CONACT NO:8310329374
Day: April 20, 2024
34th Graduation Ceremony of Father Muller Homoeopathic Medical College & Hospital on 20.04.2024 / ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ 34ನೇ ಪದವಿ ಪ್ರದಾನ ಸಮಾರಂಭ
Mangluru: The 34th Graduation Ceremony of FMHMC was held on 20.04.2024 at 10.00am at Father Muller convention Centre Kankanady, Mangaluru.
The programme was initiated with the grandiose procession of graduates accompanied by the band and salutation with the guard of honour at the entrance of the Father Muller Convention Centre, Kankanady. The President of the programme Most Rev. Dr Peter Paul Saldanha, Bishop of Mangalore Diocese and President of FMCI, The Chief Guest, Prof (Dr) M S Moodithaya, Vice Chancellor, Nitte Deemed To Be University, Deralakatte, Rev. Fr Richard A. Coelho, Director, Father Muller Charitable Institutions, Rev. Fr Roshan Crasta, Administrator Father Muller Homoeopathic Medical College & Hospital, Rev. Fr Ashwin Crasta, Asst. Administrator Father Muller Homoeopathic Medical College & Hospital, Dr E.S.J. Prabhu Kiran, Principal Father Muller Homoeopathic Medical College, Vice Principal Dr Vilma Meera D’Souza, Medical Superintendent of Father Muller Homoeopathic Medical College Hospital Dr Girish Navada U.K., Convenor of Graduation Ceremony 2024 Dr Reshel Noronha, were offered a solemn welcome with traditional Poornakumbha.
The formal programme commenced by invoking the blessings of the almighty through a prayer song by the students of Father Muller Homoeopathic Medical College.
In his welcome speech, Director, Rev Fr Richard Aloysius Coelho rekindled the memorable journey of inception of Father Muller Charitable Institutions and also recalled how patient centric care takes into consideration the holistic approach in treatment of many ailments. Fr Richard also stated how innovativeness and traditional medicinal approaches are practiced hand in hand in our institutions.
Dr ESJ Prabhu Kiran, Principal, FMHMC then presented a descriptive Annual report of the activities of Father Muller Homoeopathic Medical College and Hospital for the academic year 2023-2024.
Graduands were honoured and certificates were conferred by the Chief Guest, Prof (Dr) M S Moodithaya , which was followed by the administration of the oath led by Principal, Dr ESJ Prabhu Kiran.
Chief Guest Prof (Dr) M S Moodithaya, Vice Chancellor, Nitte Deemed To Be University, Deralakatte in his message first of all congratulated the stars of today, the graduates and added that how lucky they are to be part of the most prosperous country in the world, reminded the 3 Cs of Success- Condition in which you are, Capacity you have and your Credibility. Sir also reminded the graduates to always remember the struggles of their Parents, teachers in shaping their future and wished all the best wishes for their bright future.
On behalf of the graduates, Dr Anagha K G expressed her gratitude to the Institutions.
The post graduates were honoured with their MD (Hom.) degree by Most Rev. Dr Peter Paul Saldanha, Bishop of Mangalore Diocese and President of FMCI
Total of 85 BHMS students graduated on this occasion and 25 Post Graduates were awarded with their MD (Hom) degree.
Bishop of Mangalore Diocese & President of FMCI honoured 7 UG rankholders declared by the Rajiv Gandhi University of Health Sciences, Karnataka for the Overall BHMS examinations conducted from September 2018 to October 2022.
‘Dr Sumod Jacob Solomon Award’ sponsored by 6th Batch of Mullerians for the Best Outgoing Postgraduate student of 2020-21 batch was awarded to Dr Meban Rani.
Father Muller Charitable Institutions President’s Gold Medal for the Best Outgoing Undergraduate student B.H.M.S. – 2018-19 Batch was awarded to Dr Deeksha Parvathi.
Award of Excellence for Undergraduates award was bagged Dr Shelcy Maria Sebastian and for post graduates for bagged by Dr Rushali Sudhir Gugaratti.
On this occasion, Dr Madona Joseph was honoured with a memento for her relentless services of 32 years at FMCI at various posts and at the end superannuating at Head OF Department of Forensic Medicine and Toxicology at FMHMC.
Prof (Dr) M S Moodithaya, Vice Chancellor, Nitte Deemed To Be University, Deralakatte, the Chief Guest of the programme was honoured by the President of FMCI, Most Rev Dr Peter Paul Saldanha.
Most Rev Dr Peter Paul Saldanha, Bishop of Mangaluru Diocese and President of Father Muller Charitable Institutions in his presidential address shared the sense of rejoicing felt by all today in the occasion of Graduation. It was also reminded the service of mankind into which today’s granduands are entering to , which makes them akin to the Supreme Power,with the motto of Heal and Comfort.
Rev Fr Richard Aloysius Coelho, Director, FMCI then honoured the President of the programme, Most Rev Dr Peter Paul Saldanha, Bishop of Mangaluru Diocese and President of Father Muller Charitable Institutions with the token of gratitude.
Rev. Fr Roshan Crasta, Administrator, FMHMC &H proposed the vote of thanks.The Graduation Ceremony concluded with institution anthem and recession of the graduates and dignitaries. Dr Jolly D’ Mello and Dr Manish Kumar compeered the graduation ceremony
A Thanksgiving Eucharistic celebration was offered by Rev. Fr Richard A. Coelho, Director, Father Muller Charitable Institutions at Our Lady of Lourdes Chapel, Deralakatte at 6.30 a.m. on the same day which was attended by Graduates, their parents and staff.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ 34ನೇ ಪದವಿ ಪ್ರದಾನ ಸಮಾರಂಭ
ಮಂಗಳೂರು: ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ಘಟಕವಾಗಿರುವ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ 34ನೇ ಪದವಿ ಪ್ರದಾನ ಸಮಾರಂಭವನ್ನು ದಿನಾಂಕ 20.04.2024 ರಂದು ಪೂರ್ವಾಹ್ನ 10.00 ಗಂಟೆಗೆ ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆಸಲಾಯಿತು.
