ನಂದಳಿಕೆ: ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ರವರ 133ನೇ ಜನ್ಮದಿನಾಚರಣೆ ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ವತಿಯಿಂದ ಇಟ್ಟಮೇರಿ ಮುದ್ದ ಅವರ ಮನೆಯಲ್ಲಿ ಭಾರತ ರತ್ನ, ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ, ದೇಶದ ಮೊದಲ ಕಾನೂನು ಸಚಿವರು, ದೇಶ ಕಂಡ ಮಹಾನ್ ವ್ಯಕ್ತಿ ಡಾ. ಬಿ.ಆರ್. ಅಂಬೇಡ್ಕರ್ರವರ 133ನೇ ಜನ್ಮದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು.
ಡಾ. ಬಿ.ಆರ್. ಅಂಬೇಡ್ಕರ್ರವರ ಭಾವಚಿತ್ರಕ್ಕೆ ಸಂಘದ ಅಧ್ಯಕ್ಷ ಬೀರೊಟ್ಟು ದಿನೇಶ್ ಪೂಜಾರಿ ಅಧ್ಯಕ್ಷತೆ ವಹಿಸಿ ಪುಷ್ಪಾರ್ಚನೆ ಸಲ್ಲಿಸಿ ಮಾಲಾರ್ಪಣೆ ಮಾಡಿ ದೀಪ ಬೆಳಗಿಸುವ ಮೂಲಕ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ರವರ 133ನೇ ಜನ್ಮದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಹೆಬ್ರಿ ಅಮೃತ ಭಾರತಿ ಕಾಲೇಜಿನ ಉಪನ್ಯಾಸಕರಾದ ವೀಣೇಶ್ ಅಮೀನ್ ಪ್ರಧಾನ ಭಾಷಣ ಮಾಡಿ ಮಾತನಾಡಿವರು ಡಾ. ಬಿ. ಆರ್. ಅಂಬೇಡ್ಕರ್ ಅವರಷ್ಟು ಡಿಗ್ರಿ ಪಡೆದವರು ದೇಶದಲ್ಲಿ ಯಾರಿಲ್ಲ, ಭಾರತದ ಕಾನೂನು ಸುವ್ಯವಸ್ಥೆ, ಅಸ್ಪøಶ್ಯತೆ ನಿವಾರಣೆ, ಪ್ರಜೆಗಳ ಮೂಲಭೂತ ಕರ್ತವ್ಯ, ಸಮಾನತೆ, ಶಿಕ್ಷಣ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಿಗೆ ಅಂಬೇಡ್ಕರ್ ನೀಡಿದ ಕೊಡುಗೆಯನ್ನು ನಾವೆಲ್ಲರೂ ಸ್ಮರಿಸಲೇ ಬೇಕೆಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಬೆಳ್ಮಣ್ಣು ಜೇಸಿಐನ ಅಧ್ಯಕ್ಷರಾದ ಸರಿತಾ ದಿನೇಶ್ ಸುವರ್ಣ, ಬೆಳ್ಮಣ್ಣು ಲಯನ್ಸ್ ಕ್ಲಬ್ ಅಧ್ಯಕ್ಷರಾದ ವಿಶ್ವನಾಥ ಪಾಟ್ಕರ್, ಬೆಳ್ಮಣ್ಣು ರೋಟರಿ ಕ್ಲಬ್ ಅಧ್ಯಕ್ಷರಾದ ಪ್ರಭಾಕರ್ ಶೆಟ್ಟಿ, ಮುದ್ದ ಇಟ್ಟಮೇರಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಂಬಳ ಓಟಗಾರ ಇರ್ವತ್ತೂರು ಆನಂದ್, ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಸಂಜೀವ ನಡಿಗುತ್ತು, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಪೂರ್ಣಿಮಾ, ಶ್ರಮಜೀವಿಗಳಾದ ಕುಟ್ಟಿ ಇಟ್ಟಮೇರಿ, ಸುಂದರ ಇಟ್ಟಮೇರಿ, ವಿಶೇಷ ಸಾಧನೆಗೈದ ಮುದ್ದ – ವಸಂತಿ ದಂಪತಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನಡಿಗುತ್ತು ದುಗುಣಿ ಮತ್ತು ಬಳಗದವರಿಂದ ತುಳುನಾಡ ಪಾಡ್ದನ ಹಾಡು ಹಾಡಿ ಎಲ್ಲರ ಮನಗೆದ್ದರು.
ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಪೂರ್ವಾಧ್ಯಕ್ಷರಾದ ಅಬ್ಬನಡ್ಕ ಸತೀಶ್ ಪೂಜಾರಿ ಸ್ವಾಗತಿಸಿದರು, ಮಹಿಳಾ ಸಂಘಟನಾ ಕಾರ್ಯದರ್ಶಿ ಪದ್ಮಶ್ರೀ ಪೂಜಾರಿ ಮತ್ತು ವೀಣಾ ಆಚಾರ್ಯ ಪ್ರಾರ್ಥನೆಗೈದರು, ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ನ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ವೀಣಾ ಪೂಜಾರಿ ವಂದಿಸಿದರು.
