ಶ್ರೀನಿವಾಸಪುರ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ 22 ನೇ ತ್ರೈ ವಾರ್ಷಿಕ ಮಹಾಧಿವೇಶನ ಪ್ರಾಥಮಿಕ ಪ್ರತಿನಿಧಿಗಳ ಚುನಾವಣೆ ಯಲ್ಲಿ 6 ಜನ ಸದಸ್ಯರು ಸ್ಪರ್ದಿಸಿದ್ದು ಇದರಲ್ಲಿ 3 ಜನ ಸದಸ್ಯರು ಚುನಾಯಿತರಾಗಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಪಟ್ಟಣದ ಕೆಇಬಿ ಉಪವಿಬಾಗದಿಂದ ಪ್ರಾಥಮಿಕ ಪ್ರತಿನಿಧಿಗಳ ಚುನಾವಣೆಯಲ್ಲಿ ಚಂದ್ರು ಆರ್. 76 ಮತ, ಆರ್.ಕೆ ಶ್ರೀನಿವಾಸ್ ಕುಮಾರ್ 69 ಮತ, ಕೆ.ವಿ ನಂಜುಂಡೇಶ್ವರ 64 ಮತ ಪಡೆದು ಜಯಶೀಲರಾಗಿದ್ದಾರೆ, ಇವರ ಪ್ರತಿಸ್ಪರ್ದಿಗಳಾದ ಎನ್.ರಾಜಣ್ಣ 61 ಮತ, ಪಿ.ಶ್ರೀನಿವಾಸ್ 60 ಮತ, ಬಿ.ಆರ್ ನಾಗೇಶ್ 47 ಮತಗಳನ್ನು ಪಡೆದು ಪರಾಭವ ಗೊಂಡಿರುತ್ತಾರೆ ಎಂದು ಚುನಾವಣಾಧಿಕಾರಿ ರಾಜಗೋಪಾಲರೆಡ್ಡಿ ತಿಳಿಸಿದ್ದಾರೆ.
ಈ ಚುನಾವಣೆಯಲ್ಲಿ ಆಯ್ಕೆಯಾದ ಆರ್ ಚಂದ್ರು ರವರು ಮಾತನಾಡಿ 22 ನೇ ತ್ರೈವಾರ್ಷಿಕ ಮಹಾ ಅಧಿವೇಶನ ಚುನಾವಣೆಯಲ್ಲಿ ನಮಗೆ ಸಹಕಾರ ನೀಡಿದ ಎಲ್ಲಾ ನೌಕರರಿಗೆ ಕೃತಜ್ನತೆಗಳನ್ನು ಸಲ್ಲಿಸಿದರು, ನಮ್ಮ ಕೆಇಬಿ ನೌಕರರಿಗೆ ಮುಂದಿನ ದಿನಗಳಲ್ಲಿ ಅವರ ಕಷ್ಟ ಸುಖಗಳಿಗೆ ಬಾಗಿಯಾಗಿ ಯಾವುದೇ ಸಮಸ್ಯೆ ಬಂದರೂ ಈ ಚುನಾವಣೆಯಲ್ಲಿ ಗೆದ್ದಿರುವ ಮೂವರು ಸದಸ್ಯರೂ ಸಹ ಹಗಳಿರುಳು ಶ್ರಮಿಸಿ ಸಹಕಾರಿಯಾಗಿ ನಿಲ್ಲುತ್ತೇವೆ ಎಂದು ಹೇಳಿದರು.
