ಕುಂದಾಪುರ, ಮೇ.25: ಒಂದು ಕಾಲದಲ್ಲಿ ಬಹಳ ಹೆಸರುವಾಸಿಯಾದ ಸಂತ ಮೇರಿಸ್ ಕನ್ನಡ ಮಾಧ್ಯಮ ಅನುದಾನಿತ ಶಾಲೆಗೆ, ಕನ್ನಡ ಮಾಧ್ಯಮದಲ್ಲಿ ಕಲಿಯುವ ವಿದ್ಯಾರ್ಥಿಗಳ ಉಪಯೋಗಕ್ಕೆ, ಅವರಿಗೂ ಇತರ ಉನ್ನತ ಶಾಲೆಗಳಲ್ಲಿ ದೊರೆಯುವ ಸೌಕರ್ಯ ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳಿಗೆ ದೊರೆಯಬೇಕನ್ನುವ ಉದ್ದೇಶದಿಂದ ನೂತನ ಸುಸಜ್ಜಿತ ವಿಜ್ಞಾನ ಪ್ರಯೋಗ ಕೊಠಡಿಯನ್ನು ಕುಂದಾಪುರ ರೋಜರಿ ಮಾತಾ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|, ಶಾಲಾ ಜಂಟಿ ಕಾರ್ಯದರ್ಶಿಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಉದ್ಘಾಟಿಸಿದರು.
ಅವರು “ಕನ್ನಡ ಮಾಧ್ಯಮ ಶಾಲೆಯ ಮಕ್ಕಳೂ ಇದರ ಉಪಯೋಗ ಸಿಗಬೇಕು ಎಂಬ ದ್ರಷ್ಟಿಯಿಂದ ವಿಜ್ಞಾನ ಪ್ರಯೋಗ ಕೊಠಡಿಯನ್ನು ನಿರ್ಮಿಸಿದ್ದೇವೆ, ಇದರ ಉಪಯೋಗವನ್ನು ಈ ಶಾಲೆಯ ಮಕ್ಕಳು ಪಡೆಯಬೇಕು, ಈ ಶಾಲೆ ಕಲಿಸುವುದರಲ್ಲಿ ಮುಂದೆ ಇದ್ದು ಈ ಸಾಲಿನ ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇಕಡ ನೂರು ಫಲಿತಾಂಶ ದೊರಕಿದೆ, ಇಲ್ಲಿ ಬುದ್ದಿವಂತ ಮಕ್ಕಳನ್ನು ಮಾತ್ರ ಭರ್ತಿ ಮಾಡಿಕೊಂಡು ಉತ್ತಮ ಫಲಿತಾಂಶಕ್ಕೆ ಆಸೀಸುವುದಿಲ್ಲಾ, ಸಾಮಾನ್ಯ ಮಕ್ಕಳನ್ನು ಭರ್ತಿ ಮಾಡಿಕೊಂಡು ಅವರಿಗೆ ಉತ್ತಮ ಶಿಕ್ಷಣ ನೀಡಿ ಬುದ್ದಿವಂತರನ್ನಾಗಿಸುವ ಕೆಲಸ ನೆಡೆಯುತ್ತದೆ, ಅದಕ್ಕಾಗಿ ಈ ಸುಸಜ್ಜಿತ ವಿಜ್ಞಾನ ಪ್ರಯೋಗ ಕೊಠಡಿಯನ್ನು ನಿರ್ಮಿಸಲಾಗಿದೆ, ಇದಕ್ಕೆ ಸಹಕಾರ ನೀಡಿದವರು ದಾನಿಗಳಾದ ಸಮೀರ್ ಪಿಂಟೊ ಇವರ ಉದಾರ ಮನಸ್ಸಿನಿಂದ ನಮ್ಮ ಯೋಜನೆ ಕಾರ್ಯಗತವಾಗಿದೆ, ಎಂದು ಅವರಿಗೆ ಧನ್ಯವಾದಗಳನ್ನು ಹೇಳುತ್ತಾ, ಅವರು ಪ್ರಯೋಗ ಕೊಠಡಿಗಾಗಿ ಸುಮಾರು 4.5 ಲಕ್ಷ ದಾನ ನೀಡಿದ್ದಾರೆ’ ಎಂದು ಫಾ|ಸ್ಟ್ಯಾನಿ ತಿಳಿಸಿದರು.