ಸಮಾರಂಭದಲ್ಲಿ 85 ಪದವಿ ವಿದ್ಯಾರ್ಥಿಗಳಿಗೆ ಹಾಗೂ 25 ಸ್ನಾತಕೋತ್ತರ ಪದವೀದರರಿಗೆ ಪದವಿ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಲಾಯಿತು. ನಿಟ್ಟೆ ಡೀಮ್ಡ್ ಟು. ಬಿ. ಯುನಿವರ್ಸಿಟಿಯ ಉಪಕುಲಪತಿಗಳಾದ ಪೆÇ್ರ. ಡಾ. ಎಂ. ಎಸ್. ಮೂಡಿತ್ತಾಯರವರು ಮುಖ್ಯ ಅತಿಥಿಯಾಗಿ ಪದವೀಧರರಿಗೆ ಪ್ರಮಾಣ ಪತ್ರ ವಿತರಿಸಿದರು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಹಾಗೂ ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ಅಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಸಂಸ್ಥೆಯ ನಿರ್ದೇಶಕರಾದ ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು ಸಭೆಯನ್ನು ಸ್ವಾಗತಿಸಿ, ಪದವಿ ಸ್ವೀಕರಿಸುವ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಫಾದರ್ ಮುಲ್ಲರ್ ಸಂಸ್ಥೆಯ ಚರಿತ್ರೆಯೊಂದಿಗೆ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸಾಧನೆಯನ್ನು ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಇ.ಎಸ್.ಜೆ. ಪ್ರಭು ಕಿರಣ್ ರವರು ವಾರ್ಷಿಕ ವರದಿಯಲ್ಲಿ 2023-24ರಲ್ಲಿ ಕಾಲೇಜಿನಲ್ಲಿ ನಡೆದ ಚಟುವಟಿಕೆಗಳನ್ನು ಪ್ರಸ್ತುತಪಡಿಸಿದರು ಮತ್ತು ಪದವಿ ಸ್ವೀಕರಿಸಿದ ಹೋಮಿಯೋಪಥಿ ವೈದ್ಯರ ಪ್ರಮಾಣವಚನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಮುಖ್ಯ ಅತಿಥಿಗಳಾದ ಪೆÇ್ರ. ಡಾ. ಎಂ. ಎಸ್. ಮೂಡಿತ್ತಾಯ ಯು.ಜಿ. ಪದವೀದರರನ್ನು ಪದವಿಯೊಂದಿಗೆ ಸನ್ಮಾನಿಸಿದರು. ತಮ್ಮ ಸಂದೇಶದಲ್ಲಿ ಪದವೀದರರನ್ನು ಅಭಿನಂದಿಸಿ, ಪ್ರಪಂಚದ ಅತ್ಯಂತ ಶ್ರೀಮಂತ ದೇಶದೊಂದಿಗೆ ಭಾಗಿಯಾಗುವುದು ನಿಮ್ಮ ಅದೃಷ್ಟವೆಂದು ಹೊಗಳಿದರು. ತಮ್ಮ ಜೀವನದಲ್ಲಿ ಯಶಸ್ವಿಯಾಗಲು ‘ಸ್ಥಿತಿ’, ‘ಸಾಮರ್ಥ್ಯ’ ಹಾಗೂ ‘ವಿಶ್ವಾಸಾರ್ಹತೆ’ ಎಂಬ 3 ‘ಅ’ ಗಳನ್ನು ವಿವರಿಸಿ, ಇಂದು ತಮಗೆ ದೊರೆತಿರುವ ಅತೀ ಶಕ್ತಿಯುತ ಪದವಿಯೊಂದಿಗೆ ತಮ್ಮ ವೈದ್ಯಕೀಯ ಜೀವನದಲ್ಲಿ ಮುನ್ನಡೆಯುವಂತೆ ಹುರಿದುಂಬಿಸಿದರು ಹಾಗೂ ಹೆತ್ತವರು ಹಾಗೂ ಶಿಕ್ಷಕರು ನಿಮ್ಮ ಭವಿಷ್ಯವನ್ನು ನಿರೂಪಿಸುವಲ್ಲಿ ಪಟ್ಟ ಶ್ರಮವನ್ನು ಎಂದಿಗೂ ನೆನಪಿಸುವಂತೆ ಒತ್ತಿ ಹೇಳಿದರು.