ಈ ಸಮಯದಲ್ಲಿ ಕೆ.ಇ.ಬಿ ವಿವಿದ ಸಂಘಗಳ ಅದ್ಯಕ್ಷರುಗಳು, ಪದಾದಿಕಾರಿಗಳು ಹಾಗು ನೌಕರರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
Day: May 23, 2024
ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಲಘುವಾಹನ ಚಾಲನಾ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ವಾಹನಾ ಚಾಲನಾ ಪರವಾನಗಿ ವಿತರಣೆ
ಕೋಲಾರ, ಮೇ.22: ಗ್ರಾ.ಪಂಗಳಲ್ಲಿ ಕಸ ವಿಲೇವಾರಿ ಮಾಡುವ ವಾಹನ ಚಾಲನಾ ವೃತ್ತಿಯು ಅತ್ಯಂತ ಶ್ರೇಷ್ಠವಾದದ್ದು ಹಾಗೂ ಯಾವುದೇ ವೃತ್ತಿ ಹೆಚ್ಚು ಮತ್ತು ಕಡಿಮೆ ಎಂದು ವಿಂಗಡಿಸಲು ಸಾಧ್ಯವಿಲ್ಲ ಎಂದು ಜಿ.ಪಂ ಯೋಜನಾ ನಿರ್ದೇಶಕ ರವಿಚಂದ್ರ .ಎನ್ ಹೇಳಿದರು.
ತಾಲ್ಲೂಕಿನ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಲಘುವಾಹನ ಚಾಲನಾ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ವಾಹನಾ ಚಾಲನಾ ಪರವಾನಗಿ ವಿತರಿಸಿ ಮಾತನಾಡಿದರು.
ರಾಜ್ಯದ ಪ್ರತಿ ಗ್ರಾ.ಪಂ.ಯ ಸ್ವಚ್ಚತಾ ವಾಹಿನಿಯನ್ನು ಚಲಾಯಿಸುವ ವೃತ್ತಿಯನ್ನು ಮಹಿಳೆಯರಿಗೆ ಸರ್ಕಾರ ಮೀಸಲಿರಿಸಿದೆ. ಇದರಿಂದ ಮಹಿಳೆಯರಿಗೂ ಉದ್ಯೋಗ ದೊರಕಿ, ಸ್ವಾವಲಂಭಿ ಜೀವನ ಸಾಗಿಸಲು ಸಾಧ್ಯವಾಗಲಿದೆ ಎಂದರು.
ಪ್ರತಿ ಹಳ್ಳಿಗೂ ತೆರಳಿ ಕಸ ಸಂಗ್ರಹಿಸಿ, ಅದನ್ನು ನಿಗದಿಪಡಿಸಿದ ಜಾಗದಲ್ಲಿ ವಿಲೇವಾರಿ ಮಾಡುವ ಜವಾಬ್ದಾರಿ ಸ್ವಚ್ಛತಾ ವಾಹಿನಿಯ ಚಾಲಕಿಯರ ಮೇಲಿರುತ್ತದೆ. ಮುಂದಿನ ದಿನಗಳಲ್ಲಿ ಸ್ವಚ್ಛತಾ ವಾಹನ ಚಾಲಕಿಯರಿಗೆ ಸಾಕಷ್ಟು ಅನುಕೂಲಗಳು ಸಿಗಲಿದೆ ಎಂದು ಹೇಳಿದರು.
ಪೈಲಟ್ ವೃತ್ತಿಯಿಂದ ಹಿಡಿದು ದೇಶದ ರಾಷ್ಟ್ರಪತಿ ಹುದ್ದೆಯವರೆಗೂ ಮಹಿಳೆಯರು ಸಾಧನೆ ಮಾಡಿದ್ದಾರೆ. ಸಾಧಿಸಬೇಕೆಂಬ ಛಲವಿದ್ದರೆ ಪ್ರತಿ ಕ್ಷೇತ್ರದಲ್ಲೂ ಮಹಿಳೆಯರು ಸಾಧನೆ ಮಾಡಬಹುದು ಎಂದು ತಿಳಿಸಿದರು.
ತರಬೇತಿ ಸಂಸ್ಥೆಯ ನಿರ್ದೇಶಕ ಯಲ್ಲೇಶ್.ಸಿ ಮಾತನಾಡಿ, ವಾಹನಾ ಚಾಲನಾ ತರಬೇತಿ ಪಡೆದ ಶಿಬಿರಾರ್ಥಿಗಳು ಯಾವುದೇ ಕಾರಣಕ್ಕೂ ಕೀಳರಿಮೆ ಪಡದೆ ತಮ್ಮ ವೃತ್ತಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಮೂಲಕ ಹೆಸರು ಸಂಪಾದಿಸಬೇಕು ಎಂದು ಕಿವಿಮಾತು ಹೇಳಿದರು.
