ಬೆಳ್ಮಣ್ಣು ಜೇಸಿಐ ನೇತೃತ್ವದಲ್ಲಿ ಮಾರ್ಚ್ 10ರಂದು ಮಹಿಳಾ – ಯುವತಿಯರ ವಿಭಾಗದ ಥ್ರೋಬಾಲ್ ಪಂದ್ಯಾಟ
ಜೇಸಿಐ ಬೆಳ್ಮಣ್ಣು, ಯುವ ಜೇಸಿ ವಿಭಾಗ ಮತ್ತು ಮಹಿಳಾ ಜೇಸಿ ವಿಭಾಗದ ನೇತೃತ್ವದಲ್ಲಿ 44ನೇ ವರ್ಷಾಚರಣೆ ಅಂಗವಾಗಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಮಾರ್ಚ್ 10ರಂದು ಆದಿತ್ಯವಾರ ಬೆಳಿಗ್ಗೆ ಗಂಟೆ 08-30ರಿಂದ ಕೆದಿಂಜೆ ಶ್ರೀ ವಿದ್ಯಾ ಬೋಧಿನಿ ಶಾಲಾ ಮೈದಾನದಲ್ಲಿ ಮಹಿಳಾ – ಯುವತಿಯರ ವಿಭಾಗದ ಥ್ರೋಬಾಲ್ ಪಂದ್ಯಾಟ ಜರಗಲಿದೆ. ಬೆಳ್ಮಣ್ಣು ಜೇಸಿಐ ಅಧ್ಯಕ್ಷರಾದ ಸರಿತಾ ದಿನೇಶ್ ಸುವರ್ಣ ಅವರು ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.
Day: March 5, 2024
ಕೆ ಕೆ ವೈ ಸ್ಟಾರ್ ತಲ್ಲೂರು ಇವರಿಂದ ಸಾಧಕರಿಗೆ ಸನ್ಮಾನ
ಕುಂದಾಪುರ: ತಲ್ಲೂರು ಕೋಟೆಬಾಗಿಲು ಶಾಲಾ ವಠಾರದಲ್ಲಿ ನಡೆದ 30ಗಜಗಳ ಕ್ರಿಕೆಟ್ ಪಂದ್ಯಾಟದ ಕೆ ಕೆ ವೈ ಸ್ಟಾರ್ ಟ್ರೋಫಿ 2024 ಇದರ ಉದ್ಘಾಟನಾ ಸಮಾರಂಭದಲ್ಲಿ ಸಮಾಜ ಸೇವೆ ಕ್ರೀಡೆ ಶೈಕ್ಷಣಿಕ ಮತ್ತು ಚಿತ್ರಕಲೆಯಲ್ಲಿ ವಿಶೇಷ ಸಾಧನೆ ಮಾಡಿದ ಪ್ರತಿಭೆಗಳಿಗೆ ಸನ್ಮಾನ ಕಾರ್ಯಕ್ರಮ ಜರಗಿತು.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಟಿ ಬಿ ಶೆಟ್ಟಿ,ವಸಂತ ಆರ್ ಹೆಗ್ಡೆ ತಲ್ಲೂರು ಪಂಚಾಯತ್ ಅಧ್ಯಕ್ಷರಾದ ಗಿರೀಶ್ ಎಸ್ ನಾಯ್ಕ್ ,ಉದ್ಯಮಿಗಳಾದ ಸುಂದರ್ ಶೆಟ್ಟಿ ರಮೇಶ್ ಆಚಾರ್ಯ , ರ್ವೋತ್ತಮ ಶೆಟ್ಟಿ ಸುರೇಶ್ ಪೂಜಾರಿ ಪ್ರದೀಪ್ ಕೋಟೇಶ್ವರ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀನಿವಾಸಪುರ ಆಂಬೀಷನ್ ನ್ಯಾಷನಲ್ ಶಾಲೆಗೆ ತಾಯಿಯ ಹೆಸರಲ್ಲಿ ಶಾಲೆಗೆ ಒಂದು ಕಟ್ಟಡವನ್ನು ನಿರ್ಮಿಸಲು ಎಸ್ ನಾರಾಯಣಸ್ವಾಮಿಯವರಿಂದ ರೂ. 3,50,000 ದಾನ