ಕಾರ್ಯಕ್ರಮದಲ್ಲಿ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಜೊತೆ ಕಾರ್ಯದರ್ಶಿ ಮಂಜುನಾಥ ಆಚಾರ್ಯ, ಮಹಿಳಾ ಸಂಘಟನಾ ಕಾರ್ಯದರ್ಶಿ ಪದ್ಮಶ್ರೀ ಪೂಜಾರಿ ಸಸುರೇಶ್ ಅಬ್ಬನಡ್ಕ, ಸುದರ್ಶನ್ ಕುಂದರ್, ಲೀಲಾ ಪೂಜಾರಿ, ಸಂಧ್ಯಾ ಶೆಟ್ಟಿ, ಸುಲೋಚನಾ ಕೋಟ್ಯಾನ್, ಲಲಿತಾ ಆಚಾರ್ಯ, ಕೀರ್ತನ್ ಪೂಜಾರಿ, ಅಶ್ವಿನಿ ಪ್ರಭಾಕರ್, ವೀಣಾ ಆಚಾರ್ಯ, ಅನ್ನಪೂರ್ಣ ಕಾಮತ್, ಪ್ರದೀಪ್ ಸುವರ್ಣ ಕೆಮ್ಮಣ್ಣು ಮೊದಲಾದವರಿದ್ದರು.
Day: April 15, 2024
ಡಾ. ಶಾಂತಾರಾಮ್ ಪ್ರಶಸ್ತಿಗೆ ಸಣ್ಣಕತೆಗಳ ಕೃತಿ ಆಹ್ವಾನ
ಕುಂದಾಪುರ: ಮಣಿಪಾಲ ಅಕಾಡೆಮಿಯ ಆಡಳಿತಾಧಿಕಾರಿಯಾಗಿದ್ದ ಡಾ.ಹೆಚ್.ಶಾಂತಾರಾಮ್ ಅವರ ಹೆಸರಿನಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು ದತ್ತಿನಿಧಿ ಸ್ಥಾಪಿಸಿ ಪ್ರತಿವರುಷ ಕನ್ನಡದ ಅತ್ಯುತ್ತಮ ಸೃಜನಶೀಲ ಕೃತಿಗೆ ಪ್ರಶಸ್ತಿ ನೀಡುತ್ತಾ ಬಂದಿದೆ. ಈ ವರ್ಷ ಸಣ್ಣಕತೆಗಳನ್ನು ಪರಿಗಣಿಸಲಿದ್ದು, 2022 ಮತ್ತು 2023ರಲ್ಲಿ ಮೊದಲ ಆವೃತ್ತಿಯಾಗಿ ಪ್ರಕಟಗೊಂಡ ಸಣ್ಣ ಕಥಾಸಂಕಲನಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ಲೇಖಕರು ಮತ್ತು ಪ್ರಕಾಶಕರು ಕಥಾ ಸಂಕಲನಗಳ ನಾಲ್ಕು ಪ್ರತಿಗಳನ್ನು ಇದೇ ಮೇ 10 ರ ಒಳಗೆ ಡಾ.ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಸಮಿತಿ, ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ -576201 ಈ ವಿಳಾಸಕ್ಕೆ ಕಳುಹಿಸಿ ಕೊಡುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9844284213 ನ್ನು ಸಂಪರ್ಕಿಸಬಹುದು. ಈಗಾಗಲೇ ಪ್ರಶಸ್ತಿ ಪಡೆದವರಿಗೆ ಅವಕಾಶ ಇರುವುದಿಲ್ಲ.
ಪ್ರಶಸ್ತಿ ಪ್ರದಾನ ಸಮಾರಂಭ ಆಗಸ್ಟ್ ತಿಂಗಳಿನಲ್ಲಿ ನಡೆಯಲಿದ್ದು, ಹದಿನೈದು ಸಾವಿರ ರೂಪಾಯಿಗಳೊಂದಿಗೆ ಬೆಳ್ಳಿ ಫಲಕ ನೀಡಲಾಗುವುದೆಂದು ಪ್ರಶಸ್ತಿ ಸಮಿತಿ ತಿಳಿಸಿದೆ.