ಗ್ರಾಮಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವ ವೃತ್ತಿಯು ಎಲ್ಲಾ ವೃತ್ತಿಗಳಿಗಿಂತ ಶ್ರೇಷ್ಠವಾದದ್ದು. ವಾಹನಾ ಚಲಾಯಿಸುವಾಗ ಭಯ ಹಾಗೂ ಒತ್ತಡವನ್ನು ಬಿಟ್ಟು ಅತ್ಯಂತ ಎಚ್ಚರಿಕೆಯಿಂದ ಚಲಾಯಿಸಿದಾಗ ಮಾತ್ರ ಸುರಕ್ಷಿತವಾಗಿ ವೃತ್ತಿ ನಿರ್ವಹಿಸಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ತರಬೇತಿ ಸಂಸ್ಥೆಯ ತರಬೇತುದಾರರಾದ ಕೆ.ವಿ ವಿಜಯ್ ಕುಮಾರ್, ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ, ಅರ್ಪಿತ ಯು.ಆರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕೋಲಾರ ತಾಲ್ಲೂಕಿನ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಲಘು ವಾಹನಾ ಚಾಲನಾ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಜಿ.ಪಂ ಯೋಜನಾ ನಿರ್ದೇಶಕ ರವಿಚಂದ್ರ .ಎನ್ ಚಾಲನಾ ಪರವಾನಗಿ ವಿತರಿಸಿದರು.
ಬಾಕಿಯಿರುವ ಜಮೀನನ್ನು ಪಹಣಿಯಲ್ಲಿ ಇಂಡೀಕರಗೊಳಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ಸೂಚನೆ
ಕೋಲಾರ ; ಕೋಲಾರ ಜಿಲ್ಲೆಯಾದ್ಯಂತ 934 ಎಕರೆ ಜಮೀನು ಪಹಣಿಯಲ್ಲಿ ಇಂಡೀಕರಗೊಳಿಸಲು ಬಾಕಿಯಿದ್ದು, ಇನ್ನು 15 ದಿನದೊಳಗಾಗಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಭೂ ಸ್ವಾಧೀನಪಡಿಸಲಾದ ಜಮೀನುಗಳ ಭೂ ದಾಖಲೆಗಳಲ್ಲಿ ಇಂಡೀಕರಿಸುವ ಕುರಿತಾದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಹಳೇ ಜಮೀನುಗಳ ಪೋಡಿ, ಪಹಣಿ ಹಾಗೂ ಇಸ್ಸೆಗೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಿ ಇಂಡೀಕರಿಸುವ ಕಾರ್ಯವನ್ನು ಮುಗಿಸುವಂತೆ ತಿಳಿಸಿದರು. ರೈಲ್ಷೆ ಯೋಜನೆಗಳಿಗೆ, ಸಾರ್ವಜನಿಕ ಉದ್ದೇಶಕ್ಕೆ ಹಾಗೂ ಸರ್ಕಾರದ ವಿವಿಧ ಯೋಜನೆಗಳಿಗೆ ಅಗತ್ಯವಿರುವ ಖಾಸಗಿ ಜಮೀನುಗಳನ್ನು ವಿವಿಧ ಕಾಯ್ದೆಗಳನುಸಾರ ಭೂ ಸ್ವಾಧೀನಪಡಿಸಿಕೊಳ್ಳುವಂತೆ ಕಂದಾಯ ಮತ್ತು ಸರ್ವೆ ದಾಖಲೆಗಳಲ್ಲಿ ಇಂಡೀಕರಣಗೊಳಿಸುವಂತೆ ಸರ್ಕಾರದಿಂದ ಆದೇಶ ಬಂದಿದ್ದು, ಈ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ತಿಳಿಸಿದರು.