ಪದವೀದರರ ಪರವಾಗಿ ಡಾ. ಅನಘಾ ಕೆ. ರವರು ಪ್ರತಿಕ್ರಿಯೆಯನ್ನು ವ್ಯಕ್ತ ಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹರವರು ಸ್ನಾತಕೋತ್ತರ ಪದವೀದರರನ್ನು ಸನ್ಮಾನಿಸಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಘೋಷಿಸಿದ 2017-18 ಸಾಲಿನ 7 ಪದವಿ ರ್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಸ್ಮರಣಿಕೆಯೊಂದಿಗೆ ಗೌರವಿಸಿದರು. ಇದೇ ಸಂದರ್ಭದಲ್ಲಿ ಸಪ್ಟೆಂಬರ್ 2018 ರಿಂದ ಜೂನ್ 2022 ವರೆಗಿನ ಎಲ್ಲಾ ರ್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹರವರು ಪ್ರತಿಷ್ಠಿತ ಅಧ್ಯಕ್ಷೀಯ ಚಿನ್ನದ ಪದಕವನ್ನು ಅತ್ಯುತ್ತಮ ಸಾಧನೆ ಮಾಡಿದ ಹೋಮಿಯೋಪಥಿ ಪದವಿ ವಿದ್ಯಾರ್ಥಿನಿ ಡಾ. ದೀಕ್ಷಾ ಪಾರ್ವತಿ ರವರಿಗೆ ಹಾಗೂ ಶ್ರೇಷ್ಠ ವಿದ್ಯಾರ್ಥಿ ಪ್ರಶಸ್ತಿಯನ್ನು ಡಾ. ಶೆಲ್ಸಿ ಮರಿಯಾ ಸೆಬಾಸ್ಟಿಯನ್ರವರಿಗೆ ನೀಡಿ ಗೌರವಿಸಿದರು.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ವಂದನೀಯ ರೋಶನ್ ಕ್ರಾಸ್ತಾ ರವರು ಪ್ರಾಯೋಜಿಸಿದ ಪ್ರಶಸ್ತಿಯನ್ನು 2020-21 ಬ್ಯಾಚ್ ಹೋಮಿಯೋಪಥಿ ಸ್ನಾತಕೋತ್ತರ ವಿಭಾಗದಲ್ಲಿ ಅತ್ಯುತ್ತಮ ಸಾಧನೆಗೈದ ಡಾ. ರುಶಾಲಿ ಸುದೀರ್ ಗುಗರಟ್ಟಿ ರವರಿಗೆ ಹಾಗೂ 6ನೇ ಮುಲ್ಲೇರಿಯನ್ ಬ್ಯಾಚ್ ಪ್ರಾಯೋಜಿಸಿದ ‘ಡಾ. ಸುಮೊದ್ ಜಾಕೊಬ್ ಸೊಲೊಮನ್ ಪ್ರಶಸ್ತಿ’ಯನ್ನು 2020-21 ಬ್ಯಾಚ್ ಹೋಮಿಯೋಪಥಿ ಸ್ನಾತಕೋತ್ತರ ವಿಭಾಗದ ಬೆಸ್ಟ್ ಔಟ್ ಗೋಯಿಂಗ್ ವಿದ್ಯಾರ್ಥಿ ಡಾ. ಮೆಬಾನ್ ಪಿ. ರಾನಿ ರವರಿಗೆ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಫಾದರ್ ಮುಲ್ಲರ್ ಹೋಮಿಯೋಪಥಿ ಕಾಲೇಜಿನ ಫೆÇರೆನ್ಸಿಕ್ ಮೆಡಿಸನ್ ಮತ್ತು ಟಾಕ್ಸಿಕಾಲಜಿ ವಿಭಾಗದ ಮುಖ್ಯಸ್ಥೆಯಾಗಿ 32 ವರ್ಷ ಸೇವೆ ಸಲ್ಲಿಸಿದ ಡಾ. ಮೆಡೊನಾ ಜೋಸೆಫ್ ಅವರಿಗೆ ಸಂಸ್ಥೆಯ ಪರವಾಗಿ ಬಿಷಪ್ ಅವರು ಸನ್ಮಾನಿಸಿದರು.
ಮುಖ್ಯ ಅತಿಥಿಗಳಾದ ಪೆÇ್ರ. ಡಾ. ಎಂ. ಎಸ್. ಮೂಡಿತ್ತಾಯ ರವರನ್ನು ಬಿಷಪ್ರವರು ಸ್ಮರಣಿಕೆ ನೀಡಿ ಗೌರವಿಸಿದರು.
ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪದವೀಧರರನ್ನು ಅಭಿನಂದಿಸಿ, ಇಂದು ಪದವಿ ಪ್ರದಾನ ಸಂದರ್ಭದಲ್ಲಿ ಎಲ್ಲರೂ ಅನುಭವಿಸುತ್ತಿರುವ ಸಂತಸವನ್ನು ಹಂಚಿಕೊಂಡರು. ‘ಗುಣಪಡಿಸು’ ಮತ್ತು ‘ಸಾಂತ್ವನಿಸು’ ಎಂಬ ಸಂಸ್ಥೆಯ ಧ್ಯೇಯ ವಾಕ್ಯದೊಂದಿಗೆ ಇಂದಿನ ಪದವೀದರರು ಪ್ರವೇಶಿಸುತ್ತಿರುವ ಮನಕುಲದ ಸೇವೆಯನ್ನು ನೆನಪಿಸಿದರು.
ಸಂಸ್ಥೆಯ ನಿರ್ದೇಶಕರಾದ ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು ಬಿಷಪ್ ರವರನ್ನು ಸ್ಮರಣಿಕೆ ನೀಡಿ ಗೌರವಿಸಿದರು.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ವಂದನೀಯ ರೋಶನ್ ಕ್ರಾಸ್ತಾರವರು ವಂದನಾರ್ಪಣೆಗೈದರು.
ಡಾ. ಜೋಲಿ ಡಿ’ಮೆಲ್ಲೊ ಹಾಗೂ ಡಾ. ಮನಿಷ್ ಕೆ. ತಿವಾರಿ ರವರು ಪದವಿ ಪ್ರದಾನ ಕಾರ್ಯಕ್ರಮವನ್ನು ನಿರೂಪಿಸಿದರು.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಉಪ ಆಡಳಿತಾಧಿಕಾರಿಗಳಾದ ವಂದನೀಯ ಅಶ್ವಿನ್ ಕ್ರಾಸ್ತ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ವಿಲ್ಮಾ ಮೀರಾ ಡಿ’ಸೋಜ, ಹೋಮಿಯೋಪಥಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಗಿರೀಶ್ ನಾವಡ ಯು.ಕೆ., ಹಾಗೂ ಕಾರ್ಯಕ್ರಮದ ಸಂಯೋಜಕರಾದ ಡಾ. ರೇಶಲ್ ನೊರೊನ್ಹರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೇಡಿಯೋ ಕುಂದಾಪ್ರದ ಮೂಲಕ ಚುನಾವಣಾ ಮಾಹಿತಿ : ಶೇಕಡಾ 100 ಗುರಿ – ಕೆ. ವಿದ್ಯಾಕುಮಾರಿ
ಕುಂದಾಪ್ರ : “ಪ್ರತಿಯೊಬ್ಬ ಮತದಾರ ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ಮತದಾನ ಮಾಡುವ ಮೂಲಕ ಈ ಪ್ರಜಾಪ್ರಭುತ್ವದ ಹಬ್ಬ ಯಶಸ್ವಿಯಾಗಿ ನಡೆಯುವಂತೆ ಪ್ರಯತ್ನ ನಡೆಸಲಾಗಿದೆ” ಎಂದು ಉಡುಪಿ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಹೇಳಿದರು.