ಶ್ರೀನಿವಾಸಪುರ : ಪಟ್ಟಣದ ಹೊರವಲಯ ಈದ್ಗ ಹತ್ತಿರದ ಆಂಬೀಷನ್ ನ್ಯಾಷನಲ್ ಶಾಲೆಗೆ ಸಮಾಜ ಸೇವಕ ಎಸ್ ನಾರಾಯಣಸ್ವಾಮಿ ಅವರು ಭೇಟಿ ನೀಡಿ ಶಾಲೆಯ ಕಾಮಗಾರಿಕೆಯನ್ನು ವೀಕ್ಷಿಸಿ ಅವರ ತಾಯಿ ದಿವಂಗಿತ ಶ್ರೀಮತಿ ಶಾರದಮ್ಮ ಅವರ ಹೆಸರಲ್ಲಿ ಶಾಲೆಯ ಒಂದು ಕಟ್ಟಡವನ್ನು ನಿರ್ಮಿಸಲು 3,50,000ವನ್ನು ದಾನ ಮಾಡಿದ್ದು ಇದೇ ಸಂದರ್ಭದಲ್ಲಿ ಮಾತನಾಡುತ್ತ ನಾನು ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಓದಿದ್ದು ಬೆಳೆದು ನಮ್ಮ ತಾಯಿಯವರು ಸರ್ಕಾರಿ ಶಾಲೆಯಲ್ಲಿ ಕೆಲಸವನ್ನು ನಿರ್ವಹಿಸಿದ್ದರು ಹೈದರ್ ಅಲಿ ಮೊಹಲ್ಲಾ ನಿವಾಸಿಗಳಾಗಿದ್ದು ನಾನು ನನ್ನ ಸ್ವಂತ ಖರ್ಚಿನಲ್ಲಿ ಶಾಲೆಯ ಕಟ್ಟಡವನ್ನು ನಿರ್ಮಿಸಲು ನಮ್ಮ ತಾಯಿ ಹೆಸರಿನಲ್ಲಿ ದಾನವನ್ನು ಮಾಡಿದ್ದೇನೆ ಹಾಗೂ ಒಂದನೇ ತರಗತಿಯಿಂದ 10ನೇ ತರಗತಿವರೆಗೂ ಇಲ್ಲಿನ ಶಾಲೆಯ ಒಬ್ಬ ವಿದ್ಯಾರ್ಥಿಯನ್ನು ದತ್ತು ಪಡೆದು ಆತನ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಜಾಮಿಯಾ ಮಸೀದಿಯ ಅಧ್ಯಕ್ಷ ಜಾಹಿದ್ ಅನ್ಸಾರಿ ಶಾಲೆಯ ಆಡಳಿತ ಮಂಡಳಿ ಸದಸ್ಯ ಎಂಕೆಎಸ್ ಮುಬಿನ್ ಬಾಬು ಎಂಡಿ ಶಬ್ಬೀರ್ ಮತ್ತು ಶಾಲೆಯ ಸಿಬ್ಬಂದಿ ಇದ್ದರು
ಆದಿ ಜಾಂಬವ ಸಮಾಜ ತನ್ನದೇ ಆದ ಇತಿಹಾಸ, ಪರಂಪರೆ ಹಿನ್ನೆಲೆ ಇರುವಂತಹ ಸಮಾಜ-ಹೂವಳ್ಳಿ ಕೆ.ಅಂಬರೀಶ್
ಶ್ರೀನಿವಾಸಪುರ : ಆದಿ ಜಾಂಬವ ಸಮಾಜ ತನ್ನದೇ ಆದ ಇತಿಹಾಸ, ಪರಂಪರೆ ಹಿನ್ನೆಲೆ ಇರುವಂತಹ ಸಮಾಜ. ಇಂದಿನ ಆಧುನಿಕ ಯುಗದಲ್ಲಿ ಸಾಂಸ್ಕøತಿಕ, ರಾಜಕೀಯ, ಧಾರ್ಮಿಕ, ಸಾಮಾಜಿಕವಾಗಿ ಬೆಳವಣಿಗೆ ಹೊಂದುವುದು ತುಂಬಾ ಅವಶ್ಯವಿದೆ ಎಂದು ಸಮಾಜ ಸೇವಕ ಹೂವಳ್ಳಿ ಕೆ.