ಶ್ರೀನಿವಾಸಪುರ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಶೇ.90 ರಷ್ಟು ಫಲಿತಾಂಶ ದೊರೆತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮುನಿಲಕ್ಷ್ಮಯ್ಯ ತಿಳಿಸಿದ್ದಾರೆ.
1253 ಗಂಡು, 1214 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 2467 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಆ ಪೈಕಿ 1103 ಗಂಡು, 1117 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 2220 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.88ರಷ್ಟು ವಿದ್ಯಾರ್ಥಿಗಳು ಹಾಗೂ ಶೇ.92 ರಷ್ಟು ವಿದ್ಯಾರ್ಥಿನಿಯರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ತಾಲ್ಲೂಕಿಗೆ ಶೇ.90 ರಷ್ಟು ಫಲಿತಾಂಶ ಲಭ್ಯವಾಗಿದೆ ಎಂದು ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.
ಶ್ರೀನಿವಾಸಪುರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಮೇಧಾ ಕೆ.ಎಂ. 621 ಅಂಕ ಗಳಿಸಿ ಪ್ರಥಮ ಪಡೆದುಕೊಂಡಿದ್ದಾರೆ. ವೇಣು ಶಾಲೆಯ ವಿದ್ಯಾರ್ಥಿನಿ ಸೃಜನಶ್ರೀ ಪಿ.ಆರ್.620 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಎಸ್ವಿಬಿಎನ್ ಶಾಲೆಯ ಪ್ರಜ್ಞಾ ಟಿ.ಎಸ್617, ಗೌನಿಪಲ್ಲಿ ಗ್ರಾಮದ ಸಪ್ತಗಿರಿ ಶಾಲೆಯ ಸಹನಾ .ವಿ616, ಯಲ್ದೂರು ಗ್ರಾಮದ ಪರಂಜ್ಯೋತಿ ಶಾಲೆಯ ವಿದ್ಯಾರ್ಥಿ ಪ್ರೇಮ್ ಕುಮಾರ್ ಆರ್.ಎನ್.615 ಅಂಕ ಗಳಿಸಿದ್ದಾರೆ.
55 ವಿದ್ಯಾರ್ಥಿಗಳು ಹಾಗೂ 79 ವಿದ್ಯಾರ್ಥಿನಿಯರು ಎ+, 142 ವಿದ್ಯಾರ್ಥಿಗಳು ಹಾಗೂ 224 ವಿದ್ಯಾರ್ಥಿನಿಯರು ಎ, 211 ವಿದ್ಯಾರ್ಥಿಗಳು ಹಾಗೂ 256 ವಿದ್ಯಾರ್ಥಿನಿಯರು ಬಿ+, 265 ವಿದ್ಯಾರ್ಥಿಗಳು ಹಾಗೂ 251 ವಿದ್ಯಾರ್ಥಿನಿಯರು ಬಿ, 228 ವಿದ್ಯಾರ್ಥಿಗಳು ಹಾಗೂ ಹಾಗೂ 214 ವಿದ್ಯಾರ್ಥಿನಿಯರು ಚ+, 142 ವಿದ್ಯಾರ್ಥಿಗಳು ಹಾಗೂ 92 ವಿದ್ಯಾರ್ಥಿನಿಯರು ಸಿ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ತಾಲ್ಲೂಕಿನ ಮಮರಕುಂಟೆ ಸರ್ಕಾರಿ ಪ್ರೌಢ ಶಾಲೆ, ತಾಡಿಗೋಳ್ ಸರ್ಕಾರಿ ಪ್ರೌಢ ಶಾಲೆ, ಶ್ರೀನಿವಾಸಪುರದ ರಂಗಾ ರಸ್ತೆ ಪ್ರೌಢ ಶಾಲೆ, ಪುಲಗೂರುಕೋಟೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆ, ಚಲ್ದಿಗಾನಹಳ್ಳಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಸೋಮಿಯಾಜಲಪಲ್ಲಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಗಂಗನ್ನಗಾರಿಪಲ್ಲಿ ಗ್ರಾಮದ ಏಕಲವ್ಯ ಮಾಡಲ್ ಸನಿವಾಸ ಪ್ರೌಢ ಶಾಲೆ, ಗೌನಿಪಲ್ಲಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ರೋಣೂರು ಗ್ರಾಮದ ಅಂಬೇಡ್ಕರ್ ಪ್ರೌಢ ಶಾಲೆ, ದೊಮ್ಮರ ಗುಡಿಸಲಿನ ಆಶ್ರಯ ನೀಲ್ಬಾಗ್ ಸ್ಕೂಲ್, ಹೆಬ್ಬಟ ಗ್ರಾಮದ ಜಿಜಿ ವೇಣು ಗುರುಕುಲ, ದೊಡಮಲದೊಡ್ಡಿ ಗ್ರಾಮದ ನಿಸರ್ಗ ವಿದ್ಯಾ ಮಂದಿರ, ಗೌನಿಪಲ್ಲಿ ಗ್ರಾಮದ ಪ್ರಸಾದ್ ವಿದ್ಯಾ ಮಂದಿರ, ಯಲ್ದೂರಿನ ಪ್ರೀತಿ ಪ್ರೌಢ ಶಾಲೆ, ಶ್ರೀನಿವಾಸಪುರದ ಸಪ್ತಗಿರಿ ಪ್ರೌಢ ಶಾಲೆ, ಲಕ್ಷ್ಮೀಪುರದ ಮಿನರ್ವ ವಿದ್ಯಾ ಮಂದಿರ, ಶ್ರೀನಿವಾಸಪುರದ ಶೈಲೇಂದ್ರ ವಿದ್ಯಾ ಮಂದಿರ, ವೆಂಕಟಾದ್ರಿ ವಿದ್ಯಾ ಸಂಸ್ಥೆ, ಭಾವನಾ ಇಂಗ್ಲೀಷ್ ಮೀಡಿಯಂ ಸ್ಕೂಲ್, ರಾಯಲ್ಪಾಡಿನ ತಪಸ್ವಿ ವಿದ್ಯಾ ಕೇಂದ್ರ, ಲಕ್ಷ್ಮೀಪುರ ಕ್ರಾಸ್ನ ವಿಎಸ್ಆರ್ ಶಾಲೆ, ಗೌನಿಪಲ್ಲಿಯ ವೆಂಕಟೇಶ್ವರ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್, ಸತ್ಯಸಾಯಿ ಇಂಗ್ಲೀಷ್ ಸ್ಕೂಲ್ ಗೌನಿಪಲ್ಲಿ, ಯಲ್ದೂರು ಗ್ರಾಮದ ವಿದ್ಯಾ ದೀಪ್ತಿ ಪಬ್ಲಿಕ್ ಸ್ಕೂಲ್, ಕಂಡ್ಲೇವಾರಿಪಲ್ಲಿ ಗ್ರಾಮದ ಕಾವೇರಿ ಪಬ್ಲಿಕ್ ಸ್ಕೂಲ್, ನೀಲಟೂರು ಗ್ರಾಮದ ಪಾವನ ವಿದ್ಯಾಭವನ ಶೇ.100 ರಷ್ಟು ಫಲಿತಾಂಶ ಪಡೆದುಕೊಂಡಿವೆ ಎಂದು ಅವರು ತಿಳಿಸಿದ್ದಾರೆ.
Month: May 2024
ಕುಂದಾಪುರ್ ರೊಜಾರ್ ಮಾಯ್ ಫಿರ್ಗಜೆಚೊ ವಿಗಾರ್ ಭೊ| ಮಾ|ಬಾ|ಸ್ಟ್ಯಾನಿ ತಾವ್ರೊ ಹಾಂಚೊ 51 ವೊ ಒಡ್ದಿಚೊ ದೀಸ್ ಆಚರಣ್
ಕುಂದಾಪುರ್, 10: ಕುಂದಾಪುರ್ ರೊಜಾರ್ ಮಾಯ್ ಫಿರ್ಗಜೆಚೊ ವಿಗಾರ್ ಭೊ| ಮಾ|ಬಾ|ಸ್ಟ್ಯಾನಿ ತಾವ್ರೊ ಹಾಂಚೊ 51 ವೊ ಒಡ್ದಿಚೊ ದೀಸ್ ಮೇಯಾಚಾ 10 ವೆರ್ ತಾಣಿ ಪವಿತ್ರ್ ಬಲಿದಾನ್ ಅರ್ಪುಂಚ್ಯಾ ಸವೆಂ ಆಚರಣ್ ಕೆಲೊ. ಫಿರ್ಗಜೆಚೊ ಫಿರ್ಗಜೆಚೊ ಸಹಾಯಕ್ ಯಾಜಕ್ ಮಾ|ಬಾ|ಅಶ್ವಿನ್ ಆರಾನ್ನ ಸಯ್ರೆ ಯಾಜಕ್ ಮಾ|ಬಾ| ಜೀವನ್ ಮಾರ್ಟಿನ್ ಡಿಮೆಲ್ಲೊ ಆನಿ ಮಾ|ಬಾ|ವಾಲ್ಟರ್ ಡಿಮೆಲ್ಲೊ ಹಾಣಿ ಸಹಬಲಿದಾನ್ ಭೆಟಯ್ಲೆಂ.
