ಈ ಶಾಲೆಯ ಬಗ್ಗೆ ಒಂದು ವಿಡೀಯೊ ನೋಡಲು ಈ ಲಿಂಕನ್ನು ಉಪಯೋಗಿಸಿ – https://web.whatsapp.com/
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಶಂಕರನಾರಾಯಣದ ಮದರ್ ತೆರೆಸಾ ಶಿಕ್ಷಣ ಸಂಸ್ಥೆಯು 1998ರಲ್ಲಿ ಆರಂಭಗೊಂಡು ಇದೀಗ 26 ಸಂವತ್ಸರಗಳನ್ನು ಪೂರೈಸಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
ಈ ಶಿಕ್ಷಣ ಸಂಸ್ಥೆಯ ಪೂರ್ವ ಪ್ರಾಥಮಿಕ ವಿಭಾಗದ PRE-KG,LKG ಮತ್ತು UKG ತರಗತಿಗಳಲ್ಲಿ ವಿಭಿನ್ನ, ವಿಶೇಷ ಹಾಗೂ ವಿನೂತನ ಶೈಲಿಯ ಬೋಧನೆಯನ್ನು ಮಾಡುವುದರ ಮೂಲಕ ಮೂರರಿಂದ ಆರು ವರ್ಷಗಳೊಳಗಿನ ಮಕ್ಕಳನ್ನು ಕಲಿಕೆಯತ್ತ ಆಕರ್ಷಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುತ್ತಿದೆ.
ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರಹಾಕುವ ಹಾಗೂ ಮಕ್ಕಳನ್ನು ಸದಾ ಕ್ರಿಯಾಶೀಲರನ್ನಾಗಿಸುವ ಉದ್ದೇಶದಿಂದ ಕಲಿಕೆಯಲ್ಲಿ ಹಲವು ಚಟುವಟಿಕೆಗಳೊಂದಿಗೆ ಪೂರಕ ಶಿಕ್ಷಣ ಕ್ರಮವನ್ನು ಅನುಸರಿಸಲಾಗುತ್ತಿದ್ದು LKG ಯಿಂದಲೇ ಪುಟ್ಟ ಮಕ್ಕಳು ತುಂಬ ಇಷ್ಟಪಡುವ Cursive Writing, Drawing, Colouring, Art and Craft, Colour-Day Activities ಮುಂತಾದ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಅಷ್ಟು ಮಾತ್ರವಲ್ಲ, ಪ್ರತಿದಿನ, ತರಗತಿ ಆರಂಭಕ್ಕೆ ಮೊದಲು, ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಮುಕ್ತವಾಗಿ ಹಾಗೂ ಅತ್ಯಂತ ಪ್ರೀತಿಯಿಂದ ಬೆರೆತು ಮಾತನಾಡಿ ಅವರ ಮನಸ್ಸನ್ನು ಉಲ್ಲಸಿತಗೊಳಿಸುತ್ತಾರೆ. ಅನಂತರ ಗಾಯತ್ರಿ ಮಂತ್ರದೊಂದಿಗೆ ತರಗತಿಗಳು ಪ್ರಾರಂಭಗೊಳ್ಳುತ್ತವೆ.
ಪೂರ್ವ ಪ್ರಾಥಮಿಕ ವಿಭಾಗದ ತರಗತಿಗಳು ವಿಸ್ತಾರವಾದ ಕೋಣೆಗಳನ್ನು ಹೊಂದಿದ್ದು ವಿದ್ಯಾರ್ಥಿಗಳಿಗೆ ಒತ್ತಡರಹಿತ ವಾತಾವರಣದಲ್ಲಿ ಕಲಿಕೆಗೆ ಅವಕಾಶ ಮಾಡಿ ಕೊಡಲಾಗಿದೆ. ವಿದ್ಯಾರ್ಥಿಗಳಿಗೆ ಎಲ್ಲ ವಿಷಯಗಳನ್ನು ನುರಿತ ಶಿಕ್ಷಕರು ಮನಮುಟ್ಟುವಂತೆ ಬೋಧಿಸುತ್ತಾರೆ. ಇಲ್ಲಿ ಪುಟ್ಟ ಮಕ್ಕಳು ಶಿಕ್ಷಕರೊಂದಿಗೆ ಇಂಗ್ಲಿಷ್ ಭಾಷೆಯಲ್ಲಿ ಸಂವಹನ ನಡೆಸುವುದಕ್ಕೆ ವಿಶೇಷ ಪ್ರಾಮುಖ್ಯ ನೀಡಲಾಗುತ್ತಿದೆ. ಪುಟಾಣಿಗಳ ಜ್ಞಾನಾಭಿವೃದ್ಧಿಗಾಗಿ ಪ್ರತ್ಯೇಕವಾದ ಗ್ರಂಥಾಲಯ ವ್ಯವಸ್ಥೆ ಇದ್ದು ಇಲ್ಲಿ ತುಂಬ ಮಕ್ಕಳ ಪುಸ್ತಕಗಳಿವೆ ಹಾಗೂ ವಿದ್ಯಾರ್ಥಿಗಳು ಅವುಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ನೋಡಿಕೊಳ್ಳಲಾಗುತ್ತಿದೆ.
ವಿದ್ಯಾರ್ಥಿಗಳನ್ನು ಮುತುವರ್ಜಿಯಿಂದ ನೋಡಿಕೊಳ್ಳುವ ಸಲುವಾಗಿ ಶಿಕ್ಷಣ ಸಂಸ್ಥೆಯ ಪ್ರತಿ ಮಹಡಿಯಲ್ಲೂ ಸರ್ವಿಸ್ ಲೇಡೀಸ್ ಇರುತ್ತಾರೆ. ಮಕ್ಕಳು ಅನಾರೋಗ್ಯಕ್ಕೆ ಒಳಗಾದರೆ ಅವರನ್ನು ವಿಶೇಷ ಕಾಳಜಿಯೊಂದಿಗೆ ನೋಡಿಕೊಳ್ಳಲು ವಿಶ್ರಾಂತಿ ಕೊಠಡಿ ಸಹ ಲಭ್ಯವಿರುತ್ತದೆ.
