ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರು ಸುಮಾರು 400 ಮಂದಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಇದು ಸೆಕ್ಸ್ ಸ್ಕ್ಯಾಂಡಲ್ ಅಲ್ಲ, ಮಾಸ್ ರೇಪ್. ಪ್ರಜ್ವಲ್ ಪರ ಮತಯಾಚಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದರು.
ಶಿವಮೊಗ್ಗದ ಅಲ್ಲಮ ಪ್ರಭು ಕ್ರೀಡಾಂಗಣದಲ್ಲಿ ಆಯೋಜಿಸಿದ ಕಾಂಗ್ರೆಸ್ ಪಕ್ಷ ಪ್ರಜಾಧ್ವನಿ-2 ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.ಪ್ರಜ್ವಲ್ ರೇವಣ್ಣ ಅವರ ಕೃತ್ಯ ಬಗ್ಗೆ ಸ್ಪಷ್ಟ ಅರಿವಿದ್ದರೂ ಬಿಜೆಪಿ ಪಕ್ಷವು ಜನತಾ ದಳದೊಂದಿಗೆ ಮೈತ್ರಿ ಮಾಡಿಕೊಂಡಿದೆ. ಪ್ರಜ್ವಲ್ ಪರ ಮತಯಾಚಿಸಿದ ಪ್ರಧಾನಿ ಮೋದಿ ಅವರು ಹಿಂದೂಸ್ತಾನದ ಪ್ರತಿಯೊಬ್ಬ ಮಹಿಳೆಯಲ್ಲೂ ಕ್ಷಮೆ ಕೇಳಬೇಕು. ಹಿಂದೂಸ್ತಾನದ ಪ್ರಧಾನಿ ಒಬ್ಬ ಮಾಸ್ ರೇಪಿಸ್ಟ್ ಪರ ಮತಯಾಚನೆಗೆ ಬಂದಿದ್ದಾರೆ ಎಂದರೆ ಅವರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ದ ಎಂದು ಅರ್ಥ. ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಕ್ಷಮೆ ಕೇಳಬೇಕು ಎಂದರುಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಂತಾದವರು ಉಪಸ್ಥಿತರಿದ್ದರು.
Day: May 3, 2024
ಸಾವಿಷ್ಕಾರ್-24 ರಂಗೇರಿಸಿದ ಚಂದನ್ ಶೆಟ್ಟಿ ಮತ್ತು ನವೀನ್ ಸಜ್ಜು / Savishkar-24 Starring Chandan Shetty and Naveen Sajju
ಎಂಐಟಿ ಮೂಡ್ಲಕಟ್ಟೆ ಸಾವಿಷ್ಕಾರ್ -24 ಅಂಗವಾಗಿ ಪ್ರಖ್ಯಾತ ಗಾಯಕ ಚಂದನ್ ಶೆಟ್ಟಿ ಅವರು ತಮ್ಮ ಕನ್ನಡ ರ್ಯಾಪ್ ಹಾಡುಗಳ ಮೂಲಕ ನೆರೆದ ಜನ ಸಮೂಹವನ್ನು ಮಂತ್ರ ಮುಗ್ಧರಾಗಿಸಿದರು ತಮ್ಮ ಶೈಲಿಯಲ್ಲಿ ಉತ್ತಮ ಹಿಡಿತವಿರುವ ಅವರು ನೆರೆದಿದ್ದ ವಿದ್ಯಾರ್ಥಿವೃಂದಕ್ಕೆ ಹಾಡು, ನೃತ್ಯದ ಮೂಲಕ ಅವಿಸ್ಮರಣೀಯ ದಿನವಾಗುವಂತೆ ಮಾಡಿದರು. ಕಾರ್ಯಕ್ರಮದಲ್ಲಿ ನೂರಕ್ಕೂ ಅಧಿಕ ಸಿನಿಮಾಗಳಿಗೆ ಹಾಡಿದ ಸರಿಗಮಪ ಖ್ಯಾತಿಯ ಜ್ಯೂರಿ ಮೆಂಬರ್ ಶಶಿಕಲಾ ಸುನಿಲ್, ಸರಿಗಮಪ-20 ವಿನ್ನರ್ ದರ್ಶನ್ ನಾರಾಯಣ್ ರವರು ಪ್ರೇಕ್ಷಕರನ್ನು ರಂಜಿಸಿದರು.
