ಶ್ರೀನಿವಾಸಪುರ : ತಾಲೂಕಿನ ರೋಣುರು ಹಾಗು ತಿಮ್ಮಸಂದ್ರ ರಸ್ತೆಯಲ್ಲಿನ ಮಾವಿನ ತೋಪು ಒಂದರಲ್ಲ್ಲಿ ಕೋಳಿ ಪಂದ್ಯಗಳನ್ನು ಆಡುತ್ತಿರುವ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಹಿನ್ನೆಲೆಯಲ್ಲಿ ಮಂಗಳವಾರ ಶ್ರೀನಿವಾಸಪುರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಎಂ.ಬಿ.ಗೊರವನಕೊಳ್ಳ ನೇತೃತ್ವದಲ್ಲಿ ಕೋಳಿ ಪಂದ್ಯ ಅಡ್ಡೆಯ ಮೇಲೆ ದಾಳಿ ನಡೆಸಿ 9 ಬೈಕುಗಳು ಹಾಗು ಒಂದು ಕೋಳಿಯನ್ನ ವಶಪಡಿಸಿಕೊಂಡು ಕೇಸು ದಾಖಲಿಸಿಕೊಂಡಿದ್ದಾರೆ.
ಪಿಎಸ್ಐ ಶಿವಪ್ಪ, ಸಿಬ್ಬಂದಿಗಳಾದ ಆನಂದ್, ಪತ್ರಿಬಸಪ್ಪ, ಸಂಪತ್, ಶ್ರೀನಾಥ್ , ಸಂತೋಷ್, ಅಂಬರೀಶ್, ಗಣೇಶ್, ಮಂಜುನಾಥ್, ರಮೇಶ್ ದಾಳಿಯಲ್ಲಿ ಪಾಲ್ಗುಂಡಿದ್ದರು.
Day: May 30, 2024
ಕುಂದಾಪುರ ರೋಜರಿ ಮಾತಾ ಚರ್ಚಿನ ಪ್ರಧಾನ ಧರ್ಮಗುರುಗಳಾಗಿ ಫಾ|ಪಾವ್ಲ್ ರೇಗೊ ಅಧಿಕಾರ ಸ್ವೀಕಾರ
ಕುಂದಾಪುರ, ಮೇ.30: 454 ವರ್ಷಗಳ ಚರಿತ್ರೆ ಹೊಂದಿರುವ, ಐತಿಹಾಸಿಕ ಚರಿತ್ರೆವುಳ್ಳ ಕುಂದಾಪುರ ರೋಜರಿ ಮಾತಾ ಚರ್ಚಿಗೆ ಪ್ರಧಾನ ಧರ್ಮಗುರುಗಳಾಗಿ ಅ|ವಂ|ಪಾವ್ಲ್ ರೇಗೊರವರು ಮೇ 30 ರಂದು ಸಂಜೆ ಅಧಿಕಾರ ಸ್ವೀಕರಿಸಿದರು. ಅವರು ಕುಂದಾಪುರಕ್ಕೆ ಆಗಮಿಸಿ ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರ ಪರವಾಗಿ, ಉಡುಪಿ ಧರ್ಮ ಪ್ರಾಂತ್ಯದ ಮೊನ್ಸಿಂಜೊರ್ ಅ|ವಂ| ಫರ್ಡಿನಾಂಡ್ ಗೊನ್ಸಾಲ್ವಿಸ್ ಅವರ ನೇತ್ರತ್ವದಲ್ಲಿ, ಈ ಮೊದಲಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಅವರಿಂದ ಅಧಿಕಾರ ಸ್ವೀಕರಿಸಿದರು.ಹಾಗೇಯೆ ಇನ್ನು ಮುಂದೆ ಅ|ವಂ|ಪಾವ್ಲ್ ರೇಗೊರವರು ಕುಂದಾಪುರ ವಲಯದ ಪ್ರಧಾನ ಗುರುಗಳಾಗಿರುತ್ತಾರೆ.