ಭಂಡಾರ್ಕಾರ್ಸ್ ಕಾಲೇಜಿನ ರೇಡಿಯೋ ಕುಂದಾಪ್ರ ಮೂಲಕ ಮತದಾರರಿಗೆ ಚುನಾವಣಾ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಅವರು ಜಿಲ್ಲೆಯ ಮತದಾರರು ಎ. 26 ರಂದು ಮತದಾನದಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
“ಚುನಾವಣಾ ನೀತಿ ಸಂಹಿತೆ, ಚುನಾವಣಾ ಸಿದ್ದತೆ, ಅಕ್ರಮ ಚಟುವಟಿಕೆ, ಮತದಾರರಿಗೆ ಆಮಿಷ ನೀಡುವ ಪ್ರಯತ್ನಗಳ ನಿಯಂತ್ರಣ ಬಗ್ಗೆ ಅವರು ವಿವರ ನೀಡಿದರು. ಜನ ಸಾಮಾನ್ಯರು ಸಿ-ವಿಜಿಲ್ ಆ್ಯಫ್ ಮೂಲಕ ಚುನಾವಣಾ ಆಕ್ರಮಗಳ ವಿವರ ನೀಡಬಹುದು” ಎಂದ ಅವರು ದೂರುದಾರರ ಮಾಹಿತಿ ಗೋಪ್ಯವಾಗಿಡಲಾಗುತ್ತದೆ ಎಂದು ತಿಳಿಸಿದರು.
“ಮತಗಟ್ಟೆಗೆ ಬರಲಾಗದ ವಯಸ್ಕರಿಗೆ ಮನೆಯಲ್ಲೇ ಮತದಾನ ನಡೆದಿದೆ. ಮತಗಟ್ಟೆಯಲ್ಲಿ ಅಂಗವಿಕಲಕರಿಗೆ, ಹಿರಿಯ ನಾಗರಿಕರಿಗೆ ಅಗತ್ಯ ವ್ಯವಸ್ಥೆ ಇದೆ. ಮಹಿಳೆಯರಿಗಾಗಿಯೇ “ಸಖಿ” ಬೂತ್ಗಳನ್ನು ಪ್ರತೀ ತಾಲೂಕಿನ ಐದು ಕಡೆ ರೂಪಿಸಲಾಗುತ್ತಿದೆ. ಪ್ರತಿಯೊಬ್ಬರೂ ಮತದಾನ ಮಾಡಲು ಎಲ್ಲ ರೀತಿಯ ವ್ಯವಸ್ಥೆ ಇದೆ” ಎಂದರು.
ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್ ಮಾತನಾಡಿ, “ಕಳೆದ ಚುನಾವಣೆಯಲ್ಲಿ ಪಾಲ್ಗೊಳ್ಳದ ಮತದಾರರ ಬಗ್ಗೆ ವಿವರ ಪಡೆದು ಅವರು ಈ ಚುನಾವಣೆಯಲ್ಲಿ ತಪ್ಪದೇ ಭಾಗವಹಿಸುವಂತೆ ಪ್ರೇರಣೆ ನೀಡುವ ಕಾರ್ಯ “ಸ್ವೀಪ್” ತಂಡ ಮಾಡುತ್ತಿದೆ. ಬೇರೆ ಬೇರೆ ಕಾರಣದಿಂದ ಊರಲ್ಲಿ ಇರಲಾಗದ ಮತದಾರರನ್ನು ಹೊರತು ಪಡಿಸಿ, ಊರಲ್ಲೇ ಇರುವ ಮತದಾರರೆಲ್ಲರೂ ಮತದಾನದಲ್ಲಿ ಭಾಗವಹಿಸುವಂತೆ ಪ್ರೇರೇಪಿಸುತ್ತಿದ್ದೇವೆ. ಪರವೂರಲ್ಲಿರುವ ಊರಿನ ಮತದಾರರು ಆ ದಿನ ಮತದಾನಕ್ಕೆ ಆಗಮಿಸುವಂತೆ ಕರೆ ನೀಡುತ್ತಿದ್ದೇವೆ. ಹಲವಾರು ಸಂಘ ಸಂಸ್ಥೆಗಳ ಮೂಲಕ ವೈವಿಧ್ಯಮಯ ರೀತಿಯಲ್ಲಿ ಮತದಾರರನ್ನು ಆಕರ್ಷಿಸುವ ಕಾರ್ಯಕ್ರಮ ಜಿಲ್ಲೆಯಲ್ಲಿ ನಡೆಸಲಾಗಿದೆ” ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಮಾತನಾಡಿ, “ಚುನಾವಣಾ ಕಾಲದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಭದ್ರತಾ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಪಾರದರ್ಶಕವಾಗಿ ಮುಕ್ತ ವಾತಾವರಣ ಚುನಾವಣೆ ನಡೆಯಲಿದೆ. ಏನಾದರೂ ಸಾರ್ವಜನಿಕ ಸಮಸ್ಯೆ ಇದ್ದರೆ 112ಗೆ ಮಾಹಿತಿ ನೀಡುವ ಮೂಲಕ ತಿಳಿಸಬಹುದು” ಎಂದರು.