ಜಿಲ್ಲೆಯಲ್ಲಿ 2271 ಸರ್ವೆ ನಂಬರುಗಳು ಭೂ ಸ್ವಾಧೀನಕ್ಕೊಳಪಟ್ಟಿದ್ದು, 1192 ಸರ್ವೇಗಳು ಇಂಡೀಕರಣವಾಗಿದ್ದು, 1079 ಸರ್ವೆ ನಂಬರುಗಳು ಬಾಕಿಯಿದ್ದು, ಇವುಗಳನ್ನು ಕೂಡಲೇ ಪಹಣಿಯಲ್ಲಿ ಇಂಡೀಕರಿಸುವಂತೆ ಸಹಾಯಕ ಭೂ ಸ್ವಾಧೀನಾಧಿಕಾರಿಗಳು ಹಾಗೂ ತಹಶೀಲ್ದಾರವರಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ, ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯಗಳಿಗೆ ದಾಖಲಾಗುವ ವಿದ್ಯಾರ್ಥಿಗಳು ದಾಖಲಾತಿಗೆ ಆನ್ಲೈನ್ ಅರ್ಜಿ ಮೂಲಕ ಸಲ್ಲಿಸಲು ಜಾಗೃತಿ
ಶ್ರೀನಿವಾಸಪುರ :ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಮಾತನಾಡಿ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳು ಮತ್ತು ಸರ್ಕಾರಿ ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯಗಳ 2024-25ನೇ ಸಾಲಿನ ಅವಧಿಯಲ್ಲಿ ವಿದ್ಯಾರ್ಥಿ ನಿಲಯಗಳ ನಿಲಯಾರ್ಥಿಗಳ ಪ್ರದೇಶಕ್ಕೆ ಅತೀ ಶೀಘ್ರದಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಎಲ್ಲಾ ಶಾಲೆಯ ಮುಖ್ಯೋಪಾಧ್ಯಾಯರು, ಮತ್ತು ಕಾಲೇಜಿನ ಪ್ರಾಂಶುಪಾಲರು, ಮತ್ತು ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರು, ವಿದ್ಯಾರ್ಥಿಗಳಿಗೆ ಈ ಕುರಿತು ಜಾಗೃತಿ ಮೂಡಿಸಲು ಹಾಗೂ ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯಕ್ಕೆ ಆನ್ಲೈನ್ ಅರ್ಜಿ ಮೂಲಕ ಸಲ್ಲಿಸಲು ಈ ಮೂಲಕ ತಿಳಿಯಪಡಿಸುವಂತೆ ಹೇಳಿದರು.
ಸಮಾಜ ಕಲ್ಯಾಣ ಇಲಾಖೆ, ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯಗಳಿಗೆ ದಾಖಲಾಗುವ ವಿದ್ಯಾರ್ಥಿಗಳು ದಾಖಲಾತಿಗೆ ಅವಶ್ಯಕವಿರುವ ದಾಖಲೆಗಳು
01) ವಿದ್ಯಾರ್ಥಿಯ ಜಾತಿ ಪ್ರಮಾಣ ಪತ್ರ,
02ವಿದ್ಯಾರ್ಥಿ ಆದಾಯ ಪ್ರಮಾಣ ಪತ್ರ.
03)ವಿದ್ಯಾರ್ಥಿಯ ಆದಾರ್ ಕಾರ್ಡ್ ಜೆರಾಕ್ಸ್ ಪ್ರತಿ
04)ಪೋಷಕರ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ.
05) ವಿದ್ಯಾರ್ಥಿಯ ಎಸ್ಎಟಿಎಸ್ ಸಂಖ್ಯೆ
06)ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್ ಪ್ರತಿ
07)ವಿದ್ಯಾರ್ಥಿಯ ಮೂರು ಭಾವಚಿತ್ರಗಳು.