ಅಂಬರೀಶ್ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಛೇರಿ ಮುಂಭಾಗ ಸೋಮವಾರ ಆದಿ ಜಾಂಬವ ಜಯಂತ್ಸೋವ ಕಾರ್ಯಕ್ರಮಕ್ಕೆ ಅಂಬೇಡ್ಕರ್ ಪುತ್ಥಳಿಗೆ ಪುಷ್ಪಮಾಲೆ ಹಾಕುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಮಾದಿಗ ಸಮುದಾಯ ಶೈಕ್ಷಣಿಕವಾಗಿ ಮುಂದೆ ಬರಬೇಕು. ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಪೋತ್ಸಾಹ ನೀಡಬೇಕು. ಶಿಕ್ಷಣ ಇಲ್ಲದೆ ಸಂಘಟನೆ ಹಾಗೂ ಹೋರಾಟ ಸಾಧ್ಯವಾಗುವುದಿಲ್ಲ. ಇದನ್ನು ಸಮುದಾಯದ ಪ್ರತಿಯೊಬ್ಬರು ಅರಿಯಬೇಕು ಎಂದು ಹೇಳಿದರು.
ತಾಲೂಕಿನಲ್ಲಿನ ಸಮುದಾಯದ ಮುಖಂಡರು ಎಲ್ಲರೂ ಸಮುದಾಯದ ಏಳಿಗೆಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು.ಆದಿ ಜಯಂತ್ಸೋವನ್ನು ಒಗ್ಗಟ್ಟಾಗಿ ವಿಜೃಭಣೆಯಿಂದ ಆಚರಣೆ ಮಾಡೋಣ ನನ್ನ ಸಹಕಾರವು ಇರುತ್ತದೆ ಎಂದು ಹೇಳಿದರು.
ಇದೇ ಸಮಯದಲ್ಲಿ ಮುಳಬಾಗಿಲು ತಾಲೂಕಿನ ಆವನಿ ಗ್ರಾಮದಲ್ಲಿನ ಆದಿ ಜಾಂಬವ ದೇವಸ್ಥಾನಕ್ಕೆ ತರೆಳಲು ಆದಿ ಜಾಂಬವ ಬಾವಚಿತ್ರವನ್ನು ಹೊತ್ತ ಬೆಳ್ಳಿರಥವು ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರಾರಂಭವಾಗಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬೆಳ್ಳಿರಥಕ್ಕೆ ಚಾಲನೆ ನೀಡಿದರು. ಆದಿ ಜಾಂಬವ ಬಾವಚಿತ್ರವನ್ನು ಹೊತ್ತ ಬೆಳ್ಳಿರಥವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಜಾನಪದ ತಂಡಗಳೊಂದಿಗೆ ಆದಿ ಜಾಂಬವ ಸೇವ ಟ್ರಸ್ಟ್ ಅಧ್ಯಕ್ಷ ಸಿ.ಮುನಿಯಪ್ಪ, ಹೂಹಳ್ಳಿ ಕೃಷ್ಣಪ್ಪ ಸಮ್ಮುಖದಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.
