ಕುಂದಾಪುರ,ಫೆ.23: ದಿನಾಂಕ 21/02/2023 ರಂದು ಉಡುಪಿ ಧರ್ಮಪ್ರಾಂತ್ಯದ ಕಥೊಲಿಕ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯವರಾದ ಅತೀ ವಂದನೀಯ ಧರ್ಮಗುರು ವಿನ್ಸೆಂಟ್ ರಾಬರ್ಟ್ ಕ್ರಾಸ್ತಾರವರು ವಿದ್ಯಾಸಂಸ್ಥೆಗಳಿಗೆ ಅಧಿಕೃತ ಭೇಟಿ ನೀಡಿ ಸಂಸ್ಥೆಯ ಪ್ರತಿಯೊಂದು ಕಾರ್ಯ ಚಟುವಟಿಕೆಯ ಕಡತಗಳನ್ನು ಪರಿಶೀಲಿಸಿದರು.
ಬೆಳಗಿನ ಅವಧಿಯಲ್ಲಿ ಪ್ರಾರ್ಥನಾ ಸಭೆಯನ್ನು ಏರ್ಪಡಿಸಿ ಅವರನ್ನು ಪ್ರೀತಿ ಪೂರ್ವಕವಾಗಿ ಸ್ವಾಗತಿಸಲಾಯಿತು. ಬೆಳಗಿನಿಂದ ಸಂಜೆಯ ತನಕ ಇದ್ದು ಸಂಸ್ಥೆಯ ಎಲ್ಲಾ ಶಿಕ್ಷಣಾ ಸಂಸ್ಥೆಗಳಾದ, ಸಂತ ಮೇರಿಸ್ ಹಿರಿಯ ಕಿರಿಯ ಪ್ರಾಥಮಿಕ ಶಾಲೆ, ಸಂತ ಮೇರಿಸ್ ಪ್ರೌಢ ಶಾಲೆ, ಸಂತ ಮೇರಿಸ್ ಪಿ.ಯು.ಕಾಲೇಜ್ ಮತ್ತು ಹೋಲಿ ರೋಜರಿ ಆಂಗ್ಲಾ ಮಾದ್ಯಮ ಶಾಲೆಗಳ ಎಲ್ಲಾ ತರಗತಿಗಳಿಗೆ ಭೇಟಿ ನೀಡಿ ಮಕ್ಕಳೊಂದಿಗೆಭೇಟಿ ಮಾಡಿದರು. ಜೊತೆಗೆ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೊಂದಿಗೆ, ಭೋಧಕ ಭೋಧಕೆತರೊಂದಿಗೆ ವಯಕ್ತಿಕವಾಗಿ ಭೇಟಿಯಾಗಿ ಅನೇಕ ಸಮಾಲೋಚನೆ ಮಾಡಿ ಸಲಹೆ ಸೂಚನೆಯನ್ನು ನೀಡಿದರು.
ಈ ಸಮಯದಲ್ಲಿ ವಿದ್ಯಾಸಂಸ್ಥೆಗಳ ಜೊತೆ ಕಾರ್ಯದರ್ಶಿ ಸ್ಥಳೀಯ ಚರ್ಚಿನ ಧರ್ಮಗುರುಗಳು ಆಗಿರುವ ಅತೀ ವಂದನೀಯ ಧರ್ಮಗುರು ಸ್ಟ್ಯಾನಿ ತಾವ್ರೊರವರು , ಸಹಾಯಕ ಧರ್ಮಗುರುಗಳಾಗಿರುವ ವಂದನೀಯ ಗುರು ಅಶ್ವಿನ್ ಅರಾನ್ನಾನವರು ಹಾಗು ಕಥೊಲಿಕ್ ಎಜುಕೇಶನಲ್ ಸೊಸೈಟಿ, ಉಡುಪಿ ಧರ್ಮಪ್ರಾಂತ್ಯದ ನಿವೃತ ಪ್ರಾಂಶುಪಾಲರಾದ ಜೆರಾಲ್ಡ್ ಪಿಂಟೊರವರು ಉಪಸ್ಥಿತರಿದ್ದರು.