ಈ ಸಂದರ್ಭದಲ್ಲಿ ಕುಂದಾಪುರ ರೋಜರಿ ಮಾತಾ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ, ಶಾಲೆಯ ಮುಖ್ಯಾಪಾಧ್ಯಾಯಿನಿ ಅಸುಂಪ್ತಾ ಲೋಬೊ, ವಿಜ್ಞಾನ ಶಿಕ್ಷಕಿ ಸ್ಮಿತಾ, ರೋಜರಿ ಮಾತಾ ಚರ್ಚಿನ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಸರ್ವ ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ತೆರೆಜಾ ಶಾಂತಿ, ಸಂತಮೇರಿಸ್ ಪ್ರಾಥಮಿಕ ಶಾಲೆಯ ಮುಖ್ಯಾಪಾಧ್ಯಾಯಿನಿ ಡೋರಾ ಲುವಿಸ್, ಸಂತ ಮೇರಿಸ್ ಪಿ ಯು ಕಾಲೇಜಿನ ಪ್ರಾಂಶುಪಾಲೆ ರೇಶ್ಮಾ ಫೆರ್ನಾಂಡಿಸ್, ರೋಜರಿ ಕಿಂಡರ್ ಗಾರ್ಟನ್ ಶಾಲೆಯ ಮುಖ್ಯಾಪಾಧ್ಯಾಯಿನಿ ಶೈಲಾ ಡಿಆಲ್ಮೇಡಾ,ಮತ್ತು ಸಂತ ಮೇರಿಸ್ ಸಮೂಹ ಶಿಕ್ಷಣ ಸಂಸ್ಥೆಯ 5 ಶಿಕ್ಷಣ ಸಂಸ್ಥೆಗಳ ಎಲ್ಲಾ ಶಿಕ್ಷಕರು ಮತ್ತು ಎಲ್ಲಾ ಶಿಕ್ಷಣ ಸಂಸ್ಥೆಯ ಸಲಹ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕ ಭಾಸ್ಕರ ಗಾಣಿಗ ಧನ್ಯವಾದ ಸಮರ್ಪಿಸಿದರು.
Day: May 25, 2024
ಜೆಸಿಐ ಕುಂದಾಪುರ ಸಿಟಿ ಇದರ ಆಶ್ರಯದಲ್ಲಿ ಕುಂದಾಪುರ ದ ಅರ್ ಎನ್ ಶೆಟ್ಟಿ ಪಿ ಯು ಕಾಲೇಜ್ ನಲ್ಲಿ ರಾಷ್ಟ್ರೀಯ ತರಬೇತಿ ಕಾರ್ಯಕ್ರಮ
ಕುಂದಾಪುರ: ಜೆಸಿಐ ಕುಂದಾಪುರ ಸಿಟಿ ಯಾ ಆಶ್ರಯದಲ್ಲಿ ಕುಂದಾಪುರ ದ ಅರ್ ಎನ್ ಶೆಟ್ಟಿ ಪಿ ಯು ಕಾಲೇಜ್ ನಲ್ಲಿ ರಾಷ್ಟ್ರೀಯ ತರಬೇತಿ ಕಾರ್ಯಕ್ರಮ ವನ್ನು ವಲಯ 15 ರ ರಾಷ್ಟ್ರೀಯ ತರಬೇತುದಾರರಾದ ಅಕ್ಷತಾ ಶೆಟ್ಟಿ ಮಂಗಳೂರ್ ಇವರು ಉದ್ಘಾಟನೆ ನೆರೆವೇರಿಸಿದರು.
