ಶ್ರೀನಿವಾಸಪುರ : ಡಿವಿಜಿ ಬದುಕಿನ ಸರಳ ಹಾಗೂ ಪ್ರಾಮಾಣಿಕತೆಗೆ ಸಾಕ್ಷಿಯಾದ ಕೆಲವು ಘಟನೆಗಳನ್ನು ಉದಾಹರಸಿ, ವಿದ್ಯಾರ್ಥಿಗಳ ಜೀವನಕ್ಕೆ ನೆರವಾಗಿ ಆತ್ಮಸ್ಥೈರ್ಯ ತುಂಬುವ ಕಗ್ಗದ ಕೆಲವು ಪದ್ಯಗಳನ್ನು ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎನ್.ಬಿ. ಗೋಪಾಲಗೌಡರು ಹೇಳಿ ವ್ಯಾಖ್ಯಾನಿಸಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ತು ಶ್ರೀನಿವಾಸಪುರ ಘಟಕದಿಂದ ಡಿವಿಜಿ ಅವರ ಜನ್ಮದಿನೋತ್ಸವದ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದರು.
ಲೇಖಕಿ ಹಾಗೂ ಕದಳಿ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಮಾಯಾ ಬಾಲಚಂದ್ರ ಮಾತನಾಡಿ ಕಗ್ಗದ ಮಗ್ಗದಲ್ಲಿ ಡಿವಿಜಿ ಅನುಭವ ನೇಯ್ಗೆ” ಉಪನ್ಯಾಸದಲ್ಲಿ ಡಿವಿಜಿ ಸ್ವಾನುಭವ ಮತ್ತು ಸಮಾಜ ದರ್ಶನದ ಅನುಭವದಿಂದ ಹುಟ್ಟಿದ
ಮಂಕುತಿಮ್ಮನ ಕಗ್ಗದ ಪದ್ಯಗಳನ್ನು ಸುಶ್ರಾವ್ಯವಾಗಿ ಹಾಡಿ, ಅವುಗಳ ಅರ್ಥವನ್ನು ವಿದ್ಯಾರ್ಥಿಗಳಿಗೆ ಉಣಬಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ತಾಲೂಕು ಅಧ್ಯಕ್ಷೆ ಶ್ರೀಮತಿ ಪಿ.ಎಸ್.ಮಂಜುಳ ಮಾತನಾಡಿ ಮಾಸ್ತಿ, ಬೇಂದ್ರೆ, ಕುವೆಂಪು, ಡಿವಿಜಿ ಅಂಥವರ ಜಯಂತಿಗಳನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ, ನಮ್ಮ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಆಚರಿಸುತ್ತಾ ಬಂದಿದೆ. ಡಿವಿಜಿ ಅವರು ಪ್ರಶಸ್ತಿ ಹಾಗೂ ಪ್ರಸಿದ್ಧಿ ಹಿಂದೆ ಹೋದವರಲ್ಲ. ಕಗ್ಗ ಜ್ಞಾನಪೀಠ ಪ್ರಶಸ್ತಿ ಬರದಿದ್ದರೇನಂತೆ ಜನಗಳ ಜ್ಞಾನದ ಪೀಠವಾಗಿ ಉಳಿದಿದೆ ಎಂದರು.
ಆಧ್ಯಾತ್ಮ ಸಂಬಂಧಿಸಿದ ಅವರ ಸಾಹಿತ್ಯ ಕೃತಿಗಳಲ್ಲಿನ ಅಂಶಗಳನ್ನೂ ಸಂಕ್ಷಿಪ್ತವಾಗಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಪ್ರಾಣೇಶ್ ಅವರು, ಸರ್ಕಾರಿ ಬಸ್ಸುಗಳಲ್ಲಿ ಡಿವಿಜಿ ಅವರ “ಇರುವ ಭಾಗ್ಯವ ನೆನೆದು ಬಾರೆನೆಂಬುದು ಬಿಡು ಹರುಕ್ಕಿದೆ ದಾರಿ” ಎಂಬ ವಾಕ್ಯವನ್ನು ನೀವು ನಾಮಫಲಕದಲ್ಲಿ ನೋಡಿದ್ದೀರಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿ, ಡಿವಿಜಿ ಅವರ ಇಂತಹ ಕಾವ್ಯದ ಆದರ್ಶವನ್ನು ಪಾಲಿಸಬೇಕು ಎಂದರು.