ಕಡಬ ಸೇಂಟ್ ಜೋಕಿಮ್ ಚರ್ಚಿನ್ ಶತಮಾನೋತ್ಸವ ಆಚರಣೆ/ CENTENARY CELEBRATION OF ST JOACHIM’S CHURCH KADABA
ಸೇಂಟ್ ಜೋಕಿಮ್ಸ್ ಚರ್ಚ್ ಕಡಬ, ಮಂಗಳೂರು ಧರ್ಮಪ್ರಾಂತ್ಯಕ್ಕೆ ಸೇರಿದ್ದು, ಇದು 85 ಕಿ.ಮೀ. ಮಂಗಳೂರಿನ ಆಗ್ನೇಯ ಕಡೆಯಲ್ಲಿ ಇದೆ
ಮೂಲತಃ ಕಡಬ ಕೊಕ್ಕಡ ಧರ್ಮಕೇಂದ್ರದ ಭಾಗವಾಗಿತ್ತು. ಇದು 1923 ರಲ್ಲಿ ಬೇರ್ಪಟ್ಟಿತು. ಕೊಕ್ಕಡದ ಫ್ರಾ ರೊಸಾರಿಯೊ ಡಿ. ಸಿಕ್ವೇರಾ ಇಲ್ಲಿ ಪ್ರಾರ್ಥನಾ ಮಂದಿರವನ್ನು ನಿರ್ಮಿಸಿದರು. ಇಲ್ಲಿ ಮೊದಲ ರೆಸಿಡೆಂಟ್ ಮಿಷನರಿಯಾಗಿದ್ದ ಫಾ.ಲಾರೆನ್ಸ್ ಲೋಬೋ ಅವರು 1924 ರಲ್ಲಿ ಪ್ರಿಸ್ಬೈಟರಿ ಮತ್ತು ಅನಾಥಾಶ್ರಮವನ್ನು ನಿರ್ಮಿಸಿದರು. ಕಡಬವು ಏಪ್ರಿಲ್ 1, 1924 ರಂದು ಪ್ಯಾರಿಷ್ ಆಯಿತು.
ನಂತರ ಮಂಗಳೂರಿನ ಬಿಷಪ್ ಆಗಿದ್ದ ಅ|ವಂ|.ಬಾಸಿಲ್ ಸಾಲ್ವಡೋರ್ ಡಿಸೋಜಾ ಅವರು 1957 ರಲ್ಲಿ ಅಸ್ತಿತ್ವದಲ್ಲಿರುವ ಚರ್ಚ್ ಮತ್ತು ಬಾಲಕರ ಅನಾಥಾಶ್ರಮವನ್ನು ನಿರ್ಮಿಸಿದರು, ನಂತರ ಅದನ್ನು ಮುಚ್ಚಲಾಯಿತು. ಫ್ರೆಡ್ರಿಕ್ ಪಿ.ಎಸ್. ಮೊನಿಜ್ ಗ್ರೊಟ್ಟೊ ಮತ್ತು ಬೆಲ್ಫ್ರಿಯನ್ನು ನಿರ್ಮಿಸಿದರು.
ಫಾದರ್ ಲಾರೆನ್ಸ್ ಲೋಬೊ ಅವರು 1926 ರಲ್ಲಿ ಸೇಂಟ್ ಜೋಕಿಮ್ಸ್ ಹಿ.ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಿದರು ಮತ್ತು ಫಾದರ್ ಸಿ.ಪಿ.ಡಿಸೋಜಾ ಅವರು ಶಾಲೆಯನ್ನು ಪುನರ್ನಿರ್ಮಿಸಿದರು.
ಯಾವುದೇ ಪ್ಯಾರಿಷ್ನಲ್ಲಿರುವ ಚರ್ಚ್ನ ಶತಮಾನೋತ್ಸವವು ಅದರ ಇತಿಹಾಸದಲ್ಲಿ ಬಹಳ ಮುಖ್ಯವಾದ ಮೈಲಿಗಲ್ಲನ್ನು ಗುರುತಿಸುತ್ತದೆ. ಇದು ಚರ್ಚ್ಗೆ ಮಾತ್ರವಲ್ಲದೆ ಇಡೀ ಪ್ಯಾರಿಷ್ ಸಮುದಾಯಕ್ಕೆ ಆಚರಣೆಯ ಸಮಯವಾಗಿದೆ. ಈ ದೇವರ ದೇವಾಲಯದಲ್ಲಿ ಮತ್ತು ಅದರ ಜನರಿಗೆ ಶ್ರಮಿಸಿದ ಮತ್ತು ಸೇವೆ ಸಲ್ಲಿಸಿದ ಎಲ್ಲರಿಗೂ ನಾವು ಕೃತಜ್ಞತೆಯ ಆಳವಾದ ಋಣಿಯಾಗಿದ್ದೇವೆ.