ಕುಂದಾಪುರ ಸಹಾಯಕ ಆಯುಕ್ತರಾದ ರಶ್ಮೀ ಎಸ್. ಆರ್., ತಹಶೀಲ್ದಾರ್ ಶೋಭಾಲಕ್ಷ್ಮೀ, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಶಶಿಧರ, ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ, ಮುಂತಾದವರಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲ್ಲಾಧಿಕಾರಿಗಳಿಗೆ ಭಂಡಾರ್ಕಾರ್ಸ್ ಕಾಲೇಜಿನ ಟ್ರಸ್ಟಿ ಯು.ಎಸ್.ಶೆಣೈ, ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಬಿ. ಲಲಿತಾದೇವಿ, ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ ಗೌರವಿಸಿದರು.
ಪತ್ರಿಕೋದ್ಯಮ ವಿಭಾಗದ ಸುಮಲತಾ ಹಾಗೂ ಕಂಪ್ಯೂಟರ್ ಸಾಯನ್ಸ್ ವಿಭಾಗದ ಮುಕುಂದ ಭಟ್ ಸಹಕರಿಸಿದರು.
“ರೇಡಿಯೋ ಕುಂದಾಪ್ರ” ನಿರ್ವಾಹಕಿ ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು.
ಮಂಗಳೂರು: ಇಯಾನ್ ಕೇರ್ಸ್ ಪ್ರತಿಷ್ಠಾನದ ವಿಶೇಷ ಪ್ರಕಾಶನ ‘ಅನ್ನಾಸ್ ಕಿಚನ್’ ಬಿಡುಗಡೆ / Mangaluru: Special publication ‘Anna’s Kitchen’ from Ian Cares Foundation released
ಮಂಗಳೂರು, ಎ.6: ಮನೆಗಳು ಮತ್ತು ರೆಸ್ಟೊರೆಂಟ್ಗಳ ಅಡುಗೆ ಮನೆಗಳ ಜನಪ್ರಿಯ ಮತ್ತು ವಿನೂತನ ಪಾಕವಿಧಾನಗಳನ್ನು ಒಳಗೊಂಡ ಇಯಾನ್ ಕೇರ್ಸ್ ಫೌಂಡೇಶನ್ನ ವಿಶೇಷ ಪ್ರಕಟಣೆಯಾದ ಅನ್ನಾಸ್ ಕಿಚನ್ ಅನ್ನು ಅತ್ಯುತ್ತಮವಾಗಿ ಮಾರಾಟವಾಗುವ ಪುಸ್ತಕಗಳ ಲೇಖಕಿ ಜಿಸೆಲ್ ಮೆಹ್ತಾ ಅವರು ಶನಿವಾರ, ಏಪ್ರಿಲ್ 6 ರಂದು ಬಿಡುಗಡೆ ಮಾಡಿದರು.
ಖ್ಯಾತ ಅಡುಗೆ ತಜ್ಞ ಹಾಗೂ ಸಮಾಜ ಸೇವಕ ದಿವಂಗತ ಅನ್ನಾ ಮಸ್ಕರೇನ್ಹಸ್ ಅವರ ಜನ್ಮದಿನದಂದು ನಡೆದ ಕಾರ್ಯಕ್ರಮದಲ್ಲಿ ಬೋಂದೆಲ್ ಸೇಂಟ್ ಲಾರೆನ್ಸ್ ಚರ್ಚ್ ನ ಧರ್ಮಗುರು ಫಾವೊಸ್ತಿನ್ ಲೋಬೊ ಗೌರವ ಅತಿಥಿಗಳಾಗಿ.ಡೈಜಿವರ್ಲ್ಡ್ ಮೀಡಿಯಾದ ಸಂಸ್ಥಾಪಕ ವಾಲ್ಟರ್ ನಂದಳಿಕೆ ಅಧ್ಯಕ್ಷತೆ ವಹಿಸಿದ್ದರು.