ಉಪ್ರಾಂತ್ ಚಲಲ್ಯಾ ಮಟ್ವ್ಯಾ ಅಭಿನಂದನ್ ಕಾರ್ಯಾಂತ್ ಕೇಕ್ ಕಾತರ್ನ್ ಉಲ್ಲಾಸ್ ಪಾಟಯ್ಲೆ. ಸಹಾಯಕ್ ಯಾಜಕ್ ಮಾ|ಬಾ|ಅಶ್ವಿನ್ ಆರಾನ್ನ ಹಾಣಿ ಬೊರೆ ಮಾಗ್ಲೆ. ವಿಗಾರ್ ಬೋವ್ ಮಾನಾಧಿಕ್ ವಾಪ್ ಸ್ಟ್ಯಾನಿ ತಾವ್ರೊ ಹಾಣಿ “ಮೊಜೆ ಪಾಸೊತ್ ಮಾಗೊಂಕ್ ಬಲಿದಾನಾಂತ್ ವ್ಹಡಾ ಸಂಖ್ಯಾಂತ್ ಹಾಜರ್ ಜಾಲ್ಯಾಂಕ್ ದೇವ್ ಬರೆ ಕರುಂ ಮ್ಹಣ್ತಾ, ಸರ್ವಾಂಚೊ ಉಪ್ಕಾರ್ ಆಟಯ್ಲೊ.. ಫಿರ್ಗಜೆಚಿ ಉಪಾಧ್ಯಕ್ಷಿಣ್ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಾಚಿ ಸಂಯೋಜಕಿ ಪ್ರೇಮಾ ಡಿಕುನ್ಹಾ, ಕೊವೆಂತಾಚಿ ವ್ಹಡಿಲ್ನ್ ಸಿಸ್ಟರ್ ಸುಪ್ರಿಯಾ ಆನಿ ಸಭಾರ್ ಧರ್ಮ್ ಭಯ್ಣಿ ಹಾಜರ್ ಆಸೊನ್ ಫಿರ್ಗಜ್ ಗಾರಾಂ ವ್ಹಡಾ ಸಂಖ್ಯಾನ್ ಹಾಜರ್ ಆಸ್ಲಿ.
ಎಸ್ಸೆಸ್ಸೆಲ್ಸಿ ಫಲಿತಾಂಶ-ಕೋಲಾರಕ್ಕೆ 74.94 ಫಲಿತಾಂಶ-ಬಾಲಕಿಯರೇ ಮೇಲುಗೈಎ.ದರ್ಶಿತಾ ಜಿಲ್ಲೆಗೆ ಟಾಫರ್,ಕೆ.ಎಂ.ಮೇದಾ, ಆಯಿಷಾ ಖಾನಂಗೆ ಎರಡನೇ ಸ್ಥಾನ
ಕೋಲಾರ:- ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು ಪರೀಕ್ಷೆಗೆ ಕುಳಿತಿದ್ದ 19282 ಮಂದಿ ವಿದ್ಯಾರ್ಥಿಗಳ ಪೈಕಿ 14450 ಮಂದಿ ಉತ್ತೀರ್ಣರಾಗುವ ಮೂಲಕ ಜಿಲ್ಲೆಗೆ ಶೇ.74.94 ಫಲಿತಾಂಶದೊಂದಿಗೆ 17ನೇ ಸ್ಥಾನ ಬಂದಿದ್ದು, ಜಿಲ್ಲೆಯ ಕೆಜಿಎಫ್ ನಗರದ ಮಹಾವೀರ್ ಜೈನ್ ಶಾಲೆಯ ವಿದ್ಯಾರ್ಥಿನಿ ಎ.ದರ್ಶಿತಾ 623 ಅಂಕಗಳೊಂದಿಗೆ ಜಿಲ್ಲೆಗೆ ಮೊದಲಿಗರಾಗಿ ಹೊರಹೊಮ್ಮಿದ್ದಾರೆ ಹಾಗೂ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಈ ಬಾರಿ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದ 19282 ಮಂದಿ ಪೈಕಿ 14450 ಮಂದಿ ಉತ್ತೀರ್ಣರಾಗಿ ಶೇ.74.94 ಫಲಿತಾಂಶ ಬಂದಿದೆ. ಇದರಲ್ಲಿ ಪರೀಕ್ಷೆಗೆ ಕುಳಿತದ್ದ 9618 ಬಾಲಕಿಯರ ಪೈಕಿ 7818 ಮಂದಿ ಉತ್ತೀರ್ಣರಾಗುವ ಮೂಲಕ ಶೇ.81.28 ಫಲಿತಾಂಶ ಬಂದಿದೆ ಎಂದು ತಿಳಿಸಿದ್ದಾರೆ. ಅದೇ ರೀತಿ ಪರೀಕ್ಷೆಗೆ ಕುಳಿತಿದ್ದ 9664 ಬಾಲಕರಲ್ಲಿ 6630 ಮಂದಿ ಉತ್ತೀರ್ಣರಾಗುವ ಮೂಲಕ ಶೇ. 68.62 ಮಂದಿ ತೇರ್ಗಡೆಯಾಗಿದ್ದಾರೆ.
ದರ್ಶಿತಾಗೆ 623 ಇಬ್ಬರಿಗೆ 621 ಅಂಕ
ಜಿಲ್ಲೆಗೆ ಟಾಫರ್ ಆಗಿ ಹೊರಹೊಮ್ಮಿರುವ ಜಿಲ್ಲೆಯ ಕೆಜಿಎಫ್ ನಗರದ ಮಹಾವೀರ್ ಜೈನ್ ಶಾಲೆಯ ವಿದ್ಯಾರ್ಥಿನಿ ಎ.ದರ್ಶಿತಾ 623 ಅಂಕಗಳೊಂದಿಗೆ ಜಿಲ್ಲೆಗೆ ಮೊದಲಿಗರಾಗಿ ಹೊರಹೊಮ್ಮಿದ್ದು, ಈ ವಿದ್ಯಾರ್ಥಿನಿ ಕೆಜಿಎಫ್ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಎ.ಆನಂದ್ ಹಾಗೂ ಕ್ಯಾಸಂಬಳ್ಳಿ ಸರ್ಕಾರಿ ಶಾಲೆ ಶಿಕ್ಷಕಿ ಜಿ.ಎಸ್.ಪದ್ಮಶ್ರೀ ಅವರ ಪುತ್ರಿಯಾಗಿದ್ದು, ಈಗಾಗಲೇ ಐಐಟಿ ಕೋಚಿಂಗ್ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳು 621 ಅಂಕ ಗಳಿಸುವ ಮೂಲಕ ಜಿಲ್ಲೆಗೆ 2ನೇ ಸ್ಥಾನ ಪಡೆದುಕೊಂಡಿದ್ದು, ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಮೇದಾ ಕೆ.ಎಂ. ಹಾಗೂ ಮುಳಬಾಗಿಲು ಪಟ್ಟಣದ ಸೆಂಟ್ಆನ್ಸ್ ಶಾಲೆಯ ಆಯಿಷಾ ಖಾನಂ ಈ ಸಾಧನೆ ಮಾಡಿದ್ದಾರೆ.