ನಾವು ನಮ್ಮ ಇತಿಹಾಸವನ್ನು ಹಿಂತಿರುಗಿ ನೋಡುತ್ತೇವೆ ಮತ್ತು ಸೇಂಟ್ ಜೋಕಿಮ್ಗೆ ಸಮರ್ಪಿತವಾದ ಚರ್ಚ್ಗೆ ನೀಡಿದ ಆಶೀರ್ವಾದಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ, ಹಸಿರಿನಿಂದ ಆವೃತವಾದ ಸಣ್ಣ ಗುಡ್ಡದ ಮೇಲೆ ನಿರ್ಮಿಸಿ, ವಿನಮ್ರ, ಶ್ರದ್ಧಾವಂತ ಮತ್ತು ನಿಷ್ಠಾವಂತ ನಿಷ್ಠಾವಂತರು, ಅವರ ಬೆವರು ಮತ್ತು ರಕ್ತವು ಪ್ರತಿ ಕಲ್ಲನ್ನು ಕಲ್ಲಿನ ಮೇಲೆ ಎತ್ತುತ್ತದೆ. ಮೈಟಿ ದೇವರ ಈ ಮಹಲನ್ನು ನಿರ್ಮಿಸಲು. ಆದ್ದರಿಂದ 2024 ರ ಏಪ್ರಿಲ್ 17 ನೇ ಬುಧವಾರದಂದು ಕಡಬದ ಸೇಂಟ್ ಜೋಕಿಮ್ ಚರ್ಚ್ನ ಶತಮಾನೋತ್ಸವದ ಆಚರಣೆಯು ಯುಕರಿಸ್ಟಿಕ್ ಮೆರವಣಿಗೆಯೊಂದಿಗೆ ಗುರುತಿಸಲ್ಪಟ್ಟ ಭವ್ಯವಾದ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಂಡಿತು.
ಸಮಾರಂಭದ ಅಧ್ಯಕ್ಷತೆಯನ್ನು ಕೊರ್ಡೆಲ್ ಚರ್ಚ್ನ ಧರ್ಮಗುರು ಫಾದರ್ ಕ್ಲಿಫರ್ಡ್ ಫೆರ್ನಾಂಡಿಸ್ ಪಾದ್ರಿ ಕುಲಶೇಖರ್ ಅವರ ನೇತೃತ್ವದ ಯುಕರಿಸ್ಟಿಕ್ ಸೆಲೆಬ್ರೇಶನ್ನೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಪಂಜದ ಸಂತ ರೀಟಾ ಚರ್ಚ್ನ ಧರ್ಮಗುರುಗಳಾದ ವಂದನೀಯ ಫಾ.ಅಮಿತ್ ಪ್ರಕಾಶ್ ರೋಡ್ರಿಗಸ್, ಕಡಬ ಚರ್ಚಿನ ಧರ್ಮಗುರು ರೆ.ಫಾ.ಪೌಲ್ ಪ್ರಕಾಶ್ ಡಿಸೋಜ ಅವರು ಈ ಐತಿಹಾಸಿಕ ಸಂದರ್ಭದ ದಿವ್ಯ ಸಾನಿಧ್ಯವನ್ನು ವಹಿಸಿ, ಅನಂತರ ದಿವ್ಯ ಪ್ರಸಾದದ ಯಾತ್ರೆಯ ಮೂಲಕ ನಮ್ಮ ಊರಿನಲ್ಲಿ ಮಹಾಮಸ್ತಕಾಭಿಷೇಕವನ್ನು ಘೋಷಿಸಿದ್ದು ಕಡಬದ ಇತಿಹಾಸದಲ್ಲಿ ಮಹತ್ತರವಾದ ಘಟನೆಯಾಗಿದೆ.
ನಾವು ಚರ್ಚ್ಗೆ ಹಿಂತಿರುಗಿ, ದಿವ್ಯ ಪ್ರಸಾದದ ಆರಾಧನೆಯನ್ನು ನಡೆಸಲಾಯಿತು. ಆರಾಧನೆಯಲ್ಲಿ ಹೆಚ್ಚಿನವರು ಭಾಗವಹಿಸಿದ್ದರು. ವಂ.ಫಾ ಕ್ಲಿಫರ್ಡ್ ಫೆರ್ನಾಂಡಿಸ್ ಅವರು ’ನಮ್ಮ ಇಂದಿನ ಜೀವನದಲ್ಲಿ ಯೂಕರಿಸ್ಟ್ನ ನಿಜವಾದ ಅರ್ಥವನ್ನು ನಮಗೆ ತಿಳಿಸಿ,ನಾವು ಒಬ್ಬರಿಗೊಬ್ಬರು ಯೂಕರಿಸ್ಟಿಕ್ ಜನರು ಎಂದು ಆಚರಿಸಲು ಕ್ರಿಸ್ತನ ದೇಹವಾಗಿ ಒಟ್ಟಿಗೆ ಬರಲು ಅದ್ಭುತವಾದ ಮಾರ್ಗವಾಗಿದೆ’ ಎಂದು ಸಂದೇಶ ನೀಡಿದರು. ಈ ಮಹಾಕಾರ್ಯಕ್ರಮದಲ್ಲಿ ಅನೇಕ ಧರ್ಮಗುರುಗಳು, ಚರ್ಚಿನ ಭಕ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
CENTENARY CELEBRATION OF ST JOACHIM’S CHURCH KADABA
St Joachim’s Church Kadaba, belongs to the Diocese of Mangalore, which is 85 kms. towards the South East of Mangalore.