ಜಿಸೆಲ್ ಮೆಹ್ತಾ ಅವರು ಸ್ಟೀಫನ್ ಮಸ್ಕರೇನ್ಹಸ್ ಮತ್ತು ಅನ್ನಾ ಮಸ್ಕರೇನ್ಹಸ್ ಅವರ ಕನಸನ್ನು ನನಸಾಗಿಸುವ ಪಾಕವಿಧಾನ ಪುಸ್ತಕವನ್ನು ಪ್ರಕಟಿಸುವಲ್ಲಿನ ಅವರ ಪ್ರಯತ್ನಗಳಿಗಾಗಿ ಇಯಾನ್ ಕೇರ್ಸ್ ಫೌಂಡೇಶನ್ನ ಆಡಳಿತವನ್ನು ಶ್ಲಾಘಿಸಿದರು. ಅವರು, “ಪಾಕಶಾಲೆಯ ಪರಿಣತಿಯು ನಿಜವಾಗಿಯೂ ಗಮನಾರ್ಹವಾದ ಪ್ರತಿಭೆಯಾಗಿದ್ದು ಅದು ವೈವಿಧ್ಯಮಯ ಕೌಶಲ್ಯಗಳು, ಜ್ಞಾನ ಮತ್ತು ಸೃಜನಶೀಲತೆಯನ್ನು ಒಳಗೊಂಡಿದೆ. ಇದು ರುಚಿ ಮೊಗ್ಗುಗಳನ್ನು ಕೆರಳಿಸುವ ಮತ್ತು ಇಂದ್ರಿಯಗಳನ್ನು ಆನಂದಿಸುವ ಸೊಗಸಾದ ಭಕ್ಷ್ಯಗಳಾಗಿ ಮೂಲಭೂತ ಪದಾರ್ಥಗಳನ್ನು ಕೌಶಲ್ಯಪೂರ್ಣವಾಗಿ ಪರಿವರ್ತಿಸುವುದನ್ನು ಒಳಗೊಂಡಿರುತ್ತದೆ. ಸುವಾಸನೆಯ ಪ್ರೊಫೈಲ್ಗಳು, ಅಡುಗೆ ತಂತ್ರಗಳು ಮತ್ತು ಆಹಾರ ಪ್ರಸ್ತುತಿಗಳ ತಿಳುವಳಿಕೆ, ಕ್ರಾಫ್ಟ್ಗೆ ಅವರ ಉತ್ಸಾಹ ಮತ್ತು ಸಮರ್ಪಣೆಯನ್ನು ಪ್ರತಿಬಿಂಬಿಸುವ ಪಾಕಶಾಲೆಯ ಮೇರುಕೃತಿಗಳನ್ನು ರಚಿಸಲು ಅವರಿಗೆ ಅನುವು ಮಾಡಿಕೊಡುತ್ತದೆ, ಇದು ಹೆಸರಾಂತ ಬಾಣಸಿಗರು ಮತ್ತು ಪಾಕಶಾಲೆಯ ಪರಿಣಿತರಿಂದ ಸಂಗ್ರಹಿಸಲ್ಪಟ್ಟಿದೆ ನಮ್ಮ ಅಡುಗೆಮನೆಗಳಲ್ಲಿ ಮೇಡಮ್ ಅನ್ನಾ ಮಸ್ಕರೇನ್ಹಸ್ ಅವರ ಅನೇಕ ಪಾಕವಿಧಾನಗಳನ್ನು ಸ್ವತಃ ರಚಿಸಿದ್ದಾರೆ.
ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ವಾಲ್ಟರ್ ನಂದಳಿಕೆ ಅವರು, “ಅನ್ನಾ ಮಸ್ಕರೇನ್ಹಸ್ ಅವರು ಡೈಜಿವರ್ಲ್ಡ್ ನ್ಯೂಸ್ ಪೋರ್ಟಲ್ನ ಪಾಕಶಾಲೆಯ ಅಂಕಣಕಾರರ ಪ್ರಾರಂಭಿಕರಾಗಿದ್ದರು, ಅಲ್ಲಿ ಅವರು ತಮ್ಮದೇ ಆದ ಮೀಸಲಾದ ಅಭಿಮಾನಿ ಬಳಗವನ್ನು ಗಳಿಸಿದರು. ಅನ್ನಾ ಬಾಯಿ ಅವರ ಸಹಾನುಭೂತಿ ಮತ್ತು ಸೇವೆಯ ಪ್ರಯಾಣವು ಪ್ರತಿಯೊಬ್ಬ ವ್ಯಕ್ತಿಯೂ ಸರಳವಾದ ಆದರೆ ಆಳವಾದ ನಂಬಿಕೆಯೊಂದಿಗೆ ಪ್ರಾರಂಭವಾಯಿತು. ಅವರ ಹಿನ್ನೆಲೆ ಅಥವಾ ಸಂದರ್ಭಗಳನ್ನು ಲೆಕ್ಕಿಸದೆ, ತನ್ನ ಜೀವನದುದ್ದಕ್ಕೂ ಘನತೆ, ಗೌರವ ಮತ್ತು ಅವಕಾಶಕ್ಕೆ ಅರ್ಹರು, ಅನ್ನಾ ಬಾಯಿ ಇತರರ ದುಃಖವನ್ನು ನಿವಾರಿಸಲು ಅಪ್ರತಿಮ ಸಮರ್ಪಣೆಯನ್ನು ಪ್ರದರ್ಶಿಸಿದರು, ಆದರೆ ಬಹುಶ ಇದು ಅನ್ನಾ ಬಾಯಿಯ ಪರಂಪರೆಯು ಭರವಸೆಯ ದಾರಿದೀಪವಾಗಿದೆ. ಕತ್ತಲೆಯ ಸಮಯದಲ್ಲಿಯೂ ಸಹ, ಅವರಂತಹ ವ್ಯಕ್ತಿಗಳು ಅತ್ಯುತ್ತಮವಾದ ಮಾನವೀಯತೆಯನ್ನು ಸಾಕಾರಗೊಳಿಸುತ್ತಾರೆ ಮತ್ತು ಉತ್ತಮವಾದ, ಹೆಚ್ಚು ನ್ಯಾಯಯುತವಾದ ಜಗತ್ತಿಗೆ ಶ್ರಮಿಸಲು ನಮ್ಮನ್ನು ಪ್ರೇರೇಪಿಸುತ್ತಾರೆ.
ಫಾದರ್ ಆಂಡ್ರ್ಯೂ ಲಿಯೋ ಮತ್ತು ಫಾವೊಸ್ತಿನ್ ಲೋಬೋ ಅವರು ಇಯಾನ್ ಕೇರ್ಸ್ ಫೌಂಡೇಶನ್ನ ಸೇವೆ ಮತ್ತು ಅನ್ನಾಸ್ ಕಿಚನ್ ಬಿಡುಗಡೆಯ ಹಿಂದಿನ ಉದ್ದೇಶಗಳನ್ನು ಶ್ಲಾಘಿಸಿದರು.
ಇಯಾನ್ ಕೇರ್ಸ್ ಫೌಂಡೇಶನ್ನ ಸಂಸ್ಥಾಪಕ ಸ್ಟೀಫನ್ ಮಸ್ಕರೇನ್ಹಸ್ ಅವರು ಅನ್ನಾಸ್ ಕಿಚನ್ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡರು ಮತ್ತು ಪುಸ್ತಕ ರಚನೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ಅನ್ನಾ ಮಸ್ಕರೇನಸ್ ಅವರ ಪುತ್ರಿ ಇನಾ ಮಸ್ಕರೇನಸ್ ಸ್ವಾಗತಿಸಿದರು. ಹೇರಾ ಪಿಂಟೋ ಕಾರ್ಯಕ್ರಮ ನಿರೂಪಿಸಿದರು.