ಸಾಹಿತಿ ಪಣಸಮಾಕನಹಳ್ಳಿ ಚೌಡರೆಡ್ಡಿ, ಉಪನ್ಯಾಸಕರಾದ ಎನ್. ಶಂಕರೇಗೌಡ, ಕೆ.ಎನ್. ಮಂಜುನಾಥ ರೆಡ್ಡಿ, ಜಿ.ಕೆ.ನಾರಾಯಣಸ್ವಾಮಿ, ಎನ್. ವಾಸು, ಶ್ರೀಧರ್, ಶ್ರೀಮತಿ ಜಯಲಕ್ಷ್ಮಿ ಹಾಗೂ ವಿದ್ಯಾರ್ಥಿನಿಯರು ಇದ್ದರು.
Day: March 20, 2024
ರೈತರಿಗೆ ಅನ್ಯಾಯ ಶ್ರೀನಿವಾಸಪುರ ಪಟ್ಟಣದ ಪ್ರಾಂತ ರೈತ ಸಂಘದ ಕಛೇರಿಯಲ್ಲಿ ಪತ್ರಿಕಾ ಗೋಷ್ಟಿ
ಶ್ರೀನಿವಾಸಪುರ : ಪಟ್ಟಣದ ಪ್ರಾಂತ ರೈತ ಸಂಘದ ಕಛೇರಿಯಲ್ಲಿ ಮಂಗಳವಾರ ಪತ್ರಿಕಾ ಗೋಷ್ಟಿ ನಡೆಸಿ ಮಾತನಾಡಿದರು.
ಕೆಪಿಆರ್ಎಸ್ ನ ರಾಜ್ಯ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಮಾತನಾಡಿ ತಾಲೂಕಿನ ಕೆಲ ರೈತರು ಅರಣ್ಯ ಅಧಿಕಾರಿಗಳ ವಿರುದ್ಧ ಉಚ್ಚನ್ಯಾಯಾಲಯದಲ್ಲಿ ಕೇಸು ಹಾಕಿ ಕೊಂಡು , ತಡೆಯಾಜ್ಞೆ ತಂದು ತಮ್ಮ ಜಮೀನುಗಳನ್ನು ರಕ್ಷಿಸಿಕೊಂಡು ಬೆಳೆ ಮಾಡುತ್ತಿರುವಾಗ ಅಂತಹ ರೈತರ ಬಳಿ ಹೋಗಿ ಈ ಜಮೀನು ಅರಣ್ಯ ಇಲಾಖೆ ಪರವಾಗಿ ಆಗಿದ್ದು, ನೀವುಗಳು ಈ ಜಮೀನು ಕಡೆ ಬರಬಾರದು ಎಂದು ರೈತರನ್ನು ಬೆದರಿಸುತ್ತಿದ್ದಾರೆ. ಇಂತಹ ತಪ್ಪು ಸಂದೇಶ ಮತ್ತು ರೈತರನ್ನು ಬೆದರಿಸುವ ಅಧಿಕಾರಿಗಳ ಕ್ರಮವನ್ನು ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಭೂ ಸಂತ್ರಸ್ಥರ ಹೋರಾಟ ಸಮಿತಿ ತೀವ್ರವಾಗಿ ಖಂಡಿಸುತ್ತಿದೆ ಎನ್ನುತ್ತಾ, ಉಚ್ಚ ನ್ಯಾಯಾಲಯದಲ್ಲಿ ತೀರ್ಪು ಅಂತಿಮವಾಗುವ ವರೆಗೂ ರೈತರು ಅರಣ್ಯ ಇಲಾಖೆಗೆ ಭೂಸ್ವಾದಿವನ್ನ ಮಾಡಬಾರದು ಎಂದು ವಿನಂತಿಸಿದರು.
ಕೆಪಿಆರ್ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತಕೋಟೆ ನವೀನ್, ಭೂ ಸಂತ್ರಸ್ಥರ ಹೋರಾಟ ಸಮಿತಿ ಉಪಾಧ್ಯಕ್ಷ ಪಿ.ಚಲಪತಿ, ಸದಸ್ಯ ಟಿ.ಎಚ್.ಆಂಜಲಪ್ಪ ಇದ್ದರು.
