ಕುಂದಾಪುರ: ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 21-02-2024ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಲ್ತೊಡನಲ್ಲಿ ನಡೆಯಿತು.
ದೀಪಕ್ ಕುಮಾರ್ ಶೆಟ್ಟಿ, ಅಧ್ಯಕ್ಷರು, ರೈತರ ಸಂಘ, ಬೈಂದೂರು ಇವರು ವಿದ್ಯಾರ್ಥಿಗಳಿಗೆ ಸಾಮಾಜಿಕ ಜವಾಬ್ದಾರಿ ಬಗ್ಗೆ ತಿಳಿಸಿ ಅವರ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು.
ಇನ್ನೊರ್ವ ಮುಖ್ಯ ಅತಿಥಿ ಕರುಣಾಕಾರ ಶೆಟ್ಟಿ, ಅಧ್ಯಾಪಕರು, ನಾವುಂದ ಇವರು ಏನ್ ಎಸ್ ಎಸ್ ಶಿಬಿರ ಜೀವನದಲ್ಲಿ ಯಾವ ರೀತಿ ಪ್ರಭಾವ ಬೀರುತ್ತದೆ ಎನ್ನುವುದನ್ನು ತಿಳಿಸಿದರು.ಸಮಾರೋಪ ಭಾಷಣ ಮಾಡಿದ ಕಾಲ್ತೊಡು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಅಣ್ಣಪ್ಪ ಶೆಟ್ಟಿ, ಬಟ್ನಾಡಿ ಇವರು ಅತ್ತ್ಯುತ್ತಮವಾದ ಕಾರ್ಯಚಟುವಟಿಕೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶ್ರಮದಾನವನ್ನು ನಡೆಸಿ ಕಾಲ್ತೊಡು ಪರಿಸರದಲ್ಲಿ ಹಬ್ಬದ ವಾತಾವರಣವನ್ನು ನಿರ್ಮಿಸಿದ್ದೀರಿ. ಇದೇ ಶಿಸ್ತು ಮನೆಗೆ ಹೋದ ಮೇಲೂ ಅನುಸರಿಸುವಂತೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶು ಪಾಲರಾದ ಡಾ. ಶುಭಕಾರಾಚಾರಿ ಯವರು ಊರಿನವರ ಸಹಕಾರವನ್ನು ಕೊಂಡಾಡಿ ಕೃತಜ್ಞತೆ ತಿಳಿಸಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಸತ್ಯನಾರಾಯಣ ಹತ್ವಾರ್, ಮಂಜಯ್ಯ ಶೆಟ್ಟಿ, ಲಕ್ಷ್ಮೀ ಕ್ಯಾಶ್ಯ ಇಂಡಸ್ಟ್ರೀ ಸ್, ಸುಧಾಕರ ಶೆಟ್ಟಿ ನಿವೃತ್ತ ಬ್ಯಾಂಕ್ ಮ್ಯಾನೇಜರ್, ಪ್ರಕಾಶ್ ಶೆಟ್ಟಿ, ಅಧ್ಯಕ್ಷರು ಶ್ರೀ ಮಹಾಲಸಾ ಮಾರಿಕಾಂಬ ಯುವಕ ಮಂಡಲ ಕಾಲ್ತೊಡು, ಸುಳ್ಯಣ್ಣ ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕರು, ಕಾಲ್ತೊಡು, ವಿಜೇಂದ್ರ ಆಚಾರ್ಯ, ಅಧ್ಯಕ್ಷರು, ಶಾಲಾಭಿವೃದ್ಧಿ ಮಂಡಳಿ, ವಿನಾಯಕ ಮೇರ್ಟ, ಮುಖ್ಯ ಶಿಕ್ಷಕರು. ಶಿಬಿರಾರ್ಥಿಗಳ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಬಿರಾರ್ಥಿಗಳಾದ ಕುಮಾರಿ ಸುನಿಧಿ ಹಾಗೂ ಚಿನ್ಮಯಿ ಹೆಬ್ಬಾರ್ ಶಿಬಿರದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ಊರವರ ಪರವಾಗಿ ಸಂಜೀವ ಶೆಟ್ಟಿ, ಕೃಷಿಕರು, ಕಾಲ್ತೊಡು ಇವರು ಶಿಬಿರಾರ್ಥಿಗಳು ತಮ್ಮ ಕಾರ್ಯವೈಖರಿಗಳಿಂದ ಊರ ಜನರ ಮೆಚ್ಚುಗೆ ಹಾಗೂ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದು ತಮ್ಮ ಅನುಭವ ಹಂಚಿಕೊಂಡರು.