08)ಪೆÇೀಷಕರ ದೂರವಾಣಿ ಸಂಖ್ಯೆ
09) ವಿದ್ಯಾರ್ಥಿಯ ಹಿಂದಿನ ತರಗತಿಯ ಅಂಕಪಟ್ಟಿ
ಶ್ರೀನಿವಾಸಪುರ ತಾಲೂಕು ವಿದ್ಯಾರ್ಥಿ ನಿಲಯಗಳ ವಿವಿರಗಳು
ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಶ್ರೀನಿವಾಸಪುರ ಟೌನ್,
ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಲಕ್ಷ್ಮೀಸಾಗರ,
ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ದಳಸನೂರು,
ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಸೋಮಯಾಜಲಹಳ್ಳಿ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಅಡ್ಡಗಲ್,
ಸರ್ಕಾರಿ ಮೆಟ್ರಿಕ್ ‘ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಗೌನಿಪಲ್ಲಿ,
ಸರ್ಕಾರಿ ಮೆಟ್ರಿಕ್ ಟ್ರಿಕ್ ಪೂರ್ವ ಬಾಲಕೀಯರ ವಿದ್ಯಾರ್ಥಿ ನಿಲಯ ಗೌನಿಪಲ್ಲಿ,
ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕೀಯರ ವಿದ್ಯಾರ್ಥಿ ನಿಲಯ ಶ್ರೀನಿವಾಸಪುರ ಟೌನ್,
ಸರ್ಕಾರಿ ಮೆಟ್ರಿಕ್ ನಂತೆರ ಪದವಿ ಪೂರ್ವ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯ ಶ್ರೀನಿವಾಸಪುರ ಟೌನ್,
ಸರ್ಕಾರಿ ಮೆಟ್ರಿಕ್ ನಂತರ ಬಾಲಕೀಯರ ವಿದ್ಯಾರ್ಥಿ ನಿಲಯ ಶ್ರೀನಿವಾಸಪುರ ಟೌನ್,
ಸರ್ಕಾರಿ ಮೆಟ್ರಿಕ್ ನಂತರ ಪದವಿ ಪೂರ್ವ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯ ಗೌನಿಪಲ್ಲಿ,
ಸರ್ಕಾರಿ ಮೆಟ್ರಿಕ್ ಪೂರ್ವ ಪರಿಶಿಷ್ಟ ವರ್ಗಗಳ ಬಾಲಕೀಯರ ವಿದ್ಯಾರ್ಥಿ ನಿಲಯ ಯಲ್ದೂರು,
ಸರ್ಕಾರಿ ಮೆಟ್ರಿಕ್ ಪೂರ್ವ ಪರಿಶಿಷ್ಟ ವರ್ಗಗಳ ಬಾಲಕರ ವಿದ್ಯಾರ್ಥಿ ನಿಲಯ ಆರಿಕುಂಟೆ,
ಗಿಳಿಯಾರು ಕುಶಲ ಹೆಗ್ಡೆ ಟ್ರಸ್ಟ್ನಿಂದ ವಿದ್ಯಾರ್ಥಿ ಸಹಾಯಧನ
ಕುಂದಾಪುರದ ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ನಿಂದ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯಲ್ಲಿ ಶೇಕಡಾ 90ಕ್ಕೂ ಹೆಚ್ಚು ಅಂಕಗಳಿಸಿ ಮುಂದಿನ ವಿದ್ಯಾಭ್ಯಾಸ ನಡೆಸುತ್ತಿರುವ ಅರ್ಹರಿಗೆ ಸಹಾಯಧನ ನೀಡುವ ಕಾರ್ಯಕ್ರಮ ಜೂನ್ 19 ರಂದು ನಡೆಯಲಿದೆ.
ಅರ್ಹ ವಿದ್ಯಾರ್ಥಿಗಳು ಅರ್ಜಿ ಫಾರಂಗಳನ್ನು ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ (ರಿ.) ಕಛೇರಿ, ಜಿ. ಕೆ. ಹೆಗ್ಡೆ ಬಿಲ್ಡಿಂಗ್, ಹೋಟೆಲ್ ಸ್ವಾದಿಷ್ಟ ಬಳಿ, ಶಾಸ್ತ್ರಿ ವೃತ್ತ, ಕುಂದಾಪುರ ಇಲ್ಲಿ ಮೇ 28 ರಿಂದ ಪಡೆದು ಜೂನ್ 5ರೊಳಗೆ ಅಂಕಪಟ್ಟಿ, ಕಾಲೇಜಿಗೆ ಸೇರಿದ ದಾಖಲೆಯೊಂದಿಗೆ ಅದೇ ಕಛೇರಿಯಲ್ಲಿ ತಲುಪಿಸಬೇಕು.