ಗ್ರಾಮೀಣ ಭಾಗದಲ್ಲಿ ನಕಲಿ ಕಂಪನಿಗಳಿಂದ ಮೋಸಹೋಗುತ್ತಿದ್ದಾರೆ ಎಲ್ಐಸಿಯ ಉದ್ದೇಶದ ಬಗ್ಗೆ ಅರಿವು ಮೂಡಿಸಿ-ಎನ್.ಆರ್.ಸಿದ್ದೇಶ್
ಶ್ರೀನಿವಾಸಪುರ : ಗ್ರಾಮೀಣ ಭಾಗದ ಹಳ್ಳಿಗಳಲ್ಲಿನ ಸಾರ್ವಜನಿಕರು ನಕಲಿ ಕಂಪನಿಗಳಿಂದ ಮೋಸಹೋಗುತ್ತಿದ್ದಾರೆ. ಇದನ್ನ ತಡೆಗಟ್ಟುವ ಉದ್ದೇಶದಿಂದ ನಕಲಿ ಕಂಪನಿಗಳು ಮಾಡುತ್ತಿರುವ ಮೋಸಗಳ ಬಗ್ಗೆ ಅರಿವು ಮೂಡಿಸಿಬೇಕು. ನಂತರ ಎಲ್ಐಸಿಯ ಉದ್ದೇಶದ ಬಗ್ಗೆ ಅರಿವು ಮೂಡಿಸಿ, ಎಲ್ಐಸಿ ಕಂಪನಿಯಿಂದ ಹೊಸ ಪಾಲಿಸಿಗಳ ಬಗ್ಗೆ ಪರಿಚಯ ಮಾಡಿಸಿ, ಅರಿವು ಮೂಡಿಸಿ ಪಾಲಿಸಿದಾರರನ್ನಾಗಿ ಮಾಡಿಸಿಲು ಮುಂದಾಗಬೇಕು ಎಂದು ಜಿಲ್ಲಾ ಎಲ್ಐಸಿ ಶಾಖಾ ವ್ಯವಸ್ಥಾಪಕ ಎನ್.ಆರ್.ಸಿದ್ದೇಶ್ ಸಲಹೆ ನೀಡಿದರು.
ಪಟ್ಟಣದ ಎಲ್ಐಸಿ ಉಪಶಾಖೆ ಕಛೇರಿಯಲ್ಲಿ ಮಂಗಳವಾರ ತಾಲೂಕಿನ ಎಲ್ಐಸಿ ಪ್ರತಿನಿದಿಗಳ ಸಭೆಗೆ ಚಾಲನೆ ನೀಡಿ ಮಾತನಾಡಿದರು.
ಪಟ್ಟಣದ ಉಪಶಾಖೆ ಅಭಿವೃದ್ಧಿ ಅಧಿಕಾರಿ ರವೀಂದ್ರಯ್ಯ ಆರ್.ಕುಲಕರ್ಣಿ ಮಾತನಾಡಿ ಎಲ್ಐಸಿ ಕಂಪನಿಯು ದೇಶದಲ್ಲಿ ದೊಡ್ಡಕಂಪನಿಯಾಗಿದ್ದು, ಕಂಪನಿಯು ದೇಶದಲ್ಲಿ ಆಗುವಂತಹ ಅತಿವೃಷ್ಟಿ, ಅನಾವೃಷ್ಟಿ ಸಮಯದಲ್ಲಿ ಕೇಂದ್ರ ಸರ್ಕಾರಕ್ಕೆ ಬೆನ್ನುಲಬಾಗಿ ನಿಂತು ಅತಿವೃಷ್ಟಿ, ಅನಾವೃಷ್ಟಿ ಸಹಕಾರ ನೀಡುತ್ತಿದೆ. ಎಲ್ಐಸಿ ಕಂಪನಿಯು ನಂಬಿಕೆಯ ಕಂಪನಿಯಾಗಿರುವ ಬಗ್ಗೆ ಪಾಲಿಸಿದಾರರಾಗಿ ಮನಮಟ್ಟುವಂತೆ ಅರಿವು ಮೂಡಿಸಿ ಎಲ್ಐಸಿ ಪಾಲಿಸಿದಾರರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಶಾಖೆಯ ಉಪ ವ್ಯವಸ್ಥಾಪಕ ವಿಜಯಕುಮಾರಿ, ಸ್ಥಳೀಯ ಉಪಶಾಖೆ ವ್ಯವಸ್ಥಾಪಕ ಎಚ್.ಸಿ.ಪ್ರಸಾದ್, ಹಿರಿಯ ಅಧಿಕಾರಿ ರವಿಶಂಕರ್ ಇದ್ದರು.