ಅ|ವಂ|ಸ್ಟ್ಯಾನಿ ತಾವ್ರೊ ಮಾತನಾಡಿ ಕುಂದಾಪುರ ಚರ್ಚ್ ಬಹಳ ಪುರಾತನವಾಗಿದ್ದು, ಇಲ್ಲಿ ಸಂತ ಜುಜೆವಾಜ್ ಮಹಾನುಭಾವರು ಧರ್ಮಗುರುಗಳಾಗಿ ಸೇವೆ ಸಲ್ಲಿಸಿದಂತ ಪವಿತ್ರ ಚರ್ಚ್ ಆಗಿದೆ, ಕುಂದಾಪುರದ ಜನತೆ ನನಗೆ ನೀಡಿದ ಪ್ರೀತಿ ಗೌರವ ಎಂದೂ ಮರೆಯುವುದಿಲ್ಲ, ನಿಮ್ಮ ಭಕ್ತಿ, ಪೂಜೆ, ಸಹಕಾರ ವಿಶೇಷವಾದದ್ದು, ಕುಂದಾಪುರದವರು ತುಂಬ ಒಳ್ಳೆಯ ಜನ, ಇದೇ ಪ್ರೀತಿ ನೀವು ಈಗ ಬಂದಿರುವ ಗುರುಗಳಿಗೂ ನೀಡಬೇಕು’ ಎಂದು ತಿಳಿಸಿದರು.
ನೂತನವಾಗಿ ಅಧಿಕಾರ ಸ್ವೀಕರಿಸಿದ ಅ|ವಂ|ಪಾವ್ಲ್ ರೇಗೊ ‘ಈ ಚಾರಿತ್ರಿಕ ಹಿನ್ನೆಲೆಯುಳ್ಳ ಇಗರ್ಜಿಯಲ್ಲಿ ನನಗೆ ಸೇವೆ ಮಾಡಲು ಸಿಕ್ಕಿದು,್ದ ನನ್ನ ಭಾಗ್ಯ. ಎಂದು ಹೇಳುತ್ತಾ ‘ನಾನು ಯೇಸು ಕ್ರಿಸ್ತರ ಮಾರ್ಗದರ್ಶನದಲ್ಲಿ ಇಲ್ಲಿ ಸೇವೆ ಮಾಡಲು ಬಂದಿದ್ದೆನೆ, ನಾನು ನಿಮ್ಮನ್ನು ಪ್ರೀತಿಸುತ್ತೇನೆ, ನೀವು ನನ್ನನ್ನು ಪ್ರೀತಿಸಿರಿ, ನಿಮ್ಮ ಸಹಕಾರದಿಂದ ಉತ್ತಮ ಸೇವೆ ನೀಡುತ್ತೇನೆ’ ಎಂದು ತಿಳಿಸುತ್ತಾ ಕಾರ್ಕಳ ಮಿಯಾರ್ ಚರ್ಚಿನಿಂದ ಅ|ವಂ|ಪಾವ್ಲ್ ರೇಗೊರವರನ್ನು ಬಿಳ್ಕೋಡಲು ಅನೇಕ ಜನರು ಬಂದಿದ್ದು, ಅವರಿಗೆ ಅವರು ಧನ್ಯವಾದ ಅರ್ಪಿಸಿದರು
ಮೊನ್ಸಿಂಜೊರ್ ಅ|ವಂ| ಫರ್ಡಿನಾಂಡ್ ಗೊನ್ಸಾಲ್ವಿಸ್ ಮಾತನಾಡಿ ಈ ಇಗರ್ಜಿಗೆ ತನ್ನದೆ ಆದ ಇತಿಹಾಸ ಇದೆ, ಇದು ನಾನು ಹುಟ್ಟಿದ ಇಗರ್ಜಿ ಕೂಡ ಆಗಿದೆ. ಇದು ಕುಂದಾಪುರ ವಲಯದ ಪ್ರಮುಖ ಇಗರ್ಜಿ, ಅದಕ್ಕಾಗಿ ಬಹಳ ಪ್ರತಿಭೆಯುಳ್ಳ, ಬಹಳ ಉತ್ಸಾಹದ ಗುರುಗಳಾದ ಅ|ವಂ|ಪಾವ್ಲ್ ರೇಗೊರವರನ್ನು, ಇಲ್ಲಿ ಬಿಷಪ್ ರವರು ನಿಯುಕ್ತಿ ಮಾಡಿದ್ದಾರೆ ಎಂದು ನಾನು ಅಂದುಕೊಂಡಿದ್ದೇನೆ, ಕಾರ್ಕಳ ಮಿಯಾರ್ ಚರ್ಚಿನಲ್ಲಿ ಅವರು ಉತ್ತಮ ಸೇವೆ,ಕೆಲಸ ಮಾಡಿದ್ದಾರೆ, ಇಲ್ಲಿಯೂ ಮಾಡುತ್ತಾರೆ’ ಎಂದು ಶುಭ ಕೋರಿದರು..
