ಕುಂದಾಪುರ, ಮೇ.26: ಕುಂದಾಪುರ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಇವರಿಗೆ ವರ್ಗಾವಣೆ ಇರುವುದರಿಂದ ಅವರಿಗೆ ವಿದಾಯ ಕೋರುವ ಕಾರ್ಯಕ್ರಮವನ್ನು ಮೇ 24 ರಂದು ಚರ್ಚಿನ ಸಭಾಂಗಣದಲ್ಲಿ ಎರ್ಪಡಿಸಲಾಗಿತ್ತು.
ರೊಜಾರಿಯುಮ್ ಪತ್ರದ ಸಂಪಾದಕ ಬರ್ನಾಡ್ ಜೆ.ಡಿಕೋಸ್ತಾ ಪ್ರಸ್ತಾವಿಕ ಮಾತುಗಳನ್ನಾಡಿ ರೊಜಾರಿಯುಮ್ ಬುಲೆಟಿನ್ ಪ್ರಕಟಿಸಲು ಪ್ರೇರಣೆ ಮತ್ತು ಸಹಕಾರ ಇವಬ್ಬರಿದು ವೀಶೆಷವಾಗಿತ್ತು., ಹಾಗಾಗಿ ಇವರಿಬ್ಬರಿಗೂ ನಾವು ಕ್ರತ್ನಜತೆ ಸಲ್ಲಿಸುತ್ತೇವೆ, ನಿಮ್ಮ ಸೇವೆಯ ಸಮಯದಲ್ಲಿ ರೋಜಾರಿಯುಮ್ ಪತ್ರ ಉತ್ತಮ ಕೆಲಸ ಮಾಡಿದೆಯೆಂದು ತಿಳಿಸಿ, ಎಲ್ಲರಿಗೂ ಸ್ವಾಗತ ನೀಡಿದರು.
ಪತ್ರದ ಸಂಪಾದಕ ಮಂಡಳಿಯ ಸದಸ್ಯರಾದ ವಿಕ್ಟರ್ ಡಿಸೋಜಾ ಧರ್ಮಗುರು ಫಾ|ಸ್ಟ್ಯಾನಿ ತಾವ್ರೊ ಹಾಗೂ ಸಹಾಯಕ ಧರ್ಮಗುರು ಫಾ |ಅಶ್ವಿನ್ ಆರಾನ್ನ ಇವರಿಗೆ ಶುಭ ಕೋರಿದರು. ಜೊತೆಗೆ ಸಂಪಾದಕ ಮಂಡಳಿಯ ಸದಸ್ಯರಾದ ಭಗಿನಿ ಪ್ರೇಮಿಕಾ ಮತ್ತು ಸಂತ ಮೇರಿಸ್ ಪಿಯು ಕಾಲೇಜಿನ ಪ್ರಾಂಶುಪಾಲೆ ಸಂಪಾದಕ ಮಂಡಳಿಯ ಸದಸ್ಯೆ ರೇಶ್ಮಾ ಫೆರ್ನಾಂಡಿಸ್ ಹಿತನುಡಿಗಳನ್ನಾಡಿದರು.
ಫಾ|ಸ್ಟ್ಯಾನಿ ತಾವ್ರೊ ಹಾಗೂ ಸಹಾಯಕ ಧರ್ಮಗುರು ಫಾ |ಅಶ್ವಿನ್ ಆರಾನ್ನ ಇವರಿಗೆ ಕಾಣಿಕೆ ನೀಡಿ ಗೌರವಿಸಲಾಯಿತು. ಫಾ| ಸ್ಟ್ಯಾನಿ ತಾವ್ರೊ ಹಾಗೂ ಫಾ |ಅಶ್ವಿನ್ ಆರಾನ್ನ ರೋಜರಿ ಚರ್ಚಿನ ಪತ್ರಿಕೆ ರೋಜಾರಿಯುಮ್ ಉತ್ತಮವಾಗಿ ಕೆಲಸ ಮಾಡುತ್ತದೆ, ಸಂಪಾದಕರ ಮೇಲುಸ್ತುವಾರಿಯಲ್ಲಿ ಎಲ್ಲಾ ಸದಸ್ಯರು ಉತ್ತಮ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಚರ್ಚ್ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಸರ್ವ ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಸಂಪಾದಕ ಮಂಡಳಿಯ ಸದಸ್ಯರಾದ ಡೊಮಿನಿಕ್ ಬ್ರಗಾಂಜಾ, ಶಾಂತಿ ಬರೆಟ್ಟೊ ಉಪಸ್ಥಿತರಿದ್ದರು.