Mangaluru: Special publication ‘Anna’s Kitchen’ from Ian Cares Foundation released
Mangaluru, Apr 6: Anna’s Kitchen, a special publication from the Ian Cares Foundation, featuring popular and innovative recipes from homes and restaurant kitchens, was launched by Giselle Mehta, the celebrated author of best-selling books, on Saturday, April 6.
The event, held on the birthday of the late Anna Mascarenhas, a renowned culinary expert and social worker, was graced by Fr Andrew Leo D’Souza, parish priest of St Lawrence Church, Bondel, and Fr Faustine Lobo, parish priest of Kinnigoli Church, as guests of honour. Walter Nandalike, founder of Daijiworld Media, presided over the event.
Giselle Mehta commended Stephan Mascarenhas and the management of the Ian Cares Foundation for their efforts in publishing a recipe book, fulfilling the dream of Anna Mascarenhas. She remarked, “Culinary expertise is truly a remarkable talent that encompasses a diverse range of skills, knowledge, and creativity. It involves the skillful transformation of basic ingredients into exquisite dishes that tantalize the taste buds and delight the senses. Culinary experts possess a profound understanding of flavor profiles, cooking techniques, and food presentation, enabling them to create culinary masterpieces that reflect their passion and dedication to the craft. Anna’s Kitchen features delicious recipes curated by renowned chefs and culinary experts. Through this book, we can feel the presence of Madam Anna Mascarenhas in our kitchens, where she herself crafted many of her own recipes.”
In his presidential address, Walter Nandalike said, “Anna Mascarenhas was the inaugural culinary columnist of the Daijiworld news portal, where she garnered her own dedicated fan base. Anna Bai’s journey of compassion and service began with a simple yet profound belief that every individual, regardless of their background or circumstances, deserves dignity, respect, and opportunity. Throughout her life, Anna Bai demonstrated an unparalleled dedication to alleviating the suffering of others. But perhaps most importantly, Anna Bai’s legacy serves as a beacon of hope – a reminder that even in the darkest of times, there are individuals like her who embody the very best of humanity and inspire us to strive for a better, more just world.”
Fr Andrew Leo and Fr Faustine Lobo commended the service of the Ian Cares Foundation and the objectives behind the release of Anna’s Kitchen.Stephan Mascarenhas, founder of the Ian Cares Foundation, shared his thoughts on Anna’s Kitchen and expressed gratitude to all those who contributed to the book’s creation. Ina Mascarenhas, daughter of Anna Mascarenhas, welcomed the gathering. Hera Pinto compered the event.
Copies available at –
Daijiworld corporate office Mangalore, Jerosa company, Gem & Co. Sisters of St Paul, Sapna Book House, infant Jesus Shrine bikarnakatte, Nava Karnataka Book Store Balmatta, School book company car street & Hampankatta
ಸಂತ ಅಂತೋನಿ ಚರ್ಚ್ ಪಡುಕೋಣೆ – ಬೇಸಿಗೆ ಶಿಬಿರ
ಪಡುಕೋಣೆ: ಎ.18 ರಂದು ಸಂತ ಅಂತೋನಿ ಚರ್ಚ್ ಪಡುಕೋಣೆಯಲ್ಲಿ 15 ರಿಂದ 17 ರ ತನಕ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಗಿತ್ತು. ಶಿಬಿರದಲ್ಲಿ ಮೂರನೇ ತರಗತಿಯಿಂದ ಹತ್ತನೇ ತರಗತಿಯ ಅರವತ್ತು ಮಕ್ಕಳು ಭಾಗವಹಿಸಿದ್ದರು, ಸಂಪನ್ಮೂಲ ವ್ಯಕ್ತಿಯಾಗಿ ಬ್ರ,ಶೋನ್, ಬ್ರ.ಕೆವಿನ್, ಬ್ರ.ಅನಿಲ್ ಮಕ್ಕಳಿಗೆ ಪ್ರಾರ್ಥನೆ ಎಂದರೇನು? ಹೇಗೆ ಪ್ರಾರ್ಥಿಸಬೇಕು? ಅದರ ಮಹತ್ವ ಹಾಗೂ ಬೈಬಲ್ ಮಾಹಿತಿಯನ್ನು ವಿವಿಧ ಚಟುವಟಿಕೆಗಳ ಮೂಲಕ ಪರಿಚಯಿಸಿದರು , ಮಕ್ಕಳಲ್ಲಿ ಆತ್ಮವಿಶ್ವಾಸ, ಮುಂದಾಳತ್ವ, ಕ್ರಿಯಾಶೀಲತೆಯನ್ನು ಹೆಚ್ಚಿಸಿದರು.
ಶಿಬಿರದ ಮುಂದಾಳತ್ವವನ್ನು ಚರ್ಚಿನ ಧರ್ಮಗುರು ವಂದನೀಯ ಫ್ರಾನ್ಸಿಸ್ ಕರ್ನೇಲಿಯೊ ವಹಿಸಿದ್ದರು. ಪಾಲನಾ ಮಂಡಳಿ ಉಪಾಧ್ಯಕ್ಷ ಕೆನಡಿ ಪಿರೇರಾ, ಕಾರ್ಯದರ್ಶಿ ಅಲೆಕ್ಸ್ ಆಂಟನಿ ಡಿಸೋಜ ಆಯೋಗಗಳ ಸಂಯೋಜಕ ವಿನ್ಸೆಂಟ್ ಡಿಸೋಜ, ಧರ್ಮ ಭಗಿನೀಯರು , ಶಿಕ್ಷಕರು ಸಹಕರಿಸಿದರು. ಒಟ್ಟಾರೆಯಾಗಿ ಮೂರು ದಿನಗಳ ಚೇಸಿಗೆ ಶಿಬಿರವು ಮಕ್ಕಳಿಗೆ ಪರಿಣಾಮವಾಗಿ ಮೂಡಿಬಂತು.