ಅರ್ ಎನ್ ಶೆಟ್ಟಿ ಪಿ ಯು ಕಾಲೇಜ್ ನ ಪ್ರಾಂಶುಪಾಲರಾದ ನವೀನ್ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳು ಪಠ್ಯ ಪುಸ್ತಕದಲ್ಲಿ ಕಾಲೇಜ್ ಗೆ ಸಂಬಂಧ ಪಟ್ಟ ವಿಷಯಗಳನ್ನು ತಿಳಿದುಕೊಳ್ಳುತ್ತಾರೆ, ಇಂದಿನ ದಿನಗಳಲ್ಲಿ ಅವರಿಗೆ ಪಠ್ಯ ಪುಸ್ತಕದ ಜೊತೆಗೆ ಬೇರೆ ಬೇರೆ ವಿಷಯ ಗಳ ಬಗ್ಗೆ ತಿಳಿದುಕೊಳ್ಳಬೇಕಿದೆ, ಈ ಸಂದರ್ಭದಲ್ಲಿ ಜೆಸಿಐ ಕುಂದಾಪುರ ಸಿಟಿ ಯಂತ ಸಂಸ್ಥೆ ಗಳು ವಿದ್ಯಾರ್ಥಿ ಜೀವನದ ಜೊತೆಗೆ ಸಾಮಾಜಿಕ, ನಾಯಕತ್ವ, ಸೇವಾ ಕಾರ್ಯಕ್ರಮ ನಡವಳಿಕೆ, ಜೀವನ ಶೈಲಿ ಇನ್ನಿತರ ವಿಷಯ ಗಳ ಬಗ್ಗೆ ತರಬೇತಿ ನೀಡುತ್ತಿರುವು ದರಿಂದ ವಿದ್ಯಾರ್ಥಿಗಳ ಜೀವನ ಶೈಲಿ ಬದಲಾವಣೆ ಮಾಡಲು ಸಾಧ್ಯ ಎಂದು ನುಡಿದರು.
ಜೇಸಿಐ ಕುಂದಾಪುರ ಸಿಟಿ ಯಾ ಅಧ್ಯಕ್ಷ ರಾದ ರಾಘವೇಂದ್ರ ಕುಲಾಲ್ ಹೆಮ್ಮಾಡಿ ಸ್ವಾಗತಿಸಿದರು,
ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ನಿಕಟ ಪೂರ್ವ ಅಧ್ಯಕ್ಷ ಡಾ ಸೋನಿ, ಪೂರ್ವ ಅಧ್ಯಕ್ಷ ರಾದ
ವಿಜಯ ಭಂಡಾರಿ, ಗಿರೀಶ್ ಹೆಬ್ಬಾರ್, ಲೇಡಿ ಜೇಸಿ ಸಂಯೋಜಕಿ ರೇಷ್ಮಾ ಕೋಟ್ಯಾನ್,ಸದ್ಯಸ್ಯರಾದ ಅನಿತಾ ಡಿ ಸೋಜಾ, ಜಗದೀಶ್ ಶೆಟ್ಟಿ ಹೆಮ್ಮಾಡಿ, ದಿನೇಶ್ ಕುದ್ರು ಉಪಸ್ಥಿತರಿದ್ದರು.
ಕಾಲೇಜಿನ ಉಪನ್ಯಾಸಕರಾದ ಜಯಶೀಲ ಪೈ ಕಾರ್ಯಕ್ರಮ ನಿರೂಪಿಸಿ, ವಲಯ 15 ರ ಆಡಳಿಧಿಕಾರಿ ಅಭಿಲಾಶ್ ಬಿ ಏ ವಂದಿಸಿದರು.