ಎರಡನೆಯ ದಿನದ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟವರು ಜಾನಪದ ಶೈಲಿಯಲ್ಲಿ ತಮ್ಮದೇ ಆದ ಚಾಪು ಮೂಡಿಸಿದ ಹೆಸರಾಂತ ಹಿನ್ನೆಲೆ ಗಾಯಕ ನವೀನ್ ಸಜ್ಜು ಮತ್ತು ತಂಡದವರು. ತಾವೇ ಬರೆದ ಗೀತೆಗಳನ್ನ ಕೂಡಾ ಹಾಡಿ ಜನರನ್ನು ರಂಜಿಸಿದರು. ಸಾವಿಷ್ಕಾರ್ -24 ರ
ಎರಡು ದಿನದ ಸಂಜೆಯ ಕಾರ್ಯಕ್ರಮವು ರಂಜನೀಯವಾಗಿ ಮೂಡಿ ಬಂದಿತು.
Savishkar-24 Starring Chandan Shetty and Naveen Sajju
Renowned singer Chandan Shetty as part of MIT Moodlekatte Savishkar-24 enthralled the crowd with his Kannada rap songs and with his unique style, he made it an unforgettable day for the audience through his songs and dance. Playback singer and Jury member of famous reality show Sarigamapa Ms Sasikala Sunil, Sarigampa-20 winner Darshan Narayan also entertained the audience.
The second day’s concert was by renowned playback singer Naveen Sajju and team, who has made his mark in the folk style of singing. He also entertained the crowd by singing songs written by himself also. Savishkar-24th
two-day evening program turned out to be highly entertaining.
೨೮ನೇ ಸ್ಥಾನದಿಂದ ಅಗ್ರಸ್ಥಾನವರೆಗೆ ಕೋಲಾರ ಜಿಲ್ಲೆಯ ಪಯಣ, ಇದು ಡೀಸಿ ಅಕ್ರಂಪಾಶ ಅವರ ಸಾಧನೆ
ಕೋಲಾರ: ಕೋಲಾರ ಜಿಲ್ಲಾಧಿಕಾರಿ ಅಕ್ರಂಪಾಷ ಅವರ ನೇತೃತ್ವದಲ್ಲಿ ಇಡೀ ಕರ್ನಾಟಕ ರಾಜ್ಯದಲ್ಲಿ 28ನೇ ಸ್ಥಾನದಲ್ಲಿದ್ದ ಕೋಲಾರ ಜಿಲ್ಲೆ ಅಟಲ್ ಜನಸ್ನೇಹಿ ಕೇಂದ್ರದಲ್ಲಿ ಸಾರ್ವಜನಿಕರ ಅರ್ಜಿಗಳನ್ನು ಸ್ವೀಕರಿಸಿ ಸಕಾಲದಲ್ಲಿ ಸರ್ಕಾರಿ ಸೌಲಭ್ಯಗಳನ್ನು ಜನರಿಗೆ ಒದಗಿಸುವ ಮೂಲಕ ರಾಜ್ಯದಲ್ಲಿಯೇ ಸತತವಾಗಿ 2ನೇ ಬಾರಿಗೆ ಅಗ್ರಸ್ಥಾನಕ್ಕೇರಿದೆ.
ಕೋಲಾರ ಜಿಲ್ಲಾಧಿಕಾರಿ ಅಕ್ರಂಪಾಷ ಅವರೊಂದಿಗೆ ಕಂದಾಯ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿ ವರ್ಗದವರು ಸಂಪೂರ್ಣವಾಗಿ ಸಹಕಾರ ಮತ್ತು ಬೆಂಬಲ ನೀಡುವ ಮೂಲಕ ಕೋಲಾರ ಜಿಲ್ಲೆಯನ್ನು ಕರ್ನಾಟಕ ರಾಜ್ಯದ ಭೂಪಟದಲ್ಲಿ ಮಿಂಚುವಂತೆ ಮಾಡಿದ್ದಾರೆ.
45 ವಿಧವಾದ ಪ್ರಮಾಣ ಪತ್ರಗಳು ನೆಮ್ಮದಿ ಕೇಂದ್ರ( ಪ್ರಸ್ತುತ ಅಟಲ್ ಜನಸ್ನೇಹಿ ಕೇಂದ್ರ ಎಂದು ಖ್ಯಾತಿ ಹೊಂದಿದೆ) ಮೂಲಕ ವಿತರಿಸಲಾಗುತ್ತದೆ ಕಳೆದ ತಿಂಗಳಿನಲ್ಲಿ 30000ಕ್ಕೂ ಅಧಿಕ ಪ್ರಮಾಣಪತ್ರಗಳನ್ನು ನಿಗದಿತ ಸಮಯದಲ್ಲಿ ನೀಡುವ ಮೂಲಕ ಕೋಲಾರ ಜಿಲ್ಲಾಡಳಿತ ಗಮನ ಸೆಳೆದಿದೆ.