ಆದಿ ಜಾಂಬವ ಸೇವ ಟ್ರಸ್ಟ್ನ ಗೌರವಾಧ್ಯಕ್ಷ ಡಿ.ಎಂ.ರಾಮಪ್ಪ, ಪ್ರದಾನಕಾರ್ಯದರ್ಶಿ ವೆಂಕಟರಮಣಪ್ಪ, ಖಜಾಂಚಿ ವೆಂಕಟೇಶ್, ಸುಮುದಾಯದ ಮುಖಂಡರಾದ ನಾರಾಯಣಪುರ ವೆಂಕಟೇಶ್, ಶ್ರೀನಿವಾಸ್, ಸೀತಪ್ಪ, ಸತ್ಯಣ್ಣ, ಕೊಸ್ಸಂದ್ರ ರೆಡ್ಡಪ್ಪ, ಗೋವಿಂದ , ನರಸಿಂಹ, ಪಣಸಮಾಕಲಪಲ್ಲಿ ವೆಂಕಟೇಶ್ ಇದ್ದರು.
ರಾಬರ್ಟ್ ರೊಸಾರಿಯೊ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಅಧಿಕೃತ ಕ್ಯಾಥೊಲಿಕ್ ಪ್ರತಿನಿಧಿ ಅಲ್ಲ
ಮಂಗಳೂರು, 04.03.2024 : ತನ್ನನ್ನು ತಾನು ಕ್ಯಾಥೊಲಿಕ್ ನಾಯಕನೆಂದು ಬಿಂಬಿಸಿಕೊಳ್ಳುತ್ತಿರುವ ಮತ್ತು ಅಧಿಕೃತ ಅನುಮತಿಯಿಲ್ಲದೆ ವಿವಿಧ ಮಾಧ್ಯಮ ಚರ್ಚೆಗಳಲ್ಲಿ ಭಾಗವಹಿಸುತ್ತಿರುವ ರಾಬರ್ಟ್ ರೊಸಾರಿಯೊ ಅವರಿಂದ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯವು ಅಂತರ ಕಾಯ್ದುಕೊಳ್ಳುತ್ತದೆ.
ಕ್ಯಾಥೊಲಿಕ್ ಸಮುದಾಯವನ್ನು ಪ್ರತಿನಿಧಿಸಲು ರಾಬರ್ಟ್ ರೊಸಾರಿಯೊರಿಗೆ ಧರ್ಮಪ್ರಾಂತ್ಯದ ಅಧಿಕೃತ ಅಧಿಕಾರಿಗಳು ಅಧಿಕಾರ ನೀಡಿಲ್ಲ ಅಥವಾ ಅವರನ್ನು ವಿನಂತಿಸಿಲ್ಲ ಎಂದು ಡಯಾಸಿಸ್ ಸ್ಪಷ್ಟಪಡಿಸಲು ಬಯಸುತ್ತದೆ. ವ್ಯಕ್ತಿಗಳು ಸ್ವ ನೆಲೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಮತ್ತು ನಂಬಿಕೆಗಳನ್ನು ವ್ಯಕ್ತಪಡಿಸಬಹುದು, ಆದರೆ ರಾಬರ್ಟ್ ರೊಸಾರಿಯೊ ಎಲ್ಲಾ ಕ್ಯಾಥೋಲಿಕರನ್ನು ಪ್ರತಿನಿಧಿಸುವ ನಾಯಕ ಎಂದು ಹೇಳಿಕೊಳ್ಳುವುದು ಸಂಪೂರ್ಣವಾಗಿ ಸುಳ್ಳು ಮತ್ತು ತಪ್ಪು ದಾರಿಗೆಳೆಯುವಂತಿದೆ.