ಪ್ರತಿ ಮಹಡಿಯಲ್ಲೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇದ್ದು ಅದರ ಸೌಲಭ್ಯವನ್ನು ಎಲ್ಲ ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ.
ನುರಿತ ನೃತ್ಯ ಗುರುಗಳನ್ನು ನೇಮಿಸಿಕೊಂಡು ಪುಟ್ಟ ಮಕ್ಕಳಿಗೆ ನೃತ್ಯ ತರಬೇತಿಯನ್ನೂ ನೀಡಲಾಗುತ್ತಿದೆ.
ಬಾಲ್ಯದಿಂದಲೇ ಕ್ರೀಡಾ ಮನೋಭಾವವನ್ನು ಮೂಡಿಸುವ ಸಲುವಾಗಿ ವಿದ್ಯಾರ್ಥಿಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿ ಅನೇಕ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ. ವಿದ್ಯಾರ್ಥಿಗಳು ಕ್ರಿಯಾಶೀಲರಾಗಿರುವಂತೆ ಮಾಡುವ ಸಲುವಾಗಿ ಸುಸಜ್ಜಿತವಾದ ಒಳಾಂಗಣ ಆಟಗಳ ವ್ಯವಸ್ಥೆಯನ್ನು ಒದಗಿಸಲಾಗಿದೆ.
ಎಳೆಯ ಮಕ್ಕಳ ಸುಪ್ತ ಪ್ರತಿಭೆಗಳನ್ನು ಹೊರಹಾಕುವ ಉದ್ದೇಶದಿಂದ ಛದ್ಮವೇಷ ಸ್ಪರ್ಧೆ, ನೃತ್ಯ, ಹಾಡುವುದು, ಬಾಲರಾಧೆ, ಬಾಲಗೋಪಾಲ, ಸಾಮಾನ್ಯ ಜ್ಞಾನ ರಸಪ್ರಶ್ನೆ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದ್ದು ಮಕ್ಕಳು ಅವುಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಲಾಗುತ್ತಿದೆ. ಒಟ್ಟಂದದಲ್ಲಿ, ಪುಟಾಣಿಗಳು ಎಲ್ಲ ಕ್ಷೇತ್ರಗಳಲ್ಲಿ ಮಿಂಚಿ ಮಿನುಗಬೇಕೆಂಬ ಮಹದಾಸೆ ಮದರ್ ತೆರೆಸಾ ಸಂಸ್ಥೆಯದು.
ವಿದ್ಯಾರ್ಥಿಗಳನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರನ್ನಾಗಿಸಲು ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಯೋಗ ತರಗತಿಗಳನ್ನು ನಡೆಸಲಾಗುವುದು.
‘ಮಕ್ಕಳ ಲಾಲನೆ ಪಾಲನೆಯಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ’ – ಈ ವಿಷಯದ ಕುರಿತಾಗಿ ಪ್ರತಿವರ್ಷವೂ ಅಗತ್ಯ ಕಂಡಂತೆ ನುರಿತ ಮನ:ಶಾಸ್ತ್ರಜ್ಞರನ್ನು ಕರೆಸಿ ಶಿಕ್ಷಕರು ಮತ್ತು ಪೋಷಕರ ಜೊತೆ ಸಮಾಲೋಚನೆ ನಡೆಸಿ ತಮ್ಮ ಮಕ್ಕಳ ಕುರಿತಂತೆ ಪೋಷಕರಿಗಿರುವ ಗೊಂದಲಗಳನ್ನು ನಿವಾರಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ.
ಪುಟಾಣಿಗಳ ಇಡೀ ವರ್ಷದ ಪಠ್ಯ ಹಾಗೂ ಪಠ್ಯೇತರ ಸಾಧನೆಯನ್ನು ಪರಿಗಣಿಸಿ ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ‘ಪ್ರತಿಭಾ ಪುರಸ್ಕಾರ’ ಎಂಬ ಕಾರ್ಯಕ್ರಮವನ್ನು ಪ್ರತಿ ಶೈಕ್ಷಣಿಕ ವರ್ಷದ ಅಂತ್ಯದಲ್ಲಿ ನಡೆಸಲಾಗುತ್ತಿದೆ.
ಸಂಸ್ಥೆಯ ವಾರ್ಷಿಕೋತ್ಸವವನ್ನು ಅತ್ಯಂತ ಅದ್ಭುತವಾಗಿ ರೋಮಾಂಚಕಾರಿಯಾಗಿ ಎಲ್ಲರೂ ಮೆಚ್ಚಿ ವರ್ಷಪೂರ್ತಿ ಮೆಲುಕು ಹಾಕುವಂತೆ ವೈವಿಧ್ಯಮಯವಾಗಿ ವಿಭಿನ್ನ ಕಾರ್ಯಕ್ರಮಗಳೊಂದಿಗೆ ಪೂರ್ವ ಪ್ರಾಥಮಿಕ ವಿಭಾಗದ ಮಕ್ಕಳನ್ನು ತೊಡಗಿಸಿಕೊಂಡು ನಡೆಸುತ್ತಿರುವುದು ಮದರ್ ತೆರೆಸಾ ಶಾಲೆಯ ಹೆಗ್ಗಳಿಕೆ.
ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಪ್ರಾಥಮಿಕ ಹಂತಕ್ಕೆ ಪದೋನ್ನತಿ ಹೊಂದುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ‘ಪದೋನ್ನತಿ ದಿನ’ (Graduation Day) ವನ್ನು ಆಚರಿಸಲಾಗುತ್ತದೆ. ಭಾರತೀಯ ಸಾಂಸ್ಕೃತಿಕ ಸೊಗಡಿನೊಂದಿಗೆ ಸಾಂಪ್ರದಾಯಿಕ ಶೈಲಿಯಲ್ಲಿ ಈ ದಿನವನ್ನು ಆಚರಿಸುವ ಮೂಲಕ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿಯನ್ನು ಅದರ ಪರಿಶುದ್ಧ ರೂಪದಲ್ಲಿ ಪರಿಚಯಿಸುವ ಪ್ರಯತ್ನವನ್ನು ಮಾಡಲು ನಮ್ಮ ಮದರ್ ತೆರೆಸಾ ಶಿಕ್ಷಣ ಸಂಸ್ಥೆಯ ಪೂರ್ವ ಪ್ರಾಥಮಿಕ ವಿಭಾಗ ಅಭಿಮಾನ ಪಡುತ್ತದೆ.
ಪೂರ್ವ ಪ್ರಾಥಮಿಕ ವಿಭಾಗದ 2024-25ನೆಯ ಸಾಲಿನ ದಾಖಲಾತಿ ಪ್ರಕ್ರಿಯೆಯು ಈಗಾಗಲೇ ಪ್ರಾರಂಭಗೊಂಡಿದೆ.
PRE-KG – 3ರಿಂದ 4 ವರ್ಷ.
LKG – ಮೇ 31 ಕ್ಕೆ 4 ವರ್ಷ ಪೂರ್ಣಗೊಂಡಿರಬೇಕು.
UKG – ಮೇ 31ಕ್ಕೆ 5 ವರ್ಷ ಪೂರ್ಣಗೊಂಡಿರಬೇಕು.
ಆಸಕ್ತ ಪೋಷಕರು ಹೆಚ್ಚಿನ ಮಾಹಿತಿ ಮತ್ತು ದಾಖಲಾತಿಗಾಗಿ ಶಾಲಾ ಕಚೇರಿಯನ್ನು ಸಂಪರ್ಕಿಸಬಹುದು.
Day: May 15, 2024
ಪೊಂಪೈ ಕನ್ನಡ ಮಾಧ್ಯಮ ಪ್ರೌಢಶಾಲೆಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 100 ಶೇಕಡ ಫಲಿತಾಂಶ
ಮಂಗಳೂರು: ಉರ್ವಾದ ಕನ್ನಡ ಮಾಧ್ಯಮ ಪೊಂಪೈ ಪ್ರೌಢಶಾಲೆಗೆ 60 ವರ್ಷದ ಇತಿಹಾಸವಿದ್ದು, ಈ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶಾಲೆಗೆ 100 ಶೇಕಡ ಫಲಿತಾಂಶ ಬಂದಿದೆ. ಇದೊಂದು ಹೆಮ್ಮೆಯ ವಿಷಯ ಈ ಶಾಲೆಯು ಕನ್ನಡ ಮಾಧ್ಯಮದ ಶಾಲೆಯಾಗಿದ್ದು, ಹೆಚ್ಚಿನ ಅಂದರೆ 99 ಶೇಕಡ ವಿದ್ಯಾರ್ಥಿಗಳು ವಲಸೆ ವಿದ್ಯಾರ್ಥಿಗಳಾಗಿದ್ದು, ತುಂಬಾ ಹಿಂದುಳಿದ ಕುಟುಂಬದ ಹಿನ್ನೆಲೆಯಲ್ಲಿ ಬಂದಂತಹ ವಿದ್ಯಾರ್ಥಿಗಳು ಆದರೂ ಶಿಕ್ಷಕರ ಉತ್ತಮ ಶಿಕ್ಷಣ ಕಾಳಜಿಯಿಂದ ಈ ವರ್ಷದಲ್ಲಿ ನೂರು ಶೇಕಡ ಫಲಿತಾಂಶ ಬಂದಿರುವುದು ಬಂದಿದೆ.
ಈ ಕಾರಣಕ್ಕೆ ಶಿಕ್ಷಕರಿಗೆ ಆಡಳಿತ ವರ್ಗದವರಿಗೆ ತುಂಬು ಸಂತೋಷವಾಗಿದೆ.
ಇತ್ತೀಚೆಗೆ ಈ ಶಾಲೆಯನ್ನು ಒಳ್ಳೆಯ ಉದ್ದೇಶದಿಂದ ಶಾಲೆಯ ಕಟ್ಟಡವನ್ನು ಕಟ್ಟಿದವರ ಕುಟುಂಬಸ್ಥರು ಈ ಶಾಲೆಯ ಕಾಳಜಿಯಿಂದ ಆಸ್ಟ್ರೇಲಿಯದಿಂದ ಬಂದು ಭೇಟಿ ಕೊಟ್ಟಿದ್ದರು ಎಂದು ಶಿಕ್ಷಕಿ ಲೀನಾ ಸಂತಾನೇಜ್ ಹೇಳುತ್ತಾರೆ.
2 ಕೋಟಿ ರೂಪಾಯಿಗೂ ಮಿಕ್ಕಿ ವಂಚಿಸಿದ ಸಿಐಡಿ ಲೇಡಿ ಆಫಿಸರ್
ಬೆಂಗಳೂರು: ಕೆಪಿಎಸ್ಸಿಯ ಹಿರಿಯ ಅಧಿಕಾರಿಗಳು ಹಾಗೂ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಪರಿಚಯವಿದ್ದು ಅವರ ಮೂಲಕ
ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಪಡೆದುಕೊಂಡು ವಂಚಿಸಿದ್ದ ಸಿಐಡಿ ಕಚೇರಿ ಅಧಿಕಾರಿ ಸೇರಿ ಇಬ್ಬರು.
ವಿಜಯನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಆರೋಪಿಗಳು ಸಿಐಡಿ ಕಚೇರಿಯಲ್ಲೇ ಡೀಲ್ ನಡೆಸುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಸಿಐಡಿ ಕಚೇರಿಯ ಆರ್ಥಿಕ
ಅಪರಾಧ ವಿಭಾಗದಲ್ಲಿ ಸೆಕ್ಷನ್ ಸೂಪರಿಡೆಂಟ್ ಆಗಿರುವ ಆರ್ಪಿಸಿ ಲೇಔಟ್ನ ನಿವಾಸಿ ಅನಿತಾ (42) ಹಾಗೂ ಆಕೆಯ ಸಹಚರ ರಾಮಚಂದ್ರ
ಭಟ್(56) ಬಂಧಿತರು.