ಹೆಚ್ಚಿನ ವಿವರಗಳನ್ನು ಸಂಯೋಜಕರಾದ ನಾರಾಯಣ ಕೆ. 9448548806 ಇವರಲ್ಲಿ ಪಡೆಯಬಹುದು ಎಂದು ಸಂಸ್ಥೆಯ ಕಾರ್ಯದರ್ಶಿ ಯು.ಎಸ್.ಶೆಣೈ ತಿಳಿಸಿದ್ದಾರೆ.
ಪ್ರಸಿದ್ಧ ಮಲಯಾಳಂ ಲೇಖಕ ಎಂ ಮುಕುಂದನ್ ರೊಂದಿಗೆ ಲೇಖಕ ಇ.ಎಂ. ಅಶ್ರಫ್ ನಡೆಸಿದ ಸಾಹಿತ್ಯ ಸಂಚಾರ
ಮಲಯಾಳ ಸಾಹಿತ್ಯದಲ್ಲಿ ಬಗೆ ಬಗೆಯ ಪ್ರಯೋಗಗಳು ನಡೆಯುತ್ತವೆ ಎನ್ನುವುದಕ್ಕೆ ಸಾಕ್ಷಿಯಾಗಿ ಇಲ್ಲೊಂದು ವಿಮರ್ಶಾ ಕೃತಿಯಿದೆ. ಇದರ ಮೂಲ ಲೇಖಕರಾದ ಇ.ಎಂ. ಅಶ್ರಫ್ ಇದನ್ನು ಒಂದು ಸಾಹಿತ್ಯ ಸಂಚಾರ ಎಂದಿದ್ದಾರೆ. ಮಲಯಾಳದ ಪ್ರಸಿದ್ದ ಕತೆ, ಕಾದಂಬರಿಕಾರ, ಕೇಂದ್ರ ಸಾಹಿತ್ಯ ಅಕಾದೆಮಿ ಪ್ರಶಸ್ತಿ ಪುರಸ್ಕೃತರಾದ ಎಂ. ಮುಕುಂದನ್ ಅವರ ಜೊತೆ ಅಶ್ರಫ್ ದೆಹಲಿಯಲ್ಲಿದ್ದುಕೊಂಡು ಒಂದು ಸಾಹಿತ್ಯ ಸಂಚಾರ ನಡೆಸುತ್ತಾರೆ. ಇದು ದೆಹಲಿಯಲ್ಲಿದ್ದ ‘ಸಾಹಿತಿ’ಯ ಒಡನೆ ನಡೆಸಿದ ಸಂಚಾರವಾಗಿದ್ದರೂ ಅವರಿಬ್ಬರ ನಡುವಿನ ಮುಖ್ಯ ವಿಚಾರ ‘ಸಾಹಿತ್ಯ’ವೇ ಆಗಿತ್ತು. ಆದ್ದರಿಂದಲೇ ಇದೊಂದು ‘ಸಾಹಿತ್ಯ ಸಂಚಾರ’….