Day: February 23, 2024
ಬೆಂಗಳೂರಿನ ಖಾಸಗಿ ವಾಹನ ನಿಲುಗಡೆಗೆ ಬೆಂಕಿ : 30ಕ್ಕೂ ಹೆಚ್ಚು ವಾಹನಗಳು ಸುಟ್ಟು ಕರಕಲು
ಬೆಂಗಳೂರು, ಫೆ.23 ಖಾಸಗಿ ವಾಹನ ನಿಲುಗಡೆಗೆ ಬೆಂಕಿ ತಗುಲಿ ೩೦ ಕ್ಕೂ ಹೆಚ್ಚು ವಾಹನಗಳು ಸುಟ್ಟು ಕರಕಲಾಗಿವೆ
ಬೆಂಕಿಯಿಂದಾಗಿ ಆಟೋರಿಕ್ಷಾಗಳು, ಸರಕು ಸಾಗಣೆ ವಾಹನಗಳು, ತಳ್ಳುಗಾಡಿಗಳು ಸೇರಿದಂತೆ ಇತರ ವಾಹನಗಳು ಸುಟ್ಟು ಭಸ್ಮವಾಗಿವೆ
ಬೆಂಗಳೂರಿನ ನಾಯಂಡಹಳ್ಳಿ ಸಮೀಪದ ಗಂಗೊಂಡನಹಳ್ಳಿಯ ಪ್ಲಾಸ್ಟಿಕ್ ತ್ಯಾಜ್ಯ ಛೇದಕ ಘಟಕದ ಆವರಣದಲ್ಲಿ ಫೆ.23ರಂದು ಮುಂಜಾನೆ ಅಗ್ನಿ ಅವಘಡ ಸಂಭವಿಸಿದ್ದು, ಆಟೋರಿಕ್ಷಾಗಳು ಮತ್ತು ಕಾರುಗಳು ಸುಟ್ಟು ಕರಕಲಾಗಿವೆ ಎಂದು ಇಳಿದು ಬಂದಿದೆ. ಬೆಂಕಿಯಿಂದ ಯಾರಿಗೂ ಗಾಯಗಳಾಗಿಲ್ಲ.
1.57ಕ್ಕೆ ಅಗ್ನಿಶಾಮಕ ದಳಕ್ಕೆ ಕರೆ ಬಂದಿದ್ದು, ಐದು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮೂಲಗಳು ತಿಳಿಸಿವೆ. ರಿಜ್ವಾನ್ ಎಂಬುವವರ ಒಡೆತನದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಛೇದಕ ಘಟಕವಿದೆ. ಪ್ರತಿ ರಾತ್ರಿ ವಾಹನಕ್ಕೆ ರೂಪಾಯಿ 30 ರ ದರದಲ್ಲಿ ಆಟೋರಿಕ್ಷಾಗಳು, ಸರಕು ವಾಹನಗಳು ಮತ್ತು ತಳ್ಳುಗಾಡಿಗಳ ನಿಲುಗಡೆಗೆ ಆವರಣವನ್ನು ಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆವರಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹರಡಿಕೊಂಡಿತ್ತು. ಶೆಡ್ನಲ್ಲಿನ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿದ್ದು, ಕಾಂಪೌಂಡ್ನಲ್ಲಿದ್ದ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಪಕ್ಕದಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ವ್ಯಾಪಿಸಿದೆ ಎಂದು ಶಂಕಿಸಲಾಗಿದೆ.