ಶಿಬಿರಾರ್ಥಿಗಳ ಪರವಾಗಿ ಶಾಲೆಗೆ ನೆನೆಪಿನ ಕಾಣಿಕೆಯನ್ನು ಪ್ರಾಂಶುಪಾಲರು ಮುಖ್ಯಶಿಕ್ಷರಿಗೆ ಹಸ್ತಾಂತರಿಸಿದರು. ಶಾಲೆಯ ಮುಖ್ಯಶಿಕ್ಷಕರು, ಶಾಲಾಭಿವೃದ್ಧಿ ಮಂಡಳಿಯ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಕಾಲೇಜಿಗೆ ಶಿಬಿರದ ನೆನಪಿಗೆ ಸ್ಮರಣಿಕೆ ನೀಡಿದರು. ಎಲ್ಲಾ ಶಿಬಿರಾರ್ಥಿಗಳಿಗೆ ಶಿಬಿರದ ಸವಿನೆನಪಿಗಾಗಿ ಸ್ಮರಣಿಕೆಯನ್ನು ನೀಡಲಾಯಿತು. ಯೋಜಾನಾಧಿಕಾರಿಗಳಾದ ಅರುಣ್ ಎಂ. ಎಸ್. ಶಿಬಿರದ ಯಶಸ್ಸಿಗೆ ಸಹಕರಿಸಿದ ಎಲ್ಲರನ್ನೂ ವಂದಿಸಿದರು. ಶಿಬಿರಾರ್ಥಿ ಕುಮಾರಿ ಸುಶ್ಮಿತಾ ಸ್ವಾಗತಿಸಿದರು ಯೋಜನಾಧಿಕಾರಿಯಾದ ರಾಮಚಂದ್ರ ಆಚಾರ್ ಕಾರ್ಯಕ್ರಮ ನಿರ್ವಹಿಸಿದರು.
Day: February 24, 2024
ಅನಿಲ್ ಜಾನ್ ಸಿಕ್ವೆರಾ – ರಾಜ್ಯದಲ್ಲಿಯೇ ಜಡ್ಜ್ ಹುದ್ದೆಗೇರಿದ ಅತಿ ಕಿರಿಯ ವ್ಯಕ್ತಿ
ಮಂಗಳೂರು: ಬಂಟ್ವಾಳ ತಾಲೂಕಿನ ಬೊರಿಮಾರು ಮೂಲದ 25 ರ ಹರೆಯದ ಯುವಕ ಅನಿಲ್ ಜಾನ್ ಸಿಕ್ವೆರಾ 2023 ರ ಸಾಲಿನ ಕರ್ನಾಟಕ ಸಿವಿಲ್ ಜಡ್ಜ್ ಪರೀಕ್ಷೆಯನ್ನು ಪಾಸ್ ಮಾಡಿದ್ವು ಆ ಮೂಲಕ ರಾಜ್ಯದಲ್ಲಿಯೇ ಜಡ್ಜ್ ಹುದ್ದೆಗೇರಿದ ಅತಿ ಕಿರಿಯ ವ್ಯಕ್ತಿ ಎನ್ನುವ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ.