ಸಹಸಂಪಾದಕ ಹಾಗೇ ಖಜಾಂಚಿ ಓಸ್ವಲ್ಡ್ ಕರ್ವಾಲ್ಲೊ ಖರ್ಚು ವೆಚ್ಚದ ಲೆಕ್ಕವನ್ನು ಸಭೆಯ ಮುಂದಿಟ್ಟರು. ರೊಜಾರಿಯುಮ್ ಪತ್ರ ಸಮಿತಿಯ ಕಾರ್ಯದರ್ಶಿ ರೇಶ್ಮಾ ಫೆರ್ನಾಂಡಿಸ್ ವಂದಿಸಿದರು.
Day: May 26, 2024
ಸಂತ ಮೇರಿಸ್ ವಿದ್ಯಾ ಸಂಸ್ಥೆಗಳಿಗೆ ಉತ್ತಮ ಫಲಿತಾಂಶಕ್ಕೆ ಸಂಭ್ರಾಮಾಚರಣೆ – ಫಾ|ಸ್ಟ್ಯಾನಿ ತಾವ್ರೊ ಮತ್ತು ಫಾ|ಅಶ್ವಿನ್ ಆರಾನ್ನ ಇವರಿಗೆ ಬೀಳ್ಕೊಡುಗೆ
ಕುಂದಾಪುರ, ಮೇ. 26: ಸಂತ ಮೇರಿಸ್ ಸಮೂಹ ಶಿಕ್ಷಣ ಸಂಸ್ಥೆಗಳಿಗೆ ಈ ಸಾಲಿನಲ್ಲಿ ಉತ್ತಮ ಫಲಿತಾಂಶ ದೊರಕಿದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯಿಂದ ಮೇ 25 ರಂದು ಸಂಭ್ರಾಮಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಸಂತ ಮೆರಿಸ್ ಕನ್ನಡ ಮಾಧ್ಯಮ ಪ್ರೌಢಶಾಲೆಗೆ 100 ಶೇಕಡ ಫಲಿತಾಂಶ, ಹೋಲಿ ರೋಜರಿ ಆಂಗ್ಲಾ ಮಾಧ್ಯಮ ಪ್ರೌಢಶಾಲೆಗೆ ನಿರಂತರ 7 ನೇ ಭಾರಿ 100 ಶೇಕಡ ಫಲಿತಾಂಶ, ಸಂತ ಮೇರಿಸ್ ಪಿಯು ಕಾಲೇಜಿಗೆ 96.6 ಶೇಕಡ ಫಲಿತಾಂಶ ಬಂದಿದ್ದು, ಸಂತ ಮೇರಿಸ್ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯಲ್ಲಿಯೂ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಕನ್ನಡ ಮಾಧ್ಯಮ ಶಾಲೆಯಾದರೂ ಬೇಕಾದಷ್ಟು ಮಕ್ಕಳು ಇವರಿಗೆ ಲಭಿಸಿದಕ್ಕೆ ಶಿಕ್ಷಕ, ಶಿಕ್ಷಕೇತರ ಸಿಬಂದಿ ಮತ್ತು ಶಾಲಾ ಆಡಳಿತ ಮಂಡಳಿಯ ಸಲಹಸಮಿತಿ ಸದಸ್ಯರೊಂದಿಗೆ ಸಂತ ಮೇರಿಸ್ ಪಿಯು ಕಾಲೇಜಿನ ಸಬಾಂಗಣದಲ್ಲಿ ಸಂಭ್ರಾಮಾಚರಣೆ ನೆಡಸಲಾಯಿತು.
