಹಾಲು ಉತ್ಪಾದನೆಯು ಪ್ರಸ್ತುತದಲ್ಲಿ ಕಷ್ಟಕರವಾಗಿದೆ. ಸ್ವಂತ ಮೇವಿನ ವ್ಯವಸ್ಥೆ ಇದ್ದಲ್ಲಿ ಪ್ರತಿ ಲೀಟರ್ಗೆ 22 ರಿಂದ 24 ರೂ. ವೆಚ್ಚವಾಗುತ್ತಿದೆ. ಮೇವು ಖರೀದಿಸಿದರೆ 30 ರೂ ದಾಟುತ್ತದೆ. ಜೊತೆಗೆ ಖಾಸಗಿ ಅಂಗಡಿ ಮಾಲೀಕರು ಇಂಡೀ ಬೂಸವನ್ನು ತಮಗೆ ಇಷ್ಟಬಂದ ರೀತಿ ದುಬಾರಿ ಬೆಲೆಗೆ ಮಾರಾಟ ಮಾಡುವುದರಿಂದ ರೈತರಿಗೆ ತುಂಬಾ ತೊಂದರೆಯಲ್ಲಿದ್ದಾರೆ. ಸರ್ಕಾರ ಕೂಡಲೇ ಸ್ಪಂಧಿಸಬೇಕೆಂದು ಮನವಿ ಮಾಡಿದರು.
ಹೈನೋದ್ಯಮವನ್ನೇ ನಂಬಿ ರೈತರು ಖಾಸಗಿ ಸಾಲ ಮಕ್ಕಳ ವಿದ್ಯಾಭ್ಯಾಸ ಹಿರಿಯರ ಅರೋಗ್ಯ ಮತ್ತಿತರ ಖರ್ಚು ವೆಚ್ಚಗಳಿಗೆ ಇದನ್ನೇ ನಂಬಿರುವುದರಿಂದ ಸರ್ಕಾರ ಕೂಡಲೇ ರೈತರ ಕಷ್ಟಗಳಿಗೆ ಸ್ಪಂಧಿಸಿ ಪೆÇ್ರೀತ್ಸಾಹ ಧನವನ್ನು ಬಿಡುಗಡೆ ಮಾಡಬೇಕು.ಹೈನೋದ್ಯಮದ ಅರೋಗ್ಯ ಹಸುಗಳ ರಕ್ಷಣೆಗೆ ಇರುವ ಪಶು ಇಲಾಖೆ ಹಗರಣಗಳ ಇಲಾಖೆಯಾಗಿ ಮಾರ್ಪಟ್ಟಿದೆ. ಸಿಬ್ಬಂದಿ ನೆಪದಲ್ಲಿ ಸೂಕ್ತವಾದ ಪಶು ಚಿಕಿತ್ಸೆ ಇಲ್ಲದೆ ರೈತರು ಖಾಸಗಿ ವೈದ್ಯರನ್ನು ದುಬಾರಿ ವೆಚ್ಚ ನೀಡಿ ಚಿಕಿತ್ಸೆ ಕೊಡಿಸಬೇಕಾದ ಪರಿಸ್ಥಿತಿ ಇರುವುದರಿಂದ ಮಾನ್ಯರು ಪಶು ಇಲಾಖೆಯಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಬೇಕೆಂದು ಒತ್ತಾಯಿಸಿ ಮನವಿ ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು, ಪ್ರೋತ್ಸಾಹ ಧನದ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದು ರೈತರ ರಕ್ಷಣೆಗೆ ನಿಲ್ಲುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಕೇಶವ, ಶೈಲಜ, ಮುನಿರತ್ನಮ್ಮ, ವೆಂಕಟಮ್ಮ, ನಾಗರತ್ನ ಉಪಸ್ಥಿತರಿದ್ದರು.
ಕುಂದಾಪುರ – ಕಿರು ಸಮುದಾಯದ ತರಬೇತಿ ಶಿಬಿರ
ಕುಂದಾಪುರ, ಮೇ.6: ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಚರ್ಚಿನ ಸಭಾ ಭವನದಲ್ಲಿ ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಚರ್ಚಿನ ಮಟ್ಟದಲ್ಲಿ ವಾಳೆಯ ಸಮಿತಿ ಸದಸ್ಯರಿಗೆ ಮೇ 4 ರಂದು ಕಿರು ಸಮುದಾಯದ ಬಗ್ಗೆ ತರಬೇತಿ ಶಿಬಿರ ಕಾರ್ಯಕ್ರಮ ನಡೆಯಿತು.
ಶಿಬಿರವನ್ನು ಕೋಟ ಚರ್ಚಿನ ಧರ್ಮಗುರು, ಲೇಖಕರಾದ ವಂ|ಆಲ್ಪೊನ್ಸ್ ಡಿಲಿಮಾ ನಡೆಸಿಕೊಟ್ಟರು. ಕಿರು ಸಮುದಾಯವು ಬಹಳ ಹಿಂದಿನಿಂದಲೂ ನಡೆದು ಬಂದಿದೆ. ಕಿರು ಸಮುದಾಯದಲ್ಲಿ ನಾವೆಲ್ಲರೂ ಒಂದೇ, ಮೇಲು ಕೀಳು, ಧನಿಕ ಬಡವ ಎಂಬುದು ಇಲ್ಲ, ಕಿರು ಸಮುದಾಯದಲ್ಲಿ ಐಕ್ಯತೆ ಇದೆ. ನಮ್ಮಲ್ಲಿ ಉತ್ತಮ ಬಾಂಧವ್ಯ ಪ್ರೀತಿ ಸಹಕಾರ ಎಲ್ಲವು ಇರುತ್ತದೆ, ನಿತ್ಯವೂ ಪೂಜೆ, ಬಲಿದಾನ, ಪ್ರಾರ್ಥನೆಯಲ್ಲಿ ತೊಡಗಿದ ಮಾತ್ರಕ್ಕೆ ಸಾಲದು, ನಾವು ಕಿರು ಸಮುದಾಯದಲ್ಲಿ ಆಗುವ ಸಭೆಯಲ್ಲಿ ಭಾಗವಹಿಸಬೇಕು’ ಎಂದು ಅವರು ತಿಳಿಸಿದರು. ಸುಮಾರು 65 ಸದಸ್ಯರು ಇದರ ಉಪಯೋಗ ಪಡೆದರು.
ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ ಪ್ರಸ್ತಾವಿಕ ಪ್ರಾರ್ಥನೆಯನ್ನು ನಡೆಸಿಕೊಟ್ಟರು. ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಶಿಬಿರದ ಉದ್ದೇಶ ತಿಳಿಸಿದರು. ಕಿರು ಸಮುದಾಯದ ಸಂಯೋಜಕಿ ಝೀಟಾ ಕರ್ವಾಲ್ಲೊ ಸ್ವಾಗತಿಸಿ ತರಬೇತಿಯಲ್ಲಿ ಪಾತ್ರವಹಿಸಿದರು.