ಆರೋಪಿಗಳು ಚಿಕ್ಕಮಗಳೂರಿನ ಕಲ್ಯಾಣನಗರದ ನಿವಾಸಿ ಸುನೀಲ್ ಎಂಬಾತನಿಗೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 40 ಲಕ್ಷ ರೂ.ಪಡೆದು ವಂಚಿಸಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು
ಪೊಲೀಸರು ಹೇಳಿದರು.
ದೂರದಾರ ಸುನೀಲ್ಗೆ 2021ರಲ್ಲಿ ಸ್ನೇಹಿತ ಮಂಜುನಾಥ್ ಮೂಲಕ ರಾಮಚಂದ್ರ ಭಟ್ ಪರಿಚಯವಾಗಿದ್ವು ಆಗ ಆರೋಪಿ ರಾಮಚಂದ್ರ ಭಟ್,
“ತನಗೆ ಬೆಂಗಳೂರಿನ ಸಿಐಡಿ ಘಟಕ ಸೆಕ್ಷನ್ ಸೂಪರಿಡೆಂಟ್ ಅನಿತಾಳ ಪರಿಚಯವಿದೆ. ಅವರಿಗೆ ಕೆಪಿಎಸ್ಸಿ ಹಾಗೂ ಸರ್ಕಾರದ ಉನ್ನತ
ಹುದ್ದೆಯಲ್ಲಿರುವ ಹಲವು ಪ್ರಭಾವಿ ವ್ಯಕ್ತಿಗಳ ಸಂಪರ್ಕವಿದೆ. ಅವರ ಮೂಲಕ ನಿಮಗೆ ಸರ್ಕಾರಿ ಕೆಲಸ ಕೊಡಿಸುತ್ತೇನೆ’ ಎಂದು ನಂಬಿಸಿದ್ದ ಅಲ್ಲದೆ,
ಅನಿತಾ ಅವರು ಕೇಳಿದಷ್ಟು ಹಣ ಕೊಡಬೇಕು ಎಂದು ದೂರುದಾರನಿಗೆ ಆರೋಪಿ ಬೇಡಿಕೆ ಇಟ್ಟಿದ್ದ ಎಂದು ಪೊಲಿಸರು ಹೇಳಿದರು.
ಸಿಐಡಿ ಕಚೇರಿಯಲ್ಲೇ ಡೀಲ್: ಕೆಲ ದಿನಗಳ ಬಳಿಕ ಸಿಐಡಿ ಕಚೇರಿಗೆ ದೂರುದಾರನನ್ನು ಕರೆ ತಂದಿದ್ದ ರಾಮಚಂದ್ರ ಭಟ್, ಅನಿತಾರನ್ನು ಭೇಟಿ
ಮಾಡಿಸಿದ್ದ. ಈ ವೇಳ ಅನಿತಾ, ತನ್ನ ಕಚೇರಿ, ಐಡಿ ಕಾರ್ಡ್ ತೋರಿಸಿ ನಂಬಿಸಿದ್ದರು. ಅಲ್ಲದೆ, ಕೆಪಿಎಸ್ಸಿ ಸದಸ್ಯರ ಮೂಲಕ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಹುದ್ದೆಯನ್ನು ಕೊಡಿಸುವುದಾಗಿ ಸುನೀಲ್ ನನ್ನು ನಂಬಿಸಿದ್ದಾರೆ. ಬಳಿಕ ಸರ್ಕಾರಿ ಉದ್ಯೋಗಕ್ಕಾಗಿ 40 ಲಕ್ಷ ರೂ. ಕೊಡಬೇಕೆಂದು ಬೇಡಿಕೆಯಿಟ್ಟಿದ್ದರು. ಸರ್ಕಾರಿ ಉದ್ಯೋಗ ಆಮಿಷಕ್ಕೊಳಗಾದ ಸುನೀಲ್, 2021ರ ಡಿಸೆಂಬರ್ ಹಾಗೂ 2022ರ ಫೆಬ್ರವರಿಯಲ್ಲಿ ಆರೋಪಿಗಳಿಗೆ ಹಂತ-ಹಂತವಾಗಿ 40 ಲಕ್ಷ ರೂ. ನೀಡಿದ್ದರು. ಆದರೆ ಯಾವುದೇ ಸರ್ಕಾರಿ ಕೆಲಸ ಕೊಡಿಸಿಲ್ಲ, ಹಣ ವಾಪಸ್ ಹಿಂತಿರುಗಿಸುವಂತೆ ಕೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಸುನೀಲ್ ದೂರು ನೀಡಿದ್ದರು. ಈ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳ ವಿಚಾರಣೆಯಲ್ಲಿ ಇದುವರೆಗೂ ಹತ್ತಾರು ಮಂದಿಗೆ ಸುಮಾರು 2 ಕೋಟಿಗೂ ಅಧಿಕ ಹಣ ಪಡೆದು ವಂಚಿಸಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜೂನ್ 3 ರಂದು ಮುಂಗಾರು ಕರ್ನಾಟಕ ಕರಾವಳಿ ಪ್ರವೇಶಿಸುವ ಸಾಧ್ಯತೆ! ಜೂನ್ 1ರ ವೇಳೆಗೆ ಕೇರಳ ಪ್ರವೇಶಿಸಲಿದೆ!!