‘ನನ್ನ ಬರಹದ ಕಥೆ-ವ್ಯಥೆ’ ಲೇಖಕಿ: ಕೆರೊಲ್ ಗೊನ್ಸಾಲ್ವಿಸ್
ಜನನುಡಿ ಕಥಾ ವಿಭಾಗ
‘ನನ್ನ ಬರಹದ ಕಥೆ-ವ್ಯಥೆ’ ಲೇಖಕಿ: ಕೆರೊಲ್ ಗೊನ್ಸಾಲ್ವಿಸ್
ಎಲ್ಲರಿಗೂ ಒಂದಿಲ್ಲೊಂದು ಹವ್ಯಾಸ ಇದ್ದೇ ಇರುತ್ತದೆ, ಇದಕ್ಕೆ ನಾನೂ ಹೊರತಲ್ಲ. ಓದುವುದು ನನ್ನ ನೆಚ್ಚಿನ ಹವ್ಯಾಸ; ಅದು ಕಥೆ, ಕವನ, ವಾರ್ತೆ, ಲೇಖನ, ಹೀಗೆ ಏನೇ ಆಗಿರಬಹುದು ಒಟ್ಟಿನಲ್ಲಿ, ಓದಲಿಕ್ಕಿದ್ದರೆ ಸಾಕು.ಯಾವತ್ತೂ ಬೇರೆಯವರು ಬರೆದಿದ್ದನ್ನು ಓದುತ್ತಿದ್ದ ನನಗೆ ಒಂದು ದಿನ, ನಾನೂ ಯಾಕೆ ಬರೆಯಲು ಪ್ರಯತ್ನಿಸಬಾರದು ಎಂಬ ಆಲೋಚನೆ ಬಂತು. ಆಲೋಚನೆ ಬಂದಿದ್ದೇ ತಡ, ಇನ್ನು ಕಾರ್ಯರೂಪಕ್ಕೆ ತರುವುದೇ ಎಂದು ಬರೆಯಲು ಕುಳಿತರೆ, ‘ಏನು ಬರೆಯುವುದು’ ಎಂಬ ಚಿಂತೆ ಶುರುವಾಯಿತು. ದಿನಪತ್ರಿಕೆಗಳಲ್ಲಿ ಬರುವ ವರದಿಯ ಬಗ್ಗೆ ಅಭಿಪ್ರಾಯ ಬರೆಯುವುದೋ ಅಥವಾ ಕಥೆ, ಕವನ ಬರೆಯುವುದೋ ಎಂದು ಯೋಚನೆ ಮಾಡಿ ಮಾಡಿ ಕೊನೆಗೂ ಏನೋ ಒಂದು ಬರೆದೆ. ಇನ್ನೇನು ಅದನ್ನು ಪತ್ರಿಕೆಗೆ ಕಳುಹಿಸುವುದೊಂದೇ ಬಾಕಿ, ಆವಾಗಲೇ ಹೊಸ ಸಮಸ್ಯೆ ತಲೆದೋರಿತು!
ನನ್ನ ಬರಹ ಪ್ರಕಟಗೊಳ್ಳುವಾಗ, ಯಾವ ಹೆಸರಿನಲ್ಲಿ ಪ್ರಕಟವಾಗಬೇಕು ಎನ್ನುವುದೇ ಆ ಸಮಸ್ಯೆ. ಸ್ವಲ್ಪ ಹೊತ್ತು ಯೋಚಿಸಿ, ‘ಕೆರೊಲ್ ತಲ್ಲೂರು’ ಎಂದು ನನ್ನ ಹೆಸರಿನ ಜೊತೆ ನನ್ನ ಊರ ಹೆಸರನ್ನೂ ಸೇರಿಸಿದರೆ ಚೆನ್ನಾಗಿರುತ್ತೆ ಅಂತ ಅಂದುಕೊಂಡ ಮರುಕ್ಷಣವೇ ನನಗೆ ಇತ್ತೀಚಿನ ವಿದ್ಯಮಾನಗಳು ನೆನಪಿಗೆ ಬಂದವು. ತಮ್ಮ ಹೆಸರಿನ ಮುಂದೆ ಊರಿನ ಹೆಸರನ್ನು ಹಾಕಿ ತಮ್ಮ ಮಾತಿನಿಂದ ಭಯಂಕರ ಪ್ರಸಿದ್ಧಿ ಪಡೆದ ವ್ಯಕ್ತಿಯೊಬ್ಬರ ಅವ್ಯವಹಾರ ಇತ್ತೀಚೆಗೆ ಬಯಲಾದಾಗ, ಅವರ ಹೆಸರಿನೊಂದಿಗಿರುವ ಊರಿನ ಹೆಸರನ್ನು ಸುದ್ದಿ ಪತ್ರಿಕೆ ಹಾಗೂ ವಾಹಿನಿಗಳಲ್ಲಿ ಬಳಸಬಾರದೆಂದು ಆ ಊರಿನವರು ಆಕ್ರೋಶಗೊಂಡು ವಿರೋಧಿಸಿದ್ದನ್ನು ನೆನೆಪಿಗೆ ಬಂದು ನಾನು, ‘ಇನ್ನು ನನ್ನ ಬರಹ ಪ್ರಕಟವಾದಾಗ,ನನ್ನ ಗ್ರಹಚಾರಕ್ಕೆ ಅದರಲ್ಲಿರುವ ಯಾವುದೋ ವಿಷಯವು ಅಪ್ಪಿತಪ್ಪಿ ಯಾರಿಗೋ, ಎಲ್ಲೋ, ಯಾವ ಸಂದರ್ಭದಲ್ಲೋ ನೋವು ತಂದಿದೆ ಎಂದು ವಿರೋಧ ವ್ಯಕ್ತವಾದರೆ, ಊರಿನ ಹೆಸರನ್ನು ಹಾಳು ಮಾಡಿದೆನೆಂದು ನನ್ನ ಊರವರೆಲ್ಲ ಸೇರಿ ಗ್ರಹಚಾರ ಬಿಡಿಸುತ್ತಾರೆ ಅಷ್ಟೇ ‘ ಎಂದು ಈ ಆಲೋಚನೆ ಕೈ ಬಿಟ್ಟೆ.