ಕುಂದಾಪುರದ UBMC ಮತ್ತು CSI ಕೃಪಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರಿಗಾಗಿ 3 ದಿನಗಳ ಕಾರ್ಯಾಗಾರವನ್ನು ನಡೆಸಲಾಯಿತು / UBMC & CSI Krupa English Medium School , Kundapura conducted a 3- day workshop for teachers
ಕುಂದಾಪುರ, ಮೇ.25: UBMC ಮತ್ತು CSI ಕೃಪಾ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ ಇವರ ಸಹಯೋಗದೊಂದಿಗೆ ಮೇ 22 ರಿಂದ ಮೇ 24 ರರ ವರೆಗೆ 3 ದಿನಗಳ ಶಾಲಾ ಕೌಶಲ್ಯ ಅಭಿವ್ರದ್ಧಿಗಾಗಿ ವಿವಿಧವಿಷಯಗಳ ಬಗ್ಗೆ ಕಾರ್ಯಾಗಾರವನ್ನು ನಡೆಸಲಾಯಿತು
22.05.2024 ರಂದು, ದಿನ – 1 ರಂದು, ಉದ್ಘಾಟನಾ ಸಮಾರಂಭವನ್ನು ನಡೆಸಲಾಯಿತು. ಶಾಲೆಯ ಸಂಚಾಲಕಿ ಶ್ರೀಮತಿ ಐರಿನ್ ಸಾಲಿನ್ಸ್ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಅಂದಿನ ವಿಷಯವಾಗಿದ್ದ ಚಟುವಟಿಕೆ ಮತ್ತು ಕರಕುಶಲದ ಬಗ್ಗೆ ಶಿಕ್ಷಕರಿಗೆ ಸಂಪನ್ಮೂಲ ವ್ಯಕ್ತಿಗಳಾದ ಕುಮಾರಿ ದಿವ್ಯಾ ಮತ್ತು ಶ್ರೀಮತಿ ವಿಲ್ಮಾ ಮಾಹಿತಿ ನೀಡಿದರು. ಶಿಕ್ಷಕಿ ಪವಿತ್ರ ಕಾರ್ಯಕ್ರಮ ನಿರೂಪಣೆ ಮಾಡಿದರು. ಶಿಕ್ಷಕಿ ರಾಜೇಶ್ವರಿ ಪ್ರಾರ್ಥನೆಗೈದರು. ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಅನಿತಾ ಆಲಿಸ್ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
23.05.2024 ರಂದು, ಕಾರ್ಯಾಗಾರದ 2 ನೇ ದಿನ, ಶಿಕ್ಷಕಿ ವೀಣಾ ಇವರ ನಿರೂಪಣೆಯೊಂದಿಗೆ ಶಿಕ್ಷಕಿ ಉಜ್ವಲಾ ಪ್ರಾರ್ಥನೆ ನೆಡೆಸಿಕೊಟ್ಟರು. ಸಂಗೀತ ಮತ್ತು ನ್ರತ್ಯದ ವಿಷಯವಾಗಿ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ಅನಿತಾ ಆಲಿಸ್ ಡಿಸೋಜಾ, ಶ್ರೀಮತಿ ರಾಜೇಶ್ವರಿ ಮತ್ತು ಶ್ರೀಮತಿ ಸವಿತಾ ನಡೆಸಿಕೊಟ್ಟರು.
24.05.2024 ರಂದು, ಕಾರ್ಯಾಗಾರದ 3 ನೇ ದಿನದ ಕಾರ್ಯಗಾರದಲ್ಲಿ ಶ್ರೀಮತಿ ರೇಖಾ ಇವರ ನಿರೂಪಣೆಯೊಂದಿಗೆ ಶಿಕ್ಷಕಿ ಪ್ರಿಯಾಂಕ ಪ್ರಾರ್ಥನೆಗೈದರು. ಸಂಪನ್ಮೂಲ ವ್ಯಕ್ತಿ ಶ್ರೀಮತಿ ಪವಿತ್ರಾ ಅವರು ಶಾಲಾ ಪುನರಾರಂಭದ ಚಟುವಟಿಕೆಗಳ ಪೂರ್ವ ತಯಾರಿಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮವು ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಅನಿತಾ ಆಲಿಸ್ ಸಮಾರಂಭದ ಅಧ್ಯಕ್ಷತೆಯೊಂದಿಗೆ ನೇರವೆರಿತು.