Originally Kadaba was a part of Kokkada parish. It was separated in 1923. Fr Rosario D. Sequeiraa of Kokkada built a chapel here. Fr Lawrence Lobo who was the first resident Missionary here, built the presbytery and an orphanage in 1924. Kadaba became a parish on April 1, 1924.
Fr Basil Salvadore D’Souza, later the Bishop of Mangalore, built the existing church and the Boys’ Orphanage in 1957 which was later closed down. Fr Fredrick P.S. Moniz built the Grotto and belfry.
Fr Lawrence Lobo began St Joachim’s Hr Pry School in 1926 and Fr C. P. D’Souza rebuilt the school.
The Centenary of a Church in any Parish marks a very important milestone in its history. It is a time for celebration, not only for the Church itself but for the whole parish community. We owe a deep debt of gratitude to all those who toiled and served in this temple of God and its people.
We look back on our history and give thanks for the blessings bestowed upon the church dedicated to the St Joachim, Build on a small hillock surrounded with the greenery, by the humble, devote and committed faithful, whose sweat and blood raised each stone upon stone to build this mansion of Mighty God. It was therefore fitting on Wednesday, 17th April 2024 the centenary celebrations of St Joachim Church Kadaba culminated with a grand event marked with Eucharistic Procession.
The event commenced with a Eucharistic Celebration led by Rev. Fr Clifford Fernandes Parish priest of Cordel Church, kulshekar, presided over the ceremony. Rev. Fr Amith Prakash Rodrigues, the Parish Priest of St Rita’s church Panja , Our parish priest Rev Fr Paul Prakash DSouza graced this Historical occasion and followed by Eucharistic procession were we proclaimed Eucharistic Lord in our locality which marked great event in the history of Kadaba.
We returned to the church, where we placed the Blessed Sacrament on the altar for adoration. Most of the participants participated in the adoration. Rev Fr Clifford Fernandes gave us the real meaning of Eucharist in our day today’s living. Many Priest, Religious Sister’s and locality people were present for this great event. A wonderful way to come together as the Body of Christ to celebrate who we are as a Eucharistic people in communion with one another.
ಸಾರ್ವಜನಿಕ ಜೀವನದಿಂದ ದೂರ ಹೋಗುವುದಿಲ್ಲ- ರಮೇಶ್ ಕುಮಾರ್ – ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಪರ ಮತ ನೀಡಿ
ಶ್ರೀನಿವಾಸಪುರದಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಪರ ಭಾನುವಾರ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯನ್ನು ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಹಾಗೂ ಸಚಿವ ಡಾ. ಸುಧಾಕರ್ ಉದ್ಘಾಟಿಸಿದರು.
ಕೋಮುವಾದಿಗಳು ಹಾಗೂ ಸಂವಿಧಾನ ವಿರೋಧಿಗಳು ಎಲ್ಲಿಯವರೆಗೆ ಇರುತ್ತಾರೊ, ಅಲ್ಲಿಯವರೆಗೆ ನಾನು ಸಾರ್ವಜನಿಕ ಜೀವನದಿಂದ ದೂರ ಹೋಗುವುದಿಲ್ಲ ಎಂದು ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಘೋಷಿಸಿದರು. ಪಟ್ಟಣದ ಮಾವಿನ ಕಾಯಿ ಮಂಡಿಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಪರ ಭಾನುವಾರ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಅಂದು ರವೀಂದ್ರನಾಥ ಟಾಗೋರ್, ಭಾರತದ ಸಾಕ್ಷಿ ಪ್ರಜ್ಞೆಯಾಗಿದ್ದರು. ಇಂದು ದೇವನೂರು ಮಹಾದೇವ ಅವರಂಥ ವ್ಯಕ್ತಿಗಳು ಭಾರತದ ಸಾಕ್ಷಿಪ್ರಜ್ಞೆಯಾಗಿದ್ದಾರೆ ಎಂದು ಹೇಳಿದರು. ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಕೆಲವರು ಹಾಡು ಹಗಲು ನನ್ನ ಬೆನ್ನಿಗೆ ಚೂರು ಹಾಕಿದರು. ಮೋಸದಿಂದ ಸೋಲುಣಿಸಿದರು. ಆದರೆ ನಾನು ದೇವರಾಜ ಅರಸು ಅವರ ಆದರ್ಶಗಳಿಗೆ ಬೆನ್ನುತೋರಿಸುವುದಿಲ್ಲ. ಮತದಾರರು ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಅವರ ಪರ ನಿಲ್ಲಬೇಕು. ಗೌತಮ್ ಗೆಲುವಿನಲ್ಲಿ ನನ್ನ ಸೋಲಿನ ಕಹಿ ಮರೆಬೇಕು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚುನಾವಣೆ ವ್ಯವಸ್ಥೆ ಬೇಕಾಗಿಲ್ಲ. ಅವರು ಸರ್ವಾಧಿಕಾರಿ ಆಗುವ ತೀರ್ಮಾನಕ್ಕೆ ಬಂದಿದ್ದಾರೆ. ಮೋದಿ ಹಾಗೂ ಅಮಿತ್ ಷಾ ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ. ಅವರು ಯಾವುದೇ ಸುದ್ದಿಗೋಷ್ಠಿ ನಡೆಸುವುದಿಲ್ಲ. ಲೋಕಸಭೆಯಲ್ಲಿ ಮಾತನಾಡುವುದಿಲ್ಲ. ಸಾರ್ವಜನಿಕ ಸಭೆಗಳಲ್ಲಿ ಮಾತ್ರ ಮಾತನಾಡುತ್ತಾರೆ. ಇದು ಪ್ರಜಾಪ್ರಭುತ್ವವಾದಿಯ ಲಕ್ಷಣವಲ್ಲ ಎಂದು ಹೇಳಿದರು.