ಹೊಸದಿಲ್ಲಿ: ಹವಮಾನ ಇಲಾಖೆ ಶುಭಸುದ್ದಿ ನೀಡಿದ್ದು, ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆಯ ನಡುವೆಯೇ ‘ಹವಾಮಾನ ಇಲಾಖೆ. ಪ್ರಸಕ್ತ ಸಾಲಿನ ಮುಂಗಾರು ಮಾರುತ ಜೂನ್ 3 ರಂದು ಮುಂಗಾರು ಕರ್ನಾಟಕ ಕರಾವಳಿ ಪ್ರವೇಶಿಸುವ ಸಾಧ್ಯತೆ ಇದೆಯೆಂದು ತಿಳಿಸಿದೆ ಜೂನ್ 1ರ ವೇಳೆಗೆ ಕೇರಳ ಪ್ರವೇಶಿಸಲಿದೆ ಜೂ. 1ರಂದೇ ಕೇರಳ ಪ್ರವೇಶಿಸಲಿದೆ ಎಂದು ಹೇಳಿದೆ.
ಮೇ 19ರಂದು. ನೈಖುತ್ಯ ಮುಂಗಾರು ಮಾರುತವು ದಕ್ಷಿಣ ಅಂಡಮಾನ್, ಸಮುದ್ರ, ಬಂಗಾಳ ಕೊಲ್ಲಿಯ. ಆಗೋಯ ಭಾಗ ಹಾಗೂ ನಿಕೋಬಾರ್ ದ್ವೀಪಗಳನ್ನು ಪ್ರವೇಶಿಸಲಿದೆ. ಜೂನ್ 1ರ ವೇಳೆಗೆ ಕೇರಳ ಪ್ರವೇಶಿಸಲಿದೆ. ಜೂನ್ 15ರ ವೇಳೆಗೆ ದೇಶಾದ್ಯಂತ ವ್ಯಾಪಿಸಲಿದೆ ಎಂದು ಇಲಾಖೆ ತಿಳಿಸಿದೆ. ಕೇರಳ ಪ್ರವೇಶಿಸಿದ ಬಳಿಕ ಒಂದೆರಡು ದಿನಗಳಲ್ಲಿ ಕರ್ನಾಟಕ ಕರಾವಳಿಗೂ ಪ್ರವೇಶಿಸುವ ನಿರೀಕ್ಷೆಯಿದೆ. ಜೂನ್
3 ರಂದು ಮುಂಗಾರು ಕರ್ನಾಟಕ ಕರಾವಳಿ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
Sports meet at MCN* Moodlakatta College of Nursing, Kundapura organized a sports meet at MCN ground as part of the Uthkarsh-2024 /ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ಕುಂದಾಪುರದಲ್ಲಿ ಉತ್ಕರ್ಷದ ಅಂಗವಾಗಿ ಎಂ.ಸಿ.ಎನ್ ಮೈದಾನದಲ್ಲಿ ಕ್ರೀಡೋತ್ಸವವು ಅತ್ಯುತ್ತಮವಾಗಿ ನೆರವೇರಿತು
Mr. Mohammad Sameer, Director of Physical Education, Janata Independent PU College, Hemmadi, inaugurated the meet by lighting the sports torch, saying, ‘Sports are an integral part of human being because it keeps us healthy, prosperous and active. We can have a healthy mind only when we have a healthy body’. Dr Ramakrishna Hegde, Director, Brand Building IMJ Institutions presided over the program and encouraged the students. Principal Jennifer Frieda Menezes wished the students for better sports performance.
Mr. Praveen Kharvi, Director of Physical Education presented the Annual Sports Report. Students did a Highly disciplined March fast in four teams with colourful uniforms. Principal of IMJ Institute of Science and Commerce, Dr Pratibha M Patel, Vice Principal of IMJ Institute of Science and Commerce, Prof. Jayasheel Kumar and Vice Principal of MCN, Prof. Rupshree K S were present on the occasion. Students Sona and Nishmita were MCs of the program and welcomed the dignitaries. Nishmita introduced the Chief Guest. Chetana did the invocation. Muhammad Ryan proposed the vote of thanks.
ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ಕುಂದಾಪುರದಲ್ಲಿ ಉತ್ಕರ್ಷದ ಅಂಗವಾಗಿ ಎಂ.ಸಿ.ಎನ್ ಮೈದಾನದಲ್ಲಿ ಕ್ರೀಡೋತ್ಸವವು ಅತ್ಯುತ್ತಮವಾಗಿ ನೆರವೇರಿತು.
ಜನತಾ ಇಂಡಿಪೆಂಡೆಂಟ್ ಪಿಯು ಕಾಲೇಜ್ ಹೆಮ್ಮಾಡಿಯ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀಯುತ ಮೊಹಮ್ಮದ್ ಸಮೀರ್ ಅವರು ಕ್ರೀಡಾ ಜ್ಯೋತಿಯನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ‘ ಕ್ರೀಡೆಯು ಮನುಷ್ಯನ ಅವಿಭಾಜ್ಯ ಅಂಗ ಏಕೆಂದರೆ ಅದು ನಮ್ಮನ್ನು ಆರೋಗ್ಯಕರವಾಗಿ, ಶ್ರೀಮಂತವಾಗಿ ಮತ್ತು ಕ್ರಿಯಾಶೀಲವಾಗಿರಿಸುತ್ತದೆ. ಆರೋಗ್ಯಕರ ದೇಹವನ್ನು ಹೊಂದಿದಾಗ ಮಾತ್ರ ನಾವು ಆರೋಗ್ಯಕರ ಮನಸ್ಸು ಹೊಂದಲು ಸಾಧ್ಯ. ನಾವು ನಮ್ಮ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಕಾಪಾಡಿಕೊಳ್ಳುವಾಗ ದೊಡ್ಡ ಸಾಧನೆಗಳು ನಮ್ಮ ದಾರಿಯಲ್ಲಿ ಬರುತ್ತವೆ’ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಎಂಜೆ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಶ್ರೀಯುತ ರಾಮಕೃಷ್ಣ ಹೆಗಡೆಯವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಮಾತುಗಳನ್ನಾಡಿ ಉತ್ತೇಜಿಸಿದರು. ಹಾಗೂ . ಪ್ರಾಂಶುಪಾಲರಾದ ಜೆನ್ನಿಫರ್ ಫ್ರೀಡ ಮೇನೇಜಸ್ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀಯುತ ಪ್ರವೀಣ್ ಖಾರ್ವಿಯವರು ವಾರ್ಷಿಕ ಕ್ರೀಡಾ ವರದಿಯನ್ನು ಮಂಡಿಸಿದರು. ಹಾಗೂ ವಿದ್ಯಾರ್ಥಿಗಳು ನಾಲ್ಕು ತಂಡಗಳಾಗಿ ಪಥಸಂಚಲನವನ್ನು ಮಾಡಿ ಮನವನ್ನು ರಂಜಿಸಿದರು.