ಕವಿಗಳು ಇಟ್ಟುಕೊಳ್ಳುವಂತೆ ಕಾವ್ಯನಾಮವನ್ನು ಇಟ್ಟರೆ ಹೇಗೆ ಎಂಬ ಆಲೋಚನೆ ಬಂದಿದ್ದೇ, ‘ಕು.ವೆಂ.ಪು’ ನೆನಪಾಗಿ ಅವರಂತೆಯೇ, ‘ತ.ಕೆ.ಗೊ’ (ತಲ್ಲೂರು ಕೆರೊಲ್ ಗೊನ್ಸಾಲ್ವಿಸ್) ಎಂದು ಹ್ರಸ್ವ ರೂಪಕ್ಕೆ ತಂದಾಗ ಯಾಕೋ ಹಿಡಿಸಲಿಲ್ಲ. ದ.ರಾ.ಬೇಂದ್ರೆಯವರ ಕಾವ್ಯನಾಮ ‘ಅಂಬಿಕಾತನಯದತ್ತ’ದಂತೆ, ‘ಕ್ಲಿಫರ್ಡತನುಜೆಕೆರೊಲ್’ – ಇದು ಸ್ವಲ್ಪ ಕಷ್ಟವಾಗಬಹುದೆಂದು, ‘ಕಿಲ್ಪಿತನುಜೆಕೆಲ್ಲ’ ಅಂತ ಮಾಡಿದಾಗ ಅದೂ ಸರಿಕಾಣದಿದ್ದ ನಂತರ ಈ ಆಲೋಚನೆಯನ್ನೂ ಕೈಬಿಟ್ಟೆ.
‘ಮೂಗಿಗಿಂತ ಮೂಗುತಿ ಭಾರ’ ಅನ್ನೋ ಗಾದೆಯಂತೆ, ನನ್ನ ಬರಹದ ವಿಷಯಕ್ಕಿಂತ, ಹೆಸರಿಡುವ ಗೋಳೇ ದೊಡ್ಡದಾದಾಗ, ಸದ್ಯಕ್ಕೆ ‘ಕೆರೊಲ್ ಗೊನ್ಸಾಲ್ವಿಸ್ ‘ ಎಂದೇ ಇಟ್ಟು, ಮುಂದೆ ಯಾವಾಗಲಾದರೂ ಶಾಂತಚಿತ್ತದಿಂದ ಯೋಚಿಸಿದರಾಯಿತೆಂದು ನನ್ನ ಬರಹ ಕಳುಹಿಸಿ ನಿರಾಳಳಾದೆ.