ಸುಡು ಬಿಸಿಲಿನಲ್ಲಿ ಕಾರ್ಯ ನಿರ್ವಹಿಸುವ ಸಂಚಾರಿ ಪೊಲೀಸರಿಗೆ ಎಸಿ ಹೆಲ್ಮೆಟ್ ಭಾಗ್ಯ
ಗಾಂಧಿನಗರ: ಬಿಸಿಲಿನ ತಾಪಕ್ಕೆ ಬೇಸತ್ತು ಗುಜರಾತಿನ ವಡೋದರಾ ಸಂಚಾರಿ ಪೊಲೀಸರು ಎಸಿ ಹೆಲ್ಮೆಟ್ನ್ನು ಕಂಡುಕೊಂಡಿದ್ದಾರೆ.. ಗುಜರಾತ್ ಪೊಲೀಸ್ ಇಲಾಖೆ ಸಂಚಾರಿ ಪೊಲೀಸರಿಗೆ ವಿಶೇಷ ಹವಾನಿಯಂತ್ರಿತ ಹೆಲ್ಮೆಟ್ ಗಳನ್ನು ಪರಿಚಯಿಸಿದೆ.
ಈ ಹೆಲ್ಮೆಟ್ 40-42 ಡಿಗ್ರಿ ಸೆಲ್ಸಿಯಸ್ನ ಗರಿಷ್ಠ ತಾಪಮಾನದಲ್ಲಿ ಬಿಸಿಲಿನಲ್ಲಿ ಕಾರ್ಯನಿರ್ವಹಿಸುವ ಸಂಚಾರಿ ಪೊಲೀಸರಿಗೆ ತಣ್ಣನೆಯ ಅನುಭವ ನೀಡಲಿದೆ. ಈ ಹೆಲ್ಮೆಟ್ ಗಳನ್ನು ವಿಶೇಷವಾಗಿ ತಯಾರಿಸಲಾಗಿದೆ. ಸೂರ್ಯನ ಬೆಳಕಿನಿಂದ ಕಣ್ಣುಗಳನ್ನು ರಕ್ಷಿಸಲು ಮುಖವಾಡ ಮತ್ತು ಇದಕ್ಕೆ ಚಾರ್ಜಿಂಗ್ ವ್ಯವಸ್ಥೆ ಇದ್ದು. ಪೂರ್ಣ ಚಾರ್ಜ್ನಲ್ಲಿ ಈ ಹೆಲ್ಕೆಟ್ಗಳು 8 ಗಂಟೆಗಳವರೆಗೆ ಕೆಲಸ ಮಾಡಲಿದೆ.
ಬಿಸಿಲಿನ ಹೊಡೆತಕ್ಕೆ ಸಿಕ್ಕು ಅಧಿಕಾರಿಗಳು ರಸ್ತೆಯಲ್ಲೇ ಮೂರ್ಛೆ ಹೋದ ನಿದರ್ಶನಗಳಿವೆ. ಇದರಿಂದಾಗಿ ಈ ಹೆಲ್ಮೆಟ್ಗಳನ್ನು ಪ್ರಾಯೋಗಿಕವಾಗಿ ನೀಡಲಾಗಿದೆ. ಇದು ಸಂಚಾರಿ ಪೊಲೀಸ್ ಸಿಬ್ಬಂದಿ, ತಮ್ಮಕರ್ತವ್ಯ ನಿರ್ವಹಣೆಯನ್ನು ಸರಾಗವಾಗಿ ಮಾಡಲು ಸಾಧ್ಯವಾಗಲಿದೆ ಎಂದು ಇಲಾಖೆ ತಿಳಿಸಿದೆ.
ಪೊಲೀಸ್ ಇಲಾಖೆಯ ಈ ನಡೆಯನ್ನು ಸಾರ್ವಜನಿಕರು ಪ್ರಶಂಸಿದ್ದಾರೆ. ಬಳಕೆದಾರರು ನಮ್ಮರಾಜ್ಯದಲ್ಲೂ ಪೊಲೀಸ್
ಇಲಾಖೆಯು ಇದೇ ರೀತಿಯ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಟ್ರಾಫಿಕ್ ವಿಭಾಗದ ಡಿಸಿಪಿ ಆರತಿ ಸಿಂಗ್ ಈ ಬಗ್ಗೆ ಪ್ರತಿಕ್ರಿಯಿಸಿ, ನಗರದ ಆರು ಪ್ರಮುಖ ಪ್ರದೇಶಗಳಲ್ಲಿ ಟ್ರಾಫಿಕ್ ಪೊಲೀಸರಿಗೆ ಪ್ರಾಯೋಗಿಕವಾಗಿ ಹೆಲ್ಮೆಟ್ಗಳನ್ನು ನೀಡಲಾಗಿದ್ದು ಅದರ ಫಲಿತಾಂಶವೂ ಸಾಕಷ್ಟು ಯಶಸ್ವಿಯಾಗಿದೆ. ಶೀಘ್ರದಲ್ಲೇ ಈ ಎಸಿ ಹೆಲ್ಮೆಟ್ ನಗರದ ಇತರ ಭಾಗಗಳಲ್ಲಿ ನಿಯೋಜಿಸಲಾದ ಟ್ರಾಫಿಕ್ ಪೊಲೀಸರಿಗೂ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.