ಮುಕುಂದನ್ ಮಲಯಾಳಂ ಕಾದಂಬರಿಕಾರರ ನಡುವಿನ ಪ್ರಕಾಂಡ ಬರಹಗಾರ. ನೈಜ ಹಾಗೂ ಕಲ್ಪನೆಯ ವಿಚಾರಗಳನ್ನು ಏಕಕಾಲಕ್ಕೆ ತಂದು ತೋರಿಸಬಲ್ಲವರು. ಅಶ್ರಫ್ ಹೇಳುವಂತೆ ‘ಸಾಮಾನ್ಯ ವಸ್ತುವನ್ನು ಅಸಾಮಾನ್ಯ ಎನ್ನುವಂತೆ ಚಿತ್ರಿಸುವ ಮಾಂತ್ರಿಕ ಶಕ್ತಿ ಅವರಲ್ಲಿತ್ತು. ‘ಅರ್ಧಸತ್ಯವನ್ನು ಪೂರ್ಣಸತ್ಯವನ್ನಾಗಿಸುವ ಬರವಣಿಗೆ ಅವರದಾಗಿತ್ತು ಎಂದು ಅಶ್ರಫ್ ಒಪ್ಪಿಕೊಳ್ಳುತ್ತಾರೆ. ಈ ಮಾತನ್ನು ಸಮರ್ಥಿಸಲೋ ಎಂಬಂತೆ ಮುಕುಂದನ್, ‘ತಾನು ಕುಡಿಯದ್ದನ್ನು ತನ್ನ ಪಾತ್ರಗಳು ಕುಡಿಯುವುದರ ಮೂಲಕ, ತಾನು ಬದುಕಿದ್ದನ್ನು ತನ್ನ ಪಾತ್ರಗಳು ಬದುಕುವುದರ ಮೂಲಕ’ ತೋರಿಸಿಕೊಡುತ್ತಾರೆ, ಎಂದೂ ಆಶ್ರಫ್ ಹೇಳುತ್ತಾರೆ. ಕಾದಂಬರಿಯನ್ನು ಓದುವಾತನಿಗೆ ಕಾದಂಬರಿಕಾರ ಹೇಗೆ ಬದುಕುತ್ತಾನೆ ಎಂಬುದೆಲ್ಲ ಮುಖ್ಯವಲ್ಲ, ಮುಕುಂದನ್ರ ಬರವಣಿಗೆಯೇ ಹಾಗೆ: ಲೈಂಗಿಕತೆಯನ್ನು ಲೈಂಗಿಕತೆಯೆಂದು ಬಿಂಬಿತವಾಗದಂತೆ ಅವರು ಬರೆಯಬಲ್ಲರು. ‘ಅವರು ರತಿಚಿತ್ರಣಗಳ ಮೂಲಕ ಸಾಹಿತ್ಯವನ್ನು ಉದ್ದೀಪನಗೊಳಿಸುತ್ತಿದ್ದರು’ ಎಂಬ ಅಶ್ರಫರ ಮಾತು ಬಹಳ ಮುಖ್ಯವಾದುದು. ಸಾಹಿತ್ಯ ಅಕ್ಷರಗಳಲ್ಲಷ್ಟೇ ಹುದುಗಿದ್ದರೆ ಅದು ಮೇಲ್ನೋಟದ ಬರಹವಾಗಿ ಬಿಡುತ್ತದೆ. ಅದನ್ನು ಮೀರಿದ ಅನುಭವಕ್ಕೆ ಓದುಗನನ್ನು ಕೊಂಡೊಯ್ಯಬೇಕು. ಪ್ರಸ್ತುತ ಕಾದಂಬರಿಕಾರರಂತೆ…..
ಅಶ್ರಫರ ಈ ಮರುಪಯಣ ಕೇವಲ ಸ್ಥಳವೀಕ್ಷಣೆಯ ಉದ್ದೇಶದ್ದಲ್ಲ. ಕಾದಂಬರಿಯೊಂದು ಶೂನ್ಯದಿಂದ ಹುಟ್ಟಿಕೊಳ್ಳುವುದಿಲ್ಲ. ಅದು ಅನುಭವಜನ್ಯ ಅದಕ್ಕೆ ಜಂಗಮ ಮನಸ್ಸಿನಂತೆ ಸ್ಥಾವರಗಳೂ ಎಷ್ಟು ಮುಖ್ಯವಾಗುತ್ತವೆ ಎಂಬುದನ್ನು ಕಂಡುಡುಕೊಳ್ಳುವುದಕ್ಕೂ ಈ ಮರುಪಯಣ ಸಹಕಾರಿ. ಈ ಸಾಹಿತ್ಯ ಸಂಚಾರ ಒಂದು ಚರಿತ್ರೆಯನ್ನು ಮರಳಿಕಟ್ಟುವ ಪ್ರಯತ್ನಕೂಡ.
ಡಾ. ನಾ. ದಾಮೋದರ ಶೆಟ್ಟಿ ಬೆಂಗಳೂರು, ಇವರು ಕೃತಿಗೆ ಬರೆದ ಮುಮ್ಮಾತುಗಳ ಕೆಲವು ಸಾಲುಗಳು.