ಮಕ್ಕಳಿಗೆ ರಾಗಿಮಾಲ್ಟ್ ಹಾಲಿನ ಮಿಶ್ರಣ ಮೂರು ದಿನ ನೀಡುವ ಬದಲು ಎಲ್ಲಾ ವಾರದ 6 ದಿನಗಳು ನೀಡಿದರೆ ಒಳ್ಳೆದು-ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ
ಶ್ರೀನಿವಾಸಪುರ 1 : ಮಕ್ಕಳಿಗೆ ಮೂರು ದಿನ ನೀಡುವ ಬದಲು ಎಲ್ಲಾ ವಾರದ 6 ದಿನಗಳು ನೀಡಿದರೆ ಒಳ್ಳೆಯದೆಂದು ಸಲಹೆ ನೀಡಿ ಸರ್ಕಾರಿ ಶಾಲೆ ಮಕ್ಕಳಿಗೆ ಯಾವುದೇ ರೀತಿಯ ಪೌಷ್ಠಿಕಾಂಶಗಳಿಂದ ವಂಚಿತರಾಗಬಾರದೆಂದು ಕಾರ್ಯಕ್ರಮ ರೂಪಿಸಿರುವ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಮತ್ತು ಕೆ ಎಂ ಎಫ್ ಸಮಸ್ಥೆಗೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಧನ್ಯವಾದಗಳು ತಿಳಿಸಿದರು
ಪಟ್ಟಣದ ತ್ಯಾಗರಾಜ ಬಡವಾಣೆಯಲ್ಲಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಶಾಲಾ ಶಿಕ್ಷಣ ಇಲಾಖೆ, ಪ್ರದಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಯೋಜನೆಯಿಂದ, ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಮತ್ತು ಕೆ ಎಂ ಎಫ್ ಇವರ ಸಹಯೋಗದಲ್ಲಿ ಮದ್ಯಾಹ್ನ ಉಪಹಾರ ಯೋಜನೆಯಡಿ ರಾಗಿಮಾಲ್ಟ್ ಹಾಲಿನ ಮಿಶ್ರಣವನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ತಿನ್ನುವ ಆಹಾರದಲ್ಲಿ ಪೌಷ್ಟಿಕ ಆಹಾರವು ಕಡಿಮೆ ಯಾಗಿರುವದರಿಂದ ಕೆಲ ವಿದ್ಯಾರ್ಥಿಗಳಲ್ಲಿ ಅಪೌಷ್ಟಿಕತೆ ಕಾಣಿಸುತ್ತಿರಿವುದರಿಂದ ವಿದ್ಯಾರ್ಥಿಗಳು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎನ್ನುತ್ತಾ ವಿದ್ಯಾರ್ಥಿಗಳು ಹೆಚ್ಚು ಕುರುಕು ತಿಂಡಿಗಳನ್ನು ತಿನ್ನದೇ ಪೌಷ್ಟಿಕ ಆಹಾರಗಳನ್ನು ತಿನ್ನುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿನ 1 ರಿಂದ 10 ನೇ ತರಗತಿ ಎಲ್ಲಾ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಠಿಕ ಆಹಾರವಾಗಿ ಬಿಸಿ ಹಾಲಿನೊಂದಿಗೆ ಮಿಶ್ರಣಗೊಳಿಸಿ ಶಾಲಾ ಮಕ್ಕಳಿಗೆ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ನಂತರ ಶಾಲೆಯ ಅಂದಾಜು 4 ಲಕ್ಷ ವೆಚ್ಚದಲ್ಲಿ ಮಂಜೂರಾತಿಯಾಗಿರುವ ಕಾಂಪೌಂಡ್ ನಿರ್ಮಾಣಕ್ಕೂ ಸಹ ಶಾಸಕರು ಭೂಮಿ ಪೂಜೆಯನ್ನು ನೆರವೇರಿಸಿದರು.
ಇಒ ಎಸ್.ಶಿವಕುಮಾರಿ, ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ, ಅಕ್ಷರದಾಸೋಹ ಸಹಾಯಕಿ ಸುಲೋಚನ, ಎಸ್ಡಿಎಂಸಿ ಅಧ್ಯಕ್ಷ ಆನಂದರೆಡ್ಡಿ, ಪುರಸಭೆ ಮಾಜಿ ಅಧ್ಯಕ್ಷ ಎಸ್.ಶ್ರೀನಿವಾಸಪ್ಪ, ಪ್ರೌಡಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಸುಬ್ರಮಣಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಯ್ಯಾರೆಡ್ಡಿ, ಗುತ್ತಿಗೆದಾರ ಶ್ರೀನಿವಾಸರೆಡ್ಡಿ, ಮುಖ್ಯ ಶಿಕ್ಷಕ ಎಂ.ಬೈರೇಗೌಡ, ಶಿಕ್ಷಕರಾದ ಗೌರಮ್ಮ, ರೆಡ್ಡೆಮ್ಮ, ಶ್ರೀದೇವಿ, ಗೀಂತಾಂಜಲಿ, ಲೀಲಾವತಿ, ಗೀತಶ್ರೀ, ಫರ್ವೀನ್, ರಾಮಚಂದ್ರಪ್ಪ, ನಾಗರಾಜ್, ನಾರಾಯಣಸ್ವಾಮಿ ಇದ್ದರು.