“ಈ ಸಂದರ್ಭದಲ್ಲಿ ನಮ್ಮ ಶಾಲೆಗಳಿಗೆ ಉತ್ತಮ ಫಲಿತಾಂಶ ದೊರಕಿದೆ, ಇದರಲ್ಲಿ, ಶಾಲಾ ಮುಖ್ಯಸ್ಥರ, ಶಿಕ್ಷಕರ ಪಾತ್ರ ಮಹತ್ವದು, ಈ ಯಶಸಿನಲ್ಲಿ ಶಿಕ್ಷಕೇತರ ಸಿಬಂದಿಯ ಪಾತ್ರವೂ ಇದೆ, ಅಡುಗೆಯವರ, ಚಾಲಕರ ಪಾತ್ರವೂ ಇದೆ. ಎಲ್ಲಾ ಸಂದರ್ಭದಲ್ಲಿ ನಾವು ಶಿಕ್ಷಕರು ತಮ್ಮನ್ನು ತಾವೇ ಉತ್ತಮ ಶಿಕ್ಷಕರು ಎಂದು ಮನದಟ್ಟು ಮಾಡಿಕೊಳ್ಳಬೇಕು, ಇನ್ನು ಮುಂದೆ ಕೂಡ ನೀವು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ ನಿಮ್ಮ ಕರ್ತಯ್ಯ ಪಾಲಿಸಬೇಕು, ಕೇವಲ ಅಂಕ ಗಳಿಸುವುದು ಮಾತ್ರವಲ್ಲ, ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಮಾಡಬೇಕು ಎನ್ನುತ್ತಾ, ನಮ್ಮ ಶಿಕ್ಷಣ ಸಂಸ್ಥೆಗಳಿಗೆ ಉತ್ತಮ ಫಲಿತಾಂಶ ದೊರಕಿದ್ದರಿಂದ ಇಂದು ನಾವು ಸಂಭ್ರಮಿಸೋಣ’ ಎಂದು ಹುರಿದುಂಬಿಸಿದರು.
ಈ ಸಂದರ್ಭದಲ್ಲಿ ಸಂತ ಮೇರಿಸ್ ಸಮೂಹ ಶಿಕ್ಷಣ ಸಂಸ್ಥೆಗಳ ಶಿಕ್ಷಕ, ಶಿಕ್ಷಕೇತರ ಸಿಬಂದಿ ಮತ್ತು ಶಾಲಾ ಆಡಳಿತ ಮಂಡಳಿಯ ಸಲಹಸಮಿತಿ ಸದಸ್ಯರ ಪರವಾಗಿ ಸ್ವಲ್ಪ ದಿವಸಗಳ ನಂತರ ಕೋಟ ಚರ್ಚಿಗೆ ವರ್ಗಾವಣೆಗೊಂಡು ನಿರ್ಗಮಿಸಲಿರುವ ಸದ್ಯ ರೋಜರಿ ಮಾತಾ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಧರ್ಮಗುರು ಸ್ಟ್ಯಾನಿ ತಾವ್ರೊ ಮತ್ತು ಉಡುಪಿ ಧರ್ಮಪ್ರಾಂತ್ಯದ ಅನುಗ್ರಹ ಕೇಂದ್ರಕ್ಕೆ ‘ಯಾಜಕ ಗುರು ದೀಕ್ಷೆ ಅಹ್ವಾನ’ ಕೇಂದ್ರದ ನಿರ್ದೇಶಕರಾಗಿ ಮತ್ತು ಬಾಲಯೇಸುವಿನ ಪಂಗಡದ ನಿರ್ದೇಶಕರಾಗಿ ತೆರಳುವ ಸದ್ಯ ರೋಜರಿ ಚರ್ಚಿನ ಸಹಾಯಕ ಧರ್ಮಗುರುಗಳಾಗಿರುವ ವಂ|ಅಶ್ವಿನ್ ಆರಾನ್ನ ಇವರನ್ನು ಬಿಳ್ಕೊಡುಗೆಯಾಗಿ ಫಲ ಪುಷ್ಪ ಶಾಲು ಹೊದೆಸಿ ಸನ್ಮಾನಿಸಲಾಯಿತು.