ಈ ಪತ್ರಿಕಾ ಪ್ರಕಟಣೆಯ ಮೂಲಕ ರಾಬರ್ಟ್ ರೊಸಾರಿಯೊ ಅವರು ವೈಯಕ್ತಿಕ ಸಾಮರ್ಥ್ಯದಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮಂಗಳೂರು ಧರ್ಮಪ್ರಾಂತ್ಯವು ಒತ್ತಿ ಹೇಳುತ್ತದೆ. ಕ್ಯಾಥೊಲಿಕ್ ಸಮುದಾಯದ ಪ್ರತಿನಿಧಿಯಾಗಿ ಅವರ ಅಭಿಪ್ರಾಯಗಳು ಅಥವಾ ಹೇಳಿಕೆಗಳನ್ನು ಡಯಾಸಿಸ್ ಅನುಮೋದಿಸುವುದಿಲ್ಲ. ಧರ್ಮಪ್ರಾಂತ್ಯದ ಸಂಬಂಧಪಟ್ಟ ಅಧಿಕಾರಿಗಳು ಅವರಿಗೆ ಅಧಿಕೃತ ಅನುಮೋದನೆ ಅಥವಾ ಅಧಿಕಾರವನ್ನು ನೀಡಿದ್ದಾರೆ ಎಂಬ ಯಾವುದೇ ಹೇಳಿಕೆಯಲ್ಲಿ ಹುರುಳಿಲ್ಲ. ಇದು ಸಂಪೂರ್ಣ ಸುಳ್ಳು.
ಕ್ಯಾಥೋಲಿಕ್ ಸಮುದಾಯದ ಪರವಾಗಿ ಮಾತನಾಡುವ ಅಧಿಕಾರವನ್ನು ಅಧಿಕೃತ ಧರ್ಮಪ್ರಾಂತ್ಯದ ಅಧಿಕಾರಿಗಳಿಂದ ಸೂಕ್ತವಾಗಿ ನೇಮಿಸಿದ ಮತ್ತು ಗುರುತಿಸಿದ ವ್ಯಕ್ತಿಗಳು ಮಾತ್ರ ಹೊಂದಿರುತ್ತಾರೆ ಎಂಬುದನ್ನು ಸಾರ್ವಜನಿಕರಿಗೆ ಮತ್ತು ಮಾಧ್ಯಮಗಳಿಗೆ ನೆನಪಿಸಲು ಮಂಗಳೂರು ಧರ್ಮಪ್ರಾಂತ್ಯವು ಈ ಅವಕಾಶವನ್ನು ಬಳಸಿಕೊಳ್ಳುತ್ತದೆ. ಇದಕ್ಕೆ ವಿರುದ್ಧವಾದ ಯಾವುದೇ ಪ್ರಾತಿನಿಧ್ಯವನ್ನು ತಪ್ಪು ಮಾಹಿತಿ ಎಂದು ಪರಿಗಣಿಸಬೇಕು ಮತ್ತು ಅದನ್ನು ಧರ್ಮಪ್ರಾಂತ್ಯವು ಅಂಗೀಕರಿಸುವುದಿಲ್ಲ.
ರಾಬರ್ಟ್ ರೊಸಾರಿಯೊ ಕ್ಯಾಥೊಲಿಕ್ ಸಮುದಾಯದ ಪ್ರತಿನಿಧಿ ಎಂದು ಅನಧಿಕೃತವಾಗಿ ಹೇಳಿಕೆಗಳನ್ನು ನೀಡುವುದನ್ನು ತಡೆಯಲು ಮಾಧ್ಯಮ ಮತ್ತು ಸಾರ್ವಜನಿಕರು ಅವರಿಂದ ಅಂತರ ಕಾಯ್ದುಕೊಳ್ಳುವಂತೆ ವಿನಂತಿಸಲಾಗಿದೆ. ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯವು ತನ್ನ ಸದಸ್ಯರ ಶೃದ್ಧೆ ಮತ್ತು ನಂಬಿಕೆಗಳನ್ನು ಖಚಿತವಾಗಿ ಪ್ರತಿನಿಧಿಸಲ್ಪಡುವ ಅಧಿಕೃತ ವ್ಯಕ್ತಿಗಳ ಮೂಲಕ ಮಾತ್ರ ನಿಖರ ಮಾಹಿತಿಯನ್ನು ಪ್ರಚಾರ ಮಾಡಲು ಬದ್ಧವಾಗಿದೆ ಎಂದು ಈ ಮೂಲಕ ತಿಳಿಯಪಡಿಸುತ್ತದೆ.