ಉಳಿದಂತೆ ಮೂವರು ವಿದ್ಯಾರ್ಥಿನಿಯರು 620 ಅಂಕಗಳೊಂದಿಗೆ ಜಿಲ್ಲೆಗೆ ಮೂರನೇ ಸ್ಥಾನ ಪಡೆದುಕೊಂಡಿದ್ದು, ನಗರ ಹೊರವಲಯದ ಬೆಗ್ಲಿ ಹೊಸಹಳ್ಳಿಯ ಗ್ರೀನ್ ವ್ಯಾಲಿ ಪಬ್ಲಿಕ್ ಶಾಲೆಯ ಹೆಚ್.ವಿ.ಹರ್ಷಿತಾ, ಶ್ರೀನಿವಾಪುರ ಪಟ್ಟಣದ ವೇಣು ವಿದ್ಯಾಸಂಸ್ಥೆಯ ಪಿ.ಆರ್.ಸೃಜನಶ್ರೀ ಹಾಗೂ ಮುಳಬಾಗಿಲು ಸೆಂಟ್ಆನ್ಸ್ ಶಾಲೆಯಜೆ.ಪೂರ್ಣವಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಮುಳಬಾಗಿಲು ಪಟ್ಟಣದ ಅಮರಜ್ಯೋತಿ ಶಾಲೆಯ ಎಸ್.ಧನ್ಯ ಹಾಗೂ ಸುಂದರಪಾಳ್ಯದ ಅಪೋಲೋ ಪಬ್ಲಿಕ್ ಶಾಲೆಯ ಕೆ.ಶೃತಿ 619 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದ್ದಾರೆ.
ತಾಲ್ಲೂಕಿನ ಮದನಹಳ್ಳಿ ಮೊರಾರ್ಜಿದೇಸಾಯಿ ವಸತಿ ಶಾಲೆಯ ವಸಂತ ಕುಮಾರ್, ಪಿಸಿಬಡಾವಣೆ ಸೆಂಟ್ಆನ್ಸ್ ಶಾಲೆಯ ಶ್ರೇಯಸ್, ಮುಳಬಾಗಿಲು ಸೆಂಟ್ಆನ್ಸ್ನ ಆಯಿಷಾಬಾನು 618 ಅಂಕ ಗಳಿಸಿದ್ದು, ಮಾಲೂರಿನ ವಿವೇಕಾನಂದ ಶಾಲೆಯ ವಿವೇಕ್ ಎಂ.ಪಂಚಾಲ್,ಚಿನ್ಮಯ ಶಾಲೆಯ ಎಸ್.ಭೂಮಿಕಾ, ಬೈರವೇಶ್ವರ ಶಾಲೆಯ ಟಿ.ಎಸ್.ಪ್ರಜ್ಞ 617 ಅಂಕಗಳೊಂದಿಗೆ 6ನೇ ಸ್ಥಾನ ಪಡೆದುಕೊಂಡಿದ್ದಾರೆ.
ವಸತಿ 12 ಶಾಲೆಗಳಿಗೆ ಶೇ.100 ಫಲಿತಾಂಶ
ಜಿಲ್ಲೆಯ 10 ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಅಂಬೇಡ್ಕರ್, ಏಕಲವ್ಯ ವಸತಿ ಶಾಲೆಗಳಿಗೆ ಶೇ.100 ಫಲಿತಾಂಶ ಬಂದಿದ್ದು, ಇದರೊಂದಿಗೆ ಕೆಲವು ಸರ್ಕಾರಿ ಶಾಲೆಗಳು ಶೇ.100 ಸಾಧನೆಯೊಂದಿಗೆ ಗಮನ ಸೆಳೆದಿವೆ.
ಮೊರಾರ್ಜಿದೇಸಾಯಿ ವಸತಿ ಶಾಲೆಗಳಾದ ಗಟ್ಟಗುಡಿ, ಮದನಹಳ್ಳಿ,ಮಾಲೂರು,ಗೌನಪಲ್ಲಿ, ಸೋಮಯಾಹಲಪಲ್ಲಿ.ಕೂತಾಂಡ್ಲಹಳ್ಳಿ, ಘಟ್ಟ ಶಾಲೆಗಳಿಗೆ ಶೇ.100 ಫಲಿತಾಂಶ ಬಂದಿದೆ. ಉಳಿದಂತೆ ಚಲ್ದಿಗಾನಹಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ,ರೋಣೂರಿನ ಅಂಬೇಡ್ಕರ್ ವಸತಿ ಶಾಲೆ, ಶ್ರೀನಿವಾಸಪುರದ ಏಕಲವ್ಯ ವಸತಿ ಶಾಲೆ,ಕುರುಡುಮಲೆ ಕಿತ್ತೂರು ರಾಣಿ ವಸತಿ ಶಾಲೆಗಳಿಗೆ ಶೇ.100 ಫಲಿತಾಂಶ ಬಂದಿದೆ.
ಸರ್ಕಾರಿ ಶಾಲೆಗಳು ಶೇ.100 ಸಾಧನೆ
ಶೇ.100 ಸಾಧನೆಯಲ್ಲಿ ಸರ್ಕಾರಿ ಶಾಲೆಗಳು ಮುಂಚೂಣಿಯಲ್ಲಿದ್ದು, ಇಮರಕುಂಟೆ ಸರ್ಕಾರಿ ಪ್ರೌಢಶಾಲೆ, ತಾಡಿಗೋಳು ಸರ್ಕಾರಿ ಪ್ರೌಢಶಾಲೆ, ಶ್ರೀನಿವಾಸಪುರ ಪಟ್ಟಣದ ರಂಗಾರಸ್ತೆ ಸರ್ಕಾರಿ ಪಿಯು ಕಾಲೇಜು, ಪುಲುಗೂರುಕೋಟೆ ಸರ್ಕಾರಿ ಪ್ರೌಢಶಾಲೆಗಳು ಶೇ.100 ಸಾಧನೆ ಮಾಡಿ ಗಮನ ಸೆಳೆದಿವೆ.
ಶೂನ್ಯ ಸಾಧನೆಯನ್ನು ಜಿಲ್ಲೆಯ ಯಲ್ದೂರಿನ ಶ್ರೀನಿವಾಸ ಪಬ್ಲಿಕ್ ಶಾಲೆ, ಕೆಜಿಎಫ್ನ ನಾಚಪಲ್ಲಿಯ ವಿಶ್ವೇಶ್ವರಯ್ಯ ಮೆಮೊರಿಯಲ್ ಶಾಲೆ ಶೂನ್ಯ ಸಾಧನೆ ಮಾಡಿವೆ ಎಂದು ತಿಳಿಸಿದ್ದಾರೆ.
ಜಿಲ್ಲೆಗೆ ಗುಣಾತ್ಮಕ ಫಲಿತಾಂಶ ತಂದುಕೊಟ್ಟ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರಿಗೆ ಶಾಲಾ ಶಿಕ್ಷಣ ಇಲಾಖೆ ಪರವಾಗಿ ಡಿಡಿಪಿಐ ಕೃಷ್ಣಮೂರ್ತಿ, ಬಿಇಒಗಳಾದ ಕನ್ನಯ್ಯ, ಮುನಿವೆಂಕಟರಾಮಾಚಾರಿ,ಗಂಗರಾಮಯ್ಯ, ಚಂದ್ರಕಲಾ, ಮುನಿಲಕ್ಷ್ಮಯ್ಯ, ಸುಕನ್ಯಾ, ಶಿಕ್ಷಣಾಧಿಕಾರಿಗಳಾದ ಸಗೀರಾ ಅಂಜುಂ, ಭಾಗ್ಯವತಮ್ಮ, ಡಿವೈಪಿಸಿಗಳಾದ ಗುರುಮೂರ್ತಿ, ಚಂದ್ರಕಲಾ, ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಕೃಷ್ಣಪ್ಪ, ವಿಷಯ ಪರಿವೀಕ್ಷಕರಾದ ಶಂಕರೇಗೌಡ, ಗಾಯತ್ರಿ,ಶಶಿವಧನ ಅಭಿನಂದನೆ ಸಲ್ಲಿಸಿದ್ದಾರೆ.
Celebration of 25-Year Reunion and Guruvandana of MBBS Batch ’99 at Father Muller Medical College / ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್. 99 ಸಾಲಿನ ಬ್ಯಾಚಿನ 25ನೇ ವರ್ಷಾಚರಣೆ ಮತ್ತು ಗುರುವಂದನ ಸಮಾರಂಭ
Mangalore, 04.05.24: The Muller Mini Convention Centre was abuzz with nostalgia and celebration as the esteemed Father Muller Medical College commemorated the 25th reunion and Guruvandana of the pioneering MBBS Batch ’99, the college’s first MBBS batch. Organized with meticulous care and reverence, the event was a testament to the bonds forged and the journey shared by these esteemed medical professionals.