ಯು.ಬಿ.ಎಮ್.ಸಿ. ಮತ್ತು ಸಿ.ಎಸ್.ಐ. ಕೃಪಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರಿಗಾಗಿ ಕಾರ್ಯಾಗಾರ / A workshop series for teachers was conducted in UBMC & CSI Krupa English Medium school
ಕುಂದಾಪುರ, ಮೇ.23: ಯು.ಬಿ.ಎಮ್.ಸಿ. ಮತ್ತು ಸಿ.ಎಸ್.ಐ. ಕೃಪಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರಿಗಾಗಿ 2 ದಿವಸಗಳ ಕಾರ್ಯಾಗಾರವನ್ನು ನಡೆಸಲಾಯಿತು. ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾದ ಶ್ರೀಮತಿ ಐರಿನ್ ಸಾಲಿನ್ಸ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಕಾರ್ಯಗಾರಕ್ಕೆ ಚಾಲನೆ ನೀಡಿದರು.
ಪ್ರಾಂಶುಪಾಲೆ ಶ್ರೀಮತಿ ಅನಿತಾ ಆಲಿಸ್ ಡಿಸೋಜಾ, ಕುಮಾರಿ ದಿವ್ಯಾ ಮತ್ತು ಶ್ರೀಮತಿ ವಿಲ್ಮಾ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಶ್ರೀಮತಿ ರಾಜೇಶ್ವರಿ ಅವರು ಪ್ರಾರ್ಥನಾ ಗೀತೆಯ ಮೂಲಕ ದೇವರ ಆಶೀರ್ವಾದವನ್ನು ಕೋರಿದರು.
ಪ್ರಾಂಶುಪಾಲರಾದ ಶ್ರೀಮತಿ ಅನಿತಾ ಆಲಿಸ್ ಡಿಸೋಜಾ ಅವರು ಶಾಲೆಯಲ್ಲಿ ನಡೆಯಲಿರುವ ಕಾರ್ಯಾಗಾರದ ವಿಷಯಗಳ ಕುರಿತು ಶಿಕ್ಷಕರನ್ನು ಉದ್ದೇಶಿಸಿ ಮತ್ತು ಮುಂಬರುವ ಕಾರ್ಯಕ್ರಮಗಳು ಮತ್ತು ಹೇಗೆ ತಯಾರಿ ನಡೆಸಬೇಕು ಎಂಬುದರ ಕುರಿತು ವಿವರವಾಗಿ ವಿವರಿಸಿದರು.
ಸಂಪನ್ಮೂಲ ವ್ಯಕ್ತಿಗಳು, ದಿವ್ಯಾ ಮತ್ತು ವಿಲ್ಮಾ ಶಿಕ್ಷಕರು ಶಿಕ್ಷಕರಿಗೆ ಕರಕುಶಲ ಚಟುವಟಿಕೆಯನ್ನು ಪ್ರದರ್ಶಿಸಿದರು. ಎಲ್ಲಾ ಶಿಕ್ಷಕರು ಅದ್ಭುತವಾದ ಕರಕುಶಲ ಚಟುವಟಿಕೆಗಳನ್ನು ಸಿದ್ಧಪಡಿಸಿದರು. ಶ್ರೀಮತಿ ಪವಿತ್ರಾ ಸಮಾರಂಭವನ್ನು ನಿರೂಪಿಸಿದರು.
A workshop series for teachers was conducted in UBMC & CSI Krupa English Medium school
kundapur, May.23: The event started with the INAUGURAL Ceremony. Mrs. Irene Salins was the chief guest and Inaugurator.
Mrs. Anita Alice Dsouza , Ms. Divya and Mrs. Vilma were the Resource Persons. Mrs. Rajeshwari invoked God ‘s blessings through a Prayer song.
The Principal, Mrs Anita Alice Dsouza addressed the teachers about the contents of the series of workshops to be held in school and explained in detail about the upcoming events and how to be prepared..
The Resource Persons, Divya and Vilma teachers demonstrated the craft activity to the teachers. All the teachers prepared wonderful craft activities. Mrs. Pavithra ,anchored the ceremony.