UBMC & CSI Krupa English Medium School , Kundapura conducted a 3- day workshop for teachers.
Kundapur, May 25: UBMC and CSI Krupa English Medium School Kundapur organized a 3-day workshop on various topics for school skill development from May 22 to May 24.
On 22.05.2024, Day – 1, the inauguration ceremony was held. Mrs. Irene Sallins, Principal of the school, inaugurated the workshop. Resource persons Kumari Divya and Mrs. Vilma informed the teachers about the activities and crafts that were the topic of the day. The teacher presented the sacred program. Teacher Rajeshwari prayed. School Principal Mrs. Anita Alice thanked everyone for their cooperation in the program.
On 23.05.2024, on the 2nd day of the workshop, Teacher Ujwala gave a prayer with a presentation by Teacher Veena. Ms. Anita Alice D’Souza, Ms. Rajeshwari and Ms. Savitha were the resource persons for music and dance.
On 24.05.2024, Ms. Rekha’s lecture was given by teacher Priyanka in the 3rd day workshop of the workshop. Resource Person Smt. Pavithra informed about pre-preparation of school resumption activities. The closing program of the program was live with the Principal of the school Mrs. Anita Alice presiding over the function.
ಭಂಡಾರ್ಕಾರ್ಸ್ ಕಾಲೇಜಿಗೆ ಖ್ಯಾತ ಮನೋವೈದ್ಯ ಪದ್ಮಶ್ರೀ ಡಾ.ಸಿ.ಆರ್.ಚಂದ್ರಶೇಖರ್ ಅವರ ಆಗಮನ “ ಒತ್ತಡರಹಿತ ಜೀವನ” ವಿಷಯದ ಕುರಿತು ಮಾತನಾಡಲಿದ್ದಾರೆ
ಕುಂದಾಪುರ: ಮೇ 27ರಂದು ಬೆಳಿಗ್ಗೆ 10ಗಂಟೆಗೆ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿಗೆ ಖ್ಯಾತ ಮನೋವೈದ್ಯ ಪದ್ಮಶ್ರೀ ಡಾ.ಸಿ.ಆರ್.ಚಂದ್ರಶೇಖರ್ ಅವರು ಆಗಮಿಸಲಿದ್ದಾರೆ. ಅವರು “ ಒತ್ತಡರಹಿತ ಜೀವನ” ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಹಿರಿಯ ವಿಶ್ವಸ್ಥಮಂಡಳಿಯ ಸದಸ್ಯರಾದ ಶಾಂತಾರಾಮ್ ಪ್ರಭು ವಹಿಸಲಿದ್ದಾರೆ. ಇನ್ನೋರ್ವ ಅತಿಥಿಗಳಾಗಿ ಲೆಕ್ಕಪರಿಶೋಧಕ ಮತ್ತು ಕಾನೂನು ಸಲಹೆಗಾರರಾದ ಡಾ.ನಾಗರಾಜ ಆಚಾರ್ ಬೆಂಗಳೂರು ಇವರು ಆಗಮಿಸಲಿದ್ದಾರೆ.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ.ಗೊಂಡ, ಐಕ್ಯೂ.ಎಸಿ ಸಂಯೋಜಕರಾದ ಡಾ. ವಿಜಯಕುಮಾರ್ ಕೆ.ಎಮ್. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ.ಸತ್ಯನಾರಾಯಣ ಉಪಸ್ಥಿತರಿವರು. ಆಸಕ್ತ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.