The day began with a soulful Thanksgiving Mass at the Fr. Muller Chapel, celebrated by Rev. Fr. Ajith Menezes, the Administrator of FMMC. The atmosphere was uplifted by the melodious choir sung by the Alumni of Batch ’99, filling the air with a sense of reverence and gratitude. After the mass, the batch of MBBS ’99 gathered in their classroom to attend a class taken by their teacher, Dr. Hilda Pinto, retired professor from the Department of Microbiology, to relive their student days.
Following the Mass, the official program commenced at the Muller Mini, 2nd-floor Convention Centre, with the 25-year reunion celebration of the MBBS Batch ’99. The event commenced with a soulful prayer song by Dr. Jermine Harriet and team, setting the tone for the evening’s festivities. The event was graced by esteemed personalities including Chief Guest Dr. Sanjeev Rai, former Dean of FMMC, and Guest of Honour Fr. Dennis D’Sa, former administrator of FMMC. Other dignitaries on the dais included Rev. Fr. Richard Coelho, Director FMCI; Fr. Ajith Menezes, Administrator FMMC; Fr. Valerian D’Souza & Fr. William Menezes, former administrators of FMMC; and Dr. Antony S. D’Souza, Dean FMMC.
The programme was anchored by the alumni of FMMC, Batch ’99, Dr. Gladys Rodrigues, Consultant Vitreo Retinal Surgeon and Associate Professor in the Department of Ophthalmology at KMC Mangalore, and Dr. Kusuma Sachin, Physiologist, and family practitioner in Mangalore. Dr. Archana Bhat, Professor of Medicine at FMMC and President of the Alumni Association, delivered a warm welcome speech, acknowledging the significant contributions of the alumni to the field of medicine and society at large. The ceremonial lighting of the lamp, a symbol of enlightenment and auspiciousness, was performed by all the dignitaries, accompanied by the class representative, Dr. Thomas John, a Consultant in Internal Medicine from London, UK.
In his address, Dr. Sanjeev Rai praised the growth and impact of the batch, highlighting their vital role as doctors in society. He reminisced about their humble beginnings at Father Muller Charitable Institutions, acknowledging the journey that has led them to success today.
Fr. Dennis D’Sa emphasized the importance of introspection and service, urging the alumni to remain grounded and compassionate in their practice. He expressed gratitude for the education and values instilled by their gurus, noting the balance between technological advancement and humanistic care.
Director Rev. Fr. Richard Coelho commended the batch for their hard work, dedication, and perseverance in serving humanity. He emphasized the importance of the art of medicine and the love of humanity, encouraging the doctors to go beyond their comfort zones to bring solace to their patients.
The cultural program featured a mesmerizing dance performance by Dr. Aneeshya Prasad, a consultant Oncopathologist from Coventry, UK. The felicitation of teachers and non-clinical staff who contributed to the ’99 batch’s education added a heartfelt touch to the evening.
Slideshows showcasing tributes to departed teachers, campus memories, and video messages from absentees further enriched the event. Dr. Jeedhu Radhakrishnan, Head of the Department of Emergency at KMC Mangalore and Regional Head -Department of Emergency Medicine of Manipal Hospitals (Goa, Mangalore, and Kerala), delivered a gracious vote of thanks, expressing gratitude to all who made the event a success.
The reunion concluded with a photo session and a sumptuous lunch along with talks by some of the teachers who fondly remembered the good old days, providing an opportunity for the alumni to reconnect and reminisce. It was heartening to see doctors from around the world come together to celebrate this milestone, showcasing the strong bonds and cherished memories forged during their time at Father Muller Charitable Institutions. The event was not just a celebration of the past but also a reaffirmation of the bonds, values, and shared experiences that continue to unite the MBBS Batch ’99 family.
ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್. 99 ಸಾಲಿನ ಬ್ಯಾಚಿನ 25ನೇ ವರ್ಷಾಚರಣೆ ಮತ್ತು ಗುರುವಂದನ ಸಮಾರಂಭ
ಮಂಗಳೂರು, 04.05.24: ಪ್ರತಿಷ್ಠಿತ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ತನ್ನ ಮೊದಲ ಎಂ.ಬಿ.ಬಿ. ಎಸ್. ಬ್ಯಾಚ್ 99 ರ ಗುರುವಂದನ ಮತ್ತು 25ನೇ ವರ್ಷದ ಪುನರ್ಮಿಲನವನ್ನು ಆಚರಿಸಿದ ಸಂದರ್ಭದಲ್ಲಿ ಮುಲ್ಲರ್ ಮಿನಿ ಕನ್ವೆನ್ಷನ್ ಸೆಂಟರ್, ಸಂಭ್ರಮಾಚರಣೆಯಿಂದ ತುಂಬಿತ್ತು.
ಫಾದರ್ ಮುಲ್ಲರ್ ಚಾಪೆಲ್‘ನಲ್ಲಿ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ಫಾ| ಅಜಿತ್ ಮಿನೇಜಸ್ ಅವರು ಅರ್ಪಿಸಿದ ಪವಿತ್ರ ಪೂಜೆಯ ಬಲಿದಾನದೊಂದಿಗೆ ದಿನವು ಪ್ರಾರಂಭವಾಯಿತು. ಬ್ಯಾಚ್ ‘99ರ ಹಳೆಯ ವಿದ್ಯಾರ್ಥಿಗಳು ಹಾಡಿದ ಸುಮಧುರ ಗಾಯಕವೃಂದವು ಗೌರವ ಮತ್ತು ಕೃತಜ್ಞತೆಯ ಭಾವದಿಂದ ವಾತಾವರಣವನ್ನು ತುಂಬಿತು. ಸಾಮೂಹಿಕ ಪ್ರಾರ್ಥನೆಯ ನಂತರ, ಎಂಬಿಬಿಎಸ್ ‘99 ರ ಬ್ಯಾಚ್, ತಮ್ಮ ವಿದ್ಯಾರ್ಥಿ ದಿನಗಳನ್ನು ಮೆಲುಕು ಹಾಕಲು, ಮೈಕ್ರೋಬಯಾಲಜಿ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ| ಹಿಲ್ಡಾ ಪಿಂಟೋ ಅವರು ತೆಗೆದುಕೊಂಡ ತರಗತಿಗೆ ಹಾಜರಾಗಲು ತಮ್ಮ ತರಗತಿಯಲ್ಲಿ ಒಟ್ಟುಗೂಡಿದರು.
ಮಾಸ್ ನಂತರ, ಅಧಿಕೃತ ಕಾರ್ಯಕ್ರಮವು ಮುಲ್ಲರ್ ಮಿನಿ ಕನ್ವೆನ್ಷನ್ ಸೆಂಟರ್ನಲ್ಲಿ ಎಂಬಿಬಿಎಸ್ ಬ್ಯಾಚ್ ‘99 ರ 25 ವರ್ಷಗಳ ಪುನರ್ಮಿಲನದ ಆಚರಣೆಯೊಂದಿಗೆ ಪ್ರಾರಂಭವಾಯಿತು. ಕಾರ್ಯಕ್ರಮವು ಡಾ ಜೆರ್ಮಿನ್ ಹ್ಯಾರಿಯೆಟ್ ಮತ್ತು ತಂಡದಿಂದ ಭಾವಪೂರ್ಣವಾದ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾಯಿತು. ಕಾರ್ಯಕ್ರಮದಲ್ಲಿ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಮಾಜಿ ಡೀನ್ ಡಾ ಸಂಜೀವ್ ರೈ ಮತ್ತು ಮಾಜಿ ಆಡಳಿತಾಧಿಕಾರಿ ಫಾದರ್ ಡೆನ್ನಿಸ್ ಡೆಸಾ ಸೇರಿದಂತೆ ಗೌರವಾನ್ವಿತ ವ್ಯಕ್ತಿಗಳು ಉಪಸ್ಥಿತರಿದ್ದರು. ವೇದಿಕೆಯಲ್ಲಿ, ಫಾದರ್ ಮುಲ್ಲರ್ ಚಾರಿಟೇಬಲ್ ಇನ್ಸ್ಟಿಟ್ಯೂಶನ್ ನಿರ್ದೇಶಕರಾದ ಫಾ| ರಿಚರ್ಡ್ ಕುವೆಲ್ಲೊ ಸೇರಿದಂತೆ; ಫಾ| ಅಜಿತ್ ಮಿನೇಜಸ್, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ; ಫಾ| ವಲೇರಿಯನ್ ಡಿಸೋಜಾ ಮತ್ತು ಫಾ| ವಿಲಿಯಂ ಮಿನೇಜಸ್, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಮಾಜಿ ಆಡಳಿತಾಧಿಕಾರಿ; ಮತ್ತು ಡಾ| ಆಂಟನಿ ಎಸ್ ಡಿಸೋಜಾ, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಡೀನ್ ಮುಂತಾದ ಗಣ್ಯರು ಹಾಜರಿದ್ದರು.