ಕೊಂಕ್ಣಿ ಲೇಖಕಿಂಚೊ ಎಕ್ತಾರ್ ಥಾವ್ನ್ “ಕೊಂಕ್ಣಿ ಚಿಕ್ಣಿ ಕಥಾ ಸ್ಪರ್ಧೊ”
ಕೊಂಕ್ಣಿ ಲೇಖಕಿಂಚೊ ಎಕ್ತಾರ್ ಮಂಗ್ಳೂರ್ ಹಾಣಿಂ ವೀಜ್ ಇ-ಪತ್ರಾಚಾ ಪ್ರಾಯೋಜಕ್ಪಣಾಖಾಲ್ ದೆ. ಮಾ.ಬಾ. ಮಾರ್ಕ್ ವಾಲ್ಡರಾಂಚ್ಯಾ ಅಮರ್ ಉಗ್ಡಾಸಾಕ್ “ಕೊಂಕ್ಣಿ ಚಿಕ್ಣಿ ಕಥಾ ಸ್ಪರ್ಧೊ” ಮಾಂಡುನ್ ಹಾಡ್ಲಾ.
ಸ್ಪರ್ಧ್ಯಾಚಿ ನಿಯಮಾಂ ಅಶಿಂ ಅಸಾತ್:
ಎಕ್ಲ್ಯಾನ್ ಗರಿಷ್ಟ್ ತೀನ್ ಕಾಣಿಯೊ ಧಾಡ್ಯೆತಾ.
ಪ್ರಾಯೆಚಿ ಬಂಧಡ್ ನಾ.
50 ಸಬ್ಧಾಂಕ್ ಮಿಕ್ವನಾಶೆಂ ಬರೊಂವ್ಚೆಂ.
ಕಾಣಿ ಕಾನಡಿ ಲಿಪಿಂತ್ ಆಸುನ್ ,ಬರಹ, ನುಡಿ ಯಾ ಜಸ್ಟ್ ಕನ್ನಡ ತಂತ್ರಾಂಶರ್ ಟೈಪ್ ಕರ್ನ್ ಯಾ ಎಕಾ ನಿತಳ್ ಕಾಗ್ದಾರ್ ಸುಡಾಳ್ ಬರವ್ನ್ ತಾಚೊ ಫೊಟೊ ಧಾಡುಂಕ್ ಜಾಯ್.
ಕಾಣಿ ಬರಯ್ಲೆಲ್ಯಾ ಕಾಗ್ದಾಚೆರ್ ದುಸ್ರೆಂ ಕಿತೆಂಯ್ ಬರಂವ್ಕ್ ನಾ.
ನಾಂವ್, ತಸ್ವೀರ್ ಆನಿ ವಿಳಾಸ್ ಕಾಗ್ದಾ ಭಿತರ್ ಬರಯ್ನಾಸ್ತಾಂ ವಿಂಗಡ್ ಬರವ್ನ್ ಧಾಡ್ಚೆಂ.
ಬರ್ಪಾಂ ಪಾವುಂಕ್ ನಿಮಾಣಿ ತಾರೀಕ್: ಮಾರ್ಚ್ 30,2024
ಇನಾಮಾಂ ಹ್ಯಾ ಪರಿಂ ಅಸಾತ್:
ಪಯ್ಲೆಂ: 3000/-
ದುಸ್ರೆಂ: 2000/-
ತಿಸ್ರೆಂ: 100/-
ಆನಿ ರಪಯ್ 500/- ಚಿಂ ಪಾಂಚ್ ಭುಜಾವಣೆಚಿಂ ಇನಾಮಾಂ.
