ಕುಂದಾಪುರದ ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎರಡು ದಿನಗಳ ರಾಜ್ಯ ಮಟ್ಟದ ಸಾಂಸ್ಕೃತಿಕ -ತಾಂತ್ರಿಕ ಹಾಗೂ ಮ್ಯಾನೇಜ್ ಮೆಂಟ್ ಸ್ಪರ್ಧಾಕೂಟ ವಿಜೃಂಭಣೆಯಿಂದ ಜರುಗಿದ್ದು ಎರಡನೆಯ ದಿನದಂದು ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಯಿತು.. ಸಂಸ್ಥೆಯ ಪ್ರಾಂಶುಪಾಲ ಡಾ.ಅಬ್ದುಲ್ ಕರೀಂ ,ಕಾರ್ಯಕ್ರಮದ ಸಂಚಾಲಕ, ಉಪ ಪ್ರಾಂಶುಪಾಲ ಡಾ.ಮೆಲ್ವಿನ್ ಡಿಸೋಜಾ, ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ.ರಾಮಕೃಷ್ಣ ಹೆಗ್ಡೆ, ಈ ಕಾರ್ಯಕ್ರಮ ನಡೆಸಿಕೊಟ್ಟರು. ವಿವಿಧ ವಿಭಾಗದಲ್ಲಿ 25ಕ್ಕೂ ಹೆಚ್ಚಿನ ಸ್ಪರ್ದೆಗಳನ್ನು ನಡೆಸಿದ್ದು 30ಕ್ಕೂ ಹೆಚ್ಚು ಕಾಲೇಜುಗಳು ಭಾಗವಹಿಸಿದ್ದವು. ಅವುಗಳಲ್ಲಿ ಹೆಚ್ಚು ಆಕರ್ಷಣೆಯ ಸ್ಪರ್ದೆಯಾದ ವೆರೈಟಿ ಶೋ ಅಲ್ಲಿ ಡಾ ಬಿ ಬಿ ಹೆಗ್ಡೆ ಕಾಲೇಜು ಕುಂದಾಪುರ ಪ್ರಥಮ ಸ್ಥಾನ ಗಳಿಸಿದರೆ , ಎಮ್ ಜಿ ಎಮ್ ಕಾಲೇಜು ಉಡುಪಿ ದ್ವಿತೀಯ ಸ್ಥಾನ ಪಡೆಯಿತು. ಎಲ್ಲ ಸ್ಪರ್ದೆಯ ವಿಜೇತರುಗಳಿಗೆ ಕ್ಯಾಶ್ ಪ್ರೈಸ್ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ಸಾಂಸ್ಕೃತಿಕ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಡಾ ಬಿ ಬಿ ಹೆಗ್ಡೆ ಕಾಲೇಜು ಕುಂದಾಪುರ ಚಾಂಪಿಯನ್ ಟ್ರೋಫಿ ತನ್ನದಾಗಿಸಿಕೊಂಡಿತು. ಅಂಜುಮಾನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಭಟ್ಕಳ ರನ್ನರ್ ಆಗಿ ಹೊರ ಹೊಮ್ಮಿದರು. ವಿದ್ಯಾರ್ಥಿ ತೇಜಸ್ ಹಾಗೂ ಪ್ಲೇಸ್ಮೆಂಟ್ ಡೀನ್ ಪ್ರೊಫೆಸರ್ ಅಮೃತಮಾಲ ಕಾರ್ಯಕ್ರಮ ನಿರ್ವಹಿಸಿದರು.
Day: May 8, 2024
ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಚರ್ಚಿನಲ್ಲಿ ಮಕ್ಕಳಿಗೆ ಪರಮ ಪ್ರಸಾದದ ಸಂಸ್ಕಾರ
PHOTOS: ST.ANTONY STUDIO
ಕುಂದಾಪುರ, ಮೇ.8: ಸ್ಥಳೀಯ ಭಾಗ್ಯವಂತೆ ರೋಜರಿ ಮಾತಾ ಚರ್ಚಿನಲ್ಲಿ ಕ್ರಿಸ್ತಿ ಶಿಕ್ಷಣದಲ್ಲಿ ತೆರ್ಗಡೆಕೊಂಡ ಕ್ರೈಸ್ತ ಮಕ್ಕಳಿಗೆ ಮೇ 5 ರಂದು ದಿವ್ಯ ಪರಮ ಪ್ರಸಾದದ ಸಂಸ್ಕಾರವನ್ನು ನೀಡಲಾಯಿತು.
ಈ ಸಂಸ್ಕಾರದ ದಿವ್ಯ ಬಲಿದಾನವನ್ನು ರೋಜರಿ ಮಾತಾ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ ನಡೆಸಿಕೊಟ್ಟರು. ದಿವ್ಯ ಪರಮ ಪ್ರಸಾದದ ಸಂಸ್ಕಾರದ ಬಗ್ಗೆ ಮಕ್ಕಳಿಗೆ ತಿಳಿಸಿದರು. ಮತ್ತು ಆಯ್ದ ಮಕ್ಕಳಿಗೆ ಪರಮ ಪ್ರಸಾದದ ಸಂಸ್ಕಾರ ನೀಡಿ ಅವರಿಗೆ ದಿವ್ಯ ಪರಮ ಪ್ರಸಾದವನ್ನು ನೀಡಿದರು. ಪ್ರಧಾನ ಧರ್ಮಗುರು ದಿವ್ಯ ಬಲಿದಾನದಲ್ಲಿ ಭಾಗಿಯಾಗಿ ಪರಮ ಪ್ರಸಾದದ ಸಂಸ್ಕಾರ ಪಡೆದುಕೊಂಡ ಮಕ್ಕಳಿಗೆ ಪ್ರಮಾಣ ವಚನ ಭೋದಿಸಿದರು.