ಕಾರ್ಯಕ್ರಮದಲ್ಲಿ ಐ.ಎಂ.ಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಆಂಡ್ ಕಾಮರ್ಸ್ ನ ಪ್ರಾಂಶುಪಾಲರಾದ ಡಾ I ಪ್ರತಿಭಾ ಎಂ ಪಟೇಲ್, ಐ.ಎಂ.ಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಆಂಡ್ ಕಾಮರ್ಸ್ ನ ಉಪ ಪ್ರಾಂಶುಪಾಲರಾದ ಪ್ರೊ| ಜಯಶೀಲ ಕುಮಾರ್ ಹಾಗೂ ನಮ್ಮ ಕಾಲೇಜಿನ ಉಪ ಪ್ರಾಂಶುಪಾಲರಾದ ಪ್ರೊ| ರೂಪಶ್ರೀ ಕೆ ಎಸ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಸೋನಾ ಮತ್ತು ನಿಶ್ಮಿತ ನಿರೂಪಿಸಿದರು ಮತ್ತು ಗಣ್ಯರನ್ನು ಸ್ವಾಗತಿಸಿದರು. ಮುಖ್ಯ ಅತಿಥಿಯ ಪರಿಚಯವನ್ನು ನಿಶ್ಮಿತಾ ಮಾಡಿದರು. ಚೇತನ ಪ್ರಾರ್ಥಿಸಿದರು. ಸಭಾ ಪ್ರಮಾಣವಚನ ವಾಚಿಸಿದರು. ಮಹಮ್ಮದ್ ರಿಯಾನ್ ವಂದಿಸಿದರು.
Decennial Episcopal Consecration celebration of Bishop Francis Serrao SJ held at Shivamogga / ಶಿವಮೊಗ್ಗದಲ್ಲಿ ಬಿಷಪ್ ಫ್ರಾನ್ಸಿಸ್ ಸೆರಾವೋ ಎಸ್.ಜೆ.ಯವರ ದಶವಾರ್ಷಿಕ ಎಪಿಸ್ಕೋಪಲ್ ಮಹಾಮಸ್ತಕಾಭಿಷೇಕ ಮಹೋತ್ಸವ
Shivamogga, May 14, 2024: Bishop Francis Serrao SJ, Bishop of Diocese of Shimoga celebrated his Decennial Episcopal Consecration at Sacred Heart Cathedral, Shivamogga.plp
Clergy, Religious and faithful of the Diocese of Shimoga organised thanksgiving Holy Eucharist on 14th evening at 6pm. Bishop Francis Serrao SJ concelebrated Holy Eucharist with Bishop Duming Dias of Diocese of Karwar, Archbishop Emeritus Leo Cornelio of Archdiocese of Bhopal and Clergy and Religious Priests of the Diocese of Shimoga.
Bishop Duming Dias preached the homily based on Pastoral motto of Bishop Francis “Service of Faith Fullness of Life”.
At the end of the Holy Eucharist Fr Roman Pinto led the felicitation program. Fr Veeresh Moras read the felicitation honours for the Bishop. Monsignor Felix Joseph Noronha, Vicar General, Rev. Fr Stephen Maxi Albuquerque, Chancellor, Rev. Fr Biju Thomas, Judicial Vicar, Rev. Fr Ronald D’Cunha, Procurator, Fr Veeresh Moras, PRO, Rev. Fr Roshan Pinto, Director Sannidhi, Rev. Fr Stany D’Souza, Parish Priest of Sacred Heart Cathedral, Shivamogga and PPC secretary Mr. Arogyaswamy felicitated Bishop Francis Serrao SJ on behalf of the Diocese.
Bishop Duming Dias, Bishop of Karwar and Archbishop Emeritus Leo Cornelio felicitated Bishop Francis Serrao SJ.
Bishop Francis Serrao SJ in his speech thanked God for his merciful love and guidance. He also thanked Clergy, Religious and faithful for their prayers and support in his Pastoral ministry. On behalf of the Diocese Rev. Fr Stany D’Souza thanked everyone.
Bishop Francis Serrao was born on August 15, 1959 in Moodbidri, Dakshina Kannada district in Karnataka, Bishop Francis is the youngest of the 11 children, 6 of them are priests – 2 diocesan, 2 SVDs, and two Jesuits, and a sister a religious nun.
He was ordained a priest on April 30, 1992 and made his final vows in the Society of Jesus on May 1, 1999. He has had a wide ranging experience in the social apostolate working among dalits and tribals in Anekal (Bangalore Archdiocese) and Mundgod (Karwar Diocese) mission stations. He has been teaching theology to the Jesuit students of theology, preparing themselves for priesthood. He was the Rector of the St. Aloysius College, the 136-year old institution in Mangalore. It imparts education to over eleven thousand students from the primary to doctoral studies.
On March 19, 2014 the Holy Father appointed Msgr. Francis Serrao sj as the Bishop of the Diocese of Shimoga. He was appointed as the third Bishop of Diocese of Shimoga and was ordained as Bishop on 07 May, 2014 by Archbishop Most Rev. Salvatore Pennacchio, the Apostolic Nuncio of India, at Sacred Heart Cathedral, Shimoga. “Service of Faith Fullness of Life” is the pastoral motto of the Bishop.