ನೋಟು ಅಮಾನ್ಯೀಕರಣದಿಂದ ಯಾವುದೇ ಪ್ರಯೋಜನವಾಗಲಿಲ್ಲ. ಬದಲಿಗೆ ರೂ.1000 ಮುಖ ಬೆಲೆಯ ನೋಟುಗಳನ್ನು ಹಿಂದಕ್ಕೆ ಪಡೆದು, ಬಚ್ಚಿಟ್ಟುಕೊಳ್ಳಲು ಸಾಧ್ಯವಾಗುವಂತೆ ರೂ.2000 ಮಾಲ್ಯದ ನೋಟು ತರಲಾಯಿತು. ಈ ಕಾರ್ಯಾಚರಣೆಯಲ್ಲಿ ಎಷ್ಟು ಕಪ್ಪುಹಣ ಸಿಕ್ಕಿತು ಎಂಬ ಲೆಕ್ಕಮಾತ್ರ ತಿಳಿಯಲಿಲ್ಲ. ಕಾಂಗ್ರೆಸ್ ಕೇವಲ ರಾಜಕೀಯ ಮಾಡಲಿಲ್ಲ. ದೇಶದ ಅಭಿವೃದ್ಧಿ ಸಾಧಿಸಿದೆ. ಕೈಗಾರಿಕೆ, ಕೃಷಿ, ತಂತ್ರಜ್ಞಾನ, ಶಿಕ್ಷಣ ಇತ್ಯಾದಿ ರಂಗಗಳಲ್ಲಿ ಪ್ರಗತಿ ಸಾಧಿಸಿದೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ದೇವಾಲಯ ನಿರ್ಮಿಸುವುದು ಪ್ರಧಾನಿಯ ಕೆಲಸವಲ್ಲ. ಸೀತೆ, ಲಕ್ಷ್ಮಣ, ಆಂಜನೇಯನನ್ನು ಹೊರತುಪಡಿಸಿದ ರಾಮ ದೇಗುಲ ಕಲ್ಪನೆಗೆ ನಿಲುಕದ್ದು. ಒಬ್ಬಂಟಿ ರಾಮ ಬಿಜೆಪಿ ರಾಮ ಮಾತ್ರ. ಪಿತೃವಾಕ್ಯ ಪಾಲನೆಗಾಗಿ ಕಾಡಿಗೆ ನಡೆದ ರಾಮ ನಮ್ಮ ರಾಮ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ ಅರಮನೆಯಲ್ಲಿ ಹುಟ್ಟುವುದಿಲ್ಲ. ಮತಪೆಟ್ಟಿಗೆಯಲ್ಲಿ ಹುಟ್ಟುತ್ತಾನೆ. ಅದು ಡಾ. ಬಿ.ಆರ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಫಲವಾಗಿದೆ ಎಂದು ಹೇಳಿದರು.
ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮತದಾರರ ತೀರ್ಪು ಅನಿರೀಕ್ಷಿತವಾಗುತ್ತಿದೆ. ಮತದಾರರಿಗೆ ಒಳ್ಳೆಯದು ಮಾಡಿದರೂ, ದೀರ್ಘ ಕಾಲದ ಪ್ರತಿಫಲ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದಲ್ಲಿ ಅನಿರೀಕ್ಷಿತ ಫಲಿತಾಂಶ ನೀಡಿದ್ದಾರೆ. ಅದಕ್ಕೆ ಕೆಲವರ ಕುತಂತ್ರ ಹಾಗೂ ಹಿತಶತೃಗಳು ಕಾರಣ. ಆದರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ತೀರ್ಪಿಗೆ ತಲೆಬಾಗಬೇಕಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಬಡತನದಲ್ಲಿ ಬೆಳೆದವರು. ಬಡವರ ಕಷ್ಟ ಗೊತ್ತಿರುವ ವ್ಯಕ್ತಿಯಾಗಿದ್ದಾರೆ. ಸರಳ ಸಜ್ಜನಿಕೆ ಅವರ ವಿಶೇಷ ಗುಣ. ಅಂಥ ವ್ಯಕ್ತಿಗೆ ಮತ ನೀಡಿ ಲೋಕಸಭೆಗೆ ಕಳುಹಿಸಿದರೆ, ಕ್ಷೇತ್ರಕ್ಕೆ ಹೆಚ್ಚಿನ ಉಪಯೋಗವಾಗುತ್ತದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಹಲವು ರಿಯಾಯಿತಿಳನ್ನು ರದ್ದು ಮಾಡಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಭರವಸೆ ಸುಳ್ಳಾಗಿದೆ. ಬೆಲೆ ಏರಿಕೆ ಗಗನ ಮುಖಿಯಾಗಿದೆ. ವಿವಿಧ ವೇತನಗಳು ರದ್ದಾಗಿವೆ. ದೇಶದ ಸಾಲ ಹೆಚ್ಚಾಗಿದೆ. ಆದರೆ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ನುಡಿದಂತೆ ನಡೆದಿದೆ ಎಂದು ಹೇಳಿದರು. ಬಿಜೆಪಿ ಹಾಗೂ ಜೆಡಿಎಸ್ ಅವಕಾಶವಾದಿ ರಾಜಕಾರಣ ಮಾಡುತ್ತಿವೆ. ಹೊಂದಾಣಿಕೆ ಹೆಚ್ಚು ಕಾಲ ಉಳಿಯುವುದಿಲ್ಲ. ಶಕ್ತಿ ಯೋಜನೆ ಬಳಸಿಕೊಳ್ಳುವ ಮಹಿಳೆಯರ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಅವರು ಸಲ್ಲದ ಮಾತಾಡಿದ್ದಾರೆ. ಅದು ಯಾರೇ ಆದರೂ ಒಪ್ಪುವ ಮಾತಲ್ಲ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಅನಿಲ್ ಕುಮಾರ್, ನಜೀರ್ ಅಹ್ಮದ್, ಕೋಲಾರದ ಶಾಸಕ ಕೊತ್ತೂರು ಮಂಜುನಾಥ್, ಅಭ್ಯರ್ಥಿ ಕೆ.ವಿ.ಗೌತಮ್ ಮಾತನಾಡಿದರು.
ಕೋಲಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ್, ಮುಖಂಡರಾದ ಸಿ.ಎಂ.ಮುನಿಯಪ್ಪ, ಅಮೀರ್ ಜಾನ್, ದಿಂಬಾಲ ಅಶೋಕ್, ಕೆ.ಕೆ.ಮಂಜು, ಸಂಜಯ್ ರೆಡ್ಡಿ, ಸುಬ್ಬಾರೆಡ್ಡಿ, ಎನ್.ಜಿ.ಬೇಟಪ್ಪ, ನಾಗನಾಳ ಸೋಮಣ್ಣ, ಬಿ.ಎಲ್.ಪ್ರಕಾಶ್, ಯೋಗೇಂದ್ರಗೌಡ, ಕೃಷ್ಣಮೂರ್ತಿ, ಕೃಷ್ಣೇಗೌಡ, ಮ್ಯಾಕಲ ನಾರಾಯಣಸ್ವಾಮಿ, ಎನ್.ಮುನಿಸ್ವಾಮಿ, ಸೋಮಣ್ಣ, ಅಕ್ಬರ್ ಷರೀಫ್, ಈರಪ್ಪ, ರಾಮಾಂಜಮ್ಮ, ತಿಮ್ಮಯ್ಯ ಮತ್ತಿತರರು ಇದ್ದರು.
ಅಂಬೇಡ್ಕರ್ ಕೊಟ್ಟ ಅತ್ಯುನ್ನತ ಸಂವಿಧಾನ ಬಳಸಿಕೊಂಡು ದೇಶವನ್ನು ವಿಶ್ವದ ಬಲಿಷ್ಠ ರಾಷ್ಟ್ರವಾಗಿಸೋಣ- ಕನ್ನಯ್ಯ
ಕೋಲಾರ:- ಅಂಬೇಡ್ಕರ್ ದೇಶಕ್ಕೆ ನೀಡಿದ ಅತ್ಯುನ್ನತ ಸಂವಿಧಾನವನ್ನು ಬಳಸಿಕೊಂಡು ಭಾರತ ದೇಶವನ್ನು ವಿಶ್ವದ ಬಲಿಷ್ಠ ರಾಷ್ಟ್ರವನ್ನಾಗಿಸುವ ಹೊಣೆಗಾರಿಕೆ ಪ್ರತಿಯೊಬ್ಬ ಪ್ರಜೆಗಳ ಮೇಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ಹೇಳಿದರು.