ಕರ್ನಾಟಕದಲ್ಲಿ 28ನೇ ಸ್ಥಾನದಲ್ಲಿದ್ದ ಕೋಲಾರ ಜಿಲ್ಲೆ ಕಾಲಕ್ರಮೇಣ 25, 20, 18, 15, 10, 5, ಇದೀಗ ಸತತವಾಗಿ ಎರಡು ತಿಂಗಳಿಂದ ಪ್ರಥಮ ಸ್ಥಾನವನ್ನು ಕಾಯ್ದರಿಸುವ ಮೂಲಕ ದಾಖಲೆ ಮಾಡಿದೆ.
ಸರ್ಕಾರಿ ಸೌಲಭ್ಯಗಳನ್ನು ಜನರಿಗೆ ಸಕಾಲದಲ್ಲಿ ಒದಗಿಸುವ ಮೂಲಕ ಜಿಲ್ಲಾಧಿಕಾರಿ ಅಕ್ರಂಪಾಷ ಅವರು ಅತ್ಯುತ್ತಮವಾಗಿ ಆಡಳಿತ ನಡೆಸುತ್ತಿದ್ದಾರೆ ಎಂಬುದಕ್ಕೆ ಇದು ಜೀವಂತ ನಿದರ್ಶನವಾಗಿದ್ದು ಸಾರ್ವಜನಿಕರು ಜಿಲ್ಲಾಧಿಕಾರಿಗಳು ಮತ್ತು ಕಂದಾಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗಗಳ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪುಣೆಯ ಭಾರತೀಯ ಜೈನ ಸಂಘಟನೆಯಿಂದ `ಬರಮುಕ್ತ ಕರ್ನಾಟಕ ಅಭಿಯಾನ’ ಕೆರೆಗಳ ಪುನರುಜ್ಜೀವನದೊಂದಿಗೆ ಜಲಕ್ರಾಂತಿಗೆ ಮುನ್ನುಡಿ -ಪೆಮ್ಮಶೆಟ್ಟಿಹಳ್ಳಿ ಸುರೇಶ್
ಕೋಲಾರ:- ಕೆರೆಗಳ ಪುನರುಜ್ಜೀವನದ ಮೂಲಕ ಬರಪೀಡಿತ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ವೃದ್ದಿಗೆ ಕೊಡುಗೆ ನೀಡಲು ಮುಂದಾಗಿರುವ ಪುಣೆಯ ಭಾರತೀಯ ಜೈನ ಸಂಘಟನೆ `ಬರಮುಕ್ತ ಕರ್ನಾಟಕ ಅಭಿಯಾನ’ ದಡಿ ಪೆಮ್ಮಶೆಟ್ಟಿಹಳ್ಳಿ ಕೆರೆ ಹೂಳೆತ್ತುವ ಕಾರ್ಯದ ಮೂಲಕವೇ ಜಲಕ್ರಾಂತಿಗೆ ಮುನ್ನುಡಿ ಇಟ್ಟಿದೆ ಎಂದು ಸೂಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್ ಧನ್ಯವಾದ ಸಲ್ಲಿಸಿದರು.
ಪುಣೆಯ ಭಾರತೀಯ ಜೈನ ಸಂಘಟನೆವತಿಯಿಂದ ತಾಲ್ಲೂಕಿನ ಪೆಮ್ಮಶೆಟ್ಟಿಹಳ್ಳಿಯಲ್ಲಿ ಊರ ಮುಂದಿನ ಕೆರೆಯಲ್ಲಿ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಭಾರತೀಯ ಜೈನ ಸಂಘಟನೆ ಕರ್ನಾಟಕ,ತಮಿಳುನಾಡು, ಛತ್ತೀಸ್ಘಡ್, ಮಧ್ಯಪ್ರದೇಶ, ಗುಜರಾತ್ ರಾಜ್ಯಗಳಲ್ಲಿ ಜಲಮೂಲಗಳ ಪುನಶ್ಚೇತನಕ್ಕೆ ಮುಂದಾಗಿದ್ದು, ತಮ್ಮ ಈ ಕಾರ್ಯವನ್ನು ಪೆಮ್ಮಶೆಟ್ಟಿಹಳ್ಳಿ ಮೂಲಕವೇ ಆರಂಭಿಸಿದೆ ಎಂದು ತಿಳಿಸಿದರು.