ಕಾರ್ಯಕ್ರಮವನ್ನು ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಬ್ಯಾಚ್ ‘99 ರ ಹಳೆ ವಿದ್ಯಾರ್ಥಿಗಳು, ಕನ್ಸಲ್ಟೆಂಟ್ ವಿಟ್ರಿಯೊ ರೆಟಿನಲ್ ಸರ್ಜನ್ ಮತ್ತು ಕೆಎಂಸಿ ಮಂಗಳೂರಿನ ನೇತ್ರಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ| ಗ್ಲಾಡಿಸ್ ರೊಡ್ರಿಗಸ್ ಮತ್ತು ಮಂಗಳೂರಿನ ಫಿಸಿಯೊಲಾಜಿಸ್ಟ್ ಮತ್ತು ಕುಟುಂಬ ವೈದ್ಯೆ ಡಾ| ಕುಸುಮಾ ಸಚಿನ್ ನಿರೂಪಿಸಿದರು. ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕಿ ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆ ಡಾ| ಅರ್ಚನಾ ಭಟ್ ಸ್ವಾಗತ ಭಾಷಣ ಮಾಡಿ, ವೈದ್ಯಕೀಯ ಕ್ಷೇತ್ರಕ್ಕೆ ಮತ್ತು ಸಮಾಜಕ್ಕೆ ಹಳೆ ವಿದ್ಯಾರ್ಥಿಗಳ ಮಹತ್ವದ ಕೊಡುಗೆಯನ್ನು ಶ್ಲಾಘಿಸಿದರು. ಜ್ಞಾನೋದಯ ಮತ್ತು ಮಂಗಳಕರ ಸಂಕೇತವಾದ ದೀಪಾಲಂಕಾರವನ್ನು ವರ್ಗ ಪ್ರತಿನಿಧಿ, ಯುಕೆ ಲಂಡನ್ನ ಆಂತರಿಕ ವೈದ್ಯಕೀಯ ಸಲಹೆಗಾರ ಡಾ ಥಾಮಸ್ ಜಾನ್ ಅವರೊಂದಿಗೆ ಎಲ್ಲಾ ಗಣ್ಯರು ನಿರ್ವಹಿಸಿದರು.
ತಮ್ಮ ಭಾಷಣದಲ್ಲಿ, ಡಾ| ಸಂಜೀವ್ ರೈ – ಬ್ಯಾಚ್ನ ಬೆಳವಣಿಗೆ ಮತ್ತು ಪ್ರಭಾವವನ್ನು, ಸಮಾಜದಲ್ಲಿ ವೈದ್ಯರಾಗಿ ಅವರ ಪ್ರಮುಖ ಪಾತ್ರವನ್ನು ಶ್ಲಾಘಿಸಿದರು. ಅವರು ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಗಳಲ್ಲಿ ತಮ್ಮ ಆರಂಭದ ಬಗ್ಗೆ ನೆನಪಿಸಿಕೊಂಡರು, ಅವರು ಇಂದು ಯಶಸ್ಸಿಗೆ ಕಾರಣವಾದ ಪ್ರಯಾಣದ ಕುರಿತು ಮಾತನಾಡಿದರು.
ಫಾ| ಡೆನಿಸ್ ಡೆಸಾ – ಆತ್ಮಾವಲೋಕನ ಮತ್ತು ಸೇವೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು, ಹಳೆಯ ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ತಳಹದಿ ಮತ್ತು ಸಹಾನುಭೂತಿಯಿಂದ ಇರಬೇಕೆಂದು, ಅವರು ಈ ವಿದ್ಯಾರ್ಥಿಗಳ ಗುರುಗಳು ಕಲಿಸಿದ ಶಿಕ್ಷಣ ಮತ್ತು ಮೌಲ್ಯಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು, ತಾಂತ್ರಿಕ ಪ್ರಗತಿ ಮತ್ತು ಮಾನವೀಯ ಕಾಳಜಿಯ ನಡುವಿನ ಸಮತೋಲನವನ್ನು ವಿವರಿಸಿದರು.
ನಿರ್ದೇಶಕರಾ ಫಾ| ರಿಚರ್ಡ್ ಕುವೆಲ್ಲೊ – ಬ್ಯಾಚಿನ ವೈದ್ಯರ ಶ್ರಮ, ಸಮರ್ಪಣೆ ಮತ್ತು ಮಾನವೀಯತೆಯ ಸೇವೆಯಲ್ಲಿ ಹೊಂದಿದ ಪರಿಶ್ರಮಕ್ಕಾಗಿ ಶ್ಲಾಘಿಸಿದರು. ಅವರು ವೈದ್ಯಕೀಯ ಕಲೆಯ ಪ್ರಾಮುಖ್ಯತೆ ಮತ್ತು ಮಾನವೀಯತೆಯ ಪ್ರೀತಿಯನ್ನು ಒತ್ತಿಹೇಳಿದರು, ವೈದ್ಯರು ತಮ್ಮ ರೋಗಿಗಳಿಗೆ ಸಾಂತ್ವನ ನೀಡಲು ತಮ್ಮ ಸೌಕರ್ಯ ವಲಯಗಳನ್ನು ಮೀರಿ ಹೋಗಲು ಪ್ರೋತ್ಸಾಹಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯುಕೆ ಕೋವೆಂಟ್ರಿಯ ಸಲಹೆಗಾರ ಆಂಕೊಪಾಥಾಲಜಿಸ್ಟ್ ಡಾ| ಅನೀಶ್ಯಾ ಪ್ರಸಾದ್ ಅವರಿಂದ ಮನಮೋಹಕ ನೃತ್ಯ ಪ್ರದರ್ಶನ ನಡೆಯಿತು. ‘99ರ ಬ್ಯಾಚ್ನ ಶಿಕ್ಷಣಕ್ಕೆ ಸಹಕರಿಸಿದ ಶಿಕ್ಷಕರು ಮತ್ತು ವೈದ್ಯಕೀಯೇತರ ಸಿಬ್ಬಂದಿಗೆ ಅಭಿನಂದನೆಗಳನ್ನು ನೀಡಲಾಯಿತು.
ಅಗಲಿದ ಶಿಕ್ಷಕರಿಗೆ ಶ್ರದ್ಧಾಂಜಲಿಗಳನ್ನು ಪ್ರದರ್ಶಿಸುವ ಸ್ಲೈಡ್ಶೋಗಳು, ಕ್ಯಾಂಪಸ್ ನೆನಪುಗಳು ಮತ್ತು ಗೈರುಹಾಜರಾದವರ ವೀಡಿಯೊ ಸಂದೇಶಗಳು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು. ಕೆಎಂಸಿ ಮಂಗಳೂರಿನ ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥ ಮತ್ತು ಮಣಿಪಾಲ್ ಆಸ್ಪತ್ರೆಗಳ (ಗೋವಾ, ಮಂಗಳೂರು ಮತ್ತು ಕೇರಳ) ತುರ್ತು ಚಿಕಿತ್ಸಾ ವಿಭಾಗದ ಪ್ರಾದೇಶಿಕ ಮುಖ್ಯಸ್ಥರಾದ ಡಾ| ಜೀಧು ರಾಧಾಕೃಷ್ಣನ್ ಅವರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. . ಹಳೆಯ ವಿದ್ಯಾರ್ಥಿಗಳನ್ನು ಮರುಸಂಪರ್ಕಿಸಲು ಮತ್ತು ನೆನಪಿಸಿಕೊಳ್ಳಲು ಅವಕಾಶವನ್ನು ಒದಗಿಸಿದ, ಹಳೆಯ ದಿನಗಳನ್ನು ಪ್ರೀತಿಯಿಂದ ನೆನಪಿಸಿಕೊಂಡ ಕೆಲವು ಶಿಕ್ಷಕರ ಮಾತುಕತೆಗಳ ಜೊತೆಗೆ, ಫೋಟೋ ಸೆಷನ್ ಮತ್ತು ರುಚಿಕರವಾದ ಊಟದೊಂದಿಗೆ ಪುನರ್ಮಿಲನವು ಮುಕ್ತಾಯವಾಯಿತು. ಈ ಮೈಲಿಗಲ್ಲನ್ನು ಆಚರಿಸಲು ಪ್ರಪಂಚದಾದ್ಯಂತದ ವೈದ್ಯರು ಒಟ್ಟಾಗಿ ಸೇರಿದ್ದು, ಫಾದರ್ ಮುಲ್ಲರ್ ಚಾರಿಟಬಲ್ ಇನ್ಸ್ಟಿಟ್ಯೂಶನ್ಗಳಲ್ಲಿ ತಮ್ಮ ಸಮಯದಲ್ಲಿ ಬೆಸೆದ ಬಲವಾದ ಬಂಧಗಳು ಮತ್ತು ನೆನಪುಗಳನ್ನು ಪ್ರದರ್ಶಿಸಲು ಇದು ಹೃತ್ಪೂರ್ವಕವಾಗಿತ್ತು. ಕಾರ್ಯಕ್ರಮವು ಕೇವಲ ಹಿಂದಿನ ಆಚರಣೆಯಾಗಿರಲಿಲ್ಲ, ಎಂಬಿಬಿಎಸ್ ಬ್ಯಾಚ್ ‘99.
ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಕುಂದಾಪುರ ಸತತ 7 ವರ್ಷಗಳಿಂದ 100 % ಫಲಿತಾಂಶ
ಕುಂದಾಪುರ : ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 7ನೇ ವರ್ಷವೂ ಕೂಡ 100 % ಫಲಿತಾಂಶ ದಾಖಲಿಸಿದ್ದು 11 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 36 ವಿದ್ಯಾರ್ಥಿಗಳು ಪ್ರಥಮ ದರ್ಜೆ, 3 ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಪಡೆದಿದ್ದಾರೆ. ಮರಿಯಾ ವಿಯೊಲ್ಲಾ ಬರೆಟ್ಟೊ 591 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಹಾಗೂ ರೀಯಾ ಡಿ’ಸೋಜ 581 ಅಂಕ ಗಳಿಸಿ ಶಾಲೆಗೆ ದ್ವಿತೀಯ ಸ್ಥಾನವನ್ನು ಹಾಗೂ ರೋಶನ್ ಡಿ’ಸೋಜ 573 ಅಂಕ ಗಳಿಸಿ ಮೂರನೇ ಸ್ಥಾನವನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಚಾಲಕರೂ ಕುಂದಾಪುರ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅತೀ ವಂದನೀಯ ಸ್ಟ್ಯಾನಿ ತಾವ್ರೊ ಹಾಗೂ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಜ್ ಶಾಂತಿ ಡಿ’ಸೋಜ ಎ.ಸಿ., ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ಶಿಕ್ಷಕೇತರ ವೃಂದದವರು ಅಭಿನಂದಿಸಿದ್ದಾರೆ.
ಉದ್ಯಾವರ : ಎಸ್.ಎಫ್.ಎಕ್ಸ್ ಆಂಗ್ಲ ಮಾಧ್ಯಮ ಶಾಲೆ 100 ಪ್ರತಿಶತ ಸಾಧನೆ
ಉಡುಪಿ : ಉದ್ಯಾವರ ಗ್ರಾಮೀಣ ಭಾಗದಲ್ಲಿನ ಮೇಲ್ಪೇಟೆಯ ಸಂತ ಫ್ರಾನ್ಸಿಸ್ ಕ್ಸೇವಿಯರ್ ಆಂಗ್ಲ ಮಾಧ್ಯಮ ಶಾಲೆಯು ಎಸ್ ಎಸ್ ಎಲ್ ಸಿ ಯಲ್ಲಿ 100 ಪ್ರತಿಶತದೊಂದಿಗೆ ವಿಶೇಷ ಸಾಧನೆ ಮಾಡಿದೆ.
58 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 16 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಮತ್ತು 41 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಕಳೆದ ಆರು ವರ್ಷಗಳಿಂದ ಎಸ್ ಎಸ್ ಎಲ್ ಸಿ ಯಲ್ಲಿ ಸತತ 100 ಪ್ರತಿಶತ ಸಾಧನೆ ಮಾಡಿರುವ ಈ ವಿದ್ಯಾಸಂಸ್ಥೆಯು, ಕಳೆದ 15 ವರ್ಷಗಳಲ್ಲಿ 13 ಬಾರಿ ಈ ಸಾಧನೆ ಮಾಡಿದೆ. ಈ ವಿದ್ಯಾ ಸಂಸ್ಥೆಯು ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಆಡಳಿತಕ್ಕೆ ಒಳಪಟ್ಟಿದೆ.
ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ-1ರ ಫಲಿತಾಂಶ ಇಂದು ಮೇ 9ರಂದು ಪ್ರಕಟವಾಗಲಿದೆ
ಬೆಂಗಳೂರು: ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು https://karresults.nic.in ಜಾಲತಾಣದಲ್ಲಿ ನಾಳೆ ಬೆಳಗ್ಗೆ 10.30ರ ನಂತರ ಫಲಿತಾಂಶ ವೀಕ್ಷಿಸಬಹುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕ ಸರ್ಕಾರದ ಎಸ್ ಎಸ್ ಎಲ್ ಸಿ ಪರೀಕ್ಷೆ 2024 ಮಾರ್ಚ್ 25 ರಿಂದ ಏಪ್ರಿಲ್ 6ರ ನಡುವೆ ನಡೆಯಿತು. ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಗೆ 8.69 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 4.41 ಲಕ್ಷ ಬಾಲಕರು, 4.28 ಬಾಲಕಿಯರಿದ್ದರು. ಇದಲ್ಲದೆ, 18,225 ಖಾಸಗಿ ವಿದ್ಯಾರ್ಥಿಗಳು, 41,375 ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ 5,424 ವಿಭಿನ್ನ ಸಾಮರ್ಥ್ಯದ ವಿದ್ಯಾರ್ಥಿಗಳು ಕೂಡ ಇವರಲ್ಲೇ ಸೇರಿಕೊಂಡು ಪರೀಕ್ಷೆ ಬರೆದಿದ್ದಾರೆ. ಕರ್ನಾಟಕದ ಒಟ್ಟು 2,750 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಈ ಸಲದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದರು.
ಬಸವೇಶ್ವರ ಭಕ್ತಮಂಡಳಿ,ಶರಣೆಯರ ಬಳಗದಿಂದ ಬಸವಜಯಂತಿ ಕಾರ್ಯಕ್ರಮಗಳಿಗೆ ಚಾಲನೆ ಬಸವ ತತ್ವ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಜೀವನ ಧನ್ಯ-ಡಾ.ಅರವಿಂದ್ ಬಿ.ಜತ್ತಿ
ಕೋಲಾರ:- ಬಸವ ಜಯಂತಿಯನ್ನು ವರ್ಷಕ್ಕೊಮ್ಮೆ ಆಚರಿಸಲು ಸೀಮಿತ ಗೊಳಿಸದೆ ಬಸವಣ್ಣನವರ ವಚನ, ತತ್ವಗಳ ಸಾರವನ್ನು ನಿತ್ಯ ಜೀವನದಲ್ಲಿ ಅಳವಡಿಸಿ ಕೊಳ್ಳುವ ಮೂಲಕ ಪ್ರತಿ ದಿನವೂ ಬಸವ ಜಯಂತಿ ಆಚರಿಸುವಂತಾದಾದರೆ ಮಾತ್ರ ಜೀವನ ಧನ್ಯ ಎಂದು ಬಸವ ಸಮಿತಿ ಅಧ್ಯಕ್ಷ ಡಾ ಅರವಿಂದ್ ಬಿ. ಜತ್ತಿ ಅಭಿಪ್ರಾಯಪಟ್ಟರು,
ನಗರದ ಶ್ರೀ ಬಸವೇಶ್ವರ ಭಕ್ತ ಮಂಡಳಿ ಮತ್ತು ಶರಣೆಯರ ಬಳಗವು ಅರಳೇ ಪೇಟೆಯ ಶ್ರೀ ಬಸವೇಶ್ವರ ದೇವಾಸ್ಥಾನದ ಅವರಣದಲ್ಲಿ ಪ್ರತಿವರ್ಷದಂತೆ ಈ ವರ್ಷವು ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಶರಣರ ವಚನಗಳಲ್ಲಿ ಕನಿಷ್ಠ ಒಂದನ್ನು ಅಳವಡಿಸಿ ಕೊಂಡರೆ ಸಾಕು ಜೀವನದಲ್ಲಿ ಪರಿವರ್ತನೆ ಕಾಣಬಹುದಾಗಿದೆ. ಅಂತರಂಗದಲ್ಲಿನ ಅನುಭಾವಗಳು ಆದ ಹಾಗೇ ಚಿಂತನೆಗಳು ಬದಲಾವಣೆಗಳಾಗುತ್ತಾ ಜೀವನ ಚಕ್ರ ತಿರುಗುತ್ತಿರುತ್ತದೆ ಎಂದರು.