ಶಿವಮೊಗ್ಗದಲ್ಲಿ ಬಿಷಪ್ ಫ್ರಾನ್ಸಿಸ್ ಸೆರಾವೋ ಎಸ್.ಜೆ.ಯವರ ದಶವಾರ್ಷಿಕ ಎಪಿಸ್ಕೋಪಲ್ ಮಹಾಮಸ್ತಕಾಭಿಷೇಕ ಮಹೋತ್ಸವ.
ಶಿವಮೊಗ್ಗ, ಮೇ 14, 2024: ಶಿವಮೊಗ್ಗದ ಧರ್ಮಪ್ರಾಂತ್ಯದ ಬಿಷಪ್ ಫ್ರಾನ್ಸಿಸ್ ಸೆರಾವೊ ಎಸ್ಜೆ ಅವರು ತಮ್ಮ ದಶವಾರ್ಷಿಕ ಎಪಿಸ್ಕೋಪಲ್ ಪವಿತ್ರೀಕರಣವನ್ನು ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್ನಲ್ಲಿ ಆಚರಿಸಿದರು.
14 ರಂದು ಸಂಜೆ 6 ಗಂಟೆಗೆ ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಗುರುಗಳು, ಧಾರ್ಮಿಕ ಮತ್ತು ನಿಷ್ಠಾವಂತರು ಕೃತಜ್ಞತಾ ಪ್ರಾರ್ಥನೆಯನ್ನು ಆಯೋಜಿಸಿದ್ದಾರೆ. ಬಿಷಪ್ ಫ್ರಾನ್ಸಿಸ್ ಸೆರಾವೊ ಎಸ್.ಜೆ ಅವರು ಕಾರವಾರದ ಧರ್ಮಪ್ರಾಂತ್ಯದ ಬಿಷಪ್ ಡುಮಿಂಗ್ ಡಯಾಸ್, ಭೂಪಾಲ್ ಆರ್ಚ್ಡಯಾಸಿಸ್ನ ಆರ್ಚ್ಬಿಷಪ್ ಎಮೆರಿಟಸ್ ಲಿಯೊ ಕರ್ನೆಲಿಯೊ ಮತ್ತು ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಗುರುಗಳು ಮತ್ತು ಧರ್ಮಗುರುಗಳೊಂದಿಗೆ ಪವಿತ್ರ ಯೂಕರಿಸ್ಟ್ ಅನ್ನು ಆಚರಿಸಿದರು.
ಬಿಷಪ್ ಡುಮಿಂಗ್ ಡಯಾಸ್ ಅವರು ಬಿಷಪ್ ಫ್ರಾನ್ಸಿಸ್ ಅವರ “ಜೀವನದ ಪೂರ್ಣತೆಯ ನಂಬಿಕೆಯ ಸೇವೆ” ಎಂಬ ಪ್ಯಾಸ್ಟೋರಲ್ ಧ್ಯೇಯವಾಕ್ಯವನ್ನು ಆಧರಿಸಿ ಧರ್ಮೋಪದೇಶವನ್ನು ಬೋಧಿಸಿದರು.
ಪವಿತ್ರ ಪ್ರಾರ್ಥನಾ ಕಾರ್ಯಕ್ರಮದ ಕೊನೆಯಲ್ಲಿ ಫಾ ರೋಮನ್ ಪಿಂಟೋ ರವರು ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಫಾದರ್ ವೀರೇಶ್ ಮೊರಾಸ್ ಬಿಷಪ್ ಅವರಿಗೆ ಸನ್ಮಾನ ಪತ್ರ ವಾಚಿಸಿದರು. ಮಾನ್ಸಿಂಜರ್ ಫೆಲಿಕ್ಸ್ ಜೋಸೆಫ್ ನೊರೊನ್ಹಾ, ವಿಕಾರ್ ಜನರಲ್, ರೆ.ಫಾ. ಸ್ಟೀಫನ್ ಮ್ಯಾಕ್ಸಿ ಅಲ್ಬುಕರ್ಕ್, ಚಾನ್ಸೆಲರ್, ರೆ.ಫಾ. ಬಿಜು ಥಾಮಸ್, ನ್ಯಾಯಾಂಗ ವಿಕಾರ್, ರೆ.ಫಾ. ರೊನಾಲ್ಡ್ ಡಿ’ಕುನ್ಹಾ, ಪ್ರಾಕ್ಯುರೇಟರ್, ಫಾ.ವೀರೇಶ್ ಮೊರಾಸ್, ಪ್ರೊ, ರೆ.ಫಾ. ರೋಶನ್ ಪಿಂಟೊ, ನಿರ್ದೇಶಕ ಸನ್ನಿಧಿ , ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್ನ ಪ್ಯಾರಿಷ್ ಪ್ರೀಸ್ಟ್ ರೆ.ಫಾ.ಸ್ಟಾನಿ ಡಿಸೋಜಾ ಮತ್ತು ಪ.ಪೂ.ಕಾರ್ಯದರ್ಶಿ ಶ್ರೀ ಆರೋಗ್ಯಸ್ವಾಮಿ ಅವರು ಧರ್ಮಪ್ರಾಂತ್ಯದ ಪರವಾಗಿ ಬಿಷಪ್ ಫ್ರಾನ್ಸಿಸ್ ಸೆರಾವೋ ಎಸ್.ಜೆ.ಅವರನ್ನು ಸನ್ಮಾನಿಸಿದರು
ಕಾರ್ವಾರ್ ಬಿಷಪ್ ಡ್ಯೂಮಿಂಗ್ ಡಯಾಸ್ ಮತ್ತು ಆರ್ಚ್ಬಿಷಪ್ ಎಮೆರಿಟಸ್ ಲಿಯೋ ಕಾರ್ನೆಲಿಯೊ ಅವರು ಬಿಷಪ್ ಫ್ರಾನ್ಸಿಸ್ ಸೆರಾವೊ ಎಸ್. ಜೆ. ಕೂಡ ಅವರನ್ನು ಸನ್ಮಾನಿಸಿದರು.