ಪಾಲನ ಮಂಡಳಿಯ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ ಚರ್ಚಿನ ಕುಟುಂಬಗಳ ದಾಖಲಾತಿಯ ಪುಸ್ತಕ ನೂತನ ಗುರುಗಳಿಗೆ ಹಸ್ತಾಂತರಿಸಿ. ಚರ್ಚಿನ ಪರಿಚಯ ನೀಡಿದರು. ಕಾರ್ಯಕ್ರಮದಲ್ಲಿ, ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ಸುಪ್ರಿಯಾ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಧರ್ಮಭಗಿನಿಯರು ಪಾಲನಮಂಡಳಿ ಸದಸ್ಯರು, ಕುಂದಾಪುರ ಚರ್ಚಿನ ಭಕ್ತಾಧಿಗಳು ಹಾಜರಿದ್ದರು. ಕಾರ್ಯದರ್ಶಿ ಆಶಾ ಕರ್ವಾಲ್ಲೊ ಧನ್ಯವಾದಗಳನ್ನು ಅರ್ಪಿಸಿದರು. ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ ಕಾರ್ಯಕ್ರಮ ನಿರೂಪಿಸಿದರು.
ಒಳ್ಳೆಯ ಸಂಸ್ಕಾರದೊಂದಿಗೆ ಸಮಾಜದೊಳಗೆ ಒಂದಾಗಿ ಒಗ್ಗಟ್ಟಾಗಿ ಜೀವಿಸಿ ಜೀವನವನ್ನು ಕಟ್ಟಿಕೊಳ್ಳಿ : ಪದ್ಮಶ್ರೀ ಖ್ಯಾತ ಮನೋವೈದ್ಯ ಡಾ ಸಿ.ಆರ್.ಚಂದ್ರಶೇಖರ
ಕುಂದಾಪುರ: ಒಳ್ಳೆಯ ಸಂಸ್ಕಾರದೊಂದಿಗೆ ಸಮಾಜದೊಳಗೆ ಒಂದಾಗಿ ಒಗ್ಗಟ್ಟಾಗಿ ಜೀವಿಸಿ ಜೀವನವನ್ನು ಕಟ್ಟಿಕೊಳ್ಳಿ ಎಂದು ಪದ್ಮಶ್ರೀ ಖ್ಯಾತ ಮನೋವೈದ್ಯ ಡಾ ಸಿ.ಆರ್.ಚಂದ್ರಶೇಖರ ಅವರು ಹೇಳಿದರು.
ಅವರು ಮೇ 27ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ “ಒತ್ತಡ ರಹಿತ ಜೀವನ” ಎಂಬ ವಿಷಯದ ಕುರಿತು ಮಾತನಾಡಿದರು.
ಮನುಷ್ಯನಿಗೆ ಮುಖ್ಯವಾಗಿ ಉತ್ತಮ ಸಾಮಾಜಿಕ ಸಂಪರ್ಕ ಅಗತ್ಯವಾಗಿ ಬೇಕು. ಅದು ಮನೆಗೆ ಮಾತ್ರ ಸೀಮಿತವಾಗಿರದೆ ಸಮಾಜದೊಳಗೂ ಅತ್ಯಂತ ಮುಖ್ಯವಾಗಿರುತ್ತದೆ. ಅಲ್ಲದೆ ಧೂಮಪಾನ ಮದ್ಯಪಾನದಂತಹ ದುಶ್ಚಟಗಳಿಗೆ ಬಲಿಯಾಗಬೇಡಿ. ಪ್ರಾಮಾಣಿಕತೆ ಮತ್ತು ಒಳ್ಳೆಯತನದಿಂದ ಬದುಕಬೇಕು. ಸಮಾಜದಲ್ಲಿ ಅಂತಹವರನ್ನು ಗುರುತಿಸುವುದುರೊಂದಿಗೆ ನೆನಪಿಟ್ಟುಕೊಳ್ಳುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿ ಲೆಕ್ಕ ಪರಿಶೋಧಕ ಡಾ.ನಾಗರಾಜ ಆಚಾರ್ ಅವರು “ಯಶಸ್ವಿ ಜೀವನದ ಸೂತ್ರಗಳು” ಎಂಬ ವಿಷಯದ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಕೆ ಶಾಂತಾರಾಮ್ ಪ್ರಭು ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿಶ್ವಸ್ಥ ಮಂಡಳಿಯ ಸದಸ್ಯರಾದ ಸದಾನಂದ ಚಾತ್ರ, ರಾಜೇಂದ್ರ ತೋಳಾರ್, ಆಡಳಿತ ಮಂಡಳಿಯ ಸದಸ್ಯರಾದ ಯು.ಎಸ್.ಶೆಣೈ, ಮತ್ತು ಮಾಲಿಗ ಆಚಾರ್ ಉಪಸ್ಥಿತರಿದ್ದರು.
ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ.ಗೊಂಡ ವಂದಿಸಿದರು. ಮನಃಶಾಸ್ತ್ರ ಉಪನ್ಯಾಸಕಿ ರಾಜೇಶ್ವರಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಪತ್ರಿಕೋದ್ಯಮ ಉಪನ್ಯಾಸಕಿ ಸುಮಲತಾ ಮತ್ತು ಜ್ಯೋತಿ ಅಲ್ಸೆ ಪರಿಚಯಿಸಿದರು.
29 ಮತ್ತು 30 ಕ್ಕೆ ಸಿದ್ಧತಾ ಕಾರ್ಯ ಮುಗಿಸಿ, 31ಕ್ಕೆ ತಳಿರು ತೋರಣಗಳೊಂದಿಗೆ ಶಾಲಾ ಪ್ರಾರಂಭೋತ್ಸವವನ್ನು ಮಾಡಬೇಕು: ಬಿಆರ್ಸಿ ಕೆ.ಸಿ.ವಸಂತಾ
ಶ್ರೀನಿವಾಸಪುರ : 29 ಮತ್ತು 30 ಕ್ಕೆ ಸಿದ್ಧತಾ ಕಾರ್ಯ ಮುಗಿಸಿ, 31ಕ್ಕೆ ತಳಿರು ತೋರಣಗಳೊಂದಿಗೆ ಶಾಲಾ ಪ್ರಾರಂಭೋತ್ಸವವನ್ನು ಮಾಡಬೇಕು . ನಲಿಕಲಿಗೆ ವಿದ್ಯಾ ಪ್ರವೇಶ, ಮತ್ತು ಸೇತುಬಂಧ 4 ರಿಂದ 10 ರ ವರೆಗೆ ಸೇತು ಬಂದ ಕಾರ್ಯಕ್ರಮವನ್ನು ಸುತ್ತೋಲೆಯಂತೆ ಕ್ರಮ ಕೈಗೊಂಡು ಎಸ್ಎಪಿ ತಯಾರಿಕೆಗೆ ಸಿದ್ಧತೆ ಮಾಡಿಕೊಳ್ಳುವುದು ಎಂದು ಬಿಆರ್ಸಿ ಕೆ.ಸಿ.ವಸಂತಾ ತಿಳಿಸಿದರು.
ಪಟ್ಟಣದ ಬಿಆರ್ಸಿ ಕಚೇರಿಯಲ್ಲಿ ಸೋಮವಾರ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಬಿಆರ್ಪಿ ಮತ್ತು ಕ್ಲಸ್ಟರ್ಗಳ ಸಿಆರ್ಪಿಗಳ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದರು.
ಶಿಕ್ಷಣ ಇಲಾಖೆಯು 2024-25 ನೇ ಸಾಲನ್ನು ಶೈಕ್ಷಣಿಕ ಬಲವರ್ಧನೆ ವರ್ಷವನ್ನಾಗಿ ಘೋಷಿಸಿದೆ. ಶೈಕ್ಷಣಿಕ ಮಾರ್ಗದರ್ಶಿ 24- 25 ನ್ನು ಪ್ರತಿ ಶಾಲೆಯಲ್ಲಿ ಇಡುವುದು.ಹಾಗೆ ಓದಿ ಅದರಂತೆ ಅನುಪಾಲನೆ ಮಾಡುವುದು. ಶಾಲಾ ಪ್ರಾರಂಭಕ್ಕೂ ಮುನ್ನಾ ದಿನ ಸ್ವಚ್ಛತಾ ಕಾರ್ಯದ ಅಂಗವಾಗಿ ಶಾಲಾವರಣ,ಕೊಠಡಿ, ಮೇಲ್ಚಾವಣಿ, ಸಂಪು,ಟ್ಯಾಂಕು, ಅಡುಗೆಮನೆ, ಶೌಚಾಲಯ, ಕುಡಿಯುವ ನೀರು, ಹೀಗೆ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು.