ವಚನಗಳ ಪ್ರತಿ ನುಡಿಯಲ್ಲೂ ಅಪಾರ ಶಕ್ತಿ ಅಡಗಿದೆ. ಬಸವನ ತತ್ವಗಳು ಜೀವನಕ್ಕೆ ಅಧಾರ ಎಂದಾಗ ಎತ್ತರವಾಗಿ ಬೆಳೆಯುತ್ತೇವೆ, ಪ್ರತಿಯೊಂದು ವಚನಗಳನ್ನು ಅರ್ಥೈಸಿ ಕೊಂಡು ಆತ್ಮವಲೋಕನ ಮಾಡಿ ಕೊಂಡಾಗ ಬದುಕಿನಲ್ಲಿ ಪರಿವರ್ತನೆ ಕಾಣುವಂತಾಗುತ್ತದೆ. ನಾನು ಸಹ ಬಸವಣ್ಣನಾಗ ಬೇಕು ಎಂಬ ಭಾವನೆಗಳು ಅಂತರಂಗದಲ್ಲಿ ಮೂಡಿ ಬಂದಾಗ ಸಮಾಜದಲ್ಲಿ ಆದರ್ಶವಾಗಿ ಬಾಳಲು ಪ್ರೇರಣೆ ಸಿಗುತ್ತದೆ ಎಂದು ತಿಳಿಸಿದರು.
ಶಿವ ಪೂಜೆಯನ್ನು ಮಾಡುವಾಗ ಲೌಕಿಕ ಚಿಂತನೆಗಳನ್ನು ಹಾಗೂ ಪಿಂಡಾಂಡಗಳ ಚಿಂತನೆಯನ್ನು ಮರೆತು ಶ್ರದ್ದಾ ಭಕ್ತಿಯಿಂದ ಮಾಡಿದಾಗ ಮಾತ್ರ ಮನದ ಒಡೆಯನಾದ ಶಿವನನ್ನು ಕಾಣಲು ಸಾಧ್ಯ, ಪರಂಪರೆ ಹೆಸರಿನಲ್ಲಿ ಮೌಢ್ಯಗಳನ್ನು ಬಿತ್ತುವುದಲ್ಲ. ಮನದೊಳಗೆ ಮನದ ಒಡೆಯನು ಇರಬೇಕು ಮಕ್ಕಳಲ್ಲಿ ಯಾವೂದು ಬೇಡಾ ಯಾವೂದು ಬೇಕೆಂಬುವುದು ವಚನಗಳಲ್ಲಿರುವಂತೆ ಅರಿವು ಮೂಡಿಸಿದಾಗ ಅವರ ಭವಿಷ್ಯವು ಸುಂದರವಾಗಲು ಸಾಧ್ಯವಾಗುತ್ತದೆ, ಬದುಕಿನ ಸತ್ಯ ದರ್ಶನವಾಗುತ್ತದೆ. ವಚನಗಳಲ್ಲಿನ ಪರಿವರ್ತನಾತ್ಮಕ ಸಂದೇಶಗಳಿಂದ ಜೀವನದಲ್ಲಿ ಬದಲಾವಣೆ ಕಾಣಬೇಕೆಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ನಾಗಲಾಪುರ ವೀರಸಂಸ್ಥಾನ ಮಠದ ಪೀಠಾಧಿಕಾರಿಗಳಾದ ಷ.ಬ್ರ.ಶ್ರೀ ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ, ಭಗವಂತ ಅನೇಕ ಜನ್ಮ ನೀಡಿದ್ದು ಅದರಲ್ಲಿ ಮಾನವ ಜನ್ಮವು ಅತ್ಯಂತ ಶ್ರೇಷ್ಠದ್ದಾಗಿದೆ, ಜನನ ಮರಣಗಳು ಸಾಮಾನ್ಯವಾಗಿದ್ದು ಇದರಲ್ಲಿ ಸತ್ತು ಬದುಕಿರುವಂತ ಭಕ್ತಿ ಭಂಡರಿ ಬಸವಣ್ಣನವರ ಬದುಕಿನ ಆದರ್ಶದ ತತ್ವಗಳು ಮೈಗೊಡಿಸಿ ಕೊಂಡಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು.
ಬಸವಣ್ಣನವರ ವಚನಗಳನ್ನು ನಿತ್ಯ ಕಾಯಕದಲ್ಲಿ ತೊಡಗಿಸಿ ಕೊಂಡು ಪ್ರತಿಯೊರ್ವರು ಅಧುನಿಕ ಬಸವಣ್ಣ ಆಗಬೇಕು, ವಚನಗಳ ಮೂಲಕ ಜೀವನದಲ್ಲಿ ಕಾಣುವಂತಾಗಬೇಕು, ನಮ್ಮ ನಡೆ ನುಡಿಗಳಲ್ಲಿ ಪರಿವರ್ತನೆ ಮಾಡಿ ಕೊಳ್ಳುವಂತಾಗಬೇಕು, ವಚನಗಳನ್ನು ಜೀವನಕ್ಕೆ ಸ್ಪೂರ್ತಿದಾಯಕವಾಗಿ ಅಳವಡಿಸಿಕೊಂಡು ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುವ ಮೂಲಕ ಭಕ್ತಿ ಭಂಡಾರಿ ಬಸವಣ್ಣನವರ ಅನುಯಾಯಿಗಳಾಗಬೇಕೆಂದು ಕರೆ ನೀಡಿದರು,
ಬ್ರಾಹ್ಮಣ ಧರ್ಮದಲ್ಲಿ ಜನಿಸಿದ ಬಸವಣ್ಣ ವೀರಶೈವ ಲಿಂಗಾಯಿತ ಧರ್ಮ ಸಂಘಟಿಸಿ ಕೊಂಡು ಮಾನವತಾ ವಾದದ ಸಂದೇಶವನ್ನು ಸಾರಿದರು. ಅವರ ಆಚಾರ ವಿಚಾರಗಳು ವಚನಗಳ ತತ್ವಗಳು ಹೆಚ್ಚು ಹೆಚ್ಚಾಗಿ ಸಮಾಜದಲ್ಲಿ ಪಸರಿಸುವಂತಾಗ ಬೇಕೆಂದ ಅವರು, ಬಸವಣ್ಣನವರ ತತ್ವಗಳನ್ನು ಮೈಗೊಡಿಸಿ ಕೊಂಡಿರುವ ವಿಶ್ವದಾದ್ಯಂತ ಪ್ರಸಾರ ಮಾಡುತ್ತಿರುವಂತ ಡಾ. ಅರವಿಂದ ಬಿ. ಜತ್ತಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಶರಣೆಯರ ಬಳಗದ ಅಧ್ಯಕ್ಷೆ ಉಷಾಗಂಗಾಧರ್ ಮಾತನಾಡಿ, ಬಸವಣ್ಣನವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪರಿವರ್ತನೆ ಹಾದಿಯತ್ತ ಸಾಗುವ ಮೂಲಕ ಪ್ರತಿಯೊಬ್ಬರು ಉತ್ತಮ ಭವಿಷ್ಯವನ್ನು ರೂಪಿಸಿ ಕೊಳ್ಳಬಹುದಾಗಿದೆ, 12ನೇ ಶತಮಾನದಲ್ಲಿಯೇ ಲಿಂಗ ಭೇದ ತೊಡೆದು ಸಮಾನತೆಯ ಸುಧಾರಣೆ ತಂದವರು ನಮ್ಮ ಕಾಯಕಯೋಗಿ ಎಂದರು.