ಮಹಾವೀರರ ಅಹಿಂಸೆ ಹಾಗೂ ದಾನ ನೀಡುವ ಗುಣಕ್ಕೆ ಪ್ರಸಿದ್ದಿಯಾದ ಜೈನ ಸಂಘಟನೆ ಕೋಲಾರ ಜಿಲ್ಲೆಯ ನೀರಿನ ಜೀವಾಳವಾಗಿರುವ ಕೆರೆಗಳನ್ನು ಉಳಿಸುವ ಪ್ರಯತ್ನಕ್ಕೆ ಮುಂದಾಗಿದ್ದು, ಜಿಲ್ಲೆಯ 10 ಕೆರೆಗಳ ಹೂಳೆತ್ತುವ ಮೂಲಕ ತನ್ನ ಸಹಾಯಹಸ್ತ ಚಾಚಿದ್ದು, ಅದರಲ್ಲೂ ಮೊದಲನೆಯದಾಗ ನಮ್ಮೂರ ಕೆರೆಯನ್ನೇ ಆಯ್ಕೆ ಮಾಡಿಕೊಂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕೆರೆಗಳಲ್ಲಿ ಹೂಳೆತ್ತುವುದರಿಂದ ಮಳೆಗಾಲದಲ್ಲಿ ನೀರು ಹೆಚ್ಚು ನಿಲ್ಲುವುದರಿಂದ ಅಂತರ್ಜಲ ವೃದ್ದಿಗೆ ಸಹಕಾರಿಯಾಗಲಿದೆ ಎಂದ ಅವರು, ಕೆಸಿ ವ್ಯಾಲಿ ನೀರಿನಿಂದ ಜಿಲ್ಲೆಯ ಹಲವುಕೆರೆಗಳಿಗೆ ನೀರು ಹರಿದಿದ್ದರಿಂದಾಗಿ ಇದೀಗ ಸುತ್ತಮುತ್ತಲ ಪ್ರದೇಶಗಳಲ್ಲಿ ಕೊಳವೆ ಬಾವಿಗಳಲ್ಲಿ ನೀರು ಮರುಪೂರಣಗೊಂಡಿದೆ ಎಂದರು.
ಕೋಲಾರ ಜಿಲ್ಲೆಯನ್ನು ಕೆರೆಗಳ ತವರು ಎಂದೇ ಕರೆಯಲಾಗಿದೆ, ಇಲ್ಲಿ ಸಾವಿರಾರು ಕೆರೆಗಳಿದ್ದು, ಸರಪಳಿಯಂತೆ ಒಂದು ಕೆರೆಯಿಂದ ಮತ್ತೊಂದು ಕೆರೆಗೆ ನೀರು ಗುರುತ್ವಾಕರ್ಷಣೆ ಮೂಲಕವೇ ಹರಿದು ಹೋಗುವ ರೀತಿ ನಮ್ಮ ಪೂರ್ವಜರು ನಿರ್ಮಿಸಿದ್ದಾರೆ ಅವರ ಆಶಯಗಳ ಮಹತ್ವ ನಮಗೆ ಇಂದು ಅರಿವಾಗುತ್ತಿದೆ ಎಂದರು.
ನಮ್ಮ ಹಿರಿಯರು ಅತ್ಯಂತ ದೂರದೃಷ್ಟಿಯಿಂದ ನಿರ್ಮಿಸಿರುವ ಅಂತಹ ಕೆರೆಗಳು ಇಂದು ಹೂಳಿನಿಂದ ಭರ್ತಿಯಾಗಿವೆ, ಮಳೆ ಬಂದರೂ ನೀರಿನ ಸಂಗ್ರಹ ಸಾಮಥ್ರ್ಯ ಕಳೆದುಕೊಂಡಿದ್ದು, ಕೆಲವೇ ತಿಂಗಳಲ್ಲಿ ಒಣಗಿಹೋಗುತ್ತಿವೆ ಇಂತಹ ಸಂದರ್ಭದಲ್ಲಿ ಬರಪೀಡಿತ ಕೋಲಾರ ಜಿಲ್ಲೆಯ ಜನರ ನೆರವಿಗೆ ಬಂದಿರುವ ಜೈನ ಸಂಘಟನೆ ಮತ್ತಷ್ಟು ಕೆರೆಗಳ ಅಭಿವೃದ್ದಿಗೆ ನೆರವಾಗಲಿ ಎಂದು ಆಶಿಸಿದರು.