ಪೂಜ್ಯ ಫಾ| ಸ್ಟ್ಯಾನಿ ತಾವ್ರೊ ಇವರು ನನಗೆ ಬೀಳ್ಕೊಡೆಗೆಕ್ಕಿಂತ ಶಾಲೆಯ ಅಭಿವ್ರದ್ದಿಯೆ ಮುಖ್ಯ ಕಾರ್ಯಕ್ರಮ, ನಿಮ್ಮ ಪ್ರೀತಿಗಾಗಿ ನಾನು ತಲೆಬಾಗಿಸುತೇನೆ ಎಂದು ಹೇಳಿದರು. ಪೂಜ್ಯ ಅಶ್ವಿನ್ ಆರಾನ್ನ ಮಾತನಾಡಿ ನಾನು ಕಿಂಚಿತ್ತು ಈ ಶಾಲೆಗಳಲ್ಲಿ ತೊಡಗಿಸಿಕೊಂಡಿದ್ದರೆ, ನಮ್ಮ ಪೂಜ್ಯ ಫಾ| ಸ್ಟ್ಯಾನಿ ಇವರ ಪ್ರೇರಣೆ ಎಂದು ತಿಳಿಸಿ, ಸನ್ಮಾನಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.
ಶಿಕ್ಷಕ ಚಂದಶೇಖರ ಬೀಜಾಡಿ ಮತ್ತು ಉಪನ್ಯಾಸಕ ನಾಗರಾಜ ಶೆಟ್ಟಿ ಸನ್ಮಾನಿತರ ಪರಿಚಯವನ್ನು ನೀಡಿದರು. ವೇದಿಕೆಯಲ್ಲಿ ರೋಜರಿ ಮಾತಾ ಚರ್ಚಿನ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಸರ್ವ ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ತೆರೆಜಾ ಶಾಂತಿ, ಸಂತಮೇರಿಸ್ ಪ್ರಾಥಮಿಕ ಶಾಲೆಯ ಮುಖ್ಯಾಪಾಧ್ಯಾಯಿನಿ ಡೋರಾ ಲುವಿಸ್, ಸಂತ ಮೇರಿಸ್ ಪಿ ಯು ಕಾಲೇಜಿನ ಪ್ರಾಂಶುಪಾಲೆ ರೇಶ್ಮಾ ಫೆರ್ನಾಂಡಿಸ್, ರೋಜರಿ ಕಿಂಡರ್ ಗಾರ್ಟನ್ ಶಾಲೆಯ ಮುಖ್ಯಾಪಾಧ್ಯಾಯಿನಿ ಶೈಲಾ ಡಿಆಲ್ಮೇಡಾ ಉಪಸ್ಥಿತರಿದ್ದರು.
ಶಿಕ್ಷಕ ಪ್ರಶಾಂತ್ ರೇಬೆರೊ ಸ್ವಾಗತಿಸಿದರು, ಶಿಕ್ಷಕ ಭಾಸ್ಕರ ಗಾಣಿಗ ಧನ್ಯವಾದಗಳನ್ನು ಅರ್ಪಿಸಿದರು. ಶಿಕ್ಷಕ ಚಂದಶೇಖರ ಬೀಜಾಡಿ ನಿರೂಪಿಸಿದರು. ಸಹ ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಸಂತ ಮೇರಿಸ್ : ಶಿಕ್ಷಕ ಭಾಸ್ಕರ ಗಾಣಿಗಾ ಶಿಕ್ಷಕಿ ಡೋರಾ ಸುವಾರಿಸ್ ಇವರಿಗೆ ನಿವೃತ್ತಿಯ ಬಿಳ್ಕೊಡುಗೆ
ಕುಂದಾಪುರ, ಮೇ.26: ಸಂತ ಮೇರಿಸ್ ಕನ್ನಡ ಮಧ್ಯಮ ಪ್ರಾರ್ಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಡೋರಾ ಸುವಾರಿಸ್ ಮತ್ತು ಸಂತ ಮೇರಿಸ್ ಕನ್ನಡ ಮಧ್ಯಮ ಪ್ರೌಢ ಶಾಲೆಯ ಶಿಕ್ಷಕ ಭಾಸ್ಕರ ಗಾಣಿಗ ನಿವೃತ್ತಿಯ ಅಂಚಿನಲ್ಲಿರುವ ಇವರಿಗೆ ಶಾಲಾ ಆಡಳಿತ ಮಂಡಳಿಯ ಪರವಾಗಿ ಸಂತ ಮೇರಿಸ್ ಪಿಯು ಕಾಲೇಜಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಳ್ಕೊಡುಗೆಯ ಅಂಗವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಶಾಲಾ ಜಂಟಿ ಕಾರ್ಯದರ್ಶಿ, ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ ಅತಿಥಿಗಳ ಜೊತೆ ಇಬ್ಬರನ್ನು ಫಲ ಪುಷ್ಪ ನೀಡಿ, ಶಾಲು ಹೊದೆಸಿ ಸನ್ಮಾನಿಸಿ ಗೌರವಿಸಿದರು. ಇವರು ನೀಡಿದ ಸೇವೆಯನ್ನು ಅವರು ಶ್ಲಾಘಿಸಿದರು. ಶಿಕ್ಷಕ ಭಾಸ್ಕರ ಗಾಣಿಗರವರು ವಿವಿಧೆಡೆ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಕುಂದಾಪುರ ಸಂತ ಮೇರಿಸ್ ಕನ್ನಡ ಮಧ್ಯಮ ಪ್ರೌಢ ಶಾಲೆಯಲ್ಲಿ ಬಹಳ ವರ್ಷ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುವ ಜೊತೆ ಶಾಲೆಯಲ್ಲಿ ಎನ್.ಸಿ.ಸಿ. ತರಬೇತಿದಾರಾಗಿಯೂ, ಸೇವೆ ಸಲ್ಲಿಸುತಿದ್ದರು. ಅವರು ಒಟ್ಟು 38 ವರ್ಷ ಸೇವೆ ಸಲ್ಲಿಸಿದ್ದಾರೆ.
ಶಿಕ್ಷಕಿ ಡೋರಾ ಸುವಾರಿಸ್ ಇವರು ಅನೇಕ ಕಡೆ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಬಹಳ ವರ್ಷಗಳಿಂದ ಕುಂದಾಪುರ ಸಂತ ಮೇರಿಸ್ ಕನ್ನಡ ಮಾಧ್ಯಮ ಪ್ರಾರ್ಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸುತಿದ್ದಾರೆ, ಇವರು ವಿದ್ಯಾರ್ಥಿಗಳ ಆಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದು, ಇವರು ಅತ್ಯತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಗಳಿಸಿಕೊಂಡಿದ್ದಾರೆ ಇವರೂ ಕೂಡ 38 ವರ್ಷಗಳ ಸುಧೀರ್ಘ ಸೇವೆ ನೀಡಿದವರಾಗಿದ್ದಾರೆ.
ಸಂತ ಮೇರಿಸ್ ಕನ್ನಡ ಮಧ್ಯಮ ಪ್ರೌಢ ಶಾಲೆಯ ನಿವøತ್ತ ಮುಖ್ಯೋಪಾಧ್ಯಾಯರಾದ ಎಲ್.ಜೆ.ಫೆರ್ನಾಂಡಿಸ್ ಶುಭ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ಕುಂದಾಪುರ ರೋಜರಿ ಮಾತಾ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ, ರೋಜರಿ ಮಾತಾ ಚರ್ಚಿನ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಸರ್ವ ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಶಾಲೆಯ ಮುಖ್ಯಾಪಾಧ್ಯಾಯಿನಿ ಅಸುಂಪ್ತಾ ಲೋಬೊ, ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ತೆರೆಜಾ ಶಾಂತಿ, , ಸಂತ ಮೇರಿಸ್ ಪಿ ಯು ಕಾಲೇಜಿನ ಪ್ರಾಂಶುಪಾಲೆ ರೇಶ್ಮಾ ಫೆರ್ನಾಂಡಿಸ್, ರೋಜರಿ ಕಿಂಡರ್ ಗಾರ್ಟನ್ ಶಾಲೆಯ ಮುಖ್ಯಾಪಾಧ್ಯಾಯಿನಿ ಶೈಲಾ ಡಿಆಲ್ಮೇಡಾ, ಮತ್ತು ಸಂತ ಮೇರಿಸ್ ಸಮೂಹ ಶಿಕ್ಷಣ ಸಂಸ್ಥೆಯ 5 ಶಿಕ್ಷಣ ಸಂಸ್ಥೆಗಳ ಎಲ್ಲಾ ಶಿಕ್ಷಕರು, ಶಿಕ್ಷೇತರ ಸಿಂಬಂದಿ ಮತ್ತು ಎಲ್ಲಾ ಶಿಕ್ಷಣ ಸಂಸ್ಥೆಯ ಸಲಹ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.