ಮಂಗಳೂರಿನ ಎಸ್ ಡಿಎಂ ಕಾನೂನು ಕಾಲೇಜಿನಲ್ಲಿ ಬಿಬಿಎ ಮತ್ತು ಎಲ್ಎಲ್ ಬಿ ಪೂರೈಸಿದ್ದ ಅನಿಲ್ ಜಾನ್ ಸಿಕ್ವೆರಾ ಕಾಲೇಜು ದಿನಗಳಲ್ಲಿಯೇ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದರು. ಬಂಟ್ವಾಳದ ಬೊರಿಮಾರಿನ ಸಂತ ಜೋಸೆಫ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಮಾಣಿ ಕರ್ನಾಟಕ ಹೈಸ್ಕೂಲ್ ನಲ್ಲಿ ಪ್ರೌಢ ಶಿಕ್ಷಣ, ಪುತ್ಕೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದಿದ್ದರು.
ಕಾನೂನು ಪದವಿಯ ಬಳಿಕ ಮಂಗಳೂರಿನಲ್ಲಿ ಬಾರ್ ಅಸೋಸಿಯೇಶನ್ ಸದಸ್ಯರಾಗಿ ಪ್ರಾಕ್ಟಿಸ್ ಆರಂಭಿಸಿದ್ದರು. ಮಂಗಳೂರಿನ ವಕೀಲರಾದ ದೀಪಕ್ ಡಿಸೋಜ ಮತ್ತು ನವೀನ್ ಪಾಯ್ಸ್ ಇಅವರ ಜೊತೆಗೆ ವೃತ್ತಿ ನಡೆಸುತ್ತಿದ್ದರು. ಕಾಲೇಜು ದಿನಗಳಲ್ಲೇ ನಾಯಕತ್ವ ಬೆಳೆಸಿಕೊಂಡಿದ್ದ ಅನಿಲ್ ಸಿಕ್ವೆರಾ 2022 ರಲ್ಲಿ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಇಂಡಿಯನ್ ಕೆಥೋಲಿಕ್ ಯೂತ್ ಮೂಮೆಂಟ್ ಸಂಘಟನೆಯ ಅಧ್ಯಕ್ಷರಾಗಿದ್ದರು. ಅನಿಲ್ ಸಿಕ್ವೆರಾ ಅವರು ಕರ್ನಾಟಕ ಸಿವಿಲ್ ಜಡ್ಜ್ ಪರೀಕ್ಷೆಯನ್ನು ಎರಡೇ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದು, ಪ್ರಿಲಿಮಿನರಿ, ಮೈನ್ಸ್ ಮತ್ತು ಇಂಟರ್ವ್ಯೂ ಪಾಸ್ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಬೆಳಕಿಗೆ ತಂದು ಇತರರಿಗೆ ಸ್ಪೂರ್ತಿಯಾಗಿದ್ದಾರೆ.
“ಎಮ್ಮಾವ್ಸ್” ಭೋವ್ ಅಮೊಲಿಕ್ ಧಾರ್ಮಿಕ್ ಕೊಂಕ್ಣಿ ನಾಟಕ್ – ಪ್ರದರ್ಶನ್ ಜಾಂವ್ಚೆರ್ ಆಸಾ – ಕುಂದಾಪುರ್ ರೊಜಾರ್ ಮಾಯೆಚಾ ಮೈದಾನಾರ್ !!
ಹೊ ನಾಟಕ್ ಏಕ್ ಶ್ರೇಷ್ಟ್ ನಾಟಕೀಸ್ತ್ ಬಾಪ್ ಆಲ್ವಿನ್ ಸೆರಾಂವ್ ಹಾಣಿ ಬರಯ್ಲೊ ಕೊಂಕ್ಣಿ ನಾಟಕ್ ಜಾವ್ನಾಸ್ತಾ. ಬಾಪ್ ಆಲ್ವಿನ್ ಸೆರಾಂವ್ ಹಾಣಿ ಸಭಾರ್ ಧಾರ್ಮಿಕ್ ನಾಟಕಾಂ ಬರಯ್ಲ್ಯಾತ್ ಆನಿ ತಾಂಚೆಂ ಸರ್ವ್ ನಾಟಕ್ ಯಶಸ್ವಿ ಭರಿತ್ ಪ್ರದರ್ಶನ್ ಜಾಲ್ಯಾತ್. ಕುಂದಾಪುರ್ ಪ್ರದರ್ಶನ್ ಜಾಂವ್ಚೊ ನಾಟಕ್ಯಿ ಹೇರ್ ಜಾಗ್ಯಾನಿ ಯಶಸ್ವಿ ಪ್ರದರ್ಶನ್ ಜಾಲ್ಯಾ.