ಭಾರತೀಯ ಜೈನ್ ಸಂಘಟನೆಯ ಜಿಲ್ಲಾಧ್ಯಕ್ಷ ಜಯಂತಿಲಾಲ್ ಜೈನ್ ಮಾತನಾಡಿ, ಕೆರೆಯ ಹೂಳು ತೆಗೆಯುವ ಉದ್ದೇಶ ಜಲಮೂಲಗಳನ್ನು ಹೆಚ್ಚಿಸುವುದಾಗಿದ್ದು, ಇಂತಹ ಮಹತ್ಕಾರ್ಯವನ್ನು ನಾವು ಪೆಮ್ಮಶೆಟ್ಟಹಳ್ಳಿ ಗ್ರಾಮದ ಕೆರೆಯಿಂದ ಪ್ರಾರಂಭ ಮಾಡಿದ್ದು, ಕೆರೆಗಳ ಹೂಳು ತೆಗೆಯುವುದರಿಂದ ಮಳೆಗಾಲದಲ್ಲಿ ಹೆಚ್ಚು ನೀರು ಸಂಗ್ರಹವಾಗುವುದರಿಂದ ಅಂತರ್ಜಲಮಟ್ಟ ಹೆಚ್ಚಾಗಲಿದೆ. ಇದರಿಂದ ಸುತ್ತಮುತ್ತಲಿನ ಕೊಳವೆಬಾವಿಗಳು, ಕೈಪಂಪುಗಳು ಮತ್ತು ರೈತರ ಕೃಷಿಹೊಂಡಗಳಲ್ಲಿ ಅಂತರ್ಜಲ ವೃದ್ಧಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕೆರೆಗಳಲ್ಲಿನ ಹೂಳನ್ನು ರೈತರು ತಮ್ಮ ಹೊಲಗಳ ಅಭಿವೃದ್ಧಿಗಾಗಿ ತೆಗೆದುಕೊಂಡು ಹೋಗಲು ಸಹಕಾರ ನೀಡಿ, ಇದರಿಂದ ಮಣ್ಣಿನ ಫಲವತ್ತತೆಯೂ ಹೆಚ್ಚಲಿದೆ ಎಂದು ತಿಳಿಸಿ, ಕೆರೆಗಳ ಹೂಳೆತ್ತುವುದರಿಂದ ಕೃಷಿ ಮಾತ್ರವಲ್ಲ ಪ್ರಾಣಿಪಕ್ಷಿಗಳಿಗೂ ನಿರಂತರವಾಗಿ ಕುಡಿಯಲು ನೀರು ಸಿಗಲಿದೆ ಎಂದು ತಿಳಿಸಿದರು.
ಜೈನ ಸಂಘಟನೆ ಮತ್ತಷ್ಟು ಸಾಮಾಜಿಕ ಕಾರ್ಯಗಳಿಗೂ ಕೈಜೋಡಿಸಲಿದ್ದು, ಸಮುದಾಯದ ಜನತೆ ತಮ್ಮ ಆಧಾಯದ ಸ್ವಲ್ಪ ಭಾಗವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸುವ ಸಂಕಲ್ಪದೊಂದಿಗೆ ಸಂಘಟನೆ ಕಟ್ಟಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಜೈನ ಸಂಘಟನೆಯ ಮುಖಂಡರಾದ ಲಲಿತ್ಕುಮಾರ್ ಜೈನ್, ದಿಲೀಪ್ ಕುಮಾರ್ ಜೈನ್, ಜಿತೇಂದರ್, ಹೇಮಂತಕುಮಾರ್, ಸುನೀಲ್ ಜೈನ್, ಜಿಲ್ಲಾ ಯೋಜನಾ ಸಂಯೋಜಕ ಸುಭಾಷ್, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಬಾಲಾಜಿ, ಕಾರ್ಯದರ್ಶಿ ಶ್ರೀನಿವಾಸ್, ಗ್ರಾಮ ಪಂಚಾಯತ್ ಸದಸ್ಯರಾದ ಪದ್ಮ ಮುನೇಗೌಡ, ವಕೀಲ ಮುನಿರಾಜು, ಮಾಜಿ ಸದಸ್ಯ ಚಿನ್ನಸ್ವಾಮಿ, ಹಾಗೂ ಪೆಮ್ಮಶಟ್ಟಹಳ್ಳಿ ಗ್ರಾಮಸ್ಥರು ಭಾಗವಹಿಸಿದ್ದರು.