ನಗರದ ಭಾರತ ಸೇವಾದಳ ಜಿಲ್ಲಾ ಕಚೇರಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಅಂಬೇಡ್ಕರ್ 133 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಅಂಬೇಡ್ಕರ್ ಅವರ ಸಮವಿಧಾನವು ಸಮಾನತೆ, ಸಹೋದರತೆ, ಸೌಹಾರ್ದತೆ ಹಾಗೂ ಸಾಮಾಜಿಕ ನ್ಯಾಯ ಎಂಬ ನಾಲ್ಕು ಪ್ರಮುಖ ಅಂಶಗಳ ಮೇಲೆ ನಿಂತಿದೆ, ಸಂವಿಧಾನದ ಈ ಆಶಯಗಳನ್ನು ಪಾಲಿಸಿ ಅಂಬೇಡ್ಕರ್ ಹಾಕಿಕೊಟ್ಟ ಹಾದಿಯಲ್ಲಿ ಅವರು ಇಟ್ಟ ಹೆಜ್ಜೆ ಗುರುತುಗಳಲ್ಲಿ ಕಾಲಿಟ್ಟು ದೇಶವನ್ನು ಮುನ್ನಡೆಸಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಅಂಬೇಡ್ಕರ್ ಅವರ ಅಧ್ಯಯನ ಶೀಲತೆ ಅವರನ್ನು ವಿಶ್ವe್ಞÁನಿ ಪಟ್ಟಕ್ಕೇರಿಸಿದೆ, ಯಾವುದೇ ವಿಷಯ ಕುರಿತಂತೆ ಆಳವಾಗಿ ಅಧ್ಯಯನ ಮಾಡಿ ಮಾತನಾಡುವುದನ್ನು ಅಂಬೇಡ್ಕರ್ ಜೀವಮಾನದುದ್ದಕ್ಕೂ ಕರಗತ ಮಾಡಿಕೊಂಡಿದ್ದರು. ಪ್ರತಿ ವಿದ್ಯಾರ್ಥಿಯು ಅಂಬೇಡ್ಕರ್ರಂತೆ ಅಧ್ಯಯನಶೀಲರಾದರೆ e್ಞÁನವಂತರಾಗಿ ಸುಲಭವಾಗಿ ಜೀವನದ ಗುರಿ ಮುಟ್ಟಬಹುದು ಎಂದರು.
ಅಂಬೇಡ್ಕರ್ರನ್ನು ಕೇವಲ ಜನ್ಮದಿನದಂದು ಮಾತ್ರವೇ ಸ್ಮರಿಸಿಕೊಳ್ಳದೆ ದೇಶಕ್ಕಾಗಿ ಅವರು ವಿವಿಧ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಯನ್ನು ನಿತ್ಯವೂ ಸ್ಮರಿಸುತ್ತಾ, ಪ್ರತಿಯೊಬ್ಬರೂ ಜಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಭಾರತ ಉಜ್ವಲ ರಾಷ್ಟ್ರವಾಗಿ ಹೊರಹೊಮ್ಮುತ್ತದೆ ಎಂದರು.
ಭಾರತ ಸೇವಾದಳ ಜಿಲ್ಲಾ ಕಾರ್ಯದರ್ಶಿ ಸುಧಾಕರ್, ಜಿಲ್ಲಾ ಕೋಶಾಧ್ಯಕ್ಷ ಎಂ.ನಾಗರಾಜ್, ಜಿಲ್ಲಾ ಸಂಚಾಲಕ ಬಹಾದ್ದೂರ್ ಸಾಬ್, ತಾಲೂಕು ಅಧ್ಯಕ್ಷ ಶ್ರೀರಾಮ್, ತಾಲೂಕು ಕೋಶಾಧ್ಯಕ್ಷ ಗೋಕುಲ ಚಲಪತಿ, ಕಾರ್ಯದರ್ಶಿ ಫಲ್ಗುಣ, ಬಿಇಒ ಕಚೇರಿ ಶಿಕ್ಷಣ ಸಂಯೋಜಕರಾದ ಮುನಿರತ್ನ, ನಂಜುಂಡಪ್ಪ, ಶ್ರೀನಿವಾಸ್, ವ್ಯವಸ್ಥಾಪಕ ಪ್ರಸಾದ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಸೇವಾದಳ ಪದ್ಧತಿಯಂತೆ ಸರ್ವಧರ್ಮ ಪ್ರಾರ್ಥನೆಯಿಂದ ಆರಂಭವಾದ ಕಾರ್ಯಕ್ರಮವು ರಾಷ್ಟ್ರಗೀತೆ ಗಾಯನದೊಂದಿಗೆ ಮುಕ್ತಾಯವಾಯಿತು.
ಭಾರತ ಸೇವಾದಳ ಎಂ.ಬಿ.ದಾನೇಶ್ ಕಾರ್ಯಕ್ರಮ ನಿರ್ವಹಿಸಿದರು.