ಹೊ ನಾಟಕ್ ಜಿಣಿಯೆಂತ್ ಸಲ್ವಣಿ ಜಾಲ್ಯಾ, ಎಕಾಂತ್ ದೋಷ್ತಾ, ಸಮಸ್ಯಾಕ್ ಪರಿಹಾರ್ ನಾ ಮ್ಹಳ್ಯಾ ಚಿಂತ್ನಾನಿ ಭಲ್ರ್ಯಾ ವ್ಯಕ್ತಿಂಕ್ ಏಕ್ ವೊಕೊತ್ ತಶೆಂ ಲಿಖ್ಣಿ ಕೆಲ್ಲೊ ಹೊ ನಾಟಕ್ ಜಾವ್ನಾಸಾ.
ಮನ್ಸ್ಯಾ ಜಿವಿತಾಂತ್ ಏಕ್ ಲ್ಹಾನ್ ಸಲ್ವಣಿ, ಹಿಂಸಾ, ಶೋಷಣಾಕ್ ವಳಗ್ ಜಾಲ್ಲೆಂ ಆಜ್ ಕಾಲ್ ಜೀವ್ ನಾಸ್ ಕಚ್ರ್ಯಾ ಹಂತಾಕ್ ವಚೊನ್ ಪಾವ್ತಾತ್. ಜೀವ್ ನಾಸ್ ಕರ್ನ್ ಕಾಣ್ಘೆಂವ್ಚೆಂ ಭೋವ್ ಸುಲಭಾಯೆಚೆಂ ಕಾಮ್, ಪೂಣ್ ಜಿಯೆಂವ್ಚೆಂ ಭೋವ್ ಕμÁ್ಟಂಚೆ. ಜೀವ್ಘಾತ್ ಕೆಲ್ಲ್ಯಾ ತಕ್ಷಣ್ ಸಕ್ಕಡ್ ಸಂಪ್ಲೆಂ ಮ್ಹಣುನ್ ಚಿಂತ್ತಾಂವ್… ನಾಂ… ಜೀವ್ ಹೊಗ್ಡಾವ್ನ್ ಘೆತ್ಲಲೊ ವೆತಾ, ಪೂಣ್ ತಾಚ್ಯಾ ಮೊಗಾಚಿಂ ಹರ್ಯೇಕ್ ದೀಸ್, ಹರ್ಯೆಕ್ ಘಡಿ ವಳ್ವಳ್ತಾತ್….
ಜಿವಿತ್ ಕಿತ್ಲೆಂ ಮಹತ್ವಾಚೆಂ, ಜಿವಿತ್ ಕಿತ್ಲೆಂ ಉಪಯುಕ್ತ್ ಮ್ಹಣುನ್ ದಾಖಂವ್ಚೊ ಪ್ರಶಸ್ತಿ ವಿಜೇತ್ ನಾಟಕ್ ಎಮ್ಮಾವ್ಸ್ ಕುಂದಾಪುರ್ ರೊಜಾರ್ ಮಾಯೆಚಾ ಮೈದಾನಾರ್ ಪ್ರದರ್ಶನ್ ಜಾಂವ್ಚೊ ಆಸಾ.