ಬಿಷಪ್ ಫ್ರಾನ್ಸಿಸ್ ಸೆರಾವೊ ಎಸ್ಜೆ ತಮ್ಮ ಭಾಷಣದಲ್ಲಿ ದೇವರ ಕರುಣಾಮಯಿ ಪ್ರೀತಿ ಮತ್ತು ಮಾರ್ಗದರ್ಶನಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು. ಅವರು ಪಾದ್ರಿಗಳು, ಧಾರ್ಮಿಕ ಮತ್ತು ನಿಷ್ಠಾವಂತರು ಅವರ ಪ್ರಾರ್ಥನೆ ಮತ್ತು ಅವರ ಗ್ರಾಮೀಣ ಸೇವೆಯಲ್ಲಿ ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು. ಧರ್ಮಪ್ರಾಂತ್ಯದ ಪರವಾಗಿ ವಂದನೀಯ ಫಾದರ್ ಸ್ಟ್ಯಾನಿ ಡಿಸೋಜಾ ಅವರು ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಬಿಷಪ್ ಫ್ರಾನ್ಸಿಸ್ ಸೆರಾವೋ ಅವರು ಆಗಸ್ಟ್ 15, 1959 ರಂದು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ ಜನಿಸಿದರು, ಬಿಷಪ್ ಫ್ರಾನ್ಸಿಸ್ ಅವರು 11 ಮಕ್ಕಳಲ್ಲಿ ಕಿರಿಯರು, ಅವರಲ್ಲಿ 6 ಜನರು ಪಾದ್ರಿಗಳು – 2 ಡಯೋಸಿಸನ್, 2 ಎಸ್ವಿಡಿಗಳು ಮತ್ತು ಇಬ್ಬರು ಜೆಸ್ಯೂಟ್ಗಳು ಮತ್ತು ಒಬ್ಬ ಸಹೋದರಿ ಧಾರ್ಮಿಕರಾಗಿದ್ದಾರೆ. ಸನ್ಯಾಸಿನಿ
ಅವರು ಏಪ್ರಿಲ್ 30, 1992 ರಂದು ಅರ್ಚಕರಾಗಿ ನೇಮಕಗೊಂಡರು ಮತ್ತು ಮೇ 1, 1999 ರಂದು ಸೊಸೈಟಿ ಆಫ್ ಜೀಸಸ್ನಲ್ಲಿ ತಮ್ಮ ಅಂತಿಮ ಪ್ರತಿಜ್ಞೆ ಮಾಡಿದರು. ಅವರು ಆನೇಕಲ್ (ಬೆಂಗಳೂರು ಆರ್ಚ್ಡಯಾಸಿಸ್) ಮತ್ತು ಮುಂಡಗೋಡಿನಲ್ಲಿ ದಲಿತರು ಮತ್ತು ಬುಡಕಟ್ಟು ಜನಾಂಗದವರ ನಡುವೆ ಸಾಮಾಜಿಕ ಧರ್ಮಪ್ರಚಾರಕ ಕೆಲಸದಲ್ಲಿ ವ್ಯಾಪಕ ಅನುಭವವನ್ನು ಹೊಂದಿದ್ದಾರೆ. (ಕಾರವಾರ ಡಯಾಸಿಸ್) ಮಿಷನ್ ಸ್ಟೇಷನ್ಗಳು. ಅವರು ಧರ್ಮಶಾಸ್ತ್ರದ ಜೆಸ್ಯೂಟ್ ವಿದ್ಯಾರ್ಥಿಗಳಿಗೆ ಧರ್ಮಶಾಸ್ತ್ರವನ್ನು ಬೋಧಿಸುತ್ತಿದ್ದಾರೆ, ಪುರೋಹಿತಶಾಹಿಗಾಗಿ ತಮ್ಮನ್ನು ಸಿದ್ಧಪಡಿಸುತ್ತಿದ್ದಾರೆ. ಮಂಗಳೂರಿನಲ್ಲಿ 136 ವರ್ಷಗಳಷ್ಟು ಹಳೆಯದಾದ ಸಂತ ಅಲೋಶಿಯಸ್ ಕಾಲೇಜಿನ ರೆಕ್ಟರ್ ಆಗಿದ್ದರು. ಇದು ಪ್ರಾಥಮಿಕದಿಂದ ಡಾಕ್ಟರೇಟ್ ಅಧ್ಯಯನದವರೆಗೆ ಹನ್ನೊಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತದೆ.
ಮಾರ್ಚ್ 19, 2014 ರಂದು ಪವಿತ್ರ ತಂದೆಯವರು Msgr. ಶಿವಮೊಗ್ಗ ಧರ್ಮಪ್ರಾಂತ್ಯದ ಬಿಷಪ್ ಆಗಿ ಫ್ರಾನ್ಸಿಸ್ ಸೆರಾವೊ ಎಸ್.ಜೆ. ಅವರು ಶಿವಮೊಗ್ಗದ ಧರ್ಮಪ್ರಾಂತ್ಯದ ಮೂರನೇ ಬಿಷಪ್ ಆಗಿ ನೇಮಕಗೊಂಡರು ಮತ್ತು 07 ಮೇ, 2014 ರಂದು ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್ನಲ್ಲಿ ಭಾರತದ ಅಪೋಸ್ಟೋಲಿಕ್ ನನ್ಸಿಯೋ ಆರ್ಚ್ಬಿಷಪ್ ಮೋಸ್ಟ್ ರೆವ. ಸಾಲ್ವಟೋರ್ ಪೆನ್ನಾಚಿಯೋ ಅವರಿಂದ ಬಿಷಪ್ ಆಗಿ ನೇಮಕಗೊಂಡರು. “ಜೀವನದ ನಂಬಿಕೆಯ ಪೂರ್ಣತೆಯ ಸೇವೆ” ಎಂಬುದು ಬಿಷಪ್ನ ಗ್ರಾಮೀಣ ಧ್ಯೇಯವಾಕ್ಯವಾಗಿದೆ.