ವೀರಶೈವ ಸಮುದಾಯದಲ್ಲಿ ಮಹಿಳೆಯರನ್ನು ಪೂಜ್ಯ ಭಾವನೆಯಿಂದ ಕಾಣುವಂತೆ ತಿಳಿಸಿ ಕೊಡುವ ಮೂಲಕ ಸಮಾಜದಲ್ಲಿ ಮಹಿಳೆಯರನ್ನು ಶೋಷಣೆಯಿಂದ ಮುಕ್ತಿ ಕಲ್ಪಿಸಿದರು ಎಂದರು. ಸಮಾಜದಲ್ಲಿನ ಅನೇಕ ಮೌಡ್ಯಗಳನ್ನು ತೊಡೆದು ಹಾಕಲು ಒತ್ತು ನೀಡುವ ಮೂಲಕ ಸಮಾಜವನ್ನು ಸುಧಾರಣೆಯ ಪಥದತ್ತ ಕೊಂಡೊಯ್ಯಲು ಕ್ರಾಂತಿ ಉಂಟು ಮಾಡಿದರು.
ಅನುಭವ ಮಂಟಪಗಳನ್ನು ಸ್ಥಾಪಿಸುವ ಮೂಲಕ ಇಂದಿನ ಸಂವಿಧಾನ ರಚನೆಗೆ ಪ್ರೇರಕರಾಗಿ ವಿಶ್ವಗುರುವಾದರು ಎಂದು ಪ್ರತಿಪಾದಿಸಿದರು.
ಕಳೆದ 35 ವರ್ಷಗಳಿಂದ ಶರಣೆಯರ ಬಳಗವು ಬಸವೇಶ್ವರ ಜಯಂತಿ ಕಾರ್ಯಕ್ರಮಗಳನ್ನು ಮುನ್ನಡೆಸಿ ಕೊಂಡು ಬರುವ ಜೂತೆಗೆ ಅನೇಕ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು ಬರುತ್ತಿದೆ ಎಂದರು
ಶರಣೆಯರ ಬಳಗದ ವಿಮಾಲ ಬೈಲಪ್ಪ ಮಾತನಾಡಿದರು. ಇದೇ ಸಂದರ್ಭದಲ್ಲಿ ವಚನಗಳ ಸ್ವರ್ಧೆ ಹಾಗೂ ಕ್ರೀಡಾ ಚಟುವಟಿಕೆಗಳ ಸ್ವರ್ಧೆಯ ವಿಜೇತರಿಗೆ ಹಾಗೂ ಶರಣೆಯರ ಬಳಗದ ಅಧ್ಯಕ್ಷೆ ಉಷಾಗಂಗಾಧರ್ ಹಾಗೂ ಗಣ್ಯರಿಂದ ಬಹುಮಾನ ವಿತರಿಸಲಾಯಿತು. ನಂತರದಲ್ಲಿ ವಚನ ಗಾಯನ ಹಾಗೂ ಶಿವ ತಂಡವ ನೃತ್ಯ ರೂಪಕ ಸಾಂಸ್ಕøತಿಕ ಕಾರ್ಯಕ್ರಮಗಳಾದವು.
ವೇದಿಕೆಯಲ್ಲಿ ಶ್ರೀ ಬಸವೇಶ್ವರ ಭಕ್ತ ಮಂಡಳಿಯ ಅಧ್ಯಕ್ಷ ಸಿ. ಗಂಗಾಧರ್ ಹಾಗೂ ಉಪಾಧ್ಯಕ್ಷ ಕೆ.ಬಿ.ಬೈಲಪ್ಪ ಉಪಸ್ಥಿತರಿದ್ದರು.
ವಲಕುಪ್ಪ ಗ್ರಾಮದ ಸರ್ಕಾರಿ ಕನ್ನಡ ಕಿ. ಪ್ರಾ. ಶಾಲೆಗೆ ಸೇರಿದ ಜಮೀನಿನಲ್ಲಿರುವ ಮಾವಿನ ತೋಟದ ಫಸಲು ಬಹಿರಂಗ ಹರಾಜು
ಶ್ರೀನಿವಾಸಪುರ : ತಾಲ್ಲೂಕಿನ ಹೊದಲಿ ಗ್ರಾಮ ಪಂಚಾಯಿತಿಗೆ ಒಳಪಡುವ ಅವಲಕುಪ್ಪ ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಗೆ ಸೇರಿದ ಸರ್ವೆ ನಂ. 95 ರಲ್ಲಿರುವ 10 ಎಕರೆ ಜಮೀನಿನಲ್ಲಿರುವ ಮಾವಿನ ತೋಟದ ಫಸಲನ್ನು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಶಾಲಾವರಣದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಎಸ್ಡಿಎಂಸಿ ಅಧ್ಯಕ್ಷತೆಯಲ್ಲಿ ಬುಧವಾರ ಬಹಿರಂಗ ಹರಾಜು ಪ್ರಕ್ರಿಯೆ ನಡೆಸಲಾಯಿತು.
ಅವಲಕುಪ್ಪ ಗ್ರಾಮದ ಸರ್ಕಾರಿ ಶಾಲೆಗೆ ಸೇರಿದ ಸರ್ವೆ ನಂಬರ್ 95ರಲ್ಲಿನ 10 ಎಕರೆ ಜಮೀನಿನ ಮಾವಿನ ತೋಟದ ಫಸಲು ನಿಯಮಾನುಸಾರ ಬಹಿರಂಗ ಹರಾಜಿನಲ್ಲಿ 5 ಲಕ್ಷ 21 ಸಾವಿರಕ್ಕೆ ಅಂತಿಮ ಬೀಟ್ನಲ್ಲಿ ಗ್ರಾಮದ ರಾಮ್ಚರಣ್ ಎಂಬ ಬೀಟ್ದಾರರು ಹರಾಜುನಲ್ಲಿ ತಮ್ಮದಾಗಿಸಿಕೊಂಡಿದ್ದಾರೆ.
ಈ ಹರಾಜಿನಲ್ಲಿ ಸುಮಾರು 18 ಮಂದಿ ಬೀಟ್ ದಾರರು ಭಾಗವಹಿಸಿದ್ದು, ಇವರ ಪೈಕಿ ಶಬ್ಭೀರ್ ಮತ್ತು ಡಿ.ಎನ್.ರವಿಕುಮಾರ್, ಲಕ್ಷ್ಮೀನಾರಾಯಣ ಮತ್ತು ಎ.ಸಿ.ನಾರಾಯಣಸ್ವಾಮಿ ಇವರ ಮಧ್ಯೆ ಬೀಟ್ ಹರಾಜ್ ಸ್ಪರ್ದೆ ನಡೆಯುತ್ತಾ ಬಂದಿದ್ದು, ಅಂತಿಮವಾಗಿ 5ಲಕ್ಷ 21 ಸಾವಿರಕ್ಕೆ ಅದೇ ಗ್ರಾಮ ರಾಮ್ ಚರಣ್ ಎಂಬುವವರು ತಮ್ಮದಾಗಿಸಿಕೊಂಡಿದ್ದಾರೆ.
ಈ ವೇಳೆಯಲ್ಲಿ ಬಿಇಒ ಮುನಿಲಕ್ಷ್ಮಯ್ಯ, ಎಸ್ಡಿಎಂಸಿ ಅಧ್ಯಕ್ಷ ನರಸಿಂಹಮೂರ್ತಿ, ತಾಲೂಕು ದೈಹಿಕ ಪರಿವೀಕ್ಷಕ ವೆಂಕಟಸ್ವಾಮಿ, ಇಸಿಒ ಹನುಮೇಗೌಡ, ಬಿಐಇಆರ್ಪಿ ಜಿ.ವಿ.ಚಂದ್ರಪ್ಪ, ಗ್ರಾ.ಪಂ ಸದಸ್ಯರಾದ ಗೋವಿಂದರೆಡ್ಡಿ, ಗೀತಾರಾಮಚಂದ್ರ ಮುಖ್ಯ ಶಿಕ್ಷಕ ಎಂ.ಶಂಕರಪ್ಪ, ಶಿಕ್ಷಕಿ ಎ.ಎಲ್. ಪಾರ್ವತಮ್ಮ, ತೋಟದ ನಿರ್ವಹಣೆ ಮಾಲೀಕ ಎ.ಎಂ. ಮುಳಬಾಗಿಲಯ್ಯ, ಎಸ್ಡಿಎಂಸಿ ಮಾಜಿ ಅಧ್ಯಕ್ಷರಾದ ಚಂದ್ರಶೇಖರ್ರೆಡ್ಡಿ, ವೆಂಕಟರಮಣಪ್ಪ, ಗ್ರಾಮದ ಮುಖಂಡರಾದ ವೆಂಕಟರೆಡ್ಡಿ, ಜಿ.ಶಂಕರ್, ಅಡಿಗೆ ಸಿಬ್ಬಂದಿ ಶಾರದಮ್ಮ ಇದ್ದರು.