ದೀಸ್: 03-03-2024 ಆಯ್ತಾರಾ, ಸಾಂಜೆರ್ 6.30 ವೊರಾರ್
ಹ್ಯಾ ನಾಟಕಾಚೊ ಬರಯ್ಣಾರ್: ಬಾಪ್ ಆಲ್ವಿನ್ ಸೆರಾಂವ್
ನಟನ್: ಕ್ಲ್ಯಾನ್ವಿನ್ ಆನಿ ಸ್ವೀಡಲ್ ಸಂಗೀತ್ ನಿರ್ವಹಣ್: ಆ್ಯನ್ಸಿಟಿನ್ ಮಚಾದೊ
ಸಂಗೀತ್ ಸಜವ್ಣಿ: ಕ್ರಿಸ್ಟನ್, ಯಶಸ್ವಿನ್, ಚಿನ್ಮಯಿ, ಕೇತನ್ ಕ್ಯಾಸ್ತಲಿನೊ
ತಾಂತ್ರಿಕತಾ: ಆಹಾರ್ಯಂ (The Designers)
ವಿನ್ಯಾಸ್ ಆನಿ ನಿರ್ದೇಶನ್: ಕ್ರಿಸ್ಟಿ ನೀನಾಸಮ್.
ತುಮಿ ಯೆಯಾ, ಕುಟ್ಮಾ ಸಮೇತ್ ಯೆಯಾ, ಸಂಗಾತಾ ಹೇರಾಂಕಿಯಿ ಆಪವ್ನ್ ಹಾಡಾ
ವೇಳ್ ಅಮಾನತ್ ಕರಾ – ಪ್ರವೇಶ್ ದರ್ಮಾಥ್
ಎಕರೆ ಅರಣ್ಯ ಭೂ ಒತ್ತುವರಿಯನ್ನು ತೆರವುಗೊಳಿಸಿರುವ ಅರಣ್ಯ ಸಂರಕ್ಷಣಾಧಿಕಾರಿಗಳ ವಿರುದ್ಧ ಭೂಗಳ್ಳರು ನ್ಯಾಯಾಲಯದಲ್ಲಿ ಧಾವೆ : ಅಧಿಕಾರಿಗಳ ರಕ್ಷಣೆಗೆ ಅರಣ್ಯ ಸಚಿವರ ನಿವಾಸದ ಮುಂದೆ ಹೋರಾಟ ಮಾಡಲು ರೈತಸಂಘ ತೀರ್ಮಾನ
ಶ್ರೀನಿವಾಸಪುರ; ಫೆ.23: ಸಾವಿರಾರು ಎಕರೆ ಅರಣ್ಯ ಭೂ ಒತ್ತುವರಿಯನ್ನು ತೆರವುಗೊಳಿಸಿರುವ ಅರಣ್ಯ ಉಪ ಸಂರಕ್ಷಣಾಧಿಕಾರಿಗಳು ಹಾಗೂ ವಲಯ ಅರಣ್ಯಾಧಿಕಾರಿಗಳ ವಿರುದ್ಧ ಭೂಗಳ್ಳರು ನ್ಯಾಯಾಲಯದಲ್ಲಿ ಧಾವೆ ಹೂಡಿದ್ದು, ಅಧಿಕಾರಿಗಳ ರಕ್ಷಣೆಗೆ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರನ್ನು ಒತ್ತಾಯಿಸಿ ಫೆ.29ರ ಗುರುವಾರ ಅರಣ್ಯ ಸಚಿವರ ನಿವಾಸದ ಮುಂದೆ ಹೋರಾಟ ಮಾಡಲು ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕರೆದಿದ್ದ ಸಭೆಯಲ್ಲಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಅಮಾಯಕ ರೈತರ ಹೆಸರಿನಲ್ಲಿ ಬಲಾಢ್ಯ, ಶ್ರೀಮಂತ, ರಾಜಕೀಯ, ರಿಯಲ್ ಎಸ್ಟೇಟ್ ಉದ್ಯಮಿಗಳು ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿಕೊಂಡು ಸಾವಿರಾರು ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಬ್ಯಾಂಕ್ಗಳಲ್ಲಿ ಕೋಟ್ಯಾಂತರ ರೂಪಾಯಿ ಸಾಲ ಪಡೆಯುವ ಜೊತೆಗೆ ಅರಣ್ಯ ಭೂಮಿಯನ್ನು ಕೋಟಿಕೋಟಿ ಹಣಕ್ಕೆ ಮಾರಾಟ ಮಾಡಿರುವ ಭೂಗಳ್ಳರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಮಾನ್ಯ ಅರಣ್ಯ ಸಚಿವರು ಕಾನೂನು ಜಾರಿ ಮಾಡಬೇಕೆಂದು ಒತ್ತಾಯಿಸಿದರು.