ಸರ್ವಾಂಕ್ ಉಗ್ತೊ ಅವ್ಕಾಸ್
ಕಾಣ್ಯೊ 8147440782 ಹ್ಯಾ ವಾಟ್ಸಪ್ ನಂಬ್ರಾಕ್ ಧಾಡುಂಕ್ ಜಾಯ್ .ಹ್ಯಾಚ್ ಎಪ್ರಿಲ್ 11 ಚ್ಯಾ ವೀಜ್ ಅಂಕ್ಯಾರ್ ಫಾಯ್ಸ್ ಜಾತೆಲೆಂ ಆನಿ ಉತ್ತೀಮ್ ಕಾಣಿಯೊ ವೀಜ್ ಅಂಕ್ಯಾರ್ ಸರಾಗ್ ಫಾಯ್ಸ್ ಜಾತೆಲೆಂ ಮ್ಹಣುನ್ ಕಾರ್ಯಕಾರಿ ಸಮಿತಿನ್ ಕಳಯ್ಲಾಂ.
ಜಿಲ್ಲಾ ಕೆಡಿಪಿ ಸದಸ್ಯ ಶ್ರೀ ಗಂಗಾಧರ್ ಶೆಟ್ಟಿ ಅವರಿಗೆ ಶ್ರದ್ಧಾಂಜಲಿ ಸಭೆ
ಕುಂದಾಪುರ.ಮಾ. 20: ಕುಂದಾಪುರದ ಆರ್ ಎನ್ ಶೆಟ್ಟಿ ಸಭಾಂಗಣದಲ್ಲಿ ಅಗಲಿದ ಕಾಂಗ್ರೆಸ್ ನಾಯಕ, ಜಿಲ್ಲಾ ಕೆಡಿಪಿ ಸದಸ್ಯ ಶ್ರೀ ಗಂಗಾಧರ ಶೆಟ್ಟಿ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಮಾರ್ಚ್ 19 ರಂದು ಏರ್ಪಡಿಸಲಾಯಿತು. ಸಭೆಯನ್ನು ವಿಧಾನ ಪರಿಷತ್ ಮಾಜಿ ಸಭಾಪತಿ ಶ್ರೀ ಪ್ರತಾಪ್ ಚಂದ್ರ ಶೆಟ್ಟಿ ಅವರು ಉದ್ಘಾಟಿಸಿದರು.
ಜನಸಾಮಾನ್ಯರ ಕಷ್ಟಗಳಿಗೆ ಸದಾ ಸ್ಪಂದಿಸುತ್ತಿರುವ ಪಕ್ಷಾತೀತ, ಬಡ ಜನರ ಮನಸ್ಸು ಗೆದ್ದ ಶ್ರೀ ಗಂಗಾಧರ ಶೆಟ್ಟಿ ಅವರ ಅಗಲಿಕೆ ಕುಂದಾಪುರದ ನಾಗರಿಕರಿಗೆ ತುಂಬಲಾರದ ನಷ್ಟವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಅವರು ತಿಳಿಸಿದರು.
ಸಭೆಯಲ್ಲಿ ನುಡಿ ನಮನಗಳನ್ನು ಕಾಂಗ್ರೆಸ್ ನಾಯಕರುಗಳಾದ ಮೊಳಹಳ್ಳಿ ದಿನೇಶ ಹೆಗ್ಡೆ , ಬೆಳ್ವೆ ಸತೀಶ ಕಿಣಿ, ಮಲ್ಯಾಡಿ ಶಿವರಾಮ ಶೆಟ್ಟಿ, ಕೆದೂರು ಸದಾನಂದ ಶೆಟ್ಟಿ, ಪಂಚಾಯತ್ ಸದಸ್ಯ ಪ್ರಭಾಕರ ಮತ್ತು ಗ್ರಾಮಸ್ಥರಾದ ಆನಂದ ಮಾಸ್ಟರ್, ಹನೀಫ್, ಜುಲಿಯಾನ ವಿನೇಜಸ್, ಜ್ಯೋತಿ ನಾಯ್ಕ್ ಸಲ್ಲಿಸಿದರು.
ಇಂಟೆಕ್ ಅಧ್ಯಕ್ಷ ಚಂದ್ರ ಅಮೀನ್ ಸ್ವಾಗತಿಸಿ, ಬ್ಲಾಕ್ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ನಿರೂಪಿಸಿ , ಜೊಸ್ಪಿನ್ ಡಿಸೋಜಾ ವಂದಿಸಿದರು.