ಭಗಿನಿ ಸುನೀತಾ ಮತ್ತು ಜೂಲಿಯೆಟ್ ಪಾಯ್ಸ್ ಇವರು ಪರಮ ಪ್ರಸಾದದ ಸಂಸ್ಕಾರ ಪಡೆದ ಮಕ್ಕಳಿಗೆ ತರಬೇತಿ ನೀಡಿ ಅಣಿಗೊಳಿಸಿದ್ದರು. ಚಿಕ್ಕದಾದ ಅಭಿನಂದನ ಕಾರ್ಯಕ್ರಮವನ್ನು ನೆಡಸಲಾಯಿತು.
ಜೆ.ತಿಮ್ಮ ಸಂದ್ರ ಗ್ರಾ.ಪಂ.ವ್ಯಾಪ್ತಿಯ ಕಿರುವಾರ ಗ್ರಾಮದ ಸರ್ಕಾರಿ ಹಿ. ಪ್ರಾ. ಶಾಲೆ ಕಟ್ಟಡದ ಕಳಪೆ ಕಾಮಗಾರಿ ಗುತ್ತಿಗೆದಾರನ ವಿರುದ್ಧ ಗ್ರಾಮಸ್ಥರ ಆಕ್ರೋಶ
ಶ್ರೀನಿವಾಸಪುರ : ಸರ್ಕಾರವು ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಬಿಸಿಊಟ, ಸಮವಸ್ತ್ರ, ಉಚಿತ ಪುಸ್ತಕಗಳು ಹೀಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೂ ಸಹ ಸರ್ಕಾರಿ ಶಾಲೆಗಳನ್ನು ಉಳಿಸಲು ಅನೇಕ ರೂಪರೇಷಗಳನ್ನು ಹಮ್ಮಿಕೊಂಡಿದೆ. ಆದರೂ ಸರ್ಕಾರಿ ಶಾಲೆಗಳೆಂದರೆ ಮಕ್ಕಳ ಪೋಷಕರಲ್ಲಿ ಒಂದು ರೀತಿಯಲ್ಲಿ ನಿರುತ್ಸಾಹ.
ಇಂತಹ ಸಂದರ್ಭದಲ್ಲಿ ತಾಲೂಕಿನ ಜೆ.ತಿಮ್ಮಸಂದ್ರ ಗ್ರಾ.ಪಂ.ವ್ಯಾಪ್ತಿಯ ಕಿರುವಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡದ ಕಳಪೆ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರನ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕಾಗಿ ಜಿ.ಪಂ ಅನುದಾನದಲ್ಲಿ ಸುಮಾರು 14 ಲಕ್ಷ ಅಂದಾಜು ಮೊತ್ತ ಕಾಮಗಾರಿಗೆ ಸರ್ಕಾರವು ಅನುದಾನವು ಬಿಡುಗಡೆ ಮಾಡಿದೆ.
ಕಿರುವಾರ ಗ್ರಾಮದ ಸರ್ಕಾರಿ ಶಾಲೆಯಲ್ಲಿ 1 ರಿಂದ 7 ತರಗತಿಯ ವರೆಗೂ ಇದ್ದು ಅದರಲ್ಲಿ ಒಟ್ಟು 16 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಪಾಠ ಪ್ರವಚನಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಇಲಾಖೆ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಸರ್ಕಾರವು ಒಂದು ಕೊಠಡಿ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದೆ. ಆ ಕೊಠಡಿಯ ಪ್ರಾರಂಭ ಹಂತದಲ್ಲಿಯೇ ಕಳಪೆ ಕಾಮಗಾರಿಯಿಂದ ಕೂಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ತಕ್ಷಣ ಇದಕ್ಕೆ ಸಂಬಂದಿಸಿದ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿ ಗುತ್ತಿಗೆದಾರನ ವಿರುದ್ಧ ಕ್ರಮಕೈಗೊಳ್ಳಬೇಕು ಇಲ್ಲವಾದರೆ ಕಾಮಗಾರಿ ಮುಂದುವರೆಸಲು ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರು ಎಚ್ಚರಿಸಿದರು.
ಪೋಷಕರು ತಮ್ಮ ಮಕ್ಕಳ ಬಗ್ಗೆ ಅನೇಕ ಕನಸನ್ನು ಕಂಡಿದ್ದು ತಮ್ಮ ಮಕ್ಕಳ ಜೀವದ ಜೊತೆ ಚಲ್ಲಾಟವಾಡುವ ರೀತಿಯಲ್ಲಿ ಗುತ್ತಿಗೆದಾರ ಶಾಲಾ ಕಟ್ಟಡವನ್ನು ಪ್ರಾರಂಭದ ಹಂತದಲ್ಲಿಯೇ ಕಳಪೆ ಕಾಮಗಾರಿಯನ್ನು ಮಾಡುತ್ತಿರುವ ಬಗ್ಗೆ ಗ್ರಾಮಸ್ಥರಾದ ಮುನಿಸ್ವಾಮಿ, ಕೆ.ಐ. ನಾರಾಯಣಸ್ವಾಮಿ, ಕೆ.ಎಂ.ನರಸಿಂಹಯ್ಯ, ಕೆ.ಎಲ್.ಅರುಣ್ಕುಮಾರ್, ಕೆ.ಎನ್.ಮಂಜುನಾಥ, ಕೆ.ಟಿ.ಶ್ರೀನಿವಾಸ್, ಸುರೇಶ್, ಕೆ.ಎನ್.ಕೃಷ್ಣಪ್ಪ, ಕೆ.ಎನ್.ವೆಂಕಟರಮಣ ಮುಂತಾದವರು ಆರೋಪ ಮಾಡುತ್ತಿದ್ದಾರೆ