ಹೆಚ್ಚಿನ ಮಾಹಿತಿ ವಿಚಾರಣೆ ಅಥವಾ ಸ್ಪಷ್ಟೀಕರಣಕ್ಕಾಗಿ ದಯವಿಟ್ಟು ಸಂಪರ್ಕಿಸಿ:
ಶ್ರೀ ರಾಯ್ ಕ್ಯಾಸ್ಟಲಿನೊ ವಂ. ಡಾ. ಜೆ. ಬಿ. ಸಲ್ಡಾನ್ಹಾ
ಸಾರ್ವಜನಿಕ ಸಂಪರ್ಕ ಅಧಿಕಾರಿ ಸಾರ್ವಜನಿಕ ಸಂಪರ್ಕ ಅಧಿಕಾರಿ
ಮಂಗಳೂರು ಧರ್ಮಪ್ರಾಂತ್ಯ ಮಂಗಳೂರು ಧರ್ಮಪ್ರಾಂತ್ಯ
ಕುಂದಾಪುರ ರೋಜರಿ ಚರ್ಚ್ ಮೈದಾನದಲ್ಲಿ “ಎಮ್ಮಾವ್ಸ್” ಕೊಂಕಣಿ ನಾಟಕ ಯಶಸ್ವಿ ಪ್ರದರ್ಶನ
ಬರಹ: ಬರ್ನಾಡ್ ಡಿಕೋಸ್ತಾ, ಕುಂದಾಪುರ (ನಾಟಕಗಾರರು ಸಾಹಿತಿಗಳು)
ಮಾ.5: ಮಾರ್ಚ್ 3 ರಂದು ರೋಜರಿ ಚರ್ಚ್ ಮೈದಾನದಲ್ಲಿ ನಡೆದ “ಎಮ್ಮಾವ್ಸ್” ಕೊಂಕಣಿ ನಾಟಕ ಯಶಸ್ವಿಯಾಗಿ ಪ್ರದರ್ಶನ ಗೊಂಡಿತು.
ಈ ನಾಟಕವು ಜೀವನದಲ್ಲಿ ಜಿಗುಪ್ಸೆಯಾಗಿರುವರಿಗೆ, ತಾನು ಜೀವನದಲ್ಲಿ ಪುನಹ ಆಸಕ್ತಿ ಹೊಂದಬೇಕು, ಯಾವುದೆ ಕಾರಣಕ್ಕೂ ಆತ್ಮಹತ್ಯೆ ಪರಿಹಾರ ಅಲ್ಲಾ, ಜನ್ಮ ನೀಡಿತ ಸ್ರಸ್ಠಿಕರ್ತನು ಯಾವನೊಬ್ಬನೂ ಆತ್ಮಹತ್ಯೆ ಮಾಡಿಕೊಳ್ಳುವುದು ಒಪ್ಪುವುದಿಲ್ಲ. ಮನುಷ್ಯ ಸಹನೆಯಿಂದ ಆದುದುದೆನೆಲ್ಲವನ್ನು ತಾಳ್ಮೆಯಿಂದ ಸಹಿಸಿಕೊಂಡು, ಜೀವಿಸಬೇಕು, ಮುಂದೆ ಜೀವನದಲ್ಲಿ ಸಮಸ್ಯೆ ಪರಿಹಾರ ಆಗುವುದು ಎಂಬ ಸಂದೇಶ ಈ ನಾಟಕದಲ್ಲಿ ಇದೆ.