3 ರೀತಿಯ ವೇಳಾಪಟ್ಟಿ, ವಾರ್ಷಿಕ ಕ್ರಿಯಾ ಯೋಜನೆ, ಎಸ್ಡಿಪಿ ಪಂಚಾಂಗ, ಶಿಕ್ಷಕರ ವೈಯಕ್ತಿಕ ದಾಖಲೆಗಳು ಹೀಗೆ ಆಡಳಿತಾತ್ಮಕ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವುದು. ಪಠ್ಯ ಪುಸ್ತಕ,ಸಮವಸ್ತ್ರಗಳನ್ನು ಮಕ್ಕಳಿಗೆ ವಿತರಿಸಿ, ಸ್ಯಾಟ್ಸ್ ನಲ್ಲಿ ಅಪೆÇ್ಲೀಡ್ ಮಾಡುವುದು . ದಾಖಲಾತಿ ಹೆಚ್ಚಳಕ್ಕೆ, ವಿವಿಧ ಆಕರ್ಷಣ ರೀತಿಯಲ್ಲಿದಾಖಲಾತಿ ಆಂದೋಲನವನ್ನು ಕೈಗೊಳ್ಳುವುದು. ಮಕ್ಕಳ ಸುರಕ್ಷತೆಗೆ ಸಂಪು,ವಿದ್ಯುತ್ ತಂತಿ, ಮೊದಲ ಅಂತಸ್ತಿನ ಕೊಠಡಿಗಳಿದ್ದಲ್ಲಿ ಮೆಸ್ ವ್ಯವಸ್ಥೆ ಮಾಡಿ, ಎಚ್ಚರಿಕೆ ವಹಿಸುವುದು.
ಎಸ್ಡಿಎಂಸಿ, ಪೆÇೀಷಕರು ಗ್ರಾಮಸ್ಥರೊಂದಿಗೆ ಸಮೀಕ್ಷೆ ನಡೆಸಿ ಶಾಲಾ ದಾಖಲಾತಿಯನ್ನು ಹೆಚ್ಚಿಸುವುದು.
ಹಿಂದಿನ ಸಾಲಿನ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಮೂಲಭೂತ ಸೌಲಭ್ಯಗಳನ್ನು ಉತ್ತಮಪಡಿಸಿರುವುದು. ಹಳೆ ವಿದ್ಯಾರ್ಥಿಗಳ ಸಂಘ ಕಡ್ಡಾಯವಾಗಿ ರಚನೆ ಮಾಡಿರುವ ಮಾಹಿತಿಯನ್ನು ಕಚೇರಿಗೆ ನೀಡುವುದು ಎಂದು ಮಾಹಿತಿ ನೀಡಿದರು.
ಈ ಪೂರ್ವ ಬಾವಿ ಸಭೆಗೆ ಬಿಆರ್ಪಿ, ಸಿಆರ್ಪಿಗಳಿಗೆ ಹೂಗುಚ್ಚುಗಳನ್ನು ನೀಡುವುದರ ಮೂಲಕ ಸ್ವಾಗತವನ್ನು ಕೋರಲಾಯಿತು. ತಾಲೂಕು ಪಠ್ಯ ವಿತರಣಾ ನೋಡಲ್ ಅಧಿಕಾರಿ ಎಲ್.ವಿ.ಲಕ್ಷ್ಮಿನಾರಾಯಣ, ಉರ್ದು ಬಾಷಾ ಇಸಿಒ ಸಾಧಿಕ್ಬಾಷ, ಬಿಆರ್ಪಿಗಳಾದ ಕೆ.ಎಸ್.ನಾಗರಾಜ್, ವೆಂಕಟಾಚಲಪತಿ, ಬಿಐಆರ್ಟಿಇ ಅಧಿಕಾರಿ ಜಿ.ವಿ.ಚಂದ್ರಪ್ಪ ಹಾಗು ತಾಲೂಕಿನ ಕ್ಷೇತ್ರ ಸಂನ್ಮೂಲ ವ್ಯಕ್ತಿಗಳು ಹಾಜರಿದ್ದರು.
ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜನರೇಟ್ರ್ ಉದ್ಘಾಟನೆ : ಅಧ್ಯಾಪಕರು ಮತ್ತು ಜಂಟಿ ಕಾರ್ಯದರ್ಶಿ ನಡುವೆ ವಿಚಾರ ವಿನಿಮಯ
ಕುಂದಾಪುರ, ಮೇ.30: ಕುಂದಾಪುರ ಪ್ರಸಿದ್ದ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೂತನವಾಗಿ ಅಳವಡಿಸಿದ ಆಧುನಿಕ ತಂತ್ರಜ್ಞಾನದ ಜನರೇಟರನ್ನು ಶಾಲೆಯ ಜಂಟಿ ಕಾರ್ಯದರ್ಶಿ, ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಶಾಲಾ ಮುಖ್ಯ ಶಿಕ್ಷಕಿ ಭಗಿನಿ ತೆರೆಜಾ ಶಾಂತಿ ಉದ್ಘಾಟಿಸಿದರು. ವಂ|ಸ್ಟ್ಯಾನಿ ತಾವ್ರೊ ಆಶಿರ್ವವಚನ ಮಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ, ಶಾಲಾ ಸಂಯೋಜಕರಾದ ಮಾರ್ಗರೇಟ್ ಪಿಕಾರ್ಡೊ, ಶಾಲೆಯ ಸಲಹ ಸಮಿತಿಯ ಸದಸ್ಯರಾದ ವಿನೋದ್ ಕ್ರಾಸ್ಟೊ, ಡಾ.ಸೋನಿ ಡಿಕೋಸ್ತಾ, ಸಂತ ಮೇರಿಸ್ ಸಮೂಹ ಶಿಕ್ಷಣ ಶಿಕ್ಷಣ ಸಂಸ್ಥೆಯ ಎಲ್ಲಾ ಮುಖ್ಯೋಪಾಧ್ಯಾಯರು, ರೋಜರಿ ಶಾಲೆಯ ಶಿಕ್ಷಕ -ಶಿಕ್ಷಕೇತರ ಸಿಬಂದಿ ಉಪಸ್ಥಿತರಿದ್ದರು.
ನಂತರ ನೆಡದ ಅಧ್ಯಾಪಕರು ಮತ್ತು ಜಂಟಿ ಕಾರ್ಯದರ್ಶಿ ನಡುವೆ ವಿಚಾರ ವಿನಿಮಯ ನಡೆಯಿತು, ಶಾಲಾ ಅಭಿವ್ರದ್ದಿ, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಬಗ್ಗೆ ವಿಚಾರ ವಿನಿಮಯ ನಡೆಸಲಾಯಿತು, ಇದನ್ನು ಜಂಟಿ ಕಾರ್ಯದರ್ಶಿ ವಂ|ಸ್ಟ್ಯಾನಿ ತಾವ್ರೊ ನಡೆಸಿಕೊಟ್ಟರು. ಮುಖ್ಯ ಶಿಕ್ಷಕಿ ಭಗಿನಿ ತೆರೆಜಾ ಶಾಂತಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನೂತನವಾಗಿ ಶಾಲೆಗೆ ಸಂಯೋಜಕರಾಗಿ ನಿಯುಕ್ತರಾದ ಮಾರ್ಗರೇಟ್ ಪಿಕಾರ್ಡೊ ಹಾಗೇ ನೂತನವಾಗಿ ಆಯ್ಕೆಯಾದ ಶಿಕ್ಷಕಿಯರಾದ ಭಗಿನಿ ಜುಲಿಯೆಟ್ (ಆ.ಕಾ.) ರೇನಿಷಾ ಡಿಆಲ್ಮೇಡಾ ಮತ್ತು ಸಿಲ್ವಿಯಾ ಫೆರ್ನಾಂಡಿಸ್ ಇವರನ್ನು ಪರಿಚಯಿಸಲಾಯಿತು. ಶಿಕ್ಷಕಿ ಸೆಲಿನ್ ಡಿಸೋಜಾ ಸ್ವಾಗತಿಸಿದರು, ಶಿಕ್ಷಕಿ ನೀತಾ ಡಿಸೋಜಾ ವಂದಿಸಿದರು, ಶಿಕ್ಷಕಿ ನಿಖಿತಾ ಶೆಟ್ಟಿ ನಿರೂಪಿಸಿದರು.