ಕಾಡು ಇದ್ದರೆ ಮಳೆ, ಮಳೆ ಬಂದರೆ ಬೆಳೆ, ಬೆಳೆಯಿದ್ದರೆ ದೇಶದ ಹಸಿವು ನೀಗಿಸುವ ರೈತ. ಆದರೆ ಆ ರೈತರ ಹೆಸರಿನಲ್ಲಿ ಅರಣ್ಯ ಭೂಮಿಯನ್ನು ಕಬಳಿಸಿ ನೂರಾರು ವರ್ಷಗಳಿಂದ ಕೋಟ್ಯಾಂತರ ರೂಪಾಯಿ ಹಣ ಸಂಪಾದನೆ ಮಾಡಿ ಈಗ ಅರಣ್ಯಾಧಿಕಾರಿಗಳು ದೌರ್ಜನ್ಯದಿಂದ ಮಾವಿನ ಗಿಡಗಳನ್ನು ನಾಶ ಮಾಡಿದ್ದಾರೆಂದು ಗೌರವಾನ್ವಿತ ನ್ಯಾಯಾಲಯದಲ್ಲಿ ಧಾವೆ ಹೂಡಿರುವ ಭೂ ಒತ್ತುವರಿದಾರರು ನಿಜವಾದ ರೈತರೇ ? ರೈತರಾದರೆ ಸರ್ಕಾರದ ಕಂದಾಯ ನಿಯಮದ ಪ್ರಕಾರ 5 ಎಕರೆ ಭೂಮಿ ಇಲ್ಲದವರಿಗೆ ಒತ್ತುವರಿ ಮಾಡಿಕೊಂಡರೆ ಸರ್ಕಾರದ ನಿಯಮದ ಪ್ರಕಾರ ಮಂಜೂರು ಆಗುತ್ತದೆ.
ಆದರೆ ನಿಯಮ ಮೀರಿ ನೂರಾರು ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡು ಈಗ ಅರಣ್ಯಾಧಿಕಾರಿಗಳ ವಿರುದ್ಧವೇ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಒತ್ತುವರಿ ಸ್ಥಗಿತಗೊಳಿಸಲು ಮುಂದಾಗಿರುವುದು ಯಾವ ನ್ಯಾಯ. ಮಾನ್ಯ ಗೌರವಾನ್ವಿತ ನ್ಯಾಯಮೂರ್ತಿಗಳು ಒತ್ತುವರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅರಣ್ಯಾಧಿಕಾರಿಗಳಿಗೆ ಧೈರ್ಯ ತುಂಬಿ ಕಾಯಾಚರಣೆ ಮುಂದುವರೆಸಲು ಆದೇಶ ನೀಡಬೇಕೆಂದರು.
ತಾಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ, ಗೌರವಾನ್ವಿತ ನ್ಯಾಯಾಲಯದ ಮೇಲೆ ರೈತಾಪಿ ವರ್ಗಕ್ಕೆ ಅಪಾರವಾದ ಗೌರವವಿದೆ. ಒತ್ತುವರಿ ತೆರವುಗೊಳಿಸುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರಣ್ಯಾಧಿಕಾರಿಗಳು ಅರಣ್ಯ ಭೂಮಿಯಲ್ಲಿದ್ದ ಮಾವಿನ ಗಿಡಗಳನ್ನು ನಾಶ ಮಾಡಿರುವ ಬಗ್ಗೆ ಪ್ರಶ್ನೆ ಮಾಡಿರುವುದಕ್ಕೆ ನಮ್ಮ ತಕರಾರರಿಲ್ಲ. ಆದರೆ, ಅರಣ್ಯ ಭೂಮಿಯನ್ನೇ ನೂರಾರು ವರ್ಷಗಳಿಂದ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿರುವ ಭೂಗಳ್ಳರಿಗೆ ಯಾವ ಶಿಕ್ಷೆ ಎಂಬುದು ನಮ್ಮ ಪ್ರಶ್ನೆಯಾಗಿದೆ.
ಅರಣ್ಯ ಭೂಮಿ ಕೆರೆ, ರಾಜಕಾಲುವೆ, ಗುಂಡುತೋಪು ರಕ್ಷಣೆ ಮಾಡದೇ ಇದ್ದರೆ ಮುಂದಿನ ದಿನಗಳಲ್ಲಿ ಭವಿಷ್ಯದ ಜೀವನ ಊಹಿಸಿಕೊಳ್ಳುವುದೂ ಕಷ್ಟಕರವಾಗುವುದರ ಜೊತೆಗೆ ನಾವು ಸಮಾಜದಲ್ಲಿ ಸರ್ಕಾರಿ ಆಸ್ತಿಗಳನ್ನು ಕಬಳಿಕೆ ಮಾಡಿದರೂ ನ್ಯಾಯಾಲಯದಲ್ಲಿ ಜಯ ಸಿಗುತ್ತದೆ ಎಂಬ ಭೂಗಳ್ಳರ ನಂಬಿಕೆ ಇನ್ನಷ್ಟು ಗಟ್ಟಿಯಾಗಿ ಸರ್ಕಾರಿ ಆಸ್ತಿಗಳ ಮೇಲೆ ತಮ್ಮ ಪ್ರತಾಪ ತೋರಿಸುತ್ತಾರೆ. ಈ ರೀತಿ ಯಾವುದೇ ಸಮಸ್ಯೆಯಾಗದ ರೀತಿ ಕಾನೂನಿನ ಅಡಿಯಲ್ಲಿ ಸಾವಿರಾರು ಎಕರೆ ಅರಣ್ಯ ಭೂಮಿ ತೆರವುಗೊಳಿಸಿರುವ ಅರಣ್ಯಾಧಿಕಾರಿಗಳ ರಕ್ಷಣೆಗೆ ಅರಣ್ಯ ಸಚಿವರನ್ನು ಒತ್ತಾಯಿಸಿ ಫೆ.29ರ ಗುರುವಾರ ಅರಣ್ಯ ಸಚಿವರ ನಿವಾಸದ ಮುಂದೆ ದಾಖಲೆಗಳ ಸಮೇತ ಹೋರಾಟ ಮಾಡಿ ನಿಷ್ಠಾವಂತ ಅಧಿಕಾರಿಗಳ ರಕ್ಷಣೆಗೆ ಒತ್ತಾಯ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಯಿತು.
ಸಭೆಯಲ್ಲಿ ರಾಜ್ಯ ಮುಖಂಡ ಬಂಗವಾದಿ ನಾಗರಾಜಗೌಡ, ದ್ಯಾವಂಡಹಳ್ಳಿ ರಾಜೇಂದ್ರಣ್ಣ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಆಲವಾಟಿ ಶಿವು, ರಾಮಕೃಷ್ಣಪ್ಪ, ಗಣೇಶ್, ಹನುಮಣ್ಣ, ಸುಪ್ರೀಂ ಚಲ, ತಿಮ್ಮಣ್ಣ, ಶೇಖ್ ಷಫೀ ಉಲ್ಲಾ, ಸಹದೇವಣ್ಣ, ಸುಪ್ರೀಂ ಚಲ, ವೆಂಕಟೇಶ್ ಮುಂತಾದವರಿದ್ದರು.