ಬರೆ ಎರಡೇ ಕಲಾವಿದರು ಇರುವ ಈ ನಾಟಕದಲ್ಲಿ, ಜೀವನದಲ್ಲಿ ವಿಧ್ಯೆ, ಪದವಿಗಳು ಮುಖ್ಯವಲ್ಲ, ತಿಳುವಳಿಕೆ, ಒದಿ ಜ್ಞಾನ ಸಂಪಾದಿಸುವುದು, ಅನುಭವ ಇದೇ ಮುಖ್ಯ ಎಂಬುದನ್ನು ಮನದಟ್ಟು ಮಾಡುತ್ತದೆ. ಕಲಿತವರಾದರೂ ತಾಳ್ಮೆ, ಸಹನೆ, ಸಮಸ್ಯೆಗೆ ಪರಿಹಾರ ಹುಡುಕುವಲ್ಲಿ ಅಸಫಲತೆ ಕಾಣುತ್ತಾರೆ, ತಾಳ್ಮೆ ಸಮಾಧಾನ ದೇವರಲ್ಲಿ ಅಚಲ ನಂಬಿಕೆ, ಪವಿತ್ರ ಗ್ರಂಥಗಳನ್ನು ಒದುವ ಮೂಲಕ ಜೀವನದಲ್ಲಿ ಹೊಸ ಪ್ರೇರಣೆ ನೀಡುತ್ತದೆ ಎಂದು ನಾಟಕದಲ್ಲಿ ಪೂರ್ಣ ಸಾಂರಂಶವಾಗಿದೆ.
ನಾಟಕವು ಏಕಾಂಕ ದ್ರಶ್ಯದ ನಾಟಕದವಾಗಿದು, ನಾಟಕದಲ್ಲಿ ಇಬ್ಬರು ಮಾತ್ರ ಪಾತ್ರದಾರಿಯಾಗಿದ್ದು. ಕಲಾವಿದರಾದ ಕ್ಲ್ಯಾನ್ವಿನ್ ಆನಿ ಸ್ವೀಡಲ್ ಉತ್ತಮ ನಟನೆ ಮಾಡಿದ್ದಾರೆ. ಉತ್ತಮ ಸಂಭಾಷಣೆಯ ಮೂಲಕ ಪ್ರೇಕ್ಷಕರನ್ನು ಆಕರ್ಶಣೆಗೆ ಒಳಪಡಿಸಿದ್ದಾರೆ. ತರುಣಿ ಪಾತ್ರದ ಸ್ವೀಡಲ್ ಅವರ ಮುಖಭಾವದಲ್ಲಿ ಸನ್ನಿವೇಷಕ್ಕೆ ತಕ್ಕಂತೆ ಆಗುವ ಬದಲಾವಣೆ ನಿರೀಕ್ಷೆಗೆ ತಕ್ಕಿದನಾಗಿದ್ದು, ಹಾವಭಾವ ತಕ್ಕದನಾಗಿತ್ತು. ಪ್ರಾಯದವನಾಗಿ ನಟಿಸಿದ ಕ್ಲ್ಯಾನ್ವಿನ್ ನಟನೆ ಶ್ಲಾಘನೆಗೆ ಒಳಪಟ್ಟಿತು. ನಾಟಕದ ಕೊನೆ ತನಕ ಆ ಪಾತ್ರದ ನಡೆತೆ ಒಂದೇ ಥರಹದ ರೀತಿಯಲ್ಲಿ ನಟಿಸಿಕೊಂಡೇ ಆ ಪಾತ್ರಕ್ಕೆ ಜೀವ ನೀಡಿದ್ದಾರೆ. ಆದರೆ ಆ ಪಾತ್ರ ಪ್ರಾಯದವರಾಗಿದ್ದು, ಕೈ ಕಾಲು, ಪ್ರಯಾದವರಿಗಾಗುವ ಕಂಪನದ ನಟನೆ ಉತ್ತಮ ರೀತಿಯಲ್ಲಿ ಮಾಡಿದ್ದಾರೆ. ಆದರೆ ಆ ಪಾತ್ರ ನಿರ್ವಹಿಸುವ ಕ್ಲ್ಯಾನ್ವಿನ್ ತರುಣಾನಾಗಿದ್ದು, ತಲೆ ಕೂದುಲು ಗಡ್ಡಕ್ಕೆ ಬಿಳಿ ಬಣ್ಣ ಹಚ್ಚಿಕೊಂಡರೂ, ಆತನ ದೇಹ ಕಟ್ಟುಮಸ್ತ್ ಆಗಿದ್ದು ಆತ ತರುಣನಂತೆ ಕಂಡು ಬರುವುದು, ಒಂದು ಕುಂದು ಎಂದು ನನ್ನ ಭಾವನೆ.
ಬೆಳಕು ನಾಟಕಕ್ಕೆ ತಕ್ಕನಾಗಿದ್ದು, ಸಂಗೀತ ಹೀತಕಾರಿ ಸೌಮ್ಯವಾಗಿದ್ದು ಕೇಳುಗರಿಗೆ ಮೆಚ್ಚುಗೆಯಾಗುವಂತಿದ್ದು. ನಾಟಕದ ಅಂತ್ಯ ನಿಗೂಡ ಮತ್ತು ಸುಖಮಯವಾಗಿತ್ತು
ಈ ನಾಟಕವನ್ನು ಧರ್ಮಗುರು ಆಲ್ವಿನ್ ಸೆರಾಂವ್ ರಚನೆ ಮಾಡಿದ್ದಾರೆ. ಇದು ಹಲವಾರು ಕಡೆ ಪ್ರದರ್ಶನ ನಡೆದು. ಇದು 37ನೇಯ ಪ್ರದರ್ಶನವಾಗಿದೆ. ಸಂಗೀತ್ ನಿರ್ವಹಣೆ ಆ್ಯನ್ಸಿಟಿನ್ ಮಚಾದೊ ಮಾಡಿದ್ದಾರೆ, ರಂಗ ಸಜ್ಜಿಕೆ ಕ್ರಿಸ್ಟನ್, ಯಶಸ್ವಿನ್, ಚಿನ್ಮಯಿ, ಕೇತನ್ ಕ್ಯಾಸ್ತಲಿನೊ, ತಾಂತ್ರಿಕತೆ ಆಹಾಯರ್ಂ, ವಿನ್ಯಾಸ ಮತ್ತು ನಿರ್ದೇಶನ ಕ್ರಿಸ್ಟಿ ನೀನಾಸಮ್ ನಾಟಕದ ಪ್ರದರ್ಶನದ ಜವಾಬ್ದಾರಿಯನ್ನು ಜೊಯೆಲ್ ವಹಿಸಿಕೊಂಡಿದ್ದು, ಅವರನ್ನು ಎಲ್ಲಾ ಕಲಾವಿದರ ಪರವಾಗಿ, ರೋಜರಿ ಚರ್ಚಿನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಕುಂದಾಪುರದ ನಾಗರಿಕರ ಪರವಾಗಿ ಸನ್ಮಾನಿಸಿದರು.
ನಾಟಕವನ್ನು ವೀಕ್ಷಿಸಲು ವಿವಿಧ ಚರ್ಚುಗಳ ಧರ್ಮಗುರುಗಳು ಮತ್ತು ನಾಗರಿಕರು ಆಗಮಿಸಿದ್ದರು. ಅ|ವಂ|ಸ್ಟ್ಯಾನಿ ತಾವ್ರೊ ಸ್ವಾಗತಿಸಿ, ನಾಟಕಕ್ಕೆ ಸಹಾಯ ಧನ್ ನೀಡಿದವರಿಗೆ ಗೌರವಿಸಿದರು. ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ, ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ ಮತ್ತು ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ ಉಪಸ್ಥಿತರಿದ್ದರು.