ಕುಂದಾಪುರ: ವಿದ್ಯೆಯಿಂದ ಅಮೃತತ್ವವನ್ನು ಹೊಂದಬಹುದು ಎಂದು ಎಸ್.ಎಸ್.ನಾಯಕ್ ಮತ್ತು ಅಸೋಸಿಯೇಟ್ಸ್ ಎಂಬ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯ ಹಿರಿಯ ಪಾಲುದಾರರಾದ ಎಸ್.ಎಸ್.ನಾಯಕ್ ಹೇಳಿದರು .
ಅವರು ಮಾರ್ಚ್ 27ರಂದು ಭಂಡಾರ್ಕಾರ್ಸ್ ಪದವಿ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ವಿದ್ಯಾ ಎಲ್ಲಾ ಸಂಪತ್ತಿಗಿಂತ ಶ್ರೇಷ್ಠವಾದುದು. ಅದನ್ನು ಯಾರು ಕಳ್ಳತನ ಮಾಡಲಾಗುವುದಿಲ್ಲ. ಕಸಿಯಲು ಸಾಧ್ಯವಿಲ್ಲ. ದುಡ್ಡಿನಂತೆ ಖರ್ಚು ಮಾಡಲು ಆಗುವುದಿಲ್ಲ. ಅದನ್ನು ಹೊರಲು ಯಾವುದೇ ಭಾರಿ ವಾಹನಗಳು ಬೇಡ. ವಿದ್ಯೆ ಧನಕ್ಕಿಂತ ಶ್ರೇಷ್ಠವಾದುದು. ಇಂತಹ ಶ್ರೇಷ್ಠ ವಿದ್ಯಾ ಸಂಪತ್ತನ್ನು ಪಡೆಯಬೇಕಾದರೆ ಇಚ್ಛಾಶಕ್ತಿ ಮತ್ತು ಪ್ರಯತ್ನ ಬೇಕು. ಜೊತೆಗೆ ಅತ್ಯುತ್ತಮ ದೃಷ್ಟಿಕೋನವನ್ನು ಇಟ್ಟುಕೊಳ್ಳಿ. ಅಲ್ಲದೇ ಸಾಧಿಸುವ ಇಚ್ಛೆ ಇದ್ದರೆ ಸಾಲದು ನಿಮ್ಮ ಗುರಿ ತಲುಪಬೇಕಾದರೆ ಪರಿಪೂರ್ಣವಾಗಿ ಕಾರ್ಯಪ್ರವೃತ್ತರಾಗಬೇಕು. ಎಲ್ಲವುದಕ್ಕಿಂತ ಮುಖ್ಯವಾಗಿ ಪರೋಪಕಾರದ ಮನೋಭಾವ ಬೆಳೆಸಿಕೊಳ್ಳಬೇಕು. ಯಾಕೆಂದರೆ ನಮ್ಮ ಸಾಧನೆಯ ಹಾದಿಯಲ್ಲಿ ನಮ್ಮ ತಂದೆ ತಾಯಿ ಕಲಿಸಿದ ಶಿಕ್ಷಣ ಸಂಸ್ಥೆ ಮತ್ತು ಜೀವನ ರೂಪಿಸಿದ ಸಮಾಜವನ್ನು ಮರೆಯಬಾರದು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಕೆ ಶಾಂತಾರಾಮ್ ಪ್ರಭು ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ. ದೇವದಾಸ್ ಕಾಮತ್, ರಾಜೇಂದ್ರ ತೋಳಾರ್ ಆಡಳಿತ ಮಂಡಳಿಯ ಸದಸ್ಯರಾದ ಯು.ಎಸ್.ಶೆಣೈ, ಪದವಿ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಸದಾನಂದ ಕಾಮತ್, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ಸತ್ಯನಾರಾಯಣ ಉಪಸ್ಥಿತರಿದ್ದರು.
ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು
ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಚಿನ್ನದ ಪದಕ ಮತ್ತು ದತ್ತಿನಿಧಿ ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ.ಗೊಂಡ ಸ್ವಾಗತಿಸಿದರು. ಇತಿಹಾಸ ವಿಭಾಗ ಮುಖ್ಯಸ್ಥ ಪ್ರೊ.ಕೆ.ಗೋಪಾಲ್ ವಂದಿಸಿದರು. ಇಂಗ್ಲಿಷ್ ಉಪನ್ಯಾಸಕಿ ಪ್ರಿಯಾ ರೇಗೊ ಕಾರ್ಯಕ್ರಮ ನಿರೂಪಿಸಿದರು.
Day: March 28, 2024
ತೊಟ್ಟಂ: ಸಮನ್ವಯ ಸರ್ವಧರ್ಮ ಸಮಿತಿ ವತಿಯಿಂದ ವಡಭಾಂಡೇಶ್ವರ ಬಲರಾಮ ದೇವಸ್ಥಾನಕ್ಕೆ ಸೌಹಾರ್ದ ಭೇಟಿ
ಉಡುಪಿ: ನೂರಾರು ವರ್ಷ ಇತಿಹಾಸ ಹೊಂದಿರುವ ವಡಭಾಂಡೇಶ್ವರ ಬಲರಾಮ ದೇವರಿಗೆ ನಡೆದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆದ ರಥೋತ್ಸವ ಕಾರ್ಯಕ್ರಮದಲ್ಲಿ ಸಮನ್ವಯ ಸರ್ವಧರ್ಮ ಸಮಿತಿ ತೊಟ್ಟಂ ಇದರ ಸದಸ್ಯರು ಭಾಗವಹಿಸಿ ಸೌಹಾರ್ದತೆಯ ಸಂದೇಶವನ್ನು ವಿನಿಮಯ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ತೊಟ್ಟಂ ಚರ್ಚಿನ ಧರ್ಮಗುರು ವಂ|ಡೆನಿಸ್ ಡೆಸಾ ಎಲ್ಲಾ ಧರ್ಮಗಳೂ ಶಾಂತಿ ಮತ್ತು ಪ್ರೀತಿಯನ್ನು ಭೋಧಿಸುತ್ತವೆ. ತೊಟ್ಟಂ ಸಮನ್ವಯ ಸರ್ವಧರ್ಮ ಸಮಿತಿ ಇದೇ ಉದ್ದೇಶದಿಂದ ಕಾರ್ಯಾಚರಿಸುತ್ತಿದ್ದು ಸಮಾಜದಲ್ಲಿ ಶಾಂತಿ ಸೌಹಾರ್ಧತೆಯನ್ನು ಬಯಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ವ್ಯಾಪ್ತಿಯಲ್ಲಿ ನೂರಾರು ವರ್ಷಗಳ ಇತಿಹಾಸ ಹೊಂದಿರುವ ವಡಭಾಂಡೇಶ್ವರ ಬಲರರಾಮ ದೇವಸ್ಥಾನ ಜೀರ್ಣೋದ್ಧಾರಗೊಂಡು ಅದರ ಅಷ್ಟಬಂಧ ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಸಿ ಪರಸ್ಪರ ಸೌಹಾರ್ದತೆಯ ಸಂದೇಶವನ್ನು ವಿನಿಮಯ ಮಾಡಿಕೊಂಡಿರುತ್ತೇವೆ. ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಸೌಹಾರ್ದತೆ ಸಾರಲು ಸಹಾಯಕವಾಗುತ್ತದೆ ಎಂದರು.
ಸಮನ್ವಯ ಸರ್ವಧರ್ಮ ಸಮಿತಿ ತೊಟ್ಟಂ ಇದರ ಪಧಾಧಿಕಾರಿಗಳು ಹಾಗೂ ಸದಸ್ಯರಿಗೆ ವಡಭಾಂಡೇಶ್ವರ ಬಲರರಾಮ ದೇವಸ್ಥಾನದ ವತಿಯಿಂದ ಗೌರವಿಸಲಾಯಿತು.
ಈ ವೇಳೆ ದೇವಸ್ಥಾನದ ಶಶಿಧರ ಎಂ ಅಮೀನ್, ಟಿ ಶ್ರೀನಿವಾಸ ಭಟ್ , ನಾಗರಾಜ್ ಮೂಲ್ಕಿ, ಸಾಧು ಸಾಲ್ಯಾನ್, ಪ್ರಕಾಶ್ ಜಿ ಕೊಡವೂರು, ಶಂಕರನಾರಾಯಣ ಐತಾಳ್, ಸಮನ್ವಯ ಸೌಹಾರ್ಧ ಸಮಿತಿಯ ಅಧ್ಯಕ್ಷ ರಮೇಶ್ ತಿಂಗಳಾಯ, ಕಾರ್ಯದರ್ಶಿ ಲೆಸ್ಲಿ ಅರೋಜಾ, ಡಿಕನ್ ಸ್ಟೀಫನ್ ರೊಡ್ರಿಗಸ್, ಸಿಸ್ಟರ್ ಡಯಾನ, ಗ್ಲಾಡ್ಸನ್ ಮಾಬೇನ್, ವನಿತಾ ಫೆರ್ನಾಂಡಿಸ್, ಆಗ್ನೆಲ್ ಫೆರ್ನಾಂಡಿಸ್, ಪ್ರಭಾಕರ್, ಶೋಭಾ, ವಿನೋದ್ ಉಪಸ್ಥಿತರಿದ್ದರು.
ಇದೇ ವೇಳೆ ಸಮನ್ವಯ ಸೌಹಾರ್ಧ ಸಮಿತಿಯ ಸದಸ್ಯರು ಶ್ರೀ ಪಂಡರಿನಾಥ ವಿಠೋಭ ಭಜನಾ ಮಂದಿರ ಬಡಾನಿಡಿಯೂರು ತೊಟ್ಟಂ ಇದರ 77 ನೇ ವಾರ್ಷಿಕ ಅಂಖಡ ಭಜನಾ ಮಹಾಮಂಗಲೋತ್ಸವ ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸಿ ಶುಭಾಶಯ ವಿನಿಮಯ ಮಾಡಿಕೊಂಡರು.
ಜನತೆಯ ಕಷ್ಟಕ್ಕೆ ಸಮಸ್ಯೆಗಳಿಗೆ ಸ್ಪಂದಿಸುವುದೆ ಸರ್ಕಾರದ ಕರ್ತವ್ಯ – ಅದು ನಮ್ಮ ಸರಕಾರದಿಂದ ನಡೆದಿದೆ – ಬಿಜೆಪಿಯಲ್ಲಿ ಮತ ಕೇಳಲು ಯಾವ ಸಾಧನೆಯು ಇಲ್ಲ- ಜಯಪ್ರಕಾಶ್ ಹೆಗ್ಡೆ
PHOTOS: ASHOKA SUVARNA EDITOR: BERNARD DCOSTA
ಕುಂದಾಪುರ,ಮಾ.28: ಜನರನ್ನು ಸಂಪರ್ಕಿಸುವುದು ಜನಪ್ರತಿನಿಧಿಯ ಕೆಲಸ. ವಿಧಾನಸಭೆಯಲ್ಲೋ, ಲೋಕಸಭೆಯಲ್ಲೋ ಹೋಗಿ ಕೂತು ಬರುವುದಪ್ಪೇ ಅಲ್ಲ ಅಧಿಕಾರದಲ್ಲಿದ್ದಾಗಲೂ, ಅಧಿಕಾರದಲ್ಲಿ ಇಲ್ಲದೇ ಇರುವಾಗಲೂ ನಿರಂತರ ಜನ ಸಂಪರ್ಕ ಹೊಂದಬೇಕಾಗಿರುವುದು ಒಬ್ಬ ಜನಪ್ರತಿನಿಧಿ ಮಾಡಬೇಕಾಗಿರುವ ಕೆಲಸ. ಭಾರತೀಯ ಜನತಾ ಪಾರ್ಟಿಯಲ್ಲಿ ಮತ ಕೇಳುವುದಕ್ಕೆ ಯಾವ ಸಾಧನೆಯೂ ಇಲ್ಲ. ಆ ಕಾರಣಕ್ಕೆ ನಾನು ಹೇಳದೇ ಇರುವ ವಿಷಯವನ್ನು ಹೇಳಿದ್ದೇನೆ ಎಂದು ಸುಳ್ಳು ಹಬ್ಬಿಸಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಅವರು ಇಲ್ಲಿನ ಹಂಗಳೂರು ವೆಂಕಟಲಕ್ಷ್ಮಿ ಸಭಾಂಗಣದಲ್ಲಿ ಮಾ.27 ರಂದು ನಡೆಡ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ನಾನು ಯಾರನ್ನೂ ವೈಯಕ್ತಿಕವಾಗಿ ದೂಷಣೆ ಮಾಡಿದ ಉದಾಹರಣೆಯೇ ಇಲ್ಲಿ ನಮಗೆ ನಾವು ಮಾಡಿರುವ ಸಾಧನೆಗಳೇ ಇರುವಾಗ ದೂಪಣೆಗಳು ಯಾಕೆ ಬೇಕು? ಸುಳ್ಳು ಸೃಷ್ಟಿಸಿ ವೈಯಕ್ತಿಕ ದೂಷಣೆ, ಅಪಪ್ರಚಾರ ಅವರು (ಬಿಜೆಪಿ) ಮಾಡಲಿ. ನಾವು ಪ್ರಾಮಾಣಿಕವಾಗಿ ಜನರನ್ನು ನಮ್ಮ ಕೆಲಸಗಳೊಂದಿಗೆ ತಲುಪಿದ್ದೇವೆ. ಚುನಾವಣಾ ಪೂರ್ವದಲ್ಲಿ ರಾಜಕೀಯ ಕೆಸರೆರಚಾಟ, ದೂಷಣೆಗಳು ನಮಗೆ ಬೇಡವೇ ಬೇಡ. ನಮ್ಮೊಂದಿಗೆ ನಾವು ಮಾಡಿದ ಸಾಧನೆಗಳಿವೆ. ಜನರನ್ನು ತಲುಪುವುದಕ್ಕೆ ನಮ್ಮೊಂದಿಗಿರುವ ಸಾಧನೆಗಳು, ಅಭಿವೃದ್ಧಿ ಕೆಲಸಗಳೇ ಸಾಕು. ಜನರು ನಮ್ಮ ಕೆಲಸಗಳಿಂದ ಗುರುತಿಸಿದ್ದಾರೆ” ಎಂದು ಅವರು ಅಭಿಪ್ರಾಯಪಟ್ಟಿರು.
ನಮ್ಮ ಗ್ಯಾರಂಟಿ ಯೋಜನೆಗಳನ್ನು ಬಡವರಿಗೆ ತಲುಪಿಸಿದ್ದೇ ಸರ್ಕಾರದ ತಪ್ಪಾದರೇ, ದೊಡ್ಡ ದೊಡ್ಡ ಕಂಪೆನಿಗಳ, ಉದ್ಯಮಗಳ ಸಾಲ ಮನ್ನ ಮಾಡಿದ್ದು, ತೆರಿಗೆ ವಿನಾಯಿತಿ ಮಾಡಿದ್ದು ಸರಿಯೇ ? ಎಂದು ಅವರು ಪ್ರಶ್ನೆ ಮಾಡಿದ್ದಲ್ಲದೇ, ಕಷ್ಟದಲ್ಲಿರುವವರಿಗೆ ಸ್ಪಂದಿಸುವಂತದ್ದು ಸರ್ಕಾರದ ಕರ್ತವ್ಯ ಆಗಿದೆ. ನಾವು ಜನರಿಗೆ ಕೊಟ್ಟಿರುವ ಯೋಜನೆಗಳು, ಕೆಲಸಗಳು ಜನರಿಗೆ ತಿಳಿದಿದೆ. ನಾವು ಈಗ ಅವರಿಗೆ ಮತ್ತೆ ನೆನಪಿಸುವಂತಹ ಕೆಲಸ ಮಾಡಬೇಕಿದೆ. ನಮ್ಮ ಸರ್ಕಾರ ಕೊಟ್ಟಿರುವ ಯೋಜನೆಗಳು, ನಾವು ಮಾಡಿರುವ ಕೆಲಸಗಳು, ಸಾಧನೆಗಳು ಮಾತಾಗಿದೆ, ಮಾತು ಮತಗಳಾದಿ ಪರಿವರ್ತನೆಯಾಗುವಲ್ಲಿ ನಾವೆಲ್ಲರೂ ಶ್ರಮಿಸಬೇಕಿರುವ ಅಗತ್ಯವಿದೆ’ ಎಂದು ಅವರು ಹೇಳಿದರು.
ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್ ಮಾತನಾಡಿ, ಹೆಗ್ಡೆಯವರು ಉಡುಪಿ ಜಿಲ್ಲೆಯ ಸೃಷ್ಟಿಕರ್ತರು. ಜನರ ಜೊತೆಗೆ ನಿರಂತರ ಸಂಪರ್ಕ ಇಟ್ಟುಕೊಂಡಿರುವ ಜನನಾಯಕ ನಮ್ಮ ಸಂಸದ ಅಭ್ಯರ್ಥಿಯಾಗಿರುವುದು ನಮಗೆ ಹೆಮ್ಮೆ, ನಾವೆಲ್ಲರೂ ಜಿಲ್ಲೆಯ ಸಂಪೂರ್ಣ ಅಭಿವೃದ್ಧಿಗಾಗಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ಸಂಸತ್ತಿಗೆ ಕಳುಹಿಸುವಲ್ಲಿ ಅವಿರತ ಶ್ರಮ ವಹಿಸಬೇಕಿದೆ ಎಂದರು.
ಗ್ಯಾರಂಟಿ ಯೋಜನೆಗಳು ಹಳ್ಳಿಹಳ್ಳಿಯ ಮನೆಮನೆಗೆ ತಲುಪಿವೆ : ದಿನೇಶ್ ಹೆಗ್ಡೆ
ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ ಮಾತನಾಡಿ, ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಲ್ಲಿ ಭರವಸೆ ಇರಲಿಲ್ಲ. ಆದರೇ, ನಮ್ಮ ಸರ್ಕಾರ ಈಗ ನುಡಿದಂತೆ ನಡೆದಿದೆ. ಗ್ಯಾರಂಟಿ ಯೋಜನೆಗಳು ಹಳ್ಳಿಹಳ್ಳಿಯ ಮನೆಮನೆಗೆ ತಲುಪಿವೆ. ನಾನು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಯೋಜನೆಗಳು ಅನುಷ್ಠಾನವಾಗದೇ ಇದ್ದರೇ, ಮುಂದಿನ ಚುನಾವಣೆತಯಲ್ಲಿ ಮತ ಕೇಳುವುದಕ್ಕೆ ಐರುವುದಿಲ್ಲ ಎಂದು ಇಲ್ಲಿನ ಜನರಿಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತು ಕೊಟ್ಟಿದ್ದೆ ನಮ್ಮ ಯೋಜನೆಗಳು ಜನರನ್ನು ತಲುಪಿವೆ. ಮತ ಕೇಳುವುದಕ್ಕೆ ಯಾವ ಹಿಂಜರಿಕೆ ಬೇಡ. ನಮಗೆ ಬೇರೆ ಯಾವ ವಿಷಯಗಳು ಅಗತ್ಯವೇ ಇಲ್ಲ. ಮೀನುಗಾರಿಕಾ ಸಚಿವರಾಗಿದ್ದಾಗ, ಸಂಸದರಾಗಿದ್ದಾಗ ಜಯಪ್ರಕಾಶ್ ಹೆಗ್ಡೆ ಅವರು ಜಿಲ್ಲೆಗೆ ನೀಡಿರುವ ಕೊಡುಗೆ ಅಪಾರವಾದದ್ದು ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಗೆ ಕೊಳ್ಳೆಬೈಲು, ಮುಖಂಡರುಗಳಾದ ಮಲ್ಯಾಡಿ ಶಿವರಾಮ ಶೆಚ್ಛಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್ ರಾಜು ಪೂಜಾರಿ, ಹಿರಿಯಣ್ಣ ಜಾತ್ರಬೆಟ್ಟು, ಸಧಾನಂದ ಶೆಟ್ಟಿ ಕೆಥೂರು, ಕಾಂಗ್ರೆಸ್ ಜಿಲ್ಲಾ ವಕ್ತಾರ ವಿಕಾಸ್ ಹೆಗ್ಗೆ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಕಟಿ ಕಾನಕ ಸೇರಿ ಮೊದಲಾದವರು ಉಪಸ